ಭಾರತದ ಪ್ರಪ್ರಥಮ ಶೂನ್ಯ ಬಂಡವಾಳದ ಚಿತ್ರ ಇಂದು ಚಂದನವನದಲ್ಲಿ ನಿರ್ಮಾಪಕರು ನಮ್ಮ ಚಿತ್ರಕ್ಕೆ ಲಕ್ಷ, ಕೋಟಿ ಖರ್ಚಾಗಿದೆ ಎಂದು ಬೊಬ್ಬೆ ಇಡುತ್ತಿದ್ದಾರೆ. ಪ್ರೀತಿಯೂ ಕಮರ್ಷಿಯಲ್ ಆಗಿರುವ ಕಾಲವಾಗಿದೆ. ಸೋಜಿಗ ಎನ್ನುವಂತೆ ಯುವ ಸಮಾನ ಮನಸ್ಕರ ಸಿನಿಮಾಮೋಹಿಗಳು ಗಮಕದಿಂದ ಹಣ ಹೂಡದಯೇ ಶ್ರಮದಾನ ಮಾಡುವ ಮೂಲಕ ‘ಮದುವೆ ಊಟ’ ಚಿತ್ರವನ್ನು ಸೆನ್ಸಾರ್ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ‘ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ’ ಬಸವಣ್ಣನವರ ವಚನ, ಸಿನಿಮಾ ತಯಾರಿಕೆಗೂ ಸಾಮ್ಯತೆ ಇದೆ. ಕಲಾವಿದರು, ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಇವೆಲ್ಲಾವನ್ನು ಉಚಿತವಾಗಿ ಮಾಡಿರುವುದರ ಬಗ್ಗೆ ಯು ಟ್ಯೂಬ್ದಲ್ಲಿ ....
ಪ್ರತಿಯೊಬ್ಬರಲ್ಲೂ ಜಂಟಲ್ಮನ್ ಇರುತ್ತಾರೆ ಪ್ರಜ್ವಲ್ದೇವರಾಜ್ ಅಭಿನಯದ ‘ಜಂಟಲ್ಮನ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ವೈರಲ್ ಆಗಿದೆ. ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ಖಾಯಿಲೆಯನ್ನು ಮೂಲವಾಗಿಟ್ಟುಕೊಂಡ ಕತೆಯಾಗಿದೆ. ಸಾಮಾನ್ಯ ಮನುಷ್ಯನಾದವನು ದಿನವೊಂದಕ್ಕೆ ಏಳು ಗಂಟೆ ನಿದ್ದೆ ಮಾಡುತ್ತಾನೆ. ಈ ಖಾಯಿಲೆಯಿಂದ ಬಳಲುತ್ತಿರುವವರು ಆರು ಗಂಟೆ ಮಾತ್ರ ಎಚ್ಚರವಿದ್ದು, ಉಳಿದ ಹದಿನೆಂಟು ಘಂಟೆಗಳ ಸಮಯದಲ್ಲಿ ನಿದ್ರೆಗೆ ಜಾರುತ್ತಾರೆ. ಅದಕ್ಕಾಗಿ ಅಡಿಬರಹದಲ್ಲಿ ಕುಂಭಕರ್ಣನೆಂದು ಹೇಳಲಾಗಿದೆ. ಈ ಅವಧಿಯಲ್ಲಿ ಆಹಾರ ಸೇವನೆ, ಪ್ರೀತಿ, ಹೊಡೆದಾಟ, ಅಳು ಸೇರಿದಂತೆ ಎಲ್ಲವನ್ನು ಮಾಡುವ ಒಂದು ರೀತಿಯ ಅಸಾಮಾನ್ಯ ಮನುಷ್ಯ. ಅವರು ....
ಟೈಮು ನಂದು ಕರ್ನಾಟಕ ನನ್ನದು - ಸಲ್ಮಾನ್ ಖಾನ್ ಅದ್ದೂರಿ ಚಿತ್ರ ‘ದಬಾಂಗ್-೩’ ವಿಶ್ವದಾದ್ಯಂತ ಶುಕ್ರವಾರದಂದು ತೆರೆಗೆ ಬರುತ್ತಿರುವುದರಿಂದ ನಾಯಕ ಸಲ್ಮಾನ್ಖಾನ್ ಪ್ರಚಾರದ ಕೊನೆ ಹಂತವಾಗಿ ಸಿಲಿಕಾನ್ಸಿಟಿಗೆ ಆಗಮಿಸಿದ್ದರು. ಇವರೊಂದಿಗೆ ಸುದೀಪ್, ನಾಯಕಿಯರಾದ ಸೋನಾಕ್ಷಿಸಿನ್ಹಾ, ಸಾಯಿಮಂಜ್ರೆಕರ್, ನಿರ್ದೇಶಕ ಪ್ರಭುದೇವ ಉಪಸ್ತಿತರಿದ್ದು, ಮಾದ್ಯಮದ ಪ್ರಶ್ನೆಗಳಿಗೆ ಉತ್ತರವಾದರು. ಅದರಲ್ಲಿ ಮುಖ್ಯವಾಗಿ ಹೇಳಿದ್ದನ್ನು ಓದುಗರಿಗೆ ಸಾದರಪಡಿಸಲಾಗಿದೆ. ಸಲ್ಮಾನ್ಖಾನ್: ಬೆಂಗಳೂರಿನಲ್ಲಿ ಎಲ್ಲಾ ಭಾಷೆಯ ಚಿತ್ರವನ್ನು ಜನರು ನೋಡುವುದರಿಂದ ಕನ್ನಡದಲ್ಲಿ ಡಬ್ ಮಾಡಲು ಹೇಳಲಾಯಿತು. ಇದು ನನ್ನ ....
ನಿರ್ದೇಶಕನಿಗೆ ನಿರ್ಮಾಪಕನಿಂದ ತೊಂದರೆಗಳು ಚಿತ್ರರಂಗದಲ್ಲಿ ನಿರ್ದೇಶಕ, ನಿರ್ಮಾಪಕ ಸಿನಿಮಾ ಬಿಡುಗಡೆಯಾಗುವರೆಗೂ ಒಟ್ಟಿಗೆ ಇರುತ್ತಾರೆ. ಅಕಸ್ಮಾತ್ ಫ್ಲಾಪ್ ಕಂಡರೆ ವೈಮನಸ್ಯ, ದೂರುಗಳು ಬರುವುದಲ್ಲದೆ, ನ್ಯಾಯಲಯದ ಹಂತಕ್ಕೂ ತಲುಪುತ್ತದೆ. ಇಂತಹ ಪ್ರಸಂಗಗಳು ಕೆಲವು ಚಿತ್ರಗಳಿಗೆ ಮಾತ್ರ ಗತಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಅದೇ ರೀತಿ ‘ಪತಿಬೇಕು ಡಾಟ್ ಕಾಮ್’ ಸಿನಿಮಾಕ್ಕೆ ಒದಗಿಬಂದಿದೆ. ಜೈ ಮಾರುತಿ ಪಿಕ್ಚರ್ಸ್ ಮುಖಾಂತರ ಮಂಜುನಾಥ್.ಬಿ, ಶ್ರೀನಿವಾಸ್.ಎಸ್. ಮತ್ತು ನಿರ್ದೇಶಕ ರಾಕೇಶ್ ಮೂವರು ಸೇರಿಕೊಂಡು ಹದಿನೈದು ಲಕ್ಷದಂತೆ ಬಂಡವಾಳ ಹೂಡಿದ್ದಾರೆ. ಒಂದು ವೇಳೆ ಸಿನಿಮಾ ಸೋಲು ಕಂಡರೆ ನಮ್ಮ ಬಂಡವಾಳಕ್ಕೆ ನಾವೇ ....
ಸುವರ್ಣಾವಕಾಶಕ್ಕೆ ಬಿಡುಗಡೆ ಮಹೂರ್ತ ಫಿಕ್ಸ್ ಸಂಪೂರ್ಣ ಹಾಸ್ಯ ಚಿತ್ರ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ಕ್ಕೆ ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಯುಎ ಪ್ರಮಾಣ ಪತ್ರವನ್ನು ದಯಪಾಲಿಸಿದೆ. ಎರಡು ದಿನದಲ್ಲಿ ನಡೆಯುವ ಕಥನವಾಗಿದೆ. ಎಲ್ಲರಿಗೂ ಜೀವನದಲ್ಲಿ ಒಂದು ಅವಕಾಶ ಸಿಗುತ್ತದೆ. ಅದನ್ನು ಉಪಯೋಗಿಸಿಕೊಂಡು ಯಾವ ರೀತಿ ಬದುಕಿನಲ್ಲಿ ಸುವರ್ಣಾವಕಾಶ ಪಡೆಯುತ್ತಾನೆ. ಕತೆಯಲ್ಲಿ ನಾಯಕ, ನಾಯಕಿ ಒಂದು ದಿನ ಹೊರಗೆ ಹೋದಾಗ ಕಷ್ಟದಲ್ಲಿ ಸಿಲುಕುತ್ತಾರೆ. ಅದರಿಂದ ಹೊರಬರಲು ಹಣದ ಅವಶ್ಯಕತೆ ಇರುತ್ತದೆ. ಇದಕ್ಕಾಗಿ ಆತ ಏನು ಉಪಾಯ ಮಾಡುತ್ತಾನೆ? ಮುಂದೆ ಹೇಗೆ ತೊಂದರೆಯಿಂದ ಆಚೆ ಬರುತ್ತಾನೆ ಎಂಬುದು ಸಿನಿಮಾದ ಹೂರಣವಾಗಿದೆ. ರಿಷಿ ....
ಹೊಸ ಮುಖವಾಡ ೮೦ರ ದಶಕದಲ್ಲಿ ರಾಮಕೃಷ್ಣ, ತಾರಾ ಅಭಿನಯದ ‘ಮುಖವಾಡ’ ಸಿನಿಮಾ ತೆರೆಕಂಡಿತ್ತು. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ. ಹಾಗಂತ ಅದಕ್ಕೂ ಇದಕ್ಕೂ ಸಂಬಂದವಿಲ್ಲ. ಸೆಸ್ಪನ್ಸ್, ಥ್ರಿಲ್ಲರ್ ಹಾಗೂ ಕೊಂಚ ಮಟ್ಟಿಗೆ ಹಾರರ್ ಫೀಲ್ ಕೊಡುತ್ತದೆ. ಪ್ರೇಕ್ಷಕ ಕುತೂಹಲ ಅಂದುಕೊಂಡು ಹೋದರೆ, ಅಲ್ಲಿ ಬೇರೆಯದೆ ಅನುಭವ ಆಗುತ್ತಾ ಉದ್ರೇಕಗೊಳಿಸುತ್ತದೆ. ಒಂದು ರೀತಿಯಲ್ಲಿ ಹುಳ ಬಿಡುತ್ತಾರೆ. ಯಾರಿಗೆ ಮುಖವಾಡ ಹಾಕಬಹುದು, ಹಾಕಿಸಿಕೊಳ್ಳುವವರು ಯಾರು, ಏನು ಬೇಕಾದರೂ ಮಾಡಬಹುದು. ಇವೆಲ್ಲವು ಸನ್ನಿವೇಶಗಳ ಮೂಲಕ ಸಾಗುತ್ತದೆ. ಕತೆಗೆ ಪೂರಕವಾಗಿದ್ದರಿಂದ ಇದೇ ಶೀರ್ಷಿಕೆ ಇಡಲಾಗಿದೆ. ಒಟ್ಟಾರೆ ೮-೯ ಪಾತ್ರಗಳು ಇದ್ದರೂ, ....
ನೈಜ ಘಟನೆ ಅಭ್ಯಂಜನ ವಯಸ್ಸಾದವರು ಖಾಯಿಲೆಗೆ ತುತ್ತಾದಾಗ ನೋಡಿಕೊಳ್ಳುವವರ ಪರಿಸ್ಥಿತಿ ಅರಿತು, ಅವರ ಮನಸ್ಸು ನೋಯಿಸದಂತೆ ಗೌರವದಿಂದ ಪ್ರಾಣ ತೆಗೆಯುವುದನ್ನು ದಯಾಮರಣ ಎನ್ನುತ್ತಾರೆ. ಇದು ಕಾನೂನುಬಾಹಿರವಾಗಿರುವುದರಿಂದ ಹೆಚ್ಚು ಪ್ರಸಿದ್ದಿಯಾಗಿಲ್ಲ. ಆದರೆ ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿ ಇಂತಹ ಪದ್ದತಿ ಈಗಲೂ ನಡೆಯುತ್ತಿದೆ ಎಂದು ‘ಅಭ್ಯಂಜನ’ ಚಿತ್ರ ನೋಡಿದಾಗ ತಿಳಿಯುತ್ತದೆ. ಅಲ್ಲಿನ ಸಂಪ್ರದಾಯ ತಲೈಕೂಟಲ್ ರೀತಿಯಲ್ಲಿ ಜೀವ ಹೋಗಿಸುತ್ತಾರೆ. ಅಂದರೆ ಅರಳಣ್ಣೆಯನ್ನು ತಲೆಗೆ ಸವರಿ, ತಣ್ಣೀರಿನಿಂದ ಸ್ನಾನ ಮಾಡಿಸಿದ ನಂತರ, ೫-೬ ಏಳೆನೀರು ಕುಡಿಸುತ್ತಾರೆ. ಇದರಿಂದ ಇಡೀ ದೇಹವು ತಣ್ಣಗಾಗುತ್ತಾ, ಕೊನೆಗೆ ಉಸಿರಾಟ ನಿಂತು ....
ರಮೇಶ್ ಅರವಿಂದ್ ವಿದ್ವತ್ ಅಪ್ಗೆ ಬ್ರಾಂಡ್ ಅಂಬಾಸಿಡರ್ ಮನುಷ್ಯನಿಗೆ ಜೀವನದಲ್ಲಿ ಸೈಕಾಲಜಿ ಮತ್ತು ಟೆಕ್ನಾಲಜಿ ಎಂಬ ರೆಕ್ಕೆಗಳು ಅವಶ್ಯಕವಾಗಿರುತ್ತದೆ. ಕುಟುಂಬ, ನಾವು ಕೆಲಸ ಮಾಡುವ ಸ್ಥಳ, ವ್ಯಕ್ತಿಗಳ ಕುರಿತಂತೆ ನಮ್ಮ ಬೇಕು ಬೇಡವನ್ನು ಯಾವ ರೀತಿಯಲ್ಲಿ ವ್ಯಕ್ತಪಡಿಸುತ್ತೇವೆ. ಹಾಗೆಯೇ ಅವರು ನಮಗೆ ಹೇಗೆ ಪೂರೈಸುತ್ತಾರೆ. ಹೀಗೆ ಎರಡು ಜೊತೆಗೆ ಬೆಳೆಯುವುದು ಸೈಕಾಲಜಿ. ನಿಮ್ಮ ಭವಿಷ್ಯ ನಿಮ್ಮಗಳ ಕೈಯಲ್ಲಿದೆ ಎಂದು ಹಿರಿಯರು ಹೇಳುತ್ತಿದ್ದರು. ಈಗ ನಮ್ಮ ಕೈಯಲ್ಲಿ ಇರುವುದು ಮೊಬೈಲ್. ಅದನ್ನು ಯಾವ ರೀತಿ ಉಪಯೋಗಿಸುತ್ತೇವೆ ಎಂಬುದರ ಮೇಲೆ ಭವಿಷ್ಯ ನಿರ್ಧಾರವಾಗುತ್ತದೆ. ಪ್ರತಿ ಕ್ಷೇತ್ರದಲ್ಲಿ ಅದಕ್ಕೆ ಸಂಬಂದಿಸಿದಂತೆ ಆಪ್ಗಳು ....
ಉನ್ನತ ಶಿಕ್ಷಣಕ್ಕೆ ನ್ಯೂರಲ್ ಪ್ರೂನಿಂಗ್ ಓದುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಪಡೆಯಲು ಟ್ಯೂಷನ್ಗೆ ಹೋಗುತ್ತಾರೆ. ತಂತ್ರಜ್ಘಾನ ಬೆಳದಂತೆ ಇವೆಲ್ಲವನ್ನು ಮನೆಯಲ್ಲಿ ಕಲಿಯಬಹುದಾಗಿದೆ. ಅದಕ್ಕೆಂದೆ ‘ನ್ಯೂರಲ್ ಪ್ರೂನಿಂಗ್ ವೆಬ್ ಸೈಟ್’ ಹುಟ್ಟಿಕೊಂಡಿದೆ. ಇದರಲ್ಲಿ ೧೦ನೇ ತರಗತಿ, ಪಿಯುಸಿ, ಸ್ಪರ್ಧಾತ್ಮಕ ಪರೀಕ್ಷೆಗಳು, ಇಂಜಿನಿಯರಿಂಗ್ ಮತ್ತು ಮಾಹಿತಿ ತಂತ್ರಜ್ಘಾನ ವ್ಯಾಸಾಂಗ ಮಾಡುವವರಿಗೆ ಸುಲಭವಾಗಿ ಅರ್ಥವಾಗುವಂತೆ ಪಠ್ಯಪುಸ್ತಕಗಳನ್ನು ಒದಗಿಸಲಾಗಿದೆ. ಇದನ್ನು ನುರಿತ ತರಭೇತಿದಾರರು ಇಲ್ಲಿಯವರೆಗಿನ ಅಂಶಗಳನ್ನು ತೆಗೆದುಕೊಂಡು ಸಿದ್ದಪಡಿಸಿರುವುದು ವಿಶೇಷ. ಇದರಲ್ಲಿ ಯಾವುದೇ ವಿಷಯ ಬೇಕಾದರೂ ಲಭ್ಯವಿರುತ್ತದೆ. ....
ವಿಶೇಷ ದಿವಸ ಡಿಸೆಂಬರ್ ೨೪ ಸಸ್ಪೆನ್ಸ್, ಥ್ರಿಲ್ಲರ್, ಹಾರರ್, ಲವ್, ಸೆಂಟಿಮೆಂಟು ಹೀಗೆ ಹಲವು ಅಂಶಗಳನ್ನು ಒಳಗೊಂಡಿರುವ ‘ಡಿಸೆಂಬರ್ ೨೪’ ಚಿತ್ರವು ಮೆಡಿಕಲ್ ರಿಸರ್ಚ್ವೊಂದರ ಸುತ್ತ ಸಾಗುತ್ತದೆ. ಕುಣಿಗಲ್ ತಾಲ್ಲೂಕಿನಲ್ಲಿ ಒಂದು ಘಟನೆ ನಡೆಯಿತು. ನವಜಾತ ಶಿಶುವೊಂದು ದಿಢೀರನೆ ಅಸುನೀಗಿತ್ತು. ಕಾರಣ ಕೇಳಿದಾಗ ವೈದ್ಯರು ‘ಉಸಿರಾಟದ ಸಮಸ್ಯೆಯಾಗಿ ಮಗು ಪ್ರಾಣ ಬಿಟ್ಟಿದೆ’ ಎಂದು ಜಾರಿ ಕೊಳ್ಳುತ್ತಾರೆ. ಅದಾದ ಮೇಲೂ ಅನೇಕ ಕಡೆ ಇಂಥದ್ದೇ ಘಟನೆ ಮರುಕಳಿಸಿದೆ. ಹುಟ್ಟಿದ ಮಕ್ಕಳು ಜೀವ ಬಿಡುವ ಪ್ರಕರಣಗಳು ಯಾಕೆ ಹೆಚ್ಚಾಗುತ್ತಿವೆ? ಇದಕ್ಕೆ ವೈದ್ಯರು ಹೇಳುವ ಒಂದೇ ಕಾರಣ ವೆಂಟಿಲೇಷನ್ ಸಮಸ್ಯೆ ಅನ್ನೋದು. ಈ ಸಮಸ್ಯೆಗೆ ಕಾರಣ ಹುಡುಕೋದು ....
ಕಾಳಿದಾಸ ೨೫ ನಾಟ್ಔಟ್ ಪ್ರಚಲಿತ ಕನ್ನಡ ಚಿತ್ರಗಳು ಒಂದೇ ವಾರಕ್ಕೆ ಎತ್ತಂಗಡಿಯಾಗುತ್ತದೆ. ಆದರೆ ಹಾಸ್ಯ, ಶಿಕ್ಷಣ ವ್ಯವಸ್ಥೆ ಕುರಿತಾದ ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾವು ಸಲೀಸಾಗಿ ಇಪ್ಪತ್ತೈದು ದಿನಗಳನ್ನು ಯಶಸ್ವಿಯಾಗಿ ಪೂರೈಸಿ, ಮುಂದು ವರೆಯುತ್ತಿದೆ. ಇದರ ಕುರಿತಂತೆ ಮಾಹಿತಿ ನೀಡಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಮಾಯಸಂದ್ರಕ್ಕೆ ಹೂರಡುವ ಧಾವಂತದಲ್ಲಿ ಜಗ್ಗೇಶ್ ಮೊದಲು ಮಾತನಾಡಿದ್ದು ಹೀಗೆ: ಕಾಳಿದಾಸ ದಡ ಸೇರಿದ್ದನೆ. ಕನ್ನಡಿಗರು ಮನಸ್ಸು ಮಾಡಿ ಹೃದಯದಿಂದ ಇಲ್ಲಿಯತನಕ ತೆಗೆದುಕೊಂಡು ಹೋಗಿದ್ದಾರೆ. ಈಗ ಸಾಗರದಾಚೆ ಹೋಗುತ್ತಿರುವುದು ಸಂತಸ ತಂದಿದೆ. ಮೈಸೂರಿನಲ್ಲಿ ....
ಡಯಲ್ ಆರ್ಟಿಸ್ಟ್ದಲ್ಲಿ ಎಲ್ಲರೂ ಸಿಗುತ್ತಾರೆ ಚಿತ್ರರಂಗಕ್ಕೆ ಸಂಬಂದಿಸಿದಂತೆ ಕಲಾವಿದರು, ತಂತ್ರಜ್ಘರ ಪೂರ್ಣ ಮಾಹಿತಿಯು ಪುಸ್ತಕ, ಡಿಜಿಟಲ್, ವೆಬ್ದಲ್ಲಿ ಲಭ್ಯವಾಗುತ್ತಿತ್ತು. ತಂತ್ರಜ್ಘಾನ ಮುಂದುವರೆದಂತೆ ಈಗ ‘ಡಯಲ್ ಆರ್ಟಿಸ್ಟ್’ ಆಪ್ದಲ್ಲಿ ಹೆಚ್ಚಿನ ವಿವರಗಳು ಸಿಗಲಿದೆ. ಅವಕಾಶ ಹುಡುಕುವವರಿಗೆ- ಕೊಡುವವರ ಮಧ್ಯೆ ಇದು ವೇದಿಕೆಯಾಗಿದೆ. ಬರಹಗಾರ ಮತ್ತು ಎರಡು ಚಿತ್ರಗಳನ್ನು ನಿರ್ದೇಶಿಸಿರುವ ಗುರುವೇಂದ್ರಶೆಟ್ಟಿ ಸಮಾನ ಮನಸ್ಕರೊಂದಿಗೆ ಸೇರಿಕೊಂಡು ಇದನ್ನು ಹುಟ್ಟುಹಾಕಿದ್ದಾರೆ. ಅವರು ಹೇಳುವಂತೆ ಪ್ರಾರಂಭದಲ್ಲಿ ವೆಬ್ಸೈಟ್ನ್ನು ಶುರು ಮಾಡಿದಾಗ ಪ್ರಶಂಸೆ ವ್ಯಕ್ತವಾಗಿತ್ತು. ಇದರಿಂದ ಪ್ರೇರಿತಗೊಂಡು ....
ಎರಡು ಭಾಷೆಯ ಹುಡುಕಾಟ ಚಂದನವನಕ್ಕೆ ಸಾಕಷ್ಟು ಮಂದಿ ತೆಲುಗಿನಿಂದ ಬರುತ್ತಿದ್ದಾರೆ. ಅಲ್ಲಿನ ನಿರ್ದೇಶಕ, ನಿರ್ಮಾಪಕ, ಕಲಾವಿದರುಗಳು ಕನ್ನಡ ಸಿನಿಮಾಗಳನ್ನು ಮಾಡುವ ಮೂಲಕ ಚಿತ್ರರಂಗದಲ್ಲಿ ನೆಲೆಯೂರುವ ಕನಸು ಕಾಣುತ್ತಿದ್ದಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ ‘ಹುಡುಕಾಟ’. ಹೀಗೊಂದು ಚಿತ್ರವು ಸದ್ದಿಲ್ಲದೆ ಸರಳವಾಗಿ ಮಹೂರ್ತ ಆಚರಿಸಿಕೊಂಡಿದೆ. ಕೇವಲ ಕನ್ನಡವಷ್ಟೇ ಅಲ್ಲದೆ ತಲುಗುದಲ್ಲಿ ತಯಾರಾಗುತ್ತಿದೆ. ಅಭಿಷೇಕ್ ಕನ್ನೆಲೂರಿ, ಮಧುಪ್ರಿಯ ಇಲ್ಲಿನ ಉದ್ಯಮದಲ್ಲಿ ನಾಯಕ, ನಾಯಕಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಪ್ರಜ್ವಲ್ಕುಮಾರ್.ಎಸ್, ಪೂಜಿತ ಇವರುಗಳು ಅದೇ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ....
ತ್ರಿಕೋನ ಸಂಗಮ ‘ವಾರೆಂಟ್’ ಚಿತ್ರದ ಕುರಿತಂತೆ ಮಾಹಿತಿಯು ಕಳೆದ ವರ್ಷ ಪ್ರಕಟವಾಗಿತ್ತು. ಆಂಗ್ಲ ಶೀರ್ಷಿಕೆ ಇರುವುದರಿಂದ ಸರ್ಕಾರದಿಂದ ಸವಲತ್ತು ಸಿಗುವುದಿಲ್ಲವೆಂಬ ಕಾರಣಕ್ಕೆ ‘ನನ್ನ ಗುರಿ ವಾರೆಂಟ್’ ಅಂತ ಬದಲಾವಣೆ ಮಾಡಲಾಗಿದೆ. ತ್ರಿಕೋನ ಪ್ರೇಮಕತೆ, ಸೆಸ್ಪೆನ್ಸ್, ಥ್ರಿಲ್ಲರ್ ಇರಲಿದೆ. ಮೂರು ಛಾಯಾಗ್ರಾಹಕರು ಮತ್ತು ಸಂಗೀತ ನಿರ್ದೇಶಕರು ಕೆಲಸ ಮಾಡಿರುವುದು ವಿಶೇಷ. ನಾವುಗಳು ದುಡ್ಡಿನ ಆಸೆಗೆ ತಪ್ಪು ಮಾಡುತ್ತೇವೆ. ಅದು ಏನಾಗುತ್ತೆ. ಯಾರೆ ಶಕ್ತಿಶಾಲಿಯಾದವರು ತಪ್ಪು ಮಾಡಿದರೂ ಅದು ತಪ್ಪೇ. ಅದಕ್ಕೆ ಪ್ರತಿಫಲ ಅನುಭವಿಸಲೇ ಬೇಕು. ಒಂದು ಘಟ್ಟದಲ್ಲಿ ಅಪರಾಧ ನಡೆಯುತ್ತದೆ. ಅದನ್ನು ಯಾರು ಮಾಡಿದರು. ಮುಂದೇ ಅದು ಸೇಡಿನಲ್ಲಿ ಸಾಗುತ್ತದೆ. ....
ಧೂಮ್ ಎಗೈನ್ಗೆ ಎರಡನೇ ಹಂತದ ಚಿತ್ರೀಕರಣ ‘ಧೂಮ್ ಎಗೈನ್’ ಚಿತ್ರದ ಫಸ್ಟ್ಲುಕ್,ಟೀಸರ್ನ್ನು ಪುನೀತ್ರಾಜ್ಕುಮಾರ್ ಅನಾವರಣಗೊಳಿಸಿ ಶುಭ ಹಾರೈಸಿದ್ದರು. ಹೆಸರಿಗೆ ತಕ್ಕಂತೆ ದುಬಾರಿ ಬೈಕ್ಗಳು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಂತ ಬಾಲಿವುಡ್ನಲ್ಲಿ ತೆರೆಕಂಡ ಚಿತ್ರಕ್ಕೂ ಇದಕ್ಕೂ ಸಂಬಂದವಿರುವುದಿಲ್ಲ. ಈಗಾಗಲೇ ಇದೇ ಹೆಸರಿನಲ್ಲಿ ಚಿತ್ರವು ತೆರೆಕಂಡ ಕಾರಣ ಎಗೈನ್ ಪದ ಸೇರಿಸಲಾಗಿದೆ ಅಂತ ನಿರ್ದೇಶಕ ರಾಜೇಶ್ವರ್ಮ ಸ್ಪಷ್ಟಪಡಿಸಿದ್ದಾರೆ. ಅಲ್ಲಿ ಪಾತ್ರಗಳು ನಕರಾತ್ಮಕವಾಗಿದ್ದವು. ಇದರಲ್ಲಿ ಸಕರಾತ್ಮಕವಾಗಿರುತ್ತದೆ. ಹೆಸರು ಹೇಳಿದಾಕ್ಷಣ ಇದೊಂದು ಬೈಕ್ ಅಥವಾ ಕಾರ್ರೇಸ್ ಕುರಿತಾದ ಕತೆ ಇರಬಹುದೆಂಬ ಕುತೂಹಲ ....
ಕೃಷಿಕ ಈಗ ನಾಯಕ ಅನ್ನದಾತ ಶಶಿ ಜನ ಸಾಮಾನ್ಯರ ಕೋಟಾದಲ್ಲಿ ಬಿಗ್ ಬಾಸ್ ಸೀಸನ್ ೬ರಲ್ಲಿ ಮನೆ ಪ್ರವೇಶಿಸಿ, ವಿನ್ನರ್ ಆಗಿದ್ದರು. ಈಗ ‘ಮೆಹಬೂಬ’ ಚಿತ್ರಕ್ಕೆ ಆಯ್ಕೆಯಾಗುವುದರ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸತ್ಯ ಆಧಾರಿತ ಘಟನೆಯನ್ನು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಸ್ಪಲ್ಪ ಮಟ್ಟಿಗೆ ಬದಲಾವಣೆ ಮಾಡಿಕೊಳ್ಳಲಾಗಿದೆ. ೨೦೧೫ರಂದು ಕೇರಳದಲ್ಲಿ ನಡೆದ ಕುರಿತಂತೆ ಲೇಖನ ಪ್ರಕಟವಾಗಿತ್ತು. ಜಾತಿ ಧರ್ಮ ಯಾವುದಕ್ಕೂ ತಲೆ ಕಡೆಸಿಕೊಳ್ಳದ ಸುಂದರ ಪ್ರೇಮ ಕತೆ ಇರುವುದು ವಿಶೇಷ. ಈ ಹಿಂದೆ ತಮಿಳಿನಲ್ಲಿ ಬಾಂಬೆ, ತೆಲುಗುದಲ್ಲಿ ಇದೇ ಶೀರ್ಷಿಕೆಯಲ್ಲಿ ಚಿತ್ರವು ಬಿಡುಗಡೆಗೊಂಡಿತ್ತು. ಅದಕ್ಕೂ ಇದಕ್ಕೂ ....
ಅವಮಾನ ಅಪಮಾನ ಸನ್ಮಾನ ಅವಮಾನ ಆಗುವವರಿಗೆ ಮುಂದೆ ಸನ್ಮಾನ ಸಿಗುತ್ತದೆಂದು ಬುದ್ದಿಜೀವಿಗಳು ಹೇಳುತ್ತಾರೆ. ಅದರಂತೆ ಚಿತ್ರದಲ್ಲಿ ಒಳ್ಳೆಯ ಅಂಶಗಳು ಇದ್ದರೆ ಕಲಾವಿದರು ಯಾರು, ಅವರು ಏನೇ ಆಗಿರಲಿ ಎಂಬುದನ್ನು ನೋಡದೆ ಜನರು ಹಿಟ್ ಮಾಡುತ್ತಾರೆ. ಇದು ಹೆಚ್ಚಾಗಿ ಕಾಲಿವುಡ್ನಲ್ಲಿ ನಡೆದುಬಂದಂತೆ, ಸ್ಯಾಂಡಲ್ವುಡ್ದಲ್ಲಿ ಆಗಾಗ್ಗೆ ಪ್ರಯೋಗಗಳು ನಡೆಯುತ್ತಿದೆ. ಇದನ್ನು ಹೇಳಲು ಕಾರಣವಿದೆ. ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಖಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸ್ಪ್ಪುರದ್ರೂಪಿ ಇಲ್ಲದ, ಗಿರಿಜಾಮೀಸೆ ಹೊಂದಿರುವ ಮುನಿಕೃಷ್ಣ ಈಗ ‘ಕೊಡೆ ಮುರುಗ’ ಚಿತ್ರಕ್ಕೆ ನಾಯಕ. ಹನ್ನೆರಡು ವರ್ಷಗಳ ಕಾಲ ಸಾಕಷ್ಟು ಮೆಗಾ ....
ಮತ್ತೆ ಉಧ್ಭವಕ್ಕೆ ಬಿಡುಗಡೆ ವೇದಿಕೆ ಸಿದ್ದ ೧೯೯೦ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಉಧ್ಭವ ಚಿತ್ರ ಮುಂದುವರೆದ ಭಾಗದಂತೆ ‘ಮತ್ತೆ ಉಧ್ಭವ’ ಹೆಸರಿನೊಂದಿಗೆ ಬಿಡುಗಡೆಗೆ ಸಿದ್ದವಾಗಿದೆ. ಅನಂತನಾಗ್ ಮಾಡಿದ ಪಾತ್ರವನ್ನು ರಂಗಾಯಣರಘು ನಟಿಸುತ್ತಿದ್ದು, ಇವರ ಮಕ್ಕಳು ದೊಡ್ಡವರಾಗಿ ಅಪ್ಪನಿಗೆ ಸಹಾಯ ಮಾಡುತ್ತಾರೆ. ಬೆರಳು ತೋರಿಸಿದರೆ ಹಸ್ತ ನುಂಗುವ ಮಹಾನ್ ಬುದ್ದವಂತ. ಭಯ-ಭಕ್ತಿಯನ್ನು ಸಮಯೋಚಿತವಾಗಿ ಹೇಗೆ ಉಪಯೋಗಿಸುತ್ತಾನೆ. ಅಪ್ಪ ಕಾರ್ಪೋರೇಶನ್ ಲೆವಲ್ದಲ್ಲಿ ಇದ್ದರೆ ಮಗ ವಿಧಾನಸೌದ ಸಂಪರ್ಕ ಬೆಳಸಿಕೊಂಡಿರುವ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಹಿರಿಮಗನಾಗಿ ನಾಯಕ. ವಕೀಲನಾಗಿ ....
ವಿನೂತನ ಶೀರ್ಷಿಕೆ ಸಿಲ್ವರ್ ಫಿಶ್ ಜನರನ್ನು ಚಿತ್ರಮಂದಿರಕ್ಕೆ ಸೆಳೆಯಲು ನಾನಾ ರೀತಿಯ ಪ್ರಯೋಗಗಳನ್ನು ಮಾಡುತ್ತಾರೆ. ಇದರಲ್ಲಿ ಯಶಸ್ಸು ಎನ್ನುವುದು ಬಿಡುಗಡೆ ನಂತರ ಗೊತ್ತಾಗುತ್ತದೆ. ಆ ಸಾಲಿಗೆ ‘ಸಿಲ್ವರ್ ಫಿಶ್’ ಚಿತ್ರವೊಂದು ಬೆಂಗಳೂರು, ಚಿಕ್ಕಮಗಳೂರು ಮತ್ತು ಕೊಪ್ಪ ಕಡೆಗಳಲ್ಲಿ ಚಿತ್ರೀಕರಣ ನಡೆಸಿ ತೆರೆಗೆ ಬರಲು ಸಿದ್ದವಾಗಿದೆ. ಕತೆಯಲ್ಲಿ ಬರಹಗಾರ ತನ್ನ ಜೀವನದಲ್ಲಾದ ಘಟನೆಗಳನ್ನು ಯಾವ ರೀತಿ ತೆಗೆದುಕೊಳ್ಳುತ್ತಾನೆ. ಅವನ ಮನೋವೃತ್ತಿ ಎಂತಹುದು? ಆತನ ಬದುಕು, ಬರಹ ಬೇರೆ ಬೇರೆಯಾಗಿರುತ್ತದೆ. ಇವರೆಡು ಒಂದೇ ಆಗಿರುವುದು ಕೆಲವು ಲೇಖಕರಲ್ಲಿ ಮಾತ್ರ ಕಾಣಿಸುತ್ತದೆ. ಎರಡು ಶೇಡ್ಗಳಾದ ಸ್ವಾರ್ಥ, ಉದ್ದೇಶ ಹಾಗೂ ಅದರ ಸುತ್ತಲೂ ....
ಮೇಷ್ಟ್ರು ಚಿತ್ರಕ್ಕೆ ಸ್ಟಾರ್ ನಟರ ಪ್ರೋತ್ಸಾಹ ಚಂದನವನದಲ್ಲಿ ನಿರ್ದೇಶಕ ನಾಗತ್ತಿಹಳ್ಳಿ ಚಂದ್ರಶೇಖರ್ ಅವರನ್ನು ಪ್ರೀತಿಯಿಂದ ಮೇಷ್ಟ್ರು ಎಂದು ಕರೆಯುತ್ತಾರೆ. ಈಗ ಅವರ ನೂತನ ಚಿತ್ರ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರಕ್ಕೆ ಪುನೀತ್ರಾಜ್ಕುಮಾರ್ ನಿರೂಪಣೆ, ಗೀತೆ ಹಾಡುವುದರ ಜೊತೆಗೆ ಒಂದು ಹಾಡನ್ನು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಉಳಿದ ಹಾಡುಗಳನ್ನು ಪ್ರತ್ಯೇಕವಾಗಿ ಮಾಜಿ ಕ್ರಿಕೆಟಿಗ ಅನಿಲ್ಕುಂಬ್ಳೆ, ರಕ್ಷಿತ್ಶೆಟ್ಟಿ, ದರ್ಶನ್ ಮತ್ತು ಯಶ್ ಸದ್ಯದಲ್ಲೆ ಲೋಕಾರ್ಪಣೆ ಮಾಡುತ್ತಿದ್ದಾರೆ. ಪುತ್ರಿ ಕನಸುನಾಗತ್ತಿಹಳ್ಳಿ ವಿರಚಿತ ‘ಅಕ್ಷಾಂಶ ರೇಖಾಂಶ’ ಕಾದಂಬರಿಯು ಚಿತ್ರವಾಗಿ ಮೂಡಿಬಂದಿದೆ. ಶೀರ್ಷಿಕೆ ಕೇಳಿದರೆ ....