Kaddu Mucchi.Film Press Meet

Monday, February 18, 2019

              

ಅಂದು ಮೋಷನ್ ಇಂದು ಪ್ರಮೋಷನ್

       ‘ಕದ್ದು ಮುಚ್ಚಿ’ ಕೊನೆ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ವಸಂತರಾಜ್ ಮಾತನಾಡಿ ಅಗರ್ಭ ಶ್ರೀಮಂತನ ಮಗನಾಗಿ, ಎಲ್ಲವು  ಇದ್ದರೂ  ಹಿರಿಯರ ಪ್ರೀತಿಯಿಂದ ವಂಚಿತನಾದಾಗ ಒಳ್ಳೆದು, ಕೆಟ್ಟದು ಅಗಬಹುದು. ಅದನ್ನು ಪಡೆಯಲು ದೂರದ ಊರಿಗೆ ಹೋಗುತ್ತಾನೆ. ಅಲ್ಲಿ ಹುಡುಗಿಯನ್ನು ನೋಡಿ ಮನಸೋಲುತ್ತಾನೆ. ಮುಂದೆ ಆತನ ಬದುಕು ಎರಡರಲ್ಲಿ ಯಾವುದು ಆಗುತ್ತದೆ ಎಂಬುದು ಒಂದು ಏಳೆಯ ಕತೆಯಾಗಿದೆ. ಗುರುಗಳು ಆರು ಹಾಡಿಗೆ  ಅರ್ಥಪೂರ್ಣ ಸಾಹಿತ್ಯ, ಒಳ್ಳೆಯ ರಾಗ ನೀಡಿದ್ದಾರೆ ಎಂದರು. 

892

Read More...

Striker.Film Press Meet

Monday, February 18, 2019

ಜನರ  ಎದುರು  ಸ್ಟ್ರೈಕರ್          ‘ಸ್ಟ್ರೈಕರ್’  ಚಿತ್ರದ ಬಿಡುಗಡೆ ಪೂರ್ವ ಸುದ್ದಿಗೋಷ್ಟಿಯಲ್ಲಿ  ಮೈಕ್ ತೆಗೆದುಕೊಂಡ ನಿರೂಪಕಿ ಅನುಪಮಾಭಟ್  ಮಾತನಾಡುತ್ತಾ ಏಕಾಏಕಿ ನಿಲ್ಲಿಸಿ, ನೀರು ಕೇಳಿದರು. ಹಾಗೆ ಸುಮ್ಮನೆ ಎಲ್ಲಾ ಕಡೆ ನೋಡುತ್ತಾ  ಇದು ಕನಸಾ-ನನಸಾ ಅಂತ ಹೇಳಿದಾಗ ಎಲ್ಲರಿಗೂ  ಒಂದು ಕ್ಷಣ ಗಾಬರಿಯಾಗಿತ್ತು.  ನಂತರ ಯೆಸ್ ಇದೇ ರೀತಿ ಗೊಂದಲಗಳು, ದುಗಡ ಎಲ್ಲವು ಸಿನಿಮಾದ ಕತೆಯಾಗಿದೆ ಅಂತ ಮುಂದಿನ ಕೆಲಸ ಶುರು ಮಾಡಿದರು.          ಬಿಡುಗಡೆ ಹಂತಕ್ಕೆ ಬಂದಿರುವ ಕಾರಣ ಖುಷಿ ಆಗಿದೆ.  ಅನಾಥನಾಗಿ  ಸೈಕಲಾಜಿಕಲ್ ಸಮಸ್ಯೆ ಇರುವ ಹುಡುಗನಿಗೆ  ಪ್ರಾರಂಭದ ಒಂದು ಘಟನೆಯಿಂದ  ರೋಚಕತೆ ಸನ್ನಿವೇಶಗಳು ....

868

Read More...

Kadava.Film Muhurtha

Monday, February 18, 2019

ಜಿಮ್ ರಘು ಈಗ ನಾಯಕ          ಮಂಡ್ಯಾದಲ್ಲಿ  ಇಬ್ಬರು  ಪ್ರೀತಿ ಮಾಡಿದ್ದರಿಂದ ಹುಡುಗಿ ಕಡೆಯವರು ಅವನನ್ನು  ಕೂಡಿಹಾಕಿ ಎರಡು ಕಣ್ಣುಗಳನ್ನು  ತೆಗೆದುಹಾಕಿದ ಘೋರ ಸುದ್ದಿಯು ಹತ್ತು ವರ್ಷಗಳ ಹಿಂದೆ  ನಡೆದಿತ್ತು. ಕಳೆದ ವರ್ಷ ಬಿಡುಗಡೆಗೊಂಡ ‘ರಘುವೀರ’ ಚಿತ್ರದ ಕ್ಲೈಮಾಕ್ಸ್‌ದಲ್ಲಿ  ಇದನ್ನೆ ಬಳಸಲಾಗಿತ್ತು.  ಕುರುಡನ ಹೆಸರು ರಘು ಆಗಿದ್ದು ಈತ ಸದ್ಯ ಜಿಮ್ ನಡೆಸುತ್ತಾ  ಜಿಮ್‌ರಘು ಆಗಿ ಸುಖದಿಂದ ಜೀವನ ನಡೆಸುತ್ತಿದ್ದಾರೆ. ಇದನ್ನು ಹೇಳಲು  ಪೀಠಿಕೆ ಇದೆ.         ಈಗ ‘ಕಡವ’ ಎನ್ನುವ ಸಿನಿಮಾದಲ್ಲಿ  ಇವರು ನಾಯಕನಾಗಿ ನಟಿಸುತ್ತಿದ್ದು, ಬಹು ವರ್ಷಗಳಿಂದ ನಟನಾಗಬೇಕೆಂದು ಕನಸು ....

1077

Read More...

Jark.Film Audio Rel.

Saturday, February 16, 2019

ಟ್ರೈಲರ್  ನೋಡಿ  ಜರ್ಕ್ ಆದರು          ಶನಿವಾರ ಕಲಾವಿದರ ಸಂಘದಲ್ಲಿ ಟ್ರೈಲರ್ ನೋಡಿದವರು ಒಂದು ಕ್ಷಣ ಜರ್ಕ್ ಆದರು.  ಅದು ಆಗಿದ್ದು ‘ಜರ್ಕ್’ ಸಿನಿಮಾದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮ.  ಮೆಟ್ರೋದಲ್ಲಿ ಕೆಲಸ ಮಾಡುತ್ತಾ ಅಂಶಕಾಲಿಕ ಸಮಯದಲ್ಲಿ ಚಿತ್ರಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮಹಾಂತೇಶ್‌ಮದಕರಿ ಸಿನಿಮಾವನ್ನು ಬಣ್ಣಿಸಿದ ರೀತಿ ಹೀಗಿತ್ತು:        ಸಮಾಜದ ಅಂಕುಡೊಂಕುಗಳನ್ನು  ತಿದ್ದಬೇಕೆಂದು ಮನಸ್ಸು ಯಾವಾಗಲೂ ಹೇಳುತ್ತಿತ್ತು. ಇದಕ್ಕಾಗಿ ಸಿನಿಮಾ ಮಾಡಬೇಕೆಂಬ ತುಡಿತವಿತ್ತು. ೨೫೦೦ ಕವಿತೆಗಳನ್ನು ಬರೆದಿರುವ ನನಗೆ  ನಾಲ್ಕು ಗೆಳಯರು ....

1506

Read More...

Chambal.Film Rel Press Meet.

Saturday, February 16, 2019

ಸುಭಾಷ್ ಶೀರ್ಷಿಕೆ ಚಂಬಲ್ ಆಯ್ತು          ದಕ್ಷ ಅಧಿಕಾರಿ ಡಿ.ಕೆ.ರವಿ ಆಧಾರಿತ ಕತೆಯಾಗಿದೆ ಎಂದು ಸುದ್ದಿಯಾಗಿರುವ ‘ಚಂಬಲ್’ ಚಿತ್ರವು ಬಿಡುಗಡೆ  ಸನಿಹಕ್ಕೆ ಬರುತ್ತಿರುವುದರಿಂದ  ಕೊನೆ ಬಾರಿ ತಂಡವು ಮಾದ್ಯಮದವರನ್ನು ಭೇಟಿ ಮಾಡಿ ಮತ್ತಷ್ಟು ವಿಷಯಗಳನ್ನು ಹಂಚಿಕೊಂಡಿತು.  ಮೈಕ್ ತೆಗೆದುಕೊಂಡ ನೀನಾಸಂಸತೀಶ್ ಎಸ್‌ಎಸ್‌ಎಲ್‌ಸಿ ಓದಿರುವ ನನಗೆ ತೆರೆ ಮೇಲೆ ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವುದು ಖುಷಿ ನೀಡಿದೆ.  ನಿಜ ಜೀವನದ ಭಾಷೆ, ವೇಷ,ಗುಣ ಪಾತ್ರದಲ್ಲಿ ಅಜಗಜಾಂತರ ವ್ಯತ್ಯಾಸವಿದೆ.  ನಿಷ್ಟಾವಂತ ಅಧಿಕಾರಿ ಸಮಾಜಕ್ಕೆ ಹೇಗೆ ಉಪಕಾರಿಯಾಗುತ್ತಾರೆ ಎಂಬುದನ್ನು ಹೇಳಲಾಗಿದೆ. ಸಚಿವರ ನಂತರ  ....

844

Read More...

Yada Yadaahi Dharmasya.Film Triler Rel.

Friday, February 15, 2019

ಆಕ್ಷನ್  ಚಿತ್ರದಲ್ಲಿ  ವಿಜಯ್‌ರಾಘವೇಂದ್ರ          ಲವರ್‌ಬಾಯ್, ಕುರುಡ, ತ್ಯಾಗಿ, ಮೃಧು  ಸ್ವಭಾವದವನಾಗಿ ಕಾಣಿಸಿಕೊಂಡಿದ್ದ  ಸ್ಪುರದ್ರೂಪಿ ನಟ ವಿಜಯರಾಘವೇಂದ್ರ ಚೂಚ್ಚಲಬಾರಿ ‘ಯದಾ ಯದಾ ಹೀ ಧರ್ಮಸ್ಯ’ ಚಿತ್ರದಲ್ಲಿ  ಆರು ಹೊಡೆದಾಟವನ್ನು  ಮಾಡುವುದರೊಂದಿಗೆ ಆಕ್ಷನ್ ಹೀರೋ ಪಟ್ಟವನ್ನು ಅಲಂಕರಿಸಿಕೊಂಡಿದ್ದಾರೆ.  ಮೊದಲ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ  ನಿರ್ದೇಶಕರು ಕತೆ ಹೇಳಿದಾಗ ಈ ಪಾತ್ರ ನನ್ನಿಂದ ಮಾಡಲು ಸಾದ್ಯನಾ ಅಂತ ಪ್ರಶ್ನೆ ಮಾಡಿದ್ದೆ. ಅವರು ನೀವು ಮಾಡಬಹುದೆಂದು  ಧೈರ್ಯ ತುಂಬಿದರು. ಆ ನಂಬಿಕೆಯಿಂದಲೇ ಬೇಷರತ್‌ಆಗಿ ಕ್ಯಾಮಾರ ಮುಂದೆ ನಿಂತಿದ್ದೇನೆ. ದುಡ್ಡಿಗಾಗಿ ....

401

Read More...

Jakannachaari Avana Thama Suklachari.Film Audio Rel.

Friday, February 15, 2019

ಮೊದಲಬಾರಿ ವಿಕಲಚೇತನ ಮಕ್ಕಳ ನಟನೆ        ಎಲ್ಲವು ಸರಿಯಾಗಿ ಇದ್ದು ನಟಿಸುವುದೇ ಕಷ್ಟ. ಆದರೆ ‘ಜಕಣಾಚಾರಿ ಅವನ ತಮ್ಮ ಶುಕ್ಲಚಾರಿ’ ಎನ್ನುವ ಚಿತ್ರದಲ್ಲಿ ಇಬ್ಬರು ವಿಕಲಚೇತನ ಮಕ್ಕಳು ಅಭಿನಯಿಸಿರುವುದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ  ಮೊದಲು ಎನ್ನಬಹುದಾಗಿದೆ.  ಚಾಮರಾಜನಗರದ ಮಹೇಶ್ ಕುರುಡನಾಗಿ ಶುಕ್ಲಚಾರಿ,  ಬೆಂಗಳೂರಿನ  ಜಯ್ಯದ್ ಎರಡು ಕಾಲುಗಳ ಇಲ್ಲದ ಜಕಣಾಚಾರಿ.  ಸಿನಿಮಾ ಕುರಿತು ಹೇಳುವುದಾದರೆ ಪ್ರಪಂಚದಲ್ಲಿ ದುಡ್ಡು ಇರೋರು ಏನು ಬೇಕಾದರೂ ಮಾಡಿ ತೋರಿಸಬಹುದು. ಚೆನ್ನಾಗಿರುವವರು ಸಾಧಿಸಿ ಜೀವನಶೈಲಿಯಲ್ಲಿ  ಬದಲಾಗಬಹುದು. ಇವೆಲ್ಲವುಗಳನ್ನು ಬದಿಗಿಟ್ಟು ನೋಡಿದರೆ  ವಿಕಲಚೇತನ ಮಕ್ಕಳ ದೇಹ  ....

369

Read More...

Sididedda Gandu.Film Audio Rel

Friday, February 15, 2019

ಹೊಸ  ಸಿಡಿದೆದ್ದಗಂಡು           ೯೦ರ ದಶಕದಲ್ಲಿ  ಟೈಗರ್ ಪ್ರಭಾಕರ್ ಅಭಿನಯದಲ್ಲಿ  ‘ಸಿಡಿದೆದ್ದಗಂಡು’ ಚಿತ್ರವೊಂದು  ತೆರೆಕಂಡಿತ್ತು.  ಇಪ್ಪತ್ತೈದು ವರ್ಷಗಳ ನಂತರ ಇದೇ ಹೆಸರಿನ ಮೇಲೆ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ.  ಪ್ರಚಾರದ ಮೊದಲ ಹಂತದವಾಗಿ ಆಡಿಯೋ ಬಿಡುಗಡೆ ನೆಪ ಮಾಡಿಕೊಂಡು ತಂಡವು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಾದ್ಯಮದ ಮುಂದೆ  ಹಾಜರಾಗಿತ್ತು.         ಚಿತ್ರಕತೆ, ಸಂಭಾಷಣೆ ಬರೆದು ಮೊದಲಬಾರಿ ನಿರ್ದೇಶನ ಮಾಡಿರುವ ಎಸ್.ವಿಠಲ್‌ಕುಮಾರ್ ಮಾತನಾಡಿ ಇದೊಂದು ಕಾಲೇಜು  ಹುಡುಗರ ಕತೆಯಾಗಿದೆ.  ಸೆಸ್ಪನ್ಸ್, ಥ್ರಿಲ್ಲರ್  ಆಗಿದ್ದರಿಂದ ಒಂದು ಸುಳಿವನ್ನು ಹೇಳಿದರೂ ಸಾರಾಂಶ ....

363

Read More...

Daali.Film Tittle Rel

Thursday, February 14, 2019

  ಡಾಲಿ  ಪೋಸ್ಟರ್ ಬಿಡುಗಡೆ         ಟಗರು  ಚಿತ್ರದಲ್ಲಿ ಖಳನಟನಾಗಿ ಡಾಲಿ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದ ಧನಂಜಯ್‌ಗೆ  ಪಾತ್ರವು ಪ್ರಸಿದ್ದಿಯಾಗಿ ಅಂತಹುದೆ ರೋಲ್‌ಗಳು ಸಿಗುತ್ತಿವೆ. ಅದರಂತೆ  ಮೊದಲಸಲ, ಎರಡನೆ ಸಲ ನಿರ್ಮಾಣ ಮಾಡಿರುವ ಯೋಗೇಶ್‌ನಾರಾಯಣ್  ೧೮ ತಿಂಗಳ ಕೆಳಗೆ ‘ಡಾಲಿ’ ಹೆಸರಿನ ಚಿತ್ರವನ್ನು ಲಾಂಚ್ ಮಾಡಲು ಸಿದ್ದರಿದ್ದರು.  ಸಿನಿಮಾದ ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಅವರು ಮಾತನಾಡಿ ಹಿಂದಿನ ಎರಡು ಸಿನಿಮಾದಂತೆ ಪಂಚವಾರ್ಷಿಕ ಯೋಜನೆ ಆಗುವುದಿಲ್ಲ. ಎಂಟು ತಿಂಗಳ ಒಳಗೆ ಮುಗಿಸಲು  ಬದ್ದರಾಗಿದ್ದೇವೆ. ಇಲ್ಲಿಯವರೆಗೂ ೨೫ ಕತೆಗಳನ್ನು ಕೇಳಲಾಗಿ, ೧೮ ನಿರ್ದೇಶಕರುಗಳನ್ನು ಭೇಟಿ ....

383

Read More...

Om Prema.Film Tittle Rel

Thursday, February 14, 2019

ರಿಲೀಸ್  ಆಯ್ತು ಓಂ ಪ್ರೇಮ  ಪೋಸ್ಟರ್          ಚಿತ್ರವನ್ನು ಜನರಿಗೆ ತಲುಪಿಸುವ ಚಾಣಾಕ್ಷತೆ ಇರುವುದು ಪ್ರೇಮ್, ಆರ್.ಚಂದ್ರು, ನಾಗಶೇಖರ್ ಸೇರಿದಂತೆ ಕೆಲವರಿಂದ ಮಾತ್ರ ಸಾದ್ಯ. ಅದರಿಂದಲೇ  ಇವರ  ಸಿನಿಮಾಗಳು  ಬಿಡುಗಡೆ ಹಂತಕ್ಕೆ ಬರುವ ಹೊತ್ತಿಗೆ ವೈರಲ್ ಆಗಿರುತ್ತದೆ. ಇವರ ನಡೆಯನ್ನೆ ಹಿಂಬಾಲಿಸುತ್ತಿರುವ ಕೊಪ್ಪಳದ  ಅಡವಿಭಾವಿಶರಣ್  ‘ಒಂ ಪ್ರೇಮ’ ಚಿತ್ರಕ್ಕೆ  ಕತೆ,ಚಿತ್ರಕತೆ, ಸಂಭಾಷಣೆ ಬರೆದು ಮೊದಲಬಾರಿ ನಿರ್ದೇಶನದ ಚುಕ್ಕಾಣಿ ಹಿಡಿಯಲಿದ್ದಾರೆ. ನಾಗತ್ತಿಹಳ್ಳಿ ಚಂದ್ರಶೇಖರ್ ಇನ್ನು ಅನೇಕ ನಿರ್ದೇಶಕರ ಬಳಿ ಕೆಲಸ ಮಾಡಿದ ಅನುಭವ ಇದೆಯಂತೆ. ಪ್ರಚಾರದ ಹಂತವಾಗಿ ಚಿತ್ರದ ಪೋಸ್ಟರ್ ....

1355

Read More...

Sadhguna Sampanna Madavau 100%.Film Pooja

Thursday, February 14, 2019

ಆಸ್ತಿಕನಾದರು  ರವಿಶಂಕರ್           ರವಿಶಂಕರ್ ಹೆಸರನ್ನು ನೆನಪಿಸಿಕೊಂಡರೆ ತಟ್ಟನೆ  ಆರ್ಮುಗಂ  ಪಾತ್ರ ಕಣ್ಣಮುಂದೆ ಬರುತ್ತದೆ.  ಕಂಪೆಗೌಡದಲ್ಲಿ ಖಳನಟನಾಗಿ ಇದೇ ಹೆಸರಿನಲ್ಲಿ ಗುರುತಿಸಿಕೊಂಡು ಇಂದು ಪ್ರಸಿದ್ದರಾಗಿ ವಿನೂತನ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಸದ್ಯ ಅವರು ದೇವರಲ್ಲಿ ಅನುರಕ್ತರಾಗುತ್ತಿದ್ದಾರೆ. ಎಲ್ಲವನ್ನು ಬಿಟ್ಟು ಹೀಗೇಕೆ ಆದರು ಅಂದುಕೊಳ್ಳಬಹುದು. ‘ಸದ್ಗುಣ ಸಂಪನ್ನ ಮಾದವ ೧೦೦%’ ಚಿತ್ರದಲ್ಲಿ ಈ ರೀತಿಯಾಗಿ ನೋಡಬಹುದು.  ಅಂದರೆ  ಇವರ ಹೆಸರು, ಪಾತ್ರ ಎಲ್ಲವು ಶೀರ್ಷಿಕೆಯಲ್ಲಿ ಹೇಳಲಿದೆ.  ಸಾಮಾನ್ಯ ಮನುಷ್ಯನಾಗಿ ದೇವರನ್ನು ಅಪಾರವಾಗಿ ನಂಬುವ, ಇದರಲ್ಲಿ ಭಕ್ರಿ ಪರವಶನಾದರೆ ಏನು ಆಗೋಲ್ಲವೆಂದು ....

373

Read More...

Play Flicks Company Launch.

Tuesday, February 12, 2019

ಕನ್ನಡದ  ಮೊದಲ  ಆಪ್   ಫ್ಲೆಫ್ಲಿಕ್ಸ್         ತಂತ್ರಜ್ಘಾನ ಬೆಳೆದಂತೆ ಪ್ರಚಲಿತ ಜನರು ಅದಕ್ಕೆ  ಹೊಂದಿಕೊಳ್ಳುತ್ತಿದ್ದಾರೆ. ಇಂದಿನ ಯುವ ಜನಾಂಗವು ಯಾವಾಗಲೂ ಫಾಸ್ಟ್  ಅಂತ  ಅದೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ.  ಚಿತ್ರಮಂದಿರಕ್ಕೆ  ಹೋದರೆ ಸಮಯ, ದುಡ್ಡು ವ್ಯರ್ಥವೆಂದು ಭಾವಿಸಿ ಎಲ್ಲವನ್ನು ತಮ್ಮಲ್ಲಿಯೇ  ಸಿಗಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಸುಲಭವಾಗಿ ಸಿಗುವುದು ಟಿವಿ, ಕಂಪ್ಯೂಟರ್, ಮೊಬೈಲ್. ಇವುಗಳ ಮೂಲಕ ತಮಗೆ ಬೇಕಾದ್ದನ್ನು  ವೀಕ್ಷಿಸಿ ಖುಷಿ ಪಡುತ್ತಾರೆ.  ಈ ಸಾಲಿಗೆ ಸದ್ಯ ಕಣ್ಣ ಮುಂದೆ ಬರುವುದು ಅಮೆಜಾನ್,  ನೆಟ್‌ಫ್ಲಿಕ್ಸ್. ಇವರಡು ಸಂಸ್ಥೆಗಳು  ಎಲ್ಲಾ ಭಾಷೆಯಲ್ಲಿ ....

1106

Read More...

Jatti.Film Press Meet

Tuesday, February 12, 2019

ಉತ್ತರ ಕರ್ನಾಟಕ ನೈಜ ಘಟನೆಯ ಜಟ್ಟಿ           ಕುಸ್ತಿ ಕುರಿತಂತೆ ಸುದೀಪ್ ನಟನೆಯ   ಪೈಲ್ವಾನ್, ದುನಿಯಾ ವಿಜಯ್  ಅಭಿನಯಿಸಲಿರುವ  ಸುಲ್ತಾನ್ ಚಿತ್ರಗಳ ಮಧ್ಯೆ  ಉತ್ತರ ಕರ್ನಾಟಕದಲ್ಲಿ  ನಡೆದ  ಘಟನಾವಳಿಯನ್ನು  ತೆಗೆದುಕೊಂಡ ‘ಜಟ್ಟಿ’ ಚಿತ್ರವೊಂದು  ಸೆಟ್ಟೇರುತ್ತಿದೆ.  ಈ ಭಾಗದ ಪೈಲ್ವಾನರಿಗೆ ಸತತವಾಗಿ ಮೂರು  ಬಾರಿ ಗೆದ್ದಲ್ಲಿ ಇದೇ ಶೀರ್ಷಿಕೆ ಬಿರುದನ್ನು ನೀಡುತ್ತಾರೆ. ಸದರಿ ಮಣ್ಣಿನ ಕುಸ್ತಿಯು ಹೆಚ್ಚು ಬಿಜಾಪುರದಲ್ಲಿ ಪ್ರಸಿದ್ದಿಯಾಗಿದೆ. ಅಲ್ಲಿರುವ ಲಾಲಿ ಎನ್ನುವ ಹುಡುಗ ಜಟ್ಟಿಯಾಗಿದ್ದು, ಈಗ ನಿಧನ ಹೊಂದಿದ್ದಾರೆ. ಇವರದೆ ಕತೆಯನ್ನು ತಗೆದುಕೊಂಡು  ಅದೇ ಮೂಲದವರಾದ ....

867

Read More...

Mahakavya.Film Press Meet

Tuesday, February 12, 2019

                     ಐತಿಹಾಸಿಕ, ಚರಿತ್ರಾರ್ಹದ  ಮಹಾಕಾವ್ಯ         ಮಯೂರ, ಬಬ್ರುವಾಹನ ಚಿತ್ರಗಳನ್ನು ನೆನಪಿಸುವ ‘ಮಹಾಕಾವ್ಯ’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಚಿತ್ರಕತೆ, ನಿರ್ದೇಶನ ಹಾಗೂ ದುಯೋರ್ಧನ ಪಾತ್ರ ಮಾಡಿರುವ ಶ್ರೀದರ್ಶನ್ ಶೀರ್ಷಿಕೆಯ ಕುರಿತು ಹೇಳಿಕೊಂಡ ಪರಿ ಹೀಗಿತ್ತು:       ಎಸ್‌ಆರ್‌ಕೆ ಪಿಕ್ಚರ‍್ಸ್  ೧೯೯೪ರಲ್ಲಿ ಎದ್ದಿದೆ ಗದ್ದಲ ಚಿತ್ರ ನಿರ್ಮಾಣದ ತರುವಾಯ ಇದೇ ಬ್ಯಾನಡಿನಡಿ ಎರಡನೆ ಪ್ರಯತ್ನ ಮಾಡಲಾಗಿದೆ. ೧೯೬೪ರಲ್ಲಿ ಡಾ.ರಾಜ್‌ಕುಮಾರ್ ಅಭಿನಯದ ಶಿವಲಿಂಗ ಮಹಾತ್ಮೆ ಚಿತ್ರಕ್ಕೆ ಕ್ಲಾಪ್ ಬಾಯ್ ಆಗಿ ಸೇರಿಕೊಂಡು ಮುಂದೆ ಗುಬ್ಬಿ ವೀರಣ್ಣ ರಂಗಭೂಮಿಯಲ್ಲಿ ....

1135

Read More...

Dini Cini Creations Company Launch

Monday, February 11, 2019

ನಿನ್ನ  ಗುಂಗಲಿ  ವಿಡಿಯೋ  ಆಲ್ಬಂ           ಡಿನಿ ಸಿನಿ ಕ್ರಿಯೇಶನ್ಸ್  ಅವರ ನೂತನ ಸಂಸ್ಥೆ ‘ಡಿ ಸಿ ರಿಕಾರ್ಡ್ಸ್’ ಸಂಸ್ಥೆಯು ಪ್ರಾರಂಭವಾಗಿದೆ. ಇದರ ಮೂಲಕ ಹಲವು ನೂತನ ಪ್ರತಿಭೆಗಳಿಗೆ ವೇದಿಕೆ ಮಾಡಿಕೊಡುತ್ತಿದ್ದಾರೆ.  ಇದರ ಮಾಲೀಕರಾಗಿರುವ ದಿನೇಶ್  ಒಂದು ಕಾಲದಲ್ಲಿ ಚಂದನ್‌ಶೆಟ್ಟಿ ಏನೂ ಇಲ್ಲದ ಸಂದರ್ಭದಲ್ಲಿ ಕರೆದು ಸಹಾಯ ಮಾಡಿದ್ದಾರೆ.    ‘ಹಾಳಗೋದೆ’ ಆಲ್ಬಂ ಚಿತ್ರೀಕರಣ ನಡೆಸಲು  ಹಣದ ಕೊರತೆ ಉಂಟಾಗಿದೆ.  ಇದನ್ನು ಅರಿತು ಲೈಟ್ ಹಾಗೂ ಇತೆರೆ ಉಪಕರಣಗಳನ್ನು ತೆಗೆದುಕೊಳ್ಳಲು ಐವತ್ತು  ಸಾವಿರ ರೂಪಾಯಿ ನೀಡಿದ್ದಾರೆ. ಇದರಿಂದ ಹಾಡನ್ನು  ಮುಗಿಸಿ, ಎಷ್ಟರ ಮಟ್ಟಿಗೆ ಪ್ರಸಿದ್ದಿಯಾಗಿದೆ ....

996

Read More...

Film"O".Film Press Meet

Monday, February 11, 2019

‘ಒ’ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ           ಏಕಾಕ್ಷರ ಫಿಲ್ಮ್ಸ್ ಅಡಿಯಲ್ಲಿ ‘ಒ’ ಕನ್ನಡ ಸಿನಿಮಾ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ನೆರವೇರಿದೆ. ಒಂದೇ ಅಕ್ಷರದ ಸಿನಿಮಾ ‘ಒ’ ಚಿತ್ರಕ್ಕೆ ಶುಭ ಹಾರೈಸಿದವರು ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್ ಎ ಚಿನ್ನೇ ಗೌಡ ಹಾಗೂ ಕಾರ್ಯದರ್ಶಿ ಬಾ ಮಾ ಹರೀಶ್. ಚಿತ್ರದ ಪೋಸ್ಟರ್ ಅನ್ನು  ಶಿವರಾಜಕುಮಾರ್ ಅವರ ಸ್ವಗೃಹದಲ್ಲಿ ಬಿಡುಗಡೆ ಮಾಡಿದ್ದಾರೆ.         ತಲಕಾಡು ಮೂಲದ ಕಿರಣ್‌ತಲಕಾಡ್ ೧೩ ವರ್ಷಗಳ ಕಾಲ ಭಾರತ ಹಾಗೂ ಚೈನಾ ದೇಶದ ನಡುವೆ ಆಮದು ವ್ಯಾಪಾರಿ ಆಗಿದ್ದವರು.  ಚಿಕ್ಕ ವಯಸ್ಸಿನಲ್ಲಿ ನಟ ಆಗಬೇಕು ....

1107

Read More...

Asura Samhara.Film Press Meet

Monday, February 11, 2019

ನೈಜ ಘಟನೆಯ ಚಿತ್ರ         ಎಂಟು ವರ್ಷಗಳ ಕೆಳಗೆ ವಿಬ್‌ಗಯಾರ್ ಶಾಲೆಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದು ಇಡೀ ದೇಶವೇ ತಲ್ಲಣಿಸಿತ್ತು. ಇದರಿಂದ ಸ್ಪೂರ್ತಿ ಪಡೆದುಕೊಂಡು  ಶಿವಾರ್ಪಣಮಸ್ತು ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ‘ಅಸುರ ಸಂಹಾರ’ ಎನ್ನುವ ಚಿತ್ರಕ್ಕೆ ಕತೆ,ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವುದು ಪ್ರದೀಪ್‌ಅರಸು. ಇವರ ಕುರಿತು ಹೇಳುವುದಾದರೆ  ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹತ್ತು ವರ್ಷಗಳಲ್ಲಿ ಹಲವು ವಿಭಾಗಳಲ್ಲಿ ಕೆಲಸ ಮಾಡಿ, ಮುಂದೆ ಅಂಜಲಿ, ವಾರಸ್ದಾರ ಧಾರವಾಹಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಜನಕ್ಕೆ ಮನರಂಜನೆ ಜೊತೆಗೆ ಏನಾದರೂ ತೂಕ ಇರುವ ಚಿತ್ರ ಮಾಡಬೇಕೆಂದು ಯೋಚಿಸಿದ್ದೇ ....

960

Read More...

18 To 25.Film Poster Rel

Monday, February 11, 2019

ಹರೆಯುದವರ  ಸ್ಮಾರ್ಟ್ ಲವ್           ಇಂದಿನ ಯುವ ಜನಾಂಗವು ಸ್ಮಾರ್ಟ್ ಫೋನ್ ಇಷ್ಟಪಡುವಂತೆ,  ಸ್ಮಾರ್ಟ್ ಲವ್ ಕುರಿತಂತ ’೧೮ ರಿಂದ ೨೫’ ಚಿತ್ರವೊಂದು ತೆರಗೆ  ಬರಲು ಸಜ್ಜಾಗಿದೆ.  ನಿರ್ದೇಶಕ ಸ್ಮೈಲ್ ಶ್ರೀನು ಹೇಳುವಂತೆ  ಈ ವಯಸ್ಸಿನಲ್ಲಿವವರು  ಏನೇ ಯೋಚನೆ, ನಿರ್ಣಯ  ತೆಗೆದುಕೊಂಡರೆ ಅದಕ್ಕೆ ಕಿಮ್ಮತ್ತು ಇರುವುದಿಲ್ಲ. ಅದಕ್ಕಾಗಿ ವೈಟ್‌ಲೆಸ್ ಲವ್ ಅಂತ ಅಡಿಬರಹದಲ್ಲಿ ಹೇಳಲಾಗಿದೆ.  ವೈಟ್‌ಲೆಸ್, ಸ್ಮಾರ್ಟ್ ಹಾಗೂ ಹಾರ್ಟ್‌ಲೆಸ್ ಲವ್ ಎನ್ನುವಂತೆ  ಮೂರು ಕತೆಗಳು ಬರುತ್ತವೆ.  ಪ್ರಸಕ್ತ ಹುಡುಗ-ಹುಡುಗಿಯರಿಗಂತಲೇ ಕತೆ ಬರೆಯಲಾಗಿದೆ.  ಪ್ರೀತಿಯನ್ನು ಬಲವಂತದಿಂದ ಮಾಡಬಾರದು. ಅದನ್ನು ಅಭಿಮಾನದಿಂದ ಗಳಿಸಿದರೆ ....

1402

Read More...

test

Monday, February 11, 2019

created_datetime

285

Read More...

Jugaari Cross.Film Pooja and Press Meet

Sunday, February 10, 2019

ಪುನೀತ್,ಯಶ್‌ರಿಂದ ಜುಗಾರಿ ಕ್ರಾಸ್‌ಗೆ ಚಾಲನೆ           ಕೆ.ಪಿ,ಪೂರ್ಣಚಂದ್ರತೇಜಸ್ವಿ ವಿರಚಿತ ‘ಜುಗಾರಿ ಕ್ರಾಸ್’ ಕಾದಂಬರಿಯು ೧೯೯೪ರಲ್ಲಿ ಪ್ರಕಟಗೊಂಡಿತ್ತು. ಹಲವರು ಇದನ್ನು ಸಿನಿಮಾ ಮಾಡಲು ಸಿದ್ದರಿದ್ದರೂ ಕಾರಣಾಂತರದಿಂದ  ನಿಂತುಹೋಗಿತ್ತು. ಕೊನೆಗೂ ಕಡ್ಡಿಪುಡಿಚಂದ್ರು ಹಕ್ಕುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ನಿರ್ದೇಶನದ ಜವಬ್ದಾರಿಯನ್ನು ಹಿರಿಯ ನಿರ್ದೇಶಕ ನಾಗಭರಣ ಅವರಿಗೆ ವಹಿಸಿದ್ದಾರೆ. ಕಂತುಗಳಲ್ಲಿ ಪ್ರಕಟಗೊಂಡು, ಪ್ರತಿ ವಾರವು ಸೆಸ್ಪೆನ್ಸ್‌ನೊಂದಿಗೆ ಕೊನೆಗೊಳ್ಳುವ ಗುಣ ಕಾದಂಬರಿಗೆ ಇತ್ತು. ನಿರ್ದೇಶಕರು ....

859

Read More...
Copyright@2018 Chitralahari | All Rights Reserved. Photo Journalist K.S. Mokshendra,