Rona,Film Reviews

Wednesday, November 05, 2025

  ಒಂದು ಜಾತ್ರೆಯ ಹಿಂದಿನ ರಕ್ತ ಚರಿತ್ರೆ   ಚಿತ್ರ: ರೋಣ ನಿರ್ದೇಶನ: ಸತೀಶ್ ಕುಮಾರ್ ನಿರ್ಮಾಣ: ಬಿ ಕೆ ಆರ್ ಪ್ರೊಡಕ್ಷನ್ಸ್ ತಾರಾಗಣ: ರಘುರಾಜ ನಂದ, ಪ್ರಕೃತಿ ಪ್ರಸಾದ್   ಅದೊಂದು ಹಳ್ಳಿ. ರೋಣ ಎನ್ನುವ ಆ ಹಳ್ಳಿಗೆ ರಾಮಕೃಷ್ಣ ಮಹಾ ಸಮಾಜ ಸೇವಕ. ಆತನ ಪುತ್ರ ಶಿವು ಕೂಡ ತಂದೆಯ ಬೆನ್ನೆಲುಬಾಗಿ ನಿಂತವ. ಆದರೆ ಅಲ್ಲಿನ ಶಾಸಕ ಸೇರಿದಂತೆ ರಾಜಕೀಯದ ಮಂದಿ ಇಡೀ ವ್ಯವಸ್ಥೆಯನ್ನೇ ಗಬ್ಬೆಬ್ಬಿಸಿರುತ್ತಾರೆ. ಇದರ ವಿರುದ್ಧ ನಡೆಸುವ ಹೋರಾಟದಲ್ಲಿ ತಂದೆ ಮಗನಿಗೆ ಎದುರಾಗುವ ಕಷ್ಟಗಳೇನು? ಹೊರಬರುವ ಭೀಕರ ಸತ್ಯ ಗಳೇನು ಎನ್ನುವುದೇ ಈ ಚಿತ್ರದ ಹೂರಣ.   ಮಹಾನ್ ಸಮಾಜ ಸೇವಕ ರಾಮಕೃಷ್ಣನಾಗಿ ಶರತ್ ಲೋಹಿತಾಶ್ವ ನಟಿಸಿದ್ದಾರೆ. ವೈಟ್ ಆಂಡ್ ವೈಟ್ ಹಾಕಿ ಬಟ್ಟೆಯಷ್ಟೇ ....

Read More...

Brat.Film Reviews

Thursday, October 30, 2025

  ಬೆಟ್ಟಿಂಗ್ ನಟನೆಯಲ್ಲಿ ಮನಗೆಲ್ಲುವ ಡಾರ್ಲಿಂಗ್ ಕೃಷ್ಣ!     ಚಿತ್ರ: ಬ್ರ್ಯಾಟ್ ನಿರ್ದೇಶನ: ಶಶಾಂಕ್ ನಿರ್ಮಾಣ: ಡಾಲ್ಫಿನ್ ಎಂಟರ್ಟೈನ್ಮೆಂಟ್ ತಾರಾಗಣ: ಡಾರ್ಲಿಂಗ್ ಕೃಷ್ಣ, ಮನೀಷಾ ಕಂಡ್ಕೂರ್ ಮೊದಲಾದವರು.   ಡಾರ್ಲಿಂಗ್ ಕೃಷ್ಣ ಮತ್ತು ಶಶಾಂಕ್ ಮತ್ತೊಮ್ಮೆ ಒಂದಾಗಿದ್ದಾರೆ. ಸದಭಿರುಚಿಯ ಪ್ರೇಮ ಚಿತ್ರಗಳಿಂದ ಗಮನ ಸೆಳೆದ ಈ‌ ಜೋಡಿ ಇದೀಗ ಬ್ರ್ಯಾಟ್ ಮೂಲಕ ಮತ್ತೊಂದು  ಮಾದರಿಯ ಅಖಾಡದಲ್ಲಿ ಸಿಕ್ಸರ್ ಬಾರಿಸಿದೆ.     ಬಾಲ್ಯದಿಂದಲೇ ಹಣದ ಮೋಹಕ್ಕೆ ಬಿದ್ದ ಹುಡುಗ ಕೃಷ್ಣ. ಹುಡುಗ ಯುವಕನಾಗಿ ಕ್ರಿಸ್ಟಿಯಾಗಿ ಬದಲಾದರೂ ಹಣ‌ಕೊಡುವ ಸುಖ, ಸಂತೃಪ್ತಿ ಬೇರೆ ಎಲ್ಲೂ ಸಿಗುತ್ತಿಲ್ಲ ಎನ್ನುವಂಥ ವ್ಯಕ್ತಿತ್ವ.‌ ದಿಢೀರ್ ಧನ ಸಂಪಾದನೆಗಾಗಿ ....

Read More...

Kona.Film Reviews

Tuesday, October 28, 2025

  ನಂಬಿಕೆ ಮತ್ತು ಪ್ರೀತಿಯ ಸಂದೇಶ ನೀಡುವ ಕೋಣ     ಚಿತ್ರ: ಕೋಣ ನಿರ್ದೇಶನ: ಹರಿಕೃಷ್ಣ ಎಸ್ ನಿರ್ಮಾಣ: ಕುಪ್ಪಂಡ ಪ್ರೊಡಕ್ಷನ್ಸ್ ತಾರಾಗಣ: ಕೋಮಲ್ ಕುಮಾರ್, ತನಿಷಾ ಕುಪ್ಪಂಡ ಮೊದಲಾದವರು.   1842ರ ಕಾಲಘಟ್ಟದಿಂದ ಆರಂಭಗೊಳ್ಳುವ ಕಥೆ ಇದು. ಅಂದು ಒಂದು ಇಡೀ ಊರಿಗೆ ಮಾರಿಯ ಕಾಟ ಆದಾಗ ಅದಕ್ಕೆ ರಾಜ ಕಂಡ ಪರಿಹಾರದಿಂದ ಚಿತ್ರದ ಕಥೆ ಆರಂಭಗೊಳ್ಳುತ್ತದೆ. ಇಂದಿನ‌‌ ಕಾಲಘಟ್ಟದಲ್ಲಿ ಅಲೆಮಾರಿಯೋರ್ವ ಕಕಂಪ್ಯೂಟರ್ ಬೊಂಬೆಯನ್ನಿಟ್ಟು ಭವಿಷ್ಯ ಹೇಳಿ ಬದುಕು ಸಾಗಿಸುತ್ತಿರುತ್ತಾನೆ. ಈ ಅಲೆಮಾರಿ ನಾರಾಯಣನ ಬಾಳಲ್ಲಿ ಒಂದು ಕೋಣಕ್ಕೆ ಸಂಬಂಧಿಸಿ ನಡೆಯುವ ಕಥೆಯೇ ಕೋಣ ಸಿನಿಮಾದ ಹಿನ್ನೆಲೆ.     ನಾರಾಯಣನಿಗೊಂದು ಸಮಸ್ಯೆ ಇದೆ. ಅದು ಆತ ಹೆಚ್ಚಾಗಿ ....

Read More...

Dilmaar.Film Reviews

Friday, October 24, 2025

 

ಹೃದಯಕ್ಕೆ ನಾಟುವ ಪ್ರೇಮಿಯ‌ ಕಥೆ ದಿಲ್ ಮಾರ್

 

ಚಿತ್ರ: ದಿಲ್ ಮಾರ್

ನಿರ್ದೇಶನ: ಎಂ. ಚಂದ್ರಮೌಳಿ

ನಿರ್ಮಾಣ: ನಾಗರಾಜ್ ಭದ್ರಾವತಿ

ತಾರಾಗಣ: ರಾಮ್, ಅದಿತಿ ಪ್ರಭುದೇವ, ಡಿಂಪಲ್ ಹಯಾತಿ ಮೊದಲಾದವರು.

 

 

ಆತನ ಹೆಸರು ಶುಕ್ಲ. ಮಹಾ ಪ್ರೇಮಿ.‌ ಅದಕ್ಕೆ ಕಾರಣ ಅಕ್ಷತಾ ಎನ್ನುವ ಹುಡುಗಿ.‌ ಆಕೆ 4 ವರ್ಷಗಳಿಂದ ಒಬ್ಬನೊಂದಿಗೆ ಪ್ರೇಮದಲ್ಲಿದ್ದಾಳೆ. ಆದರೆ ಇದ್ಯಾವುದಕ್ಕೂ ಶುಕ್ಲ‌ ತಲೆ‌ಕೆಡಿಸಿಕೊಳ್ಳುವುದೇ ಇಲ್ಲ. ಶುಕ್ಲ ಹೀಗೆ ಹುಚ್ಚನಂತೆ ಪ್ರೇಮಿಸಲು ಕಾರಣವೇನು? ಇದರ ಹಿಂದಿನ‌ ಸತ್ಯ ಅಕ್ಷತಾಗೂ ಗೊತ್ತಿಲ್ಲ! ಇಂಥದೊಂದು ಪರಮ ರಹಸ್ಯ ಏನಿರಬಹುದು ಎಂದು ಅರ್ಥ ಮಾಡಿಕೊಳ್ಳಬೇಕಾದರೆ ಚಿತ್ರದ ಕ್ಲೈಮ್ಯಾಕ್ಸ್ ತನಕ ಕಾಯಬೇಕು.

Read More...

Green.Film Reviews

Friday, October 24, 2025

  ಮನದ ಕಾಡೊಳಗಿನ ನಿಗೂಢ ತಾಣ   ಚಿತ್ರ: ಗ್ರೀನ್ ನಿರ್ದೇಶನ: ರಾಜ್ ವಿಜಯ್ ನಿರ್ಮಾಣ: ರಾಜ್ ವಿಜಯ್, ಬಿ ಎನ್ ಸ್ವಾಮಿ ತಾರಾಗಣ: ಗೋಪಾಲಕೃಷ್ಣ ದೇಶಪಾಂಡೆ, ಬಾಲಾಜಿ ಮನೋಹರ್ ಮೊದಲಾದವರು.   ಗ್ರೀನ್ ಅಂದರೆ ಹಸಿರು. ಹಸಿರು ಅಂದರೆ ಕಾಡು.‌ ಹಸಿರು ಕಾಡೊಳಗೆ ಸದಾ ಹಸಿರಾಗಿ ಉಳಿಯುವಂಥ ಕಥೆಯೇ ಗ್ರೀನ್. ಇದೊಂದು ಮನೋವೈಜ್ಞಾನಿಕ ಥ್ರಿಲ್ಲರ್.   ಇದು ಸಂಪೂರ್ಣವಾಗಿ ಕಾಡೊಳಗಿನ ಕಥೆ. ಇಲ್ಲಿರುವ ಬೃಹತ್ ಕಾಡೊಳಗಿನ ಹೂವು ಸಾವನ್ನೇ ಗೆಲ್ಲುವಂತೆ ಮಾಡುವ ಶಕ್ತಿ ಹೊಂದಿದೆ ಎನ್ನುವುದು ನಂಬಿಕೆ. ಚಿರಂಜೀವಿಯಾಗಲು ಈ ಹೂವನ್ನು ಸೇವಿಸುವ ಮೊದಲು ಅದಕ್ಕೆ ವೈಜ್ಞಾನಿಕ ರಾಸಾಯನಿಕವನ್ನು ಮಿಶ್ರಣವಾಗಿ ಬಳಸಬೇಕಾಗಿರುತ್ತದೆ. ಆ ಮಿಶ್ರಣಕ್ಕಾಗಿ ಏನನ್ನು ....

Read More...

Bili Chukki Halli Hakki.Reviews

Thursday, October 23, 2025

  ಚುಕ್ಕಿಯಾಟದ ನಡುವೆ ಮೂಡಿತು ಪ್ರೇಮ ರಂಗೋಲಿ!     ಚಿತ್ರ: ಬಿಳಿ ಚುಕ್ಕಿ ಹಳ್ಳಿ ಹಕ್ಕಿ ನಿರ್ದೇಶಕ: ಮಹೇಶ್ ಗೌಡ ನಿರ್ಮಾಪಕ: ಮಹೇಶ್ ಗೌಡ ತಾರಾಗಣ: ಮಹೇಶ್ ಗೌಡ, ಕಾಜಲ್ ಕುಂದರ್, ವೀಣಾ ಸುಂದರ್ ಮೊದಲಾದವರು.     ಕಮರ್ಷಿಯಲ್ ಸಿನಿಮಾಗಳ ಲೆಕ್ಕಾಚಾರದ ಪ್ರಕಾರ ನಾಯಕ, ನಾಯಕಿಯ ಸೌಂದರ್ಯ ಕೂಡ ಚಿತ್ರದ ಪ್ರಮುಖ ಆಕರ್ಷಣೆ. ಇಂಥ ಸಂದರ್ಭದಲ್ಲಿ ದೇಹ ಸೌಂದರ್ಯಕ್ಕೆ ಅಡ್ಡಿಯಾಗಬಹುದಾದ ಮೈಮೇಲಿನ ಬಿಳಿಚುಕ್ಕಿಯನ್ನೇ ಪ್ರಧಾನವಾಗಿಸಿ ಚಿತ್ರ ಮಾಡುವ ಸಾಹಸವನ್ನು  ನಿರ್ದೇಶಕ ಮಹೇಶ್ ಗೌಡ ಮಾಡಿದ್ದಾರೆ.     ಆತನ ಹೆಸರು ಶಿವ. ಆದರೆ ಭಸ್ಮದ ಬದಲು ಬಿಳಿಬಣ್ಣವನ್ನೇ ಮೈಮೇಲೆ ಚಿತ್ತಾರವಾಗಿಸಿ ಕಳಿಸಿದ್ದಾನೆ ದೇವರು. ಎಳವೆಯಲ್ಲಿ ಅಲ್ಲೊಂದು ....

Read More...

Timepass.Reviews

Friday, October 17, 2025

  ಇದು ನಕ್ಕು ಟೈಮ್ ಪಾಸ್ ಮಾಡಲು ನೋಡುವಂಥ ಚಿತ್ರ   ಚಿತ್ರ : ಟೈಮ್ ಪಾಸ್ ನಿರ್ದೇಶನ : ಕೆ ಚೇತನ್ ಜೋಡಿದಾರ್ ನಿರ್ಮಾಪಕರು : ಗುಂಡೂರ್ ಶೇಖರ್, ಕಿರಣ್ ಕುಮಾರ್ ಶೆಟ್ಟಿ ಮತ್ತು ಎಂ ಎಚ್ ಕೃಷ್ಣ ಮೂರ್ತಿ ತಾರಾಗಣ: ಇಮ್ರಾನ್ ಪಾಶ, ಅಶ್ವಿನಿ, ರಾಮ್ ಮೊದಲಾದವರು.     ಇದು ಸಿನಿಮಾದವರದ್ದೇ ಕಥೆ. ಸಿನಿಮಾ‌ ಮಂದಿಯ ವೈಯಕ್ತಿಕ ಕಥೆ ಕೇಳಲು ಎಲ್ಲರಲ್ಲೂ ಕುತೂಹಲ ಸಹಜ. ಇಲ್ಲಿ ಅಂಥದೇ ಕಥೆಗೆ ಇನ್ನಷ್ಟು ಬಣ್ಣ ಸೇರಿಸಿ ರೋಚಕತೆಯೊಂದಿಗೆ ಉಣಬಡಿಸಲಾಗಿದೆ. ಹೀಗಾಗಿಯೇ ಸಿನಿಮಾ ಎಲ್ಲ‌ವರ್ಗದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.   ಯಾವುದೇ ಕ್ಷೇತ್ರದಲ್ಲಿ ಸಾಧನೆ  ಮಾಡಲು ಹೊರಟಾಗ ಸಂಕಷ್ಟ ಎದುರಾಗುವುದು ಸಹಜ. ಅದನ್ನೇ ಮತ್ತೆ ....

Read More...

Kantara Chapter 1.Reviews

Wednesday, October 01, 2025

  ಮತ್ತೊಮ್ಮೆ ದೈವ ನರ್ತನದ ರೋಮಾಂಚನ!     ಚಿತ್ರ: ಕಾಂತಾರ -1 ನಿರ್ದೇಶನ: ರಿಷಬ್ ಶೆಟ್ಟಿ ನಿರ್ಮಾಣ: ಹೊಂಬಾಳೆ ಫಿಲ್ಮ್ಸ್ ತಾರಾಗಣ: ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಜಯರಾಮ್ .   ಟ್ರೈಲರ್ ನಲ್ಲಿ ತೋರಿಸಿದ ಹಾಗೆಯೇ ಕಾಡುಬೆಟ್ಟು ಶಿವನ ಪುತ್ರ ತಂದೆ‌ ಕಣ್ಮರೆಯಾದ ಬಗ್ಗೆ ಕೇಳುವ ಪ್ರಶ್ನೆಯಿಂದ ಚಿತ್ರ ಶುರುವಾಗುತ್ತದೆ. ಆದರೆ ಇಲ್ಲಿ ಹೇಳುವುದು ತಂದೆಯ ಕಥೆಯನ್ನಲ್ಲ. ಪೂರ್ವಿಕರ ಕಥೆ.   ಇದು ಸುಮಾರು ಐದನೇ ಶತಮಾನದಲ್ಲಿ ನಡೆದಿದೆ ಎನ್ನಲಾಗುವ ಕಥೆ. ಅವರು ತುಳುನಾಡಿನ ಕಾಂತಾರ ಎನ್ನುವ ಕಾಡಿನೊಳಗೆ ಈಶ್ವರ ಹೋದೋಟದ ಬಳಿ ವಾಸಿಸುವ ಬುಡಕಟ್ಟು ಜನಾಂಗದವರು. ವಿಜಯೇಂದ್ರನೆನ್ನುವ ಬಾಂಗ್ರಾದ ರಾಜ ಇವರ ಹೂದೋಟವನ್ನು ಆಕ್ರಮಿಸಲು ....

Read More...

Kuntebille.Reviews

Friday, September 26, 2025

ಸಸ್ಪೆನ್ಸ್ ತುಂಬಿದ ಹಳ್ಳಿ ಪ್ರೇಮಕಥೆ   ಚಿತ್ರ: ಕುಂಟೆಬಿಲ್ಲೆ ನಿರ್ದೇಶನ: ಸಿದ್ದೇಗೌಡ ಜಿಬಿಎಸ್ ನಿರ್ಮಾಣ: ಜೀವಿತ ಕ್ರಿಯೇಶನ್ಸ್ ತಾರಾಗಣ: ಯದು ಬಾಲಾಜಿ, ಮೇಘಶ್ರೀ, ಭವಾನಿ ಪ್ರಕಾಶ್ ಮೊದಲಾದವರು     ಇದೊಂದು ಹಳ್ಳಿಯ ಪ್ರೇಮಕತೆ. ಅವಳು ಕುಂಟಬಿಲ್ಲೆ ಕಾಲದಲ್ಲೇ  ಆತನ ಸ್ನೇಹಿತೆ. ಹೆಸರು ಚಂದನಾ. ದೊಡ್ಡೋಳಾಗುತ್ತಲೇ ಈ ಗೆಳೆಯನಿಂದ  ದೂರಾಗುತ್ತಾಳೆ. ಆದರೆ ಬೆಳೆದ ಮೇಲಿನ ಸ್ನೇಹ ಬದುಕಿನಿಂದಲೇ ದೂರಾಗಿಸುತ್ತದೆ. ಈ‌ ಘಟನೆಯ ಹಿಂದಿನ‌ ಕಾರಣವೇ  ಕುಂಟೆಬಿಲ್ಲೆ ಚಿತ್ರದ ಹೂರಣ.   ಅವನ ಹೆಸರು ಚಾಮರಾಜ.  ಚಂದನಾ ಇರುವ ಊರಲ್ಲೇ ಆತನೂ ವಾಸವಾಗಿರುತ್ತಾನೆ. ಆದರೆ ದೊಡ್ಡವರಾದ ಬಳಿಕ  ಭೇಟಿಗೆ ಕಾರಣವಾಗುವುದು ಮಾತ್ರ ಸೋಶಿಯಲ್ ಮೀಡಿಯಾದ ....

Read More...

Arasayyana Prema Prasanga.Reviews

Friday, September 19, 2025

  ಅರಸಯ್ಯನ ಪ್ರೇಮ ಕಲ್ಯಾಣ   ಚಿತ್ರ: ಅರಸಯ್ಯನ ಪ್ರೇಮ ಪ್ರಸಂಗ ನಿರ್ದೇಶನ: ಜೆ.ವಿ.ಆರ್ ದೀಪು ನಿರ್ಮಾಣ: ಮೇಘ ಶ್ರೀ ರಾಜೇಶ್ ತಾರಾಗಣ: ಮಹಾಂತೇಶ ಹಿರೇಮಠ, ರಶ್ಮಿತಾ ಆರ್ ಗೌಡ‌ ಮೊದಲಾದವರು.   ತಲೆ ತುಂಬ ಗುಂಗುರು‌ ಕೂದಲು. ಕರಿಕಪ್ಪು ಮೈ ಬಣ್ಣ. ಎತ್ತರ ಕೂಡ ಸಾಮಾನ್ಯಕ್ಕಿಂತ ಕಡಿಮೆಯೇ. ಆತನೇ ಅರಸಯ್ಯ. ಕಲಿತಿರುವುದು ಎರಡನೇ ತರಗತಿ ಮಾತ್ರ. ವೃತ್ತಿಯಲ್ಲಿ ಗುಡಿಯ ಪೂಜಾರಿ. ಆದರೆ ಈ ಗುಣ ಲಕ್ಷಣಗಳಿಂದಾಗಿಯೇ ಇನ್ನೂ ಮದುವೆಯಾಗಿಲ್ಲ.‌ ಹಾಗಂತ ಎಲ್ಲ ಹುಡುಗಿಯರಿಗೂ ಈತ ಒಪ್ಪಿಗೆಯಾಗಿಲ್ಲ ಎಂದೇನಲ್ಲ. ತನಗೂ ಆಯ್ಕೆಯ ಸ್ವಾತಂತ್ರ್ಯ ಇದೆ ಎಂದು ಬಲವಾಗಿ ನಂಬಿದ ವ್ಯಕ್ತಿ ಈತ. ಇಂಥ ಅರಸಯ್ಯನಿಗೆ ಒಂದು ಹುಡುಗಿಯಲ್ಲಿ ಪ್ರೇಮವಾಗುತ್ತದೆ. ಆ ಪ್ರೇಮದ ಕಥೆಯೇ ಅರಸಯ್ಯನ ....

Read More...

Kamal Sridevi.Reviews

Thursday, September 18, 2025

  ಒಂದು ಕೊಲೆಯ ಹಿಂದಿನ ರೋಚಕ ತನಿಖೆ     ಚಿತ್ರ: ಕಮಲ್ ಶ್ರೀದೇವಿ ನಿರ್ದೇಶನ: ಸುನಿಲ್ ಕುಮಾರ್ ನಿರ್ಮಾಣ: ಧನಲಕ್ಷ್ಮಿ ಮತ್ತು ರಾಜವರ್ಧನ್ ತಾರಾಗಣ: ಸಚಿನ್ ಚೆಲುವರಾಯ ಸ್ವಾಮಿ, ಸಂಗೀತ ಭಟ್ ಮೊದಲಾದವರು.     ಕಮಲ್ ಮತ್ತು ಶ್ರೀದೇವಿ ಎನ್ನುವ ಹೆಸರೇ ಚಿತ್ರದ ಪ್ರಮುಖ‌ ಆಕರ್ಷಣೆ. ‌ಈ ಆಕರ್ಷಣೆಯನ್ನು ಸಿನಿಮಾ‌ ತನ್ನದೇ ರೀತಿಯಲ್ಲಿ ಉಳಿಸಿಕೊಂಡಿದೆ ಎನ್ನುವುದು ಚಿತ್ರ ನೋಡಿದವರ ಅನಿಸಿಕೆ.     ಚಿತ್ರದ ಮೊದಲ‌ ದೃಶ್ಯವೇ ಲಾಡ್ಜ್ ನಲ್ಲಿ ಕೊಲೆಯಾದ ವೇಶ್ಯೆಯ ಪ್ರಕರಣದೊಂದಿಗೆ  ಶುರುವಾಗುತ್ತದೆ. ಹೀಗಾಗಿ ವೇಗದಲ್ಲೇ ಕಥೆ ಮುಂದುವರಿಯುತ್ತದೆ. ಒಂದು ಕೊಲೆಯ ಹಿಂದೆ 8 ಮಂದಿ ಶಂಕಿತರು. ಅವರ ವಿಚಾರಣೆಯೇ ಫ್ಲ್ಯಾಶ್‌‌‌ ಮೂಲಕ ....

Read More...

Nidradevi Next.Reviews

Friday, September 12, 2025

  ನಿದ್ದೆಗೆಡಿಸಿ ಚಿಂತನೆಗೆ ಹಚ್ಚುವ ಸುಂದರಿ ಈ ನಿದ್ರಾದೇವಿ!     ಚಿತ್ರ: ನಿದ್ರಾದೇವಿ Next door ನಿರ್ದೇಶನ: ಸುರಾಗ್ ಸಾಗರ್ ನಿರ್ಮಾಣ: ಸುರಾಮ್ ಮೂವೀಸ್ ತಾರಾಗಣ: ಪ್ರವೀರ್ ಶೆಟ್ಟಿ, ಶ್ರುತಿ ಹರಿಹರನ್, ರಿಷಿಕಾ ನಾಯಕ್ ಮೊದಲಾದವರು.   ಆತನ ಹೆಸರು ಧ್ರುವ. ಆದರೆ ಆತನಿಗೆ ಯಾವ ಧ್ರುವಕ್ಕೆ ತಲೆ ಹಾಕಿ ಮಲಗಿದರೂ ನಿದ್ದೆಯೇ ಇಲ್ಲ. ಆದರೆ ಕಣ್ತುಂಬ ನಿದ್ದೆ ನೀಡಬಲ್ಲ ಯುವತಿಯೋರ್ವಳು ಪಕ್ಕದ ಮನೆಯಲ್ಲೇ ಇರುವ ಸತ್ಯ ಅರಿವಾಗುತ್ತದೆ. ಆದರೆ ಆಕೆಯನ್ನು ಪರ್ಮನೆಂಟಾಗಿ ತನ್ನ ನೆಮ್ಮದಿಯ ನಿದ್ದೆಯೊಳಗೆ ಸೆಳೆಯುವ ಧ್ರುವನ ಪ್ರಯತ್ನ ಎಷ್ಟರ ಮಟ್ಟಿಗೆ ಸಕ್ಸಸ್ ಆಯಿತು ಎಂದು ತೋರಿಸಿಕೊಟ್ಟಿರುವ ಚಿತ್ರವೇ ನಿದ್ರಾದೇವಿ ನೆಕ್ಸ್ಟ್ ಡೋರ್.   ಧ್ರುವನಿಂದ ಹೀಗೆ ....

Read More...

September 10.Reviews

Friday, September 12, 2025

  ದುಃಖಿಗಳಿಗೆ ಸುಖದ ಸೂತ್ರ ಸಾರುವ ಸಿನಿಮಾ     ಚಿತ್ರ: ಸಪ್ಟೆಂಬರ್ 10 ನಿರ್ದೇಶಕರು: ಓಂ ಸಾಯಿ ಪ್ರಕಾಶ್ ನಿರ್ಮಾಪಕಿ: ರಾಜಮ್ಮ ಸಾಯಿ ಪ್ರಕಾಶ್ ತಾರಾಗಣ: ಶಶಿಕುಮಾರ್, ಶ್ರೀನಿವಾಸ ಮೂರ್ತಿ, ಪದ್ಮಾವಾಸಂತಿ ಮೊದಲಾದವರು.   ಸಪ್ಟೆಂಬರ್ 10ರ ದಿನಾಂಕವನ್ನು ವಿಶ್ವ ಆತ್ಮಹತ್ಯಾ ನಿರೋಧನ ದಿನವಾಗಿ ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ಆತ್ಮಹತ್ಯೆಯನ್ನು ಹೇಗೆ ತಡೆಯಬಹುದು ಎನ್ನುವ ವಿಚಾರದಲ್ಲಿ ಮಾಡಿರುವಂಥ ಚಿತ್ರವೇ ಸಪ್ಟೆಂಬರ್ 10.     ಆತ್ಮಹತ್ಯೆಗೆ ಮೊರೆ ಹೋಗುವವರನ್ನು ಹೇಗೆ ಅದರಿಂದ ತಪ್ಪಿಸಬಹುದು ಎನ್ನುವ ವಿಚಾರದಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಮೂಲಕ ಚಿತ್ರ ಆರಂಭಗೊಳ್ಳುತ್ತದೆ. ಈ ಸಭೆಯಲ್ಲಿ ಆರು‌ ವಿಭಿನ್ನ ಆತ್ಮಹತ್ಯೆಗಳನ್ನು ....

Read More...

Guri.Film Reviews

Friday, September 12, 2025

    ಬ್ಯಾನರ್: ವಿಷ್ಣುದುರ್ಗಾ ಪ್ರೊಡಕ್ಷನ್ ನಿರ್ಮಾಪಕರು: ರಾಧಿಕಾ.ಎಸ್.ಆರ್ ಮತ್ತು ಚಿತ್ರಲೇಖಾ.ಎಸ್ ಕಥೆ,ಚಿತ್ರಕಥೆ, ಛಾಯಾಗ್ರಹಣ ಮತ್ತು ನಿರ್ದೇಶನ: ಸೆಲ್ವಂ ಮಾದಪ್ಪನ್ ತಾರಾಗಣ: ಮಾಸ್ಟರ್ ಮಹಾನಿಧಿ, ಮಾಸ್ಟರ್ ಜೀವಿತ್. ಉಳಿದಂತೆ ಅಚ್ಯುತಕುಮಾರ್, ಜಯಶ್ರೀ, ಉಗ್ರಂಮಂಜು, ಸಂದೀಪ್‌ಮಲಾನಿ, ....

Read More...

Jumboo Circus.Reviews

Friday, September 12, 2025

  ಸ್ನೇಹ , ದ್ವೇಷದ ಮಧ್ಯೆ ಪ್ರೇಮಿಗಳ‌ ಸರ್ಕಸ್!   ಚಿತ್ರ: ಜಂಬೂ ಸರ್ಕಸ್ ನಿರ್ದೇಶಕರು: ಎಂ ಡಿ ಶ್ರೀಧರ್ ನಿರ್ಮಾಪಕರು: ಎಚ್ ಸಿ ಸುರೇಶ್ ತಾರಾಗಣ: ಪ್ರವೀಣ್ ತೇಜ್, ಅಂಜಲಿ ಅನೀಶ್, ಅಚ್ಯುತ್ ಕುಮಾರ್   ಇಬ್ಬರು ಸ್ನೇಹಿತರ ಮಕ್ಕಳು ಪ್ರೇಮದಲ್ಲಿ ಬಿದ್ದರೆ ಏನಾಗಬಹುದು? ಖಂಡಿತವಾಗಿ ಮದುವೆಯಾಗಬಹುದು. ಆದರೆ ಸ್ನೇಹಿತರ ಪತ್ನಿಯರೇ ಜಗಳಗಂಟಿಯರಾದರೆ? ಇಂಥದೊಂದು ಕತೆಯ ಜತೆಯಲ್ಲೇ ಭರ್ಜರಿ ಟ್ವಿಸ್ಟ್ ಕೂಡ ಸೇರಿಸಿ ಸಂಸಾರದಲ್ಲೇ ಸರ್ಕಸ್ ತಂದಿಟ್ಟ ಚಿತ್ರವೇ ಜಂಬೂ ಸರ್ಕಸ್.   ಆ ಹುಡುಗರಿಬ್ಬರದು ಶಾಲಾ ದಿನಗಳಿಂದ ಸ್ನೇಹಿತರಾಗಿ ಬೆಳೆದ ನಂಟು. ಆದರೆ ಒಂದೇ ಮಂಟಪದಲ್ಲಿ ಮದುವೆ ತನಕ ಮುಂದುವರಿಯುತ್ತದೆ. ‌ಕಾಕಾತಾಳೀಯ ಎನ್ನುವಂತೆ ಇಬ್ಬರ ಪತ್ನಿಯರು ಕೂಡ ....

Read More...

S/O Muthanna.Reviews

Thursday, September 11, 2025

  ಮುತ್ತಿನಂಥ ಮಗನ ಸುತ್ತ ಹೆಣೆದಂಥ ಕಥೆ   ಚಿತ್ರ: s/o ಮುತ್ತಣ್ಣ ನಿರ್ದೇಶಕ: ಶ್ರೀಕಾಂತ್ ಹುಣಸೂರು ನಿರ್ಮಾಪಕಿ: ಬಿ.ಎಂ ಮಂಜುಳ ತಾರಾಗಣ: ಪ್ರಣಾಮ್ ದೇವರಾಜ್, ಖುಷಿ ರವಿ, ರಂಗಾಯಣ ರಘು ಮೊದಲಾದವರು.   ತಾಯಿ ಸೆಂಟಿಮೆಂಟ್ ಎನ್ನುವುದನ್ನು ನಾವು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಈ ಚಿತ್ರದ ವಿಶೇಷತೆ ಎನ್ನುವುದೇ ತಂದೆ ಸೆಂಟಿಮೆಂಟ್. ಇಂಥದೊಂದು ಕಂಟೆಂಟ್ ಕನೆಕ್ಟಾಗುವಂತೆ ಪರದೆಯ ಮೇಲೆ ತಂದ ಕೀರ್ತಿ ಸಂಪೂರ್ಣವಾಗಿ ಸನ್ ಆಫ್ ಮುತ್ತಣ್ಣ ನಿರ್ದೇಶಕರಿಗೆ ಸಲ್ಲುತ್ತದೆ.   ಸಿನಿಮಾ‌ ಶುರುವಾಗುವುದೇ ತಂದೆ ಮತ್ತು ಮಗನ ಆತ್ಮೀಯತೆಗೆ ಕನ್ನಡಿಯಾಗುವಂಥ ದೃಶ್ಯಗಳೊಂದಿಗೆ.‌ ಆದರೆ ಈ ಆತ್ಮೀಯತೆಯಲ್ಲಿಯೂ ಏರುಪೇರುಗಳಾಗುತ್ತವೆ. ....

Read More...

Austin Na Mahan Mouna.Reviews

Friday, September 05, 2025

ಚಿತ್ರ: ಆಸ್ಟಿನ್‌ನ ಮಹಾಮೌನ**** ನಿರ್ದೇಶನ ಮತ್ತು ನಿರ್ಮಾಣ: ವಿನಯ್‌ಕುಮಾರ್ ವೈದ್ಯನಾಥನ್ ತಾರಾಗಣ: ವಿನಯ್‌ಕುಮಾರ್ ವೈದ್ಯನಾಥನ್, ರಿಷಾ, ಪ್ರಕೃತಿ, ಬಲರಾಜವಾಡಿ, ರಘುರಾಮನಕೊಪ್ಪ ಮುಂತಾದವರು ಪ್ರೀತಿಯಲ್ಲಿ ದ್ವೇಷ, ಪ್ರತಿಷ್ಠೆ ಇದೆ         ವಿಭಿನ್ನ ಕತೆಯನ್ನು ಹೊಂದಿರುವ ‘ಆಸ್ಟಿನ್‌ನ ಮಹಾಮೌನ’ ಚಿತ್ರದಲ್ಲಿ ದೊಡ್ಡವರ ಪ್ರತಿಷ್ಟೆಯಿಂದ ನವ ಜೋಡಿಗಳಿಗೆ ಯಾವ ರೀತಿ ಸಂಕಟ ....

Read More...

Naanu Matthu Gunda 2.Reviews

Friday, September 05, 2025

ಚಿತ್ರ: ನಾನು ಮತ್ತು ಗುಂಡ-೨ ನಿರ್ದೇಶನ ಮತ್ತು ನಿರ್ಮಾಣ: ರಘುಹಾಸನ್ ತಾರಾಗಣ: ರಾಕೇಶ್ ಅಡಿಗ, ರಚನ ಇಂದೂರ್, ಅವಿನಾಶ್, ಗೋವಿಂದೆಗೌಡ ಮುಂತಾದವರು ಸಂಗೀತ: ಆರ್.ಪಿ.ಪಟ್ನಾಯಕ್ ಶಂಕರ ಮತ್ತು ಗುಂಡನ ಮುಂದುವರಿದ ಕಥೆ       ಎರಡು ವರ್ಷಗಳ ಹಿಂದೆ ತೆರೆಕಂಡು ಹಿಟ್ ಆಗಿದ್ದ ‘ನಾನು ಮತ್ತು ಗುಂಡ’ ಚಿತ್ರದ ಮುಂದುವರಿದ ಭಾಗ ‘ನಾನು ಮತ್ತು ಗುಂಡ-೨’ ಕತೆಯನ್ನು ಹೇಳಿದೆ. ಶಂಕರನ ಅಗಲಿಕೆಯ ನೋವನ್ನು ....

Read More...

Elumale.Film Reviews

Thursday, September 04, 2025

  'ಉಘೇ ಉಘೇ..’ ಎನ್ನುವಂಥ ಚಿತ್ರ ಏಳುಮಲೆ       ಚಿತ್ರ: ಏಳುಮಲೆ ನಿರ್ದೇಶನ: ಪುನೀತ್ ರಂಗಸ್ವಾಮಿ ನಿರ್ಮಾಣ: ತರುಣ್ ಸುಧೀರ್, ಅಟ್ಲಾಂಟ ನಾಗೇಂದ್ರ ತಾರಾಗಣ: ರಾಣಾ, ಪ್ರಿಯಾಂಕಾ ಆಚಾರ್, ಕಿಶೋರ್ ಮೊದಲಾದವರು.   ಮನೆ ಬಿಟ್ಟು ಓಡಿಹೋಗುವ ಪ್ರೇಮಿಗಳ‌ ಕುರಿತಾದ ಎಷ್ಟೋ ಸಿನಿಮಾಗಳು ಬಂದು ಹೋಗಿವೆ. ಆದರೆ ಅವೆಲ್ಲಕ್ಕಿಂತ ವಿಭಿನ್ನವಾದ ಚಿತ್ರ ಏಳುಮಲೆ.     ಸಿನಿಮಾ ಶುರುವಾಗುವುದು ಟಿ.ಟಿ ಚಾಲಕನ ಪ್ರಯಾಣದ ಮೂಲಕ.‌ ಈ ಪ್ರಯಾಣದಲ್ಲಿ ಚಾಲಕ‌ ಹರೀಶನ ಪ್ರೇಮ ಪುರಾಣ ಹೊರಬರುತ್ತಾ ಹೋಗುತ್ತದೆ. ಹರೀಶನ ಪ್ರೇಯಸಿ ತಮಿಳುನಾಡಿನ ಹುಡುಗಿ. ಮೈಸೂರು ಮಹಾರಾಣಿ ಕಾಲೇಜ್ ನಲ್ಲಿ ವಿದ್ಯಾರ್ಥಿನಿಯಾಗಿದ್ದಾಗ ಹರೀಶನೊಂದಿಗೆ ಪ್ರೀತಿ ಪ್ರೇಮ ....

Read More...

Gange Gowri.Reviews

Friday, August 29, 2025

  ಚಿತ್ರ: ಗಂಗೆಗೌರಿ *ನಿರ್ಮಾಣ*: ಗಣೇಶ್‌ರಾವ್ ಕೇಸರ್‌ಕರ್ *ಸಹ ನಿರ್ಮಾಪಕರು*: ತುಳಜಾಬಾಯಿ, ರೂಪ.ಎಸ್.ದೊಡ್ಮನಿ, ಸುಮಿತ ಪ್ರವೀಣ್, ಬಸವರಾಜ್ ದೇಸಾಯಿ *ಚಿತ್ರಕಥೆ, ಸಾಹಿತ್ಯ ಮತ್ತು ನಿರ್ದೇಶನ*: ಬಿ.ಎ.ಪುರುಷೋತ್ತಮ್ *ತಾರಾಗಣ*: ಗಣೇಶ್‌ರಾವ್ ಕೇಸರ್‌ಕರ್, ರೂಪಾಲಿ, ನಿಖಿತಾಸಿಂಗ್, ಕು.ಋತುಸ್ಪರ್ಶ, ಸುಮಿತಾಪ್ರವೀಣ್, ಜಯಸಿಂಹಮೂಸೂರಿ, ಎಸ್ಕಾರ್ಟ್ ಶ್ರೀನಿವಾಸ್, ಜಿಮ್‌ಶಿವು, ಬಸವರಾಜದೇಸಾಯಿ, ಮಮತಗೌಡ ಮುಂತಾದವರು *ಸಂಗೀತ*: ರಾಜ್‌ಭಾಸ್ಕರ್   *ಶಿವ ಶಿವ ಎಂದರೆ ಭಯವಿಲ್ಲ*           ಬರಡುಭೂಮಿಯಲ್ಲಿ ನೀರು ಸಿಕ್ಕಂತೆ  ದೇವರ ಭಕ್ತರಿಗೆ *ಗಂಗೆಗೌರಿ* ಸಿನಿಮಾ ಹೇಳಿ ಮಾಡಿಸಿದಂತಿದೆ. ಶಿವ ಪುರಾಣದಲ್ಲಿ ಗಂಗೆ ಗೌರಿ ಸಂಬಂಧ ಏನು? ಗಂಗೆ ....

Read More...

Andondittu Kaala.Reviews

Friday, August 29, 2025

  ಒಬ್ಬ ನಿರ್ದೇಶಕನ ಪಯಣದ ಮಧುರ ಫ್ಲ್ಯಾಶ್‌‌‌ ಬ್ಯಾಕ್   ಚಿತ್ರ: ಅಂದೊಂದಿತ್ತು ಕಾಲ**** ನಿರ್ದೇಶಕ: ಕೀರ್ತಿ ಕೃಷ್ಣಪ್ಪ ನಿರ್ಮಾಪಕ: ಭುವನ್ ಸುರೇಶ್ ತಾರಾಗಣ: ವಿನಯ್ ರಾಜ್ ಕುಮಾರ್, ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್ ಮೊದಲಾದವರು   ಪ್ರಾಥಮಿಕ ಶಾಲೆಯಿಂದ ಟೆಂಟ್ ಗೆ ಹೋಗಿ ವಿಷ್ಣುವರ್ಧನ್ ರ ’ನಾಗರ ಹಾವು’ ಸಿನಿಮಾ ನೋಡಿದಾಗ ಸೃಷ್ಟಿಯಾದ ಸಿನಿಮಾ ಹುಚ್ಚು. ಚಿತ್ರದ ಬಗ್ಗೆ ತರಗತಿಯಲ್ಲಿ ಮಾತನಾಡಿದ ಶಿಕ್ಷಕರು ನಿರ್ದೇಶಕರೇ ಎಲ್ಲಕ್ಕೂ ಮುಖ್ಯ ಅಂತಾರೆ. ಇದನ್ನೆಲ್ಲ ಆಸಕ್ತಿಯಿಂದ ಆಲಿಸಿದ ಕುಮಾರ ಎನ್ನುವ ವಿದ್ಯಾರ್ಥಿ  ತಾನೇ ನಿರ್ದೇಶಕ ಆಗಬೇಕು ಎಂದು ಕನಸು ಕಾಣುತ್ತಾನೆ. ಈ ಕನಸಿನೊಂದಿಗೆ ಗಾಂಧಿನಗರ ಸೇರಿ ನಡೆಸುವ ಪ್ರಯತ್ನ ಮತ್ತು ....

Read More...

Rippan Swaamy.Reviews

Thursday, August 28, 2025

  'ಸ್ವಾಮಿ’ ಎನ್ನುವ ಹಂತಕನ ಸಂಚು..!   ಚಿತ್ರ: ರಿಪ್ಪನ್ ಸ್ವಾಮಿ**** ನಿರ್ದೇಶನ: ಕಿಶೋರ್ ಮೂಡುಬಿದಿರೆ ನಿರ್ಮಾಣ: ಪಂಚಾನನ ಫಿಲ್ಮ್ಸ್ ತಾರಾಗಣ: ವಿಜಯ ರಾಘವೇಂದ್ರ, ಅಶ್ವಿನಿ ಚಂದ್ರಶೇಖರ್ ಮೊದಲಾದವರು.     ಸ್ವಾಮಿ ಎನ್ನುವ ಹೆಸರಿಗೂ ಈತನ ವರ್ತನೆಗೂ ಸಂಬಂಧವೇ ಇಲ್ಲ. ಯಾಕೆಂದರೆ ಅಷ್ಟೊಂದು ಕ್ರೌರ್ಯ ತುಂಬಿದ ಬದುಕು ರಿಪ್ಪನ್ ಸ್ವಾಮಿಯದು. ತನ್ನ  ಸಾಕು ಹಂದಿಯನ್ನೇ ಮಾಂಸಕ್ಕಾಗಿ ಬಲಿಕೊಡುವ ಸಂದರ್ಭದಲ್ಲಿ ಗುಂಡು‌ ಹೊಡೆದು ಕೊಲ್ಲುವಂಥ ವಿಚಿತ್ರ ಮನುಷ್ಯ. ಈತ  ಉರಿಗಣ್ಣು ಬಿಟ್ಟು ಯಾರ ವಿರುದ್ಧ ಯಾವಾಗ ಸಿಡಿದು ನಿಲ್ಲುತ್ತಾನೆಂದೇ ಹೇಳಲಾಗದು. ಇಂಥ ರಿಪ್ಪನ್ ಸ್ವಾಮಿಗೆ ಒಬ್ಬಳು ಅಂದದ ಮಡದಿ ಇರುತ್ತಾಳೆ. ವೃತ್ತಿಯಲ್ಲಿ ಆಯುರ್ವೇದಿಕ್ ....

Read More...

Usiru.Film Reviews

Tuesday, August 26, 2025

  ತಾಯಿ ಮಮತೆ ಮತ್ತು ಕೊಲೆಯ ತನಿಖೆ     ಚಿತ್ರ: ಉಸಿರು ನಿರ್ದೇಶನ: ಪನೇಮ್ ಪ್ರಭಾಕರ್ ನಿರ್ಮಾಣ: ಲಕ್ಷ್ಮೀ ಹರೀಶ್ ತಾರಾಗಣ: ತಿಲಕ್, ಪ್ರಿಯಾ ಹೆಗ್ಡೆ, ಬಲ ರಾಜ್ವಾಡಿ ಮೊದಲಾದವರು.   ನಾಯಕನ ತಾಯಿ ಸೆಂಟಿಮೆಂಟ್ ನಿಂದ ಶುರುವಾಗಿ ತಾಯಿ ಸೆಂಟಿಮೆಂಟ್ ನಲ್ಲೇ ಕೊನೆಯಾಗುವ ಚಿತ್ರ ಉಸಿರು. ಇಲ್ಲಿ ಮಗನ ಪಾಲಿನ‌ ಉಸಿರೇ ತಾಯಿ.‌ ಆದರೆ ಆ ತಾಯಿಗಾದ ಅನ್ಯಾಯದ ಹೆಸರಲ್ಲಿ ಮಗನಲ್ಲಾದಂಥ ಬದಲಾವಣೆಯೇ ಚಿತ್ರದ ಪ್ರಮುಖ ಅಂಶ. ಬದಲಾದ ಮಗನ ಬದುಕಿನ ರೀತಿಯಲ್ಲಿನ‌ ನಿಗೂಢತೆಯೇ ಕಥೆಯೊಳಗೆ ಕುತೂಹಲ ಸೃಷ್ಟಿಸಲು ಕಾರಣವಾಗಿದೆ.     ಒಂದು ಫ್ಲ್ಯಾಶ್ ಬ್ಯಾಕ್ ಮೂಲಕ ಆರಂಭವಾಗುವ ಕಥೆ.‌ ತಾಯಿ ಮೇಲೆ ಹಲ್ಲೆ ನಡೆಯಿತೆಂದು ಹೇಳಿ ಹಲ್ಲೆಗೈದವನ ಕೊಲೆ ನಡೆಸಿದ ....

Read More...

Hacche.Reviews

Friday, August 22, 2025

ಚಿತ್ರ:  ಹಚ್ಚೆ**** ನಿರ್ದೇಶಕ: ಯಶೋದರ ನಿರ್ಮಾಪಕ: ಅಣ್ಣಪ್ಪ.ದಿ-ಮಧೂಸೂದನ್.ಎ ತಾರಾಗಣ: ಅಭಿಮನ್ಯು, ಆದ್ಯಪ್ರಿಯ, ಅನುಪ್ರೇಮ, ಗುರುರಾಜ್ ಹೊಸಕೋಟೆ ಮುಂತಾದವರು ಸಂಗೀತ: ವಿವೇಕ್ ಚಕ್ರವರ್ತಿ   ಪುನರ್‌ಜನ್ಮ ಸಾರುವ ಹಚ್ಚೆ       ಹೊಸಬರ ‘ಹಚ್ಚೆ’ ಚಿತ್ರವು ಪುನರ್‌ಜನ್ಮದ ಕಥೆಯನ್ನು ಹೇಳಲಿದೆ. ವಿಜಯನಗರ  ಸಾಮ್ರಾಜ್ಯದಲ್ಲಿ ಶ್ರೀ ಕೃಷ್ಣದೇವರಾಯರ ಆಳ್ವಿಕೆಯ ವೈಭವದ ಕಾಲದಲ್ಲಿ ....

Read More...

Just Married.Reviews

Friday, August 22, 2025

  ನವ ವಿವಾಹಿತರ ನೋವು ನಲಿವಿನ ರಹಸ್ಯ!   ಚಿತ್ರ: ಜಸ್ಟ್ ಮ್ಯಾರೀಡ್ ನಿರ್ದೇಶನ: ಸಿ ಆರ್ ಬಾಬಿ ನಿರ್ಮಾ: ಅಜನೀಶ್ ಲೋಕನಾಥ್ ಮತ್ತು ಸಿ ಆರ್ ಬಾಬಿ ತಾರಾಗಣ: ಶೈನ್ ಶೆಟ್ಟಿ, ಅಂಕಿತಾ ಅಮರ್, ಶ್ರುತಿ ಕೃಷ್ಣ ಮೊದಲಾದವರು.     ನಿವೃತ್ತ  ನ್ಯಾಯಾಧೀಶನ ಶ್ರೀಮಂತ ಕುಟುಂಬ.  ಈ ’ವಂಶವೃಕ್ಷ’  ಕುಟುಂಬದ ಏಕೈಕ ವಾರಸುದಾರ ಸೂರ್ಯ. ಈತ ವೃತ್ತಿಯಲ್ಲಿ ಜಾಹೀರಾತು ಸಿನಿಮಾ ನಿರ್ದೇಶಕ. ಆದರೆ  ವಿಪರೀತ ಗೆಳತಿಯರ ಸಹವಾಸ. ಜತೆಯಲ್ಲೇ ಭ್ರಮೆಯಲ್ಲಿ ಮುಳುಗುವ ಕಾಯಿಲೆ. ಇಂಥ ಸೂರ್ಯನ ವಿವಾಹ ಸಹನಾ ಎಂಬಾಕೆಯೊಡನೆ ನೆರವೇರುತ್ತದೆ. ಆದರೆ ವಿವಾಹಕ್ಕೂ ಮೊದಲೇ ಸಹನಾ ಹುಡುಗನೊಡನೆ ಎರಡು ಒಪ್ಪಂದಗಳನ್ನು ಮಾಡಿಕೊಳ್ಳುತ್ತಾಳೆ. ಯಾರೂ ಒಪ್ಪಲಾಗದಂಥ ಆ ಒಪ್ಪಂದವನ್ನು ನಾಯಕ ....

Read More...

Kothalavadi.Reviewa

Friday, August 01, 2025

  ಮರಳು ರಾಜಕೀಯದ ಕರಾಳ ನೆರಳು     ಚಿತ್ರ: ಕೊತ್ತಲವಾಡಿ ನಿರ್ದೇಶನ: ಶ್ರೀರಾಜ್ ನಿರ್ಮಾಣ: ಪುಷ್ಪ ಅರುಣ್ ಕುಮಾರ್ ತಾರಾಗಣ: ಪೃಥ್ವಿ ಅಂಬರ್, ಕಾವ್ಯಾ ಶೈವ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು     ಬಂಗಾರದ ಮನುಷ್ಯ ಸಿನಿಮಾ‌ ನೋಡಿ ನಗರದಿಂದ ಹಳ್ಳಿಗೆ ಮರಳಿದಂತೆ ಸಂದೇಶದಿಂದ ಜನೋದ್ಧಾರ ಮಾಡುವ ಚಿತ್ರ ತೆಗೆಯಬೇಕು ಎಂದಿದ್ದರು ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್. ಇದೀಗ ತಮ್ಮ ಚಿತ್ರ ಕೊತ್ತಲವಾಡಿಯಲ್ಲಿ ಹಳ್ಳಿಗಳ‌ ನದಿಯಲ್ಲಿ ಮರಳುಗಾರಿಕೆ‌ ನಡೆಸಬಾರದು ಎನ್ನುವ ಸಂದೇಶ ನೀಡಿದ್ದಾರೆ.     ಕೊತ್ತಲವಾಡಿ  ಒಂದು ಸುಂದರವಾದ ಊರು. ಊರಿನ ಆಕರ್ಷಣೆ ನದಿಯ ನೀರು. ಆದರೆ ನೀರಿನಾಳದ ಮರಳಿಗೆ ಮರುಳಾದವನು ಬಾಬಣ್ಣ. ಮರಳು ದಂಧೆಯ ತನ್ನ ....

Read More...

Eltuu Muthaa.Reviews

Friday, August 01, 2025

  ಹಳ್ಳಿ ಸೊಗಡಲ್ಲಿ ಅಮಾಯಕರು ಮತ್ತು ಅಪರಾಧಿಗಳ ಕಥೆ   ಚಿತ್ರ: ಎಲ್ಟು ಮುತ್ತ ನಿರ್ದೇಶನ: ರಾ ಸೂರ್ಯ ನಿರ್ಮಾಣ: ಸತ್ಯ ಶ್ರೀನಿವಾಸನ್ ಕಲಾವಿದರು: ಶೌರ್ಯ ಪ್ರತಾಪ್, ರಾ ಸೂರ್ಯ, ಪ್ರಿಯಾಂಕಾ ಮಳಲಿ ಮೊದಲಾದವರು.   ನವಿಲಿನಲ್ಲಿ ಮುಗ್ದತೆಯೂ ಇದೆ. ಮುಗ್ದತೆಯನ್ನು ಮೀರಿದ ಕ್ರೂರತೆಯೂ ಇದೆ.  ಬಿಡುಗಡೆಗೂ ಮೊದಲೇ ಇಂಥದೊಂದು  ಡೈಲಾಗ್ ಮೂಲಕ‌ ಸದ್ದು ಮಾಡಿದ್ದ ’ಎಲ್ಟು ಮುತ್ತ’ ನಿಜಕ್ಕೂ ತನ್ನ ಕ್ರೂರತೆ ಮತ್ತು ಮುಗ್ದತೆಯ ಅನಾವರಣದ ಮೂಲಕ ಬೆಚ್ಚಿ ಬೀಳಿಸಿದೆ.   ಈ ಚಿತ್ರದ ಕಥೆ ಸಂಪೂರ್ಣವಾಗಿ ಕೊಡಗಿನಲ್ಲಿ ನಡೆಯುತ್ತದೆ. ಕೊಡಗಿನಲ್ಲಿ ಮಳೆಗೆ ಹೆಸರಾದ ನೆಲಜಿ ಗ್ರಾಮದಲ್ಲಿ ನಡೆಯುವ ನೈಜ ಘಟನೆ ಎನ್ನುವಂತೆ ನಿರೂಪಣೆ ಮಾಡುತ್ತಾ ಹೋಗಿದ್ದಾರೆ. ....

Read More...

Su From So.Reveiews

Friday, July 25, 2025

  ದೆವ್ವದ ಹೆಸರಲ್ಲಿ ಪ್ರೇಕ್ಷಕರ ಮೈ ಸೇರುವ ನಗೆ ಬುಗ್ಗೆ     ಚಿತ್ರ: ಸು ಫ್ರಮ್ ಸೋ ನಿರ್ದೇಶನ: ಜೆ.ಪಿ ತೂಮಿನಾಡ್ ನಿರ್ಮಾಣ: ಲೈಟರ್ ಬುದ್ಧ ಫಿಲ್ಮ್ಸ್ ತಾರಾಗಣ:  ಶಾನಿಲ್ ಗುರು, ರಾಜ್ ಬಿ ಶೆಟ್ಟಿ ಮತ್ತು  ಜೆ.ಪಿ ತೂಮಿನಾಡ್ ಮತ್ತು ಇತರರು     ಮನೆ ಮಂದಿ ಸೇರಿ ನಗುವಂಥ ಹಾಸ್ಯ. ತಪ್ಪು ದಾರಿ ತುಳಿಯುವ ಯುವ ಜನತೆಗೆ ಸಂದೇಶ. ಮಂಗಳೂರು ಕರಾವಳಿಯ ಕಣ್ಮನ ಸೆಳೆಯುವ ಸನ್ನಿವೇಶ.. ಇವೆಲ್ಲವೂ ಸೇರಿದಂಥ ಚಿತ್ರವೇ ’ಸು ಫ್ರಮ್ ಸೋ’.   ಮರ್ಲೂರಿಗೆ ಯಾರೆಂದು ಬಲ್ಲಿರಿ ಎಂದು ಕೇಳಿದರೆ ರವಿಯಣ್ಣನದೇ ಮೊದಲ‌ ಹೆಸರು. ವೃತ್ತಿಯಲ್ಲಿ ಓರ್ವ ಸಾಧಾರಣ ಮೇಸ್ತ್ರಿ ಕೆಲಸಗಾರ.  ಆದರೆ ಎಲ್ಲ ವಿಚಾರಗಳಲ್ಲೂ ಊರಿಗೆ ಈತನೇ ಮುಖ್ಯಸ್ಥ. ಇಷ್ಟೊಂದು ಹೆಸರಿರುವ ....

Read More...

Junior.Film Reveiews

Friday, July 18, 2025

  ಕುಟುಂಬ ಮೆಚ್ಚುವ ಯೂತ್ ಫುಲ್ ಸಿನಿಮಾ     ಚಿತ್ರ: ಜ್ಯೂನಿಯರ್ ನಿರ್ದೇಶಕ: ರಾಧಾಕೃಷ್ಣ ರೆಡ್ಡಿ ನಿರ್ಮಾಪಕ: ಸಾಯಿ ಕೊರಪಟಿ ತಾರಾಗಣ: ಕಿರೀಟಿ, ಜೆನಿಲಿಯಾ, ವಿ ರವಿಚಂದ್ರನ್   ಸಾಮಾನ್ಯವಾಗಿ ಯುವ ಹೀರೋ ಎಂಟ್ರಿಯಾಗುವಾಗ ಲವ್ ಸ್ಟೋರಿಗಳಲ್ಲೇ ಕಾಣಿಸುತ್ತಾರೆ. ಆದರೆ ಆರಂಭದಲ್ಲೇ ಒಂದು ಕೌಟುಂಬಿಕ‌ ಹಿನ್ನೆಲೆಯ ಭದ್ರ ಅಡಿಪಾಯದ ಕಥೆಯೊಂದಿಗೆ ಎಂಟ್ರಿ ಕೊಟ್ಟಿದ್ದಾರೆ ನವನಟ ಕಿರೀಟಿ.   ಪುನೀತ್ ರಾಜ್ ಕುಮಾರ್ ಗೆ ಹೇಗೆ ಒಬ್ಬ ತೆಲುಗು ನಿರ್ದೇಶಕ ಅದ್ಭುತವಾದಂಥ ಅಪ್ಪು ಚಿತ್ರ ಕಟ್ಟಿಕೊಟ್ಟರೋ ಅದೇ ರೀತಿ ಕಿರೀಟಿಗೆ ರಾಧಾಕೃಷ್ಣ ರೆಡ್ಡಿ ಒಂದು ಲವಲವಿಕೆಯೊಂದಿಗೆ ಫ್ಯಾಮಿಲಿ ಸೆಂಟಿಮೆಂಟ್ ತುಂಬಿದ ಕೌಟುಂಬಿಕ ಚಿತ್ರವನ್ನು ....

Read More...

Ekka.Film Revews

Friday, July 18, 2025

  ಅಕ್ಕ ಪಕ್ಕದವರಿಗಾಗಿ ರಕ್ತ ಹರಿಸುವ ಎಕ್ಕ!     ಚಿತ್ರ: ಎಕ್ಕ ನಿರ್ದೇಶಕ: ರೋಹಿತ್ ಪದಕಿ ನಿರ್ಮಾಪಕ: ಪಿಆರ್ ಕೆ, ಕೆರ್ ಜಿ ಮತ್ತು ಜಯಣ್ಣ ಕಂಬೈನ್ಸ್ ತಾರಾಗಣ: ಯುವರಾಜ್ ಕುಮಾರ್, ಸಂಜನಾ ಆನಂದ್ ಮೊದಲಾದವರು     ಪುನೀತ್ ರಾಜ್ ಕುಮಾರ್ ಅವರನ್ನು ಮತ್ತೆ ಪರದೆಯ ಮೇಲೆ ಜೀವಂತವಾಗಿಸುತ್ತಾರೆ ಎನ್ನುವುದು ಯುವರಾಜ್ ಕುಮಾರ್ ಬಗ್ಗೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ. ಅದಕ್ಕೆ ತಕ್ಕಂತೆ ಅಪ್ಪು ಅಭಿನಯದ ಜಾಕಿ ಮಾದರಿ ಚಿತ್ರವೊಂದನ್ನು ಮಾಡಿದ್ದಾರೆ ಯುವ.     ಎಕ್ಕ ಫುಲ್ ಲೆಕ್ಕಾಚಾರ ಹಾಕಿಯೇ ಮಾಡಿರುವಂಥ ಚಿತ್ರ. ಹಳ್ಳಿಯಿಂದ ನಗರ ಸೇರುವ ಮುಗ್ದ ಯುವಕ ಹೇಗೆ ರೌಡಿಯಾಗುತ್ತಾನೆ ಎನ್ನುವುದನ್ನು ನಾವು ಸಾಕಷ್ಟು ಚಿತ್ರಗಳಲ್ಲಿ ....

Read More...

Doora Theera Yaana.Reviews

Friday, July 11, 2025

ಚಿತ್ರ: ದೂರ ತೀರ ಯಾನ **** ನಿರ್ದೇಶನ: ಮಂಸೋರೆ ನಿರ್ಮಾಣ: ಆರ್.ದೇವರಾಜ್ ತಾರಾಗಣ: ವಿಜಯ್‌ಕೃಷ್ಣ, ಪ್ರಿಯಾಂಕಕುಮಾರ್, ಶ್ರುತಿಹರಿಹರನ್, ಶರತ್‌ಲೋಹಿತಾಶ್ವ, ಸುಧಾರಾಣಿ,ಅರುಣ್‌ಸಾಗರ್, ಸುಧಾಬೆಳವಾಡಿ ಮುಂತಾದವರು.   ಪಯಣದಲ್ಲಿ ಸಾಗುವ ಸಂಬಂಧಗಳ ಮಿಲನ       ಪ್ರೀತಿಗಾಗಿ ಹೋರಾಡುವ, ತ್ಯಾಗ ಮಾಡುವ ಹಲವು ಚಿತ್ರಗಳು ಬಂದಿವೆ. ಆದರೆ ‘ದೂರತೀರ ಯಾನ’ ....

Read More...

Capital City.Reviews

Friday, July 04, 2025

ಚಿತ್ರ: ಕ್ಯಾಪಿಟಲಸ ಸಿಟಿ**** ನಿರ್ದೇಶನ: ಆರ್.ಅನಂತರಾಜು ನಿರ್ಮಾಣ: ಇನ್ಪಿನಿಟಿ ಕ್ರಿಯೇಶನ್ಸ್ ತಾರಾಗಣ: ರಾಜೀವ್‌ರೆಡ್ಡಿ, ಪ್ರೇರಣಾ, ಸುಮನ್, ರವಿಶಂಕರ್, ಶರತ್‌ಲೋಹಿತಾಶ್ವ, ಸಂಗೀತ: ವೀರಸಮರ್ಥ್                  ಭೂಗತ ಲೋಕದ ಸಿಟಿ ಕಥನ         ಸುಮಾರು ದಶಕಗಳಿಂದ ಭೂಗತ ಲೋಕದ ಚಿತ್ರಗಳು ತೆರೆ ಕಂಡಿದೆ. ಆ ಸಾಲಿಗೆ ‘ಕ್ಯಾಪಿಟಲ್ ಸಿಟಿ’ ಸೇರ್ಪಡೆಯಾಗುತ್ತದೆ. ....

Read More...

Jungle Mangal.Reviews

Friday, July 04, 2025

    ಪ್ರೀತಿ, ಜಗಳ ಮತ್ತು ಒಂದು ಕೊಲೆ..!   ಚಿತ್ರ: ಜಂಗಲ್ ಮಂಗಲ್ ನಿರ್ದೇಶನ: ರಕ್ಷಿತ್ ಕುಮಾರ್ ರೈ ನಿರ್ಮಾಣ: ಸಹ್ಯಾದ್ರಿ ಸ್ಟುಡಿಯೋಸ್ ತಾರಾಗಣ: ಯಶ್ ಶೆಟ್ಟಿ, ಹರ್ಷಿತಾ ರಾಮಚಂದ್ರ, ಉಗ್ರಂ ಮಂಜು   ಟ್ರೈಲರ್​ ನೋಡಿ ಸಿನಿಮಾ ನೋಡಲು ಬಂದವರನ್ನು ಹೊಸ ಲೋಕಕ್ಕೆ ಕರೆದೊಯ್ಯುವ ಸಿನಿಮಾ ಜಂಗಲ್ ಮಂಗಲ್.   ಇದು ಕೋವಿಡ್ ಕಾಲದ ಕಥೆ. ಚಿತ್ರದ ದೃಶ್ಯ, ಸನ್ನಿವೇಶಗಳು ಪ್ರೇಕ್ಷಕರನ್ನು ಅದೇ ಕಾಲಘಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ಸಾಗುತ್ತದೆ.   ಪ್ರವೀಣ ಮತ್ತು ದಿವ್ಯಾ ಪ್ರೇಮಿಗಳು. ಪ್ರವೀಣನ ಆಸೆಗೆ ಮಣಿದ ದಿವ್ಯಾ ಆತನಿಗೆ ಕಾಡಿನಲ್ಲಿ ಸಿಗಲು ಒಪ್ಪುತ್ತಾಳೆ. ಆದರೆ ಇವರಿಬ್ಬರನ್ನು ದೂರದಿಂದ ಕಂಡು ಊರಿನ ಒಂದಷ್ಟು ಕಾಡಿನ ಹೊರಭಾಗದಲ್ಲಿ ಕಾದು ....

Read More...

Sapthami.Film Reviews

Tuesday, July 01, 2025

  ದುಶ್ಚಟಗಳಿಂದ ತಪ್ಪಿಸಿಕೊಳ್ಳುವ ಹೆಣ್ಣಿನ ಕಥೆಯೇ ತಪಸ್ಸಿ!     ಚಿತ್ರ: ತಪಸ್ಸಿ ನಿರ್ದೇಶನ: ಮ್ಯಾಥ್ಯು ನಿರ್ಮಾಣ: ಬೆಂಗಳೂರು ಸ್ಟುಡಿಯೋಸ್ ತಾರಾಗಣ: ವಿ ರವಿಚಂದ್ರನ್,   ಚಿತ್ರದ ಹೆಸರು ತಪಸ್ಸಿ ಎಂದು ಯಾಕೆ ಇಡಲಾಗಿದೆ ಅನ್ನೋ ಪ್ರಶ್ನೆಗೆ  ಉತ್ತರವಾಗಿ ತಪಸ್ಸಿ ಅಗರ್ವಾಲ್ ಎನ್ನುವ ಹೆಣ್ಣು ಮಗಳ‌ ಪಾತ್ರವಿದೆ. ಈ ನಾಯಕಿ ಪ್ರಧಾನ ಚಿತ್ರದಲ್ಲಿ ಒಂದು ಅಪರೂಪದ ಪಾತ್ರ ಮಾಡಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.   ಪ್ರೊಫೆಸರ್ ವೈದ್ಯನಾಥ್ ಮನೆಯಲ್ಲಿ ತಪಸ್ಸಿ ನಡೆಸುವ ವಾಗ್ವಾದದೊಂದಿಗೆ ಚಿತ್ರ ಶುರುವಾಗುತ್ತದೆ. ಒಂದು ಹಂತದಲ್ಲಿ ಪ್ರೊಫೆಸರ್ ಮೇಲೆ ಈಕೆ ನಡೆಸುವ ತಳ್ಳಾಟದಿಂದ ಅವರು ಕೆಳಗೆ ಬಿದ್ದು ತಲೆಗೆ ಏಟು ಮಾಡಿಕೊಳ್ಳುತ್ತಾರೆ. ....

Read More...

Maadeva.Reviews

Friday, June 06, 2025

  ಸೇಡು, ಪ್ರತೀಕಾರದಲ್ಲಿ ಮಿಂದೆದ್ದ ಮಾದೇಶ   ವಿಮರ್ಶೆ ಚಿತ್ರ: ಮಾದೇವ ನಿರ್ದೇಶನ: ನವೀನ್ ರೆಡ್ಡಿProd-R.Keshava(Devasandra) ತಾರಾಗಣ; ವಿನೋದ್ ಪ್ರಭಾಕರ್, ಸೋನಲ್ ತರುಣ್, ಶೃತಿ, ಅಚ್ಯುತ್ ಕುಮಾರ್, ಶ್ರೀನಗರ ಕಿಟ್ಟಿ, ಮಾಲಾಶ್ರೀ, ಕಾಕ್ರೋಚ್ ಸುಧಿ, ಮೈಕ್ರೋ ನಾಗರಾಜ್, ಬಾಲರಾಜವಾಡಿ ಮತ್ತಿತರರು ರೇಟಿಂಗ್: *** 3 /5   ವಿಭಿನ್ನ ಪಾತ್ರದಲ್ಲಿ ನಟ ವಿನೋದ್ ಪ್ರಭಾಕರ್ ಕಾಣಿಸಿಕೊಂಡಿರುವ “ಮಾದೇವ”. ಚಿತ್ರ ಬಿಡುಗಡೆಯಾಗಿದೆ. ಸೇಡು, ಪ್ರತೀಕಾರದಲ್ಲಿ ಮಾದೇಶ  ಮಿಂದೆದ್ದಿದ್ದಾರೆ ನಿರ್ದೇಶಕ ನವೀನ್ ರೆಡ್ಡಿ ವಿಭಿನ್ನ ಪ್ರಯತ್ನದ ಚಿತ್ರವನ್ನು  ಜನರ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.ಇನ್ನು ಜನರು ಇಷ್ಟಪಟ್ಟರೆ ಕೈಹಿಡಿದರೆ ಚಿತ್ರತಂಡದ ಖುಷಿ ಮತ್ತಷ್ಟು ....

408

Read More...

Seeskaddi.Reviews

Friday, June 06, 2025

  “ಸೀಸಕಡ್ಡಿ” ಚಿತ್ರ ಕನ್ನಡದಲ್ಲಿ ಬಂದ ಹೊಸ ಬಗೆಯ ಚಿತ್ರ Prod-Sampath Shivashankara.Krithi Nannaiah.Ratan Gangadhar.   ಚಿತ್ರ: ಸೀಸಕಡ್ಡಿ ನಿರ್ದೇಶನ: ರತನ್ ಗಂಗಾಧರ್ ನಿರ್ಮಾಣ: ಗ್ರಹಣ ಪ್ರೊಡಕ್ಷನ್ ತಾರಾಗಣ: ನಿತಿನ್ ಅಪ್ಪಯ್ಯ, ಬಿ,ಎಸ್ ರಾಮಮೂರ್ತಿ,ಮಾನ್ವಿ ಬಳಗಾರ್, ನೊಣವಿನಕೆರೆ ರಾಮಕೃಷ್ಣಯ್ಯ, ಪ್ರಥಮ್ ರಾಜೇ ಅರಸ್, ಸಂತೋಷ್ ಕರ್ಕಿ, ಅನೂಷ್ಕಾ ಟಕ್ಕಲಕಿ, ಸಂಜಯ್ ಗೌಡ, ಮಹೇಂದ್ರ ಗೌಡ, ದೀಪಿಕಾ ಅಡ್ತಲೆ,ರಾಘವೇಂದ್ರ ಭಟ್, ನಾಗರಾಜ್ ರಾವ್ ಮತ್ತಿತರರು ರೇಟಿಂಗ್: *** 3 /5   ಸೀಸಕಡ್ಡಿ ಹೆಸರಲ್ಲಿ ಚಿತ್ರ ತೆರೆಗೆ ಬಂದಿದ್ದು ಗಮನ ಸೆಳೆದಿದೆ, ನಿರ್ದೇಶಕ ರತನ್ ಗಂಗಾಧರ್ ಉತ್ತಮ ಪ್ರಯತ್ನ ಮಾಡಿರುವ ಚಿತ್ರ ಇದು. ಇಷ್ಟವಾಗಲಿರುವ ಸಂದೇಶಗಳನ್ನು ಹೊಂದಿದೆ ಕರಾವಳಿ, ಬಯಲುಸೀಮೆ, ....

422

Read More...

Tayavva.Reviews

Friday, May 30, 2025

ಚಿತ್ರ: ತಾಯವ್ವ ನಿರ್ಮಾಣ: ಗೀತಪ್ರಿಯ ನಿರ್ದೇಶನ: ಸಾತ್ವಿಕ್ ಪವನ್‌ಕುಮಾರ್ ಸಂಗೀತ: ಅನಂತ್‌ಆರ್ಯನ್ ತಾರಾಗಣ: ಗೀತಪ್ರಿಯ ಮುಂತಾದವರು   ತಾಯವ್ವ ಹೆಣ್ಣಿನ ಕಥೆ ವ್ಯಥೆ      ಆದಿ ಕಾಲದಿಂದಲೂ ಮನೆಯಲ್ಲಿ ಹೆಣ್ಣು ಮಗು ಹುಟ್ಟಿತು ಎಂದರೆ ಏನೋ ಕಳೆದುಕೊಂಡವರಂತೆ ತಕದಿಮ ಎನ್ನುತ್ತಾರೆ. ಅದರಂತೆ ‘ತಾಯವ್ವ’ ಚಿತ್ರದಲ್ಲಿ ಅಂತಹುದೇ ಅಂಶಗಳು ಇರಲಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಒಂದಷ್ಟು ಘಟನೆಗಳನ್ನು ....

386

Read More...

Kuladalli Keelyavudo.Reviews

Friday, May 23, 2025

  ಕುಲ ಕುಲ ಕುಲವೆಂದು ಹೊಡೆದಾಡುವ ಕಥೆ     ಚಿತ್ರ: ಕುಲದಲ್ಲಿ ಕೀಳ್ಯಾವುದೋ ನಿರ್ದೇಶನ: ಕೆ ರಾಮನಾರಾಯಣ್ ನಿರ್ಮಾಣ: ಸಂತೋಷ್  ವಿದ್ಯಾ ತಾರಾಗಣ: ಮಡೆನೂರು ಮನು, ಮೌನ ಗುಡ್ಡೆಮನೆ ಮತ್ತಿತರರು.   ಈ ಸಿನಿಮಾದ ಶೀರ್ಷಿಕೆಗೆ ಯಾವ ಪ್ರಚಾರವೂ ಬೇಕಿಲ್ಲ. ಯಾಕೆಂದರೆ ಇದು ಡಾ.ರಾಜ್ ಕುಮಾರ್ ನಟನೆಯ ಸತ್ಯಹರಿಶ್ಚಂದ್ರ ಚಿತ್ರದ ಜನಪ್ರಿಯ ಗೀತೆಯ ಮೊದಲ ಸಾಲು. ಆದರೆ ಈ ಸಾಲನ್ನು ಟೈಟಲ್ ಮಾಡಿದ ಚಿತ್ರ ನ್ಯಾಯ ನಿಜಕ್ಕೂ ನ್ಯಾಯ ನೀಡಿದೆಯ? ಇಲ್ಲಿದೆ ಚಿತ್ರಲಹರಿ ವಿಮರ್ಶೆ.   ಮುತ್ತರಸ ಈ ಕತೆಯ ನಾಯಕ. ಈತನ ವಂಶಜ ಹಿರಿಯ ಮುತ್ತರಸ ನಾಡಿನಲ್ಲಿನ ಮೇಲು ಕೀಳು ಆಚಾರವನ್ನು ತಡೆಯಲಾಗದೆ ಕಾಡು ಸೇರಿರುತ್ತಾನೆ. ಇದೀಗ ಕಾಡಿನಿಂದ ಮರಳಿ ನಾಡು ಸೇರುವ ನಾಯಕನಾಗಿ ....

574

Read More...

Takila.Film Reviews

Friday, May 16, 2025

ಚಿತ್ರ: ಟಿಕಿಲಾ**** ನಿರ್ದೇಶಕ: ಪ್ರವೀಣ್‌ನಾಯಕ್ ನಿರ್ಮಾಪಕ: ಮರಡಹಳ್ಳಿ ನಾಗಚಂದ್ರ ತಾರಾಗಣ: ಧರ್ಮಕೀರ್ತಿರಾಜ್,ನಿಖಿತಾಸ್ವಾಮಿ,ಸುಷ್ಮಿತಾ,ಸುಮನ್‌ಶರ್ಮ, ನಾಗೇಂದ್ರಅರಸ್ ಮುಂತಾದವರು             ಕಿಕ್ಕು ಅಂತ ಹೋದರೆ ಲಕ್ಕು ದಕ್ಕೋದಿಲ್ಲ       ಗಂಡ ಹೆಂಡತಿ ಮಧ್ಯೆ ಎಲ್ಲವು ಚೆನ್ನಾಗಿದ್ದರೆ, ಅದನ್ನು ಸುಂದರ ಸಂಸಾರ ಎನ್ನುತ್ತಾರೆ. ಕೆಲವೊಮ್ಮೆ ಇಬ್ಬರ ನಡುವೆ ಭಿನ್ನಾಭಿಪ್ರ್ರಾಯ ಬಂದಾಗ ಬದುಕು ....

455

Read More...

Dee.Film Reviews

Friday, May 16, 2025

ಚಿತ್ರ: ದಿ**** ನಿರ್ದೇಶನ: ವಿನಯ್ ವಾಸುದೇವ್ ನಿರ್ಮಾಣ: ವಿಡಿಕೆ ಗ್ರೂಪ್ಸ್ ತಾರಾಗಣ: ವಿನಯ್, ದಿಶಾ, ನಾಗೇಂದ್ರ ಅರಸು, ಹರಿಣಿ ಮುಂತಾದವರು   ಕಾಡಿನೊಳಗೊಂದು ಕುತೂಹಲದ ಸಾಹಸಗಳು       ಮನುಷ್ಯ ಮತ್ತು ಕಾಡಿನ ನಂಟು ಬಹಳ ದೊಡ್ಡದು. ಅದನ್ನೆ ‘ದಿ’ ಚಿತ್ರದಲ್ಲಿ ತೋರಿಸಿದ್ದಾರೆ. ಫಾರೆಸ್ಟ್ ಆಫೀಸರ್ ನಾರಾಯಣ್‌ಗೆ ಕಾಡಿನಲ್ಲಿ ಮಗು ಸಿಗುತ್ತದೆ. ಇದನ್ನೆ ತನ್ನ ಮಗು ಅಂದುಕೊಂಡು ಬೆಳೆಸುತ್ತಾರೆ. ದೊಡ್ಡವನಾದ ದೀಪಕ್ ಅಪ್ಪನ ವಿರೋಧದ ನಡೆವೆಯೂ ಅನಾಥ ದಿವ್ಯಾಳನ್ನು ....

466

Read More...

Suthradaari.Reviews

Friday, May 09, 2025

  ಗೆಲುವಿನ ಸೂತ್ರದೊಂದಿಗೆ ಬಂದ ಸೂತ್ರಧಾರಿ   ಚಿತ್ರ: ಸೂತ್ರಧಾರಿ***** ನಿರ್ದೇಶನ: ಕಿರಣ್ ಕುಮಾರ್ ನಿರ್ಮಾಣ: ನವರಸನ್ ತಾರಾಗಣ: ಚಂದನ್ ಶೆಟ್ಟಿ, ಅಪೂರ್ವ ಮೊದಲಾದವರು.   ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ಎಂಟ್ರಿ ನೀಡಿರುವ ಚಿತ್ರ ಸೂತ್ರಧಾರಿ.     ಮೊದಲ ಚಿತ್ರದಲ್ಲೇ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಚಂದನ್ ಶೆಟ್ಟಿ ಟ್ರೆಂಡಿಂಗ್ ಸ್ಟಾರ್ ಬಿರುದಿನೊಂದಿಗೆ ಕಾಣಿಸಿದ್ದಾರೆ. ಚಿತ್ರದಲ್ಲಿ ಅವರ ಹೆಸರು ವಿಜಯ್.   ಅರೋಪಿಗಳನ್ನು ಎನ್ ಕೌಂಟರ್ ಮಾಡಿ ಪದೇಪದೆ ಸಸ್ಪೆಂಡ್ ಆಗುವ ಪೊಲೀಸ್ ಅಧಿಕಾರಿ ವಿಜಯ್. ಆದರೆ ನಗರದಲ್ಲೊಂದು ಹೊಸ ಮಾದರಿಯ ಸರಣಿ ಮರ್ಡರ್ ಕೇಸ್ ಕಾಣಿಸಿಕೊಂಡಾಗ ಮತ್ತೆ  ವಿಜಯ್ ನನ್ನೇ ....

523

Read More...

Amara Premi Arun.Reviews

Friday, April 25, 2025

ಚಿತ್ರ: ಅಮರ ಪ್ರೇಮಿ ಅರುಣ್**** ನಿರ್ಮಾಣ: ಒಲವು ಸಿನಿಮಾಸ್ ನಿರ್ದೇಶನ: ಪ್ರವೀಣ್‌ಕುಮಾರ್.ಬಿ.ಜೆ ತಾರಾಗಣ: ಹರಿಶರ್ವಾ, ದೀಪಿಕಾಆರಾಧ್ಯ,  ಧರ್ಮಣ್ಣಕಡೂರು, ಬಲರಾಜವಾಡಿ, ಅರ್ಚನಾಕೊಟ್ಟಿಗೆ ಮುಂತಾದವರು ಸಂಗೀತ: ಕಿರಣ್ ರವೀಂದ್ರನಾಥ್   ಅರುಣ್‌ನ ಖೇದದ ಪ್ರೇಮ ಕಥೆ      ಅಲ್ಲೋಂದು ಹುಡುಗರ ತಂಡ. ಪ್ರೀತಿಸಿ ಓಡಿ ಹೋಗುವವರಿಗೆ ಇವರುಗಳ ಸಹಾಯ ....

497

Read More...

Kadeema.Reviews

Friday, April 18, 2025

  ಚಿತ್ರ: *ಖದೀಮ**** *ಕಥೆ,ಚಿತ್ರಕಥೆ ಮತ್ತು ನಿರ್ದೇಶನ*: ಸಾಯಿ ಪ್ರದೀಪ್ *ನಿರ್ಮಾಣ*: ಟಿ.ಸಿವಕುಮಾರನ್ *ಸಹ ನಿರ್ಮಾಪಕಿ*: ಯಶಸ್ವಿನಿ.ಆರ್ *ಸಂಗೀತ*: ಶಶಾಂಕ್‌ಶೇಷಗಿರಿ *ಕಲಾವಿದರು*: ಚಂದನ್, ಅನುಷಾಕೃಷ್ಣ, ಮುಖ್ಯಮಂತ್ರಿ ಚಂದ್ರು, ಶೋಭರಾಜ್, ಗಿರಿಜಾಲೋಕೇಶ್, ಯಶ್‌ಶೆಟ್ಟಿ, ವಿ.ಮನೋಹರ್,ಶಿವಕುಮಾರ್ ಆರಾಧ್ಯ, ಮಿಮಿಕ್ರಿ ದಯಾನಂದ್, ಅರಸು, ದಡಿಯ ಗಿರೀಶ್ ಮುಂತಾದವರು   *ಮಾರ್ಕೆಟ್‌ದಲ್ಲಿ ಅರಳುವ ನವಿರಾದ ಪ್ರೀತಿ*         ಸಾಮಾನ್ಯವಾಗಿ ಸಿಟಿ ಮಾರ್ಕೆಟ್ ಅಂದರೆ ಅಲ್ಲಿನ ದಂದೆಗಳು, ಪುಡಿ ರೌಡಿಸಂ ಇವುಗಳನ್ನು ತೋರಿಸುವ ಸಿನಿಮಾಗಳು ಬಂದಿದೆ. ಆದರೆ *ಖದೀಮ* ಚಿತ್ರದಲ್ಲಿ ಇದೆಲ್ಲಾವನ್ನು ಪಕ್ಕಕ್ಕೆ ಇಟ್ಟು, ಇಲ್ಲಿಯೂ ಪ್ರೀತಿ ಅರಳುತ್ತದೆ ....

718

Read More...

Veera Chandrahasa.Reviews

Friday, April 18, 2025

ಚಿತ್ರ: ವೀರಚಂದ್ರಹಾಸ**** ನಿರ್ದೇಶನ: ರವಿಬಸ್ರೂರು ನಿರ್ಮಾಣ: ಎನ್.ಎಸ್.ರಾಜಕುಮಾರ್ ಕಲಾವಿದರು: ಶಿವರಾಜ್‌ಕುಮಾರ್, ಗರುಡಾರಾಮ್, ಚಂದನ್‌ಶೆಟ್ಟಿ, ಪುನೀತ್‌ರುದ್ರನಾಗ್, ಶಿಥಿಲ್‌ಶೆಟ್ಟಿ, ಪ್ರಸನ್ನಶೆಟ್ಟಿಗಾರ್, ನಾಗಶ್ರೀ ಮುಂತಾದವರು   ಚಿತ್ರರೂಪದಲ್ಲಿ ಯಕ್ಷವೈಭವ       ಪ್ಯಾನ್ ಸಂಗೀತ ಮಾಂತ್ರಿಕ ರವಿಬಸ್ರೂರು ನಿರ್ದೇಶನದ ಚಿತ್ರಗಳು ....

512

Read More...

Vaamana.Film Reviews

Thursday, April 10, 2025

ಚಿತ್ರ: ವಾಮನ**** ನಿರ್ಮಾಣ: ಚೇತನ್‌ಗೌಡ ನಿರ್ದೇಶನ: ಶಂಕರ್ ರಾಮನ್ ತಾರಾಗಣ: ಧನ್ವೀರ್, ರೀಷ್ಮಾನಾಣಯ್ಯ, ತಾರಾ, ಸಂಪತ್, ಸುಧಿ, ಆದಿತ್ಯಮೆನನ್, ಅವಿನಾಶ್, ಅಚ್ಯುತಕುಮಾರ್ ಮತ್ತಿತರರು   ದುರಳರನ್ನು ಸದೆಬಡಿಯುವ ವಾಮನ       ‘ವಾಮನ’ ಹೆಸರೇ ಹೇಳುವಂತೆ ಇದೊಂದು ಮಾಸ್ ಚಿತ್ರವೆಂದು ಹೇಳಬಹುದು. ಅದರಂತೆ ಇಲ್ಲಿ ಭರ್ಜರಿ ಆಕ್ಷನ್‌ಗಳು, ಲಾಂಗು, ಮಚ್ಚು, ಗನ್ ರಕ್ತದೋಕಳಿಗಳು ಇವುಗಳೇ ಪ್ರಧಾನ. ಎಲ್ಲಾ ಚಿತ್ರಗಳಲ್ಲಿ ....

519

Read More...

Nimbiya Banada Myaga.Reviews

Friday, April 04, 2025

ಮನುಷ್ಯ ಸಂಬಂಧಗಳ ಮೌಲ್ಯಗಳನ್ನು ಸಾರುವ ಚಿತ್ರ ಚಿತ್ರ: ನಿಂಬಿಯಾ ಬನಾದ ಮ್ಯಾಗ ನಿರ್ದೇಶನ: ಅಶೋಕ್‌ಕಡಬ ನಿರ್ಮಾಪಕ: ವಿ.ಮಾದೇಶ್   ತಾರಾಂಗಣ : ಸುನಾದ್ ರಾಜ್, ಸಂಗೀತ ಅನಿಲ್, ಸಂದೀಪ್ ಮಲಾನಿ, ಷಣ್ಮುಖ ಗೋವಿಂದ ರಾಜ್, ತನುಶ್ರೀ, ತೃಷಾ, ಮೂಗ್ ಸುರೇಶ್          ‘ನಿಂಬಿಯಾ ಬನಾದ ಮ್ಯಾಗ’ ಚಿತ್ರವು ಎರಡು ಫ್ಯಾಮಿಲಿ ಡ್ರಾಮ ಕಥೆಯನ್ನು ಹೊಂದಿದೆ. ಮಲೆನಾಡ ಭಾಗದ ಬೆಂಗಾಡಿ ಎಂಬ ಊರಿನ ಬೈಲ್ ದೊಡ್ಡ ಮನೆಯಲ್ಲಿ ನಾಲ್ಕು ವರ್ಷದ ಮಗು ಅಚ್ಚು ಕಾಣೆಯಾಗುತ್ತದೆ. ತಾಯಿ ಇಂದಲ್ಲ ನಾಳೆ ಮಗು ಹಿಂದಿರುಗುತ್ತದೆ ಎಂಬ ....

587

Read More...

Bad.Film Reviews

Friday, March 28, 2025

ಸಸ್ಪೆನ್ಸ್ ಥ್ರಿಲ್ಲರ್ ಕಥನ ಬ್ಯಾಡ್ ಚಿತ್ರ: ಬ್ಯಾಡ್ ನಿರ್ದೇಶನ: ಪಿ.ಸಿ.ಶೇಖರ್ ನಿರ್ಮಾಣ: ವೆಂಕಟೇಶ್‌ಗೌಡ ತಾರಾಗಣ: ನಕುಲ್‌ಗೌಡ, ಮಾನ್ವಿತಾಕಾಮರ್, ಅಪೂರ್ವಭಾರದ್ವಾಜ್, ಕಡ್ಡಿಪುಡಿ ಚಂದ್ರು, ಸಾಯಿಕೃಷ್ಣ ಮುಂತಾದವರು         ಆತ ಒಬ್ಬ ರೈತ. ಪಾರ್ಟ್ ಟೈಮ್ ಮೆಕ್ಯಾನಿಕ್ ಅಲ್ಲದೆ ಫುಲ್ ಟೈಮ್ ರೌಡಿ. ಈ ಹಾದಿಗೆ ಹೋಗಲು ಕಾರಣವಿದೆ. ಪ್ರೀತಿಸಿದವಳನ್ನು ಕಳೆದುಕೊಂಡ ಬಳಿಕ ಅದಕ್ಕೆ ಕಾರಣರಾದವರನ್ನು ....

545

Read More...

Manada Kadalu.Reviews

Friday, March 28, 2025

ಮನದ ಕಡಲು ಪ್ರೇಮದ ದೃಶ್ಯ ಕಾವ್ಯ ಚಿತ್ರ: ಮನದ ಕಡಲು ನಿರ್ದೇಶನ: ಯೋಗರಾಜ್‌ಭಟ್ ನಿರ್ಮಾಣ: ಇ.ಕೃಷ್ಣಪ್ಪ ತಾರಾಗಣ: ಸುಮುಖ, ಅಂಜಲಿಅನೀಶ್, ರಾಶಿಕಾಶೆಟ್ಟಿ,  ರಂಗಾಯಣರಘು, ದತ್ತಣ್ಣ ಮತ್ತಿತ್ತರರು           ‘ಮುಂಗಾರು ಮಳೆ’ಯಲ್ಲಿ ಕಾಡುವ ಪ್ರೀತಿ ತೋರಿಸಿದ್ದ ನಿರ್ದೇಶಕ ಯೋಗರಾಜ್‌ಭಟ್ಟರು ಇದೀಗ ‘ಮನದ ಕಡಲು’ ತ್ರಿಕೋನ ಪ್ರೇಮಕಥೆಯಲ್ಲಿ, ವೈದ್ಯನೊಬ್ಬನ ಜೀವನದ ಮಜಲುಗಳನ್ನು ತೋರಿಸಿದ್ದಾರೆ.  ಓದಿಗೆ ತಿಲಾಂಜಲಿ ....

507

Read More...

Apple Cut.Film Reviews

Friday, March 07, 2025

ಚಿತ್ರ: ಆಪಲ್ ಕಟ್ ನಿರ್ದೇಶನ: ಸಿಂಧುಗೌಡ ನಿರ್ಮಾಣ: ಶಿಲ್ಪಪ್ರಸನ್ನ ತಾರಾಗಣ: ಸೂರ್ಯಗೌಡ, ಅಶ್ವಿನಿಪೋಲೆಪಲ್ಲಿ, ಬಲರಾಜವಾಡಿ, ಅಪ್ಪಣ್ಣ, ಅಭಿಜಿತ್, ಮೀನಾಕ್ಷಿ ಮುಂತಾದವರು ಸಂಗೀತ: ವೀರಸಮರ್ಥ್   ಸಿಹಿ ಆಪಲ್‌ನ ಕಹಿ ಕಥನ      ‘ಆಪಲ್ ಕಟ್’ ಸಿನಿಮಾವು ಮರ್ಡರ್ ಮಿಸ್ಟರಿ ಕಥೆಯನ್ನು ಹೊಂದಿದ್ದು ಆಪಲ್ ಹಾಗೂ ಅದರ ಬೀಜದ ಸುತ್ತ ಸಾಗುತ್ತದೆ. ವೃತ್ತಿಯಲ್ಲಿ ಆತ ಮಾನವಶಾಸ್ತ್ರ ಪ್ರಾಧ್ಯಾಪಕ. ಒಳ್ಳಯವನಂತೆ ಕಂಡರೂ ....

552

Read More...

Soori Loves Sandhya.Reviews

Friday, March 07, 2025

ಚಿಲಿಪಿಲಿ ಹಕ್ಕಿಗಳ ಪ್ರೇಮಕಥೆ **** ಚಿತ್ರ: ಸೂರಿ ಲವ್ಸ್ ಸಂಧ್ಯಾ ನಿರ್ದೇಶನ: ಯಾದವ್ ರಾಜ್ ನಿರ್ಮಾಣ: ಕೆ.ಟಿ.ಮಂಜುನಾಥ್ ತಾರಾಗಣ: ಅಭಿಮನ್ಯು ಕಾಶಿನಾಥ್, ಅಪೂರ್ವ, ಪ್ರತಾಪ್‌ನಾರಯಣ್, ಜಯ್‌ರಾಮಣ್ಣ ಮುಂತಾದವರು             ‘ಸೂರಿ ಲವ್ಸ್ ಸಂಧ್ಯಾ’ ಚಿತ್ರವು ಹೆಸರೇ ಹೇಳುವಂತೆ ಇದೊಂದು ಕಾಡುವ ಪ್ರೇಮಕತೆಯನ್ನು ಹೊಂದಿದೆ. ಅವನಿಗೆ ಅವಳು, ಅವಳಿಗೆ ಅವನು ಎನ್ನುತ್ತಲ್ಲೇ ಬಾಳ ದಾರಿ ಸಾಗುವ ಯುವ ಜೋಡಿಗಳ ಸುತ್ತ ಸಾಗುತ್ತದೆ.      ಬಾರ್ ಸಪ್ಲಯರ್ ಮತ್ತು ಮಧ್ಯಮ ವರ್ಗದ ಹುಡುಗಿ. ಇಬ್ಬರು ಒಬ್ಬರಿಗೊಬ್ಬರು ಜೀವನಕ್ಕೆ ನೆರಳಂತೆ ಇರುವಾಗಲೇ, ಅನಿರೀಕ್ಷಿತವಾಗಿ ಊಹಿಸಲಾಗದ ಘಟನೆಗಳು ಬಂದು ....

525

Read More...

Kapati.Film Reviews

Friday, March 07, 2025

ಚಿತ್ರ: ಕಪಟಿ ನಿರ್ದೇಶನ: ರವಿಕಿರಣ್ ಮತ್ತು ಚೇತನ್.ಎಸ್.ಪಿ ನಿರ್ಮಾಪಕ: ದಯಾಳ್ ಪದ್ಮನಾಬನ್ ತಾರಾಗಣ: ಸುಕೃತಾವಾಗ್‌ದೆಮ ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್, ಶಂಕರ್‌ನಾರಾಯಣ, ನಂದಗೋಪಾಲ್, ಅಜಿತ್‌ಕುಮಾರ್ ಸಂಗೀತ:   ಪ್ರಸ್ತುತ ತಂತ್ರಜ್ಘಾನದ ಮಾಯಾಜಾಲ ****         ಕಾಲ ಬದಲಾವಣೆ ಆಗುವಂತೆ ತಂತ್ರಜ್ಘಾನವು ಬೆಳೆಯುತ್ತಾ ಬಂದಿದೆ. ಇದರಿಂದ ಒಳ್ಳೆಯದು ....

432

Read More...

Interval.Film Reviews

Friday, March 07, 2025

  ಇಂಟರ್ ವೆಲ್ ಚಿತ್ರದ ವಿಮರ್ಶೆ;   ಹಳ್ಳಿ ಹುಡುಗರ ಪರದಾಟದ ಚಿತ್ರ ಇಂಟರ್ ವೆಲ್     ಚಿತ್ರ : ಇಂಟರ್ ವೆಲ್ 3/5 "ನಿರ್ದೇಶನ : ಭರತ್ ತಾರಾಗಣ: ಶಶಿರಾಜ್ ,ಪ್ರಜ್ವಲ್ ಕುಮಾರ್ ಗೌಡ, ಸುಖಿ, ಚರಿತ್ರ ರಾವ್, ಸಹನಾ ಆರಾಧ್ಯ, ಸಮೀಕ್ಷಾ ಮತ್ತಿತರರು   ಹಳ್ಳಿಯ ಹುಡುಗರ ತರಲೆ , ತುಂಟಾಟ ಮತ್ತು ಕೀಟಲೆ ಹಾಗು ಪರಪಾಲುಗಳನ್ಜು ಮುಂದಿಟ್ಟುಕೊಂಡು ತೆರೆಗೆ ಬಂದಿರುವ ಚಿತ್ರ " ಇಂಟರ್ ವೆಲ್".   ಚಿತ್ರದ ಮಧ್ಯಂತರದ ಬಿಡುವನ್ನು ಇಂಟರ್ ವೆಲ್ ಅನ್ನುತ್ತಾರೆ. ಅದೇ ಹೆಸರಲ್ಲಿ ಭರತ್ ಚಿತ್ರವನ್ನು ತೆರೆಗೆ ತಂದಿದ್ದಾರೆ ಈ ಮೂಲಕ ಬದುಕಿನ ಘಟನೆಗಳು ಮತ್ತು ತಿರುವುಗಳನ್ನು ಇಂಟರ್ ವೆಲ್ ಗೆ ಹೋಲಿಸಿದ್ದಾರೆ.   ಊರಿನ ಮೂರು ಮಂದಿ ಹುಡುಗರಾದ ಶಶಿರಾಜ್, ....

461

Read More...

Shanubhogara Magalu.Reviews

Friday, February 21, 2025

ಚಿತ್ರ: ಶಾನುಭೋಗರ ಮಗಳು ನಿರ್ದೇಶನ: ಕೂಡ್ಲುರಾಮಕೃಷ್ಣ ನಿರ್ಮಾಣ: ಸಿ.ಎಂ.ನಾರಾಯಣ್ ತಾರಾಗಣ: ರಾಗಿಣಿಪ್ರಜ್ವಲ್, ನಿರಂಜನ್‌ಶೆಟ್ಟಿ, ಕಿಶೋರ್, ರಮೇಶ್‌ಭಟ್, ಸುಧಾಬೆಳವಾಡಿ, ವಾಣಿಶ್ರೀ, ಪದ್ಮವಾಸಂತಿ, ಶ್ರೀನಿವಾಸಮೂರ್ತಿ, ಅನನ್ಯ, ಜೋಸೈಮನ್, ರಂಜನ್ ಕಾರ್ತಿಕ್ ಸ್ವಾತಂತ್ರಪೂರ್ವದ ಕಥನ****        ಲೇಖಕಿ ಭಾಗ್ಯ ....

413

Read More...

1990's Film Reviews

Friday, February 28, 2025

ಚಿತ್ರ: ೧೯೯೦ ನಿರ್ಮಾಣ: ಮನಸ್ಸು ಮಲ್ಲಿಗೆ ಕಂಬೈನ್ಸ್ ನಿರ್ದೇಶನ: ಸಿ.ಎಂ.ನಂದಕುಮಾರ್ ತಾರಾಗಣ: ಅರುಣ್‌ಕುಮಾರ್, ರಾಣಿವರದ್ ಸಂಗೀತ: ಮಹಾರಾಜ ೯೦ರ ದಶಕದ ಕಥನ        ‘೧೯೯೦’ ಚಿತ್ರದ ಶೀರ್ಷಿಕೆ ಹೇಳುವಂತೆ ಆಗಿನ ಕಾಲಘಟ್ಟದಲ್ಲಿ ನಡೆಯುವ ಪ್ರೇಮ ಕಥೆ ಇರಲಿದೆ. ಯಾವ ಕಾಲದಲ್ಲಿ ಇದ್ದರೂ ಪ್ರೇಮಿಗಳನ್ನು ಬಾಳಸಂಗಾತಿಯನ್ನಾಗಿ ಮಾಡುತ್ತದೆ. ಹಾಗೆಯೇ ಸಿನಿಮಾದಲ್ಲಿ ಕೂಡ ಅದೇ ರೀತಿಯ ಲವ್‌ಸ್ಟೋರಿ ಇದೆ. ಸಂಪ್ರದಾಯಸ್ಥ ಕುಟುಂಬದ ಹುಡುಗಿ. ಬಾಲ್ಯದಿಂದಲೇ ರಗಡ್ ಆಗಿ ಬೆಳೆಯುತ್ತಾ ಪರೋಡಿಯಾದ ಹುಡುಗ. ಇಂಥ ಯುವಕನಿಗೆ ....

419

Read More...

Apayavidhe Echharike.Reviews

Friday, February 28, 2025

ಚಿತ್ರ: ಅಪಾಯವಿದೆ ಎಚ್ಚರಿಕೆ ನಿರ್ದೇಶನ: ಅಭಿಜಿತ್ ತೀರ್ಥಹಳ್ಳಿ ನಿರ್ಮಾಣ: ಮಂಜುನಾಥ್.ವಿ.ಜಿ ಮತ್ತು ಪೂರ್ಣಿಮಾ ಗೌಡ ತಾರಾಗಣ: ವಿಕಾಶ್ ಉತ್ತಯ್ಯ, ಮಿಥುನ್ ತೀರ್ಥಹಳ್ಳಿ, ರಾಘವ್ ಕೊಡಚಾದ್ರಿ, ಅಶ್ವಿನಿಹಾಸನ್, ಮಿಮಿಕ್ರಿಕುಮಾರ್, ರಾಧಾಭಗವತಿ ಮುಂತಾದವರು ಸಂಗೀತ ಮತ್ತು ಛಾಯಾಗ್ರಹಣ: ಸುನಾದ್‌ಗೌತಮ್ ಮೂವರು ಹುಡುಗರ ನಕರಾತ್ಮಕ ಗುಣಗಳು         ‘ಅಪಾಯವಿದೆ ಎಚ್ಚರಿಕೆ’ ಚಿತ್ರವು ಮೂವರು ಬೇಜವಬ್ದಾರಿ ಹುಡುಗರ ಸುತ್ತ  ಸಾಗುತ್ತದೆ. ಹಣದ ಆಸೆಗೆ ಬಿದ್ದು ಜೀವನದಲ್ಲಿ ಅಡ್ಡದಾರಿಗೆ ಹೋದಾಗ ....

416

Read More...

Nimagondu Sihi Suddi.Reviews

Friday, February 21, 2025

ಗರ್ಭಿಣಿ ಗಂಡಸಿನ ಕಥನ

ನಿರ್ಮಾಪಕರು: ಹರೀಶ್.ಎನ್.ಗೌಡ

ನಿರ್ದೇಶನ: ರಘುಭಟ್

ತಾರಾಗಣ: ರಘುಭಟ್, ಕಾವ್ಯಶೆಟ್ಟಿ, ಹರಿಣಿಶ್ರೀಕಾಂತ್, ಪದ್ಮಿನಿನರಸಿಂಹನ್, ಸುಜಯ್‌ಶಾಸ್ತ್ರೀ, ಶಿಲ್ಪಾಶೈಲೇಶ್, ಪ್ರಜ್ವಲ್  ಮುಂತಾದವರು

ಸಂಗೀತ: ಅಶ್ವಿನ್ ಹೇಮಂತ್

 

      ವಿಶ್ವವನ್ನೇ ತಲ್ಲಣಗೊಳಿಸಿದ ಸುದ್ದಿ ಅಂದರೆ ಗಂಡಸು ಗರ್ಭಿಣಿಯಾಗುವುದು. ಈಗಾಗಲೇ ಜಗತ್ತಿನ ಎಲ್ಲಾ ದೇಶವ ಆಯ್ದ ಭಾಗಗಳಲ್ಲಿ ಗಂಡಸರು ಗರ್ಭ ಧರಿಸಿದ ಬಗ್ಗೆ ಸುದ್ದಿಗಳು ಪ್ರಕಟವಾಗಿದೆ. ಅಂತಹುದೇ ಅಂಶಗಳನ್ನು ಒಳಗೊಂಡ ಚಿತ್ರ ‘ನಿಮಗೊಂದು ಸಿಹಿ ಸುದ್ದಿ’.

404

Read More...

Vishnu Priya.Reviews

Friday, February 21, 2025

  ವಿಷ್ಣು ಪ್ರಿಯ: ಪ್ರಣಯಮಯ ದೃಶ್ಯಕಾವ್ಯ   ಚಿತ್ರ: ವಿಷ್ಣು ಪ್ರಿಯ ನಿರ್ದೇಶನ: ವಿ ಕೆ ಪ್ರಕಾಶ್ ನಿರ್ಮಾಣ: ಕೆ ಮಂಜು ತಾರಾಗಣ: ಶ್ರೇಯಸ್ ಮಂಜು, ಪ್ರಿಯಾ ವಾರ್ಯರ್ ಮೊದಲಾದವರು   ವಿಷ್ಣುವರ್ಧನ್ ಪ್ರಿಯರಿಗೆ ಹೇಳಿ ಮಾಡಿಸಿದಂಥ ನಾಯಕನ ಇಂಟ್ರಡಕ್ಷನ್. ಅದೇನು ಅನ್ನೋದನ್ನು ಥಿಯೇಟರ್ ನಲ್ಲಿ ನೋಡಿದರೇನೇ ಚಂದ. ರವಿಚಂದ್ರನ್ ಪ್ರಿಯರಿಗೆ ಹೇಳಿ ಮಾಡಿಸಿದಂಥ ಪ್ರೇಮಕತೆ, ಹಾಡುಗಳು. ಇವೆರಡರ ಮಧ್ಯೆ ತೊಂಬತ್ತರ ದಶಕದ ಯುವ ಪ್ರೇಮಿಗಳಾಗುವ ನಾಯಕ ಮತ್ತು ನಾಯಕಿ.   ನಾಯಕನ ಹೆಸರು ವಿಷ್ಣು. ಸ್ನೇಹಿತ ಬಾಲಾಜಿಯ ಏಕಮುಖ ಪ್ರಣಯವನ್ನು ಹೋಗಿ ಆತನ ಪ್ರೇಯಸಿಗೆ ಹೇಳುತ್ತಾನೆ. ಆಕೆ ನೀನೇ ನನ್ನ ಪ್ರೇಮಿ ಅಂತಾಳೆ. ಅಲ್ಲಿಗೆ ಪ್ರೀತಿಗೊಬ್ಬಳು ಹುಡುಗಿ ಮತ್ತು ....

424

Read More...

Sidingu 2.Film Reviews

Friday, February 14, 2025

ಡಬಲ್ ಮೀನಿಂಗ್ ಇಲ್ಲದ ಸಿದ್ಲಿಂಗು-೨****        ನಿರ್ದೇಶಕ ವಿಜಯಪ್ರಸಾದ್ ಅವರ ‘ಸಿದ್ಲಿಂಗು-೨’ ಚಿತ್ರವು ಡಬ್ಬಲ್ ಮೀನಿಂಗ್ ಇಲ್ಲದೆ ಇರುವುದು ಖುಷಿ ಕೊಡುತ್ತದೆ. ಶುರುವಿನಿಂದ ಕೊನೆವರೆಗೂ ನಾಯಕ ಯೋಗಿ ಕತ್ತಿಗೆ ಬೆಲ್ಟ್ ಹಾಕಿಕೊಂಂಡು ‘ಸ್ವಾಮಿ ಪಾದಂ ದೈವ ಪಾದಂ ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಗುನುಗಿಸುತ್ತಲೇ ಇರುತ್ತಾರೆ. ಇದರಿಂದ ಎರಡರ್ಥದ ಡೈಲಾಗ್‌ಗೆ ಅವಕಾಶ ಸಿಕ್ಕಿಲ್ಲ ಎಂದರೆ ತಪ್ಪಾಗಲಾರದರು. ಒಬ್ಬ ಸಾಮಾನ್ಯ ಹುಡುಗನ ಅಸಾಮಾನ್ಯ ಪಯಣದ ಕಥೆ ಎನ್ನಬಹುದು. ಮಾನವೀಯತಯೇ ಜೀವಾಳ. ಹೆಣ್ಣು ಮಕ್ಕಳನ್ನು ಭಕ್ತಿಗೆ ಕರೆದುಕೊಂಡು ಹೋಗುವ ಭಾವುಕ ಸನ್ನಿವೇಶಗಳು ಇರಲಿದೆ. ನಿರ್ದೇಶಕರ ಸ್ಟೈಲಿಶ್ ....

369

Read More...

Raju James Bond.Reviews

Friday, February 14, 2025

ಕಾಸಿನ ಹಿಂದೆ ಹೋಗುವ ಜೇಮ್ಸ್ ಬಾಂಡ್****        ಕಾಸು ಇದ್ದರೆ ಜೀವನ ಪೂರ್ತಿ ಸುಖವಾಗಿ ಇರಬಹುದು ಅಂದುಕೊಂಡ ವ್ಯಕ್ತಿಯೊಬ್ಬ ಇರುತ್ತಾನೆ. ಮತ್ತೊಂದು ಕಡೆ ಶಾಸಕ ಬ್ಯಾಂಕಿನಲ್ಲಿ ಇಟ್ಟಿದ್ದ ೨೫ ಕೋಟಿ ದರೋಡೆಯಾಗುತ್ತದೆ. ಅದಕ್ಕೆ ಕಾರಣ ಯಾರು? ಯಾಕೆ ದುಡ್ಡು ಕದ್ದಿರುತ್ತಾರೆ. ಶಾಸಕನಿಗೆ ಮತ್ತೆ ಹಣ ಸಿಗುತ್ತಾ? ಕಳ್ಳತನವಾದ ದುಡ್ಡು ಏನಾಗುತ್ತೆ?  ಏನಾದರೂ ಮಾಡಬೇಕಾದರೆ ಅದು ಒಳ್ಳೆಯದು, ಕೆಟ್ಟದು. ಅವರವರ ಭಕುತಿಗೆ ಬಿಟ್ಟದ್ದು. ಒಮ್ಮೊಮ್ಮೆ ಕೆಟ್ಟ ಕೆಲಸವು ನಗಣ್ಯ ಎಂಬುದಕ್ಕೆ ಉದಾಹರಣೆ  ‘ರಾಜು ಜೇಮ್ಸ್ ಬಾಂಡ್’ ಚಿತ್ರ ಆಗಿರುತ್ತದೆ. ‘ಫಸ್ಟ್ ರ‍್ಯಾಂಕ್ ರಾಜು’ ‘ರಾಜು ಕನ್ನಡ ಮೀಡಿಯಂ’ ಚಿತ್ರಗಳಲ್ಲಿ ....

382

Read More...

Mr.Rani.Film Reviews

Friday, February 07, 2025

  ನಕ್ಕು ನಲಿಸುವ ಮಿಸ್ಟರ್ ರಾಣಿ!   ಚಿತ್ರ: ಮಿಸ್ಟರ್ ರಾಣಿ ನಿರ್ದೇಶನ: ಮಧು ಚಂದ್ರ ತಾರಾಗಣ: ದೀಪಕ್ ಸುಬ್ರಹ್ಮಣ್ಯ, ಪಾರ್ವತಿ ನಾಯರ್ ಮೊದಲಾದವರು.   ತಂದೆಯ ಒತ್ತಡದಿಂದಾಗಿ  ಇಂಜಿನಿಯರ್‌ ಆಗುವ, ಹುಟ್ಟು ಕಲಾವಿದ ಏನೆಲ್ಲ‌ ಮಾಡಬಹುದು ಎನ್ನುವುದನ್ನು ರಸವತ್ತಾಗಿ ತೋರಿಸಿರುವ ಸಿನಿಮಾ‌ ಇದು. ಕಾಲೇಜ್ ಸ್ಕಿಟ್ ನಲ್ಲಿ ನಟಿಯಾಗಿ ಗಮನ ಸೆಳೆದ ನಟ, ಮುಂದೆ ನಟಿಯಾಗಿತೇ ವೇಷ ಮರೆಸಿಕೊಂಡು ಜೀವನ ನಡೆಸಿದರೆ ಹೇಗಿರಬಹುದು? ಇಂಥದೊಂದು ನಂಬಲು ಅಸಾಧ್ಯವೆನಿಸುವ ಕತೆಯನ್ನು ನಗುನಗುತ್ತಾ ನೋಡುವಂತೆ ರಸವತ್ತಾಗಿ ನೀಡಿದ್ದಾರೆ ನಿರ್ದೇಶಕ ಮಧುಚಂದ್ರ.   ಚಿತ್ರದಲ್ಲಿ ನಾಯಕ ಮಾತ್ರವಲ್ಲ ನಿಜಕ್ಕೂ ನಾಯಕಿಯಾಗಿಯೂ ಗಮನ ಸೆಳೆಯುವವರು ದೀಪಕ್‌ ....

324

Read More...

Talvar.Film Reviews

Friday, February 07, 2025

ತಲ್ವಾರ್ ನಲಿವು ನೋವು****       ಅರಿವಿಲ್ಲದೆ ರೌಡಿಸಂ ಇಳಿದರೆ ಏನೇನು ಆಗುತ್ತದೆ ಎಂಬುದನ್ನು ‘ತಲ್ವಾರ್’ ಚಿತ್ರದಲ್ಲಿ ಹೇಳಲಾಗಿದೆ. ಸತ್ಯ (ಧರ್ಮಕೀರ್ತಿರಾಜ್)ನಿಗೆ ತಲ್ವಾರ್ ಎಂಬ ಅಡ್ಡ ಹೆಸರು ಇರುತ್ತದೆ. ಚಿಕ್ಕವನಾಗಿದ್ದಾಗಲೇ ಅಮ್ಮನನ್ನು ಕಳೆದುಕೊಂಡು ರೌಡಿ ಲೋಕದ ಭಾಯ್ ಜತೆ ಸೇರಿಕೊಳ್ಳುತ್ತಾನೆ. ಒಂದು ಕಾರಣಕ್ಕೆ ತಲ್ವಾರ್ ಹಿಡಿದು, ಮುಂದೆ ಅದೇ ಕಾಯಕವಾಗುತ್ತದೆ. ಇದರ ಮಧ್ಯೆ ಪ್ರೀತಿಯಲ್ಲಿ ಬೀಳುತ್ತಾನೆ. ಇಲ್ಲಿಂದ ಅನೇಕ ತೊಂದರೆಗಳು ಎದುರಾಗುತ್ತವೆ. ನೀ ಬಿಟ್ಟರೂ ನಾ ಬಿಡೆ ಎನ್ನುವ ಹಳೇ ಗ್ಯಾಂಗ್‌ಸ್ಟರ್‌ಗಳು. ಅಷ್ಟಕ್ಕೂ ಈತನ ಹಿಂದೆ ಬೀಳಲು ಕಾರಣವೇನು? ಪ್ರಿಯತಮೆ ಕೊನೆಗೂ ದಕ್ಕುತ್ತಾಳಾ? ಇವೆಲ್ಲಾವನ್ನು ಮಾಸ್ ....

320

Read More...

Unlock Raghave.Reviews

Friday, February 07, 2025

ಅನ್‌ಲಾಕ್ ನಡುವಿನ ಫಜೀತಿಗಳು****       ರಾಘವ್ (ಮಿಲಂದ್) ಖತರ್‌ನಾಕ್ ಬುದ್ದಿವಂತ. ಮನೆ, ಕಾರು, ಬೈಕು ಹೀಗೆ ಯಾವುದೇ ಬೀಗವನ್ನು ಬಾಳೆಹಣ್ಣು ಸುಲಿದಂತೆ ತೆಗೆಯುತ್ತಾನೆ. ಅವನು ಚಿಕ್ಕಂದಿನಿಂದಲೂ ಜಾನಕಿ (ರೆಚಲ್)ಯನ್ನು ಪ್ರೀತಿಸುತ್ತಿರುತ್ತಾನೆ. ಅವಳಿಗೂ ಅವನೆಂದರೆ ತುಂಬ ಇಷ್ಟ.  ಆದರೆ ಊಹಿಸಲಾಗದ ಸಂದಿಗ್ದ ಸ್ಥಿತಿಯಲ್ಲಿ ಇಬ್ಬರೂ ದೂರವಾಗುತ್ತಾರೆ. ಅವಳ ನೆನಪಿನಲ್ಲೆ ಅನ್‌ಲಾಕ್ ಮಾಡುವುದೇ ಬದುಕು ಅಂದುಕೊಂಡು, ಆಕೆಯ ಹೆಸರಿನಲ್ಲಿ ಯೂನಿವರ್ಸಿಟಿಯನ್ನು ಶುರು ಮಾಡಿರುತ್ತಾನೆ. ಜತೆಗೆ ಅವಳ ಹುಡುಕಾಟವನ್ನು ನಿಲ್ಲಿಸಿರುವುದಿಲ್ಲ. ಅದೇ ಸಂದರ್ಭದಲ್ಲಿ ೧೧೦೦ನೇ ಶತಮಾನದಲ್ಲಿ ಕೋಟೆನಾಡಿನ ಹೊಲದಲ್ಲಿ ....

318

Read More...

Kaadumale.Reviews

Friday, January 31, 2025

ಭ್ರಮೆ ಮತ್ತು ವಾಸ್ತವ ಸಾರುವ ಕಾಡುಮಳೆ****       ವಿಶ್ವದಲ್ಲಿ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಅವೆಲ್ಲವು ಬಗೆಹರಿಯದೇ ಹಾಗೆಯೇ ಉಳಿದಿರುತ್ತದೆ. ಅಂತಹ ರಹಸ್ಯದ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನವನ್ನು ‘ಕಾಡು ಮಳೆ’ ಚಿತ್ರದಲ್ಲಿ ಹೇಳಿದ್ದಾರೆ. ಲವ್ ಕೈಕೊಟ್ಟ ಎಂಬ ಕಾರಣಕ್ಕೆ ಅವಳು ಆತ್ನಹತ್ಯೆ ಮಾಡಿಕೊಳ್ಳಲು ಕಾಡಿಗೆ ಬರುತ್ತಾಳೆ. ಸೇತುವೆಯಿಂದ ಹಾರಿದರೂ ಬದುಕುಳಿಯುತ್ತಾಳೆ.  ಮುಂದೆ ತನ್ನ ತರಹವೇ ಇರುವ ಮತ್ತೋಬ್ಬಳು ಎದುರಾಗುತ್ತಾಳೆ. ದಾರಿ ಕಾಣದೆ ಒದ್ದಾಡುತ್ತಿರುವ ಅವಳಿಗೆ ರಿಚರ್ಡ್ ಥಾಮ್ಯನ್ ಎಂಬ ನಿಗೂಡ ಮನುಷ್ಯ ಸಿಗುತ್ತಾನೆ. ಅವನು ಇಬ್ಬರಂತೆ ಅರಣ್ಯದಲ್ಲಿ ಸಿಕ್ಕಿ ....

310

Read More...

Beguru Colony.Reviews

Friday, January 31, 2025

ಆಟದ ಮೈದಾನ ಉಳಿಸಿಕೊಳ್ಳಲು ಹೋರಾಡುವ ಕಥನ****        ‘ಬೇಗೂರು ಕಾಲೋನಿ’ ಚಿತ್ರದ ಕಥೆಯು ಮಕ್ಕಳ ಆಟದ ಮೈದಾನ ಉಳಿಸಿಕೊಳ್ಳಲು ಯುವಕರಿಬ್ಬರು ಹೋರಾಡುವ ಅಂಶಗಳನ್ನು ಒಳಗೊಂಡಿದೆ. ಅಲ್ಲದೆ ನಾಡಿನ ಸಮಸ್ತ ಮಕ್ಕಳ ಒಳಿತಿಗಾಗಿ, ಅವರ ಅರೋಗ್ಯಕರ ಜೀವನಶೈಲಿಗಾಗಿ ನಡೆಸುವ ಯುದ್ದ ಎನ್ನಬಹುದು. ಶ್ರೀಮಂತರ ಮಕ್ಕಳಿಗೆ ಜಾಗ ಸಿಗುತ್ತದೆ. ಅದೇ ಬಡವರ ಮಕ್ಕಳು ಎಲ್ಲಿಗೆ ಹೋಗಬೇಕು. ಅವರಿಗೆ ಆಯಾ ಪ್ರದೇಶದಲ್ಲಿ ಮೀಸಲಿಟ್ಟ ಮೈದಾನಗಳು ಇದ್ದರೂ, ಪಟ್ಟ ಭದ್ರಾ ಹಿತಾಶಕ್ತಿಗಳಿಂದ ಪ್ರಭಾವಿಶಾಲಿಗಳ ಕೈವಶವಾಗುತ್ತಿದೆ. ಅದೇ ಜಾಗದಲ್ಲಿ ಮಾಲ್, ಅಪಾರ್ಟ್‌ಮೆಂಟ್ ತಲೆ ಎತ್ತುತ್ತಿದೆ. ಹೀಗೆ ಕಣ್ಮರೆಯಾಗುತ್ತಿರುವ ಸ್ಥಳವನ್ನು ....

274

Read More...

Gana.Film Reviews

Friday, January 31, 2025

  ಗಣ ಎಂಬ ಟೈಮ್ ಟ್ರಾವೆಲಿಂಗ್ ಸ್ಟೋರಿ   ಚಿತ್ರ : ಗಣ ನಿರ್ಮಾಣ: ಪಾರ್ಥು ನಿರ್ದೇಶನ: ಹರಿಪ್ರಸಾದ್ ಜಕ್ಕ ತಾರಾಗಣ: ಪ್ರಜ್ವಲ್ ದೇವರಾಜ್, ಯಶ ಶಿವಕುಮಾರ, ವೇದಿಕಾ, ರವಿಕಾಳೆ, ರಮೇಶ್ ಭಟ್  ಇತರರು.     ಈ ಸಿನಿಮಾ ಆರಂಭದಲ್ಲಿ ಎತ್ತ ಸಾಗುತ್ತೆ, ಏನು ನಡೆಯುತ್ತೆ ಅನ್ನುವುದಕ್ಕೆ ಸ್ವಲ್ಪ ತಾಳ್ಮೆ ಬೇಕು. ಸಿನಿಮಾದಲ್ಲಿ ಎರಡು ಕಾಲಘಟ್ಟದ ಕಥೆ ಇದೆ. ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡರೆ ಮಾತ್ರ ಈ ಸಿನಿಮಾದ  ಗುಣವಿಶೇಷತೆಗಳು ಅರ್ಥ ಆಗುತ್ತವೆ.   ಈ ಚಿತ್ರ ನೋಡುಗರಿಗೆ  ರಿಸ್ಕೀ ಟಾಸ್ಕ್ ಇದ್ದಂತೆ. ಸೂಕ್ಷ್ಮವಾಗಿ ಗಮನಿಸಿದವರಿಗೆ ಮಾತ್ರ ಗಣ ಅರ್ಥವಾಗುತ್ತಾನೆ.   ಇದೊಂದು ಟೈಮ್ ಟ್ರಾವೆಲಿಂಗ್ ಕಥೆ.  ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ....

297

Read More...

Paru Parvathy.Reviews

Friday, January 31, 2025

  ಪಾರು ಪಾರ್ವತಿಯ ಜೀವನ ಪ್ರಯಾಣ   ಚಿತ್ರ: ಪಾರು ಪಾರ್ವತಿ ನಿರ್ಮಾಣ: ಪಿ ಬಿ ಪ್ರೇಮನಾಥ್  ನಿರ್ಮಾಣ ನಿರ್ದೇಶನ: ರೋಹಿತ್ ಕೀರ್ತಿ  ನಟನೆ: ದೀಪಿಕಾ ದಾಸ್, ಪೂನಂ ಸರ್ ನಾಯಕ್   ಪಾರುಪಾರ್ವತಿ ಎನ್ನುವ ಈ ಸಿನಿಮಾದ ಟೈಟಲ್ ರೋಲ್ ನಲ್ಲಿ 60ವರ್ಷದ ಮಹಿಳೆ ಕಾಣಿಸಿದ್ದಾರೆ. ಇದೇ ಈ ಚಿತ್ರದ ಮೊದಲ ವಿಶೇಷತೆ ಎನ್ನಬಹುದು.   ಪಾರ್ವತಿ 62 ವರ್ಷದ ಮಹಿಳೆ. ಈಕೆಗೆ ಪತಿ, ಮಕ್ಕಳು ಇದ್ದರೂ ಮನೆಯಲ್ಲಿ ಒಂಟಿ. ಪತಿ ಮಿಲಿಟರಿ ಉದ್ಯೋಗದಲ್ಲಿ ಉತ್ತ ಭಾರತ ಸೇರಿಕೊಂಡಾತ ದೂರವಾಗಿಯೇ ಇದ್ದಾನೆ. ಮಕ್ಕಳು ಫೋನ್ ಮೂಲಕ ಯೋಗಕ್ಷೇಮ ವಿಚಾರಿಸುವುದಷ್ಟೇ. ಹೀಗೆ ಮನೆಯಲ್ಲಿ ಒಂಟಿಯಾಗಿ ಕುಳಿತು ಬೇಸರ ಮೂಡಿಸಿಕೊಂಡ ಪಾರ್ವತಿ ಗಂಡನಿರುವ ಜಾಗಕ್ಕೆ ಖುದ್ದಾಗಿ ಹೊರಡಲು ಬಯಸುತ್ತಾಳೆ.‌ ಈ ....

298

Read More...

Forest.Film Reviews

Friday, January 24, 2025

ಕಾಡಿನಲ್ಲಿ ಚೆಲ್ಲಾಟ, ಹುಡುಕಾಟ, ಪರದಾಟ****        ‘ಫಾರೆಸ್ಟ್’ ಚಿತ್ರದ ಹೆಸರೇ ಹೇಳುವಂತೆ ಇದೊಂದು ಕಾಡಿನಲ್ಲಿ ನಡೆಯುವ ಕಥೆಯಾಗಿದೆ. ಅಲ್ಲೋಂದು ನಿಧಿ ಅಂತ ತಿಳಿದ ಮೂರು ಹುಡುಗರು ಮತ್ತು ಒಬ್ಬ ಹುಡುಗಿ ಸೇರಿದಂತೆ ನಾಲ್ವರ ತಂಡವೊಂದು ಅದನ್ನು ಶೋಧಿಸುವ ಕಾರ್ಯಕ್ಕೆ ಮುಂದಾದಾಗ ನಡೆಯುವ ಆನಂತರ ಅವಾಂತರಗಳೇ ಹೈಲೈಟ್ ಆಗಿದೆ. ನೋಡುಗರಿಗೆ ಪ್ರತಿಯೊಂದು ಸನ್ನಿವೇಶಗಳು, ದೃಶ್ಯಗಳು ಕಾತುರತೆ ತರಿಸುತ್ತವೆ. ಒಬ್ಬನು ಮೂಗ. ಹಾಗಾಗಿ ಅವನಿಗೆ ಯಾವ ಕೆಲಸಕ್ಕೆ ಹೋಗುತ್ತಿದ್ದೇವೆಂದು ತಿಳಿಯದ ಮೂಡ. ಈತನ ಮಾತುಗಳು ನಗುವನ್ನು ತರಿಸುತ್ತಾ ಹೋಗುತ್ತದೆ. ಅರಣ್ಯದಲ್ಲಿ ಯಾವುದೇ ಪ್ರಾಣಿಗಳಿಂದ ತೊಂದರೆ ....

225

Read More...

Rudra Garuda Purana.Reviews

Friday, January 24, 2025

ನಮ್ಮಗಳ ಸುತ್ತ ನಡೆಯುವ ರೋಚಕತೆಗಳು         ರುದ್ರ ಹೆಸರಿನ ಖಡಕ್ ಪೋಲೀಸ್ ಅಧಿಕಾರಿಯ ಪ್ರಾಮಾಣಿಕತೆ ಸೀಣಿಯರ್ ಆಫೀಸರ‍್ಸ್‌ಗಳಿಗೆ ಪೀಕಲಾಟವಾಗುತ್ತಿರುತ್ತದೆ. ಎಲ್ಲೇ ವರ್ಗ ಮಾಡಿದರೂ ಅಲ್ಲಿಯೂ ನಿಷ್ಠೆ ತೋರಿಸುತ್ತಾನೆ. ಈತನ ಹೆಗಲಿಗೆ ಅಪಹರಣ ಪ್ರಕರಣದ ಕೇಸು ಬರುತ್ತದೆ. ಅದರ ತನಿಖೆ ನಡೆಸುವಾಗ ಒಂದೊಂದೆ ರೋಚಕ, ರೋಮಾಂಚನ ಘಟನೆಗಳು ತೆರೆದುಕೊಳ್ಳುತ್ತದೆ. ನ್ಯೂಯಾರ್ಕ್ ಸಿಟಿಯಿಂದ ಮಿಯಾನ್‌ಗೆ ಹೊರಟಿದ್ದ ವಿಮಾನವೊಂದು ಮಿಸ್ ಆಗಿ ಸಣ್ಣದೊಂದು ಸಿಳಿವು ಸಿಕ್ಕಿರುವುದಿಲ್ಲ. ಮೂವತ್ತು ವರ್ಷಗಳ ನಂತರ ಅದೇ ವಿಮಾನ ವಾಪಸ್ ಬರುತ್ತದೆ. ಅದು ಹೇಗೆ? ಹಾಗೂ ಒಬ್ಬ ರಾಜ ಭೂಮಂಡಲವನ್ನೇ ಗೆಲ್ಲಬೇಕು ಎಂಬ ಆಸೆಯಿಂದ ತನ್ನ ಪಕ್ಕದ ದೇಶದ ....

209

Read More...

Sanju weds Geetha 2.Reviews

Friday, January 17, 2025

ಪ್ರೀತಿ ಮತ್ತು ನೇಕಾರರ ಬದುಕು, ಬವಣೆ

        ನಿರ್ದೇಶಕ ನಾಗಶೇಖರ್ ‘ಸಂಜು ವೆಡ್ಸ್ ಗೀತಾ-೨’ ಚಿತ್ರದಲ್ಲಿ ಪ್ರೀತಿಯ ಜತೆಗೆ ಹೊಸ ವಿಷಯ ನೇಕಾರರ ಬದುಕಿನ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ರಮ್ಯಾ ಜಾಗಕ್ಕೆ ರಚಿತಾರಾಮ್ ಬಂದಿದ್ದಾರೆ. ಪಾತ್ರಗಳು ಹೊಸದು ಆಗಿದ್ದರೂ ಎಂದಿನಂತೆ ಪ್ರೀತಿಯ ನೋವು, ಪ್ರೀತಿಸುವವರ ಕಷ್ಟಗಳು ನೋಡುಗನ ಮನಸ್ಸನ್ನು ನಾಟುತ್ತದೆ. ಅಗರ್ಭ  ಶ್ರೀಮಂತನ ಮಗಳಿಗೆ ಶಿಡ್ಲಘಟ್ಟದ ರೇಷ್ಮೆ ಸೀರೆ ನೇಕಾರ ಮಾಡುವವನ ಮೇಲೆ ಬೀಳುತ್ತದೆ. ಅಪ್ಪನ ವಿರೋಧದ ನಡೆವೆಯೂ ಎಲ್ಲವನ್ನು ಧಿಕ್ಕರಿಸಿದಾಗ ಇಬ್ಬರಿಗೂ ಅವಮಾನಿಸಿ ಮನೆಯಿಂದ ಹೊರಹಾಕುತ್ತಾನೆ. 

231

Read More...

Choo Mantar.Reviews

Friday, January 10, 2025

 ಛೂ ಮಂತರ್ ಊಹಿಸದ ತಿರುವುಗಳು****         ‘ಕರ್ವ’ ‘ಬಕಾಸುರ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನವನೀತ್ ಮೂರನೆ ಸಿನಿಮಾ ‘ಛೂ ಮಂತರ್’ ಹಾರರ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ವಿದೇಶದಲ್ಲಿರುವ ನೈನತಾಲ್‌ನ ಬ್ರಿಟಿಷರ ದೊಡ್ಡ ಬಂಗಲೆಯಲ್ಲಿ ದೆವ್ವದ ಕಾಟ ಇರುತ್ತದೆ. ಅದನ್ನು ಹೋಗಲಾಡಿಸಲು ಅತೀಂದ್ರಿಯ ಶಕ್ತಿಗಳನ್ನು ಮಟ್ಟಹಾಕುವಲ್ಲಿ ಹೆಸರು ಮಾಡಿರುವ ಬೆಂಗಳೂರಿನ ಡೈನಮೋ (ಶರಣ್) ತನ್ನ ತಂಡದೊಂದಿಗೆ ಅಲ್ಲಿಗೆ ಹೋಗುತ್ತಾನೆ.  ಅಂತೆಯೇ ಪ್ರೇತ ಬಿಡುಸುತ್ತಾನೆ. ಇಲ್ಲಿಗೆ ಶುಭಂ ಬಂತು ಅಂದರೆ, ನಿರ್ದೇಶಕರು ಅಷ್ಟು ಸುಲಭಕ್ಕೆ ಸಿನಿಮಾ ಮುಗಿಸದೆ ತಿರುವುಗಳ ಮೇಲೆ ತಿರುವುಗಳನ್ನು ಕೊಡುತ್ತಾ ....

261

Read More...

Guns and Roses.Reviews

Friday, January 03, 2025

ರೌಡಿಸಂ ಹಾಗೂ ಪ್ರೀತಿ ಸುತ್ತ ಸಂಘರ್ಷಗಳು****        ‘ಗನ್ಸ್ ಅಂಡ್ ರೋಸಸ್’ ಚಿತ್ರವು ರೌಡಿಸಂ ಮತ್ತು ಪ್ರೀತಿನ ನಡುವಿನ ಕಥೆಯನ್ನು ಹೇಳಹೊರಟಿದೆ. ‘ಓಂ’ ನಂತರ ಇಂತಹ ಕಥೆಗಳು ಸಾಕಷ್ಟು ಬಂದು ಹೋಗಿವೆ. ಆ ಸಾಲಿಗೆ ಇದು ಸೇರ್ಪಡೆಯಾಗುತ್ತದೆ. ಆದರೆ ಇದರಲ್ಲಿ ಇನ್ನುಷ್ಟು ವಿಷಯಗಳನ್ನು ತೋರಿಸಿದ್ದಾರೆ. ಡ್ರಗ್ಸ್ ಜಾಲ, ಇಬ್ಬರು ಪಂಟರ್‌ಗಳ ನಡುವಿನ ದ್ವೇಷ. ಪೋಲೀಸರ ಹತಾಶೆ. ಇದೆಲ್ಲದರ ಮಧ್ಯೆ ನವಿರಾದ ಲವ್ ಸ್ಟೋರಿ ಇದೆ. ರಾಜೇಂದ್ರ ಮತ್ತು ನಾಯಕ್ ಇಬ್ಬರು ರೌಡಿಗಳ ಸ್ನೇಹ, ಕಲಹದಿಂದ ಚಿತ್ರವು ಶುರುವಾಗುತ್ತದೆ. ಬೆಂಗಳೂರಿನಲ್ಲಿ ತನ್ನದೆ ಸಾಮ್ರಾಜ್ಯ ನಡೆಯಬೇಕೆಂಬುದು ಅವರ ಬಯಕೆಯಾಗಿರುತ್ತದೆ. ಮುಂದೆ ....

244

Read More...

MAX.Film Reviews

Wednesday, December 25, 2024

ಮ್ಯಾಕ್ಸ್ ಮ್ಯಾಕ್ಸಿಮಮ್ ಮನರಂಜನೆ****        ಎರಡು ವರ್ಷಗಳ ನಂತರ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಒಂದು ರಾತ್ರಿಯಲ್ಲಿ ನಡೆಯುವ ಆಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಇದರಲ್ಲಿ ರಾಜಕೀಯ ಜಿದ್ದಾಜಿದ್ದಿ, ಮಾಫಿಯಾ ವ್ಯಾಪಿಸಿದೆ. ಅನ್ಯಾಯಕ್ಕೆ ಕೊನೆಯೇ ಇಲ್ಲ. ಒಳ್ಳೆಯವರಿಗೆ ಒಳ್ಳೆಯ ಕಾಲ ಬರುವುದಿಲ್ಲ. ಅಂತಹ ಸಮಯದಲ್ಲಿ ಅದೇ ವ್ಯಾಪ್ತಿಗೆ ಬರುವ ಖಡಕ್ ಪೋಲೀಸ್ ಅಧಿಕಾರಿ ಅರ್ಜುನ್ ಮಹಾಕ್ಷಯ್ ಉರುಫ್ ಮ್ಯಾಕ್ಸ್ ಡ್ಯೂಟಿಗೆ ಹಾಜರಾಗುತ್ತಾರೆ. ಇವರ ಪ್ರಾಮಾಣಿಕತೆಯೇ ಸ್ಟೇಷನ್‌ನಿಂದ ಸ್ಟೇಷನ್‌ಗೆ ವರ್ಗಾವಣೆ ಆಗೋದು, ಅಮಾನತು ಗೊಳ್ಳೋದು ಆಗಿಬಿಟ್ಟಿರುತ್ತದೆ. ಹೀಗೆ ಅಮಾನತು ಅವಧಿ ಮುಗಿಸಿಕೊಂಡು ಇಲ್ಲಿಗೆ ....

265

Read More...

UI Film Reviews

Friday, December 20, 2024

ಉಪ್ಪಿ ಸಿನಿಮಾ ನೋಡುಗರ ಭಾವಕ್ಕೆ ನೋಡುಗರ ಚಿಂತನೆಗೆ****        ಉಪೇಂದ್ರ ‘ಎ’ ‘ಉಪೇಂದ್ರ’ ಮತ್ತು ‘ಉಪ್ಪಿ-೨’ ಚಿತ್ರದಿಂದಲೂ ಬೇರೆ ರೀತಿಯ ಕಂಟೆಂಟ್‌ಗಳನ್ನು ಪ್ರೇಕ್ಷಕರಿಗೆ ಕೊಡುತ್ತಾ ಬಂದಿರುವುದರಿಂದ ಅವರನ್ನು ರಿಯಲ್ ಸ್ಟಾರ್ ಅಂತ ಕರೆಯುತ್ತಿದ್ದರು. ಅದರಂತೆ ‘ಯುಐ’ ಚಿತ್ರದಲ್ಲಿ ಅದನ್ನೇ ....

265

Read More...

Gumti.Reviews

Friday, December 06, 2024

  ಕಲಾತ್ಮಕ ಕನ್ನಡಿಯೊಳಗೆ ‘ಗುಂಮ್ಟಿ’ಯ ಭಾವನಾತ್ಮಕ ಚೌಕಟ್ಟು!   ಚಿತ್ರ: ಗುಂಮ್ಟಿ ನಿರ್ಮಾಣ: ವಿಕಾಸ್ ಎಸ್. ಶೆಟ್ಟಿ ನಿರ್ದೇಶನ: ಸಂದೇಶ ಶೆಟ್ಟಿ ಆಜ್ರಿ ತಾರಾಗಣ: ಸಂದೇಶ ಶೆಟ್ಟಿ ಆಜ್ರಿ, ವೈಷ್ಣವಿ ನಾಡಿಗ್, ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು. ————- ಆತ ಕರ್ನಾಟಕದ ದಕ್ಷಿಣ ಕರಾವಳಿಯ ಕುಡುಬಿ ಸಮುದಾಯದ ಯುವಕ ಕಾಶಿ. ಕುಡುಬಿ ಸಮುದಾಯದಕ್ಕೆ ಹಿರಿಯರಾಗಿರುವ ಕಾಶಿಯ ತಂದೆಗೆ ತಮ್ಮ ಸಮುದಾಯದಲ್ಲಿ ತಲೆಮಾರುಗಳಿಂದ ನಡೆಸಿಕೊಂಡು ಬಂದಿರುವ ‘ಗುಂಮ್ಟಿ’ ಎಂಬ ಸಾಂಸ್ಕೃತಿಕ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂಬ ....

280

Read More...

Dheera Bhagath Roy.Reviews

Friday, December 06, 2024

ಶೋಷಿತರ ದನಿಯಾದ ಭಗತ್‌ರಾಯ್****        ಗತಕಾಲದಿಂದಲೂ ಬಡವ, ಶ್ರೀಮಂತರ ನಡುವೆ ಘರ್ಷಣೆ ನಡೆಯುತ್ತಲೇ ಇದೆ.  ೧೯೭೦ರ ದಶಕದಲ್ಲಿ ಭೂಮಿ ಸುಧಾರಣೆ ಕಾಯ್ದೆ ಜಾರಿಗೆ ಬರುತ್ತದೆ. ಉಳುವವನೇ  ಭೂಮಿಯ ಒಡೆಯ ಎಂಬ ಸರ್ಕಾರದ ಸುತ್ತೋಲೆಯಿಂದ, ಹಿಂದುಳಿದವರು ತಮ್ಮ ಹಕ್ಕು, ನ್ಯಾಯಕ್ಕಾಗಿ ಕಾನೂನಾತ್ಮಕವಾಗಿ ಹೋರಾಟ ನಡೆಸಿದ ಅಂಶಗಳನ್ನು ಬಳಸಿಕೊಂಡು ‘ಧೀರ ಭಗತ್‌ರಾಯ್’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ನರಗುಂದದಲ್ಲಿ ಒಂದಷ್ಟು ರೈತರಿಗೆ ಭೂಮಿ ಸಿಗುತ್ತದೆ. ಆದರೆ ಅಲ್ಲಿನ ಭೂಮಾಲೀಕ ಜನರಿಗೆ ಸರಿಯಾಗಿ ಸವಲತ್ತು ಸಿಗದಂತೆ ಮಾಡಿ ಜಮೀನನ್ನು ಕಬ್ಜ ಮಾಡಿರುತ್ತಾನೆ. ಅದನ್ನು ನಾಯಕನಾದವನು ಹೇಗೆ ಹೋರಾಡುತ್ತಾನೆ. ....

620

Read More...

Naa Ninna Bidalare.Reviews

Friday, November 29, 2024

 

ದೆವ್ವದ ಸೇಡಿನ ಕಥನ****

      ‘ನಾ ನಿನ್ನ ಬಿಡಲಾರೆ’ ಚಿತ್ರದ ಹೆಸರೇ ಹೇಳುವಂತೆ ಸೇಡಿನ ಕಥೆಯಾಗಿದೆ. ದೇವರು, ದೆವ್ವ ಮತ್ತು ಮನುಷ್ಯನ ಮಧ್ಯೆ ಇರುವ ಸತ್ಯಾಸತ್ಯತೆಗಳನ್ನು ಹೇಳಲಿದೆ. ಇವೆಲ್ಲಾವನ್ನು ಮೀರಿ ವಿನೂತನದ ವಿಷಯಗಳು ಇದೆ. ವಿರಾಮದ ತನಕ ರೋಚಕ ಸನ್ನಿವೇಶಗಳು ಇರಲಿದ್ದು, ನಂತರ ನೋಡುಗರಿಗೆ ಕುತೂಹಲ ಮೂಡಿಸುತ್ತದೆ. ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವು ಯಾವ ರೀತಿ ಮೂಡಿ ಬಂದಿದೆ ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು. ನಿರ್ದೇಶಕ ನವೀನ್.ಜಿ.ಎಸ್ ಹೂ ಪೋಣಿಸಿದಂತೆ ಸೀನ್‌ಗಳನ್ನು ಸೃಷ್ಟಿಸಿದ್ದಾರೆ. ಪ್ರಾರಂಭದಿಂದ ಕೊನೆವರೆಗೂ ಬೋರ್ ಅನಿಸದಂತೆ ಮಾಡಿರುವುದಕ್ಕೆ ಅವರ ಶ್ರಮ ಪರದೆ ಮೇಲೆ ಕಾಣಿಸುತ್ತದೆ.

293

Read More...

Prabhuthva.Reviews

Friday, November 22, 2024

ಪ್ರಜಾಪ್ರಭುತ್ವದ ಮೇಲೆ ಬೆಳಕು ಚೆಲ್ಲುವ ಪ್ರಭುತ್ವ ****           ‘ಪ್ರಭುತ್ವ’ ಚಿತ್ರದಲ್ಲಿ ಮತದಾನ ಎನ್ನುವುದು ಪವಿತ್ರವಾದುದು. ರಾಜಕಾರಣಿಗಳು ನೀಡುವ ಹಣ, ಒಡೆವೆಯ ಅಮಿಷಗಳಿಗೆ ಬಲಿಯಾಗಿ ಅದನ್ನು ಯಾವುದೇ ಕಾರಣಕ್ಕೂ ಮಾರಿಕೊಳ್ಳಬೇಡಿ ಎನ್ನುವ ಸಂದೇಶ ಇರಲಿದೆ. ಪ್ರಭುತ್ವ ಈಗ ಸತ್ತು ಹೋಗಿದೆ. ಪ್ರಜೆಗಳೇ ನಿಮ್ಮ ಮತಗಳನ್ನು ಉತ್ತಮ ಅಭ್ಯರ್ಥಿಗೆ ನೀಡಿ ಎಂದು ತೋರಿಸಲಾಗಿದೆ. ಭ್ರಷ್ಟಚಾರ, ಅಧಿಕಾರ ದುರುಪಯೋಗ, ಅನ್ಯಾಯ, ಅತ್ಯಾಚಾರ ಹೀಗೆ ನಾನಾ ಬಗೆಯ ದಬ್ಬಾಳಿಕೆಗಳ ನಡುವೆ ಸಾಮಾನ್ಯ ಪ್ರಜೆಗಿರುವ ದಾರಿಯೇನು?  ಸಮಾಜದ ವ್ಯವಸ್ಥೆಯಿಂದ ಬೇಸತ್ತು ನಿಯತ್ತಿಗೆ ಬೆಲೆ ಇಲ್ಲವೆಂದು ತಿಳಿದ ಬಿಸಿರಕ್ತದ ....

283

Read More...

Love Reddy.Reviews

Friday, November 22, 2024

ಕಾಡುವ ಪ್ರೇಮ ಕಥೆ****

        ಕಾಲಕಾಲಕ್ಕೆ ತಕ್ಕಂತೆ ಪ್ರೇಮ ಕಥೆಗಳು ಹುಟ್ಟಿಕೊಳ್ತವೆ. ಅದು ಚಿತ್ರರಂಗದಲ್ಲಿ ಇರುವ ಸದ್ಯದ ಪರಿಸ್ಥಿತಿಯಾಗಿದೆ. ಆ ಸಾಲಿಗೆ ಹೊಸಬರ ‘ಲವ್ ರೆಡ್ಡಿ’ ಸಿನಿಮಾವು ಸೇರ್ಪಡೆಯಾಗಿದೆ. ಹೊಸ ದಾರಿಯಲ್ಲಿ ಸಾಗುವ ಚಿತ್ರವು ನೋಡುಗರನ್ನು ಕಾಡುವುದು ಅಲ್ಲದೆ ಮನಸ್ಸನ್ನು ಕದಡಿಸುತ್ತಾ, ಮೌನಕ್ಕೆ ತಳ್ಳುತ್ತದೆ. ಬಾಗೇಪಲ್ಲಿಯ ನಾರಾಯಣರೆಡ್ಡಿ ಎನ್ನುವವರ ಜೀವನದಲ್ಲಿ ನಡೆದ ಸತ್ಯ ಘಟನೆಯನ್ನು ಚಿತ್ರರೂಪಕ್ಕೆ ತರಲಾಗಿದೆ

285

Read More...

Taarakeshwara.Reviews

Friday, November 15, 2024

ತಾರಕೇಶ್ವರನ ಸಂಹಾರ****        ಭಕ್ತಿ ಪ್ರಧಾನ ‘ತಾರಕೇಶ್ವರ’ ಚಿತ್ರವು ತಾರಕಾಸುರನ ಕುರಿತಾಗಿದೆ. ಶಿವಪುರಾಣದ ಕಥೆಯಲ್ಲಿ ತಾರಕಾಸುರ ಅಸುರ. ಆದರೂ ತಂದೆ ಕೊಂದವನ ಮೇಲೆ ಸೇಡು ತೀರಿಸಿಕೊಳ್ಳಲು ತಪ್ಪಸ್ಸು ಮಾಡಿ ತನಗೆ ಸಾವು ಬರಬಾರದೆಂದು ಬ್ರಹ್ಮನನ್ನು ಕೇಳಿಕೊಳ್ಳ್ಳುತ್ತಾನೆ. ಶಿವ-ಪಾರ್ವತಿಗೆ ಹುಟ್ಟಿದ ಮಗನಿಂದ ನಿನಗೆ ಸಾವು ಸಂಭವಿಸುತ್ತದೆಂದು ಹೇಳಿ ಬ್ರಹ್ಮನು ವರ ನೀಡಿರುತ್ತಾನೆ. ಇತ್ತ ಶಿವನು ತಪಸ್ಸಿಗೆ ಕುಳಿತುಕೊಂಡಿರುತ್ತಾನೆ. ಇದನ್ನು ಅರಿತ ಆತನು ಶಿವ ಎಂದಿಗೂ ಮದುವೆಯಾಗುವುದಿಲ್ಲೆವೆಂದು ಎಲ್ಲರಿಗೂ ತೊಂದರೆ ಕೊಡುತ್ತಿರುತ್ತಾನೆ. ಮತ್ತೋಂದು ಕಡೆ ಹಿಮವಂತನ ಮಗಳು ಪಾರ್ವತಿ ಶಿವನ ಪಾಲಿಕೆಯಾಗಿ, ಆತನನ್ನೇ ....

335

Read More...

Bhairathi Ranagal.Reviews

Friday, November 15, 2024

ಶೋಷಿತರಿಗೆ ಆಸರೆಯಾದ ಭೈರತಿ ರಣಗಲ್****       ‘ಮಫ್ತಿ’ ಸಿನಿಮಾ ನೋಡಿದವರಿಗೆ ‘ಭೃರತಿ ರಣಗಲ್’ ಹೆಸರು ಅಚ್ಚಳಿಯದೆ ಇರುತ್ತದೆ. ಅದನ್ನು ಯಶಸ್ವಿಯಾಗಿ ನಿಭಾಯಿಸಿರುವುದು ಓನ್ ಅಂಡ್ ಹೋನ್ಲಿ ಶಿವರಾಜ್‌ಕುಮಾರ್. ಇದೇ ಹೆಸರಿನಲ್ಲಿ ಬಂದ ಚಿತ್ರವು ಪ್ರೀಕ್ವೆಲ್ ಆಗಿ ಮೂಡಿ ಬಂದಿರುವುದು ವಿಶೇಷ. ರೋಣಾಪುರದ ಗ್ರಾಮದ ಮುಗ್ದ ಜನರಿಗೆ ಒಳ್ಳೆಯದು ಮಾಡಬೇಕೆಂದು ಪಣತೊಟ್ಟು, ಅಲ್ಲಿನ ವ್ಯವಸ್ಥೆಯ ವಿರುದ್ದ ಸಿಡಿದು ನಿಂತಾಗ ಹಾದಿಯಲ್ಲಿ ಏನೆಲ್ಲಾ ಅಡೆತಡೆಗಳು ಬರುತ್ತದೆ. ಅದನ್ನೆಲ್ಲಾವನ್ನು ಯಾವ ನಿಭಾಯಿಸಿ ಯಶಸ್ವಿಯಾಗುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಇದರಲ್ಲಿ ತಂಗಿಯ ಭಾವನೆಗಳ ಜತೆಗೆ ಬಡವರ ....

279

Read More...

Ugravathara.Reviews

Friday, November 01, 2024

  ಪೋಲೀಸ್ ಇದ್ದರೆ ಮಹಿಳೆಯರು ಸುರಕ್ಷಿತ****         ಪೋಲೀಸ್ ಅಂದರೆ ಭಯ ಪಡಬಾರದು. ಭಕ್ತಿ ಇರಬೇಕು. ದೇಶ ಅಂತ ಬಂದಾಗ ಎಲ್ಲರೂ ಯೋಧ ಆಗಬೇಕು. ಬೇಟೆಯಾಡೋ ಹುಲಿಗೆ ಬೌಂಡರಿ, ಬಾರ್ಡರ್ ಲೆಕ್ಕಕ್ಕೆ ಇಲ್ಲ. ಹೊಡಿತಾರದೆ ಅಷ್ಟೇ. ತಪ್ಪು ಮಾಡಿದವರಿಗೆ ದಂಡಂ ದಶಗುಣಂ. ಇಂತಹ ಮಾಸ್ ಡೈಲಾಗ್‌ಗಳು ’ಉಗ್ರಾವತಾರ’ ಚಿತ್ರದಲ್ಲಿ ತುಂಬಿಕೊಂಡಿದೆ. ಸಾಮಾಜಿಕ ಕಳಕಳಿ, ಹೆಣ್ಣಿಗೆ ಹೇಗೆ ಗೌರವ ಕೊಡಬೇಕು. ಅಮ್ಮ, ಅಕ್ಕ, ತಂಗಿಯನ್ನು ನೋಡುವಂತೆ, ಹೊರಗಡೆ ಅದೇ ರೀತಿಯಲ್ಲಿ ಕಾಣಬೇಕು. ಭಾರತದಲ್ಲಿ ಹೆಣ್ಣಮಕ್ಕಳ ಮೇಲೆ ಶೋಷಣೆ ನಡೆಯುತ್ತಲೆ ಇದೆ. ಸ್ವಯಂರಕ್ಷಣೆ, ಸುರಕ್ಷ ಆಪ್, ಪೋಲೀಸರಿಗೂ ಗೌರವ ಕೊಡಿ. ಅವರು ಸಮಾಜಕ್ಕೆ ರಕ್ಷಣೆ ಜತೆಗೆ ಸಹಾಯ ಮಾಡುತ್ತಾರೆ.  ಇವೆಲ್ಲವು ಸನ್ನಿವೇಶಗಳಲ್ಲಿ ....

274

Read More...

Bagheera.Reviews

Thursday, October 31, 2024

ಧರ್ಮ ಮತ್ತು ಅಧರ್ಮ ನಡುವಿನ ಬಘೀರ****        ಸಮಾಜದಲ್ಲಿ ಜನರಿಗೆ ತೊಂದರೆ ಆದರೆ ರಕ್ಷಣೆ ನೀಡಬೇಕಾದುದು ಪೋಲೀಸ್. ಆದರೆ ಕರ್ತವ್ಯ ನಿಭಾಯಿಸಲು ಹೋದಾಗ ಅಡೆತಡೆಗಳು ಬರುತ್ತವೆ. ಆಗ ಸಾರ್ವಜನಿಕರ ಹಿತ ಕಾಪಾಡಲು ಆತ ಬೇರೆ ಮಾರ್ಗ ಹುಡುಕಿಕೊಂಡು ಹೇಗೆ ಒಳಿತನ್ನು ಮಾಡುತ್ತಾನೆ ಎಂಬುದನ್ನು ‘ಬಘೀರ’ ಚಿತ್ರದಲ್ಲಿ ತೋರಿಸಲಾಗಿದೆ. ಪುಟ್ಟ ಹುಡುಗನೊಬ್ಬ ಒಳ್ಳೆಯದನ್ನು ಮಾಡಬೇಕೆಂದು ಕನಸು ಕಂಡಿರುತ್ತಾನೆ. ಮುಂದೆ ಅಮ್ಮ, ಅಪ್ಪನ ಸ್ಪೂರ್ತಿಯಿಂದ ಪೋಲೀಸ್ ಅಧಿಕಾರಿ ಆಗುತ್ತಾನೆ. ಸಹಾಯಕ ಆಯುಕ್ತನಾಗಿ ಮಂಗಳೂರು ಕಛೇರಿಗೆ ಬರುತ್ತಾನೆ. ಹಣದ ಸಹಾಯದಿಂದ ಇಲಾಖೆಯವರನ್ನೇ ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದ ....

291

Read More...

Yela Kunni.Reviews

Friday, October 25, 2024

ಸತ್ಯ ಸುಖ ಸುಳ್ಳು ಕಷ್ಟ****        ಸತ್ಯಹರಿಶ್ಚಂದ್ರ ಹೆಸರು ಇಟ್ಟುಕೊಂಡು ಬಾಯಿಬಿಟ್ಟರೆ ಸುಳ್ಳಿನ ಸರಮಾಲೆ. ಆತನಿಗೊಂದಿಷ್ಟು ಗೆಳೆಯರು. ಹಳ್ಳಿ ಸುತ್ತುತ್ತಾ ಜಾಲಿ ಜಾಲಿ ಎನ್ನುತ್ತಿದ್ದ ಅವನಿಗೆ ಅದೇ ಸುಳ್ಳು ಭಯ ತರಿಸುವಂತ ಘಟನೆಯೊಂದು ನಡೆಯುತ್ತದೆ. ಮುಂದೆ ಬಂಕ್ ಸೀನನಾಗಿ ನಿಜ ಹೇಳುತ್ತಿರುತ್ತಾನೆ. ಅಷ್ಟಕ್ಕೂ ಅಲ್ಲಿ ನಡೆದುದಾದರೂ ಏನು? ಅದನ್ನು ತಿಳಿಯಲು ‘ಯಲಾಕುನ್ನಿ’ ಚಿತ್ರ ನೋಡಬೇಕು.       ಕೋಮಲ್‌ಕುಮಾರ್ ಎಂದರೆ ಅಲ್ಲಿ ನಗು ಇದ್ದೆ ಇರಬೇಕು, ಇರುತ್ತದೆ. ಇಲ್ಲಿಯೂ ಅದು ಮುಂದುವರೆದಿದೆ. ಹಳ್ಳಿಯಲ್ಲಿ ನಡೆಯುವ ಕಥೆಯು ರಾಜಕೀಯ, ಪಂಚಾಯ್ತಿ, ಚುನಾವಣೆ, ಇನ್ನು ಹಲವು ಲೆಕ್ಕಚಾರದೊಂದಿಗೆ ....

289

Read More...

Ellige Payana Yavudo Daari.Reviews

Friday, October 25, 2024

ಪಯಣದ ಹಾದಿಯಲ್ಲಿ ಸಿಗುವ ರೋಚಕ ತಿರುವುಗಳು ****        ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರವು ಶೀರ್ಷಿಕೆ ಹೇಳುವಂತೆ ಪಯಣದಲ್ಲಿ ಸಾಗುವ ಕಥೆಯಾಗಿದೆ. ಅಮರ್ ಒಬ್ಬ ಬರಹಗಾರ. ತನ್ನ ಕುಂಚದ ಮೂಲಕ ಯಥಾವತ್ತಾಗಿ ಮರುಸೃಷ್ಟಿಸುವಂತ ಸಾಧಕ. ಅಕ್ಷತಾ ತಮ್ಮನ ಚಿಕಿತ್ಸೆಗೆ ಹಣ ಹೊಂದಿಸಲು ಪರಪುರುಷನ ಮುಂದೆ ದೇಹ ಸೌಂದರ್ಯವನ್ನು ತೋರಿಸುತ್ತಾಳೆ. ಮುಂದೆ ಇಬ್ಬರಲ್ಲೂ ಪ್ರೀತಿ ಹುಟ್ಟುತ್ತದೆ. ಕೆಲಸದ ನಿಮಿತ್ತ ವಿರಾಜಪೇಟೆಗೆ ಹೋಗುತ್ತಾನೆ. ಇತ್ತ ಪ್ರೇಮಿಯ ಎಕ್ಸಿಬಿಷನ್‌ಗೆ ಸಹಕಾರ ಮಾಡಲು ಮುಂದಾಗುತ್ತಳೆ. ಅಲ್ಲಿ ಕಾಮುಕನಿಂದ ಇವಳ ಮೇಲೆ ಅಪಪ್ರಚಾರ ಬರುತ್ತದೆ. ಅಮರ್ ಬರುವಾಗ ಕಾರಿನಲ್ಲಿ ನೀತು ಜತೆಗೆ ನಾಲ್ಕು ....

284

Read More...

Mooka Jeeva.Reviews

Friday, October 25, 2024

ಮೂಕ ಜೀವಿಯ ಬದುಕು ಸಾಧನೆ****         ಮುಗ್ದ ವಿಕಲಚೇತನರಿಗೂ ಬದುಕಲು ಹಕ್ಕಿದೆ ಎಂಬುದನ್ನು ‘ಮೂಕ ಜೀವ’ ಚಿತ್ರದಲ್ಲಿ ಹೇಳಿದ್ದಾರೆ. ಅವನೊಬ್ಬ ಮೂಗ, ಕಿವುಡ. ಎಲ್ಲವು ಸರಿಯಾಗಿದ್ದರೂ ಜೀವನ ನಡೆಸುವುದು ಕಷ್ಟ. ಇಂತಹವರಿಗೆ ಹೇಗೆ ಸಾಧ್ಯ?. ಆದರೆ ಇದರಲ್ಲಿ ಅಪಹಾಸ್ಯ ಮಾಡುವ ಬದಲು ಪ್ರೀತಿ, ಸಹಕಾರ ನೀಡಿದರೆ ಯಶಸ್ಸಿನ ಹಾದಿಯನ್ನು ತಲುಪುತ್ತಾರೆ ಎಂಬ ಅಂಶವನ್ನು ತೆರೆದಿಟ್ಟಿದ್ದಾರೆ. ನಟರಾಗಿದ್ದ ಶ್ರೀನಾಥವಸಿಷ್ಠ ಮೊದಲಬಾರಿ ನಿರ್ದೇಶಕರಾಗಿ ಒಳ್ಳೆಯ ಕಾದಂಬರಿಯನ್ನು ಆರಿಸಿಕೊಂಡಿದ್ದಾರೆ. ಯಾವುದೇ ಕಮರ್ಷಿಯಲ್ ಅಂಶಗಳನ್ನು ಬೆರಸದೆ ಸೂಕ್ಷ ವಿಚಾರವನ್ನು ನೇರ ದಿಟ್ಟ ಎನ್ನುವಂತೆ ಹಳ್ಳಿ ಹಾಗೂ ನಗರದ ಚಿತ್ರಣವನ್ನು ....

276

Read More...

Mantrika.Reviews

Friday, October 18, 2024

ಮಾಲ್ ಹಿಂದಿನ ಘೋರ ರಹಸ್ಯ****        ಶುಕ್ರವಾರ ತೆರೆಕಂಡಿರುವ ನಾಲ್ಕು ಸಿನಿಮಾಗಳ ಪೈಕಿ ‘ಮಾಂತ್ರಿಕ’ ಚಿತ್ರವು ವಿಭಿನ್ನವಾಗಿದೆ ಎನ್ನಬಹುದು.  ಕೃಷ್ಣಸಂಕಲ ಬ್ರಾಂಡಿಂಗ್ ಪಿಕ್ಚರ‍್ಸ್ ಲಾಂಛನದಲ್ಲಿ ವ್ಯಾನವರ್ಣ ಜಮ್ಮುಲ ಸಿನಿಮಾಕ್ಕೆ ಬರವಣಿಗೆ, ಚಿತ್ರಕಥೆ,ಸಂಭಾಷಣೆ, ಸಂಕಲನ, ನಿರ್ದೇಶನ ಮಾಡುವ ಜತೆಗೆ ನಿರ್ಮಾಣ ಹಾಗೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.       ಇದೊಂದು ಘೋಸ್ಟ್ ಹಂಟರ್ ಸುತ್ತ ನಡೆಯುವ ಇಂಟಲೆಕ್ಚುಯಲ್, ಸೆಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಒಳಗೊಂಡಿದೆ. ದೆವ್ವ ಅನ್ನೋದು ಇದೆಯೋ, ಇಲ್ಲವೋ ಅಥವಾ ಅದೆಲ್ಲಾ ನಮ್ಮ ಭ್ರಮೆಯೋ ಎಂಬ ವಿಷಯದ ಮೇಲೆ ಸಾಗುತ್ತದೆ. ಮೂಡನಂಬಿಕೆಗಳ ....

281

Read More...

Prakarana Tanikha Hantadallide.Reviews

Friday, October 18, 2024

ಡ್ರಗ್ಸ್ ಮಾಫಿಯಾ ಸುತ್ತ****          ಯುವ ಜನರ ಬದುಕನ್ನು ಹಾಳು ಮಾಡಲು ಡ್ರಗ್ಸ್ ಮಾರಿಯಂತೆ ಬಂದಿದೆ. ಇದರ ಅಂಶಗಳನ್ನು ಇಟ್ಟುಕೊಂಡು ‘’ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ದಕ್ಷ ಪೋಲೀಸ್ ಅಧಿಕಾರಿ ಸರಣಿ ಕೊಲೆಗಳನ್ನು ಭೇದಿಸಲು ಹೋದಾಗ ಡ್ರಗ್ಸ್ ಜಾಲ ತೆರೆದುಕೊಳ್ಳುತ್ತದೆ. ಇದರ ಜಾಲ ಹೇಗೆ ಕೆಲಸ ಮಾಡುತ್ತದೆ. ಒಬ್ಬರ ನಂತರ ಮತ್ತೋಬ್ಬರ ನಿಗೂಢ ಹತ್ಯೆ ನಡೆಯುತ್ತದೆ. ಈ ಮಾರಾಟದ ಹಾದಿಯಲ್ಲಿ ಮೂಟೆಯಲ್ಲಿ ಇದ್ದ ಶವವೊಂದು ಪತ್ರೆಯಾಗುತ್ತದೆ. ತನಿಖೆಗೆ ಮುಂದಾದ ಅಧಿಕಾರಿಗಳಿಗೆ ತಲೆ ಇಲ್ಲದ ದೇಹ ಸಿಗುತ್ತದೆ. ಅದರ ಸಾಕ್ಷಿ ಬೆನ್ನಟಿ ಹೋದಾಗ ಒಂದರ ಹಿಂದೊಂದು  ರಹಸ್ಯಗಳು ಸಿಗುತ್ತದೆ. ....

271

Read More...

Simharoopini.Reviews

Thursday, October 17, 2024

  ಕೋಣದ ಕಥೆಯಲ್ಲಿ ಸಿಂಹರೂಪಿಣಿ ಆರ್ಭಟ          ಪ್ರಚಲಿತ ವಿದ್ಯಾಮಾನದಲ್ಲಿ ಭಕ್ತಿಪ್ರಧಾನ ಚಿತ್ರಗಳು ಬೆರಳಣಿಕೆಯಷ್ಟು ಇದೆ. ಆ ಸಾಲಿಗೆ ’ಸಿಂಹರೂಪಿಣಿ’ ಸಿನಿಮಾ ಸೇರ್ಪಡೆಯಾಗುತ್ತದೆ. ಪ್ರತಿಯೊಂದು ದೇವರಿಗೂ ಹಿನ್ನಲೆ ಇರುತ್ತದೆ. ಹಾಗೆಯೇ ದೇವಿಯು ಮಹಾಲಕ್ಷೀ ರೂಪದಲ್ಲಿ ಮಾರಮ್ಮ ಯಾಕೆ ಆಗ್ತಾಳೆ ಒಂದು ಕಡೆಯಾದರೆ, ಮತ್ತೋಂದು ಭಾಗದಲ್ಲಿ ರಾಕ್ಷಸರನ್ನು ಸಂಹಾರ ಮಾಡಲು ಪಾರ್ವತಿದೇವಿ ಏಳು ಅವತಾರಗಳಲ್ಲಿ ಬರುತ್ತಾಳೆ. ಅದರಲ್ಲಿ ಕೊನೆಯ ಅವತಾರ ಮಾರಮ್ಮ ದೇವಿ. ದುಷ್ಟರನ್ನು ಸಂಹಾರ ಮಾಡಿದರೆ, ನಂಬಿದ ಭಕ್ತರಿಗೆ ಅಭಯ ನೀಡುತ್ತಾಳೆ. ಭೂಮಿಗೆ ದೇವಾನು ದೇವತೆಗಳು ಬರಲು ಕಾರಣವಿದೆ. ಅದೇ ರೀತಿ ಮಾರಮ್ಮ ಯರಪ್ಪನ ಹಳ್ಳಿಗೆ ಬರಲು ಕಾರಣವೇನು? ಅಲ್ಲಿನ ಜನರ ....

284

Read More...

Martin.Reviews

Friday, October 11, 2024

ಮಾಸ್‌ಗೆ ಮಾಸ್, ಕ್ಲಾಸ್‌ಗೆ ಕ್ಲಾಸ್ ಮಾರ್ಟಿನ್****       ಮೂರು ವರ್ಷಗಳಿಂದ ಸುದ್ದಿಯಾಗಿದ್ದ ಅದ್ದೂರಿ ಚಿತ್ರ ‘ಮಾರ್ಟಿನ್’ ಅಂದುಕೊಂಡಂತೆ ಅಭಿಮಾನಿಗಳಿಗೆ ಬಾಡೂಟ ಸಿಕ್ಕಂತೆ ಆಗಿದೆ. ಕಥೆಯಲ್ಲಿ ಇಂಡಿಯನ್ ಟ್ಯಾಟೂ ಹಾಕಿಸಿಕೊಂಡು ಶಕ್ತಿಶಾಲಿಯಾಗಿದ್ದ ಆತ ಪಾಕಿಸ್ತಾನದ ನೆಲದಲ್ಲಿ ತನ್ನ ಪರಾಕ್ರಮವನ್ನು ತೋರಿಸಿ ಯಶಸ್ವಿಯಾಗುತ್ತಾನೆ. ಆದರೆ ಅವನಿಗೆ ತನ್ನ ಹಿನ್ನೆಲೆ ತಿಳಿಯದ ಕಾರಣ ತನ್ನ ಅಸ್ತಿತ್ವನ್ನು ಹುಡುಕಲು ಶುರು ಮಾಡುತ್ತಾನೆ. ಈ ಮಧ್ಯೆ ಭಯೋತ್ಪಾದಕರು ಭಾರತದ ಮೇಲೆ ದಾಳಿ  ಮಾಡಲು ಸಂಚು ಹೂಡುತ್ತಾರೆ. ಇದನ್ನು ತಿಳಿದ ಮೇಲೆ ಅವನು ಯಾವ ....

267

Read More...

Gopilola.Reviews

Friday, October 04, 2024

ಆದರ್ಶ ರೈತ ಕುಟುಂಬದ ಬದುಕು ಬವಣೆ  ****    ರೈತರ ಕುಟುಂಬದಲ್ಲೂ ಕಷ್ಟ ಕಾರ್ಪಣ್ಯಗಳು ಇರುತ್ತದೆ ಎಂಬುದನ್ನು ‘ಗೋಪಿಲೋಲ’ ಚಿತ್ರದಲ್ಲಿ ನವಿರಾಗಿ ತೋರಿಸಲಾಗಿದೆ. ಪ್ರಾಮಾಣಿಕ ಮಾದೇಗೌಡ ಕೃಷಿ ಮಾಡಿಕೊಂಡು ಒಳ್ಳೆ ಹೆಸರನ್ನು ಸಂಪಾದಿಸಿರುತ್ತಾನೆ. ಆದರೆ ಮಗ ಸೋಮಾರಿ, ಪೋಲಿಯಾಗಿ ಅಪ್ಪನ ಹೆಸರನ್ನು ಹಾಳು ಮಾಡುತ್ತಿರುತ್ತಾನೆ. ಈತನನ್ನು ಪ್ರೀತಿ ಮಾಡಿತ್ತಿದ್ದ ಲೀಲಾ ಆಕಸ್ಮಿಕ ಸಂದರ್ಭದಲ್ಲಿ ಮೈಮರೆತು ತಪ್ಪು ಮಾಡುತ್ತಾಳೆ. ಇತ್ತ ಗೋಪಿ ಎಲ್ಲವನ್ನು ಮರೆತು ಬೇರೆ ಹುಡುಗಿಯೊಂದಿಗೆ ಸಂಬಂಧ ಬೆಳಸಿಕೊಳ್ಳುತ್ತಾನೆ. ಇದನ್ನು ಅರಿತ ಅವಳು ಮನೆಗೆ ಬಂದು ಮಾದೇಗೌಡರಿಗೆ ದೂರು ನೀಡುತ್ತಾಳೆ. ಅವರು ಆಕೆಯ ಧೈರ್ಯವನ್ನು ಮೆಚ್ಚಿ ....

275

Read More...

Bhairadevi.Reviews

Thursday, October 03, 2024

 ಭೈರಾದೇವಿ ಸೇಡಿನ ಕಥನ****       ‘ಭೈರಾದೇವಿ’ ಚಿತ್ರವು ನೊಂದ ಹೆಣ್ಣಿನ ಆತ್ಮವೊಂದರ ದ್ವೇಷದ ಕಥೆಯನ್ನು ಹೇಳಲಿದೆ. ಇದರ ಜತೆಗೆ ಅಘೋರಿ ಪಾತ್ರವನ್ನು ಲಿಂಕ್ ಮಾಡಿರುವುದು ವಿಶೇಷ. ಮೂರು ಪಾತ್ರದ ಸುತ್ತ ಸಿನಿಮಾವು ಸಾಗುತ್ತದೆ. ಡಿಸಿಪಿ ಅರವಿಂದ್ ನಾದಿನಿ ಮೇಲೆ ಕಣ್ಣು ಹಾಕುತ್ತಾನೆ. ಇದನ್ನು ಅರಿತ ಪತ್ನಿ ಮನೆ ಮೇಲಿಂದ ಬಿದ್ದು ಸಾಯುತ್ತಾಳೆ. ಅಕ್ಕನ ಸಾವಿನ ಹಿನ್ನಲೆ ಅರಿತ ಶಾಲಿನಿ ದೂರು ಕೊಡಲು ಆಯುಕ್ತರ ಕಛೇರಿಗೆ ಹೋಗುವಾಗ ಸ್ಕೂಟರ್ ಅಪಘಾತದಲ್ಲಿ ಮರಣಿಸುತ್ತಾಳೆ. ಮುಂದೆ ಅರವಿಂದ್ ಮಗಳನ್ನು ಬೋರ್ಡಿಂಗ್ ಶಾಲೆಗೆ ಸೇರಿಸುತ್ತಾನೆ. ಮನೆಯಲ್ಲಿ ವಿಚಿತ್ರ ಘಟನೆಗಳು ನಡೆದು ಶಾಲಿನಿಯೇ ಪ್ರೇತವಾಗಿ ಕಾಡುತ್ತಿದ್ದಾಳೆಂದು ....

267

Read More...

Kedernath Kuri Farm.Reviews

Friday, September 27, 2024

ಗ್ರಾಮೀಣ ಭಾಗದ ಕೇದಾರನಾಥ ಕುರಿ ಫಾರಂ****         ಮನುಷ್ಯನಿಗೆ ಆಸೆ ಬಂದರೆ ಆತನನ್ನು ಯಾವ ಮಟ್ಟಿಗೆ ಕರೆದುಕೊಂಡು ಹೋಗುತ್ತದೆ ಎಂಬುದನ್ನು ‘ಕೇದಾರನಾಥ ಕುರಿ ಫಾರಂ’ ಸಿನಿಮಾದಲ್ಲಿ ಹೇಳಲಾಗಿದೆ.  ಗ್ರಾಮೀಣ ಭಾಗದಲ್ಲಿ ಮೋಜುಮಸ್ತಿ ಮಾಡುವ ಯುವಕರುಗಳಿಗೆ ಮಂಜ ಲೀಡರ್. ಆಕೆಯ ಅಪ್ಪ ಕುಡುಕ. ಮಗಳ ಬಾಂಧವ್ಯ ದಾರಿ ತಪ್ಪಿ ಅಮ್ಮ ಇದರ ನಡುವೆ ಸಾಗುತ್ತಾ ಹೋಗುತ್ತದೆ. ನಂತರ ಒಂದು ಕೊಲೆಯಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಮಾಡುವ ಉಪಾಯಗಳು. ಅಂತಿಮವಾಗಿ ಅಪರಾಧಿಗಳು ಕಾನೂನು ಅಡಿಯಲ್ಲಿ ಸಿಲುಕುತ್ತಾರಾ? ಹಳ್ಳಿಗಳಲ್ಲಿ ಜನಜೀವನ, ಹುಡುಗರ ಚೆಲ್ಲಾಟ ಎಲ್ಲವನ್ನು ಕಾಮಿಡಿ, ಥ್ರಿಲ್ಲರ್ ರೂಪದಲ್ಲಿ ....

379

Read More...

Sanju.Reviews

Friday, September 27, 2024

ಬಸ್ ನಿಲ್ದಾಣದ ಲವ್ ಸ್ಟೋರಿ*****        ಹಿರಿಯ ಪತ್ರಕರ್ತ, ನಟ ಯತಿರಾಜ್ ಆಕ್ಷನ್ ಕಟ್ ಹೇಳಿರುವ ‘ಸಂಜು’ ಚಿತ್ರವು ಬಸ್ ನಿಲ್ದಾಣದಲ್ಲಿ ನಡೆಯುವ ಪ್ರೇಮಕಥೆ ಹೊಂದಿದೆ. ಆತನ ಬದುಕಿನಲ್ಲಿ ಸಾಕಷ್ಟು ಏರಳಿತಗಳಿರುತ್ತದೆ. ಆಕೆಯ ಬದುಕು ಕೂಡ ಇದಕ್ಕೆ ಹೊರತಾಗಿರುವುದಿಲ್ಲ. ತತ್ ಕ್ಷಣದ ನಿರ್ಧಾರಗಳು ನಮ್ಮ ಜೀವನದಲ್ಲಿ ಏನೇನೆಲ್ಲಾ ಪರಿಣಾಮಗಳನ್ನು ಬೀರುತ್ತದೆ. ಹಸಿರು ಪರಿಸರದ ಮಧ್ಯೆ ಇರೋ ಬಸ್ ನಿಲ್ದಾಣದಲ್ಲಿ ಇಬ್ಬರ ನಡುವೆ ಪ್ರೀತಿ ಹುಟ್ಟುತ್ತೆ. ಕೇವಲ ನಾಲ್ಕೈದು ಗಂಟೆಗಳಲ್ಲಿ ನಡೆಯುವ ಘಟನೆಗಳಲ್ಲಿ  ಆತಂಕ, ತೊಳಲಾಟ, ವಾತ್ಸಲ್ಯ, ಕಾಳಜಿ ಎಲ್ಲವನ್ನು ತೋರಿಸಲಾಗಿದೆ. ಒಂದು ಹಂತದಲ್ಲಿ ಅವಳು ಸಾಯೋ ನಿರ್ಧಾರ ....

292

Read More...

Langotiman.Reviews

Friday, September 20, 2024

ತುಂಬು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ****

       ಸಂಜೋತ ಭಂಡಾರಿ ನಿರ್ದೇಶನ ಮಾಡಿರುವ ‘ಲಂಗೋಟಿ ಮ್ಯಾನ್’ ತಾತ, ಮೊಮ್ಮಗನ ಸುತ್ತ ಕಥೆಯನ್ನು ಹೇಳಲಾಗಿದೆ. ಸಂಪ್ರದಾಯಸ್ಥ ಪುರೋಹಿತ ಕುಟುಂಬದಲ್ಲಿ ಹಿರಿಕರಿಗೆ ಲಂಗೋಟಿಯ ಮೇಲೆ ಅಪಾರ ಅಭಿಮಾನ. ಈಗಿನ ಕಾಲದಲ್ಲಿ ಬದುಕುತ್ತಿದ್ದರೂ ಅದನ್ನು ಬಿಡದೆ, ಎಲ್ಲರೂ ಅದನ್ನೇ ತೊಟ್ಟುಕೊಳ್ಳಬೇಕೆಂಬ ಧೋರಣೆ. ಇದರಿಂದ ಸಂಕಷ್ಟಕ್ಕೆ ಸಿಲುಕುವ ಮೊಮ್ಮಗ. ಇದೆಲ್ಲಾವನ್ನು ಧಿಕ್ಕರಿಸಿದಾಗ ಮುಂದೆ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎಂಬುದನ್ನು ಹಾಸ್ಯ ಮಿಶ್ರಿತ ಧಾಟಿಯಲ್ಲಿ ತೋರಿಸಲಾಗಿದೆ. 

274

Read More...

Karki.Film Reviews

Friday, September 20, 2024

ಸಮಾನತೆಗಾಗಿ ಹೋರಾಡುವ ಕರ್ಕಿ ****      ೨೧ನೇ ಶತಮಾನ ಬಂದರೂ ಸಮಾಜದಲ್ಲಿ ಮೇಲು, ಕೀಳು ಎನ್ನುವ ಭೇದಬಾವ ಕಡಿಮೆಯಾಗಿಲ್ಲ. ಅದನ್ನು ಸಂಪೂರ್ಣವಾಗಿ ತೊಡೆದು ಹಾಕುವ ಕಥೆ ‘ಕರ್ಕಿ’ ಚಿತ್ರದಲ್ಲಿ ಹೇಳಲಾಗಿದೆ. ಕೆಳ ವರ್ಗದ ಯುವಕ ತನ್ನ ಜೀವನದಲ್ಲಿ ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾನೆ. ಮುಂದೆ ಹೇಗೆಲ್ಲಾ ಎದುರಿಸುತ್ತಾನೆ. ಅವುಗಳನ್ನು ಮೆಟ್ಟಿ ನಿಂತು ಸಾಧನೆಯ ಹಾದಿಯಲ್ಲಿ ಯಾವ ರೀತಿ ಸಾಗುತ್ತಾನೆ. ಜತೆಗೆ ಜಾತಿ ವ್ಯವಸ್ಥೆ, ಸಮಾನತೆ ಸುತ್ತ ಹೇಳುವ ಪ್ರಯತ್ನ ಮಾಡಲಾಗಿದೆ. ಸಮಾಜದಲ್ಲಿರುವ ಕೆಲವು ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುವಂತಹ ಸನ್ನಿವೇಶಗಳನ್ನು ಸಂದೇಶದೊಂದಿಗೆ ತೋರಿಸಲಾಗಿದೆ. ನಾಯಿಯೊಂದು ಪ್ರಮುಖ ಪಾತ್ರವಹಿಸಿದ್ದು ....

278

Read More...

Hagga.Reviews

Friday, September 20, 2024

ಕುತೂಹಲಗಳ ಹಿಂಡು ಹಗ್ಗ****      ಹಾರರ್ ಅಂಶಗಳನ್ನು ಒಳಗೊಂಡಿರುವ ‘ಹಗ್ಗ’ ಚಿತ್ರವು ನೋಡುಗರಿಗೆ ಖುಷಿ ಕೊಡುತ್ತದೆ. ಅದೊಂದು ನಾಗೇಕೊಪ್ಪು ಕಾಡಿನಲ್ಲಿರುವ ಊರು. ಅಲ್ಲಿ ಹೆಣ್ಣು ಮಗು ಜನನವಾದರೆ ಮನೆಯ ಅತ್ತೆ ನೇಣು ಬಿಗಿದ ಸ್ಥಿತಿಯಲ್ಲಿ ಸುಟ್ಟು ಹೋಗಿರುತ್ತಾಳೆ. ಇದು ಊರಿಗೆ ಸಂಕಷ್ಟವಾಗಿ ಗೌಡರು ಪರಿಹಾರಕ್ಕಾಗಿ ದಾರಿ ಹುಡುಕುತ್ತಿರುತ್ತಾರೆ. ಆದರೆ ಈತನ ಮಗ ಒಂದು ಹುಡುಗಿಯ ಮೇಲೆ ಕಣ್ಣು ಬೀಳುತ್ತದೆ. ಅವಳ ಗುಂಗಿನಲ್ಲಿದ್ದ ಕಂಡ ತಾಯಿ ಸೋದರಮಾವನ ಬಳಿ ಕಳಿಸುತ್ತಾಳೆ. ಅಲ್ಲಿಯೂ ಟಿವಿ ವರದಿಗಾರ್ತಿನ್ನು ಇಷ್ಟಪಡುತ್ತಾನೆ. ಅವಳು ಮಾಟ, ಮಂತ್ರದ ವಿಚಾರ ತಿಳಿದು ಸತ್ಯದ ಹಿಂದೆ ಬೆನ್ನಟ್ಟಿದಾಗ, ಘೋರ ಘಟನೆಯ ಕಥೆ ಬಿಚ್ಚಿ ....

256

Read More...

Vikaasaparva.Reviews

Friday, September 13, 2024

ಫ್ಯಾಮಿಲಿ ಥ್ರಿಲ್ಲರ್ ವಿಕಾಸ ಪರ್ವ****      ಮನುಷ್ಯನ ಜೀವನವನ್ನು ಬದಲಿಸಲು ಚಟ ಮತ್ತು ಯೋಚನೆ ಸಾಕು. ಇವೆರಡು ಆದಾಗ ಬದುಕು ತನ್ನಂತಾನೇ ಪರಿವರ್ತನೆ ಆಗುತ್ತದೆ. ಅಂತಹದೊಂದು ಕಥೆ ‘ವಿಕಾಸ ಪರ್ವ’ ಚಿತ್ರದಲ್ಲಿದೆ. ನಾಲ್ವರು ಶ್ರೀಮಂತ ಹುಡುಗರು ಪ್ರತಿ ರಾತ್ರಿ ಪಾರ್ಟಿ ಮಾಡಿ ಮನೆಗೆ ಬಂದಾಗ ಹೆಂಡತಿಯರಿಗೆ ಕಷ್ಟವಾಗುತ್ತಿರುತ್ತದೆ. ಇದರಿಂದಾಗಿ ಎಲ್ಲರ ಮನೆಯಲ್ಲಿ ಗಲಾಟೆ ಆಗುತ್ತಿರುತ್ತದೆ. ಇದು ವಿಪರೀತ ಆದಾಗ, ಇದೆನ್ನು ಮರೆಯಲು ದೂರದ ಊರಿಗೆ ಹೋದಾಗ, ಅದರಲ್ಲೊಬ್ಬ ಬದಲಾವಣೆ ಯಾಗದೆ ದುರಂಹಕಾರಿಯಾಗುತ್ತಾನೆ. ಆತನ ಅಹಂ ಮುಳುವಾಗಿ ಕೊನೆಗೆ ಪಾಠವೇ ಬುದ್ದಿ ಕಲಿಸುತ್ತದೆ. ಅದು ಏನು ಎಂಬುದನ್ನು ಗೊತ್ತಾಗಬೇಕಿದ್ದರೆ ....

262

Read More...

Kaalapatthar.Reviews

Friday, September 13, 2024

ಆಣ್ಣಾವ್ರ ನೆನಪಿಸುವ ಕಾಲಾಪತ್ತರ್  ****     ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಹಾಡುಗಳು ಬಂದು ಮೆರುಗು ತಂದಿದ್ದವು. ಅದೇ ರೀತಿ ‘ಕಾಲಾಪತ್ತರ್’ ಸಿನಿಮಾದಲ್ಲೂ ಅಂತಹುದೇ ಅಣ್ಣಾವ್ರ ನೆನಪಿಸುವ ಸನ್ನಿವೇಶಗಳು ಕಾಣಿಸಿಕೊಳ್ಳುತ್ತವೆ. ನೋಡಿದ್ದು, ಕೇಳಿದ್ದು ಎರಡನ್ನು ನಾವು ಸ್ವತ: ಅನುಭವಿಸಿದರೂ ಸುಳ್ಳು ಆಗುವ ಅನುಭವಗಳು ಇರುತ್ತದೆ. ಅದಕ್ಕೆ ಉತ್ತರವನ್ನು ಇದರಲ್ಲಿ ನೀಡುವ ಪ್ರಯತ್ನ ಮಾಡಲಾಗಿದೆ. ಕಲ್ಲು ಹೃದಯಗಳ ನಡುವೆ ಕಪ್ಪು ಕಲ್ಲಿಗೆ ಜೀವ ತುಂಬುವ ಕಥೆ ಸೀಟಿನ ತುದಿವರೆಗೂ ಕೂರಿಸಿ ಕೊನೆವರೆಗೂ ಕರೆದುಕೊಂಡು ಹೋಗುತ್ತದೆ. ಕಾಶ್ಮೀರದ ಸೇನಾ ಕ್ಯಾಪ್‌ದಲ್ಲಿ ಕುಕ್ ಶಂಕರ ಉಗ್ರರು ಸೈನಿಕರ ಮೇಲೆ ದಾಳಿ ನಡೆಸಲು ....

245

Read More...

Ronny.Reviews

Thursday, September 12, 2024

ಸಾಮಾನ್ಯ ಯುವಕನ ಬದುಕಿನ ಕಥನ  ****        ಬದುಕಿನಲ್ಲಿ ನಡೆಯುವ ಘಟನೆಗಳನ್ನು ತಾಳೆ ಹಾಕಿ ಪರೀಕ್ಷಿಕೊಳ್ಳಬಹುದು. ಅದೇ ಸಾಮಾನ್ಯ ಮನುಷ್ಯನ ದೃಷ್ಟಿಕೋನ ಹೇಗಿರುತ್ತದೆ ಎಂಬುದನ್ನು ‘ರಾನಿ’ ತೋರಿಸುವ ಪ್ರಯತ್ನ ಮಾಡಲಾಗಇದೆ. ಮೇಲ್ನೋಟಕ್ಕೆ ರೌಡಿಸಂ, ಭೂಗತಲೋಕ ಎಂದೆಲ್ಲ ಅನಿಸಿದರೂ, ಚಿತ್ರದ ಒಳಗೆ ಹೊಕ್ಕರೆ ಆತನ ಸೂಕ್ಷ ಸಂವೇದನೆ ತಿಳಿಯುತ್ತಾ ಹೋಗುತ್ತದೆ. ಅಷ್ಟರಮಟ್ಟಿಗೆ ಮಾಸ್ ಜತೆಗೆ ಕ್ಲಾಸ್ ಅಂಶಗಳು ಇರುವುದು ಗೊತ್ತಾಗುತ್ತದೆ. ಆತನಿಗೆ ಬಣ್ಣದಲೋಕದಲ್ಲಿ ಮಿಂಚಬೇಕೆಂಬ ಆಸೆ ಇರುತ್ತದೆ. ಇವನಿಗೆ ಜತೆಯಾಗಿ ಅವಳು ಸಾಥ್ ಕೊಡುತ್ತಾಳೆ. ಇನ್ನೇನು ಕ್ಯಾಮಾರ ಎದುರು ನಿಲ್ಲಬೇಕು. ಅಷ್ಟರಲ್ಲಿ ಅವನಿಗೆ ನಿರೀಕ್ಷಿಸದ ಘಟನೆ ....

233

Read More...

Ibbani Tabbida IIeyali.Reviews

Friday, September 06, 2024

ವಿನೂತನ ಪ್ರೇಮ ಕಥನ ****       ಅಮರ ಮಧುರ ಪ್ರೇಮದಲ್ಲಿ ಬಿದ್ದ ಮೇಲೆ ಕಾಡುವ ನೆನಪುಗಳು ಎಣಿಸಲಾಗದಷ್ಟು ಇರುತ್ತದೆ. ಅಂತಹ ನಿಟ್ಟಿನಲ್ಲಿ ನೈಜ ಪ್ರೀತಿಗೆ ಅರ್ಥ ಕಲ್ಪಿಸುವ ಕಥೆ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ನವಿರಾಗಿ ತೋರಿಸಲಾಗಿದೆ. ಕಥಾನಾಯಕ ಸಿದ್ ಯುವ ಉದ್ಯಮಿ. ಸಂಪ್ರದಾಯಸ್ಥ ಕುಟುಂಬದವನಾಗಿದ್ದರಿಂದ ಸಂಬಂದಿ ರಾಧಾ ಜೊತೆ ಮದುವೆ ಮಾಡಲು ಮನೆಯವರು ಇಷ್ಟಪಟ್ಟಿರುತ್ತಾರೆ. ಆದರೆ ಆತನ ಮನಸ್ಸು ಅನಾಹಿತಳ ಮೇಲೆ ಇರುತ್ತದೆ. ಮುಂಗೋಪಿಯಾಗಿದ್ದರಿಂದ ಅವಳ ಪ್ರೀತಿಯಲ್ಲಿ ಬಿರುಕು ಮೂಡಿರುತ್ತದೆ. ಮುಂದೆ ಹಿಂದಿನ ಘಟನೆಗಳು ತೆರೆದುಕೊಳ್ಳುತ್ತದೆ. ಅಮ್ಮನಿಗೆ ಮಗ ದೊಡ್ಡ ಕ್ರಿಕೆಟ್ ಆಟಗಾರ ಆಗಬೇಕೆಂದು ಬಯಸಿರುತ್ತಾಳೆ. ತಾಯಿಯ ....

241

Read More...

Prpr.Film Reviews

Friday, August 30, 2024

ರಕ್ತಸಿಕ್ತ ಸಾರುವ ಪೆಪೆ ****     ‘ಪೆಪೆ’ ಚಿತ್ರದಲ್ಲಿ ನಾಯಕನ ಹೆಸರು ಪ್ರದೀಪ. ಎಲ್ಲರೂ  ಆತನನ್ನು ಶೀರ್ಷಿಕೆಯಲ್ಲಿ ಕರೆಯುತ್ತಿರುತ್ತಾರೆ. ಜಾತಿಯ ದ್ವೇಷ, ಪ್ರೀತಿಯ ನೆರಳು, ನಂಬಿಕೆಗಳ ಕುಲುಮೆ. ತಾಯಿಯ ಮಮತೆ, ಹೆಣ್ಣಿನ ಧೋರಣೆ, ದುರುಳನ ಕೈನಿಂದ ಜಾರಿ ಬಿದ್ದು ತೊರೆಯ ನೀರಿನಲ್ಲಿ ಮುಳುಗಿರುವ ವಸ್ತುವನ್ನು ಹೇಳುವುದೆ ಒನ್ ಲೈನ್ ಸ್ಟೋರಿಯಾಗಿದೆ. ಚಿಕ್ಕವನಿದ್ದಾಗಲೇ ಅಪ್ಪನನ್ನು ಕಳೆದುಕೊಂಡ ಅವನಿಗೆ ಅಪ್ಪನ ಸಾವಿಗೆ ಯಾರು ಕಾರಣ ಏನು ಎಂದು ಹುಡುಕುತ್ತಾ ಹೊರಟಾಗ ಹಿಂದಿನ ಅಸಲಿ ಕಥೆ ಬಿಚ್ಚಿಕೊಳ್ಳುತ್ತದೆ. ಸಾವು ಬದುಕಿನ ನರಳಾಟದಲ್ಲಿ ಅಪ್ಪನನ್ನು ಕೂಡಿ ಹಾಕಿರುವ ಮಗ ಮತ್ತು ಸೊಸೆ. ರಾಜಕಾರಣಿ ಸಂಗ ಸೇರಿದ ಆಕೆ ಯಾರನ್ನು ಬಿಡಲ್ಲ ....

241

Read More...

Laughing Buddha.Reviews

Friday, August 30, 2024

ಪೋಲೀಸ್ ಬದುಕು ಬವಣೆಯ ಲಾಫಿಂಗ್ ಬುದ್ದ****          ರಿಶಬ್‌ಶೆಟ್ಟಿ ನಿರ್ಮಾಣ ಮಾಡಿರುವ ‘ಲಾಫಿಂಗ್ ಬುದ್ದ’ ಹಾಸ್ಯ ಚಿತ್ರದಲ್ಲಿ ಪೋಲೀಸರ ವೈಯಕ್ತಿಕ ಜೀವನ ಹೇಗಿರುತ್ತೆ. ಕಥೆಯಲ್ಲಿ ತಿಂಡಿಪೋತ ಗೋವರ್ಧನ, ಕೋಪಿಷ್ಟ ಮೇಲಾಧಿಕಾರಿ, ನಿವೃತ್ತಿ ಅಂಚಿನಲ್ಲಿರುವ ಸಹದ್ಯೋಗಿ, ಲವಲವಿಕೆಯ ಸಿಬ್ಬಂದಿ. ಇವರೆಲ್ಲರ ಕುಟುಂಬದಲ್ಲಿ ಏನೇನು ನಡೆಯುತ್ತದೆ. ಆರಕ್ಷಕನಿಗೂ ಫಿಟ್ ನೆಸ್ ಎಷ್ಟು ಮುಖ್ಯ. ಪೋಲೀಸರು ಎಂದರೆ ಕರುಣೆ ಇಲ್ಲದೆ ವರ್ತಿಸುವವರು ಎನ್ನುತ್ತಾರೆ. ಕೆಲವು ಸನ್ನಿವೇಶಗಳಲ್ಲಿ ಅದು ನಿಜ ಅನ್ನಿಸಬಹುದು. ಚುರುಕಾದ ಕಳ್ಳರನ್ನು ಹಿಡಿಯುವುದು ಅಷ್ಟು ಸುಲಭವಲ್ಲ. ಬೊಜ್ಜು ಜೋರಾಗಿ ಇದ್ದರೆ ಓಡುವುದು ....

237

Read More...

Krishnam Pranaya Sakhi.Reviews

Thursday, August 15, 2024

ಕೃಷ್ಣನ ಕೈಚಳಕವು ನಗು ತರಿಸುತ್ತದೆ*****        ತಾನು ಮದುವೆಯಾದ ಪತ್ನಿಗೆ ಕಾಳು ಹಾಕುವ ಸನ್ನಿವೇಶಗಳನ್ನು ‘ಕೃಷ್ಣ ಪ್ರಣಯ ಸಖಿ’ ಚಿತ್ರದಲ್ಲಿ ಕಾಮಿಡಿಯಾಗಿ ತೋರಿಸಲಾಗಿದೆ. ಒಟ್ಟಾರೆಯಾಗಿ ಫ್ಯಾಮಿಲಿಗೋಸ್ಕರವೇ ಮಾಡಿದಂತಹ ಕಥೆ ಎಲ್ಲರಿಗೂ ಖುಷಿ ಕೊಡುತ್ತದೆ. ಆತ ಶ್ರಿಮಂತ ಉದ್ಯಮಿ. ಒಬ್ಬಳ ಮೇಲೆ ಲವ್ ಆಗಿ ಮದುವೆಯಾಗುತ್ತದೆ. ಇನ್ನೇನು ಸಂಭ್ರಮದಲ್ಲಿರುತ್ತಾರೆ ಎನ್ನುವಾಗ ಅಲ್ಲೊಂದು ಘೋರ ತಿರುವು ಪಡೆದುಕೊಳ್ಳುತ್ತದೆ. ಅಪಘಾತದಲ್ಲಿ ನೆನಪಿನ ಶಕ್ತಿಯನ್ನು ಕೆಳೆದುಕೊಳ್ಳುವ, ಅವನನ್ನು ನೋಡಿಕೊಳ್ಳುವ ಜವಬ್ದಾರಿಯು ದಾದಿಯಾಗಿ ಹೆಂಡತಿಗೆ ಬರುತ್ತದೆ. ಈ ನಡುವೆ ಮತ್ತೋಬ್ಬ ಹುಡುಗಿ ಎಂಟ್ರಿಯಾಗುತ್ತದೆ. ಅವಳು ಲವ್ ....

340

Read More...

Gowri.Reviews

Thursday, August 15, 2024

ಪ್ರೀತಿ ಪ್ರತಿಭೆಗಳ ಸಮ್ಮಿಲನ*****         ಸಾಧನೆ ಮಾಡುವಾಗ ಅಡೆಗಳು, ಏಳು-ಬೀಳು, ಕಷ್ಟದ ಹಾದಿಗಳು ಬರುತ್ತವೆ. ಅದೆಲ್ಲಾವನ್ನು ಎದುರಿಸಿದರೆ ಸಾರ್ಥಕ ಕ್ಷಣಗಳು ನಮಗೆ ಸಿಗುತ್ತದೆ ಎಂಬುದನ್ನು ‘ಗೌರಿ’ ಚಿತ್ರದಲ್ಲಿ ತೋರಿಸಲಾಗಿದೆ. ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್‌ಲಂಕೇಶ್‌ಗೆ ಸೂಟ್ ಆಗುವಂತೆ ಕಥೆಯನ್ನು ಏಣೆದು ನಿರ್ಮಾಣ ಜತೆಗೆ ನಿರ್ದೇಶನ ಮಾಡಿದ್ದಾರೆ. ಅಪ್ಪ ಸಿದ್ದಪ್ಪ ಮಗ ಗೌರಿ ತನ್ನಂತೆ ಆಗಬೇಕೆಂದು ಆಸೆ ಪಟ್ಟಿರುತ್ತಾನೆ. ಆದರೆ ಅವನು ಗಾಯಕನಾಗಬೇಕೆಂದು ಹೇಳಿದಾಗ ಇಬ್ಬರಲ್ಲಿ ಬಿರುಕು ಉಂಟಾಗುತ್ತದೆ. ಭವಿಷ್ಯದ ವೇದಿಕೆಯನ್ನು ಹುಡುಕುವಾಗ, ಮತ್ತೋಂದು ಕಡೆ ಸಮಂತಾ ಸ್ವಂತ ಬ್ಯಾಂಡ್ ಕಟ್ಟಿ ವೇದಿಕೆ ಸಿದ್ದ ....

321

Read More...

Bheema.Reviews

Friday, August 09, 2024

  ಮಾಸ್ ಪ್ರಿಯರಿಗೆ ಹೇಳಿ ಮಾಡಿಸಿದ ಭೀಮ*****        ದುನಿಯಾವಿಜಯ್ ನಿರ್ದೇಶನ ಮತ್ತು ನಾಯಕನಾಗಿ ನಟಿಸಿರುವ ‘ಭೀಮ’ ಚಿತ್ರವು ಪಕ್ಕಾ ಕಮರ್ಷಿಂiiಲ್ ಎಂಟರ್‌ಟೈನ್‌ಮೆಂಟ್ ಅದರಲ್ಲೂ ಮಾಸ್ ಪ್ರೇಕ್ಷಕರಿಗೆ ಖಂಡಿತಾ ಪೈಸಾ ವಸೂಲ್ ಆಗುತ್ತದೆ.  ಪ್ರಸಕ್ತ ಸಮಾಜದಲ್ಲಿ ಅದರಲ್ಲೂ ಬೆಂಗಳೂರಿನಂಥ ಸ್ಥಳಗಳಲ್ಲಿ ಯುವಜನಾಂಗವು ಹೇಗೆ ಡ್ರಗ್ಸ್ ವ್ಯಸನದಿಂದ ಯಾವ ರೀತಿ ಕೆಟ್ಟ ಹಾದಿಗೆ ಹೋಗುತ್ತಿದ್ದಾರೆ. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಹಲವು ನೈಜ ಘಟನೆಗಳು. ಇಂದಿನ ಯುವ ಪೀಳಿಗೆ ಹೊಸ ವ್ಯಸನಕ್ಕೆ ಒಳಗಾಗಿದ್ದಾರೆ. ಅದು ಪಾರ್ಥೇನಿಯಂ ಗಿಡಕ್ಕಿಂತಲೂ ವೇಗವಾಗಿ ಬೆಳೆದಿದೆ. ಮಾದಕ ವಸ್ತುಗಳು ಬಳಕೆ ಹೇಗೆ ....

337

Read More...

Kenda.Reviews

Friday, July 26, 2024

ಮನುಷ್ಯನ ಗುಣ ಸಾರುವ ಕೆಂಡ****       ನಮ್ಮ, ನಿಮ್ಮ ನಡುವೆ ಸಮಾಜದಲ್ಲಿ ನಡೆಯುತ್ತಿರುವ ಒಂದಷ್ಟು ಘಟನೆಗಳನ್ನು ಹೆಕ್ಕಿಕೊಂಡು ಅದಕ್ಕೆ ಚಿತ್ರರೂಪ ಕೊಟ್ಟು ‘ಕೆಂಡ’ ಸಿನಿಮಾವಾಗಿದೆ. ಮಧ್ಯಮ ವರ್ಗದ ಜೀವನದ ತೊಳಲಾಟ, ಬುದ್ದಿಜೀವಿಗಳ ಕೂಗು, ಮಾಧ್ಯಮಗಳ ರಾಜಕೀಯ, ರೈತರ ಕಷ್ಟಗಳು, ರಾಜಕಾರಣಿಗಳ ನಾಟಕ, ಹೀಗೆ ಹತ್ತಾರು ವಿಚಾರಗಳನ್ನು ತೆರೆಯ ಮೇಲೆ ತೋರಿಸಲಾಗಿದೆ. ಮನುಷ್ಯನಿಗೆ ಅಂತಸ್ತು, ಹಣ, ಅಧಿಕಾರ ಬಂದಾಗ ಸಹಜವಾಗಿ ಹೆಣ್ಣಿನ ಮೇಲೆ ಆಕರ್ಷಣೆ ಬರುತ್ತದೆ. ಇದನ್ನು ಪಡೆಯಲು ಸಂಬಂಧಗಳಿಂದ ದೂರವಾಗುತ್ತಾನೆ. ಅಂತಿಮವಾಗಿ ಒಬ್ಬಂಟಿ ಬದುಕು ನಡೆಸುತ್ತಾ ಜೀವನದ ದೃಷ್ಟಿಕೋನವನ್ನೆ ಬದಲಾಯಿಸಿಕೊಳ್ಳಲು ಪ್ರಯತ್ನಸಿದಾಗ ಏನೇನು ....

286

Read More...

Raktaksha.Reviews

Friday, July 26, 2024

ಸೇಡಿಗೆ ಸೇಡು ರಕ್ತಾಕ್ಷ****

     ಮನುಷ್ಯ ತಪ್ಪು ಮಾಡಿದಾಗ ದೇವರು ಶಿಕ್ಷೆ ಕೊಡುತ್ತಾನೆ ಅಂತ ಹೇಳಲಾಗದು. ಕೆಲವೊಮ್ಮೆ ದಾನವರು ಮಾಡಬೇಕು ಎಂದು ಬಿಟ್ಟಿರುತ್ತಾನೆ. ಅಂತಹುದೆ ಕೆಲಸವನ್ನು  ‘ರಕ್ತಾಕ್ಷ’ ಚಿತ್ರದಲ್ಲಿ ಕಥಾನಾಯಕ ಡೈಲಾಗ್ ಹೇಳುತ್ತಾ ಒಬ್ಬರ ಹಿಂದೊಬ್ಬರಂತೆ ಮೂವರು ಹೆಣ್ಣುಮಕ್ಕಳನ್ನು ಕೊಲ್ಲುತ್ತಾನೆ. ಇಂತಹ ಸಾಲು ಸಾಲು ಹೆಣಗಳನ್ನು ಉರುಳಿಸಲು ಕಾರಣವಾದರೂ ಏನು? ಅವನಿಗೆ ಕಾನೂನು ಕಂಟಕ ಬರುತ್ತದಾ?

      ಡ್ರಗ್ಸ್ ಹಾಗೂ ಮಾನವ ಕಳ್ಳಸಾಗಣೆ, ಮುಗ್ದ ಹುಡುಗರನ್ನು ಅಪಹರಿಸಿ, ಅವರಿಗೆ ಲಿಂಗ ಪರಿವರ್ತನೆ ಮಾಡಿ ವೇಶ್ಯಾವಾಟಿಕೆಗೆ ನೂಕುವ ತಂಡದ ವಿರುದ್ದ ಸೇಡು ತೀರಿಸಿಕೊಳ್ಳುವುದು. 

272

Read More...

Hejjaru.Reviews

Friday, July 19, 2024

ಎರಡು ಕಾಲಘಟ್ಟಗಳ ಹೆಜ್ಜಾರು****       ಒಬ್ಬರ ಜೀವನದಲ್ಲಿ ನಡೆದ ಘಟನೆಯು ಮತ್ತೋಬ್ಬರ ಬದುಕಿನಲ್ಲಿ ಅದೇ ರೀತಿ ನಡೆಯುತ್ತೆ ಎಂಬ ಅಂಶಗಳನ್ನು ಇಟ್ಟುಕೊಂಡು ನಿರ್ಮಾಣವಾದ ಚಿತ್ರ ‘ಹೆಜ್ಜಾರು’.  ೧೯೬೫ರ ಸಮಯದಲ್ಲಿ ಹೆಜ್ಜಾರು ಎಂಬ ಮೈಲಿಗಲ್ಲಿನ ಬಳಿ ಅಪಘಾತವೊಂದು ನಡೆಯುತ್ತದೆ. ಠಾಣೆಯಿಂದ ತಪ್ಪಿಸಿಕೊಂಡ ಖೈದಿಯನ್ನು ಹಿಡಿಯಲು ಹೋದ ಮೂವರು ಪೋಲೀಸರು ಅಪಘಾತದಲ್ಲಿ ಮರಣ ಹೊಂದಿರುತ್ತಾರೆ. ಕಟ್ ಮಾಡಿದರೆ ೩೦ ವರ್ಷ ಅಂದರೆ ೧೯೯೫ರಲ್ಲಿ ಅದೇ ಜಾಗದಲ್ಲಿ ಕಳ್ಳನನ್ನು ಅಟ್ಟಿಸಿಕೊಂಡು ಬಂದ ಪೋಲೀಸರು ಮತ್ತು ಕಳ್ಳ ಸತ್ತು ಹೋಗಿರುತ್ತಾರೆ. ಹೀಗೆ ಎರಡು ಕಾಲಘಟ್ಟದಲ್ಲಿ ಮರಣ ಹೊಂದಿದ ಮಗ ಭಗತ್. ಮುಂದೆ ಆತನು ವಿಚಿತ್ರ ಖಾಯಿಲೆಯಿಂದ ....

247

Read More...

Vidhyarthi Vidyarthiniyare.Reviews

Friday, July 19, 2024

  ಪೋಷಕರ ಜವಬ್ದಾರಿ ಹಾಗೂ ವಿದ್ಯಾರ್ಥಿಗಳ ಭವಿಷ್ಯ       ಪ್ರೌಡಶಾಲೆ ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಗಮನ ಹರಿಸದೆ, ಬೇರೆ ಹವ್ಯಾಸಗಳ ಕಡೆಗೆ ಆಕರ್ಷಿತರಾದಾಗ ಎದುರಾಗವ ತೊಂದರೆಗಳು, ಶಾಲೆಯಲ್ಲಿ ನಡೆಯುವ ರ‍್ಯಾಗಿಂಗ್, ತುಂಟಾಟ, ನೋವು ನಲಿವಿನ ಸುತ್ತ ಸಾರುವ ಅಂಶಗಳನ್ನು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದಲ್ಲಿ ಉತ್ತಮವಾಗಿ ತೋರಿಸಲಾಗಿದೆ. ಶ್ರೀಮಂತ ಮಕ್ಕಳೇ ಇರುವ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಶಾರದ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಶಾಲಾ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಮಂಡಳಿಯು ಶಿಕ್ಷಣವನ್ನು ಮುಂದುವರೆಸುತ್ತದೆ. ಹೀಗೆ ....

258

Read More...

Back Benchers.Reviews

Friday, July 19, 2024

ಬ್ಯಾಕ್ ಬೆಂಚರ್ಸ್ ಹಾಡುಗಳು       ಯಾವುದೇ ಶಾಲೆ, ಕಾಲೇಜುಗಳಲ್ಲಿ ಕೊನೆ ಬೆಂಚಿನ ಹುಡುಗರು ಅಂದರೆ ಶುದ್ದ ತರಲೆಗಳು, ಅವರಿಗೆ ಪ್ರಾಪಂಚಿಕ ಜ್ಘಾನ ಇರುವುದಿಲ್ಲೆವೆಂದು ಹೇಳುತ್ತಾರೆ. ಅದೇ ಮೊದಲ ಬೆಂಚಿನ ಹುಡುಗರು ಬುದ್ದಿವಂತರಾಗಿದ್ದರೂ ಪ್ರಪಂಚ ಜ್ಘಾನ ತಿಳಿದಿರುವುದಿಲ್ಲ.  ಇಂತಹುದೇ ಅಂಶಗಳನ್ನು ಬಳಸಿಕೊಂಡು  ‘ಬ್ಯಾಕ್ ಬೆಂಚರ‍್ಸ್’ ಚಿತ್ರದಲ್ಲಿ ಹೇಳಲಾಗಿದೆ. ನಾಲ್ಕು ಮಂದಿ ಹುಡುಗರ ತುಂಟಾಟ, ಪ್ರೇಮ ಕಾಮ ತರಲೆಗಳು ಮಿತಿ ಮೀರಿರುತ್ತದೆ. ಅತಿಯಾದರೆ ಅಮೃತವು ವಿಷವಾಗುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಅದರಂತೆ ಕುಡಿತದ ಅಮಲಿನಲ್ಲಿದ್ದ ಹುಡುಗರು ಮಾಡುವ ಅವಾಂತರದಿಂದ ಪೋಲೀಸರ ವಶವಾಗುತ್ತಾರೆ. ವಿದ್ಯಾರ್ಥಿಗಳು ಅಂದ ....

235

Read More...

Not Out.Film Reviews

Friday, July 19, 2024

  ನಾಟ್ ಔಟ್: ನಿಮಗೆ ಇಷ್ಟವಾಗುತ್ತೆ ನೋ ಡೌಟ್!   ಚಿತ್ರ: ನಾಟ್ ಔಟ್ ನಿರ್ದೇಶನ: ಅಂಬರೀಷ್ ನಿರ್ಮಾಣ: ರವಿಕುಮಾರ್, ಶಂಶುದ್ದೀನ್ ತಾರಾಗಣ: ಅಜಯ್ ಪೃಥ್ವಿ, ರಚನಾ ಇಂದರ್, ಪಿ ರವಿಶಂಕರ್ ಮೊದಲಾದವರು   ಒಂಟಿಕೊಪ್ಪಲು ದೇವರಾಜ ಕುಖ್ಯಾತ ಬಡ್ಡಿ ವ್ಯಾಪಾರಿ. ಈತನ ದಂಧೆಗೆ ಬಲಿಯಾದವರಲ್ಲಿ ಅಜಯನೂ ಒಬ್ಬ. ಸ್ವಂತ ಆ್ಯಂಬುಲೆನ್ಸ್ ಕೊಳ್ಳಲು ದೇವರಾಜನ ಬಳಿ 10 ಲಕ್ಷ ರೂಪಾಯಿ ಸಾಲ ಮಾಡಿರುತ್ತಾನೆ. ಆದರೆ ದೇವರಾಜನ‌ ಕಡೆಯವರೇ ಅಜಯ್ ಆ್ಯಂಬುಲೆನ್ಸ್ ಕದ್ದು ಬಡ್ಡಿ, ಅಸಲಿಗಾಗಿ ಪೀಡಿಸುತ್ತಾ ಇರುತ್ತಾರೆ.   ಆ್ಯಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುವ ಅಜಯ್, ನರ್ಸ್ ಒಬ್ಬರನ್ನು ಪ್ರೀತಿಸುತ್ತಾ ಇರುತ್ತಾನೆ. ಅವರಿಬ್ಬರೂ ಇನ್ನೇನು ವಿದೇಶದಲ್ಲಿ ಕೆಲಸಕ್ಕೆ‌ ....

293

Read More...

Kaagada.Reviews

Wednesday, July 03, 2024

 

ಮನಗೆಲ್ಲುವ ಪ್ರೇಮದ ಕಾಗದ

 

ಚಿತ್ರ: ಕಾಗದ

ನಿರ್ದೇಶಕ: ರಂಜಿತ್ ಕುಮಾರ್ ಗೌಡ

ತಾರಾಗಣ: ಆದಿತ್ಯ ಕೆರೇಗೌಡ, ಅಂಕಿತಾ ಜಯರಾಮ್

 

 

ಎರಡು ಧರ್ಮಗಳ ಯುವ ಪ್ರೇಮಿಗಳ ನಡುವಿನ ಪ್ರೇಮಕತೆಯ ಚಿತ್ರಗಳು ಸಾಕಷ್ಟು ಬಂದಿವೆ. ಅಂಥದೇ ಒಂದು ವಿಷಯದೊಂದಿಗೆ ಬಂದರೂ ಚಿತ್ರಕಲೆಯಲ್ಲಿ ವಿಭಿನ್ನತೆ ತೋರಿಸುವ ಪ್ರಯತ್ನದಲ್ಲಿ ಮೂಡಿರುವ ಸಿನಿಮಾವೇ ಕಾಗದ.

 

ಚಿತ್ರದ ನಾಯಕ ಕಾಲೇಜಿನಲ್ಲಿ ಕಲಿಯುವ ಗೌಡರ ಹುಡುಗ. ನಾಯಕಿ ಆತನ ಜತೆಗೆ ಕಲಿಯುವ ಮುಸ್ಲಿಂ ವಿದ್ಯಾರ್ಥಿನಿ. ಹುಡುಗನ ಊರಿಗೆ ಹೊಸದಾಗಿ ಬರುವ ಹುಡುಗಿಗೆ ಕಾಲೇಜಲ್ಲೇ ಈತನ ಪರಿಚಯವಾಗಿರುತ್ತದೆ. ಓದಿನ ಆಸಕ್ತಿ ಇವರನ್ನು ಪ್ರೇಮಿಗಳನ್ನಾಗಿಸುತ್ತದೆ.

335

Read More...

Chilli Chicken.Reviews

Friday, June 21, 2024

   ಯುವಕರ ಚಿಲ್ಲಿ ಚಿಕನ್        ‘ಚಿಲ್ಲಿ ಚಿಕನ್’ ರುಚಿಯಾದಷ್ಟೇ ಚಿತ್ರ ನೋಡುವುದಕ್ಕೂ ಮಜಾ ಕೊಡುತ್ತದೆ. ಓಬೆಟ್, ಅಸ್ಸಾಂ ಪ್ರದೇಶಗಳಿಂದ ಯುವಕರು ಬೆಂಗಳೂರಿನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಯಾವುದೋ ಕಟ್ಟಡದ ಟರೇಸ್ ಮೇಲೆ ಬಾಡಿಗೆಯಲ್ಲಿ ವಾಸವಾಗಿದ್ದು, ಆಗಾಗ ರೀಲ್ಸ್ ಮಾಡುತ್ತಾ ಇದೇ ಜೀವನ ಅಂದುಕೊಂಡಿರುತ್ತಾರೆ. ಆಕಸ್ಮಿಕವಾಗಿ ಬರುವ  ಘಟನೆ ಇವರೆಲ್ಲರನ್ನು ಯೋಚನೆ ಮಾಡುವಂತೆ ಆಗುತ್ತದೆ. ಆ ನಂತರ ಹುಡುಗರ ಬಾಳಲ್ಲಿ  ಏನೆಲ್ಲಾ ಅವಘಡಗಳು ಸಂಭವಿಸುತ್ತವೆ. ಇದೆಲ್ಲಾವನ್ನು ಹೇಗೆ ಎದುರಿಸುತ್ತಾರೆ. ಅಂತಿಮವಾಗಿ ಸಪಲರಾಗುತ್ತಾರಾ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ನಿರ್ದೇಶಕ ಪೀತಕ್‌ಪ್ರಜೋಶ್ ....

273

Read More...

Sambavami Yuge Yuge.Reviews

Friday, June 21, 2024

ಗ್ರಾಮೀಣ ಭಾಗದ ಸಂಭವಾಮಿ ಯುಗೇ ಯುಗೇ        ವಿದ್ಯೆ, ಬದುಕು ಕಟ್ಟಿಕೊಳ್ಳಲು ಕಾರಣವಾದ ಊರಿನ ಜನರಿಗೆ ಮಗ ಸೇವೆ ಮಾಡಬೇಕೆಂದು ಆಸೆ ಪಡುವ ಅಮ್ಮನ ಕನಸಿಗೆ, ಅವನು ಪಟ್ಟಣ ಬಿಟ್ಟು ಹಳ್ಳಿಗೆ ಬಂದು ಜನರ ಕಷ್ಟಕ್ಕೆ ಸ್ಪಂದಿಸುತ್ತಾನೆ. ಆಗ ಅಲ್ಲಿನ ಊರಿನವರ ದ್ವೇಷಕ್ಕೂ ಕಾರಣನಾಗುತ್ತಾನೆ. ಮುಂದೆ ಚುನಾವಣೆಗೆ ನಿಂತು ಅಧ್ಯಕ್ಷಗಾದಿ ಅಲಂಕರಿಸುತ್ತಾನೆ. ಈತನ ಬೆಳವಣಿಗೆ ಬೇರೆಯವರಿಗೆ ಅಸೂಯೆ ಹುಟ್ಟುತ್ತದೆ. ಸರ್ಕಾರದಿಂದ ಬರೋ ಅನುದಾನವನ್ನು ಜನರಿಗೆ ತಲುಪುವಂತೆ ಮಾಡುವಾಗ, ಅದನ್ನು ಕಬಳಿಸುವವರಿಗೂ ಕಡಿವಾಣ ಹಾಕುತ್ತಾನೆ. ಒಂದಷ್ಟು ನುಂಗಣ್ಣಗಳೆಲ್ಲ ಸೇರಿ ಇವನ್ನು ಮಟ್ಟ ಹಾಕಲು ನಿರ್ಧರಿಸುತ್ತಾರೆ. ಇದರ ಮಧ್ಯೆ ....

270

Read More...

Love Li.Reviews

Friday, June 14, 2024

ಪ್ರೀತಿ ದ್ವೇಷ ಸಂಬಂಧಗಳ ವ್ಯಾಖ್ಯಾನ         ಆತ ಅನಾಥ ರೌಡಿ. ಯಾರಿಗೂ ಡೋಂಟ್‌ಕೇರ್ ಅನ್ನುವವನು. ಪ್ರೀತಿಯಲ್ಲಿ ಬಿದ್ದಾಗ ಎಲ್ಲವನ್ನು ಮರೆತು ಸಾತ್ವಿಕ ಜೀವನ ನಡೆಸಲು ತೀರ್ಮಾನಿಸುತ್ತಾನೆ. ಇದರ ಪ್ರತಿಫಲ ದಾಂಪತ್ಯ ಜೀವನದಲ್ಲಿ ಮಗುವೊಂದು ಸಾಕ್ಷಿಯಾಗುತ್ತದೆ. ಇಲ್ಲಿಯವರೆಗೂ ಕಥೆ ಒಂದು ರೂಪ ಪಡೆದುಕೊಂಡರೆ, ವಿರಾಮದ ನಂತರ ಏಡ್ಸ್, ಹೆಣ್ಣು ಮಕ್ಕಳ ಕಳ್ಳ ಸಾಗಣೆ ಸೇರಿದಂತೆ ಹಲವಾರು ಮಾಫಿಯಾಗಳ ಬಗ್ಗೆ ಸನ್ನಿವೇಶಗಳು ತೆರೆದುಕೊಳ್ಳುತ್ತದೆ. ಇದರ ಮಧ್ಯೆ ಪತ್ನಿಯ ಖಾಯಿಲೆಯಿಂದ ಆಕೆಯನ್ನು ಉಳಿಸಿಕೊಳ್ಳಲು ಹೇಗೆಲ್ಲಾ ಹೋರಾಡುತ್ತಾನೆ ಎನ್ನುವ ಗಂಭೀರ ದೃಶ್ಯಗಳು ಬರುತ್ತದೆ. ಕ್ರೂರತನ, ಲವ್, ಬೆಸುಗೆ, ಬಾಂಧವ್ಯ ಹೀಗೆ ಆಯಾ ....

274

Read More...

Chef Chidambambara.Reviews

Friday, June 14, 2024

ಡಾರ್ಕ್ ಕಾಮಿಡಿ ಚೆಫ್ ಚಿದಂಬರ

      ‘ಚೆಫ್ ಚಿದಂಬರ’ ಚಿತ್ರವು ಡಾರ್ಕ್ ಕಾಮಿಡಿ, ಥ್ರಿಲ್ಲರ್ ಕಥೆಯನ್ನು ಹೇಳ ಹೊರಟಿದೆ. ಕಥಾನಾಯಕ ಚಿದಂಬರನಿಗೆ ರುಚಿಯಾದ ಅಡುಗೆಯನ್ನು ಗ್ರಾಹಕರಿಗೆ ನೀಡಬೇಕು. ಅದಕ್ಕಾಗಿ ಶ್ರಮಿಸುತ್ತಾ ತನ್ನದೆ ಹಾದಯಲ್ಲಿ ಸಾಗುತ್ತಿದ್ದವನಿಗೆ ಸಡನ್ ಆಗಿ ಶಾಕ್ ಆಗುವಂತಹ ಘಟನೆ ನಡೆಯುತ್ತದೆ. ಇದರಿಂದ ಅವನಿಗೆ ದೊಡ್ಡ ತಲೆಬಿಸಿ ಶುರುವಾಗುತ್ತದೆ. ಇದೆಲ್ಲಾವನ್ನು ತನ್ನ ಬುದ್ದಿವಂತಿಕೆಯಿಂದ ಹೇಗೆ ನಿಭಾಯಿಸುತ್ತಾನೆ. ಆರೋಪದಿಂದ ಮುಕ್ತನಾಗಿ ಹೊರ ಬರುತ್ತಾನಾ?. ಇನ್ನೊಬ್ಬರ ಆಟದ ದಾಳವಾದಾಗ ಆತನ ಪರಿಪಾಟಲು ಏನು ಎಂಬುದು ಕುತೂಹಲಕಾರಿಯಾಗಿದೆ.

259

Read More...

Kotee.Film Reviews

Wednesday, June 12, 2024

  ಪುಣ್ಯ ಕೋಟಿಯ ಕತೆ ಇದು!   ಚಿತ್ರ: ಕೋಟಿ ನಿರ್ದೇಶನ: ಪರಮ್ ನಿರ್ಮಾಣ: ಜಿಯೋ ಸಿನಿಮಾಸ್ ತಾರಾಗಣ: ಧನಂಜಯ,ಮೋಕ್ಷಾ ಕುಶಾಲ್   ಇದು ಪುಣ್ಯಕೋಟಿಯ ಕತೆ ಹೌದು. ಆದರೆ ಕ್ಲೈಮ್ಯಾಕ್ಸ್ ನಲ್ಲಿ ಹಸುವೇ ಹುಲಿಯಾಗುತ್ತದೆ.   ಕೋಟಿ ಚಿತ್ರದ ನಾಯಕನ ಹೆಸರು. ತಾಯಿ, ತಮ್ಮ ಮತ್ತು ತಂಗಿಯ ಜತೆಗಿನ ಬದುಕು. ಮಧ್ಯಮ ವರ್ಗದ ಕನಸುಗಳು. ಆದರೆ ಸಾಧನೆಗೆ ನೂರಾರು ಸಂಕಷ್ಟ. ಅಡ್ಡದಾರಿಯಲ್ಲಿ ದುಡ್ಡು ಮಾಡಲು ಅವಕಾಶ ನೀಡಲು ಸಿದ್ಧನಾಗಿರುವ ದೀನು ಸಾಹುಕಾರ. ಆದರೆ ಅಂಥದೊಂದು ದಾರಿಯೇ ತನಗೆ ಬೇಕಿಲ್ಲವೆನ್ನುವ ಗಟ್ಟಿ ನಿರ್ಧಾರದಲ್ಲಿರುವ ಕೋಟಿ. ಕೊನೆಗೆ ಪರಿಸ್ಥಿತಿ ಯಾರಿಗೆ  ಗೆಲುವು ತಂದುಕೊಡುತ್ತದೆ ಎನ್ನುವುದೇ ಚಿತ್ರದ ಕತೆ.     ಕೋಟಿಯಾಗಿ ಧನಂಜಯ್ ....

259

Read More...

Evidence.Reviews

Friday, May 24, 2024

ಪ್ರೀತಿ ಮತ್ತು ದ್ವೇಷ ಸಮ್ಮಿಲನ ****        ಗೆಳೆಯರಿಬ್ಬರ ನಡುವೆ ಚೆಂದದ ಹುಡುಗಿ ಎಂಟ್ರಿಯಾದರೆ ಏನೆಲ್ಲ ಘಟನೆಗಳು ನಡೆಯುತ್ತವೆ ಎಂಬುದನ್ನು ಸೆಸ್ಪನ್ಸ್, ಥ್ರಿಲ್ಲರ್ ರೂಪದಲ್ಲಿ ‘ಎವಿಡೆನ್ಸ್’ ಚಿತ್ರದಲ್ಲಿ ತೋರಿಸಲಾಗಿದೆ. ಪೋಲೀಸ್ ಕೇಸ್‌ದಲ್ಲಿ ಅದೊಂದು ಆತ್ನಹತ್ಯೆ ಅಂತ ದಾಖಲು ಆಗಿರುತ್ತದೆ. ಮುಂದೆ ಅದು ಕೊಲೆಯೂ ಆಗಿರಬಹುದು ಎಂಬ ಅನುಮಾನ ಬಂದಾಗ ತನಿಖಾಧಿಕಾರಿಗಳು ಆರೋಪಿಯನ್ನು ಯಾವ ರೀತಿ ಇಂಟರಾಗೇಷನ್ ಮಾಡಿ ಸಾಕ್ಷ್ಯಾಧಾರಗಳನ್ನು ಹೇಗೆ ಹೊರ ತೆಗೆಯುತ್ತಾರೆ. ವ್ಯಕ್ತಿಯೊಬ್ಬನಿಗೆ ಸಿಗುವ ಬ್ಯಾಗ್, ಅದರಲ್ಲಿದ್ದ ಕ್ಯಾಮೆರಾ, ವಿಡಿಯೋ ಇವೆಲ್ಲವು ಸಿಕ್ಕು ಕಥೆಯು ತೆರೆದುಕೊಳ್ಳುತ್ತದೆ. ಆದರೆ ಕೊಲೆಯನ್ನು ....

312

Read More...

The Judgement.Reviews

Friday, May 24, 2024

ರವಿಚಂದ್ರನ್ ಜಡ್ಜ್‌ಮೆಂಟ್****        ‘ದ ಜಡ್ಜ್‌ಮೆಂಟ್’ ಸಿನಿಮಾವು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನಡೆಯುವ ಕೆಲ ಬೆಳವಣಿಗೆಗಳು ಮತ್ತು ಬದಲಾವಣೆಗಳ ಸುತ್ತ ಚಿತ್ರವು ಸಾಗುತ್ತದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಗೋವಿಂದ್ ಸಾಮಾಜಿಕ ಹೋರಾಟಗಾರ್ತಿಯೊಬ್ಬಳ ಕೊಲೆಯ ಕೇಸಲ್ಲಿ ಹೇಗೆ ಮೋಸ ಹೋಗುತ್ತಾರೆ. ಆರೋಪಿ ತಪ್ಪಿತಸ್ಥನೆಂದು ಭಾವಿಸಿ ಆತನಿಗೆ ಶಿಕ್ಷೆ ಕೊಡಿಸಲು ಮುಂದಾಗುತ್ತಾರೆ. ಮುಂದೆ ಆತ ನಿರಪರಾಧಿ ಎಂದು ತಿಳಿದು ಶಿಕ್ಷೆಯಿಂದ ತಪ್ಪಿಸಲು ಯಾವ ರೀತಿ ವಾದ ಮಂಡಿಸುತ್ತಾರೆ. ಮುಂದೆ ಏನೆಲ್ಲಾ ನಡೆಯಿತು. ನಿರಪರಾಧಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾದರೇ? ನ್ಯಾಯಕ್ಕಾಗಿ ಹೋರಾಟ ನಡೆಸುವ ಹಲವಾರು ಕೋರ್ಟ್ ....

285

Read More...

4N6.Film Reviews

Friday, May 10, 2024

  ದುಷ್ಟರ ಬೆನ್ನತ್ತುವ ದಿಟ್ಟ ಹುಡುಗಿ!   ಚಿತ್ರ: 4ಎನ್ 6 ನಿರ್ದೇಶಕ: ದರ್ಶನ್ ಶ್ರೀನಿವಾಸ್ ನಿರ್ಮಾಣ: ಸಾಯಿ ಪ್ರೀತಿ ತಾರಾಗಣ: ರಚನಾ ಇಂದರ್, ಭವಾನಿ ಪ್ರಕಾಶ್, ನವೀನ್ ಕುಮಾರ್, ಆದ್ಯ ಶೇಖರ್, ಅರ್ಜುನ್, ಆಶಿತಾ, ಸೌರವ್ ಮತ್ತಿತರರು.   ಕನ್ನಡದಲ್ಲಿ ಬಂದ  ಸಸ್ಪೆನ್ಸ್ ಥ್ರಿಲ್ಲರ್ , ಮರ್ಡರ್‌ಮಿಸ್ಟ್ರಿ  ಸಿನಿಮಾಗಳ ಸಾಲಿಗೆ ಈಗ  4ಎನ್6 ಸೇರಿದೆ. ಇದು  ಕೊಲೆಗಳ ಸುತ್ತ ಕಥೆ ನಡೆಯುತ್ತೆ. ಕಥೆಯ ವಿಭಿನ್ನವಾಗಿದೆ. ನಿರ್ದೇಶಕರ  ಪ್ರಯತ್ನವೂ ಚೆನ್ನಾಗಿದೆ., ಚಿತ್ರಕಥೆ ಮತ್ತು ನಿರೂಪಣೆ  ವಿಶೇಷ ಎನಿಸುತ್ತದೆ.    ಕಥೆಯಲ್ಲಿ  ಒಂದಷ್ಟು ಕೊಲೆಗಳು ನಡೆಯುತ್ತವೆ.   ಯಾಕೆ, ಯಾರು ಮಾಡುತ್ತಾರೆ ಎಂಬುದು ಕಥೆ. ಆ ಕೊಲೆಯ ರಹಸ್ಯ ಬೆನ್ನತ್ತಿ ....

291

Read More...

Grey Games.Reviews

Friday, May 10, 2024

  ಚಿಂತನೆಗೆ ಹಚ್ಚಿ ಮನಗೆಲ್ಲುವ ಗೇಮ್ಸ್   ಚಿತ್ರ: ಗ್ರೇ ಗೇಮ್ಸ್ ತಾರಾಗಣ: ವಿಜಯರಾಘವೇಂದ್ರ, ಭಾವನಾ ರಾವ್ ಮತ್ತು ಇತರರು ನಿರ್ದೇಶನ: ಗಂಗಾಧರ ಸಾಲಿಮಠ ನಿರ್ಮಾಣ: ಆನಂದ್ ಮುಗದ್   ಗ್ರೇ ಗೇಮ್ಸ್ ಹೆಸರೇ ಹೇಳುವಂತೆ  ಆನ್ಲೈನ್ ವಿಡಿಯೋ ಗೇಮ್ ಸುತ್ತ ನಡೆಯುವ ಕತೆಯನ್ನು ಹೇಳುವ ಚಿತ್ರ.   ಆನ್ಲೈನ್ ನಲ್ಲಿ ಗೇಮ್ಸ್ ಆಡಿ ಅದರಲ್ಲೇ ಅಸ್ವಸ್ಥನಂತೆ ಕಾಣಿಸುವ ಹುಡುಗ ಅಭಿ.‌ಆತನ   ಮಾನಸಿಕ ಆರೋಗ್ಯದ ಸುಧಾರಣೆಗಾಗಿ ಪ್ರಯತ್ನಿಸುವ ತಂದೆ ತಾಯಿಗೆ ದೇವರಂತೆ ಸಿಗುವ ಮನೋವೈದ್ಯ ರಾಮ್. ಈ ವೈದ್ಯ ತನ್ನ ಚಿಕಿತ್ಸೆಯ ಮೂಲಕ‌ ಅಭಿಯನ್ನು ಸುಧಾರಿಸುವ ಜತೆಗೆ ಆತನಿಗೆ ಸಂಬಂಧಿಸಿದ ಕೊಲೆ ಪ್ರಕರಣವೊಂದರ ಅಪರಾಧಿಯನ್ನು ಪತ್ತೆ ಮಾಡುತ್ತಾನೆ. ಇದು ಹೇಗೆ ....

312

Read More...

Kangroo.Reviews

Friday, May 03, 2024

ಸಸ್ಪೆನ್ಸ್ ಥ್ರಿಲ್ಲರ್ ಕಾಂಗರೂ****       ಕಾಂಗರೂ ಮೃದು ಸ್ವಭಾವದ ಪ್ರಾಣಿ. ಅದು ಯಾರ ತಂಟೆಗೂ ಹೋಗುವುದಿಲ್ಲ. ಆದರೆ ತನ್ನ ಮಕ್ಕಳ ತಂಟೆಗೆ ಯಾರಾದರೂ ಬಂದರೆ ಮಾತ್ರ ಅವರನ್ನು ಸುಮ್ಮನೆ ಬಿಡುವುದಿಲ್ಲ. ಇಂತಹುದೆ ಅಂಶಗಳನ್ನು ಬಳಸಿಕೊಂಡು ‘ಕಾಂಗರೂ’ ಚಿತ್ರದಲ್ಲಿ ಹೇಳಲಾಗಿದೆ. ಇಡೀ ಸಿನಿಮಾ ಚಿಕ್ಕಮಗಳೂರಿನ ಆಂಟನಿ ಕಾಟೇಜ್ ಅತಿಥಿ ಗೃಹದಲ್ಲಿ ನಡೆಯುತ್ತದೆ. ಅಲ್ಲಿಗೆ ವರ್ಗಾವಣೆಯಾಗಿ ಬರುವ ಪೋಲೀಸ್ ಅಧಿಕಾರಿ ಆರಂಭದಿಂದಲೇ ಅನೇಕ ಛಾಲೆಂಜ್‌ಗಳನ್ನು ಎದುರಿಸಬೇಕಾಗುತ್ತದೆ. ಈತನ ಅಣ್ಣ ಗೆಸ್ಟ್‌ಹೌಸ್‌ನಲ್ಲಿ ಆತ್ನಹತ್ಯೆ ಮಾಡಿಕೊಂಡಿದ್ದು, ಆತನೇ ದೆವ್ವವಾಗಿ ಎಲ್ಲರನ್ನು ಹೆದರಿಸುತ್ತಾ, ಅಲ್ಲಿಗೆ ಬರುವವರನ್ನು ಓಡಿ ....

275

Read More...

SCAM 1770.Reviews

Friday, April 12, 2024

ಶಿಕ್ಷಣ ವ್ಯವಸ್ಥೆ ಕುರಿತಾದ Sಅಂಒ  ೧೭೭೦       ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಮಹತ್ವದ ಪಾತ್ರವಹಿಸುತ್ತದೆ. ಆದರೆ ಪ್ರಸ್ತುತ ಶಿಕ್ಷಣದಲ್ಲೇ ಸಾಕಷ್ಟು ಅವ್ಯವಹಾರಗಳು ನಡೆಯುತ್ತವೆ. ವಿದ್ಯಾಭ್ಯಾಸ ಇಂದು ಬಡವರಿಗೆ  ಹಾಗೂ ಮಧ್ಯಮವರ್ಗದವರಿಗೆ ದುಬಾರಿಯಾಗಿದೆ. ಡಾಕ್ಟರ್, ಇಂಜಿನಿಯರ್ ಆಗೋ ಕನಸು ಹೊತ್ತು ನೀಟ್, ಸಿಇಟಿ  ಪರೀಕ್ಷೆ ಬರೆದು ಉಜ್ವಲ ಭವಿಷ್ಯದ ಆಸೆಗಳನ್ನು ಇಟ್ಟುಕೊಂಡಿರುವ ವಿದ್ಯಾರ್ಥಿಗಳ ಜೀವನದಲ್ಲಿ ಆಗೋ ಏರುಪೇರುಗಳು, ಮಧ್ಯವರ್ತಿಗಳ ಹಾವಳಿ, ಕೋಚಿಂಗ್ ಸೆಂಟರ್‌ಗಳು ನಡೆಸೋ ಅವ್ಯವಹಾರಗಳನ್ನು ಸೂಕ್ಷವಾಗಿ ಹೇಳುವ ಸಿನಿಮಾ ‘Sಅಂಒ ೧೭೭೦’ ಆಗಿದೆ.  ನಿರ್ದೇಶಕ ....

309

Read More...

Appa I Love You.Reviews

Friday, April 12, 2024

ಅಪ್ಪನ ಬೆಲೆ ತಿಳಿಯಲು ಚಿತ್ರ ನೋಡಬೇಕು ****       ಚಿಕ್ಕಂದಿನಿಂದಲೂ ತಮ್ಮ ಮಕ್ಕಳನ್ನು ಕಣ್ಣಲ್ಲಿ ಕಣ್ಣು ಇಟ್ಟುಕೊಂಡು ನೋಡಿಕೊಳ್ಳುವ ಅಪ್ಪ-ಅಮ್ಮನಿಗೆ ಬೆಳೆದು ದೊಡ್ಡವರಾದ ಮೇಲೆ ತಂದೆ ತಾಯಿ ಅಂತ ನೋಡದೆ ನಿರ್ಲಕ್ಷದಿಂದ ಕಾಣುವ ಕೆಟ್ಟ ಮಕ್ಕಳ ಕಥೆಯು ‘ಅಪ್ಪ ಐ ಲವ್ ಯು’ ಚಿತ್ರದ್ದಾಗಿದೆ. ಎಲ್ಲರ ಮನೆಯಲ್ಲಿ ನಡೆಯುವ ಘಟನೆಗಳನ್ನು ಬಳಸಿಕೊಳ್ಳಲಾಗಿದೆ. ಸಕರಾತ್ಮಕ ಮತ್ತು ನಕರಾತ್ಮಕ ಗುಣಗಳಿರುವ ಮಕ್ಕಳ ಕಾರಣದಿಂದ ಒಂದಷ್ಟು ಬದಲಾವಣೆಗಳು ಆಗುತ್ತದೆ. ಹೆಂಡತಿಯ ಮಾತು ಕೇಳಿ ದಾರಿ ತಪ್ಪಿದ ಮಗ ಏನಾಗುತ್ತಾನೆ. ಇಂತಹ ಅಂಶಗಳು ಸಾಕಷ್ಟು ಬಂದು ಹೋಗುತ್ತದೆ. ಸಂಸಾರದಲ್ಲಿ ಅಪ್ಪ ಎಷ್ಟು ಮುಖ್ಯ. ತಂದೆಯನ್ನು ....

354

Read More...

Night Curfew.Reviews

Friday, April 12, 2024

ಒಂದು ಹೆಣ ಮತ್ತು ರಾತ್ರಿಯ ಕಥನ        ಕರೋನ ಅವದಿಯಲ್ಲಿ ನಡೆದಂತ ಸತ್ಯ ಘಟನೆಯನ್ನು ‘ನೈಟ್ ಕರ್ಫ್ಯೂ’ ಚಿತ್ರದಲ್ಲಿ ಅದ್ಬುತವಾಗಿ ತೋರಿಸಲಾಗಿದೆ. ಆಸ್ಪತ್ರೆಗಳು, ರಾಜಕೀಯ ವ್ಯಕ್ತಿಗಳು ಇದೇ ಕಾರಣ ಇಟ್ಟುಕೊಂಡು ಕೋಟಿ ಕೋಟಿ ಲೂಟಿ ಮಾಡಿದ್ದರು. ಅದರಂತೆ ನಾಲ್ಕು ಜನರ ತಂಡವೊಂದು ರೋಗಿಯೊಬ್ಬಳನ್ನು ದೂರದ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಲು ಬರುತ್ತಾರೆ. ರಾತ್ರಿ ಪಹಳೆಯಲ್ಲಿ ಮಹಿಳಾ ವೈದ್ಯರುಗಳು ಇರುವುದನ್ನು ತಿಳಿದುಕೊಂಡು ಇಲ್ಲಿಗೆ ಬಂದಿರುತ್ತಾರೆ. ಪ್ರಾರಂಭದಲ್ಲಿ ಕರೋನ ರೋಗಿ ಎಂದುಕೊಂಡಿದ್ದ ವೈದ್ಯರುಗಳಿಗೆ ನಂತರ ಬೇರೆ ರೀತಿ ಇರಲಿದೆ ಅಂತ ಗೊತ್ತಾಗುತ್ತದೆ. ಮತ್ತೋಂದು ಕಡೆ ಬೀಗ ಮುರಿದು ಬಾರ್‌ನಲ್ಲಿ ....

310

Read More...

Marigold.Reviews

Friday, April 05, 2024

ಚಿನ್ನದ ಬಿಸ್ಕಟ್ ಮಾರುವ ಹುಡುಗರ ಕಥೆ ವ್ಯಥೆ        ‘ಮಾರಿ ಗೋಲ್ಡ್’ ಚಿತ್ರವು ನಿಜವಾದ ಬಂಗಾರದ ಬಿಸ್ಕೆಟ್ ಹಿಂದೆ ಬಿದ್ದವರ ಕಥೆಯಾಗಿದೆ. ಮೂವರು ಗೆಳೆಯರು ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತಾರೆ. ಅದರಲ್ಲಿ ಒಬ್ಬನು ದೊಡ್ಡದೊಂದು ಸ್ಕೆಚ್ ಹಾಕುತ್ತಾನೆ. ಸುಮಾರು ೨೦ ಕೋಟಿ ಬೆಲೆಬಾಳುವ ಬಿಸ್ಕೆಟ್ ಕದ್ದು ನೆಮ್ಮದಿಯಾಗಿರಬಹುದು ಎಂಬುದು ಆತನ ಲೆಕ್ಕಚಾರವಾಗಿರುತ್ತದೆ. ಇವರೊಂದಿಗೆ ಬಾರ್‌ದಲ್ಲಿ ಡ್ಯಾನ್ಸರ್ ಆಗಿದ್ದವಳು ಸೇರಿಕೊಳ್ಳುತ್ತಾಳೆ. ನಾಲ್ವರು ಅದನ್ನು ಕದ್ದ ಮೇಲೆ ಬದುಕಿನಲ್ಲಿ ಸೆಟ್ಲ್ ಆಗುತ್ತಾರಾ ಇಲ್ವಾ ಅನ್ನೋದನ್ನು ಸುಂದರವಾಗಿ ನಿರೂಪಿಸಲಾಗಿದೆ. ಡಿ ....

329

Read More...

Tharini.Film Reviews

Friday, March 29, 2024

ಕರುಳಕುಡಿ ರಕ್ಷಣೆಗೆ ಅಮ್ಮನ ಹೋರಾಟ

 ****      ಹೆಣ್ಣು ಭ್ರೂಣಹತ್ಯೆ ಮಾಡುವುದು ಅಪರಾಧವೆಂದು ಸರ್ಕಾರವು ಆದೇಶ ಹೊರಡಿಸಿದೆ. ಆದರೂ ಕೆಲವೊಂದು ಕಡೆ ಗುಟ್ಟಾಗಿ ಇದನ್ನು ಮಾಡುತ್ತಾ ಬಂದಿದ್ದಾರೆ. ಮುಂದುವರೆದ ಸಮಾಜದಲ್ಲಿ ಸಮಾನತೆಯ ವಿಚಾರದಲ್ಲಿ ಅಸಮಾನತೆ ಇದ್ದೇ ಇದೆ. ಹೆಣ್ಣನ್ನು ಭಾರತಮಾತೆ ಹೋಲಿಸಿದರೂ, ಅವಳಿಗೆ ಶೋಷಣೆ ಆಗುತ್ತಿರುವುದನ್ನು ಕೇಳುತ್ತಿದ್ದೇವೆ. ಇಂತಹುದೇ ಅಂಶಗಳನ್ನು ಇಟ್ಟುಕೊಂಡು ‘ತಾರಿಣಿ’ ಎನ್ನುವ ಸಿನಿಮಾವೊಂದು ಬಂದಿದೆ.

568

Read More...

Yuva.Film Reviews

Friday, March 29, 2024

ಸಮಸ್ಯೆಗಳನ್ನು ಎದುರಿಸುವ ಯುವ-****

      ಡಾ.ರಾಜ್‌ಕುಮಾರ್ ಕುಟುಂಬದ ಹೊಸ ಕುಡಿ ಯುವರಾಜ್‌ಕುಮಾರ್ ಅಭಿನಯದ ‘ಯುವ’ ಚಿತ್ರ ಪಕ್ಕಾ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದೆ. ನಿರ್ದೇಶಕ ಸಂತೋಷ್ ಆನಂದರಾಮ್ ಯುವಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಥೆಯನ್ನು ಏಣೆದಿರುವುದು ತಿಳಿದುಬರುತ್ತದೆ. ಕಾಲೇಜಿನಲ್ಲಿ ಶಿಕ್ಷಣ ಒಂದು ಸಮಸ್ಯೆ ಅಂದುಕೊಂಡಿರುತ್ತಾನೆ. ವಿದ್ಯಾಭ್ಯಾಸ ಮುಗಿದ ತರುವಾಯ ವೈಯಕ್ತಿಕ ಜೀವನ ಇನ್ನೊಂದು ಸಮಸ್ಯೆ ಅಂತ ತಿಳಿಯುತ್ತದೆ. ಪ್ರತಿ ಚಿತ್ರದಲ್ಲಿ ಕಾಲೇಜು ಅಂದರೆ ಅಲ್ಲಿ ತುಂಟಾಟ, ತರಲೆ ಇರುತ್ತದೆ. ಆದರೆ ಇದನ್ನು ಪಕ್ಕಕ್ಕಿಟ್ಟು ಗ್ಯಾಂಗ್‌ವಾರ್‌ನಿಂದ ಚಿತ್ರವು ತೆರೆದುಕೊಳ್ಳುತ್ತದೆ. 

361

Read More...

Lineman.Reviews

Friday, March 22, 2024

ಮನಸುಗಳನ್ನು ಕದಡುವ ಲೈನ್ ಮ್ಯಾನ್       ಭಿನ್ನ ಆಲೋಚನೆ ಹಾಗೂ ಹೊಸ ಪ್ರಯತ್ನದೊಂದಿಗೆ ಬಿಡುಗಡೆಯಾಗಿರುವ ‘ಲೈನ್ ಮ್ಯಾನ್’ ಚಿತ್ರವು ಮಾನವಿಯತೆಯ ಅಗತ್ಯವನ್ನು ಪ್ರತಿಪಾದಿಸುತ್ತದೆ. ತಂತ್ರಜ್ಘಾನ ಬೆಳೆದಂತೆ ಇಂದು ಮೊಬೈಲ್, ಟಿವಿ, ಕಂಪ್ಯೂಟರ್, ಲೈಟ್,  ಫ್ಯಾನ್ ಹೀಗೆ ಇವುಗಳಲ್ಲಿ ಯಾವುದು ಇಲ್ಲದೆ ಹೋದರೆ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಅಂತಹುದೇ ಅಂಶಗಳನ್ನು ಬಳಸಿಕೊಂಡು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಹಳ್ಳಿಯಲ್ಲಿ ಸಾವಿರಾರು ಹೆರಿಗೆಗಳನ್ನು ಮಾಡಿಸಿದ ಸೂಲಗಿತ್ತಿ ಶಾರದಮ್ಮ ಎಂದರೆ ಎಲ್ಲರಿಗೂ ಗೌರವ. ಅವರ ನೂರನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಲ್ಲಿ ಆಚರಿಸಬೇಕೆಂದು ಅಲ್ಲಿನವರು ....

333

Read More...

Mehabooba.Reviews

Friday, March 15, 2024

ಹಿಂದು ಮುಸ್ಲಿಂ ಲವ್‌ಸ್ಟೋರಿ-****            ‘ಮೆಹಬೂಬ’ ಚಿತ್ರದ ಹೆಸರೇ ಹೇಳುವಂತೆ ಹಿಂದೂ ಮುಸ್ಲಿಂ ಪ್ರೇಮಕಥೆಯನ್ನು ಹೇಳಲಾಗಿದೆ. ಕಾರ್ತಿಕ್ ಮಾಜಿ ಶಾಸಕನ ಮಗ. ನಸ್ರಿಯಾಬಾನು ಕೃಷಿಯಲ್ಲಿ ಪಿಹೆಚ್‌ಡಿ ಮಾಡುತ್ತಿರುವ ವಿದ್ಯಾರ್ಥಿ. ಈಕೆ ಆತನಿಗಿಂತ ಎರಡು ವರ್ಷ ದೊಡ್ಡವಳು. ಇಬ್ಬರ ಪರಿಚಯ ವಿಶೇಷ ಸಂದರ್ಭದಲ್ಲಿ ಆಗುತ್ತದೆ. ಮತ್ತೋಂದು ಘಟನೆಯಲ್ಲಿ ಪ್ರೀತಿ ಹುಟ್ಟುತ್ತದೆ. ನೈಜ ಘಟನೆಯಾಗಿದ್ದರಿಂದ ಶೇಕಡಾ ಎಪ್ಪತ್ತರಷ್ಟು ದೃಶ್ಯಗಳು ಪೋಲೀಸ್ ಠಾಣೆಯಲ್ಲಿ ಕಾಣಿಸಿಕೊಳ್ಳುತ್ತದೆ. ಸ್ಟೇಷನ್‌ದಲ್ಲಿ ಇಂಥ ಕೇಸ್‌ಗಳನ್ನು ಹೇಗೆ ಹ್ಯಾಂಡಲ್ ಮಾಡುತ್ತಾರೆ. ಇದರ ಹಿಂದೆ ರಾಜಕಾರಣಿಗಳು ಎಂಟ್ರ ಆದಾಗ, ....

356

Read More...

Somu Sound Engineer.Reviews

Friday, March 15, 2024

ದುರಹಂಕಾರ ಹುಡುಗನ ಬದುಕು ಮತ್ತು ಬವಣೆ-****         ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸಿರುವ ವಿನೂತನ ಶೀರ್ಷಿಕೆ ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರವು ನೋಡುಗರು ಇಷ್ಟಪಡುವಂತಹ ಅಂಶಗಳು ಇರಲಿದೆ. ದುನಿಯಾ ಸೂರಿ ಗರಡಿಯಲ್ಲಿ ಪಳಗಿರುವ ಅಭಿ ಮೊದಲ ಪ್ರಯತ್ನದಲ್ಲಿಯೇ ಗೆಲುವನ್ನು ಕಂಡಿದ್ದಾರೆ. ಉತ್ತರ ಕರ್ನಾಟಕ ಕಥೆ ಹಾಗೂ ಭಾಷೆಯನ್ನು ಬಳಸಿರುವುದು ಕಂಡುಬರುತ್ತದೆ. ತಾನು ನಡೆದದ್ದೇ ದಾರಿ ಅಂತ ದುರಂಹಕಾರದಲ್ಲಿ ಮರೆಯುತ್ತಿದ್ದ ಹುಡುಗ, ಮುಂದೆ ಜೀವನದಲ್ಲಿ ಸಂಭವಿಸಿದ ಒಂದು ಘಟನೆಯಿಂದ ಆತನ ಬದುಕು ಹೇಗೆಲ್ಲಾ ತಿರುವು ಪಡೆದುಕೊಳ್ಳುತ್ತದೆ. ಜತೆಗೆ ಲವ್, ಸೆಂಟಿಮೆಂಟ್ ಬೆರೆಸಿ ರುಚಿಯಾದ ....

281

Read More...

Kerebete.Reviews

Friday, March 15, 2024

ಮಲೆನಾಡಿನಲ್ಲಿ ಒಂದು ಸುಂದರ ಪ್ರೇಮಕಥೆ-****        ಅಪ್ಪಟ ಮಲೆನಾಡ ಶೈಲಿಯಲ್ಲಿ ಸುಂದರ ಪ್ರೇಮಕಥೆಯನ್ನು ‘ಕರೆಬೇಟೆ’ ಸಿನಿಮಾದಲ್ಲಿ ತೋರಿಸಿದ್ದಾರೆ. ಮತ್ತೋಂದು ಕಡೆ ಕರಾವಳಿ ಭಾಗದಲ್ಲಿ ಮೀನುಶಿಕಾರಿ ಬದುಕಿನ ಭಾಗವಾಗಿರುತ್ತದೆ. ಇದಕ್ಕೆ ಪೂರಕವಾಗುವಂತೆ ಗ್ರಾಮೀಣ ಕ್ರೀಡೆಗಳು, ಜಾನಪದ ಸಂಸ್ಕ್ರತಿ, ಆಚಾರ ವಿಚಾರ, ಆಡಂಬರರಹಿತ ಜೀವನ. ಶ್ರೀಮಂತ, ಬಡವ ತಾರತಮ್ಯದ ನಡುವೆ ಜಾತಿ ಎಂಬ ಅಡ್ಡಗೋಡೆ. ಕಥಾನಾಯಕ ಅಮ್ಮನೊಂದಿಗೆ ಮರಕಡಿಯುವ ಕೆಲಸ ಮಾಡುತ್ತಿರುತ್ತಾನೆ. ನಂತರ ಅನೂಕೂಲಸ್ಥರ ಹುಡುಗಿಯ ಪ್ರೇಮಕ್ಕೆ ಸಿಲುಕುತ್ತಾನೆ. ಅವಳನ್ನು ಉಳಿಸಿಕೊಳ್ಳಲು ಎಲ್ಲರೊಂದಿಗೆ ಹೋರಾಡುತ್ತಾನೆ. ಮುಂದೆ ಈತನ ಶ್ರಮಕ್ಕೆ ಫಲ ....

327

Read More...

Karataka Damanaka.Reviews

Friday, March 08, 2024

ನೀರಿಲ್ಲದ ಊರಿನಲ್ಲಿ ಕುತಂತ್ರ ನರಿಗಳು *****

      ‘ಕರಟಕ ದಮನಕ’ ಚಿತ್ರದಲ್ಲಿ ಇಬ್ಬರು ಸ್ಟಾರ್ ನಟರು ಮತ್ತು ನಿರ್ದೇಶಕ ಇದ್ದಾರೆಂದು ಸುದ್ದಿ ಬಂದಾಗ ನಿರೀಕ್ಷೆ ಹೆಚ್ಚಾಗಿತ್ತು. ಅದರಂತೆ ಸಿನಿಮಾವು ಚೆನ್ನಾಗಿ ಮೂಡಿಬಂದಿದೆ. ಎರಡು ಕುತಂತ್ರ ನರಿಗಳ ಸುತ್ತ ಕಥೆಯು ಸಾಗುತ್ತದೆ. ಕಳ್ಳತನವನ್ನೇ ಜೀವನ ಅಂತ ತಿಳಿದುಕೊಂಡಿರುತ್ತಾರೆ. ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನೀರಿಗಾಗಿ ಜನರು ಕಷ್ಟಪಡುತ್ತಿರುತ್ತಾರೆ. ಹೀಗಿರುವಾಗ ಆ ಊರಿಗೆ ನಾಯಕರಿಬ್ಬರ ಪ್ರವೇಶ ಆಗುತ್ತದೆ.  ಇವರಿಬ್ಬರ ಕರಾಮತ್ತಿನಿಂದ ಊರಿನ ಜನರಿಗೆ ನೀರು ಸಿಗುತ್ತದಾ?  ಎನ್ನುವುದಕ್ಕೆ ಉತ್ತರ ಚಿತ್ರಮಂದಿರದಲ್ಲಿ ಸಿಗುತ್ತದೆ.

384

Read More...

For Regn.Reviews

Friday, February 23, 2024

ಸಂಬಂಧಗಳೇ ಫಾರ್ ರಿಜಿಸ್ಟ್ರೇಷನ್         ಇಂಜಿನಿಯರ್, ರಂಗಕರ್ಮಿ ನವೀನ್‌ದ್ವಾರಕನಾಥ್ ನಿರ್ದೇಶನ ಮಾಡಿರುವ   ‘ಫಾರ್ ರಿಜಿಸ್ಟ್ರೇಷನ್’ (ಈoಡಿ ಖegಟಿ.) ಎನ್ನುವ ಸಿನಿಮಾವು ಸಾಂಸರಿಕ ಕಾಮಿಡಿ ಕಥೆಯನ್ನು ಹೇಳಲಿದೆ. ವಾಹನ ನಮ್ಮದಾಗಬೇಕು ಅಂದರೆ ಅದಕ್ಕೆ ರಿಜಿಸ್ಟ್ರೇಷನ್ ಮಾಡಿಸಬೇಕು. ಹಾಗೆಯೇ ಒಂದು ಸಂಬಂಧ ನಮ್ಮದಾಗಬೇಕು ಅಂದರೆ ಏನು ಮಾಡಬೇಕು ಎಂಬುದನ್ನು ಸನ್ನಿವೇಶಗಳ ಮೂಲಕ ನೋಡುಗರಿಗೆ ಅರ್ಥವಾಗುವಂತೆ ತೋರಿಸಲಾಗಿದೆ. ಮದುವೆಯಾದ ನಂತರ ಇಬ್ಬರ ಸಂಬಂಧಗಳು ದೂರವಾಗುತ್ತಾ ಹೋಗುತ್ತದೆ. ಅದಕ್ಕೆ ಕಾರಣವೇನು? ಅಂತಿಮವಾಗಿ ಎಲ್ಲವು ಸರಿಹೋಗುತ್ತದಾ? ಇವೆಲ್ಲವೂ ಹೂ ಪೋಣಿಸಿದಂತೆ ಅಚ್ಚುಕಟ್ಟಾದ ದೃಶ್ಯಗಳು ಇರುವುದು ಪ್ಲಸ್ ....

344

Read More...

Matsyagandha.Reviews

Friday, February 23, 2024

ಮತ್ಸ್ಯಗಂಧ ಕಡಲ ತೀರದ ಕಥನ       ‘ಮತ್ಸ್ಯಗಂಧ’ ಸಿನಿಮಾವು ಸಮುದ್ರ ತೀರದ ಮೀನುಗಾರರ ಜೀವನದಲ್ಲಿ ನಡೆಯುವ ವಿಭಿನ್ನ ಕಥೆಯನ್ನು ಒಳಗೊಂಡಿದೆ. ಅದಕ್ಕೆ ಆ ಭಾಗದ ಸ್ಥಳಗಳಾದ ಕುಂದಾಪುರ, ಬೈಂದೂರು ಕಡೆಗಳಲ್ಲಿ ಚಿತ್ರೀಕರಸಿರುವುದು ಕಂಡುಬರುತ್ತದೆ. ವಿಷಯಗಳು ಅಲ್ಲದೆ ತಾಂತ್ರಿಕವಾಗಿ ದೃಶ್ಯಗಳು ಪರದೆ ಮೇಲೆ ಚೆನ್ನಾಗಿ ಮೂಡಿಬಂದಿದೆ.       ನಿರ್ದೇಶಕ ದೇವರಾಜಪೂಜಾರಿ ಕಥೆಗೆ ತಕ್ಕಂತೆ ಚಿತ್ರಕತೆಯನ್ನು ಸಿದ್ದಪಡಿಸಿ, ಹಾಗೆಯೇ ಅದನ್ನು ಪರದೆ ಮೇಲೆ ತೋರಿಸುವಲ್ಲಿ ಸಪಲರಾಗಿದ್ದಾರೆ. ಮೊದಲಬಾರಿ ಪೋಲೀಸ್ ಅಧಿಕಾರಿಯಾಗಿ ಪೃಥ್ವಿಅಂಬಾರ್ ಅಬ್ಬರಿಸಿದ್ದಾರೆ. ಫೈಟ್‌ದಲ್ಲಿ ಮಿಂಚಿದ್ದು, ಅಭಿನಯದಲ್ಲಿ ಸೈ ....

324

Read More...

Mr.Natwarlal.Reviews

Friday, February 23, 2024

ನಟೋರಿಯಸ್ ವಂಚಕ ಮಿ.ನಟ್ವರ್‌ಲಾಲ್         ಕ್ರೈಂ ಥ್ರಿಲ್ಲರ್ ಹಾಗೂ ಆಕ್ಷನ್ ಜಾನರ್ ಕಥೆ ‘ಮಿ.ನಟ್ವರ್‌ಲಾಲ್’ ಚಿತ್ರದ್ದಾಗಿದೆ.ಈ ಹಿಂದೆ ಅಯೋಧ್ಯಪುರ ನಿರ್ದೇಶನ ಮಾಡಿದ್ದ ವಿ.ಲವ ಆಕ್ಷನ್ ಕಟ್ ಹೇಳಿದ್ದಾರೆ. ನಮ್ಮ ಸುತ್ತಮುತ್ತಲೂ ನಡೆಯುವ ಸತ್ಯ ಅಂಶಗಳನ್ನು ಸನ್ನಿವೇಶಗಳ ಮೂಲಕ ಸೃಷ್ಟಿಸಿದ್ದು, ಪೊಲಟಿಕಲ್ ಮಾಫಿಯಾ, ಮೆಡಿಕಲ್ ಮಾಫಿಯಾ, ಆನ್‌ಲೈನ್ ವಂಚನೆ ಎಲ್ಲವು ತುಂಬಿಕೊಂಡಿದೆ. ಆರಂಭದಲ್ಲಿ ಒಂದಷ್ಟು ಕೊಲೆಗಳು ನಡೆಯುತ್ತದೆ. ಊರಿನಲ್ಲಿ ರಂಗ ಎಂಬ ಯುವಕನನ್ನು ಕೌಟಂಬಿಕ ದ್ವೇಷ ಊರು ಬಿಟ್ಟು ಹೋಗುವಂತೆ ಮಾಡುತ್ತದೆ. ಬೇರೆ ಊರಿಗೆ ತಾಯಿಯೊಂದಿಗೆ ಹೋದಾಗ, ಇನ್ನೊಂದು ದುರಂತವಾಗಿ ....

341

Read More...

Saramsha.Reviews

Friday, February 16, 2024

ಮನುಷ್ಯನ ಮನಸ್ಥಿತಿ ಹಾಗೂ ಆಲೋಚನೆಗಳು

     ಹೊಸತನದ ಅಂಶಗಳನ್ನು ಒಳಗೊಂಡಿರುವ ‘ಸಾರಾಂಶ’ ಚಿತ್ರವು ಮನುಷ್ಯನ ಮನಸ್ಥಿತಿ, ಆಲೋಚನೆ ಹಾಗೂ ಬುದ್ದಿಶಕ್ತಿಯ ಸುತ್ತ ಸಾಗುವ ಕಥೆಯನ್ನು ಹೊಂದಿದೆ  ಓರ್ವ ಕಥೆಗಾರ ತಾನು ಸೃಷ್ಟಿಸಿದ ಪಾತ್ರವನ್ನೇ ಎದುರುಗೊಳ್ಳುವ ರೋಮಾಂಚಕ ಏಳೆಯನ್ನು ಹೇಳಲಿದೆ. ಆ ರೋಲ್‌ನ್ನು ಕಥೆಗಾರ ಬರೆದನೋ, ಆ ಪಾತ್ರವೇ ಕಥೆಗಾರನ ಮೂಲಕ ಬರೆಸಿಕೊಳ್ಳುತ್ತಿದೆಯೋ ಎಂಬ ಸನ್ನಿವೇಶಗಳು ಇರಲಿದೆ. ನಾಲ್ಕು ಪಾತ್ರಗಳ ಸುತ್ತ ಸಿನಿಮಾ ಸಾಗುತ್ತದೆ. ಅದರ ಜತೆಗೆ ಮೋಹಕ ವಾಸ್ತವಿಕತೆ ಅಥವಾ ಮ್ಯಾಜಿಕಲ್ ರಿಯಲಿಸಂ ಎಂಬ ವಿರಳ ಜಾನರಿಗೆ ಒಳಪಡುತ್ತದೆ.

326

Read More...

Mandya Haida.Reviews

Friday, February 16, 2024

ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ

      ಸ್ನೇಹಿತರುಗಳ ಕುರಿತಂತೆ ಹಲವು ಸಿನಿಮಾಗಳು ತೆರೆಕಂಡಿದೆ. ಆದರೆ ‘ಮಂಡ್ಯಹೈದ’ ಸಿನಿಮಾವು ಇದೆಲ್ಲಾಕ್ಕಿಂತಲೂ ಭಿನ್ನವಾಗಿದೆ ಎನ್ನಬಹುದು. ಹಳ್ಳಿ ಅಂಶಗಳನ್ನು ಒಳಗೊಂಡಿದ್ದು, ಪ್ರೀತಿ ಎಲ್ಲರಿಗೂ ಗೊತ್ತಿರುವ ಪದ. ಅದನ್ನು ಪಡೆಯಲು ಕೆಲವರು ಸಾಯ್ತಾರೆ. ಮತ್ತೆ ಕೆಲವರು ಸಾಯಿಸ್ತಾರೆ. ನಮ್ಮ ನಾಯಕ ಕೂಡ ಇದನ್ನು ಪಡೆಯಲು ಹೋಗಿ ಯಾರನ್ನಾದರೂ ಸಾಯಿಸ್ತಾನಾ ಅಥವಾ ತಾನೇ ಸಾಯ್ತಾನಾ ಎನ್ನವುದೇ ಒಂದು ಏಳೆಯ ಸಾರಾಂಶವಾಗಿದೆ. ಸ್ನೇಹ ಪ್ರೀತಿ ಸಂಬಂಧಗಳ ಕುರಿತಾದಂತೆ ಸನ್ನಿವೇಶಗಳನ್ನು ಚೆನ್ನಾಗಿ ಸೃಷ್ಟಿಸಲಾಗಿದೆ.    

302

Read More...

5D Film.Reviews

Friday, February 16, 2024

ಬ್ಲಡ್ ಮಾಫಿಯಾ ಮತ್ತು ರಿವೇಂಜ್          ಕಲಾ ಸಾಮ್ರಾಟ್ ಎಸ್.ನಾರಾಯಣ್ ೫೦ನೇ ನಿರ್ದೇಶನದ  ಮೊದಲ ಥ್ರಿಲ್ಲರ್ ಸೆಸ್ಪೆನ್ಸ್ ‘೫ಡಿ’ ಚಿತ್ರವು ಬ್ಲಡ್ ಮಾಫಿಯಾ ಜೊತೆಗೆ ಹತ್ಯಾಕಾಂಡ ನಡೆಸಿದವರ ಮೇಲಿನ ಸೇಡಿನ ಕಥೆಯನ್ನು ಹೇಳಲಾಗಿದೆ. ಪ್ರಭಾವಿ ವ್ಯಕ್ತಿಗಳು ಅತ್ಯಂತ ಕ್ರೂರವಾಗಿ ಕೊಲೆಯಾಗುವ ಪ್ರಕರಣದ ಮೂಲಕ ಚಿತ್ರವು ಪ್ರಾರಂಭವಾಗುತ್ತದೆ. ನಾವು ಕೊಡುವ ರಕ್ತ ಇತರರಿಗೆ ಉಪಯೋಗವಾಗಲಿ, ಸರಿಯಾಗಿ ಬಳಕೆಯಾಗುತ್ತಿದೆಯೇ ಇಲ್ಲವೋ ಅಂತ ನಾವ್ಯಾರು ಯೋಚಿಸುವುದಿಲ್ಲ.  ಬ್ಲಡ್ ಡೊನೇಟ್ ಮಾಡುವುದು ಸರೀನಾ, ತಪ್ಪಾ ಎನ್ನುವ ಅಂಶಗಳು ಇರಲಿದೆ. ಮೆಡಿಕಲ್ ಜಗತ್ತಿನಲ್ಲಿ ಬ್ಲಡ್ ಮಾಫಿಯಾನೇ ನಡೆಯುತ್ತಿದೆ. ಅದು ಹೇಗೆ, ಇದರ ಹಿಂದೆ ....

302

Read More...

Ravike Prasanga.Reviews

Friday, February 16, 2024

ಹಾಸ್ಯ ಚಿತ್ರ ರವಿಕೆ ಪ್ರಸಂಗ

      ‘ರವಿಕೆ ಪ್ರಸಂಗ’ ಸಿನಿಮಾವು ಹಾಸ್ಯ ಕಥೆಯನ್ನು ಹೊಂದಿದೆ. ಸೀರೆ ಅನ್ನೋದು ಎಲ್ಲಾ ಹೆಂಗಸರು ಇಷ್ಟಪಡುತ್ತಾರೆ. ಸೀರೆ ಒಂದು ಚೆನ್ನಾಗಿದ್ದರೆ ಸಾಲದು. ಅದರ ರವಿಕೆ ಕೂಡ ಅಷ್ಟೇ ಸುಂದರವಾಗಿ ಒಳ್ಳೆ ಫಿಟ್ಟಿಂಗ್‌ದಲ್ಲಿ ಇರಬೇಕು. ಸೀರೆ ಜತೆ ರವಿಕೆ ಸರಿಯಾಗಿಲ್ಲವೆಂದರೆ ಏನೆಲ್ಲಾ ಪ್ರಸಂಗಗಳು ನಡೆಯಬಹುದು ಅನ್ನೋದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.  ಸಂತೋಷ್‌ಕೊಡಂಕೇರಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು ನೋಡುಗರಿಗೆ ಖುಷಿಯನ್ನು ತಂದುಕೊಡುತ್ತದೆ. 

301

Read More...

Just Pass.Film Reviews

Friday, February 09, 2024

ಜಸ್ಟ್ ಪಾಸ್ ಹುಡುಗರ ಸಾಧನೆಗಳು       ‘ಜಸ್ಟ್ ಪಾಸ್’ ಚಿತ್ರದ ಕಥೆಯು ಶೀರ್ಷಿಕೆಯ ಸುತ್ತ ಸಾಗುತ್ತದೆ. ರ‍್ಯಾಂಕ್ ಬಂದವರಿಗಷ್ಟೇ ಶಾಲಾ ಕಾಲೇಜುಗಳಲ್ಲಿ ಸೀಟ್ ಕೊಡುತ್ತಾರೆ. ಅಂಥಾ ವಿದ್ಯಾರ್ಥಿಗಳು ಬಂದರೆ ವಿದ್ಯಾಸಂಸ್ಥೆಗಳ ಮೆರಿಟ್ ಹೆಚ್ಚಾಗುವುದು ಖಂಡಿತ. ಆದರೆ ಈ ಸಿನಿಮಾದಲ್ಲಿ ಇದಕ್ಕೆ ವ್ಯತಿರಿಕ್ತವಾದ ಕಾಲೇಜೊಂದನ್ನು ಕಾಣಬಹುದಂತೆ. ಅಂದರೆ ಇಲ್ಲಿ ಕಡಿಮೆ ಅಂಕ ಪಡೆದವರಿಗೆ ಮಾತ್ರ ಸೀಟು ಕೊಡುತ್ತಾರೆ. ಹೀಗೆ ಓದಿಗಿಂತ ಇನ್ನಿತರೆ ಚಟುವಟಿಕೆಗಳೇ ಹೆಚ್ಚು. ಏನಾದರೂ ಮಾಡಿ ಕಾಲೇಜ್‌ನ್ನು ಮುಚ್ಚಿಸಬೇಕೆಂಬ ಎದುರಾಳಿಗಳು. ಇವರೆಡರ ಮಧ್ಯೆ ಶಿಕ್ಷಣ ವ್ಯವಸ್ಥೆ, ಪಠ್ಯೇತರ ಆಸಕ್ತಿಗಳು, ಹುಡುಗರು ಹಾದಿ ತಪ್ಪುವುದು, ಕೊನೆಗೆ ....

271

Read More...

Pranayam.Film Reviews

Friday, February 09, 2024

ಅತಿ ಮಧುರ ಅನುರಾಗ         ರೊಮ್ಯಾಂಟಿಕ್, ಕ್ರೈಂ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ‘ಪ್ರಣಯಂ’ ಚಿತ್ರವು ಇನೆಟೆನ್ಸ್ ಪ್ರೇಮಕಥೆಯನ್ನು ಹೊಂದಿದೆ. ಕಾಲೇಜು ದಿನಗಳಲ್ಲಿ ಪ್ರೀತಿಸುತ್ತಿದ್ದ ಆತನು, ಆಕೆ ಬೇರೊಬ್ಬರ ಜೊತೆ ಮದುವೆಯಾದ ಮೇಲೂ ಮರೆಯಲು ಸಾಧ್ಯವಾಗದೆ ಚಡಪಡಿಸುತ್ತಾನೆ. ಪತಿಯೊಂದಿಗೆ ಹನಿಮೂನ್‌ಗೆ ಹೊರಟ ಅವಳಿಗೆ ತಾನು ಅಪಹರಣಗೊಂಡಿದ್ದೇನೆಂದು ತಿಳಿದಿರುವುದಿಲ್ಲ. ಮುಂದೆ ನಡೆಯುವ ಅನಿರೀಕ್ಷಿತ ಘಟನೆಗಳು ನೋಡುಗನಿಗೆ ಶಾಕ್ ಕೊಡುತ್ತಾ ಸಾಗುತ್ತದೆ. ದಂಪತಿಗಳನ್ನು ಹನಿಮೂನ್‌ಗೆ ಕಳುಹಿಸಿದ ಪೋಷಕರು ಮನೆಗೆ ಬಂದಾಗ ನಿಜವಾದ ವರನನ್ನು ಕಟ್ಟಿ ಹಾಕಲಾಗಿರುತ್ತದೆ. ಆದರೆ ವಧು ಜೊತೆ ಹೋದವನು ಯಾರು? ಇದರ ಮಧ್ಯೆ ಹಾಡುಗಳು, ....

337

Read More...

Ondu Sarala Prema Kathe.Reviews

Thursday, February 08, 2024

  ಮಾತು ಮರೆತು ಮೂಕಗೊಳಿಸುವ ಪ್ರೇಮ ಕತೆ   ಚಿತ್ರ: ಒಂದು ಸರಳ ಪ್ರೇಮ ಕತೆ ನಿರ್ದೇಶನ: ಸಿಂಪಲ್ ಸುನಿ ನಿರ್ಮಾಣ: ಮೈಸೂರು ರಮೇಶ್ ತಾರಾಗಣ: ವಿನಯ್ ರಾಜ್ ಕುಮಾರ್, ಸ್ವಾತಿಷ್ಟ, ಮಲ್ಲಿಕಾ ಸಿಂಗ್ ಮತ್ತಿತರರು.   ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಪಾತ್ರದ ಹೆಸರು ಅತಿಶಯ್. ಆದರೆ ತೀರ ಅತಿಶಯವೇ ಇರದಂಥ ಸಾಮಾನ್ಯ ವ್ಯಕ್ತಿತ್ವದ ಯುವಕ. ಅತಿಶಯ್ ಸಂಗೀತ ನಿರ್ದೇಶಕನಾಗುವ ಕನಸು ಕಾಣುತ್ತಿರುತ್ತಾನೆ. ಜತೆಯಲ್ಲೇ ತನ್ನನ್ನು ಕಾಡುವ ಕಂಠದ ಯುವತಿಯನ್ನೇ ಮದುವೆಯಾಗುವ ಗುರಿಯೂ ಈತನದಾಗಿರುತ್ತದೆ.   ಚಿತ್ರದಲ್ಲಿ ಇಬ್ಬರು ನಾಯಕಿಯರು. ಸಂಬಂಧಿಯಂತೆ ಮನೆಯಲ್ಲೇ ಇರುವ ಯುವತಿಯಾಗಿ, ಜಗಳಗಂಟಿಯಾಗಿ ಕಾಡುವ ಅನುರಾಗ ಪಾತ್ರದಲ್ಲಿ ಸ್ವಾತಿಷ್ಟ ....

327

Read More...

Upadhyaksha.Reviews

Friday, January 26, 2024

ಉಪಾಧ್ಯಕ್ಷನ ಆಟಾಟೋಪಗಳು       ‘ಅಧ್ಯಕ್ಷ’ ಚಿತ್ರದಲ್ಲಿ ಮಿಂಚಿದ್ದ ಚಿಕ್ಕಣ್ಣ ಈಗ ‘ಉಪಾಧ್ಯಕ್ಷ’ ಸಿನಿಮಾದಲ್ಲಿ ನಾಯಕನಾಗಿ ಬಡ್ತಿ ಹೊಂದಿದ್ದಾರೆ.  ಖಡಕ್ ಶಿವರುದ್ರೇಗೌಡ. ಮತ್ತೋಂದು ಕಡೆ ಪ್ರೇಮಿಗಳನ್ನು ಕಂಡರೆ ಉಪಟಳ ಕೊಡುವ ಇನ್ಸ್‌ಪೆಕ್ಟರ್. ಮೈನರ್ ಹುಡುಗಿಯನ್ನು ಪ್ರೀತಿಸುವ ಚಿ.ತು.ಸಂಘದ ಉಪಾಧ್ಯಕ್ಷನಿಗೆ ಬರುವ ಅವಘಡಗಳು. ಎಲ್ಲವನ್ನು ಹಾಸ್ಯದ ರೂಪದಲ್ಲಿ ತೋರಿಸಲಾಗಿದೆ. ಕಥೆಯಲ್ಲಿ ಲವ್, ಕಾಮಿಡಿ, ಸಾಧು ಕೈಯಲ್ಲಿ ಮಚ್ಚು. ಒಂದೇ ಮಾತನಲ್ಲಿ ಹೇಳುವುದಾದರೆ ಶುರುವಿನಿಂದ ಕೊನೆವರೆಗೂ ಪ್ರೇಕ್ಷಕನಿಗೆ ಬಾಯಿ ಮುಚ್ಚಿಕೊಳ್ಳಲು ಅವಕಾಶ ನೀಡಿಲ್ಲದೆ ಇರುವುದು ಪ್ಲಸ್ ಪಾಯಿಂಟ್ ಆಗಿದೆ. ಹಿಂದಿನ ಚಿತ್ರದ ಭಾಗವಾಗಲಿಲ್ಲದಿದ್ದರೂ ಅಲ್ಲಿರುವ ....

316

Read More...

Case Of Kondana.Reviews

Friday, January 26, 2024

ಕುತೂಹಲ ಮೂಡಿಸುವ ಕೇಸ್ ಆಫ್ ಕೊಂಡಾಣ       ಈ ಹಿಂದೆ ‘ಸೀತಾರಾಮ್ ಬಿನೋಯ್’ ಚಿತ್ರ ಮಾಡಿದ್ದ ತಂಡವು ಈಗ ‘ಕೇಸ್ ಆಫ್ ಕೊಂಡಾಣ’ ಸಿನಿಮಾ ಹೈಪರ್ ಲಿಂಕ್,ತನಿಖಾ ಜಾನರ್ ಅಂಶಗಳನ್ನು ಒಳಗೊಂಡಿದೆ. ಕಥೆ ನಡೆಯುವುದು ಸಂಜೆ ಶುರುವಾಗಿ ರಾತ್ರಿ ನಡೆಯುತ್ತದೆ. ಬೆಳಿಗ್ಗೆ ವೇಳೆಗೆ ಮುಗಿಯುತ್ತದೆ. ಕೊಂಡಾಣ ಇರುವುದು ದೇವಿಪ್ರಸಾದ್ ಮನಸ್ಸಿನಲ್ಲಿ ಪ್ರತಿ ಪಾತ್ರ ದ್ರೋಹ ಮತ್ತು ದ್ರೋಹ ಕಂಡು ಹಿಡಿಯುವ ಪಾತ್ರ ಕಾಣಿಸಿಕೊಳ್ಳುತ್ತದೆ. ಜೋಡಿ ಕೊಲೆಗಳ ಜತೆಗೆ ಮತ್ತೋಂದು ಕೊಲೆ. ಅನ್ಯ ಧರ್ಮೀಯರನ್ನು ಪ್ರೀತಿಸಿದ ಕಾರಣಕ್ಕಾಗಿ ಅಣ್ಣ ಸಿಟ್ಟು ಮಾಡಿಕೊಂಡಿರುತ್ತಾನೆ. ಇವೆರದು ಘಟನೆಗಳ ಹಿನ್ನಲೆ ಏನು. ಇದರೊಂದಿಗೆ ಒಂದಷ್ಟು ರೋಚಕ ....

300

Read More...

Klaantha.Reveews

Friday, January 19, 2024

ಕಾನನದಲ್ಲಿ ದೈವ ಅನುಗ್ರಹ

       ‘ಕ್ಲಾಂತ’ ಸಿನಿಮಾವು ಸೆಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ನಿರ್ದೇಶಕ ವೈಭವಪ್ರಶಾಂತ ನೋಡುಗರಿಗೆ ಕುತೂಹಲ ಹುಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.  ವೀಕೆಂಡ್‌ದಲ್ಲಿ ಮನೆಯವರಿಗೆ ತಿಳಿಸದೆ ಹುಡುಗ-ಹುಡುಗಿ ಅಪರಿಚಿತ ಸ್ಥಳವೊಂದಕ್ಕೆ ಹೋಗಿ, ಅಲ್ಲಿ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾರೆ. ಇದರಿಂದ ಹೇಗೆ ಪಾರಾಗುತ್ತಾರೆ? ಎಂಬುದು ಒನ್ ಲೈನ್ ಸ್ಟೋರಿಯಾಗಿದೆ. ಮನೆಗೆ ಸುಳ್ಳು ಹೇಳಿ ತಪ್ಪು ದಾರಿ ಹಿಡಿಯಬೇಡಿ ಅಂತ ಸಂದೇಶ ಇರಲಿದೆ. ಶೀರ್ಷಿಕೆಗೆ ಅರ್ಥ ದಣಿವು, ಆಯಾಸ ಅಂತ ಹೇಳಿಕೊಂಡಿದ್ದು ಇದು ಸಹ ಕಥೆಗೆ ಪೂರಕವಾಗಿದೆ.

344

Read More...

Kaatera.Reviews

Friday, December 29, 2023

  ಚಿತ್ರ: ಕಾಟೇರ ***** ನಿರ್ದೇಶಕ: ತರುಣ್ ಸುಧೀರ್ ನಿರ್ಮಾಣ: ರಾಕ್ಲೈನ್ ವೆಂಕಟೇಶ್ ತಾರಾಗಣ: ದರ್ಶನ್, ಆರಾಧನ     ಕಾಟೇರ ಎನ್ನುವ ವ್ಯಕ್ತಿಯು  15 ವರ್ಷಗಳ ಜೈಲು ಶಿಕ್ಷೆ ಮುಗಿಸಿ  ಬಿಡುಗಡೆಯಾಗುವ ದೃಶ್ಯದ ಮೂಲಕ, ಆತನ ಫ್ಲ್ಯಾಶ್‌‌‌ ಬ್ಯಾಕ್ ಕತೆ ರಿವೀಲಾಗುತ್ತಾ ಸಾಗುತ್ತದೆ.   ಅದು ಎಂಬತ್ತರ ದಶಕದ ಕತೆ. ಕಾಟೇರ ವೃತ್ತಿಯಲ್ಲಿ ಕಮ್ಮಾರ. ಆತನಿರುವ ಹಳ್ಳಿಯಲ್ಲಿ ಜಮೀನ್ದಾರಿ ಪದ್ಧತಿ, ಜಾತಿ ಪದ್ಧತಿ ನಡೆಯುತ್ತಿರುತ್ತದೆ. ಇಂಥ ವಾತಾವರಣದಲ್ಲೂ ಊರ ಶಾನುಭೋಗರ ಮಗಳು ಪ್ರಭಾವತಿ ಕಾಟೇರನನ್ನು ಪ್ರೀತಿಸುತ್ತಿರುತ್ತಾಳೆ. ಆದರೆ ಈ ಪ್ರೀತಿಗೆ ಎದುರಾಗಬಹುದಾದ ಕಷ್ಟಗಳನ್ನು ಅರಿತೇ ಕಾಟೇರ ಆಕೆಯ ಪ್ರೀತಿಗೆ ಪುರಸ್ಕಾರ ನೀಡುವುದಿಲ್ಲ.   ಇಂಥ ....

451

Read More...

O Nanna Chethana.Reviews

Friday, December 15, 2023

ಮೊಬೈಲ್ ಸೂಪರು ಆದ್ರೂ ಸ್ವಲ್ಪ ಡೆಂಜರು        ತಂತ್ರಜ್ಘಾನ ಬೆಳದಂತೆ ಮೊಬೈಲ್ ಬಳಕೆ ಎಲ್ಲಾ ವಯಸ್ಸಿನವರಿಗೂ ಗಮನ ಸೆಳೆದಿದೆ. ಇದೆಲ್ಲಾ ಅಂಶಗಳನ್ನು ಬಳಕೆ ಮಾಡಿಕೊಂಡು ‘ಓ ನನ್ನ ಚೇತನ’ ಚಿತ್ರದಲ್ಲಿ ತೋರಿಸಿ ಕ್ಲೈಮಾಕ್ಸ್‌ದಲ್ಲಿ ತೂಕದ ಸಂದೇಶವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಮೊಬೈಲ್‌ನಿಂದ ಎಷ್ಟು ಲಾಭವಿದೆಯೋ, ಅಷ್ಟೇ ಹಾನಿಕರವು ಆಗುತ್ತದೆ. ಪ್ರಸಕ್ತ ಸನ್ನಿವೇಶದಲ್ಲಿ ದೊಡ್ಡವರಿಗಿಂತ ಮಕ್ಕಳು ಮೊಬೈಲ್‌ನ್ನು ಹೆಚ್ಚು ಬಳಕೆ ಮಾಡುತ್ತಾರೆ. ಇದರಿಂದ ದೈಹಿಕ, ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇವರುಗಳು ಗಂಟೆಗಟ್ಟಲೆ ಉಪಯೋಗಿಸುತ್ತಾ, ರೀಲ್ಸ್ ಮಾಡಿ, ಗೇಮ್ಸ್ ಆಡುತ್ತಾ ಕಾಲ ಕಳೆಯುತ್ತಿದ್ದಾರೆ. ....

329

Read More...

Marichi.Film Reviews

Friday, December 08, 2023

ಕೊಲೆಗಾರರನ್ನು ಬೆನ್ನತ್ತುವ ವಿಜಯರಾಘವೇಂದ್ರ

       ‘ಮರೀಚಿ’ ಚಿತ್ರವು ಸರಣಿ ಕೊಲೆಯ ಬಗ್ಗೆ ಹಣೆದಿರುವ ಕಥೆಯಲ್ಲಿ ಕೊಲೆಗಳನ್ನು ಮಾಡಿದವರು ಯಾರು, ಏತಕ್ಕಾಗಿ ಮಾಡಿದರು.  ವೈದ್ಯರ ಸರಣಿ ಮರ್ಡರ್ ನಡೆಯುತ್ತದೆ.  ಎಲ್ಲಾ ವೈದ್ಯರು ಒಳ್ಳೆಯವರು. ಹಾಗಿದ್ದರೂ ಇವರುಗಳು ಹತ್ಯೆಯಾಗುವುದು ಯಾತಕ್ಕೆ? ಇವರ ಮೇಲಿರುವ ದ್ವೇಷವಾದರೂ ಏನು? ಪೋಲೀಸ್ ಅಧಿಕಾರಿಯ ಪತ್ನಿಯ ಸಾವಿಗೂ  ಸಂಬಂಧವಿದೆಯಾ. ಸರಣಿ ಹಂತಕನ ಗುರಿ ಏನು. ಹೀಗೆ ಜಾಡು ಹಿಡಿದು ಹೋದಾಗ ಅನೇಕ ಸಂಗತಿಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತದೆ. ಇದೆಲ್ಲಾದಕ್ಕೂ ಉತ್ತರ ಸಿಗಬೇಕಾದರೆ ಚಿತ್ರಮಂದಿರಕ್ಕೆ ಬರಬೇಕಾಗುತ್ತದೆ.

372

Read More...

Kaiva.Film Reviews

Friday, December 08, 2023

ರೆಟ್ರೋ ಕೈವ       ಬೆಂಗಳೂರು ಕರಗದ ಹಿನ್ನಲೆಯಾಗಿಟ್ಟುಕೊಂಡು ಅದರಲ್ಲಿ ಅರಳುವ ಪ್ರೇಮ ಕಥೆಯನ್ನು ‘ಕೈವ’ ಚಿತ್ರದಲ್ಲಿ ತೋರಿಸಲಾಗಿದೆ. ಕರಗ ಮಹೋತ್ಸವ ಹೇಗಿರುತ್ತದೆ. ಯಾವ ರೀತಿ ಹುಟ್ಟಿಕೊಂಡಿತು. ಪ್ರೇಮಕಥೆ ಹೀಗೆ ಎಲ್ಲವನ್ನು ೧೯೮೩-೮೪ರ ಕಾಲಘಟ್ಟದಲ್ಲಿ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಕೈವ ಜೀವನ ಕಟ್ಟಿಕೊಳ್ಳಲು ಕೈವಾರದಿಂದ ಬೆಂಗಳೂರಿಗೆ ಬಂದಿರುತ್ತಾನೆ. ಹಾಲು ಮಾರಿಕೊಂಡು ಜೀವನ ನಡೆಸುತ್ತಿದ್ದಾತ. ಕರಗ ಉತ್ಸ ಸಂದರ್ಭದಲ್ಲಿ ಮೂಗಿ ಸಲ್ಮಾಳ ಪರಿಚಯ ಪ್ರೀತಿಗೆ ತಿರುಗುತ್ತದೆ. ಇದರ ಮಧ್ಯೆ ಡಾನ್ ಜಯರಾಜ್ ಎಂಟ್ರಿ ಕೊಡುತ್ತದೆ. ಲವ್‌ಗೂ ಭೂಗತಲೋಕಕ್ಕೂ ಏನಿದೆ ಲಿಂಕ್ ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು. ಮುಂದೆ ಸಲ್ಮಾಳಿಗೆ ....

383

Read More...

Athi I Love You.Reviews

Friday, December 08, 2023

ಸುಖ ಸಂಸಾರದಲ್ಲಿ ಹಲವು ಸೂತ್ರಗಳು        ಪತಿ, ಪತ್ನಿ ಮಧ್ಯೆ ಧೋರಣೆ ಬಾರದಿದ್ದರೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಎಂಬುದಕ್ಕೆ ‘ಅಥಿ ಐ ಲವ್ ಯು’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಅಕಸ್ಮಾತ್ ಬಾಯಿ ತಪ್ಪಿ ಮಾತನಾಡಿದರೆ ಎಡವಟ್ಟು ಆಗುತ್ತದೆ. ಅದನ್ನ ಸರಿಪಡಿಸಲು ಕಷ್ಟವಾಗುತ್ತದೆ. ಒಂದರ್ಥದಲ್ಲಿ ಮಾತು ಬಲ್ಲವನಿಗೆ ಜಗಳವಿಲ್ಲ, ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವ ಗಾದೆಯಂತೆ ಚಿತ್ರದಲ್ಲಿ ಅದನ್ನು ಅಳವಡಿಸಲಾಗಿದೆ. ಇಬ್ಬರಲ್ಲಿ ಒಬ್ಬರಾದರೂ ತಗ್ಗಿದರೆ ಜೀವನ ಸುಲಭ ಎಂಬುದನ್ನು ಹೇಳಲಾಗಿದೆ. ಕಥೆಯಲ್ಲಿ ಹೆಂಡತಿ ಗಂಡನಿಗೆ ಕೆಲಸಕ್ಕೆ ಹೋಗುವ ಮುಂಚೆ ತಿಂಡಿ ಸಿದ್ದ ಮಾಡಿಕೊಡಲು ಸಾಮಾನ್ಯ ....

347

Read More...

Sugar Factory.Reviews

Friday, November 24, 2023

ರೋಮ್ಯಾಂಟಿಕ್ ಯೂಥ್‌ಫುಲ್ ಶುಗರ್ ಫ್ಯಾಕ್ಟರಿ        ‘ಶುಗರ್ ಫ್ಯಾಕ್ಟರಿ’ ಚಿತ್ರವು ಅದೇ ಹೆಸರಿನ ಪಬ್‌ನಲ್ಲಿ ಶುರುವಾಗಿ ಅಲ್ಲೇ ಕೊನೆಗೊಳ್ಳುತ್ತದೆ. ಯೂ ಟ್ಯೂಬರ್ ಒಬ್ಬಳು ಗೋವಾದ ವಿಶೇಷವಾದ ಪಬ್‌ನ್ನು ತನ್ನ ವೀಕ್ಷಕರಿಗೆ ಪರಿಚಯಿಸಲು ಹೋದಾಗ, ಅದಕ್ಕಿಂತ ತನ್ನದೆ ಆದ ಕಥೆಯೊಂದನ್ನು ಬಚ್ಚಿಟ್ಟುಕೊಂಡು ಕುಳಿತಿರುವ ಆರ್ಯನ ವೆಡ್ಡಿಂಗ್ ಪ್ಲಾನರ್ ಪ್ರೀತಿಯ ಕಥನ ಕಣ್ಣಿಗೆ ಬೀಳುತ್ತದೆ. ಇದರೊಂದಿಗೆ ಚಿತ್ರವು ತೆರೆದುಕೊಳ್ಳುತ್ತಾ ಹೋಗುತ್ತದೆ. ಪಬ್ ಒಂದನ್ನೇ ಹಿನ್ನಲೆಯಾಗಿಟ್ಟುಕೊಂಡು, ಅಲ್ಲಿನ ಮಾಲೀಕ, ಅಲ್ಲೊಬ್ಬ ಸಪ್ಲೈಯರ್, ಆತನ ನಾಲ್ಕು ಮಂದಿ ಸ್ನೇಹಿತರು. ಇದರೊಂದಿಗೆ ಇಬ್ಬರು ನಾಯಕಿಯರು. ....

348

Read More...

Sapta Sagaradaache Ello.Side B.Reviews

Friday, November 17, 2023

ಪ್ರೀತಿಯ ಮತ್ತೋಂದು ಮುಖ -ಸೈಡ್.ಬಿ       ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿದಲ್ಲಿ ಪ್ರೀತಿಯ ಇನ್ನೋಂದು ಮುಖವನ್ನು ತೋರಿಸಲಾಗಿದೆ. ತನ್ನದಲ್ಲದ ತಪ್ಪಿಗೆ ಜೈಲು ಸೇರುವ ಮನು ಹತ್ತು ವರ್ಷದ ನಂತರ ಮುಂದೇನು ಮಾಡುತ್ತ್ತಾನೆ ಎಂಬುದೇ ಒನ್ ಲೈನ್ ಸ್ಟೋರಿಯಾಗಿದೆ. ಇದರಲ್ಲಿ ನಾಯಕಿ ರುಕ್ಮಣಿವಸಂತ್ ಜೊತೆ ಚೈತ್ರಾ.ಬಿ.ಆಚಾರ್ ಪಾತ್ರವು ಸೇರಿಕೊಳ್ಳುತ್ತದೆ. ತನಗೆ ಅನ್ಯಾಯ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾನಾ ಎಂಬ ಕುತೂಹಲಕ್ಕೆ ಉತ್ತರವನ್ನು ಹೇಳಿದ್ದಾರೆ. ಮೊದಲ ಭಾಗದಲ್ಲಿ ಮೃದುವಾಗಿದ್ದ ಮನು ಪಾರ್ಟ್-೨ರಲ್ಲಿ ರಫ್ ಆಗಿದ್ದು, ಮುಖ ಚರ್ಯೆಯೂ ಬದಲಾಗಿದೆ. ಯಾರಿಗಾದರೂ ಮುಲಾಜಿಲ್ಲದೆ ....

377

Read More...

The Vacant House.Reviews

Friday, November 17, 2023

 ದಿ ವೆಂಕಟ್‌ಹೌಸ್‌ದಲ್ಲಿ ಆತ್ಮದ ಸುತ್ತಾಟ       ವ್ಯಾಮೋಹ, ಮೋಹ ಎಲ್ಲರನ್ನು ಸೆಳೆಯುತ್ತದೆ. ಅದು ಹೇಗೆ ಎಂಬುದನ್ನು ‘ದಿ ವೆಕೆಂಟ್ ಹೌಸ್’ ಚಿತ್ರದಲ್ಲಿ ಥ್ರಿಲ್ಲರ್ ರೂಪದಲ್ಲಿ ತೋರಿಸಲಾಗಿದೆ. ಬದುಕಿದ್ದಾಗ ನಮ್ಮನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವವರು, ಸತ್ತು ಆತ್ಮವಾದ ನಂತರ ಯಾಕೆ ಹಿಂದೆ ಸರಿಯುತ್ತಾರೆ. ಪ್ರೀತಿ ಅಂದರೆ ಇಷ್ಟೇನಾ ಎಂದು ಪ್ರೇತಾತ್ಮವೊಂದು ಪ್ರೇಮಿಗೆ ಕಲಿಸಿಕೊಡುವ ಪಾಠವು ಇದರಲ್ಲಿ ಬರುತ್ತದೆ. ವಯಸ್ಸಾದ ದಂಪತಿಗಳ ನಡುವೆ ಹೊಂದಾಣಿಕೆ ಇರುವುದಿಲ್ಲ. ಇದನ್ನು ಗಮನಸಿದ ಎದುರು ಮನೆಯ ಮಾನವ್ ಆಕೆಯ ಮೋಹಕ್ಕೆ ಸೋಲುತ್ತಾನೆ. ಗೆಳತಿ ಸಹಾಯ ಪಡೆದುಕೊಂಡು ....

541

Read More...

Raja Yoga.Film Reviews

Friday, November 17, 2023

ಪ್ರಾಣೇಶ ತಹಶೀಲ್ದಾರ್ ಕನಸು****

      ಸುಂದರ ಬದುಕು ಕಟ್ಟಿಕೊಳ್ಳಲು ನಾವುಗಳು ಜೀವನಪೂರ್ತಿ ಕಷ್ಟಪಡ ಬೇಕಾಗುತ್ತದೆ. ಅದೇ ಅದೃಷ್ಟ ಖುಲಾಯಿಸಿದರೆ ಎಲ್ಲವು ಅಂದುಕೊಂಡಂತೆ ಆಗುತ್ತದೆ ಎಂಬುದನ್ನು ‘ರಾಜಯೋಗ’ ಚಿತ್ರದಲ್ಲಿ ಹಾಸ್ಯದ ಮೂಲಕ ತೋರಿಸಲಾಗಿದೆ. ಮೂಲ ನಕ್ಷತ್ರದಲ್ಲಿ ಹುಟ್ಟಿದವರು ಅಪ್ಪ ಅಮ್ಮನಿಗೆ ಕಂಟಕವಾಗುತ್ತದೆ ಎಂದು ಜ್ಯೋತಿಷ ಹೇಳಿದ ಮಾತನ್ನು ಬಲವಾಗಿ ನಂಬುವ ಆತ ಚಿಕ್ಕಂದಿನಿಂದಲೇ ಮಗನ ಮೇಲೆ ಅಷ್ಟೋಂದು ಪ್ರೀತಿಯನ್ನು ತೋರಿಸುವುದಿಲ್ಲ. ಕೊನೆಗೆ ಪ್ರಾಣಕ್ಕೆ ಕುತ್ತು ಬಂದಾಗ ಮಗನೇ ಅಪ್ಪನನ್ನು  ಉಳಿಸಿದಾಗ ಜ್ಘಾನೋದಯವಾಗುವ ಕಥೆಯನ್ನು ಗ್ರಾಮೀಣ ಸೊಗಡಿನಲ್ಲಿ ಹೇಳಿರುವುದು ಚೆನ್ನಾಗಿದೆ.

390

Read More...

Naa Kolikke Ranga.Reviews

Friday, November 10, 2023

  ನಿರ್ಮಾಪಕರು : ಎಸ್.ಟಿ.ಸೋಮಶೇಖರ್   ನಿರ್ದೇಶನ : ಗೊರವಾಲೆ ಮಹೇಶ್   ಗ್ರಾಮೀಣ ಸೊಗಡಿನ ಚೆಲುವು   ಕನ್ನಡ ನಾಡಿನ ಪ್ರತಿ ಗ್ರಾಮೀಣ ಭಾಗದಲ್ಲಿ ಅದರದೇ ಆದ ಸೊಗಸಿನ ಚಿತ್ತಾರವಿರುತ್ತದೆ. ರಂಗು ರಂಗಿನ ವ್ಯಕ್ತಿಗಳಿರುತ್ತಾರೆ. ಅಂತಹ ರಂಗಿನ ವ್ಯಕ್ತಿ ರಂಗನ ಕಥೆಯಲ್ಲಿ ಕಚಗುಳಿ ಇಡುವ ನಗು ಉಲ್ಲಾಸ ಎರಡೂ ಇರುತ್ತದೆ..   ನಾ ಕೋಳಿಕೆ ರಂಗ ಎಂದ ತಕ್ಷಣವೇ ನೆನಪಾಗುವುದು ಕನ್ನಡದ ನಾಟಕ ಪ್ರಪಂಚದ ದಿಗ್ಗಜ ಟಿ.ಪಿ.ಕೈಲಾಸಂ. ಆದರೆ ಇಲ್ಲಿನ ರಂಗ ಮುಗ್ಧ, ಅಮಾಯಕ ಮತ್ತು ಮಾನವ ಪ್ರೇಮದ ಸಂಕೇತ.   ಹಾಗಾಗಿ ಆತ ಸಾಕಿರುವ ಕೋಳಿ ಸುಕ್ಕನ ಮೇಲೆ ಅತೀವ ಪ್ರೇಮ ಮತ್ತು ಒಂದು ಕ್ಷಣವೂ ಬಿಟ್ಟಿರಲಾರದ ಮಮಕಾರ. ಹೀಗಿದ್ದಾಗಲೇ ಹಳ್ಳಿಯಲ್ಲಿ ನಿತ್ಯವೂ ವೈವಿಧ್ಯಮಯ ....

353

Read More...

Garadi.Film Reviews

Friday, November 10, 2023

  ವೈಭವದ ಕುಸ್ತಿಯ ಅಖಾಡ   ಎಲ್ಲಿ ನೋಡಿದರೂ ಕೆಮ್ಮಣ್ಣು.. ಕಣ್ತುಂಬುವ ಆಶಯದಲ್ಲಿ ನೋಡಿದಷ್ಟು ಕುಸ್ತಿಯದೇ ಮಾತು..   ಅದು ಕೋರಾಫಿಟ್ ಕದನ..!     'ಏನೇ ಬರಲಿ ರಟ್ಟೆ ತಟ್ಟು.. ’ ಎಂಬ ಗರಡಿ ಮನೆಯ ಧೇಯ ವಾಕ್ಯ ಎದ್ದು ಕಾಣುವಂತೆ ಕುಸ್ತಿಯ ಅಖಾಡವೂ ಗಮನ ಸೆಳೆಯುತ್ತದೆ. ಅದಕ್ಕೆ ಸಾಹುಕಾರನ ಬೆಂಬಲವೂ ಇದೆ. ಜೊತೆಗೆ ಏಕಲವ್ಯನ ರೀತಿ ಕಲಿಯುವ ಸೂರಿಯ ಬೆಂಬಲವೂ ಇದೆ.   ಕೋರಾಫಿಟ್ ರಂಗಪ್ಪ ಮುಖ್ಯ ಕಥಾ ನಾಯಕ. ಆದರೆ ಸದಾ ಕಾಲವೂ ಗರಡಿ ಮನೆ ಕಾಯುವ ಸೂರಿಯನ್ನು ಆತ ನಂಬುವುದಿಲ್ಲ. ಬದಲಿಗೆ ಆತನ ಬೆಂಬಲ ಏನಿದ್ದರೂ ಸಾಹುಕಾರ ಚಿಕ್ಕರಾಣೆಗೆ.   ಇದರ ಪರಿಣಾಮ ಏನಾಗುತ್ತದೆ ಎಂಬುದು ಚಿತ್ರದ ತಿರುಳು. ಕೋರಾಫಿಟ್ ರಂಗಪ್ಪ ವಾಸ್ತವ ಅರಿಯದ ಮನೋಭಾವ ....

372

Read More...

Tagarupalya.Reviews

Friday, October 27, 2023

  ಹಳ್ಳಿ ರುಚಿಯ ಒಳ್ಳೆಯ ಪಲ್ಯ..!    ಚಿತ್ರ: ಟಗರು ಪಲ್ಯ  ತಾರಾಗಣ: ನಾಗಭೂಷಣ್, ಅಮೃತಾ ಪ್ರೇಮ್ ನಿರ್ದೇಶನ : ಉಮೇಶ್ ಕೃಪ ನಿರ್ಮಾಣ: ಡಾಲಿ ಧನಂಜಯ್ ಹೆಸರಿನಿಂದಲೇ ಆಕರ್ಷಣೆ ಮೂಡಿಸಿದ್ದ ಟಗರು ಪಲ್ಯ ಇದೀಗ ಪರದೆಯ ಮೇಲೆ ಎಲ್ಲರನ್ನೂ ಆಕರ್ಷಿಸಿದೆ. ಟಗರು ಪಲ್ಯ ಎನ್ನುವ ಹೆಸರು ನೋಡಿ ಪಲ್ಯ ಬೇಯಿಸುವುದನ್ನು ನೋಡಲು ಬಂದರೆ ನಿರಾಶೆ ಆಗುವುದು ಸತ್ಯ. ಆದರೆ ಇಲ್ಲಿ ಪಲ್ಯಕ್ಕಿಂತ ಸೊಗಸಾದ ಬದುಕಿನ ರಸಾಯನವೇ ಇದೆ. ಮಂಡ್ಯ ಸೊಗಡಿನ ಕತೆ ಇದು. ಊರಾಚೆ ಜಲಪಾತದ ಬಳಿ ದೇವಿಗೆ ಹರಕೆ ಹೊತ್ತ ಕುಟುಂಬ ಹೇಗೆಲ್ಲ ಭಾಗಿಯಾಗುತ್ತದೆ ಎನ್ನುವುದನ್ನು ನೋಡುವುದೇ ಸೊಗಸು. ಟಗರು ತಲೆ ಕಡಿಯಬೇಕಾದರೆ ಅದು ತಲೆಯನ್ನು ಕೆದರಬೇಕು. ಆದರೆ ಟಗರು ತಲೆ ಕೆದರದೇ ಸತಾಯಿಸುತ್ತದೆ. ಚಿತ್ರದಲ್ಲಿ ....

419

Read More...

Ghost.Film Reviews

Thursday, October 19, 2023

  ಘೋಸ್ಟ್ ಚಿತ್ರವಿಮರ್ಶೆ   ನಿರ್ಮಾಣ : ಸಂದೇಶ್ ಪ್ರೊಡಕ್ಷನ್ಸ್ ಸಂದೇಶ್ ಎನ್   ನಿರ್ದೇಶನ : ಶ್ರೀನಿ   ತಂತ್ರ ಪ್ರತಿತಂತ್ರದ ನೇಯ್ಗೆ..   ಈಚೆಗೆ ವೇಗದ ನಿರೂಪಣೆಯ ವಿಭಿನ್ನ ನೆಲೆಯಲ್ಲಿ ಸಾಗುವ ಕಥೆಗಳು ಸೈ ಎನಿಸಿಕೊಳ್ಳುತ್ತವೆ. ಅಂತಹ ಸಾಲಿಗೆ ಘೋಸ್ಟ್ ಖಂಡಿತಾ ಸೇರುತ್ತದೆ.   ಡಾ.ಶಿವರಾಜ್ ಕುಮಾರ್ ನಿಜವಾಗಿ‌ ಏಕತಾನತೆಯಿಂದ ಹೊರಬಂದಿರುವ ಚಿತ್ರವಿದು. ಹಾಗಾಗಿ ಅವರೀಗ ಹೊಸತನದಲ್ಲಿ ಧುಮ್ಮಿಕ್ಕಿ ಹರಿಯುವ ನದಿಯಾಗಿದ್ದಾರೆ.   ಗ್ಯಾಂಗ್ ಸ್ಟರ್ ಒಬ್ಬ ಪ್ರಮುಖ ಜೈಲನ್ನು ಹೈಜಾಕ್ ಮಾಡುವ ಮೂಲಕ ವ್ಯವಸ್ಥೆಗೆ ಸವಾಲಾಗುತ್ತಾನೆ. ಅದು ಏಕೆ ಏನು ಎಂಬುದರ ಸುತ್ತ ಕಥೆ ಹೆಣೆಯಲಾಗಿದೆ.   ಹಾಗೆಯೇ ಪೊಲೀಸ್ ಅಧಿಕಾರಿ ಹಾಗೂ ....

420

Read More...

Marakastra.Reviews

Friday, October 13, 2023

  ಮಾಲಾಶ್ರೀ ಮನರಂಜನೆ ಮಹಾಶಕ್ತಿ   ಸಮಾಜದಲ್ಲಿ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಮೀಪದ ಬಂಧುಗಳನ್ನೇ ಬಲಿ ಕೊಡಲು ಹೇಸುವುದಿಲ್ಲ. ಅಂತಹ ಕೆಡುಕರ ಯೋಜನೆಗಳು ಇಲ್ಲಿ ತರಗೆಲೆಗಳಂತೆ ಉರುಳುತ್ತವೆ..   ಮಾರಕಾಸ್ತ್ರ ಎಂಬುದು ಇಲ್ಲಿ ಶಕ್ತಿ ಮತ್ತು ಯುಕ್ತಿಯ ರೂಪದಲ್ಲಿ ಕಾಣುತ್ತದೆ. ನಿಧಿಯ ಸಲುವಾಗಿ ಕೆಡುಕು ಮನಸ್ಸಿನ ವ್ಯಕ್ತಿಗಳು ಹೂಡುವ ಆಟವನ್ನು ಶಕ್ತಿಯಿಂದ ಗೆಲ್ಲಲಾಗುತ್ತದೆ.   ಬಳ್ಳಾರಿಯ ಸುತ್ತಮುತ್ತ ಭೂಮಿಯ ಭಾಗಗಳು ನಿಧಿಯಂತೆ ಕಾಣುತ್ತವೆ. ಅದನ್ನು ಪಡೆಯಲು ಹೊಂಚು ಹಾಕುವ ಗುಂಪು ಮಾಟ ಮಂತ್ರದ ದುಷ್ಕೃತ್ಯ ನಡೆಸುತ್ತದೆ. ಅದರ ನಡುವಿನ ಹೋರಾಟವೇ ಚಿತ್ರದ ಮುಖ್ಯಾಂಶ.   ಮಾಲಾಶ್ರೀ ಪಾತ್ರ ತಡವಾಗಿ ಎಂಟ್ರಿ ಕೊಟ್ಟರೂ ಅದು ಕಠಿಣ ಮತ್ತು ....

483

Read More...

Vesha.Reviews

Friday, October 13, 2023

ನಾನಾ ವೇಷದಾರಿಗಳು ****

      ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ವೇಷ’ ಚಿತ್ರವು ನಾನಾ ವೇಷದಾರಿಗಳ ಕಥೆಯಾಗಿದೆ. ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಕೃಷ್ಣನಾಡ್ಪಾಲ್ ಮೊದಲ ಪ್ರಯತ್ನದಲ್ಲಿಯೇ ಹೊಸ ತರಹದ ಸನ್ನಿವೇಶಗಳನ್ನು ಸೃಷ್ಟಿಸಿರುವುದು ಪರದೆ ಮೇಲೆ ಚೆನ್ನಾಗಿ ಕಾಣಿಸುತ್ತದೆ.  ಜೀವನದಲ್ಲಿ ಎಲ್ಲರೂ ಒಂದಲ್ಲಾ ಒಂದು ರೀತಿ ವೇಷ ಹಾಕುತ್ತಾರೆ. ಕಥೆಯಲ್ಲಿ ನಾಯಕನಿಗೆ ಯಾವುದೋ ಸಂದರ್ಭದಲ್ಲಿ ವೇಷ ಹಾಕುವ ಹಾಗೆ ಮಾಡುತ್ತದೆ. ಇದರಿಂದ ಮುಂದೇನು ಆಗುತ್ತದೆ ಎಂಬುದನ್ನು ಕುತೂಹಲದೊಂದಿಗೆ ತೋರಿಸಲಾಗಿದೆ. ಹೆಸರಿಗೆ ತಕ್ಕಂತೆ ನಾವೆಲ್ಲರೂ ವೇಷದಾರಿಗಳು ಅಂತ ಸಂದೇಶದಲ್ಲಿ ಅರ್ಥಪೂರ್ಣವಾಗಿ ಹೇಳಲಾಗಿದೆ.

506

Read More...

Aade Nam God.Reviews

Friday, October 06, 2023

 ಆಡೊಂದು ದೇವರಾದ ಚಿತ್ರ

       ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಪಿ.ಹೆಚ್.ವಿಶ್ವ್‌ನಾಥ್ ಅವರ  ‘ಆಡೇ ನಮ್ ಗಾಡು’ ಚಿತ್ರವು ಮೂಡ ನಂಬಿಕೆಯನ್ನೇ ಬಂಡವಾಳವಾಗಿಟ್ಟುಕೊಂಡು ಅದರಿಂದ ಮುಗ್ದ ಜನರನ್ನು ಹೇಗೆ ವಂಚಿಸುತ್ತಾರೆ. ಆಡನ್ನು ದೇವರೆಂದು ಪೂಜಿಸಿದಾಗ ಏನೆಲ್ಲಾ ಆಗುತ್ತದೆ. ಅದು ಯಾವ ಹಂತಕ್ಕೆ ತಲುಪುತ್ತದೆ ಎಂದು ಹೇಳುವ ಪ್ರಯತ್ನವನ್ನು ಸನ್ನಿವೇಶಗಳ ಮೊಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ನಾಲ್ವರು ಯುವಕರಿಗೆ ಆಕಸ್ಮಿಕವಾಗಿ ಸಿಗುವ ಆಡು ಕೆಲವೊಂದು ಸಮಯದಲ್ಲಿ ಅಪಾಯದಿಂದ ಪಾರು ಮಾಡುತ್ತದೆ. 

373

Read More...

Love.Film Reviews

Friday, October 06, 2023

ಲವ್ ಕರಾವಳಿ ಪ್ರೀತಿ ಕಥನ        ‘ಲವ್’ ಚಿತ್ರವು ಕರಾವಳಿ ಭಾಗದ ಹಿಂದು ಮುಸ್ಲಿಂ ಕಥೆಯನ್ನು ಒಳಗೊಂಡಿದೆ. ಸ್ವಸಿಕ್ ಕಷ್ಟದಲ್ಲಿದ್ದ ಜೋಯಾಳನ್ನು ರಕ್ಷಿಸುತ್ತಾನೆ. ಆತನಿಗೆ ಸೋಲುವ ಆಕೆ ಮೊದಲ ನೋಟದಲ್ಲೇ ಇಷ್ಟಪಡುತ್ತಾಳೆ. ಜಾತಿ ಬೇರೆಯಾಗಿದ್ದರಿಂದ ಇದು ಸಾಧ್ಯವಾಗದು ಅಂತ ಹೇಳಿದರೂ ಅವಳು ಕೇಳದೆ ಇದ್ದ ಕಾರಣ, ಮುಗ್ದ ಪ್ರೀತಿಗೆ ಮನಸೋತು ಮದುವೆ ಆಗಲು ನಿರ್ಧಾರ ಕೈಗೊಳ್ಳುತ್ತಾನೆ. ಇದರಿಂದ ಎರಡು ಕುಟುಂಬದಿಂದ ವಿರೋಧ ವ್ಯಕ್ತವಾಗುತ್ತದೆ. ಮುಂದೆ ಪೋಲೀಸರ ಸಮ್ಮುಖದಲ್ಲಿ ದೂರವಾಗಲು ನಿರ್ಣಯಿಸುತ್ತಾರೆ. ಆದರೆ ಪ್ರೇಮಿಗಳು ಯೋಚನೆ ಬೇರೆಯಾಗಿದ್ದು, ಕೊನೆಗೂ ಸ್ವಸ್ಕಿಕ್‌ನೊಂದಿಗೆ ಮದುವೆ ಆಗುತ್ತದೆ. ಇದಕ್ಕೆ ಮುಸ್ಲಿಂ ....

332

Read More...

Parishudham.Reviews

Friday, September 22, 2023

  ಪರಿಶುದ್ಧಂ ಚಿತ್ರವಿಮರ್ಶೆ   ನಿಗೂಢ ಕೊಲೆಗಳ ಸುತ್ತ   ಪತ್ನಿಯರಿಗೆ ವಿಚ್ಛೇದನ ಗಂಡಸರು ಕೊಲೆಯಾಗುತ್ತಾರೆ. ಅದಕ್ಕೆ ಅವರ ಅನೈತಿಕ ಸಂಬಂಧ ಕಾರಣ ಎಂದುಕೊಂಡರೆ ಚಿತ್ರದ ಕ್ಲೈಮ್ಯಾಕ್ಸ್ ಬೇರೆಯೇ ಕಥೆಯನ್ನು ಹೇಳುತ್ತದೆ.   ರೇಖಾ ಎಂಬ ಮನೋವೈದ್ಯೆ ಹಾಗೂ ಆಕೆಯ ಆತ್ಮೀಯ ಬಳಗ ಪೊಲೀಸ್ ಅಧಿಕಾರಿ ಹಾಗೂ ಇತರರ ಸುತ್ತ ನಡೆಯುವ ಕಥೆಯಲ್ಲಿ ಅಂಜಲಿ ಎಂಬ ನಟಿ ಕೇಂದ್ರ ಬಿಂದು.   ಇದರ ನಡುವೆ ಸೈಕೋ ಶ್ಯಾಮ್ ಎಂಬ  ವಿಕೃತ ಮನುಷ್ಯ ಅಮಾನುಷ ಕೊಲೆಯಲ್ಲಿ ಭಾಗಿಯಾಗಿದ್ದು, ಆತ ಪೊಲೀಸರಿಂದ ತಪ್ಪಿಸಿಕೊಂಡ ಬಳಿಕ ಸಂಭವಿಸುವ ಕೊಲೆಗಳಿಗೆ ಆತ ಕಾರಣವೇ ಎಂಬುದು ಕಥೆಯ ಸಾರಾಂಶ.   ಇದರ ನಡುವೆ ಪೊಲೀಸ್, ಮಾಧ್ಯಮ ಹಾಗೂ ವೈದ್ಯರನ್ನು ಒಟ್ಟು ಮಾಡಿ ಕಥೆ ಹೇಳುವ ....

346

Read More...

Olave Mandara 2.Reviews

Friday, September 22, 2023

 

ಒಲವೇ ಮಂದಾರ 2 ಚಿತ್ರವಿಮರ್ಶೆ

 

ಎರಡು ಪ್ರೇಮ ಒಂದೇ ಕಥೆ

 

ಒಂದೆ ಕಡೆ ಕೆಲಸ ಮಾಡುವ ಎರಡು ಜೀವಗಳು ಬೇಗನೆ ಪ್ರೀತಿಯ ಮಾಯೆಗೆ ಒಳಪಡುವುದುಂಟು..

 

ಇಲ್ಲಿಯೂ ಹಾಗೆ ಒಂದೇ ಕಚೇರಿಯಲ್ಲಿ ಕೆಲಸ ಮಾಡುವ ಇಬ್ಬರು ಪ್ರೀತಿಸಿ ಮದುವೆಗೆ ಸಜ್ಜಾದಾಗ ಅಚ್ಚರಿಯ ಘಟನೆಗಳು ತೆರೆದುಕೊಳ್ಳುತ್ತವೆ..

 

ಧೃತಿ ಎಂಬ ಯುವತಿ ಆರ್ಯನ ಮೇಲೆ ಮೋಹಗೊಂಡು ಆತನ ಪ್ರೀತಿಗೆ ತವಕಿಸುತ್ತಾಳೆ. ಆದರೆ ಆರ್ಯ ಅಷ್ಟು ಸುಲಭವಾಗಿ ಪ್ರೀತಿಯಲ್ಲಿ ಬೀಳುವುದಿಲ್ಲ; ಅದಕ್ಕೆ ಬೇರೊಂದು ಕಥೆ ಇರುತ್ತದೆ.

 

ಅದೇ ಮತ್ತೊಂದು ಪ್ರೇಮ. ಆರ್ಯ ಹಾಗೂ ಭೂಮಿ ಎಂಬಿಬ್ಬರ ಪ್ರೇಮದ ಕಥಾನಕ ಆಸಕ್ತಿ ಹುಟ್ಟಿಸುತ್ತದೆ. ಅವರದು ನಿಜವಾದ ಪ್ರೇಮ ಎಂಬುದನ್ನು ನಿರೂಪಿಸಿರುವುದು ವಿಶೇಷ.

417

Read More...

13 Film Reviews

Friday, September 15, 2023

ಕುತೂಹಲ ಕೆರಳಿಸುವ ೧೩ *****        ಹಿಂದೂ ಮುಸ್ಲಿಂ ಭಾವೈಕ್ಯ ಹಾಗೂ ವ್ಯವಸ್ಥೆಯ ಕರಾಳ ರೂಪದ ಪರಿಚಯವನ್ನು ‘೧೩’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಕಥೆಯಲ್ಲಿ ಮೋಹನ್ (ರಾಘವೇಂದ್ರ ರಾಜ್‌ಕುಮಾರ್) ಮತ್ತು ಸಾಯಿರಾ (ಶೃತಿ) ಇಬ್ಬರು ಅಂತರ್‌ಧರ್ಮದ ವಿವಾಹ ಮಾಡಿಕೊಂಡಿರುತ್ತಾರೆ. ಗುಜರಿ ಹಾಗೂ ಟೀ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಇಬ್ಬರದು ಅದಮ್ಯ ಪ್ರೀತಿ, ಹೇಳಲಾಗದಷ್ಟು ಒಡನಾಟ. ಅವಳಿಗೆ ಕಷ್ಟ ಬಂದರೆ ರಾಮ ಎನ್ನುತ್ತಾಳೆ. ಆತನು ಯಾವಾಗಲೂ ಅಲ್ಲಾ ಅಂತ ಸಂಭೋದಿಸುತ್ತಿರುತ್ತಾನೆ. ಹೀಗಿರುವಾಗ ಸಾಯಿರಳ ಅತಿಯಾದ ಆಸೆ ಮೋಹನ್ ಸಮಸ್ಯೆಯಲ್ಲಿ ಸಿಲುಕುತ್ತಾರೆ. ಆಕಸ್ಮಿಕ ಘಟ್ಟದಲ್ಲಿ ಆಕೆಗೆ ೧೩ ಕೋಟಿ ....

401

Read More...

Tatsama Tadbhava.Reviews

Friday, September 15, 2023

ರೋಚಕ ತಿರುವುಗಳ ತತ್ಸಮ ತದ್ಭವ  ****       ಒಂದು ಕೊಲೆ ನಡೆದರೆ ಅದರ ಹಿಂದೆ ಹಲವಾರು ಅನುಮಾನಗಳ ಛಾಯೆ, ನಾಪತ್ತೆಯಾದವರ ಜಾಡಿನ ಹಿಂದಿನ ಸ್ನೇಹ, ಪ್ರೀತಿ, ದ್ವೇಷದ ಸುಳಿಯನ್ನು ತೆರೆದಿಡುವುದೇ ‘ತತ್ಸಮ ತದ್ಭವ’ ಚಿತ್ರದ ಒನ್ ಲೈನ್ ಸ್ಟೋರಿಯಾಗಿದೆ. ಕಥಾನಾಯಕಿ ಆರಿಕಾ ತನ್ನ ಗಂಡ ನಾಪತ್ತೆ ಆಗಿರೋದನ್ನ ಗಮನಿಸಿ ಪೋಲೀಸರ ಬಳಿ ಹೋಗಿ ದೂರು ದಾಖಲು ಮಾಡುತ್ತಾಳೆ. ಠಾಣೆಯ ಅಧಿಕಾರಿ ಅರವಿಂದ್ ತನ್ನ ಸೂಕ್ಷ ನಡೆಯಿಂದಲೇ ಕೇಸಿನ ವಿಚಾರದಲ್ಲಿ ಕಾಣೆಯಾದ ಸಂಜಯ್‌ನನ್ನು ಹುಡುಕಲು ಮುಂದಾಗುತ್ತಾರೆ. ಆತ ಕೆಲಸ ಮಾಡುವ ಕಂಪೆನಿಯಲ್ಲಿ ಅವನ ಒಡನಾಟ,ಮನಸ್ಥಿತಿ, ಮನೆಯಲ್ಲಿ ಪತ್ನಿಯೊಂದಿಗಿನ ಸಂಬಂದ ಹೇಗಿತ್ತು. ಯಾವ ಕಾರಣಕ್ಕೆ ....

363

Read More...

Parimala D'Souza.Reviews

Friday, September 15, 2023

ಸಸ್ಪೆನ್ಸ್ ಥ್ರಿಲ್ಲರ್ ಪರಿಮಳ ಡಿಸೋಜಾ ****        ‘ಪರಿಮಳ ಡಿಸೋಜ’ ಚಿತ್ರವು ಸೆಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಸುಂದರವಾದ ಕುಟುಂಬದಲ್ಲಿ ಸೊಸೆಯಾಗಿ ಬರುವ ಪರಿಮಳ ಡಿಸೋಜ ಕ್ರಿಶ್ಚಿಯನ್ ಹುಡುಗಿಯಾದರೂ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡುವುದನ್ನು ರೂಢಿ ಮಾಡಿಕೊಂಡಿರುತ್ತಾಳೆ. ಒಂದು ದಿನ ಭಿಕ್ಷುಕನಿಗೆ ದಾನ ಮಾಡುವಾಗ, ಆತ ಈಕೆಯಲ್ಲಿ ತನ್ನ ಅಮ್ಮನ ಪ್ರತಿರೂಪವನ್ನು ಕಾಣುತ್ತಾನೆ. ಚಿಕ್ಕ ವಯಸ್ಸಿನಲ್ಲಿ ಅಮ್ಮನನ್ನು ಕಳೆದುಕೊಂಡಿದ್ದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಭಿಕ್ಷುಕನಾಗಿರುತ್ತಾನೆ. ಹೀಗಿರುವಾಗ ಪರಿಮಳ ಮರಣ ಹೊಂದುತ್ತಾಳೆ. ಅದು ಕೊಲೆ ಅಂತ ಕಂಡುಬಂದಾಗ ತನಿಖೆಯ ಹಾದಿ ಶುರುವಾಗುತ್ತದೆ. ಆದರೆ ....

371

Read More...

Sapata Sagaradache Yello.Reviews

Friday, September 01, 2023

ಶುದ್ದ ಪ್ರೇಮಕಥೆಯಲ್ಲಿ ತೇಲಿ ಬಂದ ದೋಣಿ       ಬಿಡುಗಡೆಯ ಹೊಸ್ತಿಲಲ್ಲೆ ಸೈಡ್ ೧ ಮತ್ತು ಸೈಡ್ ೨ ಎಂದು ಬಿಂಬಿಸಿಕೊಂಡಿರುವ ‘ಸಪ್ತ  ಸಾಗರದಾಚೆ ಎಲ್ಲೋ’ ಚಿತ್ರದ ಸೈಡ್೧ ಮನು ಮತ್ತು ಪ್ರಿಯಾಳ ಸುತ್ತ ಸಾಗುತ್ತದೆ. ಕಥೆಯಲ್ಲಿ ಸಿಲಿಕಾನ್ ಸಿಟಿಯಲ್ಲಿರುವ ಮನು (ರಕ್ಷಿತ್‌ಶೆಟ್ಟಿ) ೧೨೦೦೦ ಸಾವಿರ ಸಂಬಳ ಪಡೆಯುತ್ತಿರುತ್ತಾನೆ. ಆತನ ಪ್ರೇಯಸಿ ಪ್ರಿಯಾ (ರುಕ್ಮಿಣಿವಸಂತ್) ಈತನನ್ನು ತುಂಬ ಪ್ರೀತಿಸುತ್ತಿರುತ್ತಾಳೆ. ಸಿನಿಮಾ ಶುರುವಾದ ಕೆಲವೇ ನಿಮಿಷಗಳಲ್ಲಿ ಇಬ್ಬರ ಗಾಢ ಎಷ್ಟು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತದೆ. ಇವರಿಬ್ಬರು ಕಡಲ ಕಿನಾರೆಯಲ್ಲಿ ಬೀಸುವ ತಂಗಾಳಿಯಂತೆ ಇರುವ ಹೊತ್ತಿಗೆ, ಅವರ ಬಾಳಿನಲ್ಲಿ ....

433

Read More...

Toby.Film Reviews

Friday, August 25, 2023

ಟೋಬಿ ಅಪರಾದ ಕ್ರೋಧ ತುಂಬಿದ ಚಿತ್ರಣ      ‘ಒಂದು ಮೊಟ್ಟೆಯ ಕಥೆ’ ಚಿತ್ರದಲ್ಲಿ ಮುಗ್ದನಾಗಿ, ‘ಗರುಡ ಗಮನ’ದಲ್ಲಿ  ರೌಡಿಯಾಗಿ ಕಾಣಿಸಿಕೊಂಡಿದ್ದ ರಾಜ್.ಬಿ.ಶೆಟ್ಟಿ ‘ಟೋಬಿ’ ಸಿನಿಮಾದಲ್ಲಿ ತಮ್ಮ ಪ್ರತಿಭೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಡಾರ್ಕ್ ಕಥೆ ಅಂದುಕೊಂಡಿದ್ದವರಿಗೆ ಇದೊಂದು ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಅಂತ ತಿಳಿಯುತ್ತದೆ. ಸಾಮಾನ್ಯ ವ್ಯಕ್ತಿಯಲ್ಲಿ ಕಾಣುವ ಮಾಸ್ ಅಂಶಗಳು ಇರಲಿದೆ. ಹುಟ್ಟಿನ ಬಗ್ಗೆ ಮಾಹಿತಿ ಇಲ್ಲದ ಅವನಿಗೆ ಪಾದ್ರಿಯೊಬ್ಬರು ಟೋಬಿ ಅಂತ  ನಾಮಕರಣ ಮಾಡುತ್ತಾರೆ. ಮುಂದೆ ಅವನ ಜೀವನದಲ್ಲಿ ನಡೆಯುವ ಘಟನೆಗಳಿಗೆ  ಹೇಗೆ ವರ್ತಿಸುತ್ತಾನೆ. ಆತ ಮಾಡುವ ಸಾಲು ಸಾಲು ....

510

Read More...

Kshetrapathi.Reviews

Friday, August 18, 2023

ಕ್ಷೇತ್ರಪತಿ ಅನ್ನದಾತನ ಕಥನ

       ‘ಕ್ಷೇತ್ರಪತಿ’ ಸಿನಿಮಾವು ರೈತ ಅನುಭವಿಸುವ ನೋವು ನಲಿವುಗಳನ್ನು ಸೊಗಸಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಆತ ಬೆಳೆಯುವ ಬೆಳಗೆ ಸರಿಯಾದ ಬೆಲೆ ಸಿಗದೆ ಮಧ್ಯವರ್ತಿಗಳ ಪಾಲಾಗುತ್ತದೆ. ರೈತನ ಶ್ರಮಕ್ಕೆ ಸರಿಯಾದ ನ್ಯಾಯಯುತವಾದ ಬೆಲೆ ಸಿಗುತ್ತದೆ ಎಂಬುದನ್ನು ತಿಳಿದು ದಿಟ್ಟ ಹೆಜ್ಜೆಯ ಮೂಲಕ ನೇರ ಮಾರಾಟಕ್ಕೆ ಮುಂದಾಗುವ ಬಿಸಿರಕ್ತ ಹುಡುಗ ಅನುಭವಿಸುವ ಸಂಕಷ್ಟಗಳನ್ನು ಹೇಳುವುದೇ ಮುಖ್ಯ ಕಥಾವಸ್ತುವಾಗಿದೆ.  ಬಸವ ತಿಮ್ಮಾಪುರದವನಾಗಿದ್ದು, ಉನ್ನತ ವ್ಯಾಸಾಂಗ ಮಾಡುವಾಗ ಎದುರಾದ ಸಮಸ್ಯೆಗಳಿಗೆ ಹೋರಾಡಲು ಮುಂದಾಗುತ್ತಾನೆ. 

432

Read More...

Namo Bhoothathma 2.Reviews

Friday, August 04, 2023

ಭೂತ ನಗಿಸಿದರೆ ಆತ್ಮ ಭಯಬೀಳಿಸುತ್ತೆ       ‘ನಮೋ ಭೂತಾತ್ಮ’ದಲ್ಲಿ ನಗಿಸಿದ್ದ ಕೋಮಲ್ ಈಗ ‘ನಮೋ ಭೂತಾತ್ಮ-೨’ದಲ್ಲಿ ಅದನ್ನೆ ಮುಂದುವರೆಸಿದ್ದಾರೆ. ಅವರ ಹಾವಭಾವ, ಡೈಲಾಗ್ ಡಿಲಿವಿರಿ ನೋಡುವುದೇ ಖುಷಿ ಕೊಡುತ್ತದೆ. ಹೆಸರಿಗೆ ತಕ್ಕಂತೆ ಇದೊಂದು ಥ್ರಿಲ್ಲರ್ ಕಾಮಿಡಿ ಚಿತ್ರವಾಗಿದ್ದರೂ, ನೋಡುಗರಿಗೆ ಬೇರೆ ತರಹ ಮನರಂಜನೆ ಸಿಗಲಿದೆ. ಐದು ಮಂದಿ ಸೇರಿಕೊಂಡು ಕಾಡಿನಲ್ಲಿರುವ ಪಾಳು ಬಿದ್ದ ಮನೆಯೊಳಗೆ ಹೋಗುತ್ತಾರೆ. ಅಲ್ಲಿ ಹೇಗೆ ಅವಾಂತರಗಳನ್ನು ಸೃಷ್ಟಿಸಿಕೊಂಡು ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡು ಯಾವ ರೀತಿ ಪರದಾಡುತ್ತಾರೆ. ಒಂದಷ್ಟು ಘಟನೆಗಳು ಗೊಂಬೆಯ ಚಲನೆ, ತನ್ನಷ್ಟಕ್ಕೆ ಬೀಳುವ ಬಾಗಿಲು, ಕಿಟಾರನೇ ಕಿರುಚಿಕೊಳ್ಳುವ ....

422

Read More...

Kousalya Supraja Rama.Reviews

Friday, July 28, 2023

ತಾಯಿ ಮಗನ ಸೆಂಟೆಮೆಂಟ್ ಹೈಲೈಟ್        ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರವನ್ನು ಅಹಂ ಇರುವ ಪ್ರತಿಯೊಬ್ಬ ಗಂಡಸರು ನೋಡಬೇಕಾದ ಚಿತ್ರವೆಂದು ಘಂಟಾಘೋಷವಾಗಿ ಹೇಳಬಹುದು. ಸದಭಿರುಚಿಯ ನಿರ್ದೇಶಕನೆಂದು ಖ್ಯಾತರಾಗಿರುವ ಶಶಾಂಕ್ ಈ ಬಾರಿಯೂ ಅಂತಹುದೆ ಕಥೆಯನ್ನು ನೀಡಿದ್ದಾರೆ. ತಾನು ಹೇಳಿದಂತೆ ನಡೆದುಕೊಳ್ಳಬೇಕೆಂಬ ಸಿದ್ದೇಗೌಡನಿಗೆ ಪತ್ನಿ ಪತಿಯ ಸೇವೆ ಮಾಡಿಕೊಂಡು ಇರಬೇಕೆಂದು ಬಯಸಿರುತ್ತಾನೆ. ಅದರಂತೆ ಆಕೆಯು ಏನೇ ಕಷ್ಟಬಂದರೂ ಅದನ್ನು ಸುಧಾರಿಸಿಕೊಂಡು ಜೀವನ ಸಾಗಿಸುತ್ತಿರುತ್ತಾಳೆ ಕುಲಪುತ್ರ ರಾಮೇಗೌಡ ಅಲಿಯಾಸ್ ರಾಮ ಅಪ್ಪನ ಗುಣವನ್ನೇ ಫಾಲೋ ಮಾಡಿಕೊಂಡು ಬಂದಿರುತ್ತಾನೆ. ಒಂದು ಹಂತದಲ್ಲಿ ಶಿವಾನಿಯನ್ನು ....

422

Read More...

Paramvah.Reviews

Friday, July 21, 2023

ವೀರಗಾಸೆ ಹುಡುಗನ ಕಥೆ ವ್ಯಥೆ

      ಹೊಸಬರ ‘ಪರಂವ’ ಸಿನಿಮಾವು ವೀರಗಾಸೆಯನ್ನೆ ವೃತ್ತಿಯನ್ನಾಗಿ ಬಳಸಿಕೊಂಡ ಕುಟುಂಬದ ಕಥೆಯು ಇಂದಿನ ಯುವ ಜನಾಂಗದ ಜೀವನ ಶೈಲಿಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಹಳ್ಳಿ ಹುಡುಗನ ಜೀವನದಲ್ಲಿ ನಡೆಯುವ ಸನ್ನಿವೇಶಗಳು, ಬಡತನದಿಂದ ಬಂದ ಹುಡುಗ, ಕಷ್ಟ ಪಡುವ ತಂದೆ, ಕಾಲೇಜು ಓದುವ ಹಂತಕ್ಕೆ ಬಂದ ಮೇಲೆ ಆತ ಏನಾಗುತ್ತಾನೆ. ಅಪ್ಪನ ಆಸೆಯಂತೆ ದಸರಾ ಸಂಭ್ರಮದಲ್ಲಿ ವೀರಗಾಸೆ ನೃತ್ಯ ಪ್ರದರ್ಶಿಸುತ್ತಾನಾ ಎಂಬುದು ಒಂದಳೆ ಸಾರಾಂಶವಾಗಿದೆ.

364

Read More...

David.Film Reviews

Friday, July 21, 2023

ಕುತೂಹಲ ಹುಟ್ಟಿಸುವ ಡೇವಿಡ್        ‘ಡೇವಿಡ್’ ಚಿತ್ರವು ಸೆಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ಎಲ್ಲವು ಆಧುನಿಕ ಮತ್ತು ಆಡಂಬರ. ಕಥೆಯಲ್ಲಿ ಶರ್ಮಾ ಗ್ರೂಫ್ ಆಫ್ ಕಂಪೆನಿಯ ಯಜಮಾನನ ಕೊಲೆಯಾಗುತ್ತದೆ. ಸುಂದರಿಯಾಗಿದ್ದ ಮಗಳ ಅಪಹರಣವಾಗುತ್ತದೆ. ಎರಡು ಘಟನೆಗಳು ಅಚ್ಚರಿ ತಂದು, ನೋಡುಗರಿಗೆ ಕುತೂಹಲ ಕೆರಳಿಸುತ್ತದೆ. ಪ್ರಾರಂಭದಲ್ಲಿ ಹುಡುಗರ ತುಂಟಾಟ, ವಿರಾಮದ ನಂತರ ಕೊಲೆಗಾರನ ಬೇಟೆಯಾಡುವ ಸನ್ನಿವೇಶಗಳು ಬರುತ್ತದೆ. ಹುಡುಗರ ತಮಾಷೆಯ ಹುಚ್ಚಾಟದಲ್ಲಿ ಅಪಾಯ ಒದಗಿ ಬರುತ್ತದೆ. ಮತ್ತೋಂದು ಕಡೆ ಜಾಲಿ ಮಾಡಲು ಹೋಗಿ ಹಣದ ಸಲುವಾಗಿ ಅಪಹರಣ ನಂತರ ಅಪಾಯಕ್ಕೆ ಸಿಲುಕುತ್ತಾರೆ. ಕೊನೆಗೆ ಎರಡನ್ನು ಹೇಗೆ ....

426

Read More...

Madhura Kavya.Reviews

Friday, July 21, 2023

ಮೆಡಿಕಲ್ ಮಾಫಿಯಾ ಕುರಿತಾದ ಮಧುರಕಾವ್ಯ

       ‘ಮಧುರಕಾವ್ಯ’ ಸಿನಿಮಾದ ಕಥೆಯು ಆರ್ಯುವೇದ ಮತ್ತು ಅಲೋಪಥಿ ವೈದ್ಯ ಪದ್ದತಿಯ ನಡುವೆ ಆಗಾಗ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಇಂತಹ ಸಂಘರ್ಷದಿಂದ ಪರಿಣಾಮ ಏನಾಗುತ್ತದೆ? ಹಾಗೆಯೇ ಮೆಡಿಕಲ್ ಮಾಫಿಯಾ ಹೇಗೆ ಆರ್ಯುವೇದವನ್ನು ನಾಶ ಮಾಡುತ್ತವೆ. ಪಾರಂಪರಿಕವಾಗಿ ಜನರ ಸೇವೆ ಮಾಡಿಕೊಂಡು ಬಂದಿರುವ ನಾಟಿ ವೈದ್ಯರನ್ನು ತುಳಿಯುವ ರೀತಿ, ಪುರಾತನವಾದ ಆರ್ಯುವೇದವನ್ನು ಉಳಿಸಬೇಕು. ನಾಟಿ ವೈದ್ಯ ಪದ್ದತಿ ಬೆಳಸಬೇಕು ಅಂತ ಹೇಳ ಹೊರಟಿದೆ.

344

Read More...

Aggrasena.Reviews

Friday, June 23, 2023

ಹಳ್ಳಿ ಬದುಕಿನ ಅಗ್ರಸೇನಾ

      ಅಪ್ಪ ಮಗನ ಬಾಂಧವ್ಯ, ಹಳ್ಳಿ-ಪಟ್ಟಣ ನಡುವಿನ ಕಥೆಯನ್ನು ‘ಅಗ್ರಸೇನಾ’ ಚಿತ್ರದಲ್ಲಿ ತೋರಿಸಲಾಗಿದೆ. ರಾಮದೇವನಪುರ ಜನರು ಪಟ್ಟಣಕ್ಕೆ ವಲಸೆ ಹೋಗಬಾರದು. ಇಲ್ಲಿದ್ದುಕೊಂಡೇ ಸುಖವಾಗಿ ಜೀವನ ಕಾಣಬೇಕೆಂದು ಕನಸು ಕಾಣುವ ಊರಿನ ಮುಖಂಡ. ಮಗ ಅಗಸ್ತ್ಯ ಯಾವುದೇ ಕಾರಣಕ್ಕೂ ಸಿಟಿಗೆ ಹೋಗುವುದಿಲ್ಲವೆಂದು ಮಾತು ತೆಗೆದುಕೊಂಡಿರುತ್ತಾರೆ. ಮುಂದೆ ಆರೋಗ್ಯದಲ್ಲಿ ಏರುಪೇರು ಬಂದಾಗ ಅಪ್ಪನನ್ನು ಒಳ್ಳೆಯ ಆಸ್ಪತ್ರೆಗೆ ಸೇರಿಸಲು ಸಿಟಿಗೆ ಹೋಗುವಂತಹ  ಸ್ಥಿತಿ ಬರುತ್ತದೆ. ಆಗ ಅಮರ್ ಎಂಟ್ರಿಯಾಗಿ ಅಗಸ್ತ್ಯನ ತಂದೆಯನ್ನು ಪಟ್ಟಣಕ್ಕೆ ಸೇರಿಸಿ ಯೋಗಕ್ಷೇಮ ನೋಡಿಕೊಳ್ಳುವ ಜವಬ್ದಾರಿ ಹೊತ್ತುಕೊಳ್ಳುತ್ತಾನೆ.

355

Read More...

Bera.Film Reviews

Friday, June 16, 2023

ಕರಾವಳಿ ಭಾಗದ ಬೇರ       ‘ಬೇರ’ ಚಿತ್ರದ ಕಥೆಯು ಕರಾವಳಿ ಭಾಗದ ಗೇಟ್ ಎಂಬ ಊರಲ್ಲಿ ನಡೆಯುವ ಒಂದು ಸಂಘರ್ಷದ ಸಿನಿಮಾವಾಗಿದೆ. ಹೆದ್ದಾರಿಗೆ ಅಂಟಿಕೊಂಡಿರುವ ಊರಿನಲ್ಲಿ ಧರ್ಮ ಭೇದದ ಭೀತಿ. ನೆಮ್ಮದಿಯಿಂದ ಇದ್ದ ಜನರಲ್ಲಿ ಜಾತಿ ಧರ್ಮದ ಮಧ್ಯೆ ಕೋಲಾಹಲ. ಸಲೀಮ್ ಮತ್ತು ವಿಷ್ಣು ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟದಿದ್ದರೂ ಗಳಸ್ಯ ಸ್ನೇಹಿತರು. ಬೇರೆ ಕೋಮಿನವರಾಗಿದ್ದರೂ ಪ್ರಾಣಕ್ಕೆ ಪ್ರಾಣ ಕೊಡುವವರು. ಮುಖಂಡರೆನಿಸಿಕೊಂಡವರು ತಮ್ಮ ಸ್ವಪ್ರತಿಷ್ಟೆ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುವಂತವರು. ಸಲೀಮ್ ಮ್ಯೂಸಿಯಂ ಇಟ್ಟುಕೊಂಡಿದ್ದರೆ, ವಿಷ್ಣು ಗೋಶಾಲೆ ನೋಡಿಕೊಂಡಿರುತ್ತಾನೆ. ಮ್ಯೂಸಿಯಂ ಕಂಬಗಳನ್ನು ತೆರೆವುಗೊಳಿಸಬೇಕೆಂದು ಮುಖಂಡ ....

433

Read More...

Darbar.Film Reviews

Friday, June 09, 2023

ನೋಡುಗರನ್ನು ನಗಿಸುವ ದರ್ಬಾರ್

      ನಮ್ಮ ನಮ್ಮಲ್ಲಿನ ನಡುವಿನ ಸಂಬಂಧಗಳನ್ನು ಚುನಾವಣಾ ರಾಜಕೀಯ ಹೇಗೆ ಹಾಳು ಮಾಡುತ್ತದೆ. ಗ್ರಾಮ ಮಟ್ಟದಲ್ಲಿ ನಡೆಯುವ ಗ್ರಾಮ ಪಂಚಾಯತಿ  ಚುನಾವಣೆಗಳು ಯಾವ ರೀತಿ ನಡೆಯುತ್ತದೆ. ಇದರಲ್ಲಿ ಗೆಲ್ಲಲು ಹಣ, ಹೆಂಡದ ಹೊಳೆ ಹೇಗೆ ಸುರಿಸುತ್ತಾರೆ ಎಂಬುದನ್ನು ‘ದರ್ಬಾರ್’ ಎನ್ನುವ ಚಿತ್ರದಲ್ಲಿ ಹಾಸ್ಯದ ಸನ್ನಿವೇಶಗಳಲ್ಲಿ ಚೆನ್ನಾಗಿ ತೋರಿಸಲಾಗಿದೆ. ಸಾಹಿತಿ, ಸಂಗೀತ ಸಂಯೋಜಕ ವಿ.ಮನೋಹರ್ ೨೩ ವರ್ಷಗಳ ನಂತರ ನಿರ್ದೇಶನ ಮಾಡಿರುವ ಸಿನಿಮಾವು ಔಟ್ ಅಂಡ್ ಔಟ್ ಕಾಮಿಡಿ ಇರಲಿದ್ದು, ಹಳ್ಳಿ ಹಿನ್ನಲೆಯಲ್ಲಿ ಜರುಗುವ ಸಂದರ್ಭಗಳನ್ನು ಚೆನ್ನಾಗಿ ಸನ್ನಿವೇಶಗಳ ಮೂಲಕ ಸೃಷ್ಟಿಸಿದ್ದಾರೆ.

342

Read More...

Gadayuddha.Reviews

Friday, June 09, 2023

ದುಷ್ಟಶಕ್ತಿಯನ್ನು ನಿರ್ಮೂಲನ ಮಾಡುವ ಗದಾಯುದ್ದ

      ಹೊಸಬರ ‘ಗದಾಯುದ್ದ’ ಚಿತ್ರವು ವಾಮಾಚಾರಿ ಕುರಿತಾಗಿದೆ. ಪ್ರಪಂಚದಲ್ಲಿ ಭೂತಪ್ರೇತಗಳು ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ವಾಮಾಚಾರ ಎನ್ನುವುದು ಮಾತ್ರ ಇಂದಿಗೂ ಜೀವಂತವಾಗಿದೆ. ಕೇವಲ ವೈಯಕ್ತಿಕ ದ್ವೇಷ, ಧನದಾಹದಿಂದ ಮಾನವರ ಜೀವ ತೆಗೆಯಲು ಇದನ್ನು ಬಳಸಿಕೊಳ್ಳಲಾಗುತ್ತಿದೆ. ನಾಯಕನ ರೂಪದಲ್ಲಿ ಮರುಜನ್ಮ ತೆಳೆದ ಭೀಮ ಗದಾಯುದ್ದದ ಮೂಲಕ ಹೇಗೆ ಇಂಥವರನ್ನು ಸದೆಬಡಿಯುತ್ತಾನೆ ಎನ್ನುವುದು ಒಂದು ಏಳೆಯ ಸಾರಾಂಶವಾಗಿದೆ. ಪೌರಾಣಿಕ ಘಟನೆ ಹಾಗೂ ಈಗಿನ ಕಥೆಯನ್ನು ಇಟ್ಟುಕೊಂದು ಸನ್ನಿವೇಶಗಳನ್ನು ಸೃಷ್ಟಿಸಿರುವುದು ತಿಳಿದು ಬರುತ್ತದೆ. 

371

Read More...

Siren.Film Reviews

Friday, May 26, 2023

ತನಿಖೆಯೊಂದಿಗೆ ಥ್ರಿಲ್ಲರ್ ಚಿತ್ರ ಸೈರನ್       ‘ಸೈರನ್’ ಚಿತ್ರವು ಮರ್ಡರ್ ಮಿಸ್ಟ್ರಿ ಕಥೆಯನ್ನು ಒಳಗೊಂಡಿದೆ. ಒಂದು ಕೊಲೆ ನಡೆಯುತ್ತದೆ. ಅದನ್ನು ತನಿಖೆ ಮಾಡಲು ಹೋದಾಗ ಮತ್ತೋಂದು ಕೊಲೆ ಆಚೆಗೆ ಬರುತ್ತದೆ. ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಶ್ವೇತಾ ಮನೆಗೆ ಬಂದಿರುವುದಿಲ್ಲ. ಆತಂಕಗೊಂಡ ತಾಯಿ, ತಂಗಿ ಠಾಣೆಗೆ ಹೋಗುತ್ತಾರೆ. ದೂರು ದಾಖಲಿಸಿಕೊಂಡ ಪೋಲೀಸರಿಗೆ ಸಾಮಾಹಿಕ ಅತ್ಯಾಚಾರಕ್ಕೆ ಗುರಿಯಾಗಿ, ಸುಟ್ಟ ರೀತಿಯಲ್ಲಿ ದೇಹವೊಂದು ಸಿಗುತ್ತದೆ. ಅದು ಶ್ವೇತಾಳದ್ದೇ ಅಂತ ತಿಳಿಯುತ್ತದೆ. ಪ್ರಕರಣವನ್ನು ತನಿಖೆ ನಡೆಸಲು ಖಡಕ್ ಪೋಲೀಸ್ ಅಧಿಕಾರಿ ಬರುತ್ತಾರೆ. ಇದರಿಂದ ಸಾಕಷ್ಟು ತಿರುವುಗಳು ಪಡೆದುಕೊಂಡು ಅಂತಿಮವಾಗಿ ಅಪರಾಧಿ ....

426

Read More...

Shreemantha.Reviews

Friday, May 19, 2023

ರೈತನೇ ಶ್ರೀಮಂತ

      ಹಳ್ಳಿಯಲ್ಲಿರುವ ಯುವಕರು ಪಟ್ಟಣಕ್ಕೆ ಬರುತ್ತಾರೆ. ಮತ್ತೋಂದು ಕಡೆ ಅಲ್ಲಿನ ಹುಡುಗಿಯರು ಪಟ್ಟಣದ ಹುಡಗರನ್ನೇ ಬಯಸುತ್ತಾರೆ. ಪ್ರಸಕ್ತ ಪರಿಸ್ಥಿತಿ ಇದಾಗಿದೆ. ಇಂತಹುದೇ ವಿಷಯಗಳನ್ನು ಹೆಕ್ಕಿಕೊಂಡು ‘ಶ್ರೀಮಂತ’ ಎನ್ನುವ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಅನ್ನದಾತನೆಂದು ರೈತನಿಗೆ ಕರೆಯುತ್ತಾರೆ. ಆದರೆ ಹುಡುಗಿ ಮಾತ್ರ ಸಿಗುವುದಿಲ್ಲ. ಸಿಕ್ಕರೂ ಆತನೊಂದಿಗೆ ಬಾಳ್ವೆ ಮಾಡಲು ನಿರಾಕರಿಸುತ್ತಾಳೆ. ಆತನು ಕಷ್ಟಪಟ್ಟು ದುಡಿದು, ತಾನು ನಂಬಿದ ಭೂಮಿ ತಾಯಿಯಿಂದ ಬೆವರು ಸುರಿಸಿ ಅನ್ನ ಬೆಳೆಯುತ್ತಾನೆ. ದೇಶಕ್ಕೆಲ್ಲ ಹಂಚುತ್ತಾ ಮಾದರಿಯಾಗುತ್ತಾನೆ. 

404

Read More...

Raaghu.Film Reviews

Sunday, May 28, 2023

ಹೋರಾಟದಲ್ಲಿ ಒಂಟಿ ಸಲಗ        ಒಂದೇ ಪಾತ್ರವನ್ನು ನಿರ್ವಹಿಸಿರುವ ಬೆರಳಿಕೆಯಷ್ಟು ಚಿತ್ರಗಳು ಬಂದಿವೆ. ಆ ಸಾಲಿಗೆ ‘ರಾಘು’ ಸಿನಿಮಾ ಸೇರ್ಪಡೆಯಾಗುತ್ತದೆ. ಕಥಾನಾಯಕ ರಾಘು ಔಷದಿಗಳನ್ನು ಗ್ರಾಹಕರಿಗೆ ತಲುಪಿಸುವ ಡೆಲಿವರಿ ಹುಡುಗ. ಕತ್ತಲಾದ ಮೇಲೆ ಆತನ ಕೆಲಸ ಬೇರೆಯದೆ ಇರುತ್ತದೆ. ಹೀಗೆ ಎರಡು ಗುಣಗಳಲ್ಲಿ ಬದುಕು ಸಾಗುತ್ತಿರಬೇಕಾದರೆ, ಲಾಕ್‌ಡೌನ್ ಘೋಷಣೆಯಾಗುತ್ತದೆ. ಅಲ್ಲಿಂದ ಸಿನಿಮಾ ಪ್ರಾರಂಭವಾಗುತ್ತದೆ. ಒಬ್ಬನೇ ಕಾಣಿಸಿಕೊಂಡರೂ ಧ್ವನಿಯ ಮೂಲಕ ಪಾತ್ರಗಳು ಪರಿಚಯಿಸುತ್ತದೆ. ಅವುಗಳೆಲ್ಲಾ ಅವನ ಜೀವನದಲ್ಲಿ ಒಬ್ಬೊಬ್ಬರಾಗಿ ಬರುತ್ತಿರುವಂತೆ ಸಿಗುವ ಕುತೂಹಲ ತಿರುವುಗಳು ಬರುತ್ತದೆ. ಒಂದು ಪ್ರೇಮ, ಅರ್ಧಕ್ಕೆ ನಿಂತ ಸ್ನೇಹ, ....

428

Read More...

Bisilu Kudure.Reviews

Friday, April 21, 2023

ರೈತರ ಸಮಸ್ಯೆ ಸಾರುವ ಬಿಸಿಲುಕುದುರೆ       ಸಾಹಿತಿ ಹೃದಯಶಿವ ಎರಡನೇ ಬಾರಿ ನಿರ್ದೇಶನ ಹಾಗೂ ಮೆಟಾಫರ್ ಮೀಡಿಯಾ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ‘ಬಿಸಿಲುಕುದುರೆ’ ಚಿತ್ರದ ಕಥೆಯು ಕಾಡಂಚಿನಲ್ಲಿ ವಾಸಿಸುವ ರೈತರು ಎದುರಿಸುತ್ತಿರುವ ಒಂದಷ್ಟು ಸಮಸ್ಯೆಗಳು, ಬಗರ್ ಹುಕುಂ ಸಾಗುವಳಿದಾರರ ಕಷ್ಟ ನಷ್ಟಗಳ ಬಗ್ಗೆ ಬೆಳಕು ಚೆಲ್ಲಲಿದೆ. ಅಲ್ಲದೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ನಡುವೆ ಸಾಮರಸ್ಯ ಇಲ್ಲದೆ ಹೋದಾಗ ಸಾಗುವಳಿ ಮಾಡುತ್ತಿರುವ ರೈತ ದೊಡ್ಡ ಸಮಸ್ಯೆಗೆ ಸಿಲುಕುತ್ತಾನೆ. ಹಾಗಾದಾಗ ಅವನ ಸ್ಥಿತಿ ಏನಾಗುತ್ತದೆ ಎಂಬುದನ್ನು ಹೇಳಲಾಗಿದೆ. ಕನಕಪುರ ಸುತ್ತಮುತ್ತಲ ರೈತರ ಬದುಕಿನ ಘಟನೆಗಳನ್ನು ಚಿತ್ರರೂಪಕ್ಕೆ ....

457

Read More...

Ramzan.Film Reviews

Friday, April 21, 2023

ಉಳ್ಳವರು ಮತ್ತು ಇಲ್ಲದವರ ಕಥನ****

       ಫಕೀರ್ ಮೊಹಮ್ಮದ್ ಕಟ್ಟಾಡಿ ಬರೆದಿರುವ ‘ನೋಂಬು’ ಕಥೆಯು ‘ರಂಜಾನ್’ ಚಿತ್ರವಾಗಿ ಮೂಡಿಬಂದಿದೆ. ಇಸ್ಲಾಂ ಸಮುದಾಯದ ಕಲ್ಮಾ, ರೋಜಾ, ನಮಾಜ್, ಜಕಾತ್ ಹಾಗೂ ಹಜ್ ಎಂಬ ಐದು ಮೂಲಭೂತ ತತ್ವಗಳ ಪರಿಪಾಲನೆ ಹೇಗೆ ಮಾಡಬೇಕು. ಉಳ್ಳವರು ಮತ್ತು ಇಲ್ಲದವರ ಬದುಕು ಹೇಗಿರುತ್ತದೆ. ಬಡತನದಲ್ಲಿದ್ದರೂ ಸುಖ ಜೀವನ ನಡೆಸುವ ಕುಟುಂಬ, ಎಲ್ಲವೂ ಇದ್ದರೂ ನೆಮ್ಮದಿ ಕಾಣದ ದಂಪತಿಗಳು. ಇದರ ಜೊತೆಗೆ ಭೂಸ್ವಾದೀನದ ಕೆಲವೊಂದು ಅಂಶಗಳನ್ನು ತೆರೆದಿಡುವ ಪ್ರಯತ್ನವನ್ನು ಮಾಡಲಾಗಿದೆ.

718

Read More...

Nodadha Putagalu.Reviews

Friday, April 21, 2023

ಕಾವ್ಯಾತ್ಮಕ ನೋಡದ ಪುಟಗಳು****        ವರ್ಷ ವರ್ಷ ನಿರ್ಧಿಷ್ಟ ಅವಧಿಯಲ್ಲಿ ಒಂದಷ್ಟು ಘಟನೆಗಳು ನಡೆಯುತ್ತವೆ. ಅದರ ಆಧಾರದ ಮೇಲೆ ‘ನೋಡದ ಪುಟಗಳು’ ಚಿತ್ರವನ್ನು ಮಾಡಲಾಗಿದೆ. ಕಥೆಯಲ್ಲಿ ಬಾಲ್ಯ, ಶಾಲೆ, ಕಾಲೇಜು ಹಾಗೂ ಇಂಜಿನಿಯರಿಂಗ್‌ದಲ್ಲಿ ಓದುತ್ತಿರುವಾಗ ಅಲ್ಲಿ ನಡೆಯುವ ತುಂಟಾಟ, ಜಗಳ, ಕೋಪ ಇತರೆಗಳನ್ನು ನವಿರಾಗಿ ತೋರಿಸಿದ್ದಾರೆ. ಅದಕ್ಕೆ ಜೀವನಪೂರ್ತಿ ತಿರುವುಗಳು ಬರುತ್ತದೆ. ನಿನ್ನ ತಿರುವು ಬರುವ ತನಕ ಕಾಯಬೇಕು ಎಂದು ಅಡಿಬರಹದಲ್ಲಿ ಹೇಳಿಕೊಂಡಿರುವುದು ಸರಿ ಅನಿಸುತ್ತದೆ. ಶಾಲೆಯಲ್ಲಿ ಫಸ್ಟ್ ಲವ್ ಆಗಿದ್ದು, ಮುಂದೆ ಅವರುಗಳು ಕೆಲಸಕ್ಕೆ ಸೇರಿಕೊಂಡು, ವರ್ಷಗಳ ನಂತರ ಭೇಟಿಯಾದಾಗ ಒಬ್ಬರಿಗೊಬ್ಬರು ....

600

Read More...

Shivajisuratkal 2.Reviews

Friday, April 14, 2023

ಶಿವಾಜಿ ಸುರತ್ಕಲ್‌ನ ೧೩೧ನೇ ಕೇಸ್         ‘ಶಿವಾಜಿ ಸುರತ್ಕಲ್’ದಲ್ಲಿ ೧೩೦ ಕೇಸ್‌ಗಳನ್ನು ಪರಿಹರಿಸಿ ಕುತೂಹಲ ಮೂಡಿಸಿದ್ದ ನಿರ್ದೇಶಕ ಆಕಾಶ್‌ಶ್ರೀವತ್ಸ ‘ಶಿವಾಜಿಸುರತ್ಕಲ್-೨’ದಲ್ಲೂ ೧೩೧ ಕೇಸ್‌ನೊಂದಿಗೆ ಕ್ಷಣ ಕ್ಷಣಕ್ಕೂ ಅದನ್ನೆ ಮುಂದುವರೆಸಿಕೊಂಡು ಹೋಗಿದ್ದಾರೆ. ಪತ್ತೆದಾರಿ ಶೈಲಿಯ ಚಿತ್ರದಲ್ಲಿ ಸರಣಿ ಕೊಲೆಯ ಹಿಂದಿರುವ ಆಸಾಮಿ ಯಾರು? ಎಂಬುದನ್ನು ತನಿಖೆ ಮಾಡುವುದೇ ಶಿವಾಜಿಗೆ ದೊಡ್ಡ ಟಾಸ್ಕ್ ಆಗಿರುತ್ತದೆ. ಪತ್ನಿಯನ್ನು ಕಳೆದುಕೊಂಡಿದ್ದ ಆತನಿಗೆ ಮಗಳು ಬರುತ್ತಾಳೆ ತನ್ನ ಮಾತಿಗೆ ಬೆಲೆ ಕೊಡಲಿಲ್ಲವೆಂಬ ಕಾರಣಕ್ಕೆ ಅಪ್ಪ ವಿಜೇಂದರ್ ಮುನಿಸು ಮರೆತು ಮಗನಿಗೆ ....

441

Read More...

Kabzaa.Film Reviews

Friday, March 17, 2023

 

ಕಬ್ಜ: ಪ್ರೇಕ್ಷಕರ ಮನಸ್ಸನ್ನು ಕಬ್ಜ ಮಾಡಿದ ಚಿತ್ರ 4/5 ****

 

ಭೂಗತ ಲೋಕದ ಕತೆ ಎನ್ನುವ ಪ್ರಚಾರದೊಂದಿಗೇನೇ ತೆರೆಗೆ ಬಂದ ಸಿನಿಮಾ. ಆದರೆ ಡಾನ್​ಗಳ ಅಬ್ಬರದ ನಡುವೆ ಈ ಸಿನಿಮಾ ಬೇರೇನೇನಲ್ಲ ಹೇಳಿದೆ ಎನ್ನುವ ಕಾರಣಕ್ಕೆ ಕುತೂಹಲ ಮೂಡಿಸಿದೆ.

 

ಉತ್ತರದ ಸ್ವಾತಂತ್ರ್ಯ ಹೋರಾಟಗಾರನ ಕುಟುಂಬದ ಕತೆ. ಸ್ವಾತಂತ್ರ್ಯ ಹೋರಾಟದಲ್ಲಿ ಪತಿಯನ್ನು ಕಳೆದುಕೊಂಡ ಪತ್ನಿ ಇಬ್ಬರು ಮಕ್ಕಳೊಂದಿಗೆ ಕರ್ನಾಟಕಕ್ಕೆ ಬರುತ್ತಾರೆ. ಇಬ್ಬರು ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸಿ ದೊಡ್ಡವರನ್ನಾಗಿಸುತ್ತಾರೆ. ಹಿರಿಯ ಪುತ್ರ ಸಂಕೇಶ್ವರನ ಕೊಲೆಯ ಬಳಿಕ ಅರ್ಕೇಶ್ವರ ಅನ್ಯಾಯದ ವಿರುದ್ಧ ಹೋರಾಡಲು ಆಯುಧವನ್ನು ಕೈಗೆತ್ತಿಕೊಳ್ಳುತ್ತಾನೆ. ಮುಂದೇನೇನಾಗುತ್ತದೆ ಎನ್ನುವುದು ಚಿತ್ರದ ಕತೆ.

516

Read More...

Chowka Bara.Film Reviews

Friday, March 10, 2023

ನಾಲ್ಕು ಮನಸುಗಳ ನೋಟವೇ ಚೌಕಾಬಾರ        ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಬಾಲನಟ ನಂತರ ನಟನಾಗಿ ಗುರುತಿಸಿಕೊಂಡಿರುವ ವಿಕ್ರಂಸೂರಿ ಎರಡನೇ ನಿರ್ದೇಶನದ ‘ಚೌಕಾಬಾರ’ ಚಿತ್ರವು ಆಟದ ಹೆಸರಾಗಿದ್ದು, ಜೀವನದ ಪಾಠವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ನಾಲ್ಕು ಪಾತ್ರಗಳ ಸುತ್ತ ನಡೆಯುವ ಕಥೆಯಾಗಿದ್ದರೂ ಯಾವ ಪಾತ್ರವನ್ನು ಹೆಚ್ಚು ಕಡಿಮೆ ಅಂತ ಮಾಡದೆ ಎಲ್ಲದಕ್ಕೂ ಸಮಾನ ಅವಕಾಶ ನೀಡಿದ್ದಾರೆ. ಕಥಾನಾಯಕ ತನ್ನ ಸ್ನೇಹಿತೆಯ ಮನೆಯಲ್ಲಿ ಪರಿಚಯವಾಗುತ್ತದೆ. ಇವರಿಬ್ಬರ ಪರಿಚಯ ಮುಂದೆ ಇಬ್ಬರು ಹತ್ತಿರವಾಗುತ್ತದೆ. ದೂರದ ಪಯಣ, ವಿಕೇಂಡ್ ಸುತ್ತಾಟದಲ್ಲೇ ಒಂದಷ್ಟು ಕಾಲ ಕಳೆಯುತ್ತಾರೆ. ಅವಳಿಗೆ ಅವನ ಮೇಲೆ ಪ್ರೀತಿ ಬರುತ್ತದೆ. ....

458

Read More...

Film 19,20,21.Reviews

Friday, March 03, 2023

ಕಾಡಿನಲ್ಲಿರುವವರ ಕಥೆ ವ್ಯಥೆ ****        ‘ಆಕ್ಟ್ ೧೯೭೮’ ನಿರ್ದೇಶನ ಮಾಡಿದ್ದ ಮಂಸೋರೆ ಈ ಬಾರಿ ನಮ್ಮ ಕೆಟ್ಟ ವ್ಯವಸ್ಥೆಯಿಂದಾಗಿ ನಲುಗಿದ ಕುಟುಂಬವೊಂದರ ಕಥನವನ್ನು ೧೯.೨೦.೨೧’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ವಿಧಿ ೧೯ರಲ್ಲಿ ಹೇಳಿರುವಂತೆ ಸ್ವಾತಂತ್ಯಕ್ಕಾಗಿ, ೨೦ರಲ್ಲಿ ಒಂದು ತಪ್ಪಿಗೆ ಅಪರಾಧದ ತೀವ್ರತೆಗಿಂತಲೂ ಹೆಚ್ಚು ಪ್ರಮಾಣದ ಶಿಕ್ಷೆ ವಿಧಿಸುವಂತಿಲ್ಲ. ಕೊನೆಯದಾಗಿ ವಿಧಿ ೨೧ರ ಪ್ರಕಾರ ಮನುಷ್ಯನಿಗೆ ಬದುಕುವ ಹಕ್ಕು ಇದೆ. ಈ ಮೂರು ಹಕ್ಕುಗಳನ್ನು ಅನುಭವಿಸುವ ಅವಕಾಶ ಕೇಳಿದ್ದಕ್ಕಾಗಿ ಒಬ್ಬ ಅಮಾಯಕ ಮತ್ತು ಆತನ ಕುಟುಂಬವನ್ನು ಹಿಂಸಿಸಿದನ್ನು ಚಿತ್ರದಾಖಲೆಯ ರೂಪದಲ್ಲಿ ಚೆನ್ನಾಗಿ ....

433

Read More...

Kadala Theerada Bhargava.Reviews

Friday, March 03, 2023

ಸ್ನೇಹ ಪ್ರೀತಿ ಸಾರುವ ಕಡಲ ತೀರದ ಭಾರ್ಗವ ****        ‘ಕಡಲ ತೀರದ ಭಾರ್ಗವ’ ಎಂದರೆ ತಕ್ಷಣ ಶಿವರಾಮಕಾರಂತರು ಕಣ್ಣ ಮುಂದೆ ಬರುತ್ತಾರೆ. ಆದರೆ ಇದೇ ಹೆಸರಿನಲ್ಲಿರುವ ಚಿತ್ರವು ಬೇರೆಯದ್ದೇ ಹೇಳುತ್ತದೆ. ಭರತ್ ಮತ್ತು ಭಾರ್ಗವ  ಚಿಕ್ಕಂದಿನಿಂದಲೂ ಸ್ನೇಹಿತರು. ದೊಡ್ಡವರಾದ ಮೇಲೆ ಇಂಪನಾ ವಿಚಾರವಾಗಿ ಇಬ್ಬರಲ್ಲೂ ಬಿರುಕು ಮೂಡುತ್ತದೆ. ಒಂದು ಹಂತದಲ್ಲಿ ಭರತ್ ಅತಿಯಾದ ಮದ್ಯ ವ್ಯಸನಿ ಆಗುತ್ತಾನೆ. ಕುಡಿತದಿಂದ ಮುಕ್ತಿ ಹೊಂದಿಸಲು ಆತನನ್ನು ಶಾಂತಿ ಸಾಧನ ರಿಹ್ಯಾಬಿಟೇಶನ್ ಸೆಂಟರ್‌ಗೆ ಸೇರಿಸಲಾಗುತ್ತದೆ. ಅಲ್ಲೂ ಅವನು ಮೊದಲಿನಂತಾಗುವುದಿಲ್ಲ. ಅವನಿಗೆ ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್ ಥಾಮಸ್ ....

390

Read More...

Dooradarshana.Reviews

Friday, March 03, 2023

ರೆಟ್ರೋ ಕಾಲವನ್ನು ನೆನಪಿಸುವ ಚಿತ್ರ ****

      ೮೦ರ ದಶಕದಲ್ಲಿ ‘ದೂರದರ್ಶನ’ ಬಂದು ಹೊಸ ಯುಗ ಶುರುವಾಗಿತ್ತು. ಇದೇ ಹೆಸರಿನಲ್ಲಿ ಚಿತ್ರವೊಂದು ತೆರೆಕಂಡು ಅದೇ ಕಾಲಘಟ್ಟವನ್ನು ಹಿನ್ನಲೆಯಾಗಿಟ್ಟುಕೊಂಡು ತೆರೆ ಮೇಲೆ ತರಲಾಗಿದೆ. ನಿರ್ದೇಶಕ ಸುಖೇಶ್‌ಶೆಟ್ಟಿ ತಾವು ನೋಡಿದ, ಕೇಳಿದ ಕೆಲವು ಸತ್ಯಘಟನೆಗನ್ನು ಹೆಕ್ಕಿಕೊಂಡಿದಾರೆ. ಟಿವಿಯೊಂದರ ಸುತ್ತ ನಡೆಯುವ ಕಥೆಯಲ್ಲಿ ಸ್ನೇಹ, ಪ್ರೀತಿ, ದ್ವೇಷ, ಅಸೂಯೆ, ಅಹಂಕಾರ ಹೀಗೆ ಹಲವು ಪ್ರಕಾರಗಳ ದೃಷ್ಟಿಕೋನದಲ್ಲಿ ತೋರಿಸಿರುವುದು ಕಂಡುಬರುತ್ತದೆ.

375

Read More...

Prajarajya.Reviews

Friday, March 03, 2023

ಪ್ರಸ್ತುತ ವ್ಯವಸ್ಥೆಯೇ ಪ್ರಜಾರಾಜ್ಯದ ಕಥನ ****       ಸಂವಿಧಾನದಲ್ಲಿ ಶಿಕ್ಷಣದ ಹಕ್ಕು ಕಲ್ಪಿಸಲಾಗಿದೆ. ಆದರೆ ಆರೋಗ್ಯದ ಬಗ್ಗೆ ಕಾಳಜಿವಹಿಸಿಲ್ಲ. ಹೀಗಾಗಿ ಸಾವಿರಕ್ಕೆ ಮತ ಮಾರಿಕೊಳ್ಳದೆ, ಉಚಿತ ಆರೋಗ್ಯ ಕಲ್ಪಿಸಿ ಮತ ಹಾಕುತ್ತೇವೆ ಎಂದು ಜಾಗೃತಿ ‘ಪ್ರಜಾರಾಜ್ಯ’ ಚಿತ್ರದಲ್ಲಿ ಮೂಡಿಸಲಾಗಿದೆ. ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಬದುಕುವ ಹಕ್ಕಿದೆ. ಅವನಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಳ್ಳಲು ಹೋರಾಡುವ ಸ್ವಾತಂತ್ರವೂ ಇದೆ. ಎಲ್ಲರಿಗೂ ಒಳಿತಾಗಬೇಕೆಂದು ಸಮಾನ ಮನುಷ್ಯರೆಲ್ಲ ಸೇರಿ ಮೌನವಾಗಿ ಪ್ರತಿಭಟಿಸಿ ನ್ಯಾಯ ಕೇಳಲು ಮುಂದಾಗುತ್ತಾರೆ. ಇದರಿಂದ ಆಡಳಿತ ಪಕ್ಷಕ್ಕೆ ತೊಂದರೆಯಾಗುತ್ತದೆ ಎಂಬ ....

401

Read More...

Juliet-2.Film Reviews

Friday, February 24, 2023

ಧೈರ್ಯಶಾಲಿ ಹೆಣ್ಣು ಜೂಲಿಯೆಟ್-೨       ಮಹಿಳಾ ಪ್ರಧಾನ ಕಥೆಯನ್ನು ಹೊಂದಿರುವ ‘ಜೂಲೆಯಟ್-೨’ ಚಿತ್ರವು ತೊಂದರೆಗೆ ಸಿಲುಕಿದ ಹೆಣ್ಣು ಮಗಳೊಬ್ಬಳು ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾಳೆ. ಇಲ್ಲಿ ತಪ್ಪು ಮಾಡಿದವರಿಗೆ ಇಲ್ಲೇ ಶಿಕ್ಷೆ ಆಗಬೇಕು. ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ಹೇಳ ಹೊರಟಿದೆ. ಜತೆಗೆ ಅಪ್ಪ ಮಗಳ ಬಾಂಧ್ಯವದ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ.  ಆರಂಭದಲ್ಲೆ ಕಥಾನಾಯಕಿ ತಂದೆ ಆಕ್ಸಿಡೆಂಟ್ ಆಗಿ ನಿಧನರಾಗುತ್ತಾರೆ. ಅಪ್ಪ ಸಾಯುವ ಮುನ್ನ ಒಂದು ದೊಡ್ಡ ಜವಬ್ದಾರಿಯನ್ನು ಮಗಳಿಗೆ ವಹಿಸಿರುತ್ತಾರೆ. ಮುಂದೆ ತಂದೆಯ ಆಸೆಯಂತೆ ಆಕೆ ಸಾಧಿಸುತ್ತಾಳಾ. ಇದರಿಂದ ಬರುವ ಅಡೆತಡೆಗಳು ಏನು? ....

379

Read More...

South Indian Hero.Reviews

Friday, February 24, 2023

ಲಾಜಿಕ್ ತುಂಬಿರುವ ಸೌತ್ ಇಂಡಿಯನ್ ಹೀರೋ        ಕಮರ್ಷಿಯಲ್ ಚಿತ್ರಗಳಲ್ಲಿ ಲಾಜಿಕ್ ಇರುವುದಿಲ್ಲವೆಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ‘ಸೌತ್ ಇಂಡಿಯನ್ ಹೀರೋ’ ಸಿನಿಮಾವು ವಿನೂತನ ಕಥೆಯನ್ನು ಹೊಂದಿದೆ. ಶಿಕ್ಷಕ ಲಾಜಿಕ್ ಲಕ್ಷಣರಾವ್ ಅಂತಲೇ ಕರೆಸಿಕೊಂಡಿರುವ ಆತನಿಗೆ ಅದೇ ಶಾಲೆಯ ಶಿಕ್ಷಕಿ ಪರಿಚಯವಾಗಿ ಅದು ಪ್ರೀತಿಗೆ ತಿರುಗುತ್ತದೆ. ಇದೇ ಸಂದರ್ಭದಲ್ಲಿ ಸೋಲನ್ನು ಕಂಡ ನಿರ್ದೇಶಕನೊಬ್ಬ ಸ್ಟಾರ್ ನಾಯಕರುಗಳ ಗುಣಕ್ಕೆ ಬೇಸತ್ತು, ಹೊಸಬನನ್ನು ಸ್ಟಾರ್ ಮಾಡಲು ಮುಂದಾದಾಗ ಲಕ್ಷಣರಾವ್ ಕಣ್ಣಿಗೆ ಬೀಳುತ್ತಾನೆ. ಮುಂದೇ ಇವನನ್ನೇ ಹೀರೋ ಮಾಡುತ್ತಾನೆ. ಚಿತ್ರರಂಗದಲ್ಲಿ ಬಿಲ್ಡಪ್, ಶೋಕಿ ಇದೆಲ್ಲಾವನ್ನು ನೋಡುವ ....

406

Read More...

Doddahatti Boregowda.Reviews

Friday, February 17, 2023

ದೇಸಿ ಸೊಗಡಿನ ಬೋರೇಗೌಡ              ****        ಹಳ್ಳಿ ಸೊಗಡಿನ ಚಿತ್ರಗಳನ್ನು ಜನರು ಇಷ್ಟಪಡುವ ಕಾರಣ ಅಂತಹುದೇ ಸಿನಿಮಾಗಳು ನೋಡುಗರನ್ನು ಆಕರ್ಷಿಸುತ್ತಿದೆ. ಆ ಸಾಲಿಗೆ ‘ದೊಡ್ಡಹಟ್ಟಿ ಬೋರೇಗೌಡ’ ಚಿತ್ರವು ಸೇರ್ಪಡೆಯಾಗುತ್ತದೆ. ಸಂಪೂರ್ಣ ಹಳ್ಳಿ ಕಥೆಯಾಗಿದ್ದರಿಂದ ದೇಸಿ ಸೊಗಡು ಎದ್ದು ಕಾಣಿಸುತ್ತದೆ. ಕಥಾನಾಯಕ ಮನೆ ಕಟ್ಟಿಕೊಳ್ಳಲು ಯಾವ ರೀತಿ ಪರದಾಡುತ್ತಾರೆ. ಈ ದಾರಿಯಲ್ಲಿ ಆತ ಅನುಭವಿಸುವ ಕಷ್ಟಗಳೇನು? ಎಂಬ ಅಂಶಗಳೊಂದಿಗೆ ಚಿತ್ರವು ತೆರೆದುಕೊಳ್ಳುತ್ತದೆ. ಇಷ್ಟಕ್ಕೆ ಸೀಮಿತವಾಗಿರದೆ ಸನ್ನಿವೇಶಗಳಲ್ಲಿ ಸರ್ಕಾರದ ಯೋಜನೆಗಳು ಸಾಮಾನ್ಯ ಜನರ ಕೈ ಸೇರುವಲ್ಲಿ ಯಾರ‍್ಯಾರಿಗೆ ಲಂಚ ಕೊಡಬೇಕು. ಇದರಿಂದ ....

477

Read More...

Ondalle Love Story.Reviews

Friday, February 17, 2023

ಪ್ರೀತಿಲಿ ನಂಬಿಕೆ ಇರಬೇಕು, ಮೋಸ ಆಗಬಾರದು           ****          ಪ್ರೀತಿಲಿ ನಂಬಿಕೆ ಕಳೆದುಕೊಂಡೆರೆ, ಮತ್ತೋಂದು ಕಡೆ ಬದುಕಲ್ಲಿ ಮೋಸವಾದರೆ ಏನು ಆಗುತ್ತದೆ ಎಂಬುದನ್ನು ‘ಒಂದೊಳ್ಳೆ ಲವ್ ಸ್ಟೋರಿ’ ಚಿತ್ರದಲ್ಲಿ ಚೆನ್ನಾಗಿ ನಿರೂಪಣೆ ಮಾಡಿದ್ದಾರೆ. ಹುಡುಗಿ, ಹಣ, ಅಂತಸ್ತು ಬರುತ್ತೆ ಹೋಗುತ್ತೆ. ಆದರೆ ಸಮಯ ಅನ್ನುವುದು ಒಂದು ಬಾರಿ ಹೋದರೆ ಮತ್ತೆ ಸಿಗುವುದಿಲ್ಲವೆಂದು ಅಪ್ಪ ಮಗ ಹನಿ(ಅಶ್ವಿನ್)ಗೆ ಬುದ್ದಿವಾದ ಹೇಳುತ್ತಾರೆ. ಜೀವನ ಕತ್ತಲು ಆಗಿದೆ. ಬದುಕೇ ಬೋರ್ ಆಗಿದೆ. ಸುಖ-ಹುಕ್ಕಾ-ನಶೆಯಲ್ಲೆ ಟೈಂ ಪಾಸ್ ಮಾಡುತ್ತಿದ್ದೇನೆಂದು ಜೆಸ್ಸಿ(ಧನುಶ್ರೀ) ಗೆಳತಿ(ನಿಶಾಹೆಗಡೆ)ಗೆ ....

452

Read More...

Rangiha Rate.Reviews

Friday, February 10, 2023

ಬದುಕೇ ಒಂದು ರಂಗಿನಾಟ         ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ರಂಗಿನರಾಟೆ’ ಚಿತ್ರವು ನಾವು ಮಾಡಿದ ಕರ್ಮ ನಮ್ಮನ್ನು ಹೇಗೆ ಬಿಡದೆ ಕಾಡುತ್ತದೆ ಎಂಬುದನ್ನು ಹೇಳಹೊರಟಿದೆ.  ಎಲ್ಲರ ಜೀವನವು ರಾಟೆಯ ಹಾಗೆ ಸುತ್ತುತ್ತಿರುತ್ತದೆ. ಇಂತಹುದೇ ವಿಷಯಗಳು ಚಿತ್ರದಲ್ಲಿದೆ. ನಾವೆಲ್ಲರೂ ಉತ್ತಮ ಬದುಕು ಕಟ್ಟಿಕೊಳ್ಳಲು ರಾಟೆಯಂತೆ ಸುತ್ತುತ್ತಿರುತ್ತೇವೆ. ಹಾಗಾಗಿ ಇದೇ ಶೀರ್ಷಿಕೆಯನ್ನು ಇಡಲಾಗಿದೆ. ನಾಯಕ ರಾಜೀವ್‌ರಾಥೋಡ್, ನಾಯಕಿ ಭವ್ಯಾ ದುನಿಯಾರಶ್ಮಿ, ಹಾಗೂ ಸಂತೋಷ್ ಈ ನಾಲ್ಕು ಜನರ ಸುತ್ತ ಕಥೆಯು ಸಾಗುತ್ತದೆ. ಅನಿರೀಕ್ಷಿತ ಘಟನೆಯಲ್ಲಿ ಹೀರೋ ಸಿಕ್ಕಿಹಾಕಿಕೊಂಡು ಅದರಿಂದ ಹೇಗೆ ಪಾರಾಗುತ್ತೇನೆ ಅಂತ ಚಿತ್ರ ನೋಡಿದರೆ ....

693

Read More...

Nata Bhayankara.Reviews

Friday, February 03, 2023

ದೆವ್ವದ ಜತೆ ನಟ ಭಯಂಕರನ ಆಟಗಳು      ಬಿಗ್ ಬಾಸ್ ವಿಜೇತ ಪ್ರಥಮ್ ನಟಿಸಿ ನಿರ್ದೇಶನ ಮಾಡಿರುವ ‘ನಟ ಭಯಂಕರ’ ಸಿನಿಮಾವು ಪ್ರಸ್ತುತ ಚಿತ್ರರಂಗದ ಒಳ ಹೊರಗುಗಳನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಬಹುದು. ಕಥೆಯಲ್ಲಿ ಅವನೊಬ್ಬ ಸೂಪರ್ ಸ್ಟಾರ್ ನಾಯಕ. ಅಭಿನಯಿಸಿದ ಚಿತ್ರಗಳೆಲ್ಲವೂ ಯಶಸ್ವಿಯಾಗಿದ್ದರಿಂದ ಸಹಜವಾಗಿ ನಿರ್ದೇಶಕರು, ನಿರ್ಮಾಪಕರು ಇವರ ಕಾಲ್‌ಶೀಟ್ ಪಡೆಯಲು ಬರುತ್ತಿರುತ್ತಾರೆ. ಆದರೆ ಈತ ಸ್ವಲ್ಪಮಟ್ಟಿಗೆ ತಿಕ್ಕಲು ಸ್ವಭಾವದವನು. ಹೆಚ್ಚು ಕಡಿಮೆಯಾದರೂ ತನ್ನೊಂದಿಗೆ ಚಿತ್ರ ಮಾಡುವ ತಂಡದವರನ್ನು ತನ್ನ ಕುಚೇಷ್ಟೆಯಿಂದ ಹೈರಾಣಾಗಿಸದೆ ಬಿಡಲಾರ. ಮುಂದೆ ಎಲ್ಲರಿಂದ ಹೊಗಳಿಸಿಕೊಂಡರೆ, ಅದೇ ....

578

Read More...

Shri Balaji Photo Studio.Reviews

Friday, January 06, 2023

ಕ್ಯಾಮೆರಮನ್ ಬದುಕಿನ ಸವಾಲು, ಹೋರಾಟಗಳು        ಫೋಟೋ ಗ್ರಾಫರ್ ಒಬ್ಬನ ಕಥೆಯನ್ನು ಹೇಳುವ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಚಿತ್ರವು ಆತನ ಬದುಕನ್ನು ಏಳೆ ಏಳೆಯಾಗಿ ಬಿಚ್ಚಿಟ್ಟಿದ್ದಾರೆ. ಬೇರೊಬ್ಬರ ಜೀವನದ ಸಂಭ್ರಮದ ಕ್ಷಣಗಳನ್ನು ಕ್ಲಿಕ್ಕಿಸುವ ಪುಟ್ಟು ತನ್ನ ಜೀವನವನ್ನೇ ದೊಡ್ಡ ಅಘಾತವೊಂದನ್ನು ಎದುರಿಸಬೇಕಾಗುತ್ತದೆ. ಊರಲ್ಲಿ ಶೀರ್ಷಿಕೆ ಹೆಸರಿನಲ್ಲಿ ಸ್ಟುಡಿಯೋ ಇಟ್ಟುಕೊಂಡಿದ್ದು, ಅಲ್ಲಿ ಯಾವುದೇ ಶುಭ ಸಮಾರಂಭ ನಡೆದರೂ ಈತನ ಹಾಜರಿ ಖಾಯಂ ಆಗಿರುತ್ತದೆ. ಎಲ್ಲ ಜನರಿಗೂ ಇವನನ್ನು ಕಂಡರೆ ಅಚ್ಚು ಮೆಚ್ಚು. ಕ್ಯಾಮಾರ, ಸ್ಟುಡಿಯೋ ಎರಡೇ ಪ್ರಪಂಚ ಅಂದುಕೊಂಡಿದ್ದ ಅವನಿಗೆ ಬದುಕಿನಲ್ಲಿ ಘೋರ ಘಟನೆ ನಡೆದು, ಜೀವನ ....

452

Read More...

Mr Bachelor.Reviews

Friday, January 06, 2023

ಮದುವೆಯಾಗುವ ಹುಡುಗನ ಕಥೆ ವ್ಯಥೆ        ‘ಮಿ.ಬ್ಯಾಚುಲರ್’ ಸಿನಿಮಾ ಹೇಳುವಂತೆ ಕಥಾನಾಯಕ ಚಿಕ್ಕವಯಸ್ಸಿನಲ್ಲೇ ಮದುವೆಯ ಬಗ್ಗೆ ಕನಸು ಕಟ್ಟಿಕೊಂಡಿರುತ್ತಾನೆ. ನೌಕರಿ ಇದ್ದರೆ ಮದುವೆ ಮಾಡಿಕೊಂಡು ನೆಮ್ಮದಿಯಾಗಿ ಜೀವನ ನಡೆಸಬಹುದು. ನನ್ನ ದೃಷ್ಟಿಯಲ್ಲಿ ಇದೊಂದು ಸಂಭ್ರಮ, ಸುಖಿಜೀವನ ಎನ್ನುವುದು ಆತನ ಗುರಿಯಾಗಿರುತ್ತದೆ ಆದರೆ ಮನೆಯಲ್ಲಿ ಕೆಲಸ ಸಿಕ್ಕವಷ್ಟೇ ಮದುವೆ ಮಾತು ಎನ್ನುತ್ತಿರುತ್ತಾರೆ. ಬಾರ್‌ನಲ್ಲಿ ಕೂತು ಮಾಲೀಕನ ಬಳಿ ತನ್ನ ನೋವನ್ನು ಹೇಳಿಕೊಳ್ಳುತ್ತಾನೆ. ಇವರ ಐಡಿಯಾದಂತೆ ಬ್ರೋಕರ್ ಮೊರೆ ಹೋಗುತ್ತಾನೆ. ಮುಂದೆ ಆಲ್ಬಮ್‌ದಲ್ಲಿದ್ದ ಹುಡುಗಿಯೊಬ್ಬಳನ್ನು ಇಷ್ಟಪಡುತ್ತಾನೆ. ಅಲ್ಲಿ ಭೇಟಿಯಾದ ಹುಡುಗಿ ನನಗೆ ....

452

Read More...

Spooky College.Reviews

Friday, January 06, 2023

ಹೆದರಿಸುವ ಸ್ಪೂಕಿ ಕಾಲೇಜು        ಹಾರರ್ ಚಿತ್ರಗಳು ನೋಡುಗರನ್ನು ಆಕರ್ಷಿಸುತ್ತದೆ ಎಂಬುದನ್ನು ಅರಿತಿರುವ ಸಿನಿಮಾತಂಡವು ಅಂತಹುದೆ ಚಿತ್ರಗಳನ್ನು ಮಾಡುತ್ತಾ ಬಂದಿದ್ದಾರೆ. ಆ ಸಾಲಿಗೆ ‘ಸ್ಫೂಫಿ ಕಾಲೇಜು’ ಸೇರ್ಪಡೆಯಾಗುತ್ತದೆ. ಕಥೆಯಲ್ಲಿ ನೂರು ವರ್ಷಗಳಷ್ಟು ಹಳೆಯದಾದ ಬ್ರಿಟಿಷರ ಕಾಲದ ಶಿಥಿಲಾವಸ್ಥೆಯಲ್ಲಿದ್ದ ಕಾಲೇಜ್ ಕಟ್ಟಡವೊಂದನ್ನು ನವೀಕರಣಗೊಳಿಸಿ, ಪುನ: ಅಲ್ಲಿ ಇಂಜಿನಿಯರಿಂಗ್ ಕಾಲೇಜ್‌ನ್ನು ಶುರುಮಾಡುವ ಪ್ರಿನ್ಸಿಪಾಲ್, ಅದನ್ನು ಉಳಿಸಿ, ಬೆಳೆಸಲು ಸತತ ಹೋರಾಟ ಮಾಡಲು ಮುಂದೆ ಬಂದಾಗ, ಈ ಹಂತದಲ್ಲಿ ನಡೆಯುವ ಕೆಲ ಅಹಿತಕರ ಘಟನೆಗಳು ಕಾಲೇಜಿನ ಬಗ್ಗೆ ಇದ್ದ ಇತಿಹಾಸಕ್ಕೆ ಸಿಂಕ್ ಆಗಿ ಭಯ ಹುಟ್ಟಿಸುತ್ತದೆ. ಇದೇ ....

465

Read More...

Made in Bebgaluru.Reviews

Friday, December 30, 2022

ಮೇಡ್ ಇನ್ ಬೆಂಗಳೂರು ಬದುಕು ಮತ್ತು ಬವಣೆ      ಸಿಲಿಕಾನ್ ಸಿಟಿ ಎಂದು ಕರೆಯುವ ಬೆಂಗಳೂರು ನೂರಾರು ಜನರಿಗೆ ಆಶ್ರಯ ನೀಡಿದೆ. ಇಂತಹ ಊರಿನಲ್ಲಿ ಜನರು ಹೇಗೆ ಬದುಕು ಕಟ್ಟಿಕೊಂಡಿರುತ್ತಾರೆ ಎಂದು ಹೇಳುವ ಕಥೆಯೇ ‘ಮೇಡ್ ಇನ್ ಬೆಂಗಳೂರು’ ಚಿತ್ರವಾಗಿದೆ. ಕಥಾನಾಯಕ ಸುಹಾಸ್ ತನ್ನದೆ ಆದ ಸ್ಟಾರ್ಟಪ್ ಕಂಪೆನಿಯನ್ನು ಅಭಿವೃದ್ದಿಗೊಳಿಸಲು ಎಷ್ಟೆಲ್ಲಾ ಕಷ್ಟಪಡುತ್ತಾನೆ. ಮಾನಸಿಕವಾಗಿ ಏನೆಲ್ಲಾ ನೋವು ಅನುಭವಿಸುತ್ತಾನೆ. ಅಂತಿಮವಾಗಿ ತನ್ನ ಪ್ರಯತ್ನವು ಎಷ್ಟರಮಟ್ಟಿಗೆ ಗೆಲುವು ಸಾಧಿಸುತ್ತಾರೆ ಎಂಬುದು ಒನ್ ಲೈನ್ ಸ್ಟೋರಿಯಾಗಿದೆ.       ಸಿನಿಮಾವು ಮಧ್ಯಮ ವರ್ಗದ ಹುಡುಗರು ತಮ್ಮ ಕನಸುಗಳನ್ನು ....

476

Read More...

Jamaligudda.Reviews

Friday, December 30, 2022

ಜಮಾಲಿಗುಡ್ಡದಲ್ಲೊಂದು ಕ್ರೈಂ, ಭಾವನೆಗಳ ಪಯಣ         ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರವು ೯೫-೯೬ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ. ಭಾವನೆಗೊಂದಿಗೆ ಥ್ರಿಲ್ಲಿಂಗ್ ಅಂಶಗಳನ್ನು ಇಟ್ಟುಕೊಂಡು ಚಿತ್ರ ಮಾಡುವುದು ತ್ರಾಸ ಕೆಲಸ. ಆದರೂ ನಿರ್ದೇಶಕ ಕುಶಾಲ್‌ಗೌಡ ಮೊದಲ ಪ್ರಯತ್ನವನ್ನು ಚನ್ನಾಗಿ ನಿರ್ವಹಿಸಿರುವುದು ತೆರೆ ಮೇಲೆ ಕಾಣಿಸುತ್ತದೆ. ಪೂರ್ಣ ಸಿನಿಮಾವು ಚುಕ್ಕಿಯ ನಿರೂಪಣೆಯಲ್ಲಿ ಸಾಗುತ್ತದೆ. ಕಥಾನಾಯಕ ಹಿರೋಶಿಮ ಸಣ್ಣ ಹುಡುಗಿ ಚುಕ್ಕಿಯ ಜತೆ ಪ್ರಯಾಣ ಮಾಡುತ್ತಿರುತ್ತಾನೆ. ಈ ಪಯಣದಲ್ಲಿ ಕೊಲೆಯಾಗಿರುತ್ತದೆ. ಇಬ್ಬರು ಯಾವ ಕಾರಣಕ್ಕೆ ಒಟ್ಟಿಗೆ ಪ್ರಯಾಣ ಮಾಡುತ್ತಿರುತ್ತಾರೆ ....

467

Read More...

Padavi Poorva.Film Reviews

Friday, December 30, 2022

ಸಿಹಿ ಸಿಹಿ ನೆನಪುಗಳ ಪದವಿಪೂರ್ವ        ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳನ್ನೆ ದೃಷ್ಟಿಯಲ್ಲಿಟ್ಟುಕೊಂಡು ಸಿದ್ದಪಡಿಸಿರುವ ಚಿತ್ರ ‘ಪದವಿ ಪೂರ್ವ’ ಎನ್ನಬಹುದು. ಇನ್ನು ಕಥೆಯ ಬಗ್ಗೆ ಹೇಳುವುದಾದರೆ ಆಗಷ್ಟೇ ಕಾಲೇಜು ಪ್ರವೇಶಿಸಿರುವ ನವೀನನಿಗೆ ಗೆಳಯನೇ ಆಸ್ತಿ. ಅವರುಗಳು ಇದ್ದರೆ ಸಾಕು ಅಂದುಕೊಂಡಿರುತ್ತಾನೆ. ಮುಂದೆ ಗೆಳೆತನಕ್ಕಾಗಿ ಏನೆಲ್ಲಾ ಮಾಡುತ್ತಾನೆ,ಅದಕ್ಕೆ ದೋಸ್ತ್‌ಗಳು ಹೇಗೆ  ಸಾಥ್ ಆಗಿತ್ತಾರೆ. ಹೀಗೆ ಸಾಗುವ ಚಿತ್ರವು ಒಂದಷ್ಟು ತರಲೆ, ತುಂಟಾಟಗಳ, ಅಳು-ನಗು ಎಲ್ಲದರ ಜತೆ ನವಿರಾಗಿ ಬೆರೆತಿದೆ. ೯೫ರ ಕಾಲಘಟ್ಟದಲ್ಲಿ ಮೊಬೈಲ್, ವಾಟ್ಸಾಪ್, ಫೇಸ್‌ಬುಕ್ ಇಲ್ಲದೆ ಕಾಲವನ್ನು ಚೆನ್ನಾಗಿ ತೋರಿಸಲಾಗಿದೆ. ....

485

Read More...

Temper.Film Reviews

Friday, December 16, 2022

ಸಂಬಂದಗಳ ಸಂಕೋಲೆ ಟೆಂಪರ್*****        ‘ಟೆಂಪರ್’ ಅಂದರೆ ಉದ್ವೇಗಗೊಳ್ಳುವುದು. ಹಾಗೆಯೇ ‘ಟೆಂಪರ್’ ಚಿತ್ರದ ಕಥೆಯಲ್ಲಿ ತನ್ನೆದುರು ಯಾವುದೇ ಸಂದರ್ಭದಲ್ಲಿ ಮೋಸ, ತಪ್ಪು, ಅನ್ಯಾಯ ಕಂಡರೆ ಸುಮ್ಮನಾಗದೆ ಅದನ್ನು ಖಂಡಿಸಿ ಮುಂದೆ ಸಾಗುತ್ತಾನೆ. ಕುಟುಂಬದೊಂದಿಗೆ ಉತ್ತಮ ಬಾಂದವ್ಯ, ಗ್ಯಾರೇಜ್ ಗೆಳೆಯರ ಜೊತೆ ಒಡನಾಟ, ಪ್ರೀತಿಯಲ್ಲಿ ಭಾಗಿ, ಕೊನೆಗೆ ದುಷ್ಟರ ಅಟ್ಟಹಾಸವನ್ನು ಸದೆಬಡಿಯುವ ಅಂಶಗಳು ಚಿತ್ರವು ಒಳಗೊಂಡಿದೆ. ಹುಡುಗನಾಗಿದ್ದಾಗಲೂ ಮನೆಯವರ ಮುದ್ದಿನ ಮಗ, ಹೊರಗಡೆ ಪೋರನಾಗಿ ತಾನು ಮಾಡಿದ್ದು ಸರಿ ಎಂದು ವಾದಿಸುತ್ತಿರುತ್ತಾನೆ. ದೊಡ್ಡವನಾದರೂ ಅದೇ ಗತ್ತನ್ನು ಉಳಿಸಿಕೊಂಡು ಸ್ನೇಹಿತರೊಂದಿಗೆ ಗ್ಯಾರೇಜಿನಲ್ಲಿ ಕೆಲಸ ....

462

Read More...

Rakshasaru.Reviews

Friday, December 16, 2022

ಮತ್ತೋಮ್ಮೆ ಸಾಯಿಕುಮಾರ್ ಪೋಲೀಸ್ ಕಥೆ        ‘ಪೋಲೀಸ್ ಸ್ಟೋರಿ’ ಚಿತ್ರದಲ್ಲಿ ಡಿಸಿಪಿ ಅಗ್ನಿಯಾಗಿ ಮಿಂಚಿದ್ದ ಸಾಯಿಕುಮಾರ್, ಗ್ಯಾಪ್ ನಂತರ ಅಂತಹುದೆ ಪಾತ್ರವನ್ನು ‘ರಾಕ್ಷಸರು’ ಸಿನಿಮಾದಲ್ಲಿ ನಿಭಾಯಿಸಿದ್ದಾರೆ. ಕಥೆಯಲ್ಲಿ ದುರುಳರುಗಳಾದ ಖಾರದಪುಡಿ ಶೇಖರ, ಬಿಹಾರಿಲಾಲ್, ಗ್ಯಾಸ್ ಮುನಿ, ಕಿಲ್ಲರ್ ಜಾಕಿ ಮತ್ತು ಕ್ಯಾಬ್ ಚಾಲಕ ರಾಜೇಂದ್ರ ಇವರುಗಳು ಕ್ರಿಮಿನಲ್‌ಗಳಾಗಿದ್ದು, ಮನುಷ್ಯನ ಪ್ರಾಣ ಎಂದರೆ ಇರುವೆಗೆ ಸಮಾನ ಅಂದುಕೊಂಡಿರುತ್ತಾರೆ. ಮನುಷ್ಯನ ಮೇಲೆ ಕನಿಕರ ತೋರದೆ ಸಾಯಿಸುತ್ತಾರೆ, ಹೆಣ್ಣು ಎಂಬುದನ್ನು ನೋಡದೆ ಭೀಕರವಾಗಿ ಅತ್ಯಾಚಾರವೆಸಗಿ, ಕೊಲೆ ಮಾಡುತ್ತಾರೆ. ಅದರಲ್ಲೂ ಜಾಕಿ ಬಾಂಬೆ ಮೂಲದವನಾಗಿದ್ದು, ....

520

Read More...

Vijayanand.Reviews

Friday, December 09, 2022

ವಿಜಯಾನಂದ ಇತರರಿಗೆ ಸ್ಪೂರ್ತಿ        ಆತ್ಮವಿಶ್ವಾಸ, ನಂಬಿಕೆ, ಧೈರ್ಯ ಇದ್ದರೆ ಏನೇ ಸವಾಲುಗಳು ಬಂದರೂ ಎದುರಿಸಬಹುದೆಂದು ‘ವಿಜಯಾನಂದ’ ಚಿತ್ರದಲ್ಲಿ ತೋರಿಸಲಾಗಿದೆ. ಹಿರಿಯ ಉದ್ಯಮಿ, ರಾಜಕಾರಿಣಿ ವಿಜಯಸಂಕೇಶ್ವರ ಬಯೋಪಿಕ್‌ನ್ನು ಅದ್ಬುತವಾಗಿ ತೆರೆಮೇಲೆ ತೋರಿಸಿದ್ದಾರೆ. ಇದು ಕನ್ನಡ ಮೊದಲ ಬಯೋಪಿಕ್ ಅಂತಲೂ ಕರೆಯಬಹುದು. ಸಾಧಕನೊಬ್ಬ ನಡೆದು ಬಂದ ಹಾದಿಯನ್ನು ನಿರ್ದೇಶಕಿ ರಿಷಿಕಶರ್ಮಾ ಚೆನ್ನಾಗಿ ಸನ್ನಿವೇಶಗಳ ಮೂಲಕ ತೆರೆದಿಡುವಲ್ಲಿ ಅವರ ಪ್ರಯತ್ನ ಸಪಲವಾಗಿದೆ. ತಂದೆ (ಅನಂತ್‌ನಾಗ್) ಬಿ.ಜಿ.ಸಂಕೇಶ್ವರ್ ಗದಗದಲ್ಲಿ ನಡೆಸುತ್ತಿದ್ದ ಹಳೇ ಮಾದರಿಯ ಪ್ರಿಂಟಿಂಗ್ ಪ್ರೆಸ್‌ಗೆ ಆಧುನಿಕತೆಯ ಸ್ಪರ್ಷ ನೀಡಲೆಂದು ಪುತ್ರ ....

485

Read More...

Bond Ravi.Film Reviews

Friday, December 09, 2022

ಬಾಂಡ್ ರವಿ ಕಿಮ್ಮತ್ತು, ಕರಾಮತ್ತು       ‘ಬಾಂಡ್ ರವಿ’ ಚಿತ್ರದಲ್ಲಿ ಆತನೊಬ್ಬ ಪುನೀತ್‌ರಾಜ್‌ಕುಮಾರ್ ಅಭಿಮಾನಿ. ದುಡ್ಡು ಸಿಗುತ್ತದೆ ಅಂದರೆ ಯಾವುದೇ ಕೆಲಸಕ್ಕೂ ಹಿಂದು ಮುಂದೆ ನೋಡದೆ ಎಂಟ್ರಿ ಕೊಡುತ್ತಾನೆ. ಕಾರ್ಪೋರೇಟರ್ ಈತನಿಗೆ ಡೀಲ್ ಕೊಟ್ಟು ತನ್ನೆಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುತ್ತಾನೆ. ಒಮ್ಮೆ ಕೊಲೆಯ ಆರೋಪವನ್ನು ತನ್ನ ಮೇಲೆ ಹಾಕಿಕೊಂಡು, ಜೈಲ್ ಸೇರುತ್ತಾನೆ. ಅಲ್ಲಿ ಕಾರ್ಪೋರೇಟರ್ ಕಡೆಯವನು ಅಂತ ರಾಜಮರ್ಯಾದೆ ಸಿಗುತ್ತಿರುತ್ತದೆ. ಅಲ್ಲದೆ ಮೊಬೈಲ್ ಇರುತ್ತದೆ. ಹುಡುಗಿಯೊಬ್ಬಳು ಸಾಲ ಬೇಕೇ ಅಂತ ಕಾಲ್ ಮಾಡುತ್ತಾಳೆ. ಆಕೆ ಮಾಡಿದ ಒಂದು ಕರೆ ರವಿಯ ಜೀವನದ ದಿಕ್ಕನ್ನೇ ಬದಲಿಸುತ್ತದೆ. ಹೀಗೆ ....

489

Read More...

Thimayya & Thimayya.Reviews

Friday, December 02, 2022

ತಾತ ಮೊಮ್ಮಗನ ಭಾವನೆಗಳ ಪಯಣ

       ನಾವು ಅಂದುಕೊಂಡಂತೆ ಜೀವನ ಸಾಗಿಸುವುದು ಸುಲಭ. ಅದರಂತೆ ಸಂಬಂದಗಳು ಮನುಷ್ಯನನ್ನು ಭಾವನಾ ಜೀವಿಯನ್ನಾಗಿಸುತ್ತದೆ. ಸರಿದು ಹೋದ ಕಾಲದಲ್ಲಿ ಮರೆಯಾದ ಸುಂದರ ನೆನಪುಗಳನ್ನು ಹುಡುಕಿ ತಂದುಕೊಡುವ ಚಿತ್ರ ‘ತಿಮ್ಮಯ್ಯ ಅಂಡ್ ತಿಮ್ಮಯ್ಯ’ ಎಂದು ಹೇಳಬಹುದು. ತನ್ನ ಕುಟುಂಬದ ಆಸ್ತಿಯನ್ನು ಮಾರಿ ಲವರ್ ಜೊತೆ ಫಾರಿನ್‌ಗೆ ಹೋಗುವ ಹಂಬಲದಲ್ಲಿದ್ದ ಜ್ಯೂ.ತಿಮ್ಮಯ್ಯ(ದಿಗಂತ್)ನನ್ನು ವಾಪಸ್ಸು ಕರೆತರುವ ಸೀನಿಯರ್ ತಿಮ್ಮಯ್ಯ (ಅನಂತ್‌ನಾಗ್). ಹೀಗೆ ತಾತ ಮೊಮ್ಮಗನ ಮೇಲೆ ಶುರುವಾಗುವ ಕಥೆಯು ನೋಡುಗರನ್ನು ಭಾವನಾ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

475

Read More...

Vasanthi Nalidaga.Reviews

Friday, December 02, 2022

ಫ್ಯಾಮಿಲಿ ಡ್ರಾಮಾದಲ್ಲಿ ಪ್ರೀತಿಯ ಕಲರವ        ಶ್ರೀಮಂತರ ಮಗ ಕಾಲೇಜಿಗೆ ಸೇರಿದರೆ ಬಿಂದಾಸ್ ಆಗಿರುತ್ತಾನೆ. ಅವನಿಗೆ ಕಷ್ಟದ ಅರಿವಾಗುವುದು ಬೇರೆ ಕಡೆಗೆ ಒಬ್ಬಂಟಿಯಾಗಿ ಬದುಕು ಸಾಗಿಸಿದರೆ ಮಾತ್ರ ಎಂಬುದನ್ನು ‘ವಾಸಂತಿ ನಲಿದಾಗ’ ಚಿತ್ರದಲ್ಲಿ ಹೇಳಲಾಗಿದೆ. ಕಥೆಯಲ್ಲಿ ಶ್ರೀಮಂತ ದಂಪತಿಗೆ ಮಗು ಹುಟ್ಟಿದಾಕ್ಷಣ ಅದೃಷ್ಟ ಖುಲಾಯಿಸುತ್ತದೆ. ಇದರಿಂದ ಇಬ್ಬರು ಮಗನನ್ನು ಪ್ರೀತಿಯಿಂದ ಯಾವುದಕ್ಕೂ ಕಡಿಮೆ ಮಾಡದೆ ಬೆಳೆಸುತ್ತಾರೆ. ಆತ ಕಾಲೇಜಿಗೆ ಹೋದಾಗಲೂ ಎಲ್ಲದಕ್ಕೂ ಸ್ವಾತಂತ್ರ ಕೊಡುತ್ತಾರೆ. ಇದರಿಂದ ಮಗನು ಕುಡಿತ, ಪ್ರೀತಿಯ ಬಲೆಗೆ ಬೀಳುತ್ತಾನೆ. ಇವನನ್ನು ಸರಿದಾರಿಗೆ ತರಲು ಅಪ್ಪ ಒಂದು ಷರತ್ತು ವಿಧಿಸುತ್ತಾರೆ. ನಾನು ....

608

Read More...

2nd Life.Film Reviews

Friday, December 02, 2022

ಸೆಕೆಂಡ್ ಲೈಫ್ ಥ್ರಿಲ್ಲರ್ ಕಥನ        ಸೆಸ್ಪೆನ್ಸ್ ಥ್ರಿಲ್ಲರ್ ಜತೆಗೆ ಮಾಫಿಯಾ ಮೂರು ಸೇರಿಕೊಂಡರೆ ‘ಸೆಕೆಂಡ್ ಲೈಫ್’ ಸಿನಿಮಾ ತೆರೆದುಕೊಳ್ಳುತ್ತದೆ. ಮಗು ಜನಿಸಿದ ಕೆಲವೇ ದಿನಗಳಲ್ಲಿ ಹೊಕ್ಕಳು ಬಳ್ಳಿ ಬೀಳುತ್ತದೆ. ಅದನ್ನು ಕ್ಯಾನ್ಸರ್ ರೋಗಿಗಳ ಔಷದಿಗೆ ಬಳಸಲಾಗುತ್ತದೆ. ಕರ್ನಾಟಕ ಒಂದರಲ್ಲೆ ಸುಮಾರು ೭೫ ಸಾವಿರ ಜನರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಅಂತಹವರಿಗೆ ಇದು ಉಪಯೋಗವಾಗುತ್ತದೆ. ಕರುಳ ಬಳ್ಳಿಯನ್ನು ಶೇಖರಿಸಿಡುವ ಕಾರ್ಯ ಎಲ್ಲಡೆ ನಡೆಯುತ್ತಿದೆ. ಇಂತಹುದೆ ಅಂಶಗಳನ್ನು ಇಟ್ಟುಕೊಂಡು ಚಿತ್ರವು ಸಿದ್ದಗೊಂಡಿದೆ. ಚಿತ್ರದಲ್ಲಿ ಆಕೆ ಅನಾಥಳು.  ಅವಳ ಸೌಂದರ್ಯಕ್ಕೆ ಸೋತು, ಅಂದಳಾಗಿದ್ದರೂ ಕೈಹಿಡಿದು ....

529

Read More...

Raymo.Film Reviews

Friday, November 25, 2022

ಯೂಥ್ ಲವ್ ಸ್ಟೋರಿ ರೇಮೊ       ರೇವಂತ್‌ದೇಶಪಾಂಡೆ ಮತ್ತು ಮೋಹನ. ಇಬ್ಬರ ಹೆಸರುಗಳ ಮೊದಲ ಅಕ್ಷರವನ್ನು ತೆಗೆದುಕೊಂಡು ನಿರ್ದೇಶಕ ಪವನ್‌ಒಡೆಯರ್ ‘ರೇಮೊ’ ಎಂಬ ಸುಂದರ ಪ್ರೀತಿ ಕಥೆಯನ್ನು ಉಣಬಡಿಸಿದ್ದಾರೆ. ಆತ ಒಬ್ಬ ಸಖತ್ ಸ್ಟೈಲಿಶ್, ಡ್ಯಾಶಿಂಗ್, ಟ್ರೆಂಡಿ ಹುಡುಗ ಒಂದು ಕಡೆಯಾದರೆ, ಮತ್ತೋಂದು ಕಡೆ ಮೋಹನ ಎನ್ನುವ ಕೋಗಿಲೆ ಕಂಠದ ಚೆಲುವೆ. ಇಬ್ಬರ ಸುತ್ತ ಸಿನಿಮಾವು ಸಾಗದೆ, ಅದರಾಚೆ ಒಂದು ಫ್ಯಾಮಿಲಿ ಕಥನ, ಸೆಂಟಿಮೆಂಟ್ ಎಲ್ಲವು ಬಂದು ಹೋಗುತ್ತದೆ. ತ್ಯಾಗದ ಜತೆಗೆ ಲವ್‌ಸ್ಟೋರಿ ಪೂರಕವಾಗಿ ಸಾಗುತ್ತದೆ. ವಿರಾಮದ ಮುನ್ನ ಬರುವ ದೃಶ್ಯಗಳು ಯೂತ್‌ಗೆ ಮೀಸಲಿಟ್ಟರೆ, ನಂತರ ಬರುವ ಸನ್ನಿವೇಶಗಳು ಕುಟುಂಬಕ್ಕೆ ಮೀಸಲಿಡಲಾಗಿದೆ. ....

405

Read More...

Trible Riding.Film Reviews

Friday, November 25, 2022

ನಗುವಿನ ಹಾದಿಯಲ್ಲಿ ಫ್ಯಾಮಿಲಿ ಡ್ರಾಮಾ          ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಅಂದರೆ ಅಲ್ಲಿ ತಿಳಿ ಹಾಸ್ಯ ಮೇಳೈಸುತ್ತದೆ. ಅದರಂತೆ ‘ತ್ರಿಬಲ್ ರೈಡಿಂಗ್’ ಸಿನಿಮಾವು ನವಿರಾದ ಪ್ರೀತಿ ಕಥೆ, ಕಾಮಿಡಿಕಚಗುಳಿ. ಒಂದಷ್ಟು ಭಾವನೆಗಳು ಇದೆಲ್ಲಾದರ ಮಧ್ಯೆ ಗುನುಗುವಂತಹ ಹಾಡುಗಳು. ನಾಯಕ ಮೂವರು ನಾಯಕಿಯರ ಪ್ರೇಮಪಯಣವೇ ಈ ತ್ರಿಬಲ್ ರೈಡಿಂಗ್. ಒಬ್ಬಳ ಸಹವಾಸದಿಂದ ಮೋಸಹೋಗಿ, ಸಾಕಪ್ಪ ಸಾಕು ಈ ಹುಡುಗಿರೊಂದಿಗೆ ಬೆರೆಯುವುದು ಬೇಡವೆಂದು ನಿರ್ಣಯ ತೆಗೆದುಕೊಂಡಿರುವ ಲಾಯರ್ ಮಗನನ್ನು ಹುಡುಗೀರು ಹುಡುಕಿಕೊಂಡು ಬಂದು ಲವ್ ಮಾಡಿದರೆ ಏನಾಗುತ್ತದೆ. ಅದೇ ನಿಜವಾದ ಪ್ರೀತಿ ಎಂದುಕೊಂಡ ಅವನ ಪಾಲಿಗೆ ಏನೆಲ್ಲ ಅವಾಂತರಗಳು ಆಗುತ್ತದೆ ....

418

Read More...

Abbara.Film Reviews

Friday, November 18, 2022

ಅವತಾರಪುರುಷನಾಗಿ  ಪ್ರಜ್ವಲ್‌ದೇವರಾಜ್*****         ನಾಯಕ ಪ್ರಜ್ವಲ್‌ದೇವರಾಜ್ ‘ಅಬ್ಬರ’ ಚಿತ್ರದಲ್ಲಿ ಮೂರು ಗೆಟಪ್‌ಗಳನ್ನು ಹಾಕಿಕೊಂಡಂತೆ, ಸರಿಸಮನಾಗಿ ಮೂವರು ನಾಯಕಿಯನ್ನು ಒಲಿಸಿಕೊಳ್ಳುತ್ತಾನೆ. ಅವರುಗಳ ಜೊತೆಗೆ ಮಾತುಕತೆ, ಹಾಡು, ಡ್ಯಾನ್ಸ್, ಹಾಸ್ಯ ಎಲ್ಲವು ಸೇರಿಕೊಂಡಿರುತ್ತದೆ. ಈ ಬಾರಿ ಮಾಸ್ ಆಗಿ ಮಿಂಚಿದ್ದಾರೆ. ಅರಿಯದೆ ತಪ್ಪು ಮಾಡಿದ ಅವನ ತಂದೆ ಅದನ್ನು ಸರಿಪಡಿಸಲು ಮತ್ತೋಂದು ತಪ್ಪು ಮಾಡುತ್ತಾನೆ. ಅದನ್ನು ಮಗನಾದವನು ಹೇಗೆ ಸರಿಪಡಿಸುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕಥೆಯಲ್ಲಿ ಅವನು ಸೂಪರ್ ಮ್ಯಾನ್ ಅಗುತ್ತಾನೆ. ಬಾಬಾ ಅವತಾರ ತಾಳುತ್ತಾನೆ. ಅದಕ್ಕೆಲ್ಲಾ ಕಾರಣ ೨೫ ವರ್ಷಗಳ ....

484

Read More...

Dil Pasand.Film Reviews

Friday, November 11, 2022

ಪ್ರೀತಿಯ ಹಾದಿಯಲ್ಲಿ ದಿಲ್‌ಪಸಂದ್*****         ‘ದಿಲ್‌ಪಸಂದ್’ ಎನ್ನುವುದು ಬೇಕರಿಯಲ್ಲಿ ಸಿಗುವ ತಿನುಸು. ಸಿನಿಮಾದ ಟೈಟಲ್ ಇದೇ ಆಗಿರುವುದರಿಂದ ತಿನ್ನಲು ರುಚಿ ಸಿಗುವಷ್ಟೇ ಚಿತ್ರವು ಸಿಗುತ್ತದೆ. ಸಂತೋಷ್ (ಕೃಷ್ಣ) ಏಳನೇ ಕ್ಲಾಸಲ್ಲಿ ಮದುವೆ ಆಗ್ತೀನಿ ಅಂತ ಹೊರಟು ಅಪ್ಪನಿಂದ ಬರೆ ಹಾಕಿಸಿಕೊಂಡಿದ್ದು, ಅದರ ಕಹಿ ನೆನಪು ಅವನನ್ನು ಹುಡುಗಿಯರ ಸಂಗ ಮಾಡದಂತೆ ತಡೆಯುತ್ತದೆ. ಆದರೆ ಹುಡುಗಿಯೊಬ್ಬಳ ಹುಡುಕಾಟ ಆತನ ಬದುಕನ್ನೇ ಬದಲಿಸುತ್ತೆ. ಆಕೆ ಯಾರು, ಅವಳ ಹಿನ್ನಲೆ, ಅವಳ್ಯಾಕೆ ಇವನನ್ನು ಟಾರ್ಗೆಟ್ ಮಾಡುತ್ತಾಳೆ, ಇದರ ಪರಿಣಾಮ ಏನಾಗುತ್ತೆ ಅನ್ನೋದು ಒಂದು ಏಳೆಯ ಸಾರಾಂಶವಾಗಿದೆ. ನಿರ್ದೇಶಕ ಶಿವತೇಜಸ್ ....

534

Read More...

Raana.Film Reviews

Friday, November 11, 2022

ದುರುಳರಿಗೆ ಖೆಡ್ಡಾ ತೋಡುವ ರಾಣ*****        ಮೂರು ವರ್ಷಗಳ ನಂತರ ಶ್ರೇಯಸ್‌ಮಂಜು ಅಭಿನಯದ ‘ರಾಣ’ ಚಿತ್ರವು ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದೆ. ಕಥೆಯಲ್ಲಿ ಆತ ಮಧ್ಯಮ ವರ್ಗದ ಕುಟುಂಬದವನು. ಪೋಲೀಸ್ ಆಗಿ ಸಮಾಜಕ್ಕೆ ಸೇವ ಸಲ್ಲಿಸುವ ಕನಸು ಹೊಂದಿರುತ್ತಾನೆ. ತರಭೇತಿಗಾಗಿ ಬೆಂಗಳೂರಿಗೆ ಬಂದಿರುತ್ತಾನೆ. ಯಾರೂ ಸಂಬಂದಿಕರಿಲ್ಲದ ಕಾರಣ ಸ್ನೇಹಿತರ ರೂಂನಲ್ಲೆ ಉಳಿದುಕೊಳ್ಳುತ್ತಾನೆ. ಟ್ರಾವೆಲ್ಸ್ ಆಫೀಸೊಂದಕ್ಕೆ ಸೇರಿ ಬಿಡುವಿನ ವೇಳೆಯಲ್ಲಿ ಟ್ಯಾಕ್ಸಿ ಓಡಿಸುತ್ತಿರುತ್ತಾನೆ. ಇನ್ನೇನು ಪೋಲೀಸ್ ಆಗೇಬಿಟ್ಟರು ಎನ್ನುವ ಹೊತ್ತಿಗೆ ಹುಟ್ಟಿಕೊಳ್ಳುವ ತಿರುವು. ರೌಡಿಗಳೊಂದಿಗೆ ಸೆಣಸಾಟ. ಯಾರೋ ಮಾಡಿದ ಕೊಲೆಗೆ ಈತ ತಲೆ ....

460

Read More...

Hubli Dhaba.Film Reviews

Friday, November 11, 2022

ಹುಬ್ಬಳ್ಳಿ ಡಾಬಾ ಕ್ರೌಯ, ಕಲಾವಿದರೇ ಬಂಡವಾಳ *****        ಕೊಲೆ, ರಕ್ತಪಾತ, ಕುತೂಹಲ, ಥ್ರಿಲ್ಲರ್ ಇವೆಲ್ಲವನ್ನು ನೋಡಬೇಕಂದರೆ ‘ಹುಬ್ಬಳ್ಳಿ ಡಾಬಾ’ ಚಿತ್ರಕ್ಕೆ ಹೋದರೆ ಖಂಡಿತವಾಗಿಯೂ ಸಿಗುತ್ತದೆ. ‘ದಂಡುಪಾಳ್ಯ’ ಭಾಗ-೧ ಮತ್ತು ೨ನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದ ನಿರ್ದೇಶಕ ಶ್ರೀನಿವಾಸರಾಜು ಈಗ ಮತ್ತೋಂದು ಇದೇ ರೀತಿಯ ಕಥೆಯನ್ನು ತೆರೆ ಮೇಲೆ ತಂದಿದ್ದಾರೆ. ಇಲ್ಲಿಯೂ ಸರಣಿ ಕೊಲೆಗಳು, ನಿಗೂಢ ಹತ್ಯೆಗೆ ಕಾರಣವೇ ಇಲ್ಲದಂತಾಗುತ್ತದೆ. ಯಾವುದೋ ಬಯಲಲ್ಲಿ ನಡೆಯುವ ಎನ್‌ಕೌಂಟರ್ ಇದೆ. ಕರುಳು ಕೊರೆಯುವ ದ್ವೇಷವಿದೆ. ಮರ್ಡರ್ ಸ್ಕೆಚ್ ಸೇರಿದಂತೆ ಹಲವು ಸ್ವಾರಸ್ಯಗಳು ಚಿತ್ರದ ಸುತ್ತ ಸುತ್ತುವ ....

496

Read More...

Banaras.Film Reviews

Friday, November 04, 2022

ಬನಾರಸ್‌ದಲ್ಲಿ ಪ್ರೀತಿಯ ಹುಡುಕಾಟ         ಹಿಂದೂಗಳ ಧರ್ಮಭೂಮಿ ‘ಬನಾರಸ್’ಗೆ ದೇಶ ವಿದೇಶಗಳಿಂದ ಅಸ್ಥಿ ವಿಸರ್ಜಿಸಲು ಬರುತ್ತಾರೆ. ಘಾಟ್‌ಗಳ ದಡಗಳಲ್ಲಿ ಮೃತದೇಹಗಳನ್ನು ಸುಡುತ್ತಾರೆ. ಗಂಗೆಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಈಗ ಇದೇ ಹೆಸರಿನಲ್ಲಿ ತೆರೆಕಂಡಿರುವ ಚಿತ್ರದಲ್ಲಿ ಸಾವು ಮತ್ತು ಬದುಕು, ವೈರಾಗ್ಯ, ಪ್ರೇಮ, ಅಧ್ಯಾತ್ಮ, ಲೌಕಿಕತೆ ಎಲ್ಲವೂ ಒಂದಕ್ಕೊಂದು ಬೆರೆತುಕೊಂಡು ಮಾಯಕದ ಜಗತ್ತಿನಂತೆ ಭಾಸವಾಗುವ ಅಲ್ಲಿನ ಅಂಗಳದಲ್ಲಿ ನಡೆಯುವ ಕತೆಯು ಬೆಂಗಳೂರಿನಿಂದ ಆರಂಭವಾಗಿ ಬನಾರಸ್ ತಲುಪುತ್ತದೆ. ಚಿತ್ರದಲ್ಲಿ ಸಿದ್ದಾರ್ಥ್ ತಾನು ಮಾಡಿದ ತಪ್ಪಿನ ಪಾಪ ಪ್ರಾಯಶ್ಚಿತಕ್ಕೆ ಇಲ್ಲಿಗೆ ಬರುತ್ತಾನೆ. ತನ್ನಿಂದ ಸಮಸ್ಯೆಗೊಳಗಾದ ....

486

Read More...

Nahi Jnanena Sadrusham,Reviews

Friday, November 04, 2022

ಮನರಂಜನೆಯ ಮೂಲಕ ಶಿಕ್ಷಣ         ಓದುವ ಮಕ್ಕಳಿಗೆ ಶಿಕ್ಷಣ ನೇರವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ ಅವರು ಓದಿನಲ್ಲಿ ಹಿಂದಿರುತ್ತಾರೆ. ಅದೇ ಮನರಂಜನೆ ಮೂಲಕ ಶಿಕ್ಷಣವನ್ನು ಹೇಳಿದಾಗ ತಲೆ ಒಳಗೆ ಹೋಗುತ್ತದೆ. ಇಂತಹುದೇ ಅಂಶಗಳನ್ನು ತೆಗೆದುಕೊಂಡು ‘ನಹೀ ಜ್ಞಾನೇನ ಸದೃಶಂ’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಕಥೆಯಲ್ಲಿ ಅದೊಂದು ಪ್ರೌಡಶಿಕ್ಷಣ ಶಾಲೆ. ಅಲ್ಲಿಗೆ ಗಣಿತ ಹೇಳಿಕೊಡುವ ಶಿಕ್ಷಕರೊಬ್ಬರು ಬರುತ್ತಾರೆ. ಕ್ಲಾಸಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡದೆ ಹೋ ವರ್ಕ್‌ನ್ನು ಪೋಷಕರಿಗೆ ನೀಡಿ, ಮಕ್ಕಳಿಗೆ ಸಿನಿಮಾ ನೋಡಲು ಹುರುದುಂಬಿಸುತ್ತಾರೆ. ಇದರಿಂದ ಪೋಷಕರು ಹಾಗೂ ಸಿಬ್ಬಂದಿಯಿಂದ ಅಪವಾದಗಳನ್ನು ....

555

Read More...

Head Bush.Film Reviews

Friday, October 21, 2022

ಭೂಗತ ಲೋಕದ ನಿರೂಪಣೆ ಸುಂದರ          ೭೦-೮೦ರ ದಶಕದಲ್ಲಿ ದೇವರಾಜಅರಸು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಪ್ರಧಾನಿ ಇಂದಿರಾಗಾಂಧಿ ರಾಜಕೀಯೇತರ ಶಕ್ತಿಗಳನ್ನು ಹುಟ್ಟುಹಾಕಲು ಸಿಎಂಗೆ ನೇರ ಆದೇಶ ಕೊಡುತ್ತಾರೆ. ಸಿಎಂ ನೇರ ಬೆಂಗಳೂರಿಗೆ ಬಂದು ಅಳಿಯ ಎಡಿಎನ್‌ರನ್ನು  ಇಂದಿರಾ ಬ್ರಿಗ್ರೇಡ್ ರಾಜ್ಯ ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ. ಇದಕ್ಕಾಗಿ ಒಂದಷ್ಟು ಶಕ್ತಿಯನ್ನು ಹುಟ್ಟುಹಾಕಲು ತಿಳಿಸುತ್ತಾರೆ. ಆಗ ಹುಟ್ಟಿಕೊಂಡಿದ್ದೇ ವಸೂಲಿ ದಂಧೆ ಚಟುವಟಿಕೆಗಳು. ಬೆಂಗಳೂರಿನ ಪುಡಿ ರೌಡಿಗಳೆಲ್ಲಾ ಒಂದಾಗುತ್ತಾರೆ. ಇನ್ನು ಪೋಲೀಸರು ಏನು ಮಾಡಲಿಕ್ಕೆ ಆಗದೆ ಸುಮ್ಮನೆ ಕೂರುತ್ತಾರೆ. ತನ್ನ ಆದೇಶಗಳಿಗೆ ಅಡ್ಡಿಪಡಿಸುವ ಐಎಎಸ್ ....

532

Read More...

MRP.Film Reviews

Friday, October 14, 2022

ಸ್ಥೊಲಕಾಯದ ವ್ಯಕ್ತಿ ಎಂಆರ್‌ಪಿ      ಪ್ರತಿಯೊಬ್ಬನ ಮನುಷ್ಯನಲ್ಲಿ ಏನಾದರೊಂದು ನ್ಯೂನತೆ ಇರುತ್ತದೆ. ಅದೇ ಅವರ ಬಾಳಿಗೆ ಕೆಲವೊಮ್ಮೆ ಮುಳುವಾಗುತ್ತದೆ. ದಪ್ಪಗಿದ್ದರೇನು, ಸಣ್ಣಗಿದ್ದರೇನು, ಚೆನ್ನಾಗಿ ನೋಡಿಕೊಳ್ಳುವ ಪತಿ ಸಿಕ್ಕರೆ ಬದುಕು ಸುಂದರವಾಗಿರುತ್ತದೆ. ಇದೇ ವಿಷಯವನ್ನು ‘ಎಂಆರ್‌ಪಿ’ ಚಿತ್ರದಲ್ಲಿ ಹೇಳಲಾಗಿದೆ. ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್ ಎಂದು ಶೀರ್ಷಿಕೆಗೆ ಅರ್ಥ ಕೊಡುತ್ತದೆ. ಕಥೆಯಲ್ಲಿ ಶೀಲವಂತ್ ಸ್ಥೂಲಕಾಯದವನಾಗಿರುತ್ತಾನೆ. ವಯಸ್ಸು ಜಾಸ್ತಿಯಾಗುತ್ತಿದ್ದರೂ, ಆತನ ದೇಹಕಾರದ ಕಾರಣಕ್ಕೆ ಹುಡುಗಿ ಸಿಗುತ್ತಿರುವುದಿಲ್ಲ. ಆ ಸಮಯದಲ್ಲಿ ತಂದೆ ಸ್ನೇಹಿತನ ಪುತ್ರಿ ಇಂದ್ರ ಮದುವೆಯಾಗಲು ....

549

Read More...

Champion.Film Reviews

Friday, October 14, 2022

ದೋಸ್ತಿ ಹಾಡಿಗೆ ಪ್ರಶಂಸೆಯ ಸುರಿಮಳೆ ****         ಶಾಹುರಾಜ್‌ಶಿಂಧೆ ನಿರ್ದೇಶನದ ‘ಚಾಂಪಿಯನ್’  ಚಿತ್ರದ ‘ನೂರು ಕೋಟಿ ಆಸ್ತಿ ದೋಸ್ತವ್ನೆ’ ಹಾಡು ಬಿಡುಗಡೆಗೊಂಡು ಹಿಟ್‌ಲಿಸ್ಟ್‌ನತ್ತ ಸಾಗುತ್ತಿದೆ.  ನಾಗಾರ್ಜುನ್‌ಶರ್ಮಾ ಸಾಹಿತ್ಯ, ನಕಾಶ್‌ಅಜೀಜ್ ಗಾಯನದಲ್ಲಿ ಅಜನೀಶ್‌ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಮಲೆನಾಡಿನ ಹುಡುಗನೊಬ್ಬ ಕ್ರೀಡಾ ಕ್ಷೇತ್ರದಲ್ಲಿ ಕಷ್ಟಪಟ್ಟು ಸಾಧನೆ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಚಾಂಪಿಯನ್ ಆಗುವ ಕಥೆಯನ್ನು ಹೊಂದಿದೆ. ಬ್ಯಾಂಕ್ ಉದ್ಯೋಗಿಯಾಗಿದ್ದ ಬೆಳಗಾಂ ಮೂಲದ ಸಚಿನ್‌ಧನಪಾಲ್ ಬಣ್ಣದಲೋಕದ ಆಸೆಯಿಂದ ಕೆಲಸಕ್ಕೆ ಬೆನ್ನು ತೋರಿಸಿ, ಈ ....

578

Read More...

Kantara.Film Reviews

Friday, September 30, 2022

  ಕಣ್ಮನ ಸೆಳೆಯುವ ’ಕಾಂತಾರ’   ಚಿತ್ರ: ಕಾಂತಾರ ಪ್ರಮುಖ ಪಾತ್ರ: ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಮೊದಲಾದವರು. ನಿರ್ದೇಶನ: ರಿಷಬ್ ಶೆಟ್ಟಿ ನಿರ್ಮಾಣ: ಹೊಂಬಾಳೆ ಫಿಲ್ಮ್ಸ್   ಯಾವ ದೇಶಕ್ಕೆ ಹೋದರೂ ಮನುಷ್ಯ ಭಾವನಾತ್ಮಕ ಜೀವಿ. ಅದರಲ್ಲೂ ಭಕ್ತಿ, ಪ್ರೇಮ ಮೊದಲಾದ ಭಾವಗಳಂತೂ ಕನ್ನಡಿಗರ ಹೃದಯದಲ್ಲಿ ಸೇರಿಕೊಂಡಿದೆ. ಇವೆರಡೂ ಭಾವಗಳಿಗೆ ಭಾಷ್ಯ ಬರೆದಿರುವಂಥ ಚಿತ್ರ ಕಾಂತಾರ. ಹಾಗಾಗಿಯೇ ಒಂದು ಪ್ರದೇಶದ ಕತೆಯಾದರೂ, ಪ್ರತಿಯೊಂದು ಭಾಗದವರನ್ನೂ ತಲುಪುವಲ್ಲಿ ಯಶಸ್ವಿಯಾಗಿದೆ.   ಇತ್ತೀಚೆಗೆ ಕರ್ನಾಟಕ ಕರಾವಳಿಯ   ಸೊಗಡನ್ನು ‌ಸಿನಿಮಾಗಳ ಮೂಲಕ ಎಲ್ಲೆಡೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಆ ನಿಟ್ಟಿನಲ್ಲಿ ನೋಡಿದರೆ ಇಲ್ಲಿ ....

648

Read More...

Mardini.Film Reviews

Friday, September 16, 2022

ಒಂದು ಕೊಲೆಯ ಸುತ್ತ        ಒಂದು ಮರ್ಡರ್ ಮಿಸ್ಟರಿಯನ್ನು ಹೀಗೂ ತನಿಖೆ ಮಾಡಬಹುದೆಂದು ‘ಮರ್ದಿನಿ’ ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ. ಕಥಾ ನಾಯಕಿ ಪೋಲೀಸ್ ಇನ್ಸ್‌ಪೆಕ್ಟರ್ ಮರ್ದಿನಿ ಚಿಕ್ಕಮಗಳೂರಿಗೆ ವರ್ಗವಾಗಿ ಬಂದ ಕೆಲವೇ ದಿನಗಳಲ್ಲಿ ಜಾಹ್ಮವಿ ಎಂಬ ಹುಡುಗಿಯ ಕೊಲೆಯಾಗುತ್ತದೆ. ಹಾಗಾಗಿ ಕೊಲೆಗಾರರನ್ನು ಪತ್ತೆ ಹಚ್ಚುವುದು ಆಕೆಗೆ ಸವಾಲು ಆಗುತ್ತದೆ. ಆ ಕೊಲೆಯ ರೂವಾರಿಯನ್ನು ಹುಡುಕುವ ಹಾದಿಯಲ್ಲಿ ಹಲವಾರು ತಿರುವುಗಳು ಎದುರಾಗುತ್ತದೆ. ಪ್ರಕರಣ ಅಂದ ಮೇಲೆ ಬರುವ ರಾಜಕೀಯ ಹಸ್ತಕ್ಷೇಪ, ಪ್ರಭಾವಿ ವ್ಯಕ್ತಿಗಳ ಕುಮ್ಮಕ್ಕು ಇದ್ಯಾವುದಕ್ಕೂ ಹೆದರದೆ ಅದೆಲ್ಲವನ್ನು ಬದಿಗಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಲು ....

628

Read More...

Love 360.Film Reviews

Friday, August 19, 2022

ಪ್ರೀತಿಯ ಕಷ್ಟದ ಹಾದಿಗಳು  Love 360 ****         ಶಶಾಂಕ್ ನಿರ್ದೇಶನದ ‘ಲವ್ ೩೬೦’ ಚಿತ್ರದಲ್ಲಿ ಪ್ರೀತಿಯ ಪಯಣ ಎಂದೂ ಸುಗಮವಾಗಿ ಸಾಗುವುದಿಲ್ಲವೆಂದು ಹೇಳಲಾಗಿದೆ. ಚಿಕ್ಕಂದಿನಿಂದಲೂ ಜಾನಕಿಯನ್ನು ಹೆಚ್ಚು ಪ್ರೀತಿಸುವ ರಾಮ್ ಅವಳಿಗೆ ಮರೆವಿನ ಖಾಯಿಲೆ ಇದೆ ಅಂತ ಗೊತ್ತಿದ್ದರೂ ಆಕೆಯನ್ನು ಕಣ್ಣರಪ್ಪೆಯಂತೆ ಕಾಪಾಡುತ್ತಿರುತ್ತಾನೆ. ಹೀಗಿರುವಾಗ ಒಂದು ಕೊಲೆಯಾಗುತ್ತದೆ. ಅದರ ಆರೋಪ ಜಾನಕಿ ಮೇಲೆ ಬರುತ್ತದೆ. ಅವಳು ಹುಚ್ಚಿ ಅಲ್ಲ ಎಂದು ಹೋರಾಡುತ್ತಲೇ ಇರುವ ಅವನಿಗೆ, ಅವಳ ಮೇಲೆ ಆರೋಪ ಬಂದಾಗ ಸುಮ್ಮನಿರುತ್ತಾನಾ? ಜೀವದಂತಿರುವ ಹುಡುಗಿಯನ್ನು ಕಂಬಿಯಿಂದ ಹೊರತರಲು ಅವನು ಏನು ಮಾಡುತ್ತಾನೆ. ಕೊನೆಯಲ್ಲಿ ಇಬ್ಬರು ಏನಾಗುತ್ತಾರೆ ಎನ್ನುವುದೇ ....

649

Read More...

Gaalipata 2.Film Reviews

Friday, August 12, 2022

ಗಾಳಿಪಟ-೨*****       ಪ್ಯಾನ್ ಇಂಡಿಯಾ ಸಿನಿಮಾಗಳ ಮಧ್ಯೆ ನಮ್ಮದು ವಿಶ್ವಕನ್ನಡಿಗರ ಚಿತ್ರವೆಂದು ತೆರೆ ಕಂಡಿರುವ ‘ಗಾಳಿಪಟ-೨’ ಚಿತ್ರವು ವಿಶಿಷ್ಟ ಪಾತ್ರಗಳ ಮೂಲಕ ಸಾಗುತ್ತದೆ. ಕಾಲ್ಪನಿಕ ಊರು ನೀರುಕೋಟೆ ಕಾಲೇಜಿನಲ್ಲಿ ಶುರುವಾದ ಕಥೆಯು ಜರ್ಮನಿ, ಯುರೋಪ್, ಕಜಕಿಸ್ತಾನ, ಹೀಗೆ ನಾನಾ ಕಡೆ ಸಾಗುತ್ತದೆ. ಕನ್ನಡ ಕಲಿಯುವ ಉದ್ದೇಶದಿಂದ ಗಣಿ ಜೊತೆಗೆ ದಿಗಂತ್ ಹಾಗೂ ಭೂಷಣ್ ಸೇರಿಕೊಳ್ಳುತ್ತಾರೆ. ಮೂವರಿಗೆ ಕನ್ನಡ ಶಿಕ್ಷಕ ತಮ್ಮ ಮನೆಯಲ್ಲಿ ಜಾಗ ಕೊಟ್ಟಿರುತ್ತಾರೆ. ಮೊದಲೇ ಯುವಕರಾಗಿದ್ದರಿಂದ ಇವರುಗಳ ತುಂಟಾಟ, ಮೋಜು-ಮಸ್ತಿ ನೋಡೋದೇ ಥ್ರಿಲ್ ಕೊಡುತ್ತದೆ. ಹಾಸ್ಯದ ಸಂಭಾಷಣೆಗಳು ಇದಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಸಹಪಾಠಿ ಶ್ವೇತಾಳ ಮೇಲೆ ....

603

Read More...

Vikrant Rona.Film Reviews

Thursday, July 28, 2022

ಕತ್ತಲ ಕಾಡಿನಲ್ಲಿರೋಣನ ಹುಡುಕಾಟಗಳು ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಹಾದಿಯಲ್ಲಿ ಹೊಸದೊಂದು ಲೋಕವನ್ನು ಸೃಷ್ಟಿಸಿ, ಆ ಲೋಕದೊಳಗೆ ನೋಡುಗ ಏನೋ ಕಳೆದುಕೊಂಡಂತೆ ಭಾಸವಾಗುವ ಪ್ರಯತ್ನದಲ್ಲಿ ‘ವಿಕ್ರಾಂತ್‌ರೋಣ’ ಚಿತ್ರವು ಯಶಸ್ವಿಯಾಗಿದೆ. ಕಣ್ಣಿಗೆತಂಪುಕೊಡುವ ಸೆಟ್ ವೈಭವಗಳು, ದೃಶ್ಯದಿಂದದೃಶ್ಯಕ್ಕೆಕುತೂಹಲವನ್ನು ಹೆಚ್ಚಿಸಿ ಸೀಟಿನ ತುದಿಯಲ್ಲಿಕೂರುವಂತೆ ಮಾಡಿದೆ.ಕುತೂಹಲಕಾರಿಯಾದ ಭಿನ್ನವಾದ ಭೂತಾರಾಧನೆಯ ಫ್ಲ್ಯಾಷ್ ಬ್ಯಾಕ್‌ಗೆ ಫ್ಯಾಂಟಸಿಯನ್ನು ಜತೆಗೊಡಿಸಿರುವುದು ನಿರ್ದೇಶಕಅನೂಪ್ ಭಂಡಾರಿ ಬುದ್ದವಂತಿಕೆಗೆ ಸಾಕ್ಷಿಯಾಗಿದೆ.ಕಮರೊಟ್ಟುಎನ್ನುವಊರಿನಲ್ಲೊಂದು ಹಳೆಯ ಬಂಗಲೆ. ನಿಗೂಢವಾಗಿ ಸಾವು ಕಾಣುತ್ತ್ತಿರುವ ಮಕ್ಕಳು.ಆ ....

700

Read More...

Oh My Love.Film Reviews

Friday, July 15, 2022

ಕಾಲೇಜು ಕಾರಿಡಾರ್‌ದಲ್ಲಿ ಸ್ನೇಹ-ಪ್ರೀತಿ         ಸ್ನೇಹಕ್ಕಾಗಿ ಪ್ರೀತಿಯನ್ನು ತ್ಯಾಗ ಮಾಡುವ ಚಿತ್ರಗಳು ಸಾಕಷ್ಟು ಬಂದಿದೆ. ಆದರೆ ‘ಓ ಮೈ ಲವ್’ ಚಿತ್ರದಲ್ಲಿ ಇವರೆಡು ಇದ್ದರೂ ಭಿನ್ನವಾಗಿ ತೋರಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ. ಕಾಲೇಜು ಹುಡುಗರ ಮೋಜು ಮಸ್ತಿಯಲ್ಲಿ ನವಿರಾದ ಪ್ರೀತಿ ಅರಳುತ್ತದೆ. ಇದಕ್ಕೆ ಸ್ನೇಹ ಅಡ್ಡ ಬರುತ್ತದೆ. ಕೆಲಸದ ನಿಮಿತ್ತ ಹೊರಗೆ ಬೇಕಾದ ಕಾರಣ ಅಣ್ಣನು ತಂಗಿಯ ರಕ್ಷಣೆಗಾಗಿ ಗೆಳಯನನ್ನು ಕೇಳಿಕೊಳ್ಳುತ್ತಾನೆ. ಅವನು ಎಲ್ಲಾ ರೀತಿಯಲ್ಲಿ ಸೇಫ್ ಮಾಡುವಾಗ ಅವಳು ಅವನಲ್ಲಿ ಅನುರಕ್ತಳಾಗುತ್ತಾಳೆ. ಆತನು ಗೆಳೆಯನಿಗೆ ಕೊಟ್ಟ ಮಾತಿನಂತೆ ....

512

Read More...

Tootu Madike.Film Reviws

Friday, July 08, 2022

ಸ್ಲಮ್ ಹುಡುಗರ ಶ್ರೀಮಂತ ಕನಸುಗಳು         ಪುರಾತನ ಕಾಲದ ವಿಗ್ರಹವೊಂದು ಮಿಸ್ ಆಗಿದೆ ಎನ್ನುವಲ್ಲಿಗೆ ‘ತೂತು ಮಡಿಕೆ’  ಚಿತ್ರವು  ಶುರುವಾಗುತ್ತದೆ. ಸ್ಲಂನಲ್ಲಿರುವ ಇಬ್ಬರು ಕಿಲಾಡಿಗಳು ಕೆಲಸಕ್ಕೆ ಹೋಗದೆ ಅಡ್ಡ ದಾರಿಯಲ್ಲಿ ಬಂದಂತ ಹಣದಲ್ಲಿ ಮಜಾ ಮಾಡುತ್ತಿರುತ್ತಾರೆ. ಒಬ್ಬೊಬ್ಬರ ತಲೆ ಮೇಲೆ ಕೈಯಿಟ್ಟು ದುಡ್ಡು ಸಂಪಾದಿಸುವುದೇ ಇವರ ಕಾಯಕ. ಹೀಗಿರುವಾಗ ಕಿಡ್ನಾಪ್ ಮಾಡುವ ಹಾಗೂ ವಿಗ್ರಹವನ್ನು ಹುಡುಕುವ ಡೀಲ್ ಸಿಗುತ್ತದೆ. ಅಪಹರಣವನ್ನು ಸುಲಭವಾಗಿ ಮಾಡುತ್ತಾರೆ. ಆದರೆ ವಿಗ್ರಹ ಸಿಗುವುದಿಲ್ಲ. ಒಂದು ಕಡೆ ರೌಡಿಗಳು, ಮತ್ತೋಂದು ಕಡೆ ಶಾಸಕರ ಕಡೆಯವರು. ಇದರ ಮಧ್ಯೆ ಹನಿಟ್ರಾಪ್ ಗ್ಯಾಂಗ್‌ನವರು. ಇವರೆಲ್ಲರೂ ....

469

Read More...

Girki.Film Reviews

Friday, July 08, 2022

  ಕಥೆಗೆ ಹೊಸ ನಿರೂಪಣೆ            ಎಲ್ಲಾ ಚಿತ್ರಗಳಲ್ಲಿ ಇರುವಂತೆ ಪೋಲೀಸು, ಮೋಸ, ಕ್ರೈಮು, ರೇಪು ಇದರ ನಡುವೆ ಪ್ರೀತಿ ಇವಿಷ್ಟು ‘ಗಿರ್ಕಿ’ ಸಿನಿಮಾದಲ್ಲಿ ಇದ್ದರೂ ನಿರೂಪಣೆ ಹೊಸದಂತೆ ಕಾಣಿಸುತ್ತದೆ. ಅವನು ಬಾರ್‌ನಲ್ಲಿ ಕೆಲಸ ಮಾಡುವವನು, ಅವಳು ಬಟ್ಟೆ ಅಂಗಡಿಯಲ್ಲಿ ಉದ್ಯೋಗ. ಇವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಇವರಿಗೆ ಅಡ್ಡ ಆಗುವುದು ನಿಗೂಢವಾಗಿ ಸಾಯುತ್ತಿರುವ ಹಾಗೂ ನಾಪತ್ತೆಯಾಗುತ್ತಿರುವ ಅನಾಥ ಯುವತಿಯರು. ಇದಕ್ಕೂ ಆಕೆ ಕೆಲಸ ಮಾಡುವ ನಾಯಕಿಗೂ ಏನು ಸಂಬಂದ ಎನ್ನುವುದೇ ಒಂದೇ ಏಳೆಯ ಸಾರಾಂಶವಾಗಿದೆ. ಸಾಧಾರಣ ಕಥೆ ಇದ್ದರೂ ಅದನ್ನು ಹೇಳುವ ಧಾಟಿ ಚೆನ್ನಾಗಿದೆ. ಎಲ್ಲಿಯೂ ಬೋರ್ ಅನಿಸುವುದಿಲ್ಲ. ....

706

Read More...

777 Charlie.Film Reviews

Sunday, June 12, 2022

ಮನುಷ್ಯ ಮತ್ತು ಶ್ವಾನದ ಸಂಬಂದಗಳು         ನಾಯಿಗೆ ನಿಯತ್ತು ಇದೆ, ಒಬ್ಬರನ್ನು ನಂಬಿದರೆ ಅದು ಬಿಟ್ಟು ಹೋಗಲಾರದು ಎನ್ನುತ್ತಾರೆ. ಅಂತಹ ಮನುಷ್ಯ ಮತ್ತು ನಾಯಿ ಸಂಬಂದ ಹೇಗಿರುತ್ತದೆಂದು ‘೭೭೭ ಚಾರ್ಲಿ’ ಚಿತ್ರದಲ್ಲಿ ಸುಂದರವಾಗಿ ತೋರಿಸಲಾಗಿದೆ. ಕಥೆಯಲ್ಲಿ ಆತನೊಬ್ಬ ಫ್ಯಾಕ್ಟರಿ ಕೆಲಸ ಮಾಡುವ ವ್ಯವಸ್ಥಾಪಕ. ಯಾರೊಂದಿಗೂ ಮಾತನಾಡದೆ ತನ್ನ ಕೆಲಸವಾಯಿತು ಎಂದು ಮೇಲಾಧಿಕಾರಿಗಳಿಂದ ಶಹಬ್ಬಾಸ್ ಗಿಟ್ಟಿಸಿಕೊಂಡಿರುತ್ತಾನೆ. ಇದರಿಂದ ಸಹದ್ಯೋಗಿಗಳಿಗೂ ಇವನ ಕಂಡರೆ ಅಸೂಯು ಬಂದಿರುತ್ತದೆ. ಅದೇ ರೀತಿ ಅಕ್ಕಪಕ್ಕದ ಮನೆಯವರಿಗೂ ಬೇಡವಾಗಿರುತ್ತಾನೆ. ಒಂದ ಘಟ್ಟದಲ್ಲಿ ನಾಯಯೊಂದು ಮನೆ ಸೇರಿಕೊಳ್ಳುತ್ತದೆ. ಅದರಿಂದ ಕಿರಿಕಿರಿ ....

469

Read More...

Buddies.Film Reviews

Friday, June 24, 2022

ಕಾಲೇಜ್ ಅಂಗಳದಲ್ಲಿ ಸ್ನೇಹ ಪ್ರೀತಿ         ಎಲ್ಲಾ ಸಂಬಂದಗಳಿಗಿಂತ ಸ್ನೇಹ ಸಂಬಂದ ದೊಡ್ಡದು ಎಂಬುದನ್ನು ‘ಬಡ್ಡೀಸ್’ ಚಿತ್ರದಲ್ಲಿ ಹೇಳಿದ್ದಾರೆ. ಕಾಲೇಜು, ಪ್ರೀತಿ, ಶ್ರೀಮಂತ ಕುಟುಂಬ, ಅನಾಥ ಸ್ನೇಹಿತರು ಹೀಗೆ ಇಷ್ಟು ಪಾತ್ರಗಳ ಸುತ್ತ ಇಂದಿನ ಹುಡುಗ ಹುಡುಗಿಯರಿಗೆ ಹೇಳಬೇಕಾದ ಕಥೆಯನ್ನು ನಿರ್ದೇಶಕ ಗುರುತೇಜ್‌ಶೆಟ್ಟಿ ಸಮರ್ಪಕವಾಗಿ ನಿರೂಪಿಸಿದ್ದಾರೆ. ಕಥಾನಾಯಕ ದೊಡ್ಡ ಬ್ಯುಸಿನೆಸ್‌ಮ್ಯಾನ್ ಪುತ್ರ. ಚಿಕ್ಕವನಿದ್ದಾಗೇ ಅಮ್ಮನನ್ನು ಕಳೆದುಕೊಂಡು ಏಕಾಂಗಿಯಾದೆ ಎಂಬ ಕೊರಗಿನಲ್ಲಿರುತ್ತಾನೆ. ಅದನ್ನು ನೀಗಿಸಲು ಅಪ್ಪನು ಮೂವರು ಅನಾಥ ಹುಡುಗರನ್ನು ಮಗನ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡುತ್ತಾನೆ. ಅಲ್ಲಿಂದ ಪುಟ್ಟ ....

501

Read More...

Seethayana.Film Reviews

Friday, May 27, 2022

ಪ್ರೇಮಕಥೆಯಲ್ಲಿಥ್ರಿಲ್ಲರ್ ಅಂಶಗಳು ಮೊದಲರ್ಧ ಪ್ರೀತಿ, ಪ್ರೇಮ, ವಿವಾಹ ನಂತರಥ್ರಿಲ್ಲರ್ ಅಂಶಗಳನ್ನು  ‘ಸೀತಾಯಣ’ಚಿತ್ರದಲ್ಲಿ ಹೇಳಲಾಗಿದೆ. ಕಥೆಯಲ್ಲಿರಾಹುಲ್ (ಅಕ್ಷಿತ್‌ಶಶಿಕುಮಾರ್) ಜೀವನದಲ್ಲಿ ಮುಂದು ಬರಬೇಕೆಂದುಉದ್ಯಮ ಶುರು ಮಾಡಲು ಸಾಲಕ್ಕಾಗಿ ಬ್ಯಾಂಕಿಗೆಅರ್ಜಿ ಸಲ್ಲಿಸಿರುತ್ತಾನೆ. ಸೀತಾ (ಅನಹಿತಾಭೂಷಣ್) ಆಡ್ ಶೂಟ್ ಮಾಡುವ ನಿರ್ದೇಶಕಿ.ಒಂದುಘಟನೆಯಿಂದಇಬ್ಬರು ಭೇಟಿಯಾಗಿ ಲವ್‌ಗೆತಿರುಗುತ್ತದೆ.ಆಕೆಯಅಪ್ಪ ಬ್ಯಾಂಕ್ ಮ್ಯಾನೇಜರ್.ಹೇಗಿದ್ದರೂಈತನ ವಿವರ ತಿಳಿದಿರುವ ಕಾರಣ ಶುರುವಿನಲ್ಲಿ ವಿರೋದ ವ್ಯಕ್ತ ಪಡಿಸಿದರೂ, ಗುಣಕ್ಕೆ ಮಾರುಹೋಗಿ ಮಗಳನ್ನು ಕೊಡಲು ನಿರ್ಣಯಿಸುತ್ತಾನೆ. ಎರಡೂ ಮನೆ ಕಡೆಯಿಂದ ಸಮ್ಮತಿ ಸಿಕ್ಕು, ಎಂದಿನಂತೆ ಮದುವೆ ....

456

Read More...

Kirak Shanker.Film Reviews

Friday, May 27, 2022

ಸಮಾಜ ಸೇವೆ ಮಾಡುವಕಿರಿಕ್ ಹುಡುಗರು ಕಿರಿಕ್‌ಗಳಿಂದಲೇ ಕೆಟ್ಟದ್ದುಆಗುತ್ತದೆಎಂದು ಹೇಳುತ್ತಾರೆ.ಆದರೆಇಂಥವರಿಂದಲೇ ಸಮಾಜ ಸೇವೆ ಆಗುತ್ತದೆಎಂಬುದನ್ನು ‘ಕಿರಿಕ್ ಶಂಕರ್’ ಚಿತ್ರದಲ್ಲಿತೋರಿಸಲಾಗಿದೆ. ಸಾಹಸ, ಹಾಸ್ಯ ಹಾಗೂ ಕುತೂಹಲ ನೆರಳಿನಲ್ಲಿ ಸಾಗುವ ಚಿತ್ರವುನಾಯಕ (ಯೋಗಿ) ನಗಿಸುತ್ತಲೇ ಪೋಲೀಸ್ ಸ್ಟೇಷನ್ ಸೇರುತ್ತಾನೆ. ಸದಾ ಒಳ್ಳೆಯದನ್ನೆ ಮಾಡುವಈತ ಮತ್ತು ಸ್ನೇಹಿತರುಯಾಕೆಠಾಣೆ ಸೇರುತ್ತಾರೆಎಂಬುದುಒನ್ ಲೈನ್ ಸ್ಟೋರಿಯಾಗಿದೆ.ಕಡಿಮೆಅವಧಿಯಲ್ಲಿದುಡ್ಡು ಮಡುವ ಇವರುಗಳಿಗೆ ಯಾರನ್ನು ಹೇಗೆ ಯಾವರೀತಿ ಮ್ಯಾನೇಜು ಮಾಡಬಹುದುಎನ್ನುವ ಕಲೆ ತಿಳಿದಿರುತ್ತದೆ.ಇಂಥವರಿಗೆ ಹುಡುಗಿಯೊಬ್ಬಳು ಸಿಗುತ್ತಾಳೆ.ಮುಂದೇನುಅಂತ ತಿಳಿಯಲು ....

471

Read More...

Garuda.Film Reviews

Friday, May 20, 2022

ತಿರುವುಗಳಗೂಡುಗರುಡ ‘ಗರುಡ’ ಚಿತ್ರವುಕೂಡುಕುಟುಂಬದಕಥೆಯಾಗಿದೆ.ದೊಡ್ಡ ಮನೆಯಲ್ಲಿಅಪ್ಪ, ಅಣ್ಣ, ಅತ್ತಿಗೆ ಹಾಗೂ ಅತ್ತಿಗೆಯತಂಗಿ ಹೀಗೆ ಅಪಾರ ಬಂದುಮಿತ್ರರು. ಒಂಥರ ಸುಂದರಕುಟುಂಬದಲ್ಲಿ ದುರಳನೊಬ್ಬ ಎಂಟ್ರಿಯಾದರೆಏನಾಗುತ್ತದೆ.ಆನಂತರಒಂದರ ನಂತರ ತಿರುವುಗಳು ಎದುರಾಗುತ್ತಲೇಇರುತ್ತವೆ. ಶುರುವಿನಿಂದಕೊನೆವರೆಗೂ ನಾಯಕನಾಗಿ ಕಾಣಿಸಿಕೊಂಡಿರುವ ಸಿದ್ದಾರ್ಥ್‌ಮಹೇಶ್ ಅವರ ನಟನೆ ಮತ್ತು ಮಾಸ್‌ಆಕ್ಷನ್ ದೃಶ್ಯಗಳಲ್ಲಿ ಸಾಕಷ್ಟು ಶ್ರಮಪಟ್ಟಿರುವುದುಕಂಡು ಬರುತ್ತದೆ.ಗರುಡ ಮೇಲೆ ಹಾರಾಡುತ್ತಿದ್ದರೂಅದರ ನೆರಳು ಭೂಮಿ ಮೇಲೆ ಬೀಳುತ್ತದೆ.ಇದಕ್ಕೆ ನೂರಾರು ವರ್ಷಗಳ ಆಯಸ್ಸುಇರುತ್ತದಂತೆ. ಹಾಗಾಗಿ ಕಥೆಗೆ ಪೂರಕವಾಗಿಇದೇ ಶೀರ್ಷಿಕೆಯನ್ನು ಇಡಲಾಗಿದೆ. ....

504

Read More...

Twenty One Hours.Film Reviews

Friday, May 20, 2022

ಕಾಣೆಯಾದವರ ಸುತ್ತ ತಿರುವುಗಳು ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿದೂರದಊರಿನಿಂದ ಬಂದ ಹುಡುಗಿಯೊಬ್ಬಳು ಕಾಣೆಯಾಗುತ್ತಾಳೆ.‘ನೀನು ಅಲ್ಲಿಗೆ ಹೋಗು ಶ್ರೀಕಾಂತ್ ಎನ್ನುವ ಪೋಲೀಸ್‌ಅಧಿಕಾರಿ ನಿನಗೆ ರಕ್ಷಣೆಕೊಡುತ್ತಾರೆ.ಅಲ್ಲಿಗೆ ಬಂದು ಸ್ಟೇಷನ್‌ದಿಂದಕರೆದುಕೊಂಡು ಹೋಗುತ್ತೇನೆಂದು ಮಗಳಿಗೆ ಹೇಳಿರುತ್ತಾನೆ. ಆದರೆಅಲ್ಲಿಗೆ ಹೋದರೆ ಮಗಳು ಇಲ್ಲ. ಶ್ರೀಕಾಂತ್ ಸಹ ಇರುವುದಿಲ್ಲ. ಇಷ್ಟಕ್ಕೂ ಅವಳು ಕಾಣೆಯಾಗಿದ್ದುಎಲ್ಲಿ.ಪಕ್ಕದರಾಜ್ಯದಹುಡುಗಿಅಪಹರಣವಾಗುವಆಕೆಯ ಹಿನ್ನಲೆ ಏನು?ಅಪಹರಣದ  ಹಿಂದಿನ ಜಾಡು ಹಿಡಿದು ಹೊರಡುವ ಪೋಲೀಸ್‌ಅಧಿಕಾರಿಗೆಒಂದಷ್ಟು ಮಾಹಿತಿಗಳು ತಿಳಿಯುತ್ತಾ ಹೋಗುತ್ತದೆ. ಆಕೆ ನಾಪತ್ತೆಯಾಗಿರುವುದರ ಹಿಂದೆ ಅವಳ ಗಂಡ, ....

488

Read More...

Prarambha.Film Reviews

Friday, May 20, 2022

ಭಗ್ನ ಪ್ರೇಮಿಯಕಥೆ ವ್ಯಥೆ

ಎಲ್ಲಾಸಿನಿಮಾಗಳಲ್ಲಿ ಕಾಣದಂತ ಸನ್ನಿವೇಶಗಳು ‘ಪ್ರಾರಂಭ’ ಚಿತ್ರದಲ್ಲಿಕಂಡು ಬರುತ್ತದೆ.ಕಥೆಯಲ್ಲಿ ಸಂದರ್ಭವೇ ಪ್ರೇಮಿಗಳಿಬ್ಬರನ್ನು ಬೇರ್ಪಡಿಸುತ್ತದೆ.ತಾವು ಬೇರೆಯಾದಾಗ ಆ ಎರಡು ಹೃದಯಗಳು ಅನುಭವಿಸುವ ಪರಿತಾಪ, ವೇದನೆಯೇ ಸಿನಿಮಾ ಸಾರಾಂಶಎನ್ನಬಹುದು.ಅವನು ಒಬ್ಬಚಿತ್ರಕಾರ, ತಾನು ಬರೆದ ಚಿತ್ರಗಳಿಂದ ಅವಳು ಪರಿಚಯಗೊಂಡುಅದು ಪ್ರೇಮಕ್ಕೆತಿರುಗುತ್ತದೆ.ಅನಾಥನಾಗಿರುವ ಅವನಿಗೆ ತಾತನೇಎಲ್ಲಾ.ಮುಂದೆಅಪ್ಪನ ಆಸ್ತಿ ಅವನ ಪಾಲಾಗುತ್ತದೆ.ಅಷ್ಟೋಂದು ಹಣ ಬಂದರೂ ಮಾನವೀಯ ಮೌಲ್ಯಗಳು, ಪ್ರೀತಿಎಂದರೆ ಏನು?ಅನುಕಂಪ ಒಂದೂ ತಿಳಿದಿರುವುದಿಲ್ಲ. 

499

Read More...

Attyuttama.Film Reviews

Friday, May 13, 2022

ಸಂಬಂದಗಳು ಸರಿಇದ್ದರೆಎಲ್ಲವುಚೆನ್ನಾಗಿರುತ್ತದೆ ಪತಿ-ಪತ್ನಿ ಸಂಬಂದದಲ್ಲಿ ಏನೇ ಕಷ್ಟ ಬಂದರೂ ಸರಿದೂಗಿಸಿಕೊಂಡು ಹೋದರೆ ಸಂಸಾರ ಸಾಗರ ಸುಖಮಯವಾಗಿರುತ್ತದೆ.ಇಬ್ಬರ ಮನಸ್ಸುಒಂದೊಂದು ದಿಕ್ಕಿಗೆ ಸಾಗಿದರೆಅಲ್ಲೋಲ ಕಲ್ಲೋಲವಾಗುತ್ತದೆ.ಇಂತಹ ಅಂಶಗಳನ್ನು ಹೆಕ್ಕಿಕೊಂಡು ಶಿವಕುಮಾರ್.ಬಿ.ಜೀವರಗಿ ನಿರ್ದೇಶನ ಮಾಡುವಜತೆಗೆ ನಾಯಕನಾಗಿಎರಡು ಕೆಲಸವನ್ನುಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕುಟುಂಬವೊಂದರಲ್ಲಿ ನಡೆಯುವಕಥೆಯಲ್ಲಿ, ಸುಂದರವಾಗಿ ಸಾಗುತ್ತಿರುವ ಸಂಸಾರದಲ್ಲಿ ಪತಿ,ಪತ್ನಿಯ ನಡುವೆಧೋರಣೆಅನ್ನುವುದು ಎಂದಿಗೂ ಬರಬಾರದು. ಅದು ಬಂದಾಗ ಹೇಗೆ ಅವರಿಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಗುತ್ತೆ. ಮುಂದೆಅದು  ವಿಚ್ಚೇದನ  ಹಂತಕ್ಕೂತೆಗೆದುಕೊಂಡು ....

514

Read More...

Ganduli.Film Reviews

Friday, April 22, 2022

ನೋಡುಗರ ಮನಸೆಳೆಯುವ ಗಂಡುಲಿ ಶುಕ್ರವಾರ ಬಿಡುಗಡೆಗೊಂಡು ಯಶಸ್ವಿಯಾಗಿ ಪ್ರದರ್ಶನಕಾಣುತ್ತಿರುವ ‘ಗಂಡುಲಿ’ ಚಿತ್ರವನ್ನುಅಂದುಕೊಂಡಂತೆ ಪ್ರೇಕ್ಷಕಇಷ್ಟಪಟ್ಟಿದ್ದಾನೆ. ಕಥೆಯಕುರಿತು ಹೇಳುವುದಾದರೆ ಊರಿನದೇವಸ್ಥಾನಕುರಿತು ಪುರಾತತ್ವಇಲಾಖೆಯಿಂದ ಸರ್ವೆ ಮಾಡಲು ಬಂದವರು ಹಾಗೆ ಮರ್ಡರ್‌ಆಗುತ್ತಾರೆ. ಅವರುಏತಕ್ಕೆಕೊಲೆಯಾದರು.ಅದರಹಿಂದಿರುವಕಾರಣವೇನುಎಂಬುದನ್ನುಥ್ರಿಲ್ಲರ್ ಮೂಲಕ ತೋರಿಸಲಾಗಿದೆ.ಅದನ್ನು ತಿಳಿಯಲು ಚಿತ್ರ ನೋಡಬೇಕು.ನಾಯಕ ಮತ್ತು ನಿರ್ದೇಶಕನಾಗಿಎರಡುಜವಬ್ದಾರಿಯನ್ನು ಹೊತ್ತುಕೊಂಡಿರುವ ವಿನಯ್‌ರತ್ನಸಿದ್ದಿ ಗಂಡುಲಿಯಂತೆ ಅಭಿನಯಿಸಿ, ಪ್ರತಿಭೆತೋರಿಸುವಜತೆಗೆ ಕೆಲಸದಲ್ಲೂ ಸೈ ....

459

Read More...

KGF Chapter 2.Film Reviews

Thursday, April 14, 2022

ಕೆಜಿಎಫ್ ೨ ವರ್ಣಿಸಲು ಪದಗಳು ಸಾಲದು ‘ಕೆಜಿಎಫ್-೨’ ಸಿನಿಮಾದಲ್ಲಿ ಭಾಗ-೧ ಮುಂದುವರೆದ ಭಾಗವೆಂದು ಪ್ರತಿಯೊಂದು ದೃಶ್ಯಗಳು ಸಮರ್ಥವಾಗಿ ಹೇಳಲಾಗಿದೆ.ನರಾಜಿ ಸಾಮ್ರಾಜ್ಯದಕಥಾನಕವನ್ನು ಎಳೆ ಎಳೆಯಾಗಿ ಅದ್ಬುತವಾಗಿಹೇಳಲಾಗಿದೆ.ಕೆಜೆಎಫ್ ಮೊದಲ ಭಾಗದಲ್ಲಿಜೀತದ ಆಳುಗಳು ಪ್ರಾಣ ಬಿಟ್ಟರೆ, ಎರಡನೇ ಭಾಗದಲ್ಲಿ ಗುಂಪುಗಳ ಘರ್ಷಣೆಯಲ್ಲಿ ಹಲವರು ಬಲಿಯಾಗುತ್ತ್ತಾರೆ. ಬಂದೂಕು, ಗುಂಡಗಳ ನಡುವೆಅಮ್ಮ, ಪ್ರೀತಿ ಸನ್ನಿವೇಶಗಳು ಮುದಕೊಡುತ್ತದೆ. ಚಾಪ್ಟರ್ ೧ರಲ್ಲಿ ಕಾಣಿಸಿಕೊಂಡಿದ್ದ ಪಾತ್ರಗಳ ಜೊತೆಸರಣಿಚಿತ್ರದಲ್ಲಿ ಮತ್ತಷ್ಟು ಪಾತ್ರಗಳು ಬರುತ್ತವೆ. ರಾಕಿ ಬಾಯ್‌ಗೆಇರುವಷ್ಟೇ ಪ್ರಾಮುಖ್ಯತೆಅಧೀರನಿಗೆ (ಸಂಜಯ್‌ದತ್) ಇರಲಿದ್ದು, ....

588

Read More...

James.Film Reviews

Thursday, March 17, 2022

ಅಪ್ಪುಕ್ಲಾಸ್ ಮಾಸ್‌ಅದುವೇಜೇಮ್ಸ್ ‘ಜೇಮ್ಸ್’ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಭರ್ಜರಿಎಂಟ್ರಿಎಂಥವರಿಗೂ ಪುಳಕಿತವಾದರೆ, ಕೊನೆಯಲ್ಲಿಒಂದುಕಡೆಅವರ ಸಾಧನೆಗಳು, ಮತ್ತೋಂದುಕಡೆ ಮೇಕಿಂಗ್ ದೃಶ್ಯಗಳು ಬರುತ್ತಿರುವಾಗ ನಮಗೆ ಗೊತ್ತಿಲ್ಲದಂತೆ ಕಣ್ಣುಗಳು ಒದ್ದೆಯಾಗುತ್ತದೆ.ಸಿನಿಮಾದದೃಶ್ಯದಲ್ಲಿ ಪುನೀತ್‌ರವರುಕೋಮಾಗೆ ಹೋಗಿ ಆಸ್ಪತ್ರೆಯಲ್ಲಿ ಮಲಗಿರುತ್ತಾರೆ.ಸ್ವಲ್ಪ ಹೋರಾಟದ ನಂತರ ಚೇತರಿಸಿಕೊಳ್ಳುತ್ತಾರೆ.ಇದು ನಿಜ ಜೀವನದಲ್ಲಿ ನಡೆದಿದ್ದರೆ ಎಷ್ಟು ಚೆನ್ನಾಗಿರುತ್ತಿತತುಅನ್ನಿಸುವಂತೆ ನೋಡಗರು ಮಾತನಾಡಿಕೊಳ್ಳುತ್ತಾರೆ.ಮೊದಲ ಚೇಸಿಂಗ್ ಆಕ್ಷನ್‌ದೃಶ್ಯವು ಮೈ ಜುಂ ಅನಿಸುತ್ತದೆ, ಐ ....

646

Read More...

Kanneri.Film Reviews

Friday, March 04, 2022

ಸತ್ಯ ಘಟನೆಗಳನ್ನು ಸಾರುವಕನ್ನೇರಿ ಕಾನನದಲ್ಲಿಚಿಣ್ಣರುಅನುಭವಿಸುವ ನೋವುಗಳನ್ನು ‘ಕನ್ನೇರಿ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.ಕಾಡಿನ ನಡುವೆ ಮೂಕರೋದನೆಯಿಂದ ಬಳಲುತ್ತಿರುವ ಆದಿವಾಸಿಗಳ ನೋವಿಗೆ ಚಿತ್ರವುಧ್ವನಿಯಾಗಿದೆ.ಸನಾತನ ಕಾಲದಿಂದಲೂ ಬದುಕನ್ನುಕಟ್ಟಿಕೊಂಡಿರುವ ಬುಡಕಟ್ಟುಜನರ ಸಾಮಾಜಿಕ ಸ್ಥಿತಿಗತಿಗಳನ್ನು ಕಟ್ಟಿಕೊಡಲಾಗಿದೆ.ಅರವಿಂದ್‌ಎನ್ನುವತಂತ್ರಜ್ಘನೊಬ್ಬ ಸಾಕ್ಷಚಿತ್ರ ನಿರ್ಮಿಸುವಸಲುವಾಗಿಅವರಜಾಗಕ್ಕೆ ಬಂದು, ಅಲ್ಲಿನ ಪರಿಸ್ಥಿತಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದನ್ನುಕಂಡು ಬೇಸರಗೊಳ್ಳುತ್ತಾನೆ. ಇದೇ ಸ್ಥಿತಿಯಲ್ಲಿ ಆಯಾಜನಾಂಗದ ಮುತ್ತಮ್ಮ ಎಂಬ ಹುಡುಗಿಯೊಬ್ಬಳು ವಿದ್ಯಾಭ್ಯಾಸಕಲಿತುತನ್ನ ....

1000

Read More...

Manasagide.Film Reviews

Friday, February 25, 2022

ಮನಸಾಗಿದೆಇದೊಂದು ಪ್ರೀತಿಕಥೆ ‘ಮನಸಾಗಿದೆ’ ಚಿತ್ರದ ಹೆಸರು ಕೇಳಿದೊಡನೆ ಇದೊಂದು ಪ್ರೀತಿಕಥೆಇರಲಿದೆಎಂದು ಸುಲಭವಾಗಿ ಹೇಳಿಬಿಡಬಹುದು.ಕಥೆಯಲ್ಲಿ ನಾಯಕ(ಅಭಯ್) ಅಂಕಿತ (ಮೇಘಶ್ರೀ)ಳನ್ನು ಮನಸಾರೆ ಪ್ರೀತಿಸುತ್ತಾನೆ. ಆದರೆಅರಿಯದ ಮನಸಿನಲ್ಲಿ ಲವ್ ಎನ್ನುವುದು ಕೇವಲ ಆಕರ್ಷಣೆಎಂದುಕೊಂಡಿದ್ದ ಅವಳು ಅವನ ಪ್ರೀತಿಯ ನಿವೇದನೆಯನ್ನು ತಿರಸ್ಕರಿಸುತ್ತಾಳೆ. ಆದರೂತನ್ನನ್ನುಗೆಲ್ಲಲುಒಂದು ಅವಕಾಶ ನೀಡುತ್ತಾಳೆ. ನಂತರ ಸ್ನೇಹಿತನಎಸ್ಟೇಟಿಗೆ ಹೋಗುವ ಅವನಿಗೆ ಸಿಂಚನಾ (ಅಧಿರಾ)ಳ ಭೇಟಿಯಾಗುತ್ತದೆ. ತಾನು ಚಿಕ್ಕವಯಸ್ಸಿನಲ್ಲಿ ಪ್ರೀತಿಸುತ್ತಿದ್ದ ವಿಕ್ಕಿಯೇ ಇವನು ಎಂದುಕೊಂಡುಅಭಯ್‌ನನ್ನುತನ್ನ ಹೃದಯದಲ್ಲಿಟ್ಟುಕೊಂಡು ಆರಾಧಿಸುತ್ತಾಳೆ. ಅಷ್ಟು ಇಷ್ಟಪಡುವ ....

711

Read More...

Fourwalls.Film Reviews

Friday, February 11, 2022

ನಾಲ್ಕು ಗೋಡೆ ನಡುವಿನ ನವಿರಾದಕಥನ ಮದುವೆ ವಯಸ್ಸಿಗೆ ಬಂದ ಮೂವರು ಹೆಣ್ಣು ಮಕ್ಕಳ ಬಗ್ಗೆ ಯೋಚಿಸಬೇಕಿದ್ದ, ತಂದೆತನಗೂ ಸಂಬಂದವಿಲ್ಲದಂತೆಇರುತ್ತಾನೆ. ಅವನು ಅಷ್ಟೋಂದುಕೇರ್‌ಲೆಸ್‌ಆಗಿರುವುದುಎಲ್ಲರಿಗೂ ಸೋಜಿಗ ಅನಿಸುತ್ತದೆ. ಹೊರಗಿನವರು ಮಾತಾಡಿಕೊಳ್ಳುವುದು ಅಲ್ಲದೆ ಪುತ್ರನುಅಪ್ಪನಿಗೆ ನಿನ್ನಜವಬ್ದಾರಿಯನ್ನು ಸರಿಯಾಗಿ ನಿಭಾಯಿಸುಎಂದು ಜಗಳ ಆಡುತ್ತಿರುತ್ತಾನೆ. ಪುತ್ರಿಯರುಕೂಡಅಪ್ಪನು ಹೇಳಿದಂತೆ ನಡೆಯುತ್ತೇವೆಎನ್ನುತ್ತಿರುತ್ತಾರೆ. ಮಕ್ಕಳನ್ನು ಪ್ರೀತಿಯಿಂದ ಬೆಳಸಿದ ಆತ ಮದುವೆಯಾಕೆ ಮಾಡುವುದಿಲ್ಲ. ಒಡೆಯನಾದವನು ದಿವ್ಯಮೌನ ತಾಳಿದ್ದಕ್ಕೆ ಉತ್ತರ ಪೂರ್ತಿಚಿತ್ರ ನೋಡಬೇಕು.ಕಥೆಯು ಸರಳ ಅನಿಸಿದರೂ ನಿರ್ದೇಶಕ ....

689

Read More...

Love Mocktail 2.Film Reviews

Friday, February 11, 2022

 

ಚಿತ್ರವಿಮರ್ಶೆ : ಲವ್ ಮಾಕ್ ಟೈಲ್ 2

 

ದಾಂಪತ್ಯ ಪ್ರೇಮದ ಸುತ್ತ ಥ್ರಿಲ್ಲಿಂಗ್ ಕಥೆ

 

ರೇಟಿಂಗ್ 4/5

 

ಲವ್ ಮಾಕ್ ಟೈಲ್ ಮುಂದುವರಿದ ಭಾಗವಾಗಿರುವ ಕಥೆಯಲ್ಲಿ ಪ್ರೇಮದ ಜೊತೆಗೆ ದಾಂಪತ್ಯ ಬಿಂಬಿತವಾಗಿರುವುದೇ ನೋಡಲು ಅದ್ಭುತವೆನಿಸುತ್ತದೆ..

 

ಆದಿ ಕೃಷ್ಣನ ಗುಣದವನೇ. ಸುತ್ತಲೂ ಆವರಿಸುವ ಹುಡುಗಿಯರಿಗೆ ಲೆಕ್ಕವೇ ಇಲ್ಲ; ಆದರೆ ಅವನ ಮನ ಯಾವಾಗೂ ಧ್ಯಾನಿಸುವುದು ಅಗಲಿದ ಪತ್ನಿಯನ್ನು..

 

ಅದು ಸಂಪೂರ್ಣ ಭ್ರಮೆಗೆ ಒಳಪಟ್ಟ ಸಂದರ್ಭದಲ್ಲಿ ಆತ ಪತ್ನಿಯ ಜೊತೆಗೆ ಇದ್ದಂತೆ ಭ್ರಮಿಸುತ್ತಾನೆ.. ಸ್ನೇಹಿತರು, ಗೆಳತಿಯರು, ಮದುವೆಯ ಹುಟುಕಾಟ ಹೀಗೆ ಮೊದಲರ್ಧ ನಕ್ಕು ನಗಿಸುತ್ತದೆ..

689

Read More...

DNA.Film Reviews

Friday, January 28, 2022

ಸಂಬಂಧಗಳ ಸುತ್ತ ಸಾರುವಡಿಎನ್‌ಎ ಒಂದು ಸುಂದರಕುಟುಂಬದಲ್ಲಿ ನಾವು ಬಯಸುವ ಹಾಸ್ಯ, ಭಾವನಾತ್ಮಕ ಸನ್ನಿವೇಶ, ಚಿಕ್ಕಚಿಕ್ಕ ಬೇಸರ, ಕೊನೆಗೆ ಎಲ್ಲವನ್ನು ಮರೆಸುವಂತಹಘಟನೆ. ಇವಿಷ್ಟನ್ನುಅಚ್ಚುಕಟ್ಟಾಗಿಕಟ್ಟಿಕೊಟ್ಟಿರುವ ಸಿನಿಮಾಅಂದರೆಅದು ‘ಡಿಎನ್‌ಎ’. ಡಿಎನ್‌ಎ ಬದಲಾದ್ದರಿಂದ ಆಗುವ ಪರಿಣಾಮದ ಸುತ್ತ ಸಾಗುವ ಕಥೆಯಾಗಿದೆ. ಒಂದುಕಡೆ ಶ್ರೀಮಂತ ಕುಟುಂಬ, ಮತ್ತೋಂದುಕಡೆಕಿರಾಣಿಅಂಗಡಿ ಮಾಲೀಕನಕುಟುಂಬದ ನಡೆವೆ ಬರುವಟೆಸ್ಟ್‌ನಿಂದ ಸಂಬಂಧಗಳು ಹೇಗೆ ಬದಲಾಗುತ್ತದೆಎಂಬುದುಕಥೆಯ ಸಾರಾಂಶ. ಪ್ರಾರಂಭದಲ್ಲಿ ಪಾತ್ರಗಳ ಪರಿಚಯ ಮಾಡಿಸುವುದರಿಂದ ಸನ್ನಿವೇಶಗಳು ಆಮೆಯಂತೆ ಸಾಗುತ್ತದೆ.ಮಧ್ಯಂತರದಲ್ಲಿ ಹೊಸ ಪಾತ್ರಗಳ ....

628

Read More...

Ombatthane Dikku.Film Reviews

Friday, January 28, 2022

ಥ್ರಿಲ್ಲರ್ ಹಾದಿಯಲ್ಲಿಒಂಬತ್ತನೇ ದಿಕ್ಕು ಕಡಿಮೆ ಬಜೆಟ್‌ದಲ್ಲಿ ಒಳ್ಳೆ ಕಂಟೆಂಟ್‌ಕೊಡುವ ನಿರ್ದೇಶಕ ದಯಾಳ್ ಪದ್ಮನಾಬನ್ ಈ ಬಾರಿ ‘ಒಂಬತ್ತನೇ ದಿಕ್ಕು’ ಚಿತ್ರದಲ್ಲಿ ಬೇರೆಯದೆರೀತಿಯಕಥೆಯನ್ನು ಹೇಳಿರುವುದು ಕಾಣಿಸುತ್ತದೆ.ಕಥೆಯಕುರಿತು ಹೇಳುವುದಾದರೆ ಶಿವಮೊಗ್ಗದಲ್ಲಿ ಐದುಕೋಟಿಗೂ ಹೆಚ್ಚು ಬೆಲೆ ಬಾಳುವ ಪುರಾತನ ಕಾಲಭೈರವೇಶ್ವರ ಶಿಲೆಯ ಕಳ್ಳತನವಾಗುತ್ತದೆ.ಸದರಿ ಶಿಲೆಯನ್ನು ಮಾರಾಟ ಮಾಡುವುದಕ್ಕೆ ಬೆಂಗಳೂರಿಗೆ ಕಳುಹಿಸಲಾಗುತ್ತದೆ.ಇಲ್ಲಿಕದ್ದವರನ್ನೇ ಯಾಮಾರಿಸಿ, ಅಷ್ಟೂ ದುಡ್ಡನ್ನು ಕಬಳಿಸುವ ಹುನ್ನಾರ ನಡೆಯುತ್ತದೆ.ಇದರಿಂದ ಮತ್ತೊಂದುಕಥೆಯು ತೆರೆದುಕೊಳ್ಳುತ್ತದೆ.ಅದೇಚಿತ್ರದ ....

607

Read More...

Arjun Gowda.Film Reviews

Friday, December 31, 2021

ಮಾಸ್ ಪ್ರಿಯರಅರ್ಜುನ್‌ಗೌಡ ‘ಗೌಡಅಂದ್ರೆ ಲಿಟಿಗೇಶನ್, ಗೌಡ್ರೆಅಂದ್ರೆರಿಲೇಶನ್’ ಡೈಲಾಗ್ ಕೇಳಿದರೆ ‘ಅರ್ಜುನ್‌ಗೌಡ’ ಮಾಸ್‌ಚಿತ್ರವೆಂದುಗೊತ್ತಾಗುತ್ತದೆ.ಕೋಟಿರಾಮು ನಿರ್ಮಾಣದಚಿತ್ರವೆಂದರೆಅಲ್ಲಿಅದ್ದೂರಿತನಆಕ್ಷನ್‌ಇರುತ್ತದೆಂದು ಹೇಳುತ್ತಾರೆ.ಅದೇರೀತಿಇದರಲ್ಲೂ ಪ್ರೀತಿಯ ಬಲೆ ಜತೆಗೆ ಮಾಫಿಯಾಅಲೆಯನ್ನು ತೋರಿಸಿ ಪಕ್ಕಾ ಮನರಂಜನೆ ನೀಡಿದ್ದಾರೆ.ಫೈಟ್ ಎಷ್ಟು ಗ್ರಾಂಡ್ ಆಗಿ ಇರಬೇಕೆಂದು ನಿರ್ದೇಶಕ ಲಕ್ಕಿಶಂಕರ್‌ಚೆನ್ನಾಗಿಅರ್ಥ ಮಾಡಿಕೊಂಡುಕಥೆ ಸಿದ್ದಪಡಿಸಿರುವುದು ತೆರೆ ಮೇಲೆ ಗೊತ್ತಾಗುತ್ತದೆ.ಅರ್ಜುನ್‌ಗೌಡ (ಪ್ರಜ್ವಲ್‌ದೇವರಾಜು) ಸುದ್ದಿವಾಹಿನಿಯಒಡತಿಜಾನಕಿಗೌಡ (ಸ್ಪರ್ಶಾರೇಖಾ) ಅವರ ಏಕೈಕ ....

615

Read More...

Rider.Film Reviews

Friday, December 24, 2021

ಫುಲ್ ಮೀಲ್ಸ್ ಸಿನಿಮಾರೈಡರ್ ಬದುಕಿನಲ್ಲಿ ಕೆಲವೊಂದು ಸಂಗತಿಗಳು ಕಣ್ಣ ಮುಂದೆಇದ್ದರೂ ನಾವು ಅದಕ್ಕಾಗಿಊರೆಲ್ಲಾ ಹುಡುಕಾಡುತ್ತೇವೆ. ಒಂದು sಯಂಕರತಿರುವಿನಲ್ಲಿ ಹುಡುಕುತ್ತಿದ್ದದ್ದುಇದಕ್ಕೋಸ್ಕರವೇಅಂತಜ್ಘಾನೋದಯಆಗುತ್ತದೆ.ಅಲ್ಲೊಂದು ಮಕ್ಕಳ ಆಶ್ರಮ.ಅಲ್ಲಿಚಿನ್ನು ಮತ್ತುಕಿಟ್ಟಿಜತೆಗೆ ಸ್ನೇಹ ಬೆಳೆಯುತ್ತದೆ.ನಂತರ ಅವಳು ಹೆತ್ತವರ ಬಳಿ ವಾಪಸ್ಸು ಹೋಗುತ್ತಾಳೆ.ಇತ್ತಆತನನ್ನುಯಾರೋ ಪುಣ್ಯಾತ್ಮರುದತ್ತು ಪಡೆದುಕೊಳ್ಳತ್ತಾರೆ.ಇಬ್ಬರೂದೂರವಾದರೂಒಬ್ಬರನೊಬ್ಬರನ್ನು ಮರೆತಿರುವುದಿಲ್ಲ. ವರ್ಷಗಳೂ ಹುರುಳಿದರೂ ಸ್ನೇಹ ಹೆಮ್ಮರವಾಗಿ ಬೆಳೆಯುತ್ತದೆ.ದೊಡ್ಡವರಾದ ಮೇಲೆ ಒಬ್ಬರನ್ನುಒಬ್ಬರು ಹುಡುಕಿಕೊಂಡು ಬರುತ್ತಾರೆ.ಇವರಿಬ್ಬರ ....

609

Read More...

Badava Rascal.Film Reviews.

Friday, December 24, 2021

ಮಧ್ಯಮವರ್ಗದ ಪ್ರತಿನಿಧಿ ಬಡವರಾಸ್ಕಲ್ ಆತನು ಮಧ್ಯಮವರ್ಗದ ಹುಡುಗ, ಕಾಸಿಲ್ಲದಿದ್ದರೂ ಮುಂದೆತಾನು ಸ್ವಂತ ಕಾಲ ಮೇಲೆ ನಿಲ್ಲುತ್ತೇನೆ ಎಂಬ ಅಚಲ ನಂಬಿಕೆ.ಇಂತಹ ಹುಡುಗನಿಗೆಒಂದಷ್ಟು ಗೆಳೆಯರು, ಜತೆಗೆ ಲವ್ ಸ್ಟೋರಿ.ಇಷ್ಟು ಹೇಳಿದ ಮೇಲೆ ಇದೊಂದು ಗೆಳೆಯರ ಮತ್ತುಕುಟುಂಬ ನಾಟಕಎಂದು ಊಹಿಸಬಹುದಾಗಿದೆ.ಆಟೋಚಾಲಕನ ಪುತ್ರನಾದ ಶಂಕರ್‌ರಾಜಕಾರಣಿಯ ಪುತ್ರಿಯನ್ನು ಪ್ರೀತಿಸುತ್ತಾನೆ. ಮುಂದೆ ಮದುವೆಆಗುತ್ತಾನೋಇಲ್ಲವೋಎಂಬುದುಒಂದು ಏಳೆಯ ಸಾರಾಂಶವಾಗಿದೆ. ನವ ನಿರ್ದೇಶಕ ಶಂಕರ್‌ಗುರು ಸರಳವಾದ ಕಥೆಯನ್ನು ಹೇಳಲು ಭಾವನೆಗಳ ಗುಚ್ಚಗಳನ್ನು ಕಟ್ಟಿದ್ದಾರೆ.ಮಧ್ಯಮ ವರ್ಗದ ದಂಪತಿಗಳಾದ ರಂಗಾಯಣರಘು ಮತ್ತುತಾರಾ ನಡುವೆ ನಡೆಯುವ ಜಗಳದ ದೃಶ್ಯಗಳು ನಮ್ಮ ....

572

Read More...

Sakath.Film Reviews

Friday, November 26, 2021

  ನಗುವಿನ ಬೆಳಕಲ್ಲಿ ಹೊಸಬಗೆ ಕಣ್ಣೋಟ..!   ಚಿತ್ರ: ಸಖತ್ ನಿರ್ದೇಶನ: ಸಿಂಪಲ್ ಸುನಿ ನಿರ್ಮಾಣ: ಕೆವಿಎನ್ ಪ್ರೊಡಕ್ಷನ್ಸ್ ತಾರಾಗಣ: ಗಣೇಶ್, ನಿಶ್ವಿಕಾ ನಾಯ್ಡು, ಸುರಭಿ, ಸಾಧುಕೋಕಿಲ ಮೊದಲಾದವರು.   ಅಂಧನ ಕುರಿತಾದ ಚಿತ್ರವಾದರೂ ಚಿತ್ರ ನೋಡುವುದರ ನಡುವೆ ಒಂದು ಕ್ಷಣ ಕೂಡ ಮೈಮರೆಯದಷ್ಟು ಅಂದವಾಗಿದೆ ಸಿನಿಮಾ. ಎನ್ನುವಲ್ಲಿಗೆ ಸಖತ್ ಹೆಸರಿಗೆ ತಕ್ಕಂತೆ ಮನೋರಂಜನೆ ನೀಡಿದೆ ಎಂದು ಸಾಬೀತಾದ ಹಾಗಾಯಿತು. ಆದರೆ ಯಾವೆಲ್ಲ ಕಾರಣಕ್ಕೆ ಮನೋರಂಜನೀಯ ಚಿತ್ರ ಎನ್ನುವುದಕ್ಕೆ ಒಂದೆರಡು ಸ್ಯಾಂಪಲ್ ಮತ್ತು ಸೂಚನೆಯನ್ನಷ್ಟೇ ಇಲ್ಲಿ ನೀಡಬಹುದು. ಯಾಕೆಂದರೆ ಇದು ಚಿತ್ರ ಮಂದಿರದಲ್ಲಿ ನೋಡಬೇಕಾದ ಸಿನಿಮಾ.     ಚಿತ್ರದಲ್ಲಿ ಬಾಲು ಒಬ್ಬ ಅನಾಥ ಹುಡುಗ. ಆತ ....

602

Read More...

Govinda Govinda.Film Reviews

Friday, November 26, 2021

  ಗೋವಿಂದ ಗೋವಿಂದ, ನಗು ಮತ್ತು ಆನಂದ!     ಚಿತ್ರ: ಗೋವಿಂದ ಗೋವಿಂದ ನಿರ್ದೇಶಕ: ತಿಲಕ್ ನಿರ್ಮಾಣ: ಶೈಲೇಂದ್ರ ಬಾಬು, ರವಿಗರಣಿ ತಾರಾಗಣ: ಸುಮಂತ್ ಶೈಲೇಂದ್ರ, ಭಾವನಾ, ರೂಪೇಶ್ ಶೆಟ್ಟಿ       ಮೂರು ಮಂದಿ ಅಪಹರಣಕಾರರು ಒಂದು ಹುಡುಗಿಯನ್ನು ಅಪಹರಿಸುವ ಘಟನೆಯೊಂದಿಗೆ ಸಿನಿಮಾ ಆರಂಭವಾಗುತ್ತದೆ. ಕುತೂಹಲಕರವಾಗಿ ಮೂಡುವ ಕತೆಯಲ್ಲಿ ಸೀನು ಎನ್ನುವ ಸಹಾಯಕ ನಿರ್ದೇಶಕನೋರ್ವ ನಿರ್ದೇಶಕನಾಗಲು ನಡೆಸುವ ಪ್ರಯತ್ನದ ಬಗ್ಗೆ ಕತೆ ಶುರುವಾಗುತ್ತದೆ. ಒಳ್ಳೆಯದೊಂದು ಕತೆ ಮಾಡಿಕೊಂಡು ನಿರ್ಮಾಪಕ ಕೆ ಮಂಜು ಅವರ ಬಳಿಗೆ ಹೋಗಿ ಹೇಳುತ್ತಾನೆ. ಅವರು ನಾಯಕಿಯಾಗಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಪದ್ಮಾವತಿ ಎನ್ನುವ ಸ್ಟಾರ್ ....

645

Read More...

Ondu Ganteya Kathe.Film Review

Friday, March 19, 2021

  ಒಂದು ಗಂಟೆಯ ಸುತ್ತ ಎರಡು ಗಂಟೆಯ ಹಾಸ್ಯ!   ಚಿತ್ರ: ಒಂದು ಗಂಟೆಯ ಕತೆ ತಾರಾಗಣ: ಅಜಯ್ ರಾಜ್, ಶನಯಾ ಕತ್ವೆ ನಿರ್ದೇಶನ: ದ್ವಾರ್ಕಿ ರಾಘವ ನಿರ್ಮಾಣ: ಕಶ್ಯಪ್ ದಕೋಜು     ಒಂದು ಗಂಟೆಯ ಕತೆ ಎನ್ನುವ ಹೆಸರು ಕೇಳಿದರೆ ಬಹುಶಃ ಈ ಚಿತ್ರ ಒಂದೇ ಗಂಟೆಯಲ್ಲಿ ಮುಗಿದು ಹೋಗುವುದೇನೋ ಎಂದು ಅನಿಸುವುದು ಸಹಜ. ಆದರೆ ಚಿತ್ರದ ಟ್ರೇಲರ್ ನೋಡಿದವರು, ಪೋಸ್ಟರ್ ಗಮನಿಸಿದವರಿಗೆ ಇದೊಂದು ವಯಸ್ಕರ ಚಿತ್ರ ಎನ್ನುವ ಅರಿವು ಇರುತ್ತದೆ. ಹಾಗಾಗಿ ಗಂಟೆಯ ನಂಟು ಸೊಂಟದ ಕೆಳಗಿನವರೆಗೂ ಸಾಗುವ ಬಗ್ಗೆ ಚಿತ್ರ ವಿವರವಾಗಿಯೇ ತೋರಿಸಿದೆ.   ಮದುವೆಯ ಮಾತು ನೀಡಿ, ಮೈ ಸುಖ ಪಡೆದು ಬಳಿಕ ಕೈ ಕೊಟ್ಟು ಪಾರಾಗುವುದು ಯುವಜನತೆಯಲ್ಲಿ ಸಾಮಾನ್ಯ ಎನ್ನುವ ಮಟ್ಟಿಗೆ ಹೆಚ್ಚಾಗುತ್ತಿದೆ. ....

1023

Read More...

Rajatantra.Film Review.

Friday, January 01, 2021

  ರಾಜತಂತ್ರ: ದೇಶಾಭಿಮಾನದ ಮಂತ್ರ   ಚಿತ್ರ: ರಾಜ ತಂತ್ರ ತಾರಾಗಣ: ರಾಘವೇಂದ್ರ ರಾಜ್ ಕುಮಾರ್ ನಿರ್ದೇಶನ: ಪಿವಿಆರ್ ಸ್ವಾಮಿ ನಿರ್ಮಾಣ: ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ. ಲಿಮಿಟೆಡ್     ರಾಘವೇಂದ್ರ ರಾಜ್ ಕುಮಾರ್ ಅವರು ವಿಭಿನ್ನ ಪಾತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿರುವ ಚಿತ್ರ ರಾಜತಂತ್ರ. ಈ ಸಿನಿಮಾದಲ್ಲಿ ಪ್ರಸ್ತುತ ಕಾಲಘಟ್ಟದ ಸಮಸ್ಯೆಗಳಾದ ಡ್ರಗ್ಸ್ ದಂಧೆ ಮತ್ತುಅದಕ್ಕೆ ಕುಮ್ಮಕ್ಕು ನೀಡುವ ರಾಜಕೀಯ ವ್ಯವಸ್ಥೆಯನ್ನು ಬಯಲುಗೊಳಿಸಲಾಗಿದೆ.   `ರಾಜತಂತ್ರ’ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರದ್ದು ನಿವೃತ್ತ ಸೈನಿಕ ರಾಜಾರಾಮ್ ಪಾತ್ರ. ಯುದ್ಧದಲ್ಲಿ ಗಾಯಗೊಂಡು ವಿಶ್ರಾಂತಿಯಲ್ಲಿರುವ ಈ ನಿವೃತ್ತ ಕ್ಯಾಪ್ಟನ್ ದೇಶ ....

1027

Read More...

Shakeela.Film Review.

Friday, December 25, 2020

  ಶಕೀಲಾ: ಒಮ್ಮೆ ನೋಡುವುದರಲ್ಲಿ ತಪ್ಪಿಲ್ಲ..!   ಚಿತ್ರ: ಶಕೀಲಾ ತಾರಾಗಣ: ರಿಚಾ ಚಡ್ಡ, ಪಂಕಜ್ ತ್ರಿಪಾಠಿ, ಎಸ್ತರ್‌ ನೊರೊನ್ಹಾ ನಿರ್ದೇಶನ: ಇಂದ್ರಜಿತ್ ಲಂಕೇಶ್ ನಿರ್ಮಾಣ: ಸ್ಯಾಮಿ ನನ್ವಾನಿ, ಸಾಹಿಲ್ ನನ್ವಾನಿ   ಬಯೋಪಿಕ್ ಚಿತ್ರಗಳ ಕಾಲದಲ್ಲಿ ಬಂದಿರುವ `ಶಕೀಲಾ’ ಸಿನಿಮಾ ಮಾದಕ ನಟಿ ಶಕೀಲಾ ಕುರಿತಾದ ಚಿತ್ರ. ಚಿತ್ರವನ್ನು ಶಕೀಲಾ ಅವರ ಬದುಕನ್ನು ಆಧಾರಿಸಿ ಮಾಡಲಾಗಿದ್ದು, ಕಮರ್ಷಿಯಲ್ ಸಿನಿಮಾ ಭಾಷೆಗೆ ತಕ್ಕಂತೆ ಕಾಲ್ಪನಿಕ ದೃಶ್ಯಗಳನ್ನು ಕೂಡ ಜೋಡಿಸಲಾಗಿದೆ.   ಕೇರಳದ ಬಡ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ ಹುಡುಗಿ ಶಕೀಲಾ. ಆಕೆಗೆ ಆರು ಜನ ತಂಗಿಯರು. ಶಾಲಾ ವಿದ್ಯಾರ್ಥಿನಿಯಾಗಿದ್ದಾಗಲೇ ತಂದೆಯನ್ನು ಕಳೆದುಕೊಳ್ಳುತ್ತಾಳೆ. ಹಾಗಾಗಿ ....

994

Read More...

Naanonthara.Film Review.

Friday, December 18, 2020

ನಾನೊಂಥರ: ಇದೊಂಥರಾ ವಿಭಿನ್ನ ಸಿನಿಮಾ   ಚಿತ್ರ: ನಾನೊಂಥರ ತಾರಾಗಣ: ತಾರಕ್, ರಕ್ಷಿಕಾ, ದೇವರಾಜ್ ನಿರ್ದೇಶನ: ಯು ರಮೇಶ್  ನಿರ್ಮಾಣ: ಡಾ. ಜಾಕ್ಲಿನ್ ಫ್ರಾನ್ಸಿಸ್   ತಾಯಿ ಪ್ರೀತಿ ಸಿಗದ ಮಗನೊಬ್ಬ ತಂದೆಯ ಮುದ್ದಿನಿಂದ ಬೆಳೆದು ಸಮಾಜಕ್ಕೆ ಹೇಗೆ ಸವಾಲು ಹಾಕುತ್ತಾನೆ ಎನ್ನುವುದು ಚಿತ್ರದ ಒನ್ ಲೈನ್ ಕತೆ. ಆದರೆ ಆತನ ಸವಾಲುಗಳು ಆತನದೊಬ್ಬನದೇ ಅಲ್ಲ; ಪ್ರಸ್ತುತ ಸಮಾಜದಲ್ಲಿ ಎಲ್ಲರಿಗೂ ಎದುರಿಸಬೇಕಾದ ಸಮಸ್ಯೆಗಳಾಗಿರುತ್ತವೆ. ಅವುಗಳ ಬಗ್ಗೆ ಎಚ್ಚರಿಸುವ ನಾಯಕ ಒಬ್ಬ ಕುಡುಕ ಆಗಿರುತ್ತಾನೆ ಎನ್ನುವುದೇ ವಿಶೇಷ. ಆತ ಯಾಕೆ ಕುಡುಕನಾದ? ಮತ್ತು ಯಾವ ರೀತಿ ಬದಲಾಗುತ್ತಾನೆ ಎನ್ನುವುದೇ ಚಿತ್ರದ ಸಾರ.   ಸಿನಿಮಾದ ಆರಂಭವೇ ಬಾರ್ ಒಂದರಿಂದ ಶುರುವಾಗುತ್ತದೆ. ....

1167

Read More...

ACT 1978.Film Review.

Friday, November 20, 2020

  `ಆಕ್ಟ್1978'ನಲ್ಲಿದೆ ಕಲಾವಿದರ ಅದ್ಭುತವಾದ ಆಕ್ಟಿಂಗ್..!   ಚಿತ್ರ ವಿಮರ್ಶೆ   ಚಿತ್ರ: ಆಕ್ಟ್1978 ತಾರಾಗಣ: ಯಜ್ಞಾ ಶೆಟ್ಟಿ, ಶ್ರುತಿ, ಸಂಚಾರಿ ವಿಜಯ್ ನಿರ್ದೇಶನ: ಮಂಸೋರೆ ನಿರ್ಮಾಣ: ದೇವರಾಜ್ ಆರ್   ಹೊಸ ಸಿನಿಮಾ ಬಿಡುಗಡೆಗೆ ದೇಶವೇ ಭಯಪಡುತ್ತಿದೆ. ಇಂಥ ಸಂದರ್ಭದಲ್ಲಿ ಕರ್ನಾಟಕದಲ್ಲಿ ಧೈರ್ಯದಿಂದ ಮುನ್ನುಗ್ಗಿದ ಚಿತ್ರತಂಡ Act 1978. ಚಿತ್ರತಂಡ ಈ ವಿಚಾರದಲ್ಲಿ ತೋರಿಸಿದ ಧೈರ್ಯದಂತೆಯೇ  ಚಿತ್ರದೊಳಗಿನ ಕತೆಯೂ ಕೂಡ ಸಾಮಾನ್ಯರಲ್ಲಿ ಅಷ್ಟೇ ಧೈರ್ಯ ತುಂಬಬೇಕಾದ ವಿಚಾರಗಳನ್ನು ಹೊರಗೆ ತಂದಿದೆ.   ಸರ್ಕಾರಿ ಕಚೇರಿಯೊಂದು ಸಾಮಾನ್ಯರನ್ನು ಯಾವ ಮಟ್ಟಕ್ಕೆ ಕಾಡುತ್ತದೆ ಎನ್ನುವುದನ್ನು ಈ ಸಿನಿಮಾ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತದೆ. ಗೀತಾ ಎಂಬ ....

1029

Read More...

5 Adi 7 Angula.Film Review.

Friday, March 13, 2020

ಅಪರಾಧಿಗಳ ಬೆನ್ನಟ್ಟಿ ವಿನೂತನ‘೫ ಅಡಿ ೭ ಅಂಗುಲ’ ಚಿತ್ರದಲ್ಲಿಕುಚೇಷ್ಟೇ, ಕುತಂತ್ರ ಮತ್ತುಕುಯುಕ್ತಿಮೂರು ಸೇರಿದರೆಕತೆಯು ಸಾಗುತ್ತದೆ. ಇಡೀಚಿತ್ರವು ಮೂರು ಪಾತ್ರಗಳ ಸುತ್ತ ಸಾಗಲಿದ್ದು, ಮಧ್ಯದಲ್ಲಿ ಕೆಲವೊಂದು ಪಾತ್ರಧಾರಿಗಳು ಬಂದು ಹೋಗುತ್ತಾರೆ.ಬೇರೆ ಚಿತ್ರಗಳಲ್ಲಿ ರಹಸ್ಯವುಕ್ಲೈಮಾಕ್ಸ್‌ದಲ್ಲಿ ತಿಳಿಯುತ್ತದೆ.ಸೋಜಿಗಎನ್ನುವಂತೆಇದರಲ್ಲಿ ವಿರಾಮದ ಮುನ್ನ ಅಪರಾಧಿಗಳು ಯಾರೆಂದು ತಿಳಿದರೂ, ಅವರ ಹಿಂದಿನ ಮರ್ಮವುಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ.ಪ್ರೀತಿ, ಹಣ ಹಾಗೂ ಸೇಡು ಇವುಗಳಿಗೆ ಪಣತೊಟ್ಟರೆಏನಾಗುತ್ತದೆಎಂಬುದನ್ನು ಹೇಳಲಾಗಿದೆ.ಪಾರ್ಟಿ ಮಾಡಲು ಹೋಗುವ ಐವರು ಗೆಳಯರು ಬರುವಾಗ ನಾಲ್ವರುಅಪಘಾತದಲ್ಲಿ ಮರಣ ....

1617

Read More...

Shivarjuna.Film Review.

Thursday, March 12, 2020

ಕ್ಲಾಸ್, ಮಾಸ್ ಸಮ್ಮಿಲನ ಶಿವಾರ್ಜುನ

ಮಾಸ್, ಕ್ಲಾಸ್‌ಗೂ ಸೈ ಅನಿಸುವಂತೆ‘ಶಿವಾರ್ಜುನ’ ಚಿತ್ರವಾಗಿದೆ.ಕತೆಯಲ್ಲಿರಾಯದುರ್ಗದ ಮುಖ್ಯಸ್ಥಪುತ್ರನನ್ನುಕಾಪಾಡುವ ಸಲುವಾಗಿ ರಾಮದುರ್ಗದಗೌಡರ ಮನೆಗೆ ಕಳುಹಿಸುತ್ತಾನೆ. ಆದರೆಅಲ್ಲಿಆತನು ಸತ್ತುಹೋದಾಗಈತನೇಕಾರಣನೆಂದು, ಅವನ ಮಗನನ್ನು ಸಾಯಿಸಲು ಹೋದಾಗಬಾಲಕ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಆ ದಿನದಿಂದಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿರುತ್ತಾನೆ. ೨೦ ವರ್ಷ ನಂತರಅಧಿಕಾರಿಯಾಗಿಅದೇಊರಿಗೆ ಬಂದುಇಬ್ಬರನ್ನುಒಂದುಗೂಡಿಸುತ್ತಾನಾಎಂಬುದುಕುತೂಹಲಕಾರಿಯಾಗಿದೆ.

1645

Read More...

Bicchugatti.Film Review.

Friday, February 28, 2020

ಭರಮಣ್ಣ  ವರ್ಸಸ್  ಮುದ್ದಣ್ಣ ಐತಿಹಾಸಿಕ ಚಿತ್ರ ‘ಬಿಚ್ಚುಗತ್ತಿ’ ೧೬ನೇ ಶತಮಾನದಕತೆಯಾಗಿದೆ. ಸಿನಿಮಾಕುರಿತು ಹೇಳುವುದಾದರೆ ಆ ಕಾಲದಲ್ಲಿ೧೩ ಪಾಳೇಗಾರರು ಆಳಿದ್ದರು.ಇದರಲ್ಲಿರಾಜಬಿಚ್ಚುಗತ್ತಿ ಭರಮಣ್ಣ ನಾಯಕಕೂಡಒಬ್ಬರು. ೧೬೭೫ ರಿಂದ  ೧೬೮೫ರಅವಧಿಯಲ್ಲಿ ದಳವಾಯಿ  ಮುದ್ದಣ್ಣಇಡೀ ಸೇನೆಯನ್ನೆತನ್ನ ವಶದಲ್ಲಿರಿಸಿಕೊಂಡು ಹೆಸರಿಗೆ ಮಾತ್ರ ಬಲಹೀನ ಪಾಳೆಗಾರರನ್ನು  ಪಟ್ಟಕ್ಕೆ ಕೂರಿಸಿ, ದೊರೆ,  ಪ್ರಜೆಗಳನ್ನು ದರ್ಪದೌರ್ಜನ್ಯದಿಂದತಾನೆಅಧಿಕಾರ  ನಡೆಸಲು ಶುರು ಮಾಡಿದರು. ದೊರೆಯು ಮುದ್ದಣ್ಣನನ್ನು  ವಿರೋದಿಸಿದರಿಂದಾಗಿ ದಳವಾಯಿ ದಂಗೆಗೆಕಾರಣವಾಯಿತು. ಇದರ ಮಧ್ಯೆಒಗ್ಗಟ್ಟಿನಿಂದ ಮುಗ್ಗಟ್ಟನ್ನುಜಯಸಬಹುದೆಂದುಸನ್ಯಾಸಿ ....

1713

Read More...

Asura Samhara.Film Review.

Friday, February 28, 2020

ಅಸುರರನ್ನು ಸಂಹಾರ ಮಾಡುವಕಥನ

ಎಂಟು ವರ್ಷಗಳ ಕೆಳಗೆ ವಿಬ್‌ಗಯಾರ್ ಶಾಲೆಯಲ್ಲಿಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದುಇಡೀದೇಶವೇ ತಲ್ಲಣಿಸಿತ್ತು.ಇದರಿಂದ ಸ್ಪೂರ್ತಿ ಪಡೆದುಕೊಂಡು ಶಿವಾರ್ಪಣಮಸ್ತು ಅಂತಅಡಿಬರಹದಲ್ಲಿ ಹೇಳಿಕೊಂಡಿರುವ ‘ಅಸುರ ಸಂಹಾರ’ ಎನ್ನುವಚಿತ್ರಕ್ಕೆಕತೆ,ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವುದು ಪ್ರದೀಪ್‌ಅರಸು. ಅಪರಾಧಿಗಳು ಕೇಸ್‌ನಿಂದ ತಪ್ಪಿಸಿಕೊಳ್ಳಬಹುದು.ಆದರೆಇದರಲ್ಲಿ ನೀಡುವ ಶಿಕ್ಷೆಯು ಕಾನೂನಿನಲ್ಲಿ ಹೊಸದಾಗಿರುತ್ತದೆ.ಅದು ಏನು ಎಂಬುದನ್ನುತಂಡವುಕುತೂಹಲ ಕಾಯ್ದರಿಸಿದೆ.ಯಾವುದೇ ದುರಳ ವ್ಯಕ್ತಿಯುಇಂತಹಅಪರಾಧ ಮಾಡುವಮುನ್ನಒಮ್ಮೆ ಶಿಕ್ಷೆಯನ್ನು ನೆನಸಿಕೊಂಡರೆ, 

1562

Read More...

Seetamma Bandalu Sirimallige Tottu.Film Review.

Friday, February 21, 2020

                     ಮಹಿಳಾ ಪ್ರಧಾನಚಿತ್ರ ಮಹಿಳೆ ಕುರಿತಾದ‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’  ಚಿತ್ರದಕತೆಯಲ್ಲಿ ನಾಯಕಿ  ವಿಧುವೆ. ನಾಯಕ ಪತ್ರಕರ್ತನಾಗಿದ್ದು  ಪುರಾತನದಇತಿಹಾಸದ  ವರದಿ ಸಿದ್ದಪಡಿಸಲು ಊರಿಗೆ ಹೋಗುತ್ತಾನೆ. ಅಲ್ಲಿ  ಪ್ರೀತಿಸುತ್ತಿದ್ದ,  ಗೆಳಯನ ಹೆಂಡತಿ  ವಿಧುವೆಯಾಗಿರುತ್ತಳೆ. ಮುಂದೆ ಆಕೆಗೆ ಹೊಸಬಾಳು ಕೊಡುತ್ತಾನಾಎಂಬುದು ಸಿನಿಮಾದ ತಿರುಳು.   ವೃತ್ತಿಯಲ್ಲಿ ವಕೀಲರಾಗಿರುವ ನಂದೀಶ್ ನಾಯಕ, ಸಂಹಿತಾ ನಾಯಕಿಯಾಗಿನಾಲ್ಕನೇ ಚಿತ್ರದಲ್ಲಿ ಸುಧಾರಿಸಿದ್ದಾರೆ,  ವಿಧುವೆಯ ವಿಧ ವಿಧವಾದ ವೇದನೆಕುರಿತಂತೆಮೂರುಹಾಡುಗಳಿಗೆ ಸಾಹಿತ್ಯ  ರಚಿಸಿ ಸಂಗೀತ ಒದಗಿಸಿರುವುದು ....

1091

Read More...

Popcorn Monkey Tiger.Film Review.

Friday, February 21, 2020

ಪಾಪ್‌ಕಾರ್ನ್‌ಕ್ಲಾಸ್, ಮಾಸ್ ಸಮ್ಮಿಲನ ಟಗರು ಸೂರಿ ನಿರ್ದೇಶನದ ‘ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿಅಂಡರ್‌ವರ್ಲ್ಡ್, ಅವರದಂದೆ, ವೈಯಕ್ತಿಕಜೀವನ ಶೈಲಿ ಹೇಗಿರುತ್ತದೆಎನ್ನುವುದನ್ನು ನೈಜಎನ್ನುವಂತೆ ತೋರಿಸಿರುವುದು ಹೆಚ್ಚುಗಾರಿಕೆಯಾಗಿದೆ. ರೌಡಿಸಂ, ಸುಪಾರಿ ಕೊಲೆ, ಪ್ರೀತಿಎಲ್ಲವು ಹೊಸತನದಿಂದಕೂಡಿದೆ.ನಿರ್ದೇಶಕರು ಊಹಿಸಿಕೊಂಡ ಪಾತ್ರಗಳು, ಲೋಕೇಷನ್, ಮೇಕಿಂಗ್, ಸನ್ನಿವೇಶಗಳು ನೋಡುಗನಿಗೆರಿಜಿಸ್ಟರ್‌ಆಗುವಂತೆ ಚಿತ್ರೀಕರಿಸಿರುವುದು ಕಂಡುಬರುತ್ತದೆ.ಕತೆಕುರಿತು ಹೇಳುವುದಾದರೆ ಟೈಗರ್ ಸೀನ ಮೆಕ್ಯಾನಿಕ್‌ನ್ನು ಅಕ್ಕ ಬೆಳೆಸಿರುತ್ತಾಳೆ.ಪಾಪ್‌ಕಾರ್ನ್ ....

890

Read More...

Shivaji Suratkal.Film Review.

Friday, February 21, 2020

              ಕೊಲೆಯನ್ನು ಭೇದಿಸುವ ಶಿವಾಜಿ ಸುರತ್ಕಲ್ ಕಾಲ್ಪನಿಕರಣಗರಿಎಸ್ಟೇಟ್‌ದಲ್ಲಿಕೊಲೆಯೊಂದು ನಡೆಯುತ್ತದೆ. ಅದನ್ನುತನಿಖೆ ಮಾಡಲು ಪೋಲೀಸ್‌ಇಲಾಖೆಯಲ್ಲಿ ಶರ್ಲಾಕ್‌ಹೋಮ್ಸ್‌ಎಂದೇಖ್ಯಾತಿ ಪಡೆದಿರುವಅಧಿಕಾರಿ ಬರುತ್ತಾರೆ.ಅವರೇ ಶೀರ್ಷಿಕೆಯ ಹೆಸರಿನ ‘ಶಿವಾಜಿ ಸುರತ್ಕಲ್’.ಹೀಗೆ ಒಂದು ಸಾವಿನ ನಿಗೂಢತೆ ಭೇದಿಸುತ್ರಾ ಶುರುವಾಗುವಕತೆಯೇಚಿತ್ರದ ಜೀವಾಳವಾಗಿದೆ.ಹೀಗೆ ಅಂತ ತಿಳಿದುಕೊಳ್ಳುವಷ್ಟರಲ್ಲೆ ಅದು ಬೇರೆ ಮಗ್ಗಲಿಗೆ ತಿರುಗಿಕೊಂಡು ನೋಡುಗನಿಗೆಕುತೂಹಲ ಮೂಡಿಸುತ್ತದೆ.ಕೆಲವು ಕಡೆ ಹಾರರ್ ಸ್ಫರ್ಶಕೊಡುತ್ತಾಅದಕ್ಕೊಂದು ಹೊಸದಾದ ಸನ್ನಿವೇಶಗಳು ಸೃಷ್ಟಿಯಾಗುತ್ತಾ ....

1104

Read More...

Mounam.Film Review.

Friday, February 21, 2020

ಭಾವನೆಗಳ ಸುತ್ತಮೌನಂ ಸೊಸೆ ಆಗುವವಳನ್ನು ಪ್ರೀತಿಸುವುದು.ಇದಕ್ಕೆಅಡ್ಡಿ ಬರುವ ಮಗನನ್ನುದ್ವೇಷಿಸುವುದು, ಕೊನೆಗೆ ಸುಪಾರಿ ನೀಡಲುಚಿಂತನೆ ಮಾಡುವುದುಇವೆಲ್ಲವು ‘ಮೌನಂ’ ಚಿತ್ರದಲ್ಲಿ ಬರುತ್ತದೆ.ಮೂರು ಪಾತ್ರಗಳ ಸುತ್ತಕತೆಯು ಸಾಗುತ್ತದೆ.ಅವಿನಾಶ್ (ಅವಿನಾಶ್), ಪುತ್ರರಾಜು (ಬಾಲಾಜಿಶರ್ಮ) ಮತ್ತು ಮಯೂರಿ (ಮಯೂರಿಕ್ಯಾಥರಿನ್) ಇವರುಗಳ ಮಾನಸಿಕ ತುಮುಲಗಳ ಗಾಥೆಇದರಲ್ಲಿತುಂಬಿಕೊಂಡಿದೆ. ವಿಧುರನಾಗಿದ್ದ ಅವನಿಗೆ ಮಗನೆ ಎಲ್ಲಾ. ಅದರಿಂದಲೇ ಸುಖವನ್ನುಕಾಣುತ್ತಾ, ಬೇರೆ ಮದುವೆಗೆ ಆಸಕ್ತಿ ತೋರಿಸಿರುವುದಿಲ್ಲಾ.ಹೀಗಿದ್ದಾಗಆತನ ಬಾಳಿನಲ್ಲಿ ಪ್ರೀತಿ ಬಂದಾಗ ಮಗ ಎನ್ನುವುದನ್ನು ನೋಡಲಾಗದು.ಮಗ ಹುಡುಗಿಯನ್ನು ಲವ್ ಮಾಡುತ್ತಾನೆ. ಅಪ್ಪನನ್ನು ಒಪ್ಪಿಸಿದರೆ ....

951

Read More...

Navaratna.Film Review.

Friday, February 14, 2020

            ಹುಡುಕಾಟದ ಹಾದಿಯಲ್ಲಿ ನವರತ್ನ ಚಿರಿತ್ರೆ, ಇತಿಹಾಸ, ಮತ್ತುಮಾಫಿಯಾ ಈ ಮೂರು ಅಂಶಗಳನ್ನು ಒಳಗೊಂಡ ಚಿತ್ರ ‘ನವರತ್ನ’ ಕತೆಯಾಗಿದೆ. ಅದೊಂದು ಸಾಮ್ರಾಜ್ಯ ವಿಸ್ರರಣೆಯಲ್ಲಿಕಂಡ ಸೋಲು-ಗೆಲುವು, ಅವಮಾನ ಹಾಗೂ ದ್ವೇಷದಕಥನ. ಇದರಲ್ಲಿ ಬರುವಒಂದು ಮುಖ್ಯವಾದತಿರುವು ಮುಂದುವರೆದ ಭಾಗವಾಗಿ ಪರದೆ ಮೇಲೆ ಮೂಡಿದೆ.ಇಂತಹಐತಿಹಾಸಿಕ ಫ್ಲ್ಯಾಷ್‌ಬ್ಯಾಕ್ ಆಸಕ್ತಿ ಹುಟ್ಟಿಸಿದೆ. ಅಲ್ಲೊಂದುಕಾಡು.ಅಲ್ಲಿಗೆಛಾಯಾಚಿತ್ರಕ್ಕಾಗಿ ಹೋಗುವವರುಯಾರು ಮತ್ತೆ ಹಿಂದುರಿಗಿ ಬಂದಿಲ್ಲ. ಆಲ್ಲಿಗೆ ಹೋದವರ  ಮಿಸ್ಸಿಂಗ್ ಮಿಸ್ಟ್ರೀ ಪೋಲೀಸರಿಗೆದೊಡ್ಡ ಸಮಸ್ಯೆಆಗಿರುತ್ತದೆ.  ಕಥಾನಾಯಕ, ಗೆಳೆಯ ಹಾಗೂ ನಾಯಕಿಅದೇಕಾಡಿಗೆ ....

1507

Read More...

Sagutha Doora Doora.Film Review.

Friday, February 14, 2020

ಕಣ್ಣನ್ನುಒದ್ದೆ ಮಾಡಿಸುವ ಸಾಗುತದೂರದೂರ ಮನಸ್ಸನ್ನುಕದಡುವ ‘ಸಾಗುತದೂರದೂರ’ ಚಿತ್ರವುಇಡೀಕತೆಯುಅಮ್ಮನ ಹುಡುಕಾಟದಲ್ಲಿ ಪರದಾಟಗಳು ಬರುತ್ತವೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬನಿಗೆಅಮ್ಮನನ್ನು ನೋಡುವಆಸೆ. ಮತ್ತೋಂದುಕಡೆಅರ್ಧ ಮಾನಸಿಕ ಸ್ಥಿಮಿತದಲ್ಲಿರುವ ಯುವಕನೊಬ್ಬನಿಗೂಅದೇರೀತಿಯ ಬಯಕೆ. ಇಬ್ಬರುಒಂದುಕಡೆ ಆಕಸ್ಮಿಕವಾಗಿ ಸೇರುತ್ತಾರೆ.ಯೋಚನೆ, ಯೋಜನೆಅದೇಆಗಿರುವುದರಿಂದತಾಯಿಯನ್ನು ನೋಡುವುದಕ್ಕೆಂದೆತಾಯಿನೆಲೆ ಮತ್ತುಗುಬ್ಬಿಗೂಡಿಗೆಪಯಣ ಬೆಳೆಸುತ್ತಾರೆ. ಈ ಹಾದಿಯಲ್ಲಿ ಸೋಜಿಗದಕಲ್ಲು ಮುಳ್ಳುಗಳು ಎದುರಾಗುತ್ತದೆ.ಆದರೂಅವರಿಂದ ಸಹಾಯ ಸಿಗುತ್ತದೆ.ಇವರಿಬ್ಬರಅಮ್ಮನು ಮಗನನ್ನುದೂರಇಡಲು ....

1644

Read More...

3rd Class.Film Review.

Friday, February 07, 2020

                  ಶೀರ್ಷಿಕೆ ಥರ್ಡ್‌ಕ್ಲಾಸ್‌ಕತೆ ಫಸ್ಟ್‌ಕ್ಲಾಸ್   ‘ಥರ್ಡ್‌ಕ್ಲಾಸ್’ ಸಿನಿಮಾ ಹಣೆಬರಹಕ್ಕೆ   ಹೊಣೆ..? ಅಂತ ಉಪಶೀರ್ಷಿಕೆಯಲ್ಲಿ ಹೇಳಿಕೊಂಡಿದೆ. ಹೆಸರು ಈರೀತಿಇದ್ದರೂಕತೆ ಫಸ್ಟ್‌ಕ್ಲಾಸ್‌ಆಗಿದೆ. ಮೂರು ವಿಧದಜೀವನ ಶೈಲಿಯಾದಗ್ಯಾರೇಜು, ಸಿರಿತನ, ಮಧ್ಯಮವರ್ಗ ಇವುಗಳನ್ನು ಸಮಾಜವು  ಹೇಗೆ ನೋಡುತ್ತದೆಎಂಬುದನ್ನು ಹೇಳಲಾಗಿದೆ.  ಜೀವನದಲ್ಲಿಯಾವುದೇ ತಪ್ಪುಗಳು, ಒಳ್ಳೆಯದು ಆದರೆ,ಅದನ್ನು ಹಣೆಬರಹಎನ್ನುವುದುಂಟು.ಶ್ರೀಮಂತ, ಮಧ್ಯಮ ವರ್ಗದಇಬ್ಬರು ಹುಡುಗಿಯರ ಹಣೆಬರಹದಲ್ಲಿ ಹೇಗೆ ಜೀವನವನ್ನು ಮುಂದುವರೆಸಿಕೊಂಡು ....

1150

Read More...

Dia.Film Review.

Friday, February 07, 2020

ಹೃದಯ ತುಂಬಿಕೊಳ್ಳುವ ದಿಯಾ ಜೀವನಎನ್ನುವುದು ತೊಂದರೆಗಳು ಎನ್ನುತ್ತಾಳೆ.ಜೀವನದಲ್ಲಿ ಬರುವ ಕ್ಲೇಶಗಳನ್ನು ಪರಿಹರಿಸಿಕೊಳ್ಳುವುದು.ವಾಸ್ತವವನ್ನು ಸ್ವೀಕರಿಸುವುದು ಸರಿ ಅನಿಸುತ್ತೆಎಂದು ಅವನು ಹೇಳುವಾಗ ‘ದಿಯಾ’ ಚಿತ್ರವು ವಿರಾಮದವರೆವಿಗೂ ಬಂದಿರುತ್ತದೆ.ಕೇವಲ ಮೂರು ಪ್ಲಸ್‌ಒಂದು ಪಾತ್ರದಲ್ಲಿ ಸುಂದರ ಪ್ರೀತಿಗಾಥೆಯನ್ನು ತೋರಿಸಿರುವ ರೀತಿ ಪ್ರೇಕ್ಷಕನಿಗೆಎಲ್ಲೂ ಮೊಬೈಲ್ ನೋಡದಂತೆ ಮಾಡಿದೆ.ಇಬ್ಬರು ಹುಡುಗರು, ಒಬ್ಬಳು ಹುಡುಗಿಯ ಸುತ್ತ ಲವ್ ಸ್ಟೋರಿಗಳು ಬಂದಿದೆ.ಆದರೆ ವಿನೂತನವಾಗಿ  ಹೇಳಿರುವ ರೀತಿ ನಿಜಕ್ಕೂ ಖುಷಿ ಕೊಡುತ್ತದೆ. ಇಂಜಿನಿಯರಿಂಗ್‌ಕಾಲೇಜಿನಲ್ಲಿಆತ ರಚಿಸಿರುವ ಚಿತ್ರಗಳು, ಸ್ಪುರದ್ರೂಪಿ ಮೈಕಟ್ಟಿಗೆ ಮನಸೋತು ....

1047

Read More...

Matthe Udbhava.Film Review.

Friday, February 07, 2020

ಮತ್ತೆ  ಉದ್ಬವಿಸಿದ  ಗಣೇಶ ೯೦ರ ದಶಕದಲ್ಲಿಉದ್ಬವಚಿತ್ರದಲ್ಲಿಗಣೇಶಉದ್ಬವವಾಗುವಂತೆಕತೆ ಹಣೆಯಲಾಗಿತ್ತು.ಕಟ್ ಮಾಡಿದರೆ ೩೦ ವರ್ಷಗಳ ನಂತರಅದೇಗಣಪತಿಇಂದುಏನಾಗಿದೆಎಂಬುದನ್ನು ಮುಂದುವರೆಸಿಕೊಂಡು ಹೋಗುವಂತೆ ‘ಮತ್ತೆಉದ್ಬವ’ ಸಿನಿಮಾದಲ್ಲಿ ಹಾಸ್ಯದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.ಇದರಜೊತೆಗೆ ಪ್ರಸ್ತುತರಾಜಕೀಯ, ಆಶ್ರಮ, ಸ್ವಾಮೀಜಿ ಲೀಲೆಗಳನ್ನು ತೋರಿಸಲಾಗಿದೆ.ದೇವರುಇದ್ದಾನಾ? ಇಲ್ಲವಾ ವಿಷಯಕುರಿತಂತೆಚರ್ಚೆ ನಡೆಸುವುದರೊಂದಿಗೆಕತೆಯು ತೆರೆದುಕೊಳ್ಳುತ್ತಾರೆ.ಅಧಿಕಾರದಲ್ಲಿದ್ದಾಗರಾಜಕೀಯ ವ್ಯಕ್ತಿಗಳು ಏನೇನು ತಪ್ಪು ಮಾಡುತ್ತಾರೆ.ಅದರಿಂದ ತಪ್ಪಿಸಿಕೊಳ್ಳಲು ಮತ್ತೋಂದುತಪ್ಪನ್ನು ....

634

Read More...

Gentleman.Film Review.

Friday, February 07, 2020

ಫರ್‌ಫೆಕ್ಟ್‌ಜಂಟಲ್‌ಮನ್ ‘ಜೆಂಟಲ್‌ಮನ್’ ಆಕ್ಷನ್‌ಚಿತ್ರಅಂದುಕೊಂಡು ಹೋದರೆ ಪ್ರೇಕ್ಷಕನಿಗೆ ಬೇರೆಯದೇರೀತಿಯಅನುಭವಉಂಟಾಗುತ್ರದೆ, ಹಾಗಂತ ಫೈಟ್‌ಇಲ್ಲವೆಂದು ಹೇಳಲಾಗುವುದಿಲ್ಲ.ಜಬರ್‌ದಸ್ತ್ ಮೂರು ಸಾಹಸಗಳು ಮಾಸ್‌ಜನರಿಗೆಇಷ್ಟವಾಗುತ್ತದೆ. ಪ್ರಸ್ತುತ ಸಮಾಜದಲ್ಲಿ ವುಮೆನ್‌ಎಗ್ಸ್‌ಟ್ರಾಫಿಕಿಂಗ್  ಮಾಫಿಯಾ ಮತ್ತು ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಖಾಯಿಲೆ ಬಗ್ಗೆ ಹೇಳಿದ್ದಾರೆ.  ನಿಸ್ತುಂತು ದಂಪತಿಗಳಿಗೆ  ಅದರಲ್ಲೂಗರ್ಭಕೋಶಬಲಹೀನವಾಗಿರುವರಿಗೆ, ಆರೋಗ್ಯವಂತ ಹುಡುಗಿಯರಿಂದಅದನ್ನುತೆಗೆದು ಮಹಿಳೆಗೆ ವರ್ಗ ಮಾಡುವುದು. ಇಂತಹದಂದೆಎಲ್ಲಾಕಡೆ ....

719

Read More...

Avane Srimannarayana.Film Review.

Friday, December 27, 2019

 ಫ್ಯಾಂಟಸಿ ಕಥನ ಅವನೇ ಶ್ರೀಮನ್ನಾರಾಯಣ        ಅಮರಾವತಿ ಎಂಬ  ಕಾಲ್ಪನಿಕ ಊರಿನಲ್ಲಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರವು ಸಾಗುತ್ತದೆ.  ನಿಧಿಯೊಂದು ದರೋಡೆಯಾಗುತ್ತದೆ. ಅದನ್ನು ಕಬಳಿಸಲು ಕಾದಿರುವ ಮತ್ತೋಂದು ದರೋಡೆಕೋರರ ತಂಡ. ನಾಪತ್ತೆಯಾದ ನಿಧಿಯ ಹುಡುಕಾಟ. ಇದರ ಮಧ್ಯೆ  ‘ರಾಮರಾಮ ತುಸು ದಕ್ಷ ವೃತ ಜಾರಿಪಾ’ ಎಂಬ ಸ್ಲೋಗನ್. ಇಲ್ಲಿಗೆ ಬರುವ ಚಾಣಾಕ್ಷ ಇನ್ಸ್‌ಪೆಕ್ಟರ್ ನಾಟಕಕಾರರು ಕಳವು ಮಾಡಿ ಬಚ್ಚಿಟ್ಟ ನಿಧಿಯನ್ನು ಹೇಗೆ ಹುಡುಕುತ್ತಾನೆ, ಅದಕ್ಕೆ ಆತ ಯಾವ ರೀತಿ ಮಾರ್ಗ ಅನುಸರಿಸುತ್ತಾನೆ.  ಇದಕ್ಕೆ  ಸರಿಯಾಗಿ ದಾರಿಯಲ್ಲಿ ಬರುವ ಸವಾಲುಗಳನ್ನು  ಎದುರಿಸುವ  ರೀತಿ.  ಅಂತಿಮವಾಗಿ ಅದು ಯಾರಿಗೆ ದಕ್ಕುತ್ತದೆ ಎಂಬುದು ಒನ್ ಲೈನ್ ....

1681

Read More...

Babru.Film Review.

Friday, December 06, 2019

ಮೂರು ಪಾತ್ರಗಳ ಬಬ್ರೂ      ‘ಬಬ್ರೂ’ ಚಿತ್ರವು ಮೂರು ಪಾತ್ರಗಳ ಕತೆಯು ಸಾಗುತ್ತದೆ ಜೊತೆಗೆ  ಸಂಪೂರ್ಣ ಚಿತ್ರೀಕರಣ ಯುಎಸ್‌ಎದಲ್ಲಿ ನಡೆಸಿರುವುದು ವಿಶೇಷ.  ಸಿನಿಮಾ ಕುರಿತು ಹೇಳುವುದಾದರೆ ಭಾರತೀಯರಾದ ಅರ್ಜುನ್ (ಮಾಹಿಹಿರೇಮಠ್)  ಪ್ರೇಯಸಿಯನ್ನು ಭೇಟಿ ಮಾಡಲು, ಹಾಗೆಯೇ ಸನಾ (ಸುಮನ್‌ನಗರ್‌ಕರ್) ಗಂಡನಿಂದ ಮುಕ್ತಿ ಪಡೆಯಲು. ಹೀಗೆ  ಇಬ್ಬರು ಪರಿಚಯವಾಗಿ  ಬಬ್ರೂ ಎನ್ನುವ ಕಾರನ್ನು ಮೆಕ್ಸಿಕೋದಿಂದ ಕೆನಡಾವರೆಗೆ  ಪ್ರಯಾಣ ಮಾಡುವ ಸಂದರ್ಭದಲ್ಲಿ ರೈತ ಸೇರಿಕೊಳ್ಳುತ್ತಾನೆ. ಕಾಕತಾಳೀಯ ಎನ್ನುವಂತೆ ಕಾರು  ಪೋಲೀಸ್, ದುರುಳರಿಗೂ  ಬೇಕಾಗಿರುತ್ತದೆ. ಇದರಿಂದ ಇಬ್ಬರಿಗೂ ತೊಂದರೆ ಆಗುತ್ತದೆಯೇ ? ಅವರು  ಗುರಿಯನ್ನು ತಲುಪುತ್ತಾರೋ  ಎಂಬುದರ ....

1801

Read More...

Hagalu Kanasu.Film Review.

Friday, December 06, 2019

                 ಹಗಲು ಕನಸು ನೋಡಲು ಸೊಗಸು       ‘ಹಗಲು ಕನಸು’ ಚಿತ್ರದ ಹೆಸರೇ ಹೇಳುವಂತೆ ಕತೆಯು ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಕೆಂಡ್‌ನಲ್ಲಿ ನಡೆಯುತ್ತದೆ.  ಕಥಾನಾಯಕ  ವಿಕ್ರಂಗೆ  ಪ್ರತಿ ಬಾರಿ ಕುತ್ತಿಗೆ ಮೇಲೆ ಮಚ್ಚೆ ಇರುವ ಮುಖ ಕಾಣಿಸದ ಹುಡುಗಿಯೊಬ್ಬಳು ಸಿಕ್ಕಂತೆ ಕನಸು ಕಾಣುತ್ತಿರುತ್ತಾನೆ. ಸೋಜಿಗ ಎನ್ನುವಂತೆ ಒಮ್ಮೆ ಅದೇ ತರಹದ ಹುಡುಗಿಯೊಬ್ಬಳು ಮನೆ ಪ್ರವೇಶಿಸಿದಾಗ ಮನೆಯಲ್ಲಿರುವ ಇಬ್ಬರು ಅಳಿಯಂದಿರಿಗೆ  ಪಜೀತಿಯಾಗುತ್ತದೆ. ಆಕೆಯು ಇಲ್ಲಿಗೆ  ಬಂದು ಹನಿಟ್ರ್ಯಾಪ್ ಮಾಡಲು  ಕಾರಣವಿರುತ್ತದೆ. ಅದು ಏನು ಎಂಬುದು ಸೆಸ್ಪೆನ್ಸ್ ,ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ. ಥ್ರಿಲ್ಲರ್, ಹಾಸ್ಯ ....

1322

Read More...

Brahmachari.Film Reviews.

Friday, November 29, 2019

                  

ನಕ್ಕು ನಗಿಸುವ ಬ್ರಹ್ಮಚಾರಿ

         ಅವನು ಸರ್ಕಾರಿ ನೌಕರ. ಅವಳು ಲೇಖಕಿ.  ಎರಡು ಕಡೆಯಿಂದ ಒಪ್ಪಿದ ಮದುವೆಯ ನಂತರ ಮೊದಲ ಅನುಭವದಲ್ಲಿ ಏನೇನು ಆಗುತ್ತದೆ ಎಂದು ತಿಳಿ ಹಾಸ್ಯದ ಮೂಲಕ ಹೇಳುವುದೇ   ‘ಬ್ರಹ್ಮಚಾರಿ’ ಚಿತ್ರದ ಒಂದು ಏಳೆಯ ಕತೆಯಾಗಿದೆ.  ಹಾಗಂತ ಡಬ್ಬಲ್ ಮೀನಿಂಗ್ ಸಂಭಾಷಣೆಗಳು ಅತಿರೇಕವಾಗಿರದೆ, ದೃಶ್ಯಗಳು ಮುಜಗರ ತರದೆ ಶುದ್ದ ಮನರಂಜನೆಯಿಂದ ಕೂಡಿರುವುದು ಪ್ಲಸ್ ಪಾಯಿಂಟ್ ಆಗಿದೆ.  ಅಷ್ಟಕ್ಕೂ ದಾಂಪತ್ಯ ಬದುಕಿಗೆ ಅಡ್ಡಿಯಾಗಿದ್ದ ಆ ಸಮಸ್ಯೆಯಾದರೂ ಏನು? ಅದಕ್ಕೆ ಅವನು ಏನು ಮಾಡುತ್ತಾನೆ. ಇತ್ಯಾದಿ, ಇತ್ಯಾದಿ ವಿವರ ತಿಳಿಯಲು ಸಿನಿಮಾ  ನೋಡಬೇಕು. 

1604

Read More...

Damayanti.Film Reviews.

Friday, November 29, 2019

ಜ್ಯೂನಿಯರ್, ಸೀನಿಯರ್ ಆತ್ಮಗಳ ಕಥನ          ‘ದಮಯಂತಿ’ ಚಿತ್ರದ ಹೆಸರು ಕೇಳಿದರೆ ಅದರಲ್ಲಿ ಗತ್ತು ತಾಕತ್ತು ಎಲ್ಲವು ಇರಲಿದೆ. ಸಿನಿಮಾ ಕುರಿತು ಹೇಳುವುದಾದರೆ ದಮಯಂತಿ ವಾಸವಾಗಿರುವ ಮನೆಯನ್ನು ಕಂಡುಕೊಳ್ಳುವ ಕಂಟ್ರಾಕ್ಟರ್ ಅದು ಮಾರಾಟವಾಗದೆ ಖೇದದಿಂದ ಸಾವಿಗೆ ಶರಣಾಗಿರುತ್ತಾನೆ. ಇದನ್ನು ತಿಳಿದ ಮಗ ಅದನ್ನು ಹೇಗಾದರೂ ಸೇಲ್ ಮಾಡಬೇಕೆಂದು ಪ್ರಯತ್ನಪಟ್ಟಾಗ, ಒಂದು ವಾರ ಮನೆಯೊಳಗೆ ಇದ್ದು ತೋರಿಸಿದರೆ ಮನೆಯಲ್ಲಿ ದೆವ್ವ ಇಲ್ಲವೆಂದು ಖಚಿತವಾಗುತ್ತದೆ. ಆಗ ತೆಗೆದುಕೊಳ್ಳುವುದಾಗಿ ತಿಳಿಸುತ್ತಾರೆ. ಅದರಂತೆ ಆತನು ಬಿಗ್‌ಬಾಸ್ ರೀತಿಯಂತೆ ಆ ಮನೆಗೆ ಏಳು ಮಂದಿಯನ್ನು ಕಳುಹಿಸುತ್ತಾರೆ. ಅಲ್ಲಿ ನಡೆಯುವ ಅವಾಂತರಗಳು, ನಂತರ ಅರಮನೆ ಹಿಂದಿನ ....

1517

Read More...

Kannad Gottilla.Film Reviews.

Friday, November 22, 2019

  ಭಾಷಾಭಿಮಾನ ಮತ್ತು ಅಪರಾಧಗಳ ನಡುವಿನ ಆಕರ್ಷಕ ಕತೆ   ಚಿತ್ರ: ಕನ್ನಡ್ ಗೊತ್ತಿಲ್ಲ ತಾರಾಗಣ: ಹರಿಪ್ರಿಯಾ, ಸುಧಾರಾಣಿ, ಧರ್ಮಣ್ಣ, ಮಜಾ ಟಾಕೀಸ್ ಪವನ್ ನಿರ್ದೇಶನ: ಮಯೂರ ರಾಘವೇಂದ್ರ ನಿರ್ಮಾಣ: ಕುಮಾರ ಕಂಠೀರವ   ನಮ್ಮ ದಕ್ಷಿಣದ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಮಂದಿಗೆ ತಮ್ಮ ಭಾಷಾ ಪ್ರೇಮ ಎಷ್ಟರಮಟ್ಟಿಗೆ  ಇವೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಾಗಿಯೇ ಪ್ರತಿಯೊಂದು ರಾಜ್ಯಗಳ ಗಡಿಭಾಗಗಳಿಗೆ ಬಂದಾಗ ಮತ್ತೊಂದು ರಾಜ್ಯದ ಭಾಷೆಯ ಪಸರಿಸುವಿಕೆ ಹೆಚ್ಚಾಗಿ ಇರುತ್ತದೆ. ಆದರೆ ಕರ್ನಾಟಕದ ವಿಚಾರಕ್ಕೆ ಬಂದಾಗ ಬೆಂಗಳೂರಿನಂಥ ರಾಜ್ಯದ ರಾಜಧಾನಿಯಲ್ಲೇ `ಕನ್ನಡ್ ಗೊತ್ತಿಲ್ಲ’ ಎಂದು ಹೇಳುವ ಮೂಲಕ ರಾಜ್ಯದ ಭಾಷೆಯನ್ನೇ ಸರಿಯಾಗಿ ಉಚ್ಚರಿಸದ ....

1528

Read More...

Manoroopa.Film Reviews.

Friday, November 22, 2019

  ಚಿತ್ರ: ಮನರೂಪ ತಾರಾಗಣ: ದಿಲೀಪ್ ಗೌಡ, ನಿಶಾ ಬಿ ಆರ್, ಆರ್ಯನ್, ಅನುಷಾ ರಾವ್, ಶಶಾಂಕ್ ನಿರ್ದೇಶನ: ಕಿರಣ್ ಹೆಗ್ಡೆ ನಿರ್ಮಾಣ: ಕಿರಣ್ ಹೆಗ್ಡೆ   ಕಾಲೇಜ್ ನಲ್ಲಿ ಸ್ನೇಹಿತರಾಗಿದ್ದ ಐದು ಮಂದಿಯ ತಂಡವಾಗಿ ಮತ್ತೆ ಜತೆಯಾಗಿ ಒಂದು ಪ್ರಯಾಣ ಆರಂಭಿಸುತ್ತಾರೆ. ಅದು ಪಶ್ಚಿಮ ಘಟ್ಟಗಳ ಕಡೆಗಿನ ಪಯಣ. ಆ ಕಾಡೊಳಗೆ ತನ್ನದೊಂದು ಹೊಸ ಯೋಜನೆಯನ್ನು ತೆರೆದಿಡುವ ಆಸೆ ಗೌರವ್ (ದಿಲೀಪ್ ಗೌಡ)ನದ್ದಾಗಿರುತ್ತದೆ.  ಸಂಜೆ ಸ್ವಲ್ಪ ಯಕ್ಷಗಾನ ನೋಡಿಕೊಂಡು ಕಾಡಿನಲ್ಲೇ ವಾಸವಾಗಲು ಹೊರಟವರಿಗೆ ಒಂದು ಅಪಾಯ ಕಾದಿರುತ್ತದೆ. ರಾತ್ರಿ ಮಲಗಿ ಮುಂಜಾನೆ ಎದ್ದೇಳುವಾಗ ಅವರಲ್ಲಿ  ಪೂರ್ಣ(ನಿಶಾ ಬಿ.ಆರ್) ಮತ್ತು ಶರವಣ(ಶಿವ ಬಿ.ಕೆ) ಎಂಬ ಇಬ್ಬರು ನಾಪತ್ತೆಯಾಗಿರುತ್ತಾರೆ. ಅವರಿಬ್ಬರನ್ನು  ಗೌರವ್ ....

1622

Read More...

Kaalidaasa Kannada Mestru.Film Review.

Friday, November 22, 2019

    ಶಿಕ್ಷಣ ವ್ಯವಸ್ಥೆಗೆ ಕಾಳಿದಾಸನೇ ನಾಯಕ           ಜಗ್ಗೇಶ್ ಚಿತ್ರವೆಂದರೆ ಅಲ್ಲಿ ಭರಪೂರ ನಗು ಇರುತ್ತದೆ. ಆದರೆ  ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾದಲ್ಲಿ ಅವರು ನಗಿಸಿ, ಅಳಿಸಿ ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಪಾತ್ರದಲ್ಲಿ ಅದ್ಬುವಾಗಿ ನಟಿಸಿದ್ದಾರೆ.  ಪ್ರಚಲಿತ ಸ್ಥಿತಿಯಲ್ಲಿ ಪೋಷಕರಾದವರು ಮಕ್ಕಳಿಗೆ ಸ್ವಾತಂತ್ರ ನೀಡದೆ  ಕೇವಲ ಓದು ಎಂದು ಹೇಳುತ್ತಿರುತ್ತಾರೆ. ಅಲ್ಲದೆ ತಮ್ಮ ಸಾಮರ್ಥ್ಯ ಮೀರಿ ಮಕ್ಕಳನ್ನು ದೊಡ್ಡ ಶಾಲೆಗಳಿಗೆ ಸೇರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಆರ್‌ಟಿಈ ದುರುಪಯೋಗ, ಶಿಕ್ಷಣ ವ್ಯವಸ್ಥೆ ಸಮಸ್ಯೆಯಿಂದ ಮದ್ಯಮ ವರ್ಗದ ಜನರು  ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ....

1301

Read More...

Nam Gani B.Com.Film Review.

Friday, November 15, 2019

ನಮ್  ಗಣಿ ಕಥೆ ವ್ಯಥೆ          ಕಷ್ಟ ಪಟ್ಟರೆ ಸುಖವುಂಟು ಎನ್ನುವಂತೆ  ‘ನಮ್ ಗಣಿ ಬಿ.ಕಾಂ ಪಾಸ್’ ಚಿತ್ರದ ಕತೆಯು ಇದೇ ರೀತಿ ಇರಲಿದೆ.  ಕಥಾನಾಯಕ ಪದವಿ ಪಡೆದುಕೊಂಡು ಕೆಲಸ ಸಿಗದೆ ನಿರುದ್ಯೋಗಿಯಾಗಿರುತ್ತಾನೆ. ಹಲವು ಸಂದರ್ಶನಗಳಿಗೆ  ಹೋಗಿಬಂದರೂ ಫಲಿತಾಂಶ ಮಾತ್ರ ಶೂನ್ಯ.  ಇದರಿಂದ ಮನೆಯಲ್ಲಿ, ಸಂಬಂದಿಕರು ಹಾಗೂ ಅಕ್ಕಪಕ್ಕದವರಿಂದ ಸದಾ ನಿಂದನೆಗೆ ಒಳಗಾಗುತ್ತಿರುತ್ತಾನೆ. ಇದರ ಮಧ್ಯೆ ಇವನ ಬದುಕಿನಲ್ಲಿ ಇಬ್ಬರು ಹುಡುಗಿಯರ ಪ್ರವೇಶವಾಗುತ್ತದೆ. ಇವರಿಂದಲಾದರೂ ಜೀವನದಲ್ಲಿ ಸೆಟ್ಲ್ ಆಗಬಹುದೆಂದು ನಿರೀಕ್ಷಿಸಿದ್ದ ಕನಸು ಭಂಗವಾಗುತ್ತದೆ. ಒಬ್ಬಳು ಇವನ ಹತ್ತಿರ ಹಣವಿಲ್ಲವೆಂದು  ಕ್ಯಾತೆ ತೆಗೆದು ದೂರ ಹೋಗುತ್ತಾಳೆ. ಮತ್ತೋಬ್ಬಳು  ಡ್ರಗ್ಸ್ ....

1485

Read More...

Mane Maratakkide.Film Reviews.

Friday, November 15, 2019

  ದೆವ್ವದ ಮನೆಯೊಳಗೆ ನಗುವಿನ ಅರಮನೆ!     ಚಿತ್ರ: ಮನೆ ಮಾರಾಟಕ್ಕಿದೆ ತಾರಾಗಣ: ಚಿಕ್ಕಣ್ಣ, ನಟರಂಗ ರಾಜೇಶ್, ಕುರಿ ಪ್ರತಾಪ್, ರವಿಶಂಕರ್ ಗೌಡ, ಸಾಧು ಕೋಕಿಲ ಮತ್ತು ಶ್ರುತಿ ಹರಿಹರನ್ ಮೊದಲಾದವರು. ನಿರ್ದೇಶನ: ಮಂಜು ಸ್ವರಾಜ್ ನಿರ್ಮಾಪಕ: ಎಸ್.ವಿ ಬಾಬು   ಶ್ರವಣ ದುಬೈನಲ್ಲಿ ನೆಲೆಸಿರುತ್ತಾನೆ. ಊರಲ್ಲಿನ ತನ್ನ ಮನೆಯನ್ನು ಮಾರಾಟಕ್ಕೆ  ಇಟ್ಟಿರುತ್ತಾನೆ. ಆದರೆ ಆ ಮನೆಯನ್ನು ಕೊಳ್ಳಲು ಬರುವವರೆಲ್ಲ ಅದೊಂದು ದೆವ್ವದ ಮನೆ ಎನ್ನುವ ಕಾರಣ ನೀಡಿ ವಾಪಾಸು ಹೋಗುತ್ತಾರೆ. ಇದನ್ನು ಖುದ್ದಾಗಿ ಪರಿಹರಿಸಲು ಶ್ರವಣ ಬೆಂಗಳೂರಿಗೆ ಬರುತ್ತಾನೆ. ಆ ಮನೆಯಲ್ಲಿ ದೆವ್ವಗಳಿಲ್ಲ ಎಂದು ಸಾಬೀತು ಮಾಡಲು ಅಲ್ಲಿ ವಾಸಿಸುವವರಿಗಾಗಿ ಹುಡುಕಾಡುತ್ತಾನೆ. ಆದರೆ ಹಾಗೆ ಅಲ್ಲಿ ....

746

Read More...

Aa Drushya.Film Review.

Friday, November 08, 2019

                     ಸಂಬಂದಗಳ ನಡುವಿನ ಅಪರಾಧಗಳು        ಎರಡು ಕೊಲೆಯನ್ನು ಭೇದಿಸುವ ‘ಆ ದೃಶ್ಯ’ ಚಿತ್ರದ ಕತೆಯಾಗಿದೆ. ಇದನ್ನು ಹುಡುಕಿಕೊಂಡು ಹೋಗುವ ತನಿಖಾಧಿಕಾರಿಗೆ ಒಂದೊಂದೇ ರಹಸ್ಯ ಘಟನೆಗಳು ಬಿಚ್ಚಿಕೊಳ್ಳುತ್ತದೆ. ಕೊನೆಗೆ ಅಪರಾಧಿಯನ್ನು ಹಿಡಿಯಲು ಹೋದಾಗ ಅಲ್ಲಿ ಆಗುವುದೇ ಬೇರೆಯಾಗಿರುತ್ತದೆ. ಇದರ ಹಿಂದಿನ ಮರ್ಮವೇನು. ಕೊಲೆಗೆ ಕಾರಣವಾದರೂ ಏನು ಎಂಬುದು ಕ್ಲೈಮಾಕ್ಸ್ ನಲ್ಲಿ ಗೊತ್ತಾಗುತ್ತದೆ. ತನಿಖೆ ಬೆಳಿಗ್ಗೆ ಶುರುವಾದರೆ ರಾತ್ರಿ ವೇಳಗೆ ಒಂದು ಹಂತಕ್ಕೆ ಬಂದಿರುತ್ತದೆ. ಇದರಿಂದ ನೋಡುಗನಿಗೆ ಒಂದು ರೀತಿಯ ಕುತೂಹಲ ಹುಟ್ಟಿಸುತ್ತದೆ. ನಾವು ಅಂದುಕೊಂಡಂತೆ ಆಗಿರುತ್ತದೆ ಎಂದು ಭಾವಿಸಿದರೆ ಅಲ್ಲಿ ಬೇರೆಯದೇ ....

631

Read More...

Ranabhoomi.Film Review.

Friday, November 08, 2019

                           ರಣಭೂಮಿ ಯುದ್ದದ ಕತೆಯಾಗಿಲ್ಲ         ‘ರಣಭೂಮಿ’ ಹೆಸರು ಕೇಳಿದರೆ ಇದೊಂದು ಯುದ್ದಕ್ಕೆ ಸಂಬಂದಿಸಿದ ಕತೆ ಅಂಂದುಕೊಮಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಕತೆಯಲ್ಲಿ ಸುಮತಿ,ವೇದಾ  ಮತ್ತು ವಿಕ್ರಮ್ ಒಂದೇ ಕಡೆ ಕೆಲಸ ಮಾಡುವ ಸ್ನೇಹಿತರು. ಸುಮತಿಗೆ ವಿಕ್ರಮ್ ಮೇಲೆ ಒಲವು. ಇದಕ್ಕೂ ಮೊದಲು ವೇದಾ, ವಿಕ್ರಮ್ ಪ್ರೇಮಿಗಳು. ಕೊನೆಗೆ  ಸಂಧಾನ ಮೂಲಕ ಸುಮತಿ ಇಬ್ಬರಿಗೂ ಮದುವೆ ಮಾಡಿಸುತ್ತಾಳೆ. ಒಳಗೆ ದ್ವೇಷದ ಜ್ವಾಲೆ ಹಾಗೆಯೇ ಇರುತ್ತದೆ.  ವೃದ್ದಾಶ್ರಮವೊಂದರಲ್ಲಿ ನಡೆಯುವ ಹತ್ಯಾಕಾಂಡವನ್ನು ಕಣ್ಣಾರೆ ಕಂಡ ಸ್ನೇಹಿತೆಯರು ಮೊಬೈಲ್‌ದಲ್ಲಿ ಸೆರೆಹಿಡಿಯುತ್ತಾರೆ. ಅದನ್ನು ಶೂಟ್ ....

626

Read More...

Eesha Mahesha.Film Review.

Friday, November 08, 2019

ಅಣ್ಣ ತಮ್ಮಂದಿರ  ಈಶ ಮಹೇಶ         ಕೌಟಂಬಿಕ ಕತೆ ಹೊಂದಿರುವ  ‘ಈಶ ಮಹೇಶ’ ಚಿತ್ರವು   ನೀರಾವರಿ ಪ್ರದೇಶವುಳ್ಳ ಚಿಕ್ಕ ಹಳ್ಳಿಯಲ್ಲಿ  ನಡೆಯುತ್ತದೆ. ಸಮಾಜ ಸೇವೆ ಮಾಡುವ ಊರಿನ  ಮುಖ್ಯಸ್ಥನಿಗೆ ಇಬ್ಬರು ಮಕ್ಕಳು. ಅಣ್ಣ ಶ್ರೀಮಂತ, ತಮ್ಮ ಬಡವ. ಒಮ್ಮೆ ಸೋದರ ಚುನಾವಣೆಯಲ್ಲಿ ನಿಲ್ಲುತ್ತಾನೆ. ಫಲಿತಾಂಶದಲ್ಲಿ ಸೋತು ಹೋಗಿದ್ದೆನೆಂದು  ಬೇಸರಗೊಂಡು ಮನೆಗೆ ಹೋಗಿ ಆರೋಗ್ಯ ಸಮಸ್ಯೆಯಿಂದ  ಮರಣ ಹೊಂದುತ್ತಾನೆ. ಆದರೆ ಎಲೆಕ್ಷನ್‌ದಲ್ಲಿ ಗೆಲುವು ಕಂಡಿರುತ್ತಾನೆ. ಪತ್ನಿ ಇಲ್ಲಿಯ ಕಷ್ಟ, ವಾತವರಣ ನೋಡಲಾಗದೆ ದೂರದ ಊರಿಗೆ ಹೋಗುತ್ತಾರೆ. ಮುಂದೇನು ಎನ್ನುವುದು ಕುತೂಹಲಕಾರಿ ಯಾಗಿದೆ. ಜೊತೆಗೆ ಸ್ವಚ್ಚತಾ ಅಭಿಯಾನದ ಸಂದೇಶ ಇರಲಿದೆ. ಅಚ್ಚುಕಟ್ಟಾಗಿ ....

688

Read More...
Copyright@2018 Chitralahari | All Rights Reserved. Photo Journalist K.S. Mokshendra,