ವಿಡಿಯೋ ಸಂವಾದದಲ್ಲಿ ಎಸ್ಕೆ ಮಾತುಕತೆ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ಕಾರ್ಯಸಾಧನೆಯನ್ನು ತಿಳಿದುಕೊಳ್ಳಲು ಉನ್ನತ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸುತ್ತಿದ್ದರು. ಅಂತಹುದೇ ರೀತಿಯಲ್ಲಿ ‘ದಬಾಂಗ್-೩’ ಚಿತ್ರದ ಸುದ್ದಿಗೋಷ್ಟಿಯು ಪಿವಿಆರ್ದಲ್ಲಿ ನಡೆಯಿತು. ಏಕಕಾಲದಲ್ಲಿ ಬೆಂಗಳೂರು, ಚೆನ್ನೈ ಮತ್ತು ಹೈದ್ರಾಬಾದ್ನ ಮಾಧ್ಯಮ ಪ್ರತಿನಿಧಿಗಳು ಹಾಗೂ ಅಭಿಮಾನಿಗಳೊಂದಿಗೆ ಬಾಂಬೆದಲ್ಲಿ ಚಿತ್ರತಂಡವು ಮುಖಾಮುಖಿಯಾಗಿ ಮಾತಾಡಿ ಸಾಕಷ್ಟು ವಿವರಗಳನ್ನು ಹಂಚಿಕೊಂಡಿತು. ಇದೇ ಸಂದರ್ಭದಲ್ಲಿ ೩ ನಿಮಿಷದ ೨೨ ಸೆಕೆಂಡ್ ಅವಧಿಯ ಕನ್ನಡ ಟ್ರೇಲರ್ ಕೂಡಾ ಅನಾವರಣಗೊಂಡಿತು. ನಾಯಕ ಸಲ್ಮಾನ್ಖಾನ್, ನಾಯಕಿಯರಾದ ....
ಭರಾಟೆಗೆ ಜೈ ಹೋ ಅಂದರು ಶೀರ್ಷಿಕೆ ಹಾಡಿನೊಂದಿಗೆ ಸದ್ದು ಮಾಡಿದ್ದ ‘ಭರಾಟೆ’ ಚಿತ್ರವು ಅಂದುಕೊಂಡಂತೆ ಎಲ್ಲಾ ಕಡೆಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ ಎಂದು ಸಾಹಿತಿ,ನಿರ್ದೇಶಕ ಚೇತನ್ಕುಮಾರ್ ಸಂತೋಷಕೂಟದಲ್ಲಿ ಖುಷಿಯನ್ನು ಹಂಚಿಕೊಂಡರು. ಅವರು ಹೇಳುವಂತೆ ಮೈಸೂರು, ಮಂಡ್ಯಾ ಕಡೆಗಳಲ್ಲಿ ತಂಡವು ಭೇಟಿ ನೀಡಿದಾಗ ಜನರು ಉತ್ತಮ ಸಿನಿಮಾ ಮಾಡಿದರೆಂದು ಹೇಳುತ್ತಿದ್ದರು. ಎಲ್ಲಾ ಕಲಾವಿದರು ಸಂತಸದಲ್ಲಿ ಭಾಗಿಯಾಗುವುದಾಗಿ ಹೇಳಿದ್ದರು. ಆದರೆ ಮಧ್ಯಾಹ್ಮ ಏರ್ಪಡಿಸಿದ್ದರಿಂದ ಗೈರು ಹಾಜರಾಗಿದ್ದಾರೆ. ೨೫ ನೇ ದಿನದ ಸಂಭ್ರಮದಲ್ಲಿ ಬರುವುದಾಗಿ ತಿಳಿಸಿದ್ದರಿಂದ ಸಾಯಂಕಾಲ ಕಾರ್ಯಕ್ರಮ ಇಡುವುದಾಗಿ ಯೋಜನೆ ಹಾಕಲಾಗಿದೆ ಎಂದರು. ....
ಭಾವನೆಗಳ ಆಗರ ನೀರೇ ಹಿರಿಯ ಸಾಹಿತಿ ಡಾ.ನಾಗೇಂದ್ರಪ್ರಸಾದ್ ಬಳಿ ಕೆಲಸ ಕಲಿತಿರುವ ಶ್ರೀಚರಣ್ ‘ನೀರೇ’ ಚಿತ್ರಕ್ಕೆ ಕತೆ ಬರೆದು ನಿರ್ದೇಶಕನ ಪಟ್ಟವನ್ನು ಅಲಂಕರಿಸುತ್ತಿದ್ದಾರೆ. ಹೆಣ್ಣು ಎಂಬುದು ಶೀರ್ಷಿಕೆಗೆ ಅರ್ಥ ಕೊಡುತ್ತದೆ. ಸಮಾಜದಲ್ಲಿ ಆಕೆಯು ಹೇಗಿರಬೇಕು, ಹೇಗಿರಬಾರದು ಎಂಬುದನ್ನು ಹೇಳಲಿದೆ. ಹಾಗೆಯೇ ತಂದೆ ತಾಯಿ ಮಕ್ಕಳ ಕುರಿತಂತೆ ಯಾವ ರೀತಿ ಪಾತ್ರವಹಿಸಿಬೇಕು. ಸ್ನೇಹ ಮತ್ತು ತಾಯಿ ಭಾವನೆಗಳಿಗೆ ಹೆಚ್ಚು ಮಹತ್ವವನ್ನು ನೀಡಲಾಗಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಇವರೆಡು ಕಣ್ಣುಗಳು ಇದ್ದಂತೆ. ಅದು ಇಲ್ಲದೆ ಹೋದಾಗ ಆತನ ಜೀವನ ಏನಾಗುತ್ತೆ. ಬಹುಪಾಲು ಸನ್ನಿವೇಶಗಳು ಕಾರ್ಗಾಲದಲ್ಲಿ ನಡೆಯುತ್ತದೆ. ಅವನಿಗೆ ಒಳ್ಳೆಯದಾದರೂ ....
ಭಾವನೆಗಳ ಆಗರ ನೀರೇ ಹಿರಿಯ ಸಾಹಿತಿ ಡಾ.ನಾಗೇಂದ್ರಪ್ರಸಾದ್ ಬಳಿ ಕೆಲಸ ಕಲಿತಿರುವ ಶ್ರೀಚರಣ್ ‘ನೀರೇ’ ಚಿತ್ರಕ್ಕೆ ಕತೆ ಬರೆದು ನಿರ್ದೇಶಕನ ಪಟ್ಟವನ್ನು ಅಲಂಕರಿಸುತ್ತಿದ್ದಾರೆ. ಹೆಣ್ಣು ಎಂಬುದು ಶೀರ್ಷಿಕೆಗೆ ಅರ್ಥ ಕೊಡುತ್ತದೆ. ಸಮಾಜದಲ್ಲಿ ಆಕೆಯು ಹೇಗಿರಬೇಕು, ಹೇಗಿರಬಾರದು ಎಂಬುದನ್ನು ಹೇಳಲಿದೆ. ಹಾಗೆಯೇ ತಂದೆ ತಾಯಿ ಮಕ್ಕಳ ಕುರಿತಂತೆ ಯಾವ ರೀತಿ ಪಾತ್ರವಹಿಸಿಬೇಕು. ಸ್ನೇಹ ಮತ್ತು ತಾಯಿ ಭಾವನೆಗಳಿಗೆ ಹೆಚ್ಚು ಮಹತ್ವವನ್ನು ನೀಡಲಾಗಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಇವರೆಡು ಕಣ್ಣುಗಳು ಇದ್ದಂತೆ. ಅದು ಇಲ್ಲದೆ ಹೋದಾಗ ಆತನ ಜೀವನ ಏನಾಗುತ್ತೆ. ಬಹುಪಾಲು ಸನ್ನಿವೇಶಗಳು ಕಾರ್ಗಾಲದಲ್ಲಿ ನಡೆಯುತ್ತದೆ. ಅವನಿಗೆ ಒಳ್ಳೆಯದಾದರೂ ....
ಜಗ್ಗೇಶ್ ಚಿತ್ರದಲ್ಲಿ ಇಪ್ಪತ್ತೋಂದು ನಾಯಕಿಯರು ಚಿತ್ರರಂಗದಲ್ಲಿ ದಾಖಲೆ ಎನ್ನುವಂತೆ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಇಪ್ಪತ್ತೋಂದು ನಾಯಕಿಯರು ಇದ್ದಾರೆಂದು ಸಾಹಿತಿ, ನಿರ್ದೇಶಕ ಕವಿರಾಜ್ ಮಾಹಿತಿ ನೀಡಿದ್ದಾರೆ. ಇದು ಹೇಗೆ ಅಂತ ಊಹಿಸಿಕೊಳ್ಳುವ ಮುಂಚೆ, ಇವರೆಲ್ಲರು ಸಿನಿಮಾದ ಪ್ರಮೋಷನ್ ಗೀತೆಗೆ ಹೆಜ್ಜೆ ಹಾಕಿದ್ದಾರೆ. ಹರಿಪ್ರಿಯಾ, ಕಾರುಣ್ಯರಾಮ್, ರೂಪಿಕಾ, ಮಾನ್ವಿತಾಹರೀಶ್, ಅದಿತಿಪ್ರಭುದೇವ.ಅದಿತಿರಾವ್,ಸಂಯುಕ್ತಹೂರನಾಡು,ಸೋನುಗೌಡ ಮುಂತಾದವರು ಇರುವುದು ವಿಶೇಷ. ಶೀರ್ಷಿಕೆ ಹೇಳುವಂತೆ ಜಗ್ಗೇಶ್ ಕನ್ನಡ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಚಲಿತ ಸ್ಥಿತಿಯಲ್ಲಿ ....
ಭಾಷೆ ಸಂಬಂದಗಳ ಕುರಿತಾದ ಗಡಿನಾಡು ಗತಕಾಲದಿಂದಲೂ ಬೆಳಗಾವಿಯಲ್ಲಿ ಕನ್ನಡ-ಮರಾಠಿ ಭಾಷೆ ಸಮಸ್ಯೆ ಉದ್ಬವವಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಕೆಲವೊಂದು ಕ್ರಮಗಳನ್ನು ಕೈಗೊಂಡರೂ ಅದು ಪ್ರಯೋಜನವಾಗಿಲ್ಲ. ಇಂತಹುದೆ ಅಂಶಗಳ ಕುರಿತಾದ ‘ಗಡಿನಾಡು’ ಚಿತ್ರವೊಂದು ಚಿಕ್ಕೋಡಿ, ಅಥಿಣಿ, ಬೆಳಗಾವಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಿ ಸದ್ಯ ಡಿಟಿಎಸ್ ಹಂತದಲ್ಲಿ ಬ್ಯುಸಿ ಇದೆ. ವಿದ್ಯಾಭ್ಯಾಸ ಮುಗಿಸಿ ಕುಂದಾನಗರಿಗೆ ಹೋಗುವ ಕಥಾನಾಯಕ ಅಲ್ಲಿನ ಗಡಿ ಸಮಸ್ಯೆಗಳನ್ನು ಕಂಡು ಗಡಿನಾಡ ಸೇನೆಯನ್ನು ಕಟ್ಟುತ್ತಾನೆ. ಇದರ ಮಧ್ಯೆ ನೀರೆಯೊಂದಿಗೆ ಪ್ರೇಮ ಹುಟ್ಟುತ್ತದೆ. ಇದನ್ನು ಸಹಿಸದ ದುಷ್ಟರು ಗಲಾಟೆ ಮಾಡುತ್ತಾ ....
ಸತ್ಯ ಘಟನೆಯ ಮೂರ್ಕಲ್ ಎಸ್ಟೆಟ್
೨೦೦೦ ಇಸವಿ ಮೈಸೂರು ಹಾಸ್ಟಲ್ದಲ್ಲಿ ನಡೆದ ಘಟನೆಯ ಒಂದು ಏಳೆ ತೆಗೆದುಕೊಂಡಿದ್ದು ‘ಮೂರ್ಕಲ್ ಎಸ್ಟೇಟ್’ ಚಿತ್ರವಾಗಿ ಮೂಡಿಬಂದಿದೆ. ಸೆನ್ಸಾರ್ ಮಂಡಳಿಯು ಕೆಲವೊಂದು ದೃಶ್ಯಗಳನ್ನು ನೋಡಿ ಬೆಚ್ಚಿಬಿದ್ದು, ಪ್ರಶಂಸೆ ವ್ಯಕ್ತಪಡಿಸಿದೆ. ನಂತರ ಎ ಪ್ರಮಾಣ ಪತ್ರ ನೀಡಿ, ಪೋಸ್ಟರ್ದಲ್ಲಿ ಸೆನ್ಸಾರ್ನವರು ಬೆಚ್ಚಿ ಬಿದ್ದರೆಂದು ಹಾಕಲು ಅನುಮತಿ ನೀಡಿದ್ದಾರೆಂದು ನಿರ್ದೇಶಕ ಪ್ರಮೋದ್ಕುಮಾರ್ ಮಾದ್ಯಮಕ್ಕೆ ತಿಳಿಸಿದ್ದಾರೆ. ನೆವರ್ ಡಿಸ್ಟರ್ಬ್ ಎನರ್ಜಿ ಎಂದು ಅಡಿಬರಹವಿದೆ. ಸಕರಾತ್ಮಕ ಮತ್ತು ನಕರಾತ್ಮಕ ಶಕ್ತಿ ಮೇಲೆ ಕತೆ ಏಣೆಯಲಾಗಿದೆ.
ಆಮದು ತಂತ್ರಜ್ಘರ ಕನ್ನಡ ಚಿತ್ರ ಚಂದನವನವು ನೆರೆ ಭಾಷಿಗರನ್ನು ಆವಜ್ಘೆ ಮಾಡದೆ, ನಿರ್ವ್ಯಾಜದಿಂದ ಅವಕಾಶಗಳನ್ನು ನೀಡುತ್ತಿರುವುದರಿಂದ ಟಾಲಿವುಡ್, ಕಾಲಿವುಡ್ ಹೆಚ್ಚಾಗಿ ಮಾಲಿವುಡ್ ಕಡೆಗಳಿಂದ ತಂತ್ರಜೃರು ಬರುತ್ತಿದ್ದಾರೆ. ಆ ಸಾಲಿಗೆ ‘ರೈಮ್ಸ್’ ಚಿತ್ರವು ಸೇರ್ಪಡೆಯಾಗಿದೆ. ಬರವಣಿಗೆ ಮತ್ತು ನಿರ್ದೇಶಕ ಅಜಿತ್ಕುಮಾರ್.ಜೆ, ಸಂಗೀತ ಶಕ್ತಿ ಇವರಿಬ್ಬರು ಚೈನ್ನೈ ಮೂಲದವರು, ಕೇರಳದ ಅರ್ಜುನ್ಅಕ್ಕೋಟ್ ಛಾಯಾಗ್ರಾಹಕ. ಇವರೆಲ್ಲರೂ ಕಂಠಪಾಠ ಮಾಡಿ ಸುದ್ದಿಗೋಷ್ಟಿಯಲ್ಲಿ ಕನ್ನಡದಲ್ಲಿ ಪರಿಚಯಿಸಿಗೊಂಡಿದ್ದು ಸಮಾಧಾನಕರವಾಗಿತ್ತು. ಕ್ರೈಂ ಥ್ರಿಲ್ಲರ್ ಕತೆಯಲ್ಲಿ ಕೊಲೆಗಳು ನಡೆಯುತ್ತವೆ. ಇದನ್ನು ತನಿಖೆ ಮಾಡಲು ....
ಹೊಸ ಪ್ರತಿಭೆಗಳಿಗೊಂದು ಸೂಕ್ತ ವೇದಿಕೆ ಬಣ್ಣದ ಲೋಕ ಎಂಥವರನ್ನು ಸೆಳೆಯುತ್ತದೆ ಎಂಬುದಕ್ಕೆ ವಿವಿಧ ಕ್ಷೇತ್ರಗಳಿಂದ ಹಲವು ಹೊಸ ಪ್ರತಿಭೆಗಳು ಬರುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇದರಲ್ಲಿ ಕೆಲವರಿಗೆ ಅನುಭೂತಿ ಇದ್ದರೂ ಯಾವ ರೀತಿ ಹೋಗಬೇಕೆಂದು ತಿಳಿಯದೆ ಚಡಪಡಿಸುತ್ತಿರುತ್ತಾರೆ. ಇಂತಹವರಿಗಂತಲೇ ‘ಐರಾ ಫಿಲ್ಮ್ಸ್’ ಸಂಸ್ಥೆಯೊಂದು ಪ್ರಾರಂಭಗೊಂಡಿದೆ. ಹಿರಿಯ ನಿರ್ದೇಶಕ ಜಿ.ವಿ.ಅಯ್ಯರ್ ಮೊಮ್ಮಗಳು, ‘ಟ್ರಂಕ್’ ಚಿತ್ರದ ನಿರ್ದೇಶಕಿ ರಿಶಿಕಾಶರ್ಮಾ ಮತ್ತು ನಾಯಕ ನಿಹಾಲ್ ಸಂಘಟಿತವಾಗಿ ಸತತ ಒಂದು ವರ್ಷಗಳ ಕಾಲ ವಿತರಣೆ, ನಿರ್ಮಾಣ ಮತ್ತು ಪ್ರದರ್ಶನ ಕುರಿತಂತೆ ಸಂಶೋಧನೆ ನಡೆಸಿ ಅಂತಿಮವಾಗಿ ಸಂಸ್ಥೆಯನ್ನು ತರೆಯುವಲ್ಲಿ ....
ಅತಿರಥ ಮಹಾರಥರ ಸಮ್ಮುಖದಲ್ಲಿ ಹಾಡುಗಳ ಲೋಕಾರ್ಪಣೆ ಶಿವರಾಜ್ಕುಮಾರ್ ಇದ್ದಕಡೆ ಅಲ್ಲೋಂದು ಕಂಪನ ಇರುತ್ತದೆ. ಅವರ ಅಭಿನಯದ ‘ಆಯುಷ್ಮಾನ್ಭವ’ ಚಿತ್ರದ ದ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಘಟಾನುಘಟಿಗಳು ಆಗಮಿಸಿದ್ದರು. ವಿ.ಮನೋಹರ್, ಉಪೇಂದ್ರ, ೧೦೦ನೇ ಚಿತ್ರಕ್ಕೆ ಸಂಗೀತ ಒದಗಿಸಿರುವ ಗುರುಕಿರಣ್ ಇವರುಗಳು ಮಾತನಾಡುವುದರೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ದ್ವಾರಕೀಶ್ ಎಂದಿನಂತೆ ಹಳೆಯ ನೆನಪುಗಳನ್ನು ಬಿಚ್ಚಿಟ್ಟು ಶಿವಣ್ಣ ಲಕ್ಕಿ ಸ್ಟಾರ್. ಇವರ ಡೇಟ್ಸ್ ಸಿಗಲು ಇಪ್ಪತ್ತು ವರ್ಷ ಕಾಯಬೇಕಾಯಿತು. ಇನ್ನು ಮುಂದೆ ನಮ್ಮದು ಅದೃಷ್ಟ ಎಂದರು. ಐವತ್ತು ವರ್ಷದ ಸಂಸ್ಥೆಗೆ ೫೨ನೇ ಚಿತ್ರವನ್ನು ....
ಡಬ್ಬಿಂಗ್ ಚಿತ್ರಕ್ಕೆ ಕನ್ನಡಿಗರು ಮನ್ನಣೆ ಹಾಕಿಲ್ಲ – ಜಗ್ಗೇಶ್ ಡಬ್ಬಿಂಗ್ ಚಿತ್ರಗಳನ್ನು ಇಲ್ಲಿಯೂ ಪ್ರದರ್ಶಿಸಬಹುದೆಂದು ನ್ಯಾಯಲಯವು ತೀರ್ಪು ನೀಡಿದ್ದರಿಂದ ಸ್ಟಾರ್ ನಟರ ಚಿತ್ರಗಳು ಇಲ್ಲಿನ ಭಾಷೆಗೆ ಡಬ್ ಆಗಿ ಬಿಡುಗಡೆಗೊಂಡಿದ್ದವು. ಆದರೆ ಕನ್ನಡಿಗರು ಸಾರಸಗಟಾಗಿ ತಿರಸ್ಕರಿಸಿ ಬುದ್ದಿ ಕಲಿಸಿದ್ದಾರೆಂದು ಜಗ್ಗೇಶ್ ಖುಷಿಯಿಂದ ಹೇಳಿಕೊಂಡರು. ‘ಮಾಲ್ಗುಡಿ ಡೇಸ್’ ಸಿನಿಮಾದ ಪೋಸ್ಟರ್ನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು. ಅವರು ಹೇಳುವಂತೆ ನಮ್ಮದು ಹಸುವಿನ ಹಾಲು. ಅವರದು ನಾಯಿ ಹಾಲು. ಬೇರೆ ಭಾಷೆಯ ಸಿನಿಮಾವನ್ನು ತರ್ಜುಮೆ ಮಾಡಿ ಬಿಡುಗಡೆ ಮಾಡಿದಾಗ ಜನರು ಇಷ್ಟಪಟ್ಟಿಲ್ಲ. ಕಲಾವಿದನಿಗೆ ಬಣ್ಣವೇ ದೇವರು. ಬಣ್ಣ ಹಾಕಿದಾಗ ಜನರೇ ....
ಹಳ್ಳಿಯ ಉನ್ನತಿಗಾಗಿ ಹೋರಾಡುವ ಹುಡುಗ ರಣ+ಅಶ್ವ=ರಣಾಶ್ವ. ಯುದ್ದದ ಕುದುರೆ ಹೆಸರಾಗಿದೆ. ಈಗ ಹೊಸ ತಂಡವು ಕ್ಯಾಚಿ ಇರಲೆಂದು ‘ರಣಶ್ವ’ ಶೀರ್ಷಿಕೆಯೊಂದಿಗೆ ಚಿತ್ರವನ್ನು ಸಿದ್ದಪಡಿಸುತ್ತಿದ್ದಾರೆ. ಪ್ರಚಲಿತ ಇಡೀ ದೇಶದಲ್ಲಿ ಹಳ್ಳಿಗಳು ಅಭ್ಯುದಯಗೊಳ್ಳುತ್ತಿದೆ. ಆದರೆ ಒಂದು ಹಳ್ಳಿ ಮಾತ್ರ ಯಥಾಸ್ಥಿತಿಯಲ್ಲಿ ಇರುತ್ತದೆ. ಒಮ್ಮೆ ಕಥಾನಾಯಕ ಅಲ್ಲಿಗೆ ಭೇಟಿ ನೀಡಿ ಸಮಸ್ಯೆಗಳನ್ನು ತಿಳಿದುಕೊಳ್ಳುವಷ್ಟರಲ್ಲಿ, ಇದು ತನ್ನದೆ ಊರು ಎಂದು ಗೊತ್ತಾಗುತ್ತದೆ. ನಂತರ ಇದನ್ನು ಯಾವ ರೀತಿ ಅಭಿವೃದ್ದಿ ಪಡಿಸುತ್ತಾನೆ, ಹೇಗೆ ಹೋರಾಡುತ್ತಾನೆ ಎಂಬುದು ಒಂದು ಏಳೆಯ ಕತೆಯಾಗಿದೆ. ಯುದ್ದದಲ್ಲಿ ಅಶ್ವ ಹೋರಾಟ ಮಾಡುವಂತೆ ಚಿತ್ರದಲ್ಲಿ ಆತನು ಇದೇ ....
ಚಂದನವನದ ಹಾಲಿವುಡ್ ಚಿತ್ರ ಸಂಪೂರ್ಣ ಚಿತ್ರೀಕರಣ ವಿದೇಶದಲ್ಲಿ ನಡೆಸಿದ ಕಾರಣ ‘ಬಬ್ರೂ’ ಪ್ರಥಮ ಕನ್ನಡದ ಹಾಲಿವುಡ್ ಚಿತ್ರ ಅಂತ ಪರಿಗಣಿಸಬಹುದೆಂದು ರಚಿಸಿ ಪ್ರಥಮಬಾರಿ ನಿರ್ದೇಶನ ಮಾಡಿರುವ ಸುಜಯ್ ರಾಮಯ್ಯ ಬಣ್ಣಿಸುತ್ತಾರೆ. ಕೆಲವು ಚಿತ್ರಗಳಲ್ಲಿ ಕತೆಯು ವಿದೇಶದಲ್ಲಿ ಹುಟ್ಟಿಕೊಂಡರೂ ಮುಂದೆ ನಮ್ಮ ನಾಡಿಗೆ ಶಿಫ್ಟ್ ಆಗುತ್ತದೆ. ಆದರೆ ಈ ಸಿನಿಮಾವು ಅಮೇರಿಕಾ ಮತ್ತು ಅಲ್ಲಿನ ಸುಂದರ ಪರಿಸರಗಳಲ್ಲಿ ಶೂಟ್ ಮಾಡಲಾಗಿದೆ. ಭಾರತದಲ್ಲಿ ವಾಹನಗಳನ್ನು ಸಂಖ್ಯೆ ಮೂಲಕ ನೊಂದಣಿ ಮಾಡಿಸಬಹುದು. ಅಮೇರಿಕಾದಲ್ಲಿ ಹೆಸರಿನಲ್ಲೂ ರಿಜಿಸ್ಟ್ರೇಷನ್ ಮಾಡಿಸಲು ಅವಕಾಶವಿದೆ. ಚಿತ್ರದ ಕುರಿತು ಹೇಳುವುದಾದರೆ ಭಾರತೀಯರಾದ ಅರ್ಜುನ್ ....
ತೆರೆಗೆ ಸಿದ್ದ ದಂಡುಪಾಳ್ಯಂ-೪ ದಂಡುಪಾಳ್ಯ ಚಿತ್ರವು ೨೦೧೨ರಲ್ಲಿ ಬಿಡುಗಡೆಯಾಗಿ ನಂತರ ವಿವಾದವಾದ ಹಿನ್ನಲೆಯಲ್ಲಿ ಭಾಗ-೨ ಮತ್ತು ೩ ಟೈಟಲ್ನೊಂದಿಗೆ ತೆರೆಕಂಡಿತ್ತು. ಈಗ ‘ದಂಡುಪಾಳ್ಯಂ-೪’ ಎನ್ನುವ ಚಿತ್ರವೊಂದು ಬೆಂಗಳೂರು, ಪಾವಗಡ ಸ್ಥಳಗಳಲ್ಲಿ ಸದ್ದಿಲ್ಲದೆ ಚಿತ್ರೀಕರಣ ತೆರೆಗೆ ಬರಲು ಸಿದ್ದವಾಗಿದೆ. ಎಸಿಪಿಯಾಗಿ ಕಾಣಿಸಿಕೊಂಡಿರುವ ಮತ್ತು ನಿರ್ಮಾಪಕ ವೆಂಕಟ್ ಹೇಳುವಂತೆ ಹಿಂದಿನ ಎರಡು ಚಿತ್ರಗಳು ಬೇರೆ ಭಾಷೆಯಲ್ಲಿ ಹೆಸರು ಮಾಡಿತ್ತು. ನ್ಯಾಯಲಯದ ಆದೇಶದಂತೆ ದಂಡುಪಾಳ್ಯಂ ಹೆಸರನ್ನು ಇಡಲಾಗಿದೆ. ಶೀರ್ಷಿಕೆ ಇದೆಯಾದರೂ ....
ವಸಿಷ್ಟ ವರ್ಧಂತಿಗೆ ಟೀಸರ್ ಲೋಕಾರ್ಪಣೆ ಪ್ರವರ್ಧಮಾನಕ್ಕೆ ಬರುತ್ತಿರುವ ನಟ ವಸಿಷ್ಟಸಿಂಹ ನಾಯಕನಾಗಿ ನಟಿಸಿರುವ ‘ಕಾಲಚಕ್ರ’ ಚಿತ್ರದ ಟೀಸರ್ ಅವರ ಹುಟ್ಟುಹಬ್ಬದಂದು ಸುದೀಪ್ ಲೋಕಾರ್ಪಣೆ ಮಾಡಿದರು. ನೈಜ ಘಟನೆ ಆಧಾರಿತ ಕತೆಯಾಗಿದ್ದು, ನೋಡುಗನಿಗೆ ಪ್ರತಿಯೊಂದು ಪಾತ್ರವು ತನಗೆ ಸಂಬಂದಿಸಿದೆ ಅನಿಸುತ್ತದೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಘಟನೆಗಳು ನಡೆಯುತ್ತವೆ. ಅದೆಲ್ಲಾವನ್ನು ಎದುರಿಸಿ ಬರುವಷ್ಟರಲ್ಲಿ ಅವನ ಪ್ರಾಣಪಕ್ಷಿ ಹಾರೋಗಿರುತ್ತೆ. ಅಂತಹ ಘಟನೆ ನಡೆದಾಗ ಮನುಷ್ಯನಾದವನು ಹೇಗೆ ಸ್ಪಂದಿಸುತ್ತಾನೆ. ಆ ಸಂದರ್ಭದಲ್ಲಿ ಯಾವ ರೀತಿ ಎದುರಿಸುತ್ತಾನೆ. ಇದೆಲ್ಲಾವನ್ನು ಪ್ರಸಕ್ತ ಕಾಲಘಟ್ಟದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ ....
ಅಂದವಾದ ಈ ವಾರ ಬಿಡುಗಡೆ
ಮಧುಶ್ರೀ ಗೋಲ್ಡ್ ಫ್ರೇಮ್ಸ್ ಲಾಂಛನದಲ್ಲಿ ಡಿ.ಆರ್. ಮಧು ಜಿ ರಾಜ್ ನಿರ್ಮಿಸಿರುವ ಅಂದವಾದ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮಳೆಗಾಲದಲ್ಲಿ ನಡೆಯುವ ಕ್ಯೂಟ್ ಲವ್ ಸ್ಟೋರಿ ಜೊತೆ ಒಂದೊಳ್ಳೆ ಮೆಸೇಜ್ ಕೊಡುವ, ಕಾಡುವ ಕಥೆ ಈ ಚಿತ್ರದಲ್ಲಿದೆ. ಸಿನಿಮಾ ಪೂರ್ತಿ ನಗಿಸುತ್ತಲೇ, ಕೊನೆಗೆ ನೋಡುಗರ ಕಣ್ಣು ತೇವಗೊಳಿಸಬಲ್ಲ ಗಂಭೀರ ಕಥಾ ವಸ್ತು ಕೂಡಾ ಇದರಲ್ಲಿದೆ. ಈ ಚಿತ್ರಕ್ಕೆ ಚಲ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಐಎಎಸ್ ಯುವ ರೈತ ‘ಬಂಗಾರದ ಮನುಷ್ಯ’ ಸಿನಿಮಾವನ್ನು ನೆನಪು ಮಾಡಿಕೊಂಡರೆ ಡಾ.ರಾಜ್ಕುಮಾರ್ ನಟಿಸಿದ್ದ ‘ರಾಜೀವ’ ಪಾತ್ರ ಕಣ್ಣ ಮುಂದೆ ಬರುತ್ತದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಜನರನ್ನು ಸೆಳೆಯಲು ಮೊದಲ ಆಹ್ವಾನ ಪತ್ರಿಕೆ ಎನ್ನುವಂತೆ ಧ್ವನಿಸಾಂದ್ರಿಕೆ ಲೋರ್ಕಾಪಣೆಗೊಂಡಿತು. ಚಿತ್ರದ ವಿಶೇಷತೆ ಕುರಿತಂತೆ ನಿರ್ದೇಶಕ ಫ್ಲೈಯಿಂಗ್ಕಿಂಗ್ ಮಂಜು ಮಾತನಾಡಿದ್ದು ಹೀಗೆ: ಯುವ ರೈತರ ಕತೆಯಾಗಿದೆ. ಈಗಾಗಲೇ ಬೆಳೆನಾಶ ಹಾಗೂ ಸಾಲಬಾಧೆಯಿಂದ ಸಾಕಷ್ಟು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸೂಕ್ಷ ವಿಚಾರಗಳನ್ನು ತೆಗೆದುಕೊಂಡು ದೃಶ್ಯರೂಪದಲ್ಲಿ ತೋರಿಸುವ ಪ್ರಯತ್ನ ....
ಕೋಟಿಗೊಬ್ಬ ೩ ಚಿತ್ರೀಕರಣದಲ್ಲಿ ನಡೆದ ಘಟನೆಗೆ ನಿರ್ಮಾಪಕರ ಸ್ಪಷ್ಟನೆ ಸುದೀಪ್ ಅಭಿನಯದ ‘ಕೋಟಿಗೊಬ್ಬ ೩’ ಸಿನಿಮಾದ ಚಿತ್ರೀಕರಣದಲ್ಲಿ ನಡೆದ ಘಟನೆ ಕುರಿತಂತೆ ವಾಹಿನಿ, ಪತ್ರಿಕೆಗಳಲ್ಲಿ ಗೊಂದಲದ ಸುದ್ದಿ ಬಂದ ಕಾರಣ, ನಿರ್ಮಾಪಕ ಸೂರಪ್ಪಬಾಬು ಇದೆಲ್ಲಾದಕ್ಕೂ ಸ್ಪಷ್ಟವಾದ ಮಾಹಿತಿಗಳನ್ನು ನೀಡುತ್ತಾ ಹೋದರು. ಒಂದಷ್ಟು ಭಾಗದ ಚೇಸಿಂಗ್ ದೃಶ್ಯವನ್ನು ಪೋಲೇಂಡ್ದಲ್ಲಿ ಚಿತ್ರೀಕರಿಸಬೇಕಾಗಿತ್ತು. ಈ ನಿಟ್ಟಿನಲ್ಲಿ ಹ್ಯಾರಿಸ್ ಮೂಲಕ ಬಾಂಬೆ ಮೂಲದ ಅಜಯ್ಪಾಲ್ ಹಾಗೂ ಸಂಜಯ್ಪಾಲ್ ಅವರ ಕಂಪೆನಿ ಪರಿಚಯವಾಯಿತು. ಇವರನ್ನು ಸಂಪರ್ಕಿಸಿ ಚಿತ್ರದ ಕುರಿತಂತೆ ಪೂರ್ಣ ಮಾಹಿತಿ ನೀಡಲಾಯಿತು. ನಮ್ಮ ಯೋಜನೆಯಂತೆ ....
ನೈಜ ಘಟನೆಗಳ ಸಿದ್ದಿ ಸೀರೆ ಕನ್ನಡ ಚಿತ್ರಗಳು ಇತ್ತೀಚೆಗೆ ಬೇರೆ ರಾಜ್ಯಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವುದು ಚಂದನವನಕ್ಕೆ ಸಂತಸ ತಂದಿದೆ. ಆ ಸಾಲಿಗೆ ‘ಸಿದ್ದಿ ಸೀರೆ’ ಸೇರ್ಪಡೆಯಾಗುತ್ತದೆ. ಸಿನಿಮಾವು ನ್ಯೂಯಾರ್ಕ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಒಂಬತ್ತು ವಿಭಾಗದಲ್ಲಿ ಪ್ರಶಸ್ತಿಗೆ ಅರ್ಹವಾಗಿದೆ. ದಲಿತ ಮಹಿಳೆಯೊಬ್ಬಳು ತನಗೆ ಸದ್ಗತಿ ದೊರಕಿಸುವ ಒಂದು ಸೀರೆಗಾಗಿ ಹೋರಾಟ ಮಾಡುವುದು ಒಂದು ಏಳಯ ಕತೆಯಾಗಿದೆ. ೯೦ರ ದಶಕದಲ್ಲಿ ಚಾಮರಾಜನಗರ ಬಳಿ ಇರುವ ಮಿರ್ಲೆ ಎಂಬ ಗ್ರಾಮದಲ್ಲಿ ನಡೆದಂತ ಸತ್ಯ ಘಟನೆ ಚಿತ್ರರೂಪಕ್ಕೆ ಬಂದಿದೆ. ಆಗಿನ ಕಾಲದಲ್ಲಿ ಹಿರಿಯ ಮಹಿಳೆ ನಿಧನ ....