Mooka Vismitha.Film Press Meet.

Monday, April 29, 2019

ಮೂರು ತಲೆಮಾರುಗಳಲ್ಲಿ ಎರಡು ಕತೆಗಳು           ೧೯೨೦ರಲ್ಲಿ ಟಿ.ಪಿ.ಕೈಲಾಸಂ ಬರೆದಿರುವ ಇಪ್ಪತ್ತೈದು ನಿಮಿಷದ  ‘ಟೊಳ್ಳುಗಟ್ಟಿ’ ನಾಟಕ ‘ಮೂಕ ವಿಸ್ಮಿತ’ ಚಿತ್ರದ ಹೆಸರಿನೊಂದಿಗೆ ತೆರೆಗೆ ಬರಲು ಸನ್ನಿಹಿತವಾಗಿದೆ.  ಆಗಿನ ಕಾಲದ ಕತೆಗೆ ಪ್ರಸ್ತುತ ಕಾಲಘಟ್ಟದಲ್ಲಿ,  ಮೂರು ತಲೆಮಾರುಗಳು ಹೇಗೆ ತನ್ನ ಪಾತ್ರವನ್ನು ನಿರ್ವಹಿಸುತ್ತೆ. ಒಳ್ಳೆಯದು ಮತ್ತು ಕೆಟ್ಟದ್ದು ಎನ್ನುವ ವ್ಯತ್ಯಾಸಗಳಲ್ಲಿ ಮನುಷ್ಯ ತನ್ನನ್ನು ತಾನು ಹೇಗೆ ಕಂಡುಕೊಳ್ಳುತ್ತಾನೆ. ಶುರುವಿನಿಂದ ಕೊನೆವರೆಗೂ ಕುತೂಹಲ ಕಾಡುತ್ತಾ ಕೊನೆಯಲ್ಲಿ  ಎಲ್ಲವು ತೆರೆದುಕೊಳ್ಳುತ್ತದೆ.  ಶಿಕ್ಷಣ ಏನು  ಎಂಬುದರ ಅರ್ಥ. ಅದರಂತೆ ಮಾನವೀಯ ಮೌಲ್ಯಗಳನ್ನು ....

1205

Read More...

Aa Ondu Nootu.Film Press Meet.

Monday, April 29, 2019

ಗರಿಷ್ಟ  ಬೆಲೆಯ  ನೋಟಿನ ಸುತ್ತ          ‘ಹಣ ಕಂಡರೆ ಹೆಣ ಕೂಡ ಬಾಯಿಬಿಡುತ್ತೆ ‘ ಎಂಬ ಗಾದೆ ಮಾತು  ‘ಆ ಒಂದು ನೋಟು’ ಚಿತ್ರದ ಕತೆಗೆ ತಾಳೆಯಾಗುತ್ತದೆ.  ಗರಿಷ್ಟ ಎರಡು ಸಾವಿರ  ನೋಟಿನ ಕೊನೆ ಸಂಖ್ಯೆ ೧೦೨೧೦೨  ಯಾರತ್ರಾ ಹೋಗುತ್ತದೆ. ಹೇಗೆಲ್ಲಾ ಬಳಕೆಯಾಗುತ್ತದೆ. ನೋಟು ವ್ಯಕ್ತಿಯ ಬಳಿ ಸಿಕ್ಕಾಗ ಅವರ ವ್ಯಕ್ತಿತ್ವ ಹೇಗೆ ಬದಲಾಗುತ್ತದೆ. ನೋಟು ಎಲ್ಲಾ ಜನರ ಹತ್ತಿರ ಪ್ರಯಾಣ ಮಾಡಿದಾಗ ಆಯಾ ಪಾತ್ರಗಳು ಅವರದೇ ಕೋನಗಳಲ್ಲಿ ಯಾವ  ರೀತಿ ಅನಾವರಣಗೊಳ್ಳುತ್ತದೆ ಎಂಬ ಅಂಶಗಳು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ.  ಕಾಸಿಕ್ಕೆ ತಕ್ಕಂತೆ ೮೫ ಕಲಾವಿದರು ನಟನೆ ಮಾಡಿರುವುದು ವಿಶೇಷ.  ಇದರಲ್ಲಿ ಮುಖ್ಯ ....

869

Read More...

Karky.Film Pooja and Press Meet.

Saturday, April 27, 2019

ನಗರದ  ಅನುದಿನದ  ತವಕ ತಲ್ಲಣಗಳು         ತಂತ್ರಜ್ಘಾನ ಬೆಳದಂತೆ ನಗರದ ತಾಂತ್ರಿಕ ಬದುಕು  ಹೇಳಲಾಗದು,  ಇಲ್ಲಿನ ಸಂಸ್ಕ್ರತಿಯು  ಅನುದಿನವು  ಯುವ ಜನಾಂಗದ  ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ.  ಅವರ ಗುಣಗಳು, ವರ್ತನೆಯನ್ನು ಅವಲೋಕಿಸಿದಾಗ, ಜೀವನದ ಸ್ಟೈಲ್  ಹೀಗೂ ಉಂಟಾ ಅನಿಸುತ್ತದೆ.  ಇಂತಹುದೆ ಅಂಶಗಳನ್ನು ಹೆಕ್ಕಿಕೊಂಡು  ಸೈಕಾಲಿಕಲ್ ಥ್ರಿಲ್ಲರ್ ರೀತಿಯಲ್ಲಿ  ‘ಕಾರ್ಕಿ’ ಎನ್ನುವ ಚಿತ್ರವೊಂದು ಸೆಟ್ಟೇರಿದೆ.  ಕತೆಯಲ್ಲಿ ಯುವಕನೊಬ್ಬ  ದೈನಂದಿನ  ಬದುಕಿನಲ್ಲಿ ವ್ಯತ್ಯಾಸ ಕಾಣುತ್ತಾನೆ. ಸದರಿ  ದಿನದಂದು ತೆಗೆದುಕೊಳ್ಳುವ ನಿರ್ಣಯ ಜೀವನಪರ್ಯಂತ ತಿರುವು, ಬದಲಾವಣೆ ಆದಾಗ  ಹೇಗೆ ....

360

Read More...

Ranganayaki.Film Launch.

Friday, April 26, 2019

ನಿರ್ಭಯ  ಘಟನೆಯ  ಮತ್ತೋಂದು  ಚಿತ್ರ         ದೆಹಲಿಯಲ್ಲಿ ನಡೆದ ನಿರ್ಭಯ ಘಟನೆಯನ್ನು ಮುಂದಿಟ್ಟುಕೊಂಡು ‘ಜಾಸ್ಮಿನ್’ ಎನ್ನುವ ಚಿತ್ರವೊಂದು ಕೆಲವು ವರ್ಷಗಳ ಹಿಂದೆ ತೆರೆಕಂಡಿತ್ತು. ಈಗ ಅದೇ ಘಟನೆ ಕುರಿತಂತೆ ‘ರಂಗನಾಯಕಿ’ ಚಿತ್ರದ ಟೀಸರ್ ಬಿಡುಗಡೆಗೊಂಡಿತು.  ಐಪಿಎಸ್ ಖಡಕ್ ಪೋಲೀಸ್ ಅಧಿಕಾರಿ ಡಿ.ರೂಪಮೌದ್ಗಿಲ್  ಚಿತ್ರದ ಕಾದಂಬರಿಯನ್ನು ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ  ಇಂದು ಮಹಿಳೆ ಸಾಧನೆ ಮಾಡಬೇಕಾದರೆ  ಬರೀ ಒಳ್ಳೆ ಹುಡುಗಿ ಅನಿಸಿಕೊಂಡರೆ ಸಾಲದು,  ಸಮಾಜದ ಕಣ್ಣಲ್ಲಿ ಕೆಟ್ಟ ಹುಡುಗಿಯಾದರೂ ಪರವಾಗಿಲ್ಲ. ಅಂದುಕೊಂಡ ಗುರಿಯನ್ನು ತಲುಪಿ, ಸಮಾಜದಲ್ಲಿ ಒಳ್ಳೆತನದಿಂದ ಮುಂದೆ ಬನ್ನಿ ಎಂದು ಕರೆ ....

954

Read More...

Putaani Punters.Film Pooja.

Wednesday, April 24, 2019

ಮೇಘನಾರಾಜ್  ನಿರ್ಮಾಣದಲ್ಲಿ  ಮಕ್ಕಳ ಚಿತ್ರ        ಸದಭಿರುಚಿ ನಟಿ ಮೇಘನಾರಾಜ್  ಕನ್ನಡ, ತಮಿಳು ಮತ್ತು ಮಲೆಯಾಳಂ ಚಿತ್ರಗಳಲ್ಲಿ  ಅಭಿನಯಿಸಿದ್ದಾರೆ.  ಇದರ ಅನುಭವ ಹಾಗೂ ಪೋಷಕರಾದ ಸುಂದರ್‌ರಾಜ್-ಪ್ರಮೀಳಾಜೋಷಾಯ್ , ಪತಿ ಚಿರಂಜೀವಿಸರ್ಜಾ  ಪ್ರೋತ್ಸಾಹದಿಂದ  ನಿರ್ಮಾಪಕಿಯಾಗಿ  ‘ಪುಟಾಣಿ ಪಂಟರ‍್ಸ್’ ಚಿತ್ರವನ್ನು ಮೇಘನಾ ಸಿನಿಮಾಸ್ ಮೂಲಕ ಬಂಡವಾಳ ಹೂಡುತ್ತಿದ್ದು,  ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಮಜಾ ಟಾಕೀಸ್ ಖ್ಯಾತಿಯ ಪವನ್‌ಕುಮಾರ್  ಕತೆ ಬರೆದು  ಮೊದಲ ಬಾರಿ ನಿರ್ದೇಶನದ ಜೊತೆಗೆ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.  ಗತಕಾಲದಲ್ಲಿ ಪುಟಾಣಿ ಏಜೆಂಟ್ ೧೨೩ ಚಿತ್ರವು ....

925

Read More...

Soojidaara.Film Audio Rel.

Tuesday, April 23, 2019

ಸೂಜಿದಾರದಲ್ಲಿ  ನೀನಾಸಂ  ನೆನಪುಗಳು         ವಿಭಿನ್ನ ಕಥಾಹಂದರ ಹೊಂದಿರುವ  ‘ಸೂಜಿದಾರ’ ಚಿತ್ರದಲ್ಲಿ ಹಲವು ವಿಶೇಷತೆಗಳು ಇರಲಿದೆ.  ನಾಯಕ ಯಶ್‌ವಂತ್‌ಶೆಟ್ಟಿ, ಸಂಗೀತ ನಿರ್ದೇಶಕ ಶ್ರೀಧರ್‌ಹೆಗ್ಗೋಡು-ದಿಗ್ವ್ವಿಜಯಹೆಗ್ಗೋಡು, ಚೊಚ್ಚಲಬಾರಿ ಆಕ್ಷನ್ ಕಟ್ ಹೇಳಿರುವ ಮೌನೇಶ್‌ಬಡಿಗೇರ್,  ಅತಿಥಿಗಳಾಗಿ ಆಗಮಿಸಿದ್ದ  ನಟ ನೀನಾಸಂಸತೀಶ್, ನಿರ್ದೇಶಕ ಬಿ.ಎಂ.ಗಿರಿರಾಜ್ ಎಲ್ಲರೂ ನೀನಾಸಂ ರಂಗಶಾಲೆಯಿಂದ  ಗುರುತಿಸಿಕೊಂಡವರಾಗಿದ್ದಾರೆ.  ಧ್ವನಿಸಾಂದ್ರಿಕೆ ಲೋಕಾರ್ಪಣೆ ಮಾಡಿದ ನೀನಾಸಂ ಸತೀಶ್ ಮಾತನಾಡಿ  ಚಿತ್ರ ನೋಡಿದ್ದೇನೆ. ಚೆನ್ನಾಗಿದೆ. ನಿರ್ದೇಶಕರೊಂದಿಗೆ ಹದಿನಾರು ವರ್ಷದ ಸ್ನೇಹವಿದೆ.  ನಾನೇ ವಿತರಣೆ ....

920

Read More...

Padde Huli.Film Success Meet.

Tuesday, April 23, 2019

ಪಡ್ಡೆಹುಲಿ ಸಂತೋಷ, ಬೇಸರ       ಅದ್ದೂರಿ ಚಿತ್ರ ‘ಪಡ್ಡೆಹುಲಿ’ಗೆ ಜನರು ಫಿದಾ ಆಗಿರುವುದು ನಿಜ. ನೋಡದೆ ಇರುವವರಿಗೆ ಚಿತ್ರಮಂದಿರ  ಸಿಗುತ್ತಿಲ್ಲ ಮತ್ತು ಮಾಲ್‌ನವರು ಸರಿಯಾದ ಸಮಯದಲ್ಲಿ  ಪ್ರದರ್ಶನ ಮಾಡದೆ ಇರುವುದರಿಂದ ಗಳಿಕೆ ಕಡಿಮೆಯಾಗುತ್ತಿದೆ ಎಂದು ಹಿರಿಯ ನಿರ್ಮಾಪಕ ಕೆ.ಮಂಜು ಸಂತೋಷಕೂಟದಲ್ಲಿ  ಖೇದಗೊಂಡರು.  ಅವರು ಹೇಳುವಂತೆ  ಎಲ್ಲಾ ಪತ್ರ್ರಿಕೆಗಳಲ್ಲಿ ಒಳ್ಳೆ ವಿಮರ್ಶೆ ಬಂದಿದೆ. ಆದರೆ ಬುಕ್ ಮೈ ಷೋದವರು  ಸಿನಿಮಾದ ವಿಮರ್ಶೆ ಇಲ್ಲಿಯವರೆಗೂ  ಹಾಕಿಲ್ಲ. ಯಾಕೆ ಎಂಬ ಕಾರಣ ತಿಳಿಯದಾಗಿದೆ.  ಚಿತ್ರ ಚೆನ್ನಾಗಿ ಹೋದರೆ ಮುಂದುವರೆಸಬೇಕಾಗುತ್ತದೆಂದು ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಮಾಲೀಕರ ....

899

Read More...

Kanchana-3.Film Audio Rel.

Monday, April 22, 2019

ಪ್ರೇಕ್ಷಕರ ಎದುರು ಕಾಂಚನ-೩        ಕಾಂಚನಾ ಭಾಗ ೧ ಮತ್ತು ೨ ಬಿಡುಗಡೆಯಾಗಿ ಯಶಸ್ವಿಯಾಗಿತ್ತು.  ಹಿಂದಿನ ಎರಡು ಚಿತ್ರಗಳಲ್ಲಿ  ಚಂದನವನದ ತಾರೆಯರು  ಕಾಣಿಸಿಕೊಂಡಿದ್ದರು.  ಈಗ ಸಣ್ಣದೊಂದು ಬದಲಾವಣೆ ಎಂಬಂತೆ  ತಮಿಳು  ಕೋರಿಯೋಗ್ರಾಫರ್, ನಟ, ನಿರ್ದೇಶಕ, ನಿರ್ಮಾಪಕ ರಾಘವಲಾರೆನ್ಸ್  ಅವರು ಅಭಿನಯಿಸುವುದರ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ  ‘ಮುನಿ’ ೨.೪೫ ಗಂಟೆಯ ಸಿನಿಮಾವು ಕನ್ನಡದಲ್ಲಿ ‘ಕಾಂಚನ-೩’ ಹೆಸರಿನೊಂದಿಗೆ ಬಿಡುಗಡೆಯಾಗುತ್ತಿದೆ.  ಭಯ ಹುಟ್ಟಿಸುವ ಮತ್ತು ಅದನ್ನು ಮರೆಯಲು ಹಾಸ್ಯ ಇರುವ ಚಿತ್ರವೆಂದು ಹೇಳಿಕೊಂಡು ಕತೆಯ ಗುಟ್ಟನ್ನು  ಕಾಯ್ದುಕೊಂಡಿದೆ.  ಈಗಾಗಲೇ ಎರಡು ....

937

Read More...

Aasimkozilla.Film Title Rel.

Monday, April 22, 2019

 ನಿಘಂಟುದಲ್ಲಿ ಇಲ್ಲದ ಪದ ಸಿನಿಮಾದ ಶೀರ್ಷಿಕೆ

       ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಚಿತ್ರತಂಡವು ಏನಾದರೂ ವಿನೂತನ ಕಸರತ್ತು, ಉಪಾಯಗಳನ್ನು ಮಾಡುತ್ತಲೇ ಇರುತ್ತಾರೆ. ಇದರಲ್ಲಿ ಸಪಲರಾಗುವುದು ಬೆರಳಣಿಕೆಯಷ್ಟು ಮಾತ್ರ. ಆದರೆ ಪ್ರಯತ್ನ ಮಾತ್ರ ನಿಲ್ಲದೆ ಮುಂದುವರೆಯುತ್ತಲೆ ಇದೆ. ಈ ಸಾಲಿಗೆ  ‘ಆಸಿಂಕೋಜಿಲ್ಲ’ ಚಿತ್ರವು ಸೇರ್ಪಡೆಯಾಗಿದೆ. ನಿರ್ದೇಶಕರು ಕಲಾವಿದರಿಗೆ ಟೈಟಲ್, ಕತೆ ಹೇಳದೆ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಶೀರ್ಷಿಕೆ, ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮದಲ್ಲಿ ಎಲ್ಲವನ್ನು ಮಾದ್ಯಮದ ವರಾತದ ಮೇರೆಗೆ ಮಾಹಿತಿ ಹರಿಬಿಟ್ಟರು. 

1058

Read More...

Ombhattane Adbutha.Film Press Meet.

Monday, April 22, 2019

ಸಾವಿನ ಮನೆಯಲ್ಲಿ ಹಾಸ್ಯ

    ಭೂತಯ್ಯನ ಮೊಮ್ಮಗ ಅಯ್ಯು ಚಿತ್ರವು ಸಾವಿನ ಮನೆಯಲ್ಲಿ ನಡೆಯುವ ಹಾಸ್ಯವನ್ನು ತೋರಿಸಿದ್ದರು. ಅದೇರೀತಿ ಎಂಬಂತೆ ‘ಒಂಬತ್ತನೇ ಅದ್ಬುತ’ ಸಿನಿಮಾದಲ್ಲಿ ಇದೇ ರೀತಿಯ ಕತೆ ಇದೆ.  ಉತ್ತರ ಕರ್ನಾಟಕ ಭಾಗದಲ್ಲಿ ವಯಸ್ಸಾದ ಮನುಷ್ಯ ಸತ್ತರೆ, ಶವದ ಮುಂದರೆ ಕಣ್ಣೀರು ಹಾಕುವವರು ಕಡಿಮೆ ಇರುತ್ತಾರೆ. ಅದನ್ನು ವೈನೋಧಿಕ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ  ಹಗರಿಬೊಮ್ಮನಹಳ್ಳಿಯ ಸಂತೋಷ್‌ಕುಮಾರ್‌ಬೆಟಗೇರಿ ರಚನೆ, ನಿರ್ದೇಶನ,ನಾಯಕ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. 

962

Read More...

Gara.Film Press Meet.

Monday, April 22, 2019

ಗರ  ಶೀರ್ಷಿಕೆ ಗೀತೆ ಬಿಡುಗಡೆ          ಹೆಸರಿನಿಂದಲೇ ಸದ್ದು ಮಾಡುತ್ತಿರುವ ‘ಗರ’ ಚಿತ್ರದ ಶೀರ್ಷಿಕೆ ಗೀತೆಯನ್ನು ಇತ್ತೀಚೆಗೆ ಮಾದ್ಯಮದವರಿಗೆ ತೋರಿಸಲಾಯಿತು. ನಿರ್ದೇಶಕ ಕೆ.ಆರ್.ಮುರಳಿಕೃಷ್ಣ ಮಾತನಾಡಿ, ಆರ್.ಕೆ.ನಾರಾಯಣ್ ವಿರಚಿತ  ಆಸ್ಟ್ರಾಲಜರ್ ಡೇ ಪುಸ್ತಕವನ್ನು ಓದಿ, ಅದರಲ್ಲಿ  ಸ್ಪೂರ್ತಿಗೊಂಡು ಸಿನಿಮಾಕ್ಕೆ ಕತೆ ಬರೆಯಲಾಗಿದೆ.  ಅದರಲ್ಲಿರುವ ಪ್ರಶ್ನೆ, ಉತ್ತರ ಹುಡುಕಿಕೊಂಡು ಹೋದಾಗ ಸಿಕ್ಕಿದ್ದೇ ಗರ. ಅದಕ್ಕಾಗಿ ‘ಅಂಕೆ ಇಲ್ಲದ ಪ್ರೇಮಕ್ಕೆ ಅಂಕಗಳ ಆಟ’ವೆಂದು ಉಪಶೀರ್ಷಿಕೆಯಲ್ಲಿ ಹೇಳಲಾಗಿದೆ.  ಟೈಟಲ್ ಗೀತೆಯು ಚಿತ್ರದ ಕುರಿತಾದ ಒಂದು ಏಳೆ ಸಾರಾಂಶವನ್ನು ಹೇಳುತ್ತದೆ.  ಹೊಸ ಕಲಾವಿದರ ಜೊತೆ ಹಳಬರ ....

889

Read More...

Krishna Garments.Film Press Meet.

Monday, April 22, 2019

ವಿಭಿನ್ನ  ಶೀರ್ಷಿಕೆ ಕೃಷ್ಣ ಗಾರ್ಮೆಂಟ್ಸ್          ಚಿತ್ರ-ವಿಚಿತ್ರ ಶೀರ್ಷಿಕೆಗಳನ್ನಿಟ್ಟುಕೊಂಡು ಸೆಟ್ಟೇರುತ್ತಿರುವ ಸಿನಿಮಾಗಳಿಗೇನು ಕೊರತೆಯಿಲ್ಲ. ಸಿನಿಮಾದ ಶೀರ್ಷಿಕೆ ವಿಭಿನ್ನವಾಗಿದ್ದರೆ ಬೇಗನೆ ಜನರ ಗಮನ ಸೆಳೆಯಬಹುದು ಎಂಬ ಸದುದ್ದೇಶದಿಂದ ಹಲವು ಚಿತ್ರಗಳು  ಆಕರ್ಷಕ ಹೆಸರುಗಳನ್ನು  ಇಡಲು  ಹಾತೊರೆಯುತ್ತಾರೆ. ಈಗ ಇದೇ ರೀತಿ ತಂಡವೂಂದು  ಟೈಟಲ್ ಮೂಲಕ ಗಮನ  ಸೆಳಯುವ ಪ್ರಯತ್ನ ಮಾಡಲಾಗಿ ಒಂದು ಹಂತದಲ್ಲಿ ಸಪಲರಾಗಿದ್ದಾರೆ. ಅದು ‘ಕೃಷ್ಣ ಗಾರ್ಮೆಟ್ಸ್’.  ಹೆಸರು ಕೇಳಿದರೆ ಗಾರ್ಮೆಂಟ್ಸ್ ಕತೆ ಇರಬಹುದೆಂದು ಭಾವಿಸಿದರೆ ನಿಮ್ಮ ಊಹೆ ಸ್ವಲ್ಪ ಮಟ್ಟಿ ಸರಿ ಅನಿಸುತ್ತದೆ.  ರಚನೆ, ಚಿತ್ರಕತೆ, ಸಾಹಿತ್ಯ, ....

966

Read More...

Rathna Manjari.Film Audio Rel.

Saturday, April 20, 2019

ಗುರುಗಳು, ಶಿಷ್ಯರ ಸಮ್ಮುಖದಲ್ಲಿ  ಹಾಡುಗಳ ಅನಾವರಣ        ನಾಗತ್ತಿಹಳ್ಳಿ ಚಂದ್ರಶೇಖರ್  ಸಾರಥ್ಯದ ಟೆಂಟ್ ಸಿನಿಮಾದ ವಿದ್ಯಾರ್ಥಿಗಳು ನಾಯಕ, ನಾಯಕಿ.  ಹಂಸಲೇಖಾ ಒಡೆತನದ ದೇಸಿ ಕಾಲೇಜಿನ ಹುಡುಗರು ಸಂಗೀತ ನಿರ್ದೇಶಕರು, ಸಾಹಿತಿಗಳು.  ಇವರಿಬ್ಬರ ಜುಗಲ್‌ಬಂದಿಯಿಂದ  ಸೆಸ್ಪನ್ಸ್, ಥ್ರಿಲ್ಲರ್ ಮಾದರಿಯ ‘ರತ್ನಮಂಜರಿ’ ಚಿತ್ರವು ಸಿದ್ದಗೊಂಡಿದೆ.  ಪ್ರಚಾರದ ಕೊನೆ ಹಂತವಾಗಿ ಸಿನಿಮಾದ ಧ್ವನಿಸಾಂದ್ರಿಕೆಯು ಲೋಕಾರ್ಪಣೆಗೊಂಡಿತು.  ಸರದಿಯಂತೆ ಎಲ್ಲರಿಗೂ ಮೈಕ್ ಲಭ್ಯವಾಯಿತು.        ಕಿಚ್ಚ ಸಿನಿಮಾದ ಸಂದರ್ಭದಲ್ಲಿ ಹಂಸಲೇಖಾರವರು ಬ್ಯುಸಿ ಇದ್ದರು. ಅವರಿಗೆ ಹದಿನೈದು ನಿಮಿಷ ಸಮಯ ....

1060

Read More...

Karmoda Saridu.Film Press Meet.

Saturday, April 20, 2019

ಸಿನಿಮಾ  ಜೂಜು, ಗೆದ್ದರೆ ಸಂತೋಷ, ಬಿದ್ದರೆ ಬೇಸರ - ಮೇಷ್ಟ್ರು          ಹಿರಿಯ ನಿರ್ದೇಶಕ,ನಿರ್ಮಾಪಕ ನಾಗತ್ತಿಹಳ್ಳಿಚಂದ್ರಶೇಖರ್ ಅವರನ್ನು ಚಂದನವನದಲ್ಲಿ ಗೌರವದಿಂದ ಮೇಷ್ಟ್ರು ಎಂದು ಕರೆಯುತ್ತಾರೆ.  ಶಿಷ್ಯ ನಿರ್ದೇಶನ ಮಾಡಿರುವ ‘ಕಾರ್ಮೋಡ ಸರಿದು’ ಚಿತ್ರತಂಡಕ್ಕೆ  ಶುಭಹಾರೈಸಲು ಆಗಮಿಸಿದ್ದರು.  ಅವರು ಮಾತನಾಡುತ್ತಾ  ಟೆಂಟ್ ಸಿನಿಮಾ ಶುರುಮಾಡಿ ಹತ್ತು ವರ್ಷ ಕಳೆದಿದೆ. ನಮ್ಮ ಶಾಲೆಯಿಂದ ಸಾಕಷ್ಟು ವಿದ್ಯಾರ್ಥಿಗಳು ನಿರ್ದೇಶಕ, ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಒಂದು ಕಡೆ ಆತಂಕ, ಭಯ ಕಾಡುತ್ತಿದೆ. ಅದಕ್ಕೆ ಸಿನಿಮಾ ಎಂಬ ....

1024

Read More...

Maaya Kannadi.Film Press Meet.

Saturday, April 20, 2019

ಸತ್ಯ  ಕತೆಯ  ಮಾಯಾ ಕನ್ನಡಿ         ನಿಜ ಜೀವನದ ಘಟನೆಗಳ ಚಿತ್ರಗಳನ್ನು ಜನರು ಇಷ್ಟ ಪಡುತ್ತಾರೆಂದು ಯಾವ  ಪುಣ್ಯಾತ್ಮ  ಹೇಳಿದರೋ ಅವರಿಗೊಂದು ಧೀರ್ಘದಂಡ ನಮಸ್ಕಾರಗಳು. ಅಂತಹ ಸಿನಿಮಾಗಳ ಸರಪಣಿಗೆ ಹೊಸ ಕೊಂಡಿ ‘ಮಾಯಾ ಕನ್ನಡಿ’ ಸೇರಿಕೊಳ್ಳುತ್ತದೆ.  ವಿದೇಶದಲ್ಲಿ ಬ್ಲೂವೆಲ್ ಆಟವೆಂಬುದು ಅಂದು ಪ್ರಸಿದ್ದಿಯಾಗಿದ್ದು, ಭಾರತದಲ್ಲೂ ಕೆಲವು ಕಾಲ ಚಾಲ್ತಿಯಲ್ಲಿ ಇತ್ತು.  ಇದರಿಂದ ಪ್ರೇರಿತರಾಗಿ ಸಾಕಷ್ಟು ಜನರು ಆತ್ಮಹತ್ಯಗೆ ಶರಣಾಗಿದ್ದರು.  ಸದ್ಯ ಎಲ್ಲಾ ಕಡೆ ಸದರಿ ಆಟವನ್ನು  ನಿಷೇಧಿಸಲಾಗಿದೆ.  ಇಂತಹುದೆ ಘಟನೆಗಳು  ಮತ್ತು ಕಾಲೇಜ್ ಅಂಗಳದಲ್ಲಿ   ನಡೆಯುವ ಕಪೋಲಕಲ್ಪತ ಕತೆಯನ್ನು  ಹೆಕ್ಕಿಕೊಂಡು ....

1075

Read More...

Gara.Film News

Tuesday, April 16, 2019

ಮೇ ೩ರಂದು ‘ಗರ’ ಚಿತ್ರ ತೆರೆಗೆ    ೨೫ಫ಼್ರೇಂ ಫ಼ಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಗರ‘ ಚಿತ್ರ ಮೇ ೩ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.    ಕೆ.ಆರ್.ಮುರಳಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಾಗರ್ ಗುರುರಾಜ್ ಸಂಗೀತ ನೀಡಿದ್ದಾರೆ. ....

942

Read More...

Padde Huli.Releasing Press Meet.

Tuesday, April 16, 2019

ಪಡ್ಡೆ ಹುಲಿ  ಶುಕ್ರವಾರದಿಂದ  ಗರ್ಜನೆ  ಮಾಡಲಿದೆ          ಅದ್ದೂರಿ ಚಿತ್ರ ‘ಪಡ್ಡೆ ಹುಲಿ’ ಆರನೇ ಹಾಗೂ ಕೊನೆ ಬಾರಿ ಚಿತ್ರತಂಡವು  ಮಾಹಿತಿಗಳನ್ನು ಹಂಚಿಕೊಂಡಿತು.  ನಿರ್ದೇಶಕ ಗುರುದೇಶಪಾಂಡೆ ಮೈಕ್ ತೆಗೆದುಕೊಂಡು ರವಿ ಸರ್ ಅನಿಸಿದ್ದನ್ನು ನೇರವಾಗಿ ಸೆಟ್‌ನಲ್ಲಿ ಹೇಳುತ್ತಿದ್ದರು.  ಅವರ ಜೊತೆ ಕೆಲಸ ಮಾಡಬೇಕಂಬ ದೂಡ್ಡ ಕನಸು ಇದರ ಮೂಲಕ ಈಡೇರಿದೆ. ಹತ್ತು ಹಾಡುಗಳನ್ನು ಹಾಕಿಕೊಳ್ಳಲು ಅವರೇ ಪ್ರೇರಣೆಯಾಗಿದ್ದಾರೆ.  ಅಪ್ಪ ಮಗನ ಭಾವನೆಗಳ ದೃಶ್ಯಗಳು ಚೆನ್ನಾಗಿ ಬಂದಿದೆ. ಇವತ್ತಿನ ತಲಮಾರಿಗೆ ಒಳ್ಳೆಯ ಸಂದೇಶವನ್ನು ಹೇಳಲಾಗಿದೆ. ಚಿತ್ರಕ್ಕೆ ಮರುಗು ತರಲು ಪುನೀತ್‌ರಾಜ್‌ಕುಮಾರ್, ....

884

Read More...

Mahakavya.Film Press Meet.

Tuesday, April 16, 2019

                ಮಹಾಕಾವ್ಯ ನೋಡಲು ಐದು ಕಾರಣಗಳು       ಐತಿಹಾಸಿಕ, ಪೌರಾಣಿಕ, ಚಾರತ್ರಿಕ ಚಿತ್ರವೆಂದು ಸುದ್ದಿಯಾಗಿರುವ ‘ಮಹಾಕಾವ್ಯ’ ನೋಡಲು ಚಿತ್ರಕತೆ, ನಿರ್ದೇಶನ ಹಾಗೂ ದುಯೋರ್ಧನ ಪಾತ್ರ ಮಾಡಿರುವ ಶ್ರೀದರ್ಶನ್ ಐದು ಕಾರಣಗಳನ್ನು ನೀಡುತ್ತಾರೆ.      ಹತ್ತನೇ ಶತಮಾನದ ಸಾಹಿತ್ಯವಿದೆ. ವೈಭವದ ಸೆಟ್‌ಗಳು, ಶ್ರೀಮಂತ ಉಡುಗೆ ತೊಡುಗೆಗಳು ಕಣ್ಣಿಗೆ ಕಂಪು, ಹಿಂಪು, ತಂಪು ಕೊಡುತ್ತದೆ. ಹಳಗನ್ನಡದ ೩೯ ಕಾವ್ಯಗಳನ್ನು ಬಳಸಲಾಗಿದೆ. ರಾಜವೈಭವವನ್ನು ಮರುಕಳಿಸುತ್ತದೆ. ೫೮ ಗ್ರಂಥಗಳನ್ನು  ಓದಿ ಅದರಲ್ಲಿ ಪಂಪನ ಶಾಂತಿನಾಥಪುರಾಣ, ರನ್ನನ ಗದಾಯುದ್ದ ಮತ್ತು ಪೊನ್ನನ ಶಕ್ತಿ ಪುರಾಣದ ಭಾಗಗಳನ್ನು ....

1011

Read More...

Kamar Film Factory Launches its First Ftv Fashion Calendar.

Monday, April 15, 2019

ತಾರಾಮಣಿಯರ  ಫ್ಯಾಷನ್  ಕ್ಯಾಲೆಂಡರ್        ಅಂತರರಾಷ್ಟ್ರೀಯ ಮಟ್ಟದ ಫ್ಯಾಷನ್‌ನ್ನು ಭಾರತೀಯರಿಗೆ ತಲುಪಿಸುವ ಪ್ರಯುಕ್ತ ೧೯೯೭ ರಲ್ಲಿ   ‘ಫ್ಯಾಷನ್ ಟಿವಿ’ಯು ಅತ್ಯತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಬೇರೆ ಯಾವ ಜಾಲತಾಣಗಳಲ್ಲೂ  ಸಿಗದ ಫ್ಯಾಷನ್ ಕುರಿತ ಮಾಹಿತಿಯನ್ನು ವಸ್ತುನಿಷ್ಟವಾಗಿ ನೀಡುವ ಏಕೈಕ ವಾಹಿನಿಯಾಗಿದ್ದು ಮಾಡ್ರನ್ ಜಗತ್ತಿನ ಅತ್ಯದ್ಬುತ ಚಿತ್ರಗಳು, ಪ್ರತ್ಯೇಕ ಮಾಹಿತಿಗಳೊಂದಿಗೆ  ವಿಶ್ವಮಟ್ಟದ  ಬ್ರಾಂಡ್‌ಗಳನ್ನು ತನ್ನತ್ತ ಸೆಳಯುತ್ತಿರುವ ವಾಹಿನಿ ಇದಾಗಿದೆ.  ಸದರಿ ವಾಹಿನಿಯಿಂದ ಪ್ರತಿ ವರ್ಷ ತಾರೆಯರು, ಮಾಡೆಲ್‌ಗಳ ಕ್ಯಾಲೆಂಡರ್‌ಗಳು ಬರುತ್ತಿದೆ. ....

951

Read More...

Kavacha.Film Success Meet.

Sunday, April 14, 2019

ಕವಚಗೆ ತಲೆದೂಗಿನ ಪ್ರೇಕ್ಷಕ ಮಹಾಪ್ರಭುಗಳು           ಹದಿನಾಲ್ಕು ವರ್ಷದ ನಂತರ ಶಿವರಾಜ್‌ಕುಮಾರ್ ಅಭಿನಯಿಸಿರುವ ರಿಮೇಕ್ ಚಿತ್ರ ‘ಕವಚ’ಕ್ಕೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂತೋಷಕೂಟದಲ್ಲಿ ಮಾತನಾಡಿದ ವಸಿಷ್ಟಸಿಂಹ   ಪ್ರೇಕ್ಷಕರು ಮೆಚ್ಚಿಕೊಂಡರೆ ಚಿತ್ರಕ್ಕೆ ನಿಜವಾದ ಬೆಲೆ ಸಿಗುತ್ತದೆ.  ಗೋಧಿ ಬಣ್ಣದಲ್ಲಿ ಖಳನಾಗಿ ಅಭಿನಯಿಸಿದ್ದು, ಅದರ ಛಾಯೆ ಇಲ್ಲಿಯೂ ಮುಂದುವರೆದಿದೆ.  ಖಳನಟ ಸತ್ತಾಗ ಕಣ್ಣೀರು ಹಾಕಿದ್ದು ಮೊದಲು ಎನ್ನಬಹುದು.  ಕುಟುಂಬಸಮೇತ ಹೋಗುತ್ತಿದ್ದಾರೆ. ಸಾರ್ವತ್ರಿಕ ಕತೆಯಾಗಿದ್ದರಿಂದ ಎಲ್ಲರಿಗೂ ಇಷ್ಟವಾಗಿದೆ. ಒಳ್ಳೆ ಉದ್ದೇಶ,  ಸ್ವಾವಲಂಬಿ ಬದುಕನ್ನು ....

939

Read More...
Copyright@2018 Chitralahari | All Rights Reserved. Photo Journalist K.S. Mokshendra,