Bramhachari.Film Pooja.

Sunday, April 14, 2019

ಬ್ರಹ್ಮಚಾರಿ ನೀನಾಸಂ ಸತೀಶ್

        ಅಯೋಗ್ಯನಾಗಿ  ಜನರ ಮನಸ್ಸಿನಲ್ಲಿ ತಳವೂರಿದ್ದ ನೀನಾಸಂ ಸತೀಶ್ ‘ಬ್ರಹ್ಮಚಾರಿ’ ಯಾಗಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಮಗುವಿನ ತಂದೆಯಾಗಿ ಹೀಗೇಕೆ  ಎಂದು ಪ್ರಶ್ಮೆ ಕೇಳುವ ಮೊದಲೇ ಉತ್ತರ ಹೇಳಲಾಗುತ್ತಿದೆ. ಅವರು ಇದೇ ಹೆಸರಿನ ಚಿತ್ರವೊಂದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಉಪ ಶೀರ್ಷಿಕೆಯಲ್ಲಿ ನೂರು ಪರ್ಸೆಂಟ್ ವರ್ಜಿನ್ ಅಂತ ಹೇಳಿಕೊಂಡಿದ್ದಾರೆ. ಲೈಬ್ರೆರಿಯನ್ ಪಾತ್ರದಲ್ಲಿ ಅದಿತಿಪ್ರಭುದೇವ ನಾಯಕಿ.  ಕತೆಯಲ್ಲಿ ನಾಯಕನ ಪಾತ್ರಧಾರಿ ಬ್ರಹ್ಮಚಾರಿಯಾದಾಗ ಆತನ ಬದುಕಿನಲ್ಲಿ  ಹಲವು ರೀತಿಯ ಪಯಣಗಳು ಬರುತ್ತವೆ. 

927

Read More...

AMG Productions and BOSS Associates.

Friday, April 12, 2019

ಅಶ್ವಿನಿಗೌಡ  ಕನಸು  ನನಸಾಯ್ತು        ನಟಿ  ಅಶ್ವಿನಿಗೌಡ  ‘ವಾರಸುದಾರ’ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿಕೊಂಡು,  ಒಂದಷ್ಟು ಚಿತ್ರಗಳಲ್ಲಿ ನಾಯಕನಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು.  ಆ ಸಂಧರ್ಭದಲ್ಲಿ ತನ್ನಂತೆ ಹೊಸ ಕಲಾವಿದರು, ತಂತ್ರಜ್ಘರು  ಅವಕಾಶಕ್ಕಾಗಿ ಅಲೆದಾಡುತ್ತಿದ್ದನ್ನು ಕಂಡು  ಇಂತಹವರಿಗೆ ಏನಾದರೂ ಮಾಡಬೇಕೆಂಬ  ತುಡಿತ ಹದಿನೈದು ವರ್ಷದಿಂದಲೇ ಮನಸ್ಸಿನಲ್ಲಿ ಕಾಡುತ್ತಿತ್ತು.  ಈ ಮಧ್ಯೆ  ಮದುವೆ, ಮಕ್ಕಳು ಅಂತ ಸಮಯ ತೆಗೆದುಕೊಂಡು ಮುಂದೆ ಅಕ್ಕ, ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.  ನಂತರ ಕನ್ನಡ ರಕ್ಷಣಾ ವೇದಿಕೆಯಲ್ಲಿ  ಸಕ್ರಿಯ ಕಾರ್ಯಕರ್ತೆಯಾಗಿ  ಸದ್ಯ ರಾಜ್ಯ ಮಹಿಳಾ ಘಟಕದ ....

2848

Read More...

Bell Bottom.Film 50 Days Success Meet.

Tuesday, April 09, 2019

ಬೆಲ್ ಬಾಟಂ ೫೦  ನಾಟ್‌ಔಟ್         ರೆಟ್ರೋ ಶೈಲಿಯ ‘ಬೆಲ್ ಬಾಟಂ’ ಯಶಸ್ವಿ ಐವತ್ತು ದಿನಗಳನ್ನು ಪೂರೈಸಿ ಮುಂದುವರೆಯುತ್ತಿದೆ. ಇದಕ್ಕಾಗಿ ಮಾದ್ಯಮದವರಿಗೆ ಥ್ಯಾಂಕ್ಸ್ ಹೇಳಲು ನಿರ್ಮಾಪಕರು  ಸಂತೋಷಕೂಟವನ್ನು ಏರ್ಪಾಟು ಮಾಡಿದ್ದರು.  ಎಲ್ಲರ ಸಂತಸದ ಮಾತುಗಳು ನಿಮಗಾಗಿ ಸಾದರಪಡಿಸಲಾಗುತ್ತಿದೆ. ಜಯತೀರ್ಥ, ನಿರ್ದೇಶಕ:  ಎಲ್ಲರ ಶಕ್ತಿಯಿಂದ ಬೆಲ್‌ಬಾಟಂ ಎಂಬ ಸುಂದರ ಕಲಾಕೃತಿ ಸಿದ್ದಗೊಂಡಿತು.  ಇದನ್ನು ಜನರಿಗೆ ಮಾದ್ಯಮದವರು  ಆಹ್ವಾನಪತ್ರ್ರಿಕೆ ಎನ್ನುವಂತೆ ಮೂಲೆ ಮೂಲೆಗಳಲ್ಲಿ ಸುದ್ದಿಯನ್ನು ತಲುಪಿಸಿದರು.  ಇಲ್ಲಿಯತನಕ ಸುಖಕರ ಪಯಣದಲ್ಲಿ ....

959

Read More...

Kavalu Daari.Film Rel Press Meet.

Monday, April 08, 2019

ಕವಲುದಾರಿಯು  ಪ್ರಸಕ್ತ  ರಾಜಕೀಯಕ್ಕೆ  ಸಮಂಜಸವಾಗಿದೆ              ದೇಶಕ್ಕೆ  ಹೊಸ ನಾಯಕನನ್ನು ಆರಿಸಲು ಚುನಾವಣೆ ನಡೆಯಲಿದೆ.  ವಿನೂತನ  ಕತೆ ಹೊಂದಿರುವ ‘ಕವಲುದಾರಿ’ ಚಿತ್ರದಲ್ಲಿ ಬರುವ ಸನ್ನಿವೇಶಗಳು  ಪ್ರಸ್ತುತ ರಾಜಕೀಯ ಚುನಾವಣೆಗೆ ಸಮಂಜಸವಾಗಲಿದೆ ಎಂಬುದಾಗಿ  ರಚನೆ, ನಿರ್ದೇಶನ ಮಾಡಿರುವ ಹೇಮಂತ್‌ರಾವ್ ಹೇಳಿಕೊಂಡಿದ್ದಾರೆ.   ಮರ್ಡರ್ ಮಿಸ್ಟರಿ ಹಿನ್ನಲೆಯಲ್ಲಿ  ಸಾಗುವ ಕತೆಯ ಜೊತೆಗೆ  ಸಮಾಜದಲ್ಲಿ ಪೋಲೀಸ್ ಅಧಿಕಾರಿಗಳಿಗೆ ಯಾವ ಸ್ಥಾನ ಇದೆ. ಸಮಾಜವು ಇವರನ್ನು ಹೇಗೆ ನೋಡುತ್ತದೆ. ಇಂತಹ ಕ್ಲಾಸಿಕ್ ಅಂಶಗಳು ಇರುವುದು ಪ್ಲಸ್ ಪಾಯಿಂಟ್ ಆಗಿದೆ.  ಪ್ರಚಾರದ ಸಲುವಾಗಿ ವಿಭಿನ್ನ ....

904

Read More...

Virura.Childrens Film Press Meet.

Monday, April 08, 2019

ಚಿತ್ರಮಂದಿರದಲ್ಲಿ ವಿರುಪಾ ಪ್ರತ್ಯಕ್ಷ        ವಿನೂತನ ‘ವಿರುಪಾ’ ಮಕ್ಕಳ ಚಿತ್ರವನ್ನು ಸಂಪೂರ್ಣ ಹಂಪಿ ಸುತ್ತಮುತ್ತ ಸೆರೆಹಿಡಿಯಲಾಗಿದೆ. ವಿನ್ಸೆಂಟ್, ರುಸ್ತುಂ ಮತ್ತು ಪಾಕ್ಷ ಮೂವರ ಚಿಣ್ಣರ ಕತೆಯಾಗಿದ್ದರಿಂದ ಹೆಸರಿನ ಮೊದಲ ಅಕ್ಷರವನ್ನು ಬಳಸಿಕೊಂಡು ಶೀರ್ಷಿಕೆ ಇಡಲಾಗಿದೆ.  ಇದರಲ್ಲಿ ಒಬ್ಬನು ಕುರುಡ,  ಮತ್ತೋಬ್ಬ ಮೂಕನಾಗಿದ್ದು, ಇವರೊಂದಿಗೆ ಪುಟ್ಟ ಹುಡುಗಿ  ಇರುತ್ತಾಳೆ.  ಹಂಪಿಯಲ್ಲಿ ಗೈಡ್ ಆಗಿರುವ ಮಂಜುವಿಗೆ  ತಮ್ಮ ಮೂಕನನ್ನು ಚೆನ್ನಾಗಿ ಓದಿಸಬೇಕೆಂದು ಸಿಟಿಗೆ ಕಳುಹಿಸುತ್ತಾನೆ. ಅಲ್ಲಿನ  ವಾತವರಣ, ಒತ್ತಡಗಳು  ಸರಿಹೊಂದದೆ  ತಪ್ಪಿಸಿಕೊಂಡು ಬರುವಾಗ ದಾರಿಯಲ್ಲಿ ಕುರುಡನ ಪರಿಚಯವಾಗಿ ಅವನೊಂದಿಗೆ ಹುಟ್ಟಿದ ....

872

Read More...

Trayambakam.Film Press Meet.

Monday, April 08, 2019

ತ್ರಯಂಬಕಂದಲ್ಲಿ ಅಚ್ಚರಿಗಳ ಗುಚ್ಚ          ಶಿವನ ಮೂರನೇ ಕಣ್ಣು ಅಂತ ಉಪ ಶೀರ್ಷಿಕೆಯಲ್ಲಿ ಹೇಳಿಕೊಂಡಿರುವ  ‘ತ್ರಯಂಬಕಂ’   ಚಿತ್ರವು  ಬಿಡುಗಡೆ ಸನಿಹದಲ್ಲಿರುವ ಕಾರಣ ಕೊನೆಬಾರಿ ತಂಡವು ಮಾದ್ಯಮದ ಎದುರು ಹಾಜರಿದ್ದು ಮತ್ತಷ್ಟು  ಮಾಹಿತಿಗಳನ್ನು  ಹಂಚಿಕೊಂಡಿತು.        ನಾಯಕಿ ಅನುಪಮಗೌಡ ಹೇಳುವಂತೆ  ರಾಘಣ್ಣನ ಮಗಳಾಗಿ  ಕಾಣಸಿಕೊಂಡಿದ್ದೇನೆ.  ಜಾಸ್ತಿ ಸಂಭಾಷಣೆ ಇರುವುದರಿಂದ ನಟಿಸಲು ಕಷ್ಟವಾಯಿತು.  ಅಪ್ಪ-ಮಗಳ ಬಾಂದವ್ಯ, ಅದಕ್ಕೂ ಮೀರಿದ ಸಾಕಷ್ಟು ವಿಷಯಗಳು ಇದೆ ಎಂದರು.  ದೇವರು ಇದ್ದಾನೆ. ಆದರೆ ದೇವರ ಸಿನಿಮಾ ಆಗಿರುವುದಿಲ್ಲವೆಂದು ಶಿವಮಣಿ ಬಣ್ಣನೆ ಮಾಡಿದ್ದರು. ಶೇಕಡ ಎಂಬತ್ತರಷ್ಟು ಸಿತಾರ್ ....

910

Read More...

Srimantha.One Song Rel.

Saturday, April 06, 2019

ಯುಗಾದಿ  ಹಬ್ಬದಂದು  ಶ್ರೀಮಂತ ಹಾಡು             ಜಗತ್ತಿನಲ್ಲಿ  ಅತಿ ಹೆಚ್ಚು  ಶ್ರೀಮಂತನಾಗಿರುವುದು ರೈತ.  ಸಮಾಜದ ಚಕ್ರವರ್ತಿಗಳು, ಸರ್ಕಾರಗಳು, ಬಂಡವಾಳಶಾಹಿಗಳು  ಎಲ್ಲರು ಇವರ ಮೇಲೆ ಅವಲಂಬಿತರಾಗಿದ್ದಾರೆ. ಅದರಿಂದಲೇ  ಇವರನ್ನು  ‘ಶ್ರೀಮಂತ’  ಅಂತ ಕರೆಯುತ್ತಾರೆ.  ಈಗ ಇದೇ ಹೆಸರಿನ ಮೇಲಿನ ಸಿನಿಮಾವೊಂದು ಹಾಸನ, ಕೊಳ್ಳೇಗಾಲ, ಮಂಡ್ಯಾ ಕಡೆಗಳಲ್ಲಿ ಶೇಕಡ ೮೦ರಷ್ಟು ಚಿತ್ರೀಕರಣವನ್ನು  ಮುಗಿಸಿ, ಕ್ಲೈಮಾಕ್ಸ್, ಎರಡು ಹಾಡುಗಳನ್ನು ಬಾಕಿ ಉಳಿಸಿಕೊಂಡಿದ್ದು, ಅದನ್ನು ಸದ್ಯದಲ್ಲೆ ಮುಗಿಸಲು  ತಂಡವು ಯೋಜನೆ ಹಾಕಿಕೊಂಡಿದೆ.  ಅನ್ನದಾತನು ಶೀರ್ಷಿಕೆಯಂತೆ ಆದರೆ ಜಗತ್ತೇ ಶ್ರೀಮಂತದಿಂದ ಇರಬಹುದು ....

977

Read More...

Ragini Dwivedi.Completes 10 Years Press Meet.

Friday, April 05, 2019

ಒಂದು  ದಶಕ  ಪೂರೈಸಿದ  ತುಪ್ಪದ ರಾಣಿ           ಮಾರ್ಚ್ ೨೦, ೨೦೦೯ರಂದು ಚಂದನವನಕ್ಕೆ  ‘ವೀರ ಮದಕರಿ’ ಚಿತ್ರದ ಮೂಲಕ  ರಾಗಿಣಿ ಎನ್ನುವ ಸುಂದರ ಹುಡುಗಿಯೊಬ್ಬಳ ಪ್ರವೇಶವಾಯಿತು.  ನೋಡು ನೋಡುತ್ತಿದ್ದಂತೆ ಅವರು ಸಿನಿ ಪಯಣದಲ್ಲಿ  ಯಶಸ್ವಿಯಾಗಿ ಹತ್ತು ವರ್ಷಗಳನ್ನು ಮುಗಿಸಿದ್ದಾರೆ.  ನಟಿಸಿದ್ದು ೨೦+. ಇದರಲ್ಲಿ   ಮಲೆಯಾಳಂ-೩, ತಮಿಳು-೨ ಮತ್ತು ತೆಲುಗು-೧  ಖಾತೆಯಲ್ಲಿ ಸೇರಿಕೊಂಡಿದೆ. ಇವುಗಳಲ್ಲಿ ಹಿಟ್, ಫ್ಲಾಪ್ ಆಗಿದ್ದು ಉಂಟು. ಹಾಗಂತ ಇದರ ಬಗ್ಗೆ ಚಿಂತನೆ ಮಾಡದೆ  ಒಳ್ಳೆಯದನ್ನು ಆರಿಸಿತ್ತಾ, ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಮುಂಬರುವ ಸವಾಲುಗಳನ್ನು  ಎದುರಿಸುತ್ತಿದ್ದಾರೆ.  ....

910

Read More...

Night Out.Film Press Meet.

Thursday, April 04, 2019

ನೈಟ್‌ಔಟ್  ಬಿಡುಗಡೆಗೆ  ದಿನಗಣನೆ          ನಟ ರಾಕೇಶ್‌ಅಡಿಗ ಮೊದಲಬಾರಿ ನಿರ್ದೇಶನ ಮಾಡಿರುವ ‘ನೈಟ್‌ಔಟ್’  ಚಿತ್ರದ ಕತೆಯು  ಆರು ಗಂಟೆಗಳಲ್ಲಿ  ನಡೆಯಲಿದೆ.  ನೈಜ ಘಟನೆಯಂತೆ ಪರಿಕಲ್ಪನೆವುಳ್ಳ ಒಂದೊಂದು  ಸಂಗತಿಗಳು ತೆರೆದುಕೊಳ್ಳುತ್ತಾ  ಹೋಗುತ್ತದೆ.  ನಾಯಕ, ನಾಯಕಿ ಎನ್ನದೆ ಮೂರು ಪಾತ್ರಗಳು ಅವರ ಸಂಭಾಷಣೆಗಳ ಮೂಲಕ ಪರಿಚಯವಾಗುತ್ತದೆ.  ಅವರು ಮಾತನಾಡುವುದರಿಂದ  ಫ್ಲಾಶ್‌ಬ್ಯಾಕ್ ಅನಾವರಣಗೊಂಡು, ಪ್ರತಿ ಸನ್ನಿವೇಶಕ್ಕೂ  ತಿರುವುಗಳು ಬರುತ್ತವೆ.  ಪ್ರಯೋಗ ಎನ್ನಲಾಗದೆ ವಿಭಿನ್ನ ರೂಪದ ಕಮರ್ಷಿಯಲ್ ಮಾದರಿಯ ಹೊಸ ಜಾನರ್‌ದಲ್ಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.  ....

981

Read More...

Naanu Mattu Gunda.Film Teaser Rel.

Thursday, April 04, 2019

ಗುಂಡ ಮತ್ತು ಶಿವರಾಜ್.ಕೆ.ಆರ್.ಪೇಟೆ          ಕಾಮಿಡಿ ಕಿಲಾಡಿಗಳು ಮೂಲಕ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ   ಶಿವರಾಜ್.ಕೆ.ಆರ್.ಪೇಟೆ  ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ  ‘ನಾನು ಮತ್ತು ಗುಂಡ’ ತೆರೆಗೆ ಬರಲು ಸಿದ್ದವಾಗಿದೆ. ಗುಂಡ ಅಂದರೆ ನಾಯಿ. ಇದು ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದೆ.  ಇಂತಹ ಸಾಕು ಪ್ರಾಣಿಗಳು ಎಂಥ ಪಾತ್ರವಹಿಸುತ್ತವೆ. ಹಾಗೆಯೇ  ಇದನ್ನೆ ಇಟ್ಟುಕೊಂಡು ಯಾವ ರೀತಿ ದಂಧೆ ಮಾಡುತ್ತಾರೆಂದು ಹೇಳಲಾಗಿದೆ.  ನಾಯಕ  ಹಾಗೂ ನಾಯಿಗೂ ಭಾವನಾತ್ಮಕ ಸಂಬಂದಗಳು, ಇದರೊಂದಿಗಿನ ಪ್ರೀತಿಯ ವಿಷಯಗಳು. ದಂಪತಿಯೊಬ್ಬರು ....

1051

Read More...

Putani Power.Film Audio Rel.

Tuesday, April 02, 2019

ವಾಹಿನಿಗಳಿಂದ  ಉಪಯೋಗ, ದುರಪಯೋಗ          ವಾಹಿನಿಗಳಿಂದ  ಚಿತ್ರಗಳಿಗೆ ಪೆಟ್ಟು ಬೀಳುತ್ತಿದೆ ಎಂದು ನಿರ್ಮಾಪಕರು ಆರೋಪ ಹೊರಿಸುತ್ತಿದ್ದರೆ, ಮತ್ತೋಂದು ಕಡೆ  ಕಿರುತೆರೆಯಲ್ಲಿ ಗುರುತಿಸಿಕೊಂಡ ಕಲಾವಿದರು ಹಿರಿತೆರೆಗೆ ಹೋಗುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಅಭಿಪ್ರಾಯ ಪಟ್ಟರು.  ಅವರು ಮಕ್ಕಳ ಚಿತ್ರ ‘ಪುಟಾಣಿ ಪವರ್’ ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು.  ಸಿನಿಮಾ ಕುರಿತು ಹೇಳುವುದಾದರೆ  ಮಕ್ಕಳ ಮೇಲಿನ ದೌರ್ಜನ್ಯ, ಮಾನಸಿಕ ಹಿಂಸೆಗೆ ಪರಿಹಾರವೇನು? ಚಿಣ್ಣರ ಹಕ್ಕು, ಕನಸು ಏನಾಗಿದೆ?, ಕಡ್ಡಾಯ ಶಿಕ್ಷಣ ಉಲ್ಲಂಘನೆ ಎಷ್ಟು ....

1015

Read More...

Yuga Yugadi Kaledaru.Music Video Album.

Tuesday, April 02, 2019

ಹೊಸ ಸಂವತ್ಸರಕ್ಕೆ  ಯುಗಾದಿ ಗೀತೆ

        ವರಕವಿ  ದ.ರಾ.ಬೇಂದ್ರ  ವಿರಚಿತ  ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’  ಸಾಹಿತ್ಯವನ್ನು  ೧೯೬೦ರಲ್ಲಿ ಬಿಡುಗಡೆಯಾದ ‘ಕುಲವಧು’ ಚಿತ್ರದಲ್ಲಿ  ಲೀಲಾವತಿ ಅಭಿನಯದೊಂದಿಗೆ  ಬಳಸಲಾಗಿತ್ತು.  ಇದನ್ನು ಹೇಳಲು ಪೀಠಿಕೆ ಇದೆ.  

972

Read More...

Panchatantra.Success Meet.

Tuesday, April 02, 2019

ಮಂಡ್ಯಾ  ಫಲಿತಾಂಶಕ್ಕೆ  ಪಂಚತಂತ್ರ  ನೋಡಬೇಕು           ಮಂಡ್ಯಾ  ಇಂಡಿಯಾ ಅಂತ ಮಾತು, ಟೀಕೆಗಳು ಬರುತ್ತಿದ್ದು, ಚುನಾವಣಾ ಫಲಿತಾಂಶದ ಕಾವು ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದೆ. ಅದರ ಫಲಿತಾಂಶವನ್ನು ‘ಪಂಚತಂತ್ರ’ ಸಿನಿಮಾದಲ್ಲಿ ನೋಡಬಹುದು ಎಂಬುದಾಗಿ ಮಾಹಿತಿ  ಹರಡಿದೆ.  ಸದರಿ ವಿಷಯವನ್ನು  ನಿರ್ದೇಶಕ ಯೋಈಗರಾಜಭಟ್ಟರ  ಬಳಿ  ಪ್ರಸ್ತಾಪಿಸಿದಾಗ  ಅವರಿಂದ ಬಂದ ಉತ್ತರ ಹೀಗಿತ್ತು:           ಈ ಪಾಠಿ ಸುದ್ದಿಯನ್ನು  ಯಾರು ಹಬ್ಬಿಸಿದರೋ ಗೊತ್ತಿಲ್ಲ. ಚುನಾವಣೆಯಲ್ಲಿ  ಸ್ಪರ್ಧಿಸಿರುವ ಇಬ್ಬರ ಮೇಲೂ ಗೌರವವಿದೆ. ಉದ್ದೇಶಪೂರ್ವಕವಾಗಿ ದೃಶ್ಯಗಳನ್ನು  ಸೃಷ್ಟಿಸಿಲ್ಲ. ....

1069

Read More...

Premier Padmini.Film Trailer Rel.

Monday, April 01, 2019

ಯುಗಾದಿಗೆ  ಪ್ರೀಮಿಯರ್  ಪದ್ಮಿನಿ ಟ್ರೈಲರ್            ಕಿರುತೆರೆ ಸ್ಟಾರ್ ನಿರ್ಮಾಪಕಿ ಶ್ರುತಿನಾಯ್ಡು ಮೊದಲಬಾರಿ ಹಿರಿತೆರೆಗೆ ನಿರ್ಮಾಣ ಮಾಡಿರುವ ‘ಪ್ರೀಮಿಯರ್ ಪದ್ಮಿನಿ’ ಚಿತ್ರವು ಇದೇ ೨೬ರಂದು ತೆರೆಗೆ ಬರಲಿದೆ.   ಕತೆ,ಚಿತ್ರಕತೆ,ಸಂಭಾಷಣೆ ಬರೆದು  ನಿರ್ದೇಶನ ಮಾಡಿರುವುದು ರಮೇಶ್‌ಇಂದಿರಾ.  ಸಿನಿಮಾದ ಕುರಿತು ಹೇಳುವುದಾದರೆ ಸಂಬಂದಗಳ ಮೇಲೆ ಬದುಕು ಸಾಗಲಿದ್ದು, ಎಲ್ಲರದು  ಬೇರೆ ಬೇರೆ ದಾರಿಯಲ್ಲಿ ಇರುತ್ತದೆ.  ಜೀವನವನ್ನು ಹಗುರವಾಗಿ ತೆಗೆದುಕೊಳ್ಳಬೇಕು. ಕಥನಾಯಕನ ಬಳಿ ಪ್ರೀಮಿಯರ್ ಪದ್ಮಿನಿ ಕಾರು ಇರುತ್ತದೆ.  ಸೆಂಟಿಮೆಂಟ್ ಸಲುವಾಗಿ ಹೊಸ ಕಾರನ್ನು  ಖರೀದಿಸದೆ ಅದರಲ್ಲೇ ಜೀವನ ....

1046

Read More...

Jai Kesari Nandana.Film Audio Rel.

Monday, April 01, 2019

ಭಾವನೆ  ಭಾವೈಕ್ಯತೆ  ನಡುವಿನ  ಕಥನ         ಕಳೆದವಾರ ಟಪಿ ಕೈಲಾಸಂ ನಾಟಕವು  ಸಿನಿಮಾವಾಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು.  ಈಗ ಉತ್ತರ ಕರ್ನಾಟಕ ಭಾಗದಲ್ಲಿ ಯಶಸ್ವಿ  ೬೦೦ ಪ್ರದರ್ಶನ ಕಂಡ ನಾಟಕವೊಂದು  ‘ಜೈ ಕೇಸರಿ ನಂದನ’ ಎನ್ನುವ ಹೆಸರಿನೊಂದಿಗೆ ಸದ್ದಿಲ್ಲದೆ ಚಿತ್ರೀಕರಣವನ್ನು  ಮುಗಿಸಿ ಜನರಿಗೆ ತೋರಿಸಲು ಸಿದ್ದತೆಗಳನ್ನು ಮಾಡಿಕೊಂಡಿದೆ.  ಸಬಿ ಬೋಲೋ ಜೈ ಶ್ರೀ ರಾಮ್ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ.  ೧೯೮೭ರಲ್ಲಿ ನಡೆದ  ಸತ್ಯಕತೆಯನ್ನು ಆಧರಿಸಿದೆ. ಆ ಭಾಗದವರು ಧರ್ಮ ಮತ್ತು ಮೂಡನಂಬಿಕೆ ಮೇಲೆ ಬದುಕನ್ನು  ಸಾಗಿಸುತ್ತಿದ್ದಾರೆ. ಹಾಗಂತ ಹಿಂದೂ  ಮುಸ್ಲಿಂ  ನಡುವಿನ ದ್ವೇಷವನ್ನು ....

1139

Read More...

Londonalli Lambodara.Film Press Meet

Monday, April 01, 2019

  ಲಂಬೋದರನನ್ನು  ಕೈ ಹಿಡಿದ ಪ್ರೇಕ್ಷಕ ಮಹಾಪ್ರಭುಗಳು        ಕಳೆದ ವಾರ ಬಿಡುಗಡೆಯಾದ ‘ಲಂಡನ್‌ನಲ್ಲಿ ಲಂಬೋದರ’ ಹಾಸ್ಯ ಚಿತ್ರವು ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರಶಂಸೆ ಪಡೆದುಕೊಂಡಿದೆ. ಲಂಡನ್‌ದಲ್ಲಿ ಇಲ್ಲಿಯವರೆಗೂ ೪೦೦ ಪ್ರದರ್ಶನ ಕಂಡಿದ್ದು, ಅಲ್ಲಿನ ಕನ್ನಡಿಗರು ಇಷ್ಟಪಟ್ಟಿದ್ದರಿಂದ ಹೆಚ್ಚಿನ ಕೇಂದ್ರಗಳಲ್ಲಿ  ಜನರಿಗೆ ತೋರಿಸಲು ಯೋಜನೆ ಹಾಕಿಕೊಂಡಿದ್ದಾರೆ. ಪತ್ರಿಕೆಗಳಲ್ಲಿ ಒಳ್ಳೆಯ ವಿಮರ್ಶೆ ಬಂದಿರುವ ಕಾರಣ ಚಿತ್ರಮಂದಿರದ ಗಳಿಕೆ ಹೆಚ್ಚಾಗುತ್ತಿದೆ ಎಂದು ಸಂಗೀತ ನಿರ್ದೇಶಕ ಪ್ರಣವ್ ಮಾದ್ಯಮದವರಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ.  ಮೈಸೂರು ಹಾಗೂ ಬೆಂಗಳೂರು ಟಾಕೀಸುಗಳಿಗೆ ಭೇಟಿ ....

977

Read More...

Payanigaru.Film Trailor Rel.

Monday, April 01, 2019

ಪಯಣದಲ್ಲಿ  ಸಂತಸ, ಸಮಸ್ಯೆ  ಬರುತ್ತೆ, ಹೋಗುತ್ತೆ          ಸಮಾನ ವಯಸ್ಸಿನವರು ಪ್ರಯಾಣ ಕೈಗೊಂಡರೆ ಅವರ ಅನುಭವಗಳು ಹೇಗಿರುತ್ತೇ? ಸಮಸ್ಯೆಗಳು, ಸುಖ ಇವೆಲ್ಲವುಗಳನ್ನು ‘ಪಯಣಿಗರು’ ಎನ್ನುವ  ಚಿತ್ರದಲ್ಲಿ ತೋರಿಸಲಾಗಿದೆ.  ಸಡಗರ, ಡೀಲ್‌ರಾಜ್ ನಿರ್ದೇಶನ ಮಾಡಿರುವ ರಾಜ್‌ಗೋಪಿ ಕತೆ ಬರೆದು ಮೂರನೇ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.  ಇವರು ಹೇಳುವಂತೆ ಪ್ರತಿಯೊಬ್ಬರ ಜೀವನದಲ್ಲಿ ಪಯಣ ಎನ್ನುವುದು ಇರುತ್ತದೆ.  ಅದು ಎಲ್ಲಿ, ಯಾಕೆ, ಹೇಗೆ ಮುಗಿಯುತ್ತದೆಂದು ನಿಖರವಾಗಿ   ವಿವರಿಸುವುದು ಕಷ್ಟವಾಗುತ್ತದೆ.  ಕತೆಯಲ್ಲಿ  ನಲವತ್ತು ದಾಟಿದ ಐದು ಮಂದಿ ಗೃಹಸ್ಥರು  ....

1055

Read More...

Koogi Karedanallo Mahadeva.Film Audio Rel.

Monday, April 01, 2019

ಭಕ್ತಿ ಚಿತ್ರ  ಕೂಗಿ ಕರೆದೆನಲ್ಲೋ  ಮಾದೇವ         ಅಪರೂಪಕ್ಕೆ ಎನ್ನುವಂತೆ ಭಕ್ತಿ ಚಿತ್ರಗಳು ಬರುತ್ತಿದೆ. ಇದರ ಸಾಲಿಗೆ ‘ಕೂಗಿ ಕರೆದೆನಲ್ಲೋ ಮಾದೇವ’ ಸಿನಿಮಾ ಸೇರ್ಪಡೆಯಾಗಿದೆ.  ಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ ನಿರ್ದೇಶನ ಮಾಡಿರುವ ಎ.ನಟಆರಾಧ್ಯ ಒಮ್ಮೆ ಮಲೈ ಮಹದೇಶ್ವರ ಸ್ವಾಮಿ ದರ್ಶನ ಮಾಡಲು ಪಾದಾಯಾತ್ರೆ  ಕೈಗೊಂಡಿದ್ದಾರೆ.    ದಾರಿಯಲ್ಲಿ ನಿತ್ರಾಣರಾಗಿದ್ದ  ಭಕ್ತನಿಗೆ ದೇವರನ್ನು ಕೂಗಿ ಕರೆಯಿರಿ ತಮಗೆ ಶಕ್ತಿ ಬರುತ್ತದೆ ಆಗ ಸ್ವಾಮಿ ದರ್ಶನ ಮಾಡಬಹುದೆಂದು ಹೇಳುತ್ತಾರೆ.  ಆತನು ಕೂಗಿದಾಗ ಅರಿವಿಲ್ಲದಂತೆ ಬೆಟ್ಟ ಹತ್ತುತ್ತಾನೆ.  ಅದರಂತೆ ನಿರ್ದೇಶಕರು ತನಗೆ ಸಿನಿಮಾದಲ್ಲಿ ಕೆಲಸ ....

1551

Read More...

Ekalavya.Film Title Rel.

Sunday, March 31, 2019

ಏಕಲವ್ಯ  ಅಂದರು  ಜೋಗಿ ಪ್ರೇಮ್          ದಿ ವಿಲನ್ ನಂತರ ಜೋಗಿ ಪ್ರೇಮ್ ಯಾವ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಎಂಬುದಕ್ಕೆ ‘ಏಕಲವ್ಯ’ ಎಂಬ ಉತ್ತರ ಸಿಕ್ಕಿದೆ.  ಪ್ರಚಾರ ವೈಖರಿಯಲ್ಲಿ ಮೊದಲ ಸ್ಥಾನ ಪಡೆದಿರುವ ಅವರು  ಚಿತ್ರದ ಟೈಟಲ್ ಲಾಂಚ್‌ನ್ನು  ಯುಬಿ ಸಿಟಿಯಲ್ಲಿ ಹಮ್ಮಿಕೊಂಡಿದ್ದರು. ಹದಿನಾರನೇ ಮಹಡಿಯಲ್ಲಿ ಸೇರಿದ್ದ ಗಣ್ಯರ  ಸಮ್ಮುಖದಲ್ಲಿ ಯೋಗರಾಜಭಟ್ಟರು  ಶುಭವಾಗಲಿ ಎಂದಾಗ, ಎದುರಿಗಿದ್ದ ಪ್ರಸ್ಟೀಜ್ ಟವರ‍್ಸ್  ಕಡೆ   ಎಲ್ಲರು ಕತ್ತನ್ನು ಮೇಲಕ್ಕೆ ಹಾಕಿದಾಗ ಡಿಜಿಟಲ್ ಮಾದರಿಯಲ್ಲಿ ಏಕಲವ್ಯ ಶೀರ್ಷಿಕೆ ಕಾಣಿಸಿಕೊಂಡಿತು.          ಗ್ರಾಮೀಣ ಹಿನ್ನಲೆಯಲ್ಲಿ ಬಂದ ....

326

Read More...

White.Short Film

Saturday, March 30, 2019

ನೇತ್ರದಾನ  ಮಹಾದಾನ          ವರನಟ  ಡಾ.ರಾಜ್‌ಕುಮಾರ್ ಬದುಕಿದ್ದಾಗ ಎರಡು ಕಣ್ಣುಗಳನ್ನು ದಾನ ಮಾಡಲು ಒಪ್ಪಂದಕ್ಕೆ ಸಹಿ ಹಾಕಿ, ಅಂದರಿಗೆ ಬಾಳನ್ನು ನೀಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದರು.  ಇಂತಹುದೆ ಪರಿಕಲ್ಪನೆ ಹೊಂದಿರುವ ‘ವೈಟ್’ ಎನ್ನುವ ಐದು ನಿಮಿಷದ ಕಿರುಚಿತ್ರವನ್ನು ರಾಧಿಕಾಪಂಡಿತ್ ಲೋಕಾರ್ಪಣೆ ಮಾಡಿದರು.  ಅವರು ಮಾತನಾಡುತ್ತಾ  ಅಂದತ್ವ ಇರುವವರಿಗೆ ಕಣ್ಣುಗಳು ಅವಶ್ಯ ಇರುತ್ತದೆ. ಕಣ್ಣು ದಾನ ಮಾಡಿ ಎಂದು  ಅರಿವು ಮೂಡಿಸುವ ಶಾರ್ಟ್‌ಫಿಲ್ಮ್  ಚೆನ್ನಾಗಿ ಮೂಡಿಬಂದಿದೆ. ಪ್ರಿಯಾಮಣಿ ಸಂಭಾವನೆ ಪಡೆಯದೆ ನಟಿಸಿರುವುದು ಹೆಮ್ಮೆಯ ವಿಷಯ. ಅಮಿತಾಬ್‌ಬಚ್ಚನ್ ಕಂಠದಾನ ಮಾಡಿರುವುದು ಪ್ಲಸ್ ಪಾಯಿಂಟ್ . ಸುಂದರ ಸಂದೇಶವು ....

369

Read More...
Copyright@2018 Chitralahari | All Rights Reserved. Photo Journalist K.S. Mokshendra,