Jaggi Jothe Jaanu.Film Poster Rel.

Saturday, August 31, 2019

ಕಿರು ಚಿತ್ರದ ಕತೆ ಸಿನಿಮಾ  ಆಗುತ್ತಿದೆ         ಚಂದನವನದಲ್ಲಿ  ಚಿತ್ರ ಶುರು ಮಾಡುವ ಮುನ್ನ ಸದ್ದು ಮಾಡುವುದು, ಅರ್ಧ ಕೆಲಸ ಮುಗಿಸಿದ ನಂತರ ಸುದ್ದಿ ನೀಡುವುದು. ಬಿಡುಗಡೆ ಪೂರ್ವ ಸಂದರ್ಭದಲ್ಲಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸುವುದು. ಮೇಲಿನ ಮೂರು ವರ್ಗಗಳಲ್ಲಿ ‘ಜಗ್ಗಿ ಜೊತೆ ಜಾನು’ ಚಿತ್ರವು ಮೊದಲನೇ ವರ್ಗಕ್ಕೆ ಸೇರುತ್ತದೆ. ವರ್ಷದ ಕೊನೆ ತಿಂಗಳಲ್ಲಿ  ಆರಂಭಿಸಲು ಯೋಜನೆ ರೂಪಿಸಿದ್ದು, ಪ್ರಚಾರದ ಮೊದಲ  ಹಂತವಾಗಿ ಶರಣ್ ಅವರಿಂದ ಪೋಸ್ಟರ್‌ನ್ನು  ಅನಾವರಣಗೊಳಿಸಿದ್ದಾರೆ. ಶೀರ್ಷಿಕೆ ಹೇಳುವಂತೆ ಪ್ರೀತಿ, ಭಾವನೆಗಳು, ಸಾಹಸ, ಹಾಸ್ಯ ಜೊತೆಗೆ ಸಾಮಾಜಿಕ ಅಂಶಗಳು ಬರಲಿದೆ. ಪಯಣದಲ್ಲಿ ಕತೆಯು ಬರುವುದು ....

482

Read More...

Hagalu Kanasu.Film Audio Rel.

Saturday, August 31, 2019

ಮಾಸ್ಟರ್  ಆನಂದ್‌ಗೆ  ಹಗಲು ಕನಸು        ಬಾಲ ನಟ, ಪೋಷಕ ಪಾತ್ರಗಳು, ಕಿರುತೆರೆ ಸ್ಟಾರ್ ನಿರೂಪಕ ಮಾಸ್ಟರ್ ಆನಂದ್  ‘ಹಗಲು ಕನಸು’ ಚಿತ್ರದಲ್ಲಿ ಮೊದಲಬಾರಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.  ಶೀರ್ಷಿಕೆ ಹೇಳುವಂತೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಕೆಂಡ್‌ನಲ್ಲಿ ನಡೆಯುವ ಕತೆ ಇರುವುದು ವಿಶೇಷ.  ಕಥಾನಾಯಕ ವಿಕ್ರಮಾದಿತ್ಯ ಆಲಿಯಾಸ್ ವಿಕ್ರಂಗೆ  ಪ್ರತಿ ಬಾರಿ ಕುತ್ತಿಗೆ ಮೇಲೆ ಮಚ್ಚೆ ಇರುವ ಮುಖ ಕಾಣಿಸದ ಹುಡುಗಿಯೊಬ್ಬಳು ಸಿಕ್ಕಂತೆ ಕನಸು ಕಾಣುತ್ತಿರುತ್ತಾನೆ. ಸೋಜಿಗ ಎನ್ನುವಂತೆ ಒಮ್ಮೆ ಅದೇ ತರಹದ ಹುಡುಗಿಯೊಬ್ಬಳು ಮನೆ ಪ್ರವೇಶಿಸಿದಾಗ ಮನೆಯಲ್ಲಿರುವ ಇಬ್ಬರು ಅಳಿಯಂದಿರು, ಅಮ್ಮನಿಗೆ ....

294

Read More...

Lungi.Film Teaser Rel.

Friday, August 30, 2019

ಲುಂಗಿ ಟ್ರೈಲರ್ ಬಿಡುಗಡೆ  ಮಾಡಿದ  ರಕ್ಷಿತ್‌ಶೆಟ್ಟಿ         ಮಂಗಳೂರು ಸೊಗಡಿನ ‘ಲುಂಗಿ’ ಚಿತ್ರಕ್ಕೆ ಅದೇ ಭಾಗದವರಾದ ರಕ್ಷಿತ್‌ಶೆಟ್ಟಿ  ಟ್ರೈಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಂತರ ಮಾತನಾಡುತ್ತಾ ತುಣುಕುಗಳನ್ನು ನೋಡಿದ್ದೇನೆ. ಅದ್ಬುತವಾಗಿ ಮೂಡಿಬಂದಿದೆ. ಬಹಳ ವರ್ಷಗಳ ಹಿಂದೆ ನಿರ್ದೇಶಕರು ಆಯಾ ಜಿಲ್ಲೆಯ ಭಾಷೆಯನ್ನು ಟಚ್ ಮಾಡುತ್ತಿರಲಿಲ್ಲ. ಕಾಲ ಬದಲಾದಂತೆ ಈಗಿನ ತಂತ್ರಜ್ಘರು  ಹೆಚ್ಚಾಗಿ ಕಡಲತೀರದ ಭಾಷೆಯ ಕುರಿತಂತೆ ಚಿತ್ರಗಳನ್ನು ಮಾಡುತ್ತಿದ್ದಾರೆ. ಒಳ್ಳೆ ಸಿನಿಮಾ  ಮಾಡಿದಾಗ ವಿತರಕರ ಕಚೇರಿ ತಾನಾಗೆ ತೋರಿಸುತ್ತದೆ. ಕರ್ನಾಟಕದ ಒಂದೊಂದು ಭಾಗದಿಂದ ತಂಡವು ಬಂದು ಅಲ್ಲಿನ ಕತೆ ಆರಿಸಿಕೊಂಡು ಚಿತ್ರ ಮಾಡಿದಾಗ ....

322

Read More...

Parimala Lodge.Film Press Meet.

Wednesday, August 28, 2019

ಪರಿಮಳ ಲಾಡ್ಜ್ ನಿರ್ದೇಶಕರಿಗೆ ದರ್ಶನ್ ಪ್ರಶಂಸೆ        ೭೦ರ ದಶಕದಲ್ಲಿ ಶ್ರೀನಾಥ್, ಮಂಜುಳಾ ಅಭಿನಯದ ‘ಪಾಯಿಂಟ್ ಪರಿಮಳ’ ಚಿತ್ರವೊಂದು ತೆರೆಕಂಡಿತ್ತು. ಈಗ ‘ಪರಿಮಳ ಲಾಡ್ಡ್’  ವಿಡಂಭನೆ, ಮನರಂಜನೆ ಕುರಿತಾದ  ಚಿತ್ರವು ನಿರ್ಮಾಪಕರ ಹುಟ್ಟುಹಬ್ಬದಂದು ಮಹೂರ್ತ ನೆರೆವೇರಿತು. ಸಂಜೆ ಟೀಸರ್‌ಗೆ ಚಾಲನೆ ನೀಡಿದ ದರ್ಶನ್  ನಿರ್ದೇಶಕರ ಬುದ್ದಿವಂತಿಕೆಯನ್ನು  ಕೊಂಡಾಡಿ ತಂಡಕ್ಕೆ ಶುಭ ಹಾರೈಸಿದರು. ಒಬ್ಬ ಮಹಿಳೆ, ಪೀಪಿ ಊದುವವ, ಲೇಡಿ ಟ್ರಾಫಿಕ್‌ಇನ್ಸ್‌ಪೆಕ್ಟರ್, ಇಬ್ಬರು ಯುವಕರು ಸೇರಿದಂತೆ ಎಲ್ಲರದು ಸೊಂಟದ ಕೆಳಗಿನ ಭಾಷೆ ಬಳಸಿದಕ್ಕಾಗಿ ಹಿರಿಯ ಪೋಲೀಸ್ ಅಧಿಕಾರಿಗೆ ದೂರು ಕೊಡಲು ಬರುವುದು.  ....

373

Read More...

Thanike.Film Audio Rel.

Tuesday, August 27, 2019

ಹೊಸ ತನಿಖೆ         ಎರಡೂವರೆ ದಶಕಗಳ ಹಿಂದೆ  ಗುಲ್ಜಾರ್‌ಖಾನ್ ನಟನೆ,ನಿರ್ಮಾಣ,ನಿರ್ದೇಶನದ ‘ತನಿಖೆ’ ಸಿನಿಮಾ ಬಿಡುಗಡೆಗೊಂಡಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಹಾಗಂತ ಅದಕ್ಕೂ ಇದಕ್ಕೂ ಸಂಬಂದವಿಲ್ಲ. ಕನಕಪುರದಲ್ಲಿ ಎಂಬತ್ತು ವರ್ಷಗಳ ಹಿಂದೆ ನಡೆದಂತ ಸತ್ಯ ಘಟನೆಯ ಒಂದು ಏಳೆಯನ್ನು ತೆಗೆದುಕೊಳ್ಳಲಾಗಿದೆ. ಪ್ರಪಂಚದಲ್ಲಿ ಇರುವವರೆಲ್ಲಾ ದುರುಳರು ಅಂತ ತಿಳಿದಿದ್ದ ಕೆಟ್ಟವ್ಯಕ್ತಿಯೊಬ್ಬ ಎಲ್ಲರನ್ನು ಸಾಯಿಸುತ್ತಾ, ಕೊನೆಗೆ ಮನಸ್ಸನ್ನು ಸನ್ಮಾರ್ಗಕ್ಕೆ ತಂದುಕೊಂಡು ಕಾಡಿಗೆ ಹೋಗುತ್ತಾನೆ.  ಕೇಸ್‌ನ್ನು ಗಂಭೀರವಾಗಿ ತೆಗೆದುಕೊಂಡ ಪೋಲೀಸರು ಆತ ಇರುವಲ್ಲಿಗೆ ತೆರಳಿ ಅಪರಾಧಿಯನ್ನು ....

228

Read More...

Goori.Film Audio Rel.

Monday, August 26, 2019

ವಾಹಿನಿ  ಪತ್ರಕರ್ತರ  ಗೋರಿ          ಪ್ರತಿಭೆ ಎನ್ನುವುದು ಎಲ್ಲಿ ಬೇಕಾದರೂ ಅಡಗಿರುತ್ತದೆ ಎಂಬುದಕ್ಕೆ ಸಾಕ್ಷಿ ‘ಗೋರಿ’ ಚಿತ್ರ . ಪ್ರೀತಿಯ ಸಮಾಧಿ ಅಂತ ಉಪಶೀರ್ಷಿಕೆಯಲ್ಲಿ  ಹೇಳಿಕೊಂಡಿರುವ ಬಹುತೇಕ ತಂಡವು ಉತ್ತರ ಕರ್ನಾಟಕದವರೇ ಆಗಿರುವುದು ವಿಶೇಷ.  ವಾಹಿನಿಯ ಸಿನಿಮಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಕಿರಣ್‌ಹಾವೇರಿ ನಾಯಕ, ಹಾಗೂ ಎಂ.ಹೆಚ್.ಜಗ್ಗೀನ್ ಒಂದು ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಪ್ರೀತಿ ಮತ್ತು ಸ್ನೇಹದ ಕುರಿತಾದ ಕತೆಯಲ್ಲಿ ಜಾತಿ ಮತ್ತು ಧರ್ಮಕ್ಕಿಂತ ಮಿಗಿಲಾದುದು ಸ್ನೇಹ,ಪ್ರೀತಿ. ಇವರೆಡಕ್ಕಿಂತಲೂ ಮಿಗಿಲಾದುದು ಮಾನವಿಯತೆ. ಮೂರು ವ್ಯಕ್ತಿಗಳು ಒಂದೇ ಕತೆಯನ್ನು ಹೇಳುತ್ತಾರೆ. ಪ್ರತಿಯೊಂದು ....

246

Read More...

Punyathgitheeru.Film Press Meet.

Monday, August 26, 2019

                          ದಾರಿ ಬಿಡಿ  ಪುಣ್ಯಾತ್‌ಗಿತ್ತೀರು ಬರುತ್ತಿದ್ದಾರೆ          ಹೆಣ್ ಮಕ್ಕಳೇ ಸ್ಟ್ರಾಂಗ್ ಗುರು ಎನ್ನುವಂತೆ ‘ಪುಣ್ಯಾತ್‌ಗಿತ್ತೀರು’ ಸಿನಿಮಾದಲ್ಲಿ ನಾಯಕರಹಿತ, ನಾಲ್ವರು ಹುಡುಗಿಯರು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೆಲ ಡೊಂಕಿದ್ರು ಕುಣಿತೀವಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ.  ರಚನೆ, ನಿರ್ದೇಶನ ಮಾಡಿರುವುದು ರಾಜ್.ಬಿ.ಎನ್.  ಕತೆಯ ಕುರಿತು ಹೇಳುವುದಾದರೆ  ಪಿಜಿದಲ್ಲಿ ಉಳಿದುಕೊಂಡಿದ್ದ ನಾಲ್ವರು ಅನಾಥ ಹುಡುಗಿಯರು  ಮೋಸ ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾರೆ. ಒಂದು ಘಟನೆ ನಡೆದಾಗ, ಅವರ ಗುಣಗಳು ಬದಲಾಗಿ ಸಮಾಜಕ್ಕೆ ಒಳ್ಳೆ ಕೆಲಸ ....

305

Read More...

Tamas.Film Pooja and Press Meet.

Monday, August 26, 2019

ಅಂದು  ತಮಸ್ಸು  ಇಂದು  ತಮಸ್           ಶಿವರಾಜ್‌ಕುಮಾರ್ ಅಭಿನಯದಲ್ಲಿ ‘ತಮಸ್ಸು’ ಚಿತ್ರವೊಂದು ತೆರೆಕಂಡು ಹಿಟ್ ಆಗಿತ್ತು.  ದಶಕಗಳ ನಂತರ ಈಗ ‘ತಮಸ್’ ಎನ್ನುವ ಸಿನಿಮಾ ಸೆಟ್ಟೇರಿದೆ.  ಎರಡು ಶೀರ್ಷಿಕೆಗೂ ಕತ್ತಲು ಅರ್ಥ ಕೊಡಲಿದ್ದು, ಹೊಸ ಚಿತ್ರದ ಪದ ಸಂಸ್ಕ್ರತದಲ್ಲಿ ಇದೆಯಂತೆ. ವಿಜಯಲಕ್ಷೀ ಮಂಜುನಾಥರೆಡ್ಡಿ ಕಾದಂಬರಿ ಆಧಾರಿತದಲ್ಲಿ  ತ್ರಿಕೋನ ಪ್ರೇಮಕತೆ ಇರುವುದು ವಿಶೇಷ. ಕುರುಡನೊಬ್ಬ ಅಂದರ ಆಶ್ರಮದಿಂದ ಸ್ವಾಬಲಂಬಿಯಾಗಿ ಬದುಕಲು ಹೊರಬರುತ್ತಾನೆ. ಸರ್ಕಾರವು ನೀಡುವ ಮಾಶಾಸನ ಜೊತೆಗೆ ತನ್ನಲ್ಲಿರುವ  ಸಾಹಿತ್ಯದ ಪ್ರತಿಭೆಯಿಂದ ಜೀವನ ನಡೆಸುತ್ತಾನೆ. ಚಿಕ್ಕಂದಿನಿಂದಲೂ ಇವನೊಂದಿಗೆ ಇರುವ ....

309

Read More...

Fan.Film Success Meet.

Monday, August 26, 2019

ಫ್ಯಾನ್‌ಗೆ  ಜನರು  ಅಭಿಮಾನಿಗಳಾದರು         ಅಭಿಮಾನಿಯ ಅಭಿಮಾನದ ಕತೆ ಅಂತ ಹೇಳಿಕೊಂಡಿರುವ ‘ಫ್ಯಾನ್’ ಚಿತ್ರಕ್ಕೆ ಎಲ್ಲಾ ಕಡೆಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಇದರ ಖುಷಿಯಲ್ಲೆ ತಂಡವು ನಾಲ್ಕು ದಿನಗಳ ನಂತರ ಚಿತ್ರದ ಬೆಳವಣಿಗೆಗಳ ಕುರಿತಂತೆ ಮಾತನಾಡಿಕೊಂಡಿತು. ನಿರ್ಮಾಪಕರ ಪರವಾಗಿ ಆಗಮಿಸಿದ್ದ  ಕಾರ್ಯಕಾರಿ ನಿರ್ಮಾಪಕ ರಾಜಮುಡಿದತ್ತ ಮಾತನಾಡಿ ಪ್ರಾರಂಭದಿಂದಲೇ ಒಳ್ಳೆ ಒಪನಿಂಗ್ ತೆಗೆದುಕೊಂಡಿದೆ. ಮಾದ್ಯಮದವರು ಉತ್ತಮ ವಿಮರ್ಶೆ ಬರೆದಿರುವುದರಿಂದ ಇದಕ್ಕೆಲ್ಲಾ ಕಾರಣವಾಗಿದೆ.  ನೆರೆಹಾವಳಿಗೆ ಸಹಾಯ ಮಾಡಲು ತಂಡವು ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ. ಕಷ್ಟದಲ್ಲಿರುವ ಜನರಿಗೆ ....

262

Read More...

Ellidde Illi Tanaka.Film Audio Rel.

Sunday, August 25, 2019

ತಾಯಂದಿರುಗಳಿಂದ ಹಾಡುಗಳ  ಅನಾವರಣ         ಹುಟ್ಟಿದ ತಕ್ಷಣ ಕಂದನ ಅಳು ಸಂಗೀತವಾಗಿರುತ್ತದೆ. ಇದಕ್ಕೆ ಕಾರಣರಾಗಿರುವುದು ತಂದೆ-ತಾಯಿ. ಅದಕ್ಕಾಗಿ ಕಲಾವಿದರು, ತಂತ್ರಜ್ಘರ ಅಮ್ಮಂದಿರು  ನಮ್ಮ ಚಿತ್ರದ ಲಿರಿಕಲ್ ಹಾಡುಗಳನ್ನು ಬಿಡುಗಡೆ ಮಾಡುವ ವಿನೂತನ ಪರಿಕಲ್ಪನೆ ಅಂತ ನಟ,ನಿರ್ಮಾಪಕ ಸೃಜನ್‌ಲೋಕೇಶ್ ತಮ್ಮದೆ  ಲೋಕೇಶ್ ಪ್ರೊಡಕ್ಷನ್ಸ್  ಮೊದಲ  ಕಾಣಿಕೆ ‘ಎಲ್ಲಿದ್ದೆ  ಇಲ್ಲಿ ತನಕ’ ಚಿತ್ರದ ಕಾರ್ಯಕ್ರಮದಲ್ಲಿ ಹೇಳುತ್ತಾ  ಮೈಕನ್ನು ಎಲ್ಲರಿಗೂ ಹಸ್ತಾಂತರಿಸಿದರು.        ಹೊರಗಡೆ ಟಾಕಿಂಗ್ ಸ್ಟಾರ್ ಅಂತ ಕರೆಸಿಕೊಂಡಿರುವ ಸೃಜನ್ ಮನೆಯಲ್ಲಿ ಮಿತಭಾಷಿ. ಅವನು ಎತ್ತರಕ್ಕೆ ಬೆಳೆಯಬೇಕೆಂದು ಯಜಮಾನರ ಆಸೆ ಇತ್ತು. ....

737

Read More...

Sugandi.Film Audio Rel.

Sunday, August 25, 2019

ಸುಗಂಧಮಯ  ಗೀತೆಗಳು

ಪ್ರಶಸ್ತಿ ವಿಜೇತ ನಿರ್ದೇಶಕ ಜಿ.ಮೂರ್ತಿಕತೆ,ಚಿತ್ರಕತೆ ಬರೆದುಆಕ್ಷನ್‌ಕಟ್ ಹೇಳಿರುವ ‘ಸುಗಂಧಿ’ ಹಾಡುಗಳು ಭಾನುವಾರದಂದು ನಿರ್ದೇಶಕರ ಶಾಲೆಯಆವರಣದಲ್ಲಿ ಬಿಡುಗಡೆಗೊಂಡಿತು. ತಾಯಿ ಪಾತ್ರ ನಿರ್ವಹಿಸಿರುವ ವಿನಯಾಪ್ರಸಾದ್ ಮಾತನಾಡಿಅಭಿರುಚಿಇರುವಚಿತ್ರವಾಗಿದೆ.ಮಗಳನ್ನು ಸಮಾಧಾನ ಪಡಿಸುವಒಂದುಗೀತೆ ನನಗಂತಲೇ ಬರೆಸಲಾಗಿದೆ. ಬಿಕ್ಕವಳಿದ್ದಾಗ ಶಿವರಾಮಕಾರಂತ ಅವರನ್ನು ನೋಡಿದ  ನೆನಪು. ಇಂದುಅವರುಜೀವನದಗಾಥೆಯಲ್ಲಿ ನಟಿಸಿರುವುದು ಸಂತಸತಂದಿದೆಎಂದರು.

999

Read More...

Girki.Film Pooja and Press Meet.

Sunday, August 25, 2019

ಭಟ್ಟರ  ಶಿಷ್ಯನ  ಗಿರ್ಕಿ        ವಿಕಟಕವಿ, ನಿರ್ದೇಶಕ ಯೋಗರಾಜಭಟ್ಟರ ಕ್ಯಾಂಪಿನಿಂದ ಮತ್ತೋಬ್ಬ ಪ್ರತಿಭಾವಂತ ಹುಡುಗ ವೀರೇಶ್.ಪಿ.ಎಂ. ‘ಗಿರ್ಕಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.  ಕತೆಯು ಲವ್, ಕಾಮಿಡಿ, ಸೆಸ್ಪೆನ್ಸ್, ಥ್ರಿಲ್ಲರ್ ಇರಲಿದ್ದು,  ಇದರ ಮಧ್ಯೆ ಸುತ್ತುವುದರಿಂದ ಶೀರ್ಷಿಕೆ ಇದೇ ಸೂಕ್ತವಾಗಿದೆ ಅಂತ ಇದನ್ನೆ ಇಡಲಾಗಿದೆ. ಜೊತೆಗೊಂದು ಅರ್ಥಪೂರ್ಣ ಸಂದೇಶ ಹೇಳಿದ್ದು ಅದನ್ನು ಚಿತ್ರಮಂದಿರದಲ್ಲಿ ನೋಡಬೇಕು ಅಂತ ನಿರ್ದೆಶಕರು ಹೇಳುತ್ತಾರೆ.  ಹಾಸ್ಯ, ಪೋಷಕ ಪಾತ್ರಗಳಲ್ಲಿ  ಹೆಸರು ಮಾಡಿರುವ ತರಂಗವಿಶ್ವ ದಪ್ಪೆದಾರನಾಗಿ ವಜ್ರಮುನಿ ಹೆಸರಿನಲ್ಲಿ ಪ್ರಥಮ ಬಾರಿ ನಾಯಕನಾಗಿ ಬಡ್ತಿ ಪಡೆಯುತ್ತಿದ್ದಾರೆ.  ....

697

Read More...

Krishna Talkies.Film Press Meet.

Saturday, August 24, 2019

ಪತ್ರಕರ್ತನಾಗಿ  ಅಜಯ್‌ರಾವ್         ಲವರ್ ಬಾಯ್, ಆಕ್ಷನ್ ಹುಡುಗನಾಗಿದ್ದ  ಅಜಯ್‌ರಾವ್ ಮೊದಲ ಬಾರಿ ಪತ್ರಕರ್ತನಾಗಿ ‘ಕೃಷ್ಣ ಟಾಕೀಸ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ೧೯೯೫ರಂದು ಲಕ್ನೋ ಚಿತ್ರಮಂದಿರದಲ್ಲಿ ನಡೆದ ನೈಜ ಘಟನೆ ಮತ್ತು ಕೃಷ್ಣ  ಸೀರೀಸ್‌ದಲ್ಲಿ ೫ನೇ ಚಿತ್ರವಾಗಿರುವುದು ವಿಶೇಷ. ಸಾಹಿತಿ,ನಿರ್ದೇಶಕ ಆನಂದಪ್ರಿಯ ಈ ಸಿನಿಮಾದ ಮೂಲಕ ವಿಜಯಾನಂದ್ ನಾಮಕರಣದೊಂದಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಥನಾಯಕ ಇಲ್ಲಿನ ಒತ್ತಡಗಳಿಂದ ಬೇಸತ್ತು, ಸ್ವಲ್ಪ ದಿನಗಳ ಮಟ್ಟಿಗೆ ತನ್ನ ಹಳ್ಳಿಗೆ ಹೋಗುತ್ತಾನೆ. ಅಲ್ಲಿಗೆ ಹೋದಾಗ ಭ್ರಮೆ, ಸತ್ಯಾಂಶಗಳು ನೇರ, ಪರೋಕ್ಷವಾಗಿ ಸಂಬಂದ ಕಲ್ಪಿಸುತ್ತದೆ. ಸಾಮಾಜಿಕ ಕಳಕಳಿಯಿಂದ ಏನು ಎಂಬುದನ್ನು ....

705

Read More...

Kiss.Film Teaser Rel.

Friday, August 23, 2019

 ‘ಕಿಸ್’ ಟ್ರೇಲರ್ ಬಿಡುಗಡೆ ಮಾಡಿದರು ಯಶ್

ಅಂದು ಬಿ.ಜಿ.ಎಸ್. ಆಡಿಟೋರಿಯಮ್ಮಿನಲ್ಲಿ ಕಿಕ್ಕಿರಿದ ಜನ. ಅದರಲ್ಲೂ ಕಾಜೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರೇ ತುಂಬಿದ್ದರು. ಅದು ‘ಕಿಸ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಹೇಳಿ ಕೇಳಿ ‘ಕಿಸ್’ ಚಿತ್ರಕ್ಕೆ ತುಂಟ ತುಟಿಗಳ ಆಟೋಗ್ರಾಫ್ ಅನ್ನೋ ಅಡಿ ಬರಹವಿರುವುದರಿಂದ ಯುವ ಪೀಳಿಗೆಯನ್ನು ಅತಿಹೆಚ್ಚು ಸೆಳೆದುಕೊಂಡಿದೆ. ಇದರ ಜೊತೆಗೆ ಈ ಚಿತ್ರದ ಆಡಿಯೋ ಬಿಡುಗಡೆ ಮಾಡಲು ರಾಕಿಂಗ್ ಸ್ಟಾರ್ ಯಶ್ ಆಗಿಮಿಸಿದ್ದದ್ದು ಅಲ್ಲಿ ನೆರೆದಿದ್ದವರ ಪಾಲಿಗೆ ಸಂಭ್ರಮ ಹೆಚ್ಚಲು ಕಾರಣವಾಗಿತ್ತು.

764

Read More...

Badava Raskal.Film Pooja.

Friday, August 23, 2019

ಅಣ್ಣಾವ್ರ   ಸಂಭಾಷಣೆ  ಸಿನಿಮಾದ  ಶೀರ್ಷಿಕೆ           ವಿಲನ್,ಮೋಸಗಾರರಿಗೆ ‘ಬಡವ ರ‍್ಯಾಸ್ಕಲ್’ ಡೈಲಾಗ್‌ನ್ನು  ಡಾ.ರಾಜ್‌ಕುಮಾರ್ ಹೇಳುತ್ತಿದ್ದರು. ಇದು ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿತ್ತು.  ಈ ಪದದ ಪ್ರಸ್ತಾಪ  ಈಗ ಯಾಕೆ ಎಂಬ ಪ್ರಶ್ನೆ  ಮೂಡುವುದು ಸಹಜ. ವಿವರಗಳಿಗಾಗಿ ಮುಂದೆ ಓದುವುದು.  ಪ್ರಸ್ತುತ ಅದೇ ಹೆಸರಿನಲ್ಲಿ ಚಿತ್ರವೊಂದು ಸಿದ್ದಗೊಳ್ಳುತ್ತಿದೆ.  ಟಗರು ಚಿತ್ರದ ಮೂಲಕ ಡಾಲಿ ಎಂದೇ ಖ್ಯಾತರಾಗಿದ್ದ ಧನಂಜಯ್ ಸದ್ಯ ಒಂದಾದ ನಂತರ ಒಂದು ಸಿನಿಮಾಕ್ಕೆ ಸಹಿ ಮಾಡುತ್ತಿದ್ದಾರೆ. ಇವುಗಳ ಮಧ್ಯೆ ಇದನ್ನು ಒಪ್ಪಿಕೊಂಡಿದ್ದು ಅಲ್ಲದೆ ಡಾಲಿ ಪಿಕ್ಚರ‍್ಸ್ ಶುರುಮಾಡಿ ಇದರ ಮೂಲಕ ನಿರ್ಮಾಪಕನ ....

778

Read More...

Prarambha.Film Teaser Rel.

Friday, August 23, 2019

ದರ್ಶನ್  ಕಂಠದಿಂದ  ಪ್ರಾರಂಭಕ್ಕೆ  ಶುಭಾರಂಭ         ಹೊಸಬರು, ಗೆಳಯರ ಚಿತ್ರಕ್ಕೆ ಪ್ರೋತ್ಸಾಹ ಕೊಡುತ್ತಿರುವ ದರ್ಶನ್ ‘ಪ್ರಾರಂಭ’ ಚಿತ್ರದ ಟೀಸರ್‌ಗೆ ಧ್ವನಿ ನೀಡಿದ್ದಾರೆ.  ಪ್ರೀತಿಯಲ್ಲಿ ಅಪಜಯ ಕಂಡಾಗ  ಪ್ರೇಮಿಯಾದವನು ಏನು ಮಾಡುತ್ತಾನೆ. ಎಲ್ಲರ ಮಧ್ಯದಲ್ಲಿ ಎಂತಹ ಘಟನೆಗಳು ನಡೆಯುತ್ತವೆ. ತಪ್ಪುಗಳನ್ನು ಸರಿಪಡಿಸುವ ಸನ್ನಿವೇಶಗಳು ಇರುತ್ತದಂತೆ. ಅದಕ್ಕಾಗಿ ಕೆಟ್ಟ ರೂಢಿಯನ್ನು ತೋರಿಸಿ, ನಂತರ ಒಳ್ಳೇದನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಇದೆಲ್ಲಕೂ ಪೂರಕ ಎನ್ನುವಂತೆ ಬದುಕು ಶುರುವಾಗಿದೆ ಅಂತ ಇಂಗ್ಲೀಷ್‌ದಲ್ಲಿ ಅಡಬರಹವಿದೆ. ಮನೋರಂಜನ್‌ರವಿಚಂದ್ರನ್  ಮೂರನೇ ಚಿತ್ರದಲ್ಲಿ ಕುಂಚಕಲಾವಿದ ....

711

Read More...

Karmanye Vadhikaraste.Movie Teaser Rel.

Tuesday, August 20, 2019

ಕೃಷ್ಣನ  ನುಡಿ  ಸಿನಿಮಾದ  ಶೀರ್ಷಿಕೆ         ಕೆಲವು ಚಿತ್ರಗಳು ಕಥೆಯ ಮೂಲಕ ಗಮನ ಸೆಳೆದರೆ ಮತ್ತೆ ಹಲವು ಸಿನಿಮಾಗಳು  ಶೀರ್ಷಿಕೆಯ ಮೂಲಕವೇ ಪ್ರೇಕ್ಷಕರನ್ನು ತಮ್ಮತ್ತ ಸೆಳಯುತ್ತದೆ. ಆ ಸಾಲಿಗೆ  ‘ಕರ್ಮಣ್ಯೇ ವಾಧಿಕಾರಸ್ತೇ’  ಚಿತ್ರ ಸೇರ್ಪಡೆಯಾಗಿದೆ.  ಮಹಾಭಾರತದಲ್ಲಿ ಕೃಷ್ಣ ಹೇಳಿದ ನುಡಿಯು ಟೈಟಲ್ ಆಗಿದೆ.  ಹೆಸರು ಕೇಳಲು ಇಂಪಾಗಿದೆ, ಅರ್ಥಗರ್ಭಿತವು ಇದೆ. ಎಲ್ಲಕ್ಕೂ ಮಿಗಿಲಾದ ಸಾರ್ಥಕತೆಯ ಭಾವವಿದೆ. ಹಾಗಂತ ಇದು ಪೌರಾಣಿಕ ಚಿತ್ರಕ್ಕೆ ಸಂಬಂದಿಸಿಲ್ಲ. ಕತೆಯು ೧೮೫೦ರ ಕಾಲಘಟ್ಟದಿಂದ  ಪ್ರಸಕ್ತ ಮಾಡ್ರರ್ನ್ ಲೋಕಕ್ಕೆ ಹೊಂದಿಕೆಯಾಗುವಂತೆ ಮಾಡಲಾಗಿದೆ.   ಒಂದು ಘಟ್ಟದಲ್ಲಿ ಬೌದ್ದ  ಜನಾಂಗದ ಸನ್ನಿವೇಶ ....

1015

Read More...

Devaru Bekagiddaare.Film Press Meet.

Tuesday, August 20, 2019

ವಿನೂತನ  ಚಿತ್ರ  ದೇವರು  ಬೇಕಾಗಿದ್ದಾರೆ         ಚಾಲಕರು, ಟೈಲರ‍್ಸ್ ಬೇಕಾಗಿದ್ದಾರೆ ಎಂದು ಅಂಗಡಿ, ಕಂಪನಿ ಮುಂದೆ ಬೋರ್ಡ್ ಹಾಕಿರುತ್ತಾರೆ. ಇಲ್ಲೋಂದು ಹೊಸಬರ ತಂಡವೊಂದು ‘ದೇವರು ಬೇಕಾಗಿದ್ದಾರೆ’ ಎನ್ನುವ ಸಿನಿಮಾವನ್ನು ಸಿದ್ದಪಡಿಸಿದ್ದಾರೆ.  ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗು ಅಪ್ಪುವನ್ನು ಊರಿನ ಮುಖ್ಯಸ್ಥ ರಂಗಣ್ಣ ಸಾಕುತ್ತಾರೆ. ಆತನಿಗೆ ಬುದ್ದಿ ಬಂದಾಗ ತನ್ನ ತಂದೆ ತಾಯಿ ದೇವರ ಬಳಿ ಇದ್ದಾರೆಂದು ತಿಳಿದು ದೇವರನ್ನು ಹುಡುಕುತ್ತಾ ಹೊರಡುವ ಕತೆಯೇ ಒಂದು ಏಳೆಯ ಸಾರಾಂಶವಾಗಿದೆ. ಭಾವನೆಗಳ ಸಮೂಹದಲ್ಲಿ ಸನ್ನಿವೇಶಗಳು ಇರಲಿದೆ. ಕೈವಾರ, ಗುಡಿಬಂಡೆ, ಬಾಗೇಪಲ್ಲಿ, ....

802

Read More...

Tripura.Film Press Meet.

Monday, August 19, 2019

ಪರಾರಿ ವೀರ ಶೀರ್ಷಿಕೆ ತ್ರಿಪುರ  ಆಗಿದೆ          ಕೆಲವೊಂದು ಚಿತ್ರವು ಪ್ರಾರಂಭದಲ್ಲಿ ಇರಲಾದ ಶೀರ್ಷಿಕೆ ಮುಕ್ತ್ತಾಯದ ಹಂತಕ್ಕೆ ಬರುವ ಹೊತ್ತಿಗೆ ಬದಲಾವಣೆ ಗೊಳ್ಳುತ್ತದೆ. ಆ ಸಾಲಿಗೆ ‘ತ್ರಿಪುರ’ ಸೇರಿಕೊಂಡಿದೆ.  ತ್ರಿಪುರ ಸುಂದರಿ ೫೦೦ ವರ್ಷಗಳ ಹಿಂದೆ ಎರಡು ಸಾಮ್ರಾಜ್ಯದ ರಾಜರು ಈಕೆಗಾಗಿ ಹಪಿಸುವ, ಯುದ್ದ ಸಾರಿ ಸಾಮ್ರಾಜ್ಯ ಕಳೆದುಕೊಂಡ,  ಕಟ್ ಮಾಡಿದರೆ ಈಗಿನ ಮರ್ಡರ್ ಮಿಸ್ಟ್ರಿಯಲ್ಲಿ ನಿಧಿಯ ಸುತ್ತ ಹೋಗುವ   ಕತೆಯಾಗಿದೆ. ಇದಕ್ಕೆ ಪೂರಕವಾಗಿ ಆದ್ಯ ರಾಣಿಯ ಊರು ಎಂದು ಅಡಿಬರಹದಲ್ಲಿ ಹೇಳಲಾಗಿದೆ. ಕೆ.ಶಂಕರ್ ನಿರ್ದೇಶಕರಾಗಿ ಮೊದಲ ಅನುಭವ. ಗತಕಾಲದ ರಾಣಿ, ಪ್ರಚಲಿತ  ತನಿಖಾದಿಕಾರಿಯಾಗಿ ....

774

Read More...

Udumba.Film Press Meet.

Monday, August 19, 2019

                                        ಕಡಲ ತೀರದ ಕಥನ          ‘ಉಡುಂಬಾ’ ಪ್ರಾಣಿ ಹೆಸರಿನ  ಚಿತ್ರದ ನಾಯಕ ಯಾರ ತಂಟೆಗೂ ಹೋಗೋಲ್ಲ, ತನಗೆ ಅಡ್ಡಿ ಬಂದರೆ ಬಿಡುವುದಿಲ್ಲ ಎನ್ನುವ ಗುಣ ಆತನದ್ದು.  ಕತೆ ಬರೆದು ಮೊದಲಬಾರಿ  ನಿರ್ದೇಶನ ಮಾಡಿರುವ  ಶಿವರಾಜ್ ಚಿತ್ರವನ್ನು ಬಣ್ಣಿಸಿದ್ದು ಈ ರೀತಿ: ಅವನು ಹಠ ಹಿಡಿದು   ಉಡ+ಹುಂಬನಂತೆ ಕಾರ್ಯ ಸಾಧಿಸುತ್ತಾನೆ. ಅದಕ್ಕಾಗಿ ಇದೇ ಹೆಸರನ್ನು ಇಡಲಾಗಿದೆ. ಕಡಲ ತೀರದ ಮೀನು ಮಾರುವ ಜನಾಂಗದ ಬದುಕು ಬವಣೆಗಳನ್ನು ತೋರಿಸಲಾಗಿದೆ.  ಅಲ್ಲಿ ನಡೆಯುವ ಘಟನೆಗಳು, ಜೊತೆಗೊಂದು ಮಧುರವಾದ ಪ್ರೀತಿ ಹುಟ್ಟಿಕೊಂಡಾಗ ಸನ್ನಿವೇಶಗಳು  ತಿರುವು ....

900

Read More...
Copyright@2018 Chitralahari | All Rights Reserved. Photo Journalist K.S. Mokshendra,