*ಸೂಪರ್ಸ್ಟಾರ್ಗೆ ಅದ್ಧೂರಿ ಮುಹೂರ್ತ; ಸೋಮವಾರದಿಂದ ಶೂಟಿಂಗ್ ಶುರು* *- ಡೈಲಾಗ್ ಮೂಲಕವೇ ಚಪ್ಪಾಳೆ ಗಿಟ್ಟಿಸಿಕೊಂಡ ನಿರಂಜನ್* *- ಅಣ್ಣನ ಮಗನ ಬೆನ್ನು ತಟ್ಟಿದ ರಿಯಲ್ ಸ್ಟಾರ್ ಉಪೇಂದ್ರ* 'ಲೇ ಮಚಾ.. ತೆಳ್ಳಗೆ ಬೆಳ್ಳಗೆ ಇದಾನೆ ಅಂತ ಲಿಟಲ್ ಸ್ಟಾರ್ ಅಂದ್ಕೊಂಡ್ಬಿಟ್ಟೇನೋ ಮಗನೇ.. ರಿಯಲ್ ಸ್ಟಾರ್ ಗರಡಿಯಲ್ಲಿ ಪಳಗಿರೋ ಸೂಪರ್ಸ್ಟಾರ್ ಕಣೋ.. ಕರೆದ ತಕ್ಷಣ ಬರೋಕೆ ಡಾನ್ಸರ್ಸ್ ಏನು ನಿನ್ನ ಕಟ್ಕೋಂಡಿರೋಳಾ ಏನು ಇಟ್ಕೋಂಡಿರೋಳಾ ಮಗನೇ..’ ಹೀಗೆ ಖಡಕ್ ಡೈಲಾಗ್ ಹೇಳುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು ನಟ ನಿರಂಜನ್ ಸುಧೀಂದ್ರ. ಹೌದು, ಪೋಸ್ಟರ್ ಮೂಲಕ ಸದ್ದು ಮಾಡಿದ್ದ ಸೂಪರ್ಸ್ಟಾರ್ ಚಿತ್ರದ ಅದ್ಧೂರಿ ಮುಹೂರ್ತ ಶುಕ್ರವಾರ ಅಂಜನಾನಗರದಲ್ಲಿನ ಲಕ್ಷ್ಮೀ ವೆಂಕಟೇಶ್ವರ ....
“ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಕನ್ನಡ ಚಿತ್ರ ಎರೆಡು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆ. ಖ್ಯಾತ ನಿರ್ಮಾಪಕ ಎಸ್. ವಿ. ಶಿವಕುಮಾರ್ ಅವರು ತಮ್ಮ ಸಂಗಮ ಫಿಲ್ಂಸ್ ಲಾಂಛನದಲ್ಲಿ ಗಿರೀಶ ಕಾಸರವಳ್ಳಿ ನಿರ್ದೇಶನದಲ್ಲಿ ತಯಾರಿಸಿದ ಚಿತ್ರ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಚಿತ್ರವು ಎರೆಡು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗಗಳಿಗೆ ಆಯ್ಕೆಯಾಗಿದೆ. 2021ರ ಜನವರಿ 16 ರಂದು ಢಾಕಾದಲ್ಲಿ ನಡೆಯಲಿರುವ ಏಷ್ಯನ್ ಚಿತ್ರೋತ್ಸವದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಲಿದೆ. ಜನವರಿಯಲ್ಲೇ ರೋಂನಲ್ಲಿ ನಡೆಯಲಿರುವ ಏಷ್ಯಾಟಿಕಾ ಚಲನ ಚಿತ್ರೋತ್ಸವದಲ್ಲಿಯೂ ಈ ಚಿತ್ರ ....
*ನಿಮಿಷಾಂಭಾ ದೇಗುಲದಲ್ಲಿ ಆ ಒಂದು ಕನಸು ಚಿತ್ರದ ಮುಹೂರ್ತ* *-ರಂಗು ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣ; ವಿಷ್ಣು ನಾಚನೇಕರ್ ನಿರ್ದೇಶನ* ರಂಗು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಆ ಒಂದು ಕನಸು ಚಿತ್ರದ ಮುಹೂರ್ತ ಗುರುವಾರ ರಾಜರಾಜೇಶ್ವರಿ ನಗರದ ನಿಮಿಷಾಂಭಾ ದೇವಸ್ಥಾನದಲ್ಲಿ ನೆರವೇರಿತು. ಈ ಕಾರ್ಯಕ್ರಮಕ್ಕೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಜಕುಮಾರ್ ಆಗಮಿಸಿ ಕ್ಲಾಪ್ ಮಾಡಿದರೆ, ನಿವೃತ್ತ ಶಾಲಾ ಶಿಕ್ಷಕರಾದ ಬಾಲಕೃಷ್ಣ ಎಚ್. ಎಂ ಕ್ಯಾಮರಾಕ್ಕೆ ಚಾಲನೆ ನೀಡಿದರು. ಬಳಿಕ ಚಿತ್ರದ ಬಗ್ಗೆ ಮಾಹಿತಿ ನೀಡಲು ಮುಂದಾದ ತಂಡ, ಸಿನಿಮಾದ ಕಥೆ, ಪಾತ್ರವರ್ಗ ಮತ್ತು ಚಿತ್ರೀಕರಣದ ಒಂದಷ್ಟು ವಿಚಾರಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿತು. ....
ಇಬ್ಬರಲ್ಲಿ ಜಾಕ್ಪಾಟ್ ಯಾರಿಗೆ ಒಲಿಯುತ್ತೆ? ಎಟಿಎಂ ಚಿತ್ರತಂಡದಿಂದ ‘ಜಾಕ್ಪಾಟ್’ ಸಿನಿಮಾವೊಂದು ಸಿದ್ದಗೊಂಡಿದೆ. ಅಮರ್ ರಚಿಸಿ ನಿರ್ದೇಶನ ಮಾಡಿದ್ದಾರೆ. ಪೋಲೀಸ್ ಮತ್ತು ಒಬ್ಬ ವ್ಯಕ್ತಿಯ ಸುತ್ತ ನಡೆಯುವ ಕತೆಯಾಗಿದೆ. ವಿಶ್ರಾಂತಿಗೆಂದು ಸಕಲೇಶಪುರಕ್ಕೆ ಹೋಗುವ ಹುಡುಗನಿಗೆ ಅತ್ಯಂತ ಬೆಲೆಬಾಳುವ ಮಾದಕ ವಸ್ತು ಸಿಗುತ್ತದೆ. ಅದನ್ನು ಬೆಂಗಳೂರಿನಗೆ ತಂದು ವ್ಯಾಪಾರ ಮಾಡಲು ಯತ್ನಿಸುತ್ತನೆ. ವಿಷಯವು ಪೋಲೀಸರಿಗೆ ತಿಳಿದು, ಕೇಸ್ ಹಿನ್ನಲೆ ಪತ್ತೆ ಮಾಡಲು ತನಿಖಾಧಿಕಾರಿಯನ್ನು ನೇಮಿಸುತ್ತಾರೆ. ಇಬ್ಬರ ನಡುವೆ ಬರುವ ಸನ್ನಿವೇಶಗಲ್ಲಿ ಯಾರಿಗೆ ಶೀರ್ಷಿಕೆ ಹೊಡೆಯುತ್ತೇ ....
ಗಾದೆ ಮಾತು ಚಿತ್ರದ ಶೀರ್ಷಿಕೆ ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದು ಹಿರಿಯರು ಹೇಳಿದ್ದಾರೆ. ‘ಉದ್ಯೋಗಂ ಪುರುಷ ಲಕ್ಷಣಂ’ ಎನ್ನುವ ಗಾದೆಯು ಈಗ ಸಿನಿಮಾ ಶೀರ್ಷಿಕೆಯಾಗಿದ್ದು ಬಿಡುಗಡೆಗೆ ಸಿದ್ದವಾಗಿದೆ. ಅತೃಪ್ತಿ ಜೀವನ. ಉದ್ಯೋಗ ಎಲ್ಲರಿಗೂ ಇರುತ್ತದೆ. ಕೆಲಸ ಅಂತ ಸಿಕ್ಕಮೇಲೆ ನೆಮ್ಮದಿ ಸಿಗುತ್ತದೆ. ಆಗ ಶೇಕಡ ನೂರರಷ್ಟು ಕನಸುಗಳು ಈಡೇರುತ್ತದೆ. ಕತೆಯಲ್ಲಿ ನಾಲ್ಕು ಜನ ಯುವಕರು ಏನು ಮಾಡದೆ ಉಡಾಫೆಯಾಗಿರುತ್ತಾರೆ. ಇವರ ಸುತ್ತಲಿನ ಜನರು ಇವರುಗಳನ್ನು ಹೇಗೆ ತೀರ್ಮಾನಿಸಿರುತ್ತಾರೆ. ಒಂದು ಹಂತದಲ್ಲಿ ಹುಡುಗರು ಅರ್ಥಪೂರ್ಣ ತೀರ್ಪು ಕೊಟ್ಟಾಗ ಕಾಲ, ಸಮಾಜವು ಇವರೇನೋ ಮಾಡಿದ್ದಾರೆಂದು ಗೌರವದಿಂದ ಕಾಣುತ್ತಾರೆ. ....
ಪೈರೆಸಿ ತಡೆಗೆ ಪುನೀತ್ರಾಜ್ಕುಮಾರ್ ಚಾಲನೆ ಹೊಸ ತಂತ್ರಜ್ಘಾನದಲ್ಲಿ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಉಳಿಯೋದು ಒಂದು ವಾರ ಮಾತ್ರವೆಂದು ಪುನೀತ್ರಾಜ್ಕುಮಾರ್ ಅಭಿಪ್ರಾಯ ಪಟ್ಟರು. ಕಾಂಟ್ರಫೈನ್ ಸಂಸ್ಥೆಯ ದುರ್ಗಾಪ್ರಸಾದ್ ಮತ್ತು ರಾಹುಲ್ರೆಡ್ಡಿ ತಂಡದವರು ಸೇರಿಕೊಂಡು ಪೈರೆಸಿ ತಡೆಗಟ್ಟುವ ನೂತನ ತಂತ್ರಜ್ಘಾನ ‘ಫೆಂಡೆ’ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಪೈರೆಸಿ ಎನ್ನುವುದು ವಿಡಿಯೋ ಬಂದಾಗಿನಿಂದಲೂ ಇದೆ. ಈಗ ಎಲ್ಲರು ಸಿನಿಮಾ ಮೇಕರ್ಸ್ ಆಗಿದ್ದಾರೆ. ತಮ್ಮ ಜೇಬಿನಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನು ಹೊರಗೆ ಬಿಟ್ಟಾಗ ಅದು ಪೈರೆಸಿ ಆಗುತ್ತದೆ. ....
ಜಗ್ಗೇಶ್ ನಾಲ್ಕು ದಶಕದ ಸಿನಿಪಯಣದ ನೆನಪುಗಳು ನವೆಂಬರ್ ೧೭,೧೯೮೦ ನವರಸ ನಾಯಕ ಜಗ್ಗೇಶ್ ‘ಕಪ್ಪು ಕೊಳ’ ಚಿತ್ರದ ಮೂಲಕ ಬಣ್ಣ ಹಚ್ಚಿದ ದಿನ. ಇಂದಿಗೆ ಸಿನಿಮಾರಂಗದಲ್ಲಿ ನಲವತ್ತು ಹೆಜ್ಜೆಗಳನ್ನು ಇಡುತ್ತಾ ರಾಜಕೀಯ, ಚಿತ್ರರಂಗ, ರಿಯಾಲಿಟಿ ಶೋದಲ್ಲಿ ಬ್ಯುಸಿ ಇದ್ದಾರೆ. ಈ ಶುಭ ಸಂದರ್ಭದಲ್ಲಿ ಮಾದ್ಯಮದವರನ್ನು ಆಹ್ವಾನಿಸಿ ಖುಷಿ, ದುಖ:, ಅವಮಾನ, ಸನ್ಮಾನ ಎಲ್ಲವನ್ನು ಹೇಳುತ್ತಾ ಹೋದರು. ನನ್ನ ಬದುಕಿನಲ್ಲಿ ಎರಡು ಪಾತ್ರಗಳು ಮಹತ್ವದ ತಿರುವು ಕೊಟ್ಟಿತು. ನನ್ನ ನಾಯಕ ಮಾಡಿಸಿದ್ದು ಅಂಬರೀಷ್, ರಾಜಕೀಯಕ್ಕೆ ಬರಲು ಪ್ರೇರಣೆ ಮಾಡಿದ್ದು ಡಿ.ಕೆ.ಶಿವಕುಮಾರ್. ನಾಲ್ಕು ದಶಕಗಳ ಕಾಲ ಸಿನಿಬದುಕಿನಲ್ಲಿ ಇದ್ದೇನೆ. ಅದಕ್ಕೆ ....
*ಸಂಸ್ಕೃತದ ಪದ ಶೀರ್ಷಿಕೆಯಾಯ್ತು; ಮುಹೂರ್ತ ಮುಗಿಸಿಕೊಂಡ ಅಗ್ನಿಪ್ರವ ಸಿನಿಮಾ* *-ಬಾಹುಬಲಿ ಕಥೆಗಾರ ವಿಜಯೇಂದ್ರ ಪ್ರಸಾದ್ ಕ್ಯಾಮರಾಕ್ಕೆ ಚಾಲನೆ* *-ಡಾ. ರಾಜ್ ಪುತ್ರಿ ಲಕ್ಷ್ಮೀ ಗೋವಿಂದ್ ರಾಜ್ ಕ್ಲಾಪ್* ಸಂಸ್ಕ್ರತ ಭಾಷೆಯ ಶೀರ್ಷಿಕೆ ಎಲ್ಲ ಭಾಷೆಯಲ್ಲೂ ಸಲ್ಲುತ್ತದೆ ಎಂಬುದು ಬಹುತೇಕ ನಿರ್ದೇಶಕರ ಅಭಿಪ್ರಾಯ. ಇದೀಗ ಅಂಥದ್ದೇ ಸಂಸ್ಕ್ರತದ ಶೀರ್ಷಿಕೆಯನ್ನಿಟ್ಟುಕೊಂಡು ಅಗ್ನಿಪ್ರವ ಸಿನಿಮಾ ಇತ್ತಿಚೆಗಷ್ಟೇ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಮುಹೂರ್ತ ನೆರವೇರಿಸಿಕೊಂಡಿದೆ. ಸುರೇಶ್ ಆರ್ಯ ಅಗ್ನಿಪ್ರವ ಚಿತ್ರದ ಮೂಲಕ ಚಂದನವನಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಹಲವು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಇವರಿಗಿದು ಕನ್ನಡದ ಮೊದಲ ....
ಚಿತ್ರಮಂದಿರದಲ್ಲಿ ಮುಖವಾಡ ಇಲ್ಲದವನು ೮೪ ಹೊಬರ ‘ಮುಖವಾಡ ಇಲ್ಲದವನು ೮೪’ ಚಿತ್ರವು ಸದ್ದು ಮಾಡುತ್ತಿದೆ. ಬೆಂಗಳೂರು, ಕೆಮ್ಮಣ್ಣುಗುಂಡಿ, ಬನ್ನೇರುಘಟ್ಟದ ಸುವರ್ಣಮುಖಿ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಒಬ್ಬ ಮನುಷ್ಯ ತಾನು ಹುಟ್ಟಿದಾಗಿನಿಂದ ಸಾಯುವ ತನಕ ಯಾವ ಯಾವ ರೀತಿ ಮುಖವಾಡ ಹಾಕುತ್ತಾನೆ ಎಂಬುದು ಸೆಸ್ಪೆನ್ಸ್ ಚಿತ್ರದ ಕಥಾಹಂದರವಾಗಿದೆ. ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಜೊತೆಗೆ ಮುಖ್ಯ ಪಾತ್ರದಲ್ಲಿ ಶಿವಕುಮಾರ್(ಕಡೂರ್) ಕಾಣಿಸಿಕೊಂಡಿದ್ದಾರೆ. ಮಧುಆರ್ಯ-ವಿನಯ್ಗೌಡ-ಗಿರೀಶ್ ಛಾಯಾಗ್ರಹಣ, ಎರಡು ಹಾಡುಗಳಿಗೆ ಸಂಗೀತ ದುರ್ಗಪ್ರಸಾದ್, ಹಿನ್ನಲೆ ಶಬ್ದ ಮಹಾರಾಜ್ ....
*ಚಂದನವನಕ್ಕೆ ಮತ್ತೊಬ್ಬ ರಾಮಾಚಾರಿ ಬಂದ; ಈತ ಬಲು ಬುದ್ಧಿವಂತ!* *-ರೇಣುಕಾಂಬ ಸ್ಟುಡಿಯೋದಲ್ಲಿ ಸರಳ ಮುಹೂರ್ತ* *-ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಮಾರ್ಗರೇಟ್ ಆಗಿ ನಟನೆ* ಸ್ಯಾಂಡಲ್ವುಡ್ಗೂ ರಾಮಾಚಾರಿಗೂ ಬಿಡದ ನಂಟು. ಆ ರಾಮಾಚಾರಿ ನಂಟು ಇದೀಗ ಮತ್ತೆ ಮುಂದುವರಿಯುತ್ತಿದೆ. ಅವೆಲ್ಲವುಗಳ ಅಪ್ಡೇಟ್ ವರ್ಷನ್ ಅವತಾರದಲ್ಲಿ ಹೊಸ ರಾಮಾಚಾರಿ ಎಂಟ್ರಿಯಾಗುತ್ತಿದ್ದಾನೆ. ಅದೇ ರಾಮಾಚಾರಿ 2.0! ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ಸರಳ ಮುಹೂರ್ತವನ್ನು ನೆರವೇರಿಸಿಕೊಂಡ ಈ ಸಿನಿಮಾ ಡಿಸೆಂಬರ್ ಅಂತ್ಯ ಅಥವಾ ಜನವರಿಯಲ್ಲಿ ಶೂಟಿಂಗ್ ಪ್ರಾರಂಭಿಸಿಲಿದೆ. ನಿರ್ದೇಶಕರಾದ ಶಶಾಂಕ್, ಮಹೇಶ್, ಪ್ರವೀಣ್ ನಾಯಕ್, ಫೈವ್ ಸ್ಟಾರ್ ಗಣೇಶ್ ಅತಿಥಿಗಳಾಗಿ ಆಗಮಿಸಿ ತಂಡಕ್ಕೆ ಶುಭ ....
ಈ ವಾರ ತೆರೆಗೆ ಆಕ್ಟ್ 1978
ಕೊರೋನ ಹಾವಳಿಯ ನಂತರ ಯಾವುದೇ ಹೊಸ ಚಿತ್ರಗಳು ತೆರೆಕಂಡಿರಲಿಲ್ಲ. ಎಂಟು ತಿಂಗಳ ನಂತರ ಇದೇ ನವೆಂಬರ್ 20 ರಂದು ಆಕ್ಟ್ 1978 ಚಿತ್ರ ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ.
ಡಿ.ಕ್ರಿಯೇಷನ್ಸ್ ಲಾಂಛನದಲ್ಲಿ ಅರ್ ದೇವರಾಜ್ ಅವರು ನಿರ್ಮಿಸಿರುವ ಈ ಚಿತ್ರವನ್ನು ಮಂಸೋರೆ ಕಥೆ ಬರೆದು, ನಿರ್ದೇಶಿಸಿದ್ದಾರೆ.
ಶಿವಪ್ಪ @ ೧೨೩ ಮೇಲಿನ ವಾಕ್ಯ ಚಿತ್ರದ ಶೀರ್ಷಿಕೆಯಲ್ಲ. ಶಿವರಾಜ್ಕುಮಾರ್ ಅವರ ೧೨೩ನೇ ಚಿತ್ರದ ಹೆಸರು ‘ಶಿವಪ್ಪ’. ಅಡಿಬರಹದಲ್ಲಿ ‘ಕಾಯೋ ತಂದೆ’ ಎಂದು ಹೇಳಿಕೊಂಡಿದೆ. ಕೊರೊನಾ ನಂತರ ಬಣ್ಣ ಹಚ್ಚುತ್ತಿರುವ ಮೊದಲ ಸಿನಿಮಾದ ಮಹೂರ್ತವು ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಸಮಾಜದಲ್ಲಿ ಪ್ರತಿದಿನ ನೂರಾರು ತಪ್ಪುಗಳಾಗುತ್ತಾ ಇರುತ್ತೆ. ಆದರೆ ಅದನ್ನು ಮಟ್ಟಹಾಕಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೆ. ನಾಯಕ ನೋಡೋಕೆ ತುಂಬಾ ಮುಗ್ದ. ವ್ಯವಸ್ಥೆ ಸರಿ ಇಲ್ಲ ಎಂದಾಗ ಆತ ಮೂರನೇ ಕಣ್ಣು ಬಿಡಬೇಕಾಗುತ್ತದೆ. ಆತನ ಪ್ರಕಾರ ತಪ್ಪು ಮಾಡೋಕೆ ಹೋಗೋದೇ ದೊಡ್ಡ ತಪ್ಪು. ಪ್ರತಿ ಪಾತ್ರಕ್ಕೂ ಅದರದೇ ಆದ ತೂಕವಿದೆ. ಕಾಮಿಡಿ, ....
ಸೆಟ್ಟೇರಿದ ಸಾವಿತ್ರಿ ‘ಸಾವಿತ್ರ’ ಚಿತ್ರದ ಶೀರ್ಷಿಕೆಯಲ್ಲಿ ತಾರಾ ನಟಿಸುತ್ತಿದ್ದಾರೆಂದು ಸುದ್ದಿಯಾಗಿತ್ತು. ಅದರಂತೆ ಗುರುವಾರದಂದು ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಹೂರ್ತ ಆಚರಿಸಿಕೊಂಡಿತು. ಸಾಫ್ಟ್ವೇರ್ ಉದ್ಯೋಗಿ ಪ್ರಶಾಂತ್ಕುಮಾರ್ ಪಿ.ಎನ್.ಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಎಸ್.ದಿನೇಶ್ ಚಿತ್ರಕ್ಕೆ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವುದು ಎರಡನೇ ಅನುಭವ. ಮೊಬೈಲ್ ಮುಂತಾದ ಆಧುನಿಕ ತಂತ್ರಜ್ಘಾನಗಳಿಂದ ಮಕ್ಕಳ ಮೇಲಾಗುವ ಪರಿಣಾಮಗಳೇನು? ಎಂಬುದನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಮತ್ತೋಂದು ಮುಖ್ಯ ಪಾತ್ರದಲ್ಲಿ ವಿಜಯರಾಘವೇಂದ್ರ ಇವರೊಂದಿಗೆ ....
ಹಾಸ್ಯದ ಮೂಲಕ ಹೊಸಬರ ಪರಿಸರ ಕಾಳಜಿ ದೀಪಾವಳಿ ಹಬ್ಬದ ಶುಭದಿನವೇ ಇನ್ನೂ ಹೆಸರಿಡದ ಹೊಸ ಕಾಮಿಡಿ ಎಂಟರ್ಟೈನರ್ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದೆ. ಈ ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಕಲಾವಿದ, ತಂತ್ರಜ್ಞರೆಲ್ಲರೂ ಬಹುತೇಕ ಹೊಸಬರೇ ಆಗಿದ್ದಾರೆ, ತಮಿಳಲ್ಲಿ ಒಂದೆರಡು ಚಿತ್ರಗಳನ್ನು ನಿದೇಶಿಸಿರುವ ಆರ್. ಗೋಪಿನಾಥ್ ಈ ಚಿತ್ರಕ್ಕೆ ಆಕ್ಷನ್ಕಟ್ ಹೇಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ, ಇನ್ನು ಚೇತನ್ ಜೋಡಿದಾರ್, ಶ್ರೀನಿವಾಸ ನಾಯ್ಕ ಹಾಗೂ ನವೀನ್ಕುಮಾರ್ ಚಿತ್ರದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೋಡಿಯಾಗಿ ಶ್ರೀಮತಿ ಭಾರತಿ, ಶ್ರೀಮತಿ ಇಂದಿರಾ ಹಾಗೂ ಸೌಮ್ಯಶ್ರೀ ನಟಿಸಿದ್ದಾರೆ. ....
*ಶೂಟಿಂಗ್ ಸೆಟ್ನಲ್ಲಿಯೇ ಶೀರ್ಷಿಕೆ ಅನಾವರಣ ಮಾಡಿಕೊಂಡ ರಾಜ ನಿವಾಸ* ಡಿಎಎಂ 36 ಸ್ಟುಡಿಯೋಸ್ ಲಾಂಛನದಲ್ಲಿ ಸಿದ್ಧವಾಗುತ್ತಿರುವ ರಾಜನಿವಾಸ ಚಿತ್ರದ ಶೀರ್ಷಿಕೆ ಪೋಸ್ಟರ್ ಅನಾವರಣ ಕಾರ್ಯಕ್ರಮ ಶನಿವಾರ ಕೊಡಿಗೇಹಳ್ಳಿ ಗೇಟ್ ಬಳಿಯ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಚಿತ್ರೀಕರಣ ಸೆಟ್ಗೆ ಮಾಧ್ಯಮವನ್ನು ಆಹ್ವಾನಿಸಿದ್ದ ನಿರ್ಮಾಪಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಡಿ.ಪಿ. ಆಂಜನಪ್ಪ, ಸಿನಿಮಾ ಸೇರಿ ಹಲವು ಮಾಹಿತಿಯನ್ನು ಹಂಚಿಕೊಂಡರು. ಚಿತ್ರದ ಬಹುಪಾಲು ತಂಡ ವೇದಿಕೆ ಅಲಂಕರಿಸಿತ್ತು. ವೀರಶೈವ ಲಿಂಗಾಯತ ವೇದಿಕೆಯ ಅಧ್ಯಕ್ಷರಾದ ಪ್ರಶಾಂತ್ ಕಲ್ಲೂರ, ನಿರ್ಮಾಪಕ ಆಂಜನಪ್ಪ ಅವರ ಪುತ್ರ ಅದ್ವಿಕ್ ಮೌರ್ಯ ಸೇರಿ ಇಡೀ ತಂಡ, ರಾಜನಿವಾಸ ಚಿತ್ರದ ....
''ಕುಶಿಲ ಸಿನಿ ಪ್ರೊಡಕ್ಷನ್ಸ್ "ರವರ ಪ್ರಥಮ ಕಾಣಿಕೆ ” ಶಿವಪ್ಪ ಕುಡ್ಲೂರು" ಅಭಿನಯದ ”ಕಣ್ತೆರೆದು ನೋಡು"
‘ರಿಚ್ಚಿ’ ಚಿತ್ರದ ಸುಮಧುರವಾದ ಹಾಡು ಅನಾವರಣ – ಪಿ ಆರ್ ಒ – ವಿಜಯಕುಮಾರ್ ‘ಸನಿಹ ನೀ ಇರುವಾಗ ಸಲುಗೆಯ ಅನುರಾಗ....ಸುಮಧುರವಾದ ‘ರಿಚ್ಚಿ’ ಚಿತ್ರದ ಗೀತೆಯೊಂದು ಮೊನ್ನೆ ನರಕಚತುರ್ದಶಿ, ನವೆಂಬರ್ 14, 2020 ರಂದು ಪ್ರಸಾದ್ ಲ್ಯಾಬ್ ಥಿಯೇಟರ್ ಅಲ್ಲಿ ಮಾಧ್ಯಮದ ಮುಂದೆ ಅನಾವರಣಗೊಂಡಿದೆ. ಸೋನು ನಿಗಂ ಹಾಡಿರುವ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿರುವವರು ಹೆಸರಾಂತ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್. ಚಿತ್ರದ ನಾಯಕ ರಿಚ್ಚಿ (ಮೂಲ ಹೆಸರು ಹೇಮಂತ್) ಹಾಗೂ ನಾಯಕಿ ನಿಷ್ಕಲ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿನೋದ್ ರಚಿಸಿರುವ ಈ ಗೀತೆಗೆ ರಾಗ ಸಂಯೋಜನೆಯನ್ನು ಅಗಸ್ತ್ಯ ಸಂತೋಷ್ ಮಾಡಿದ್ದಾರೆ. ಕೊಡಗಿನ ಕೋಟೆ ಬೆಟ್ಟ ಸುತ್ತ ಮುತ್ತ ಈ ಹಾಡಿನ ರಮ್ಯ ....
ಮನುಷ್ಯನ ಹೋರಾಟ, ಅಸಹಾಯಕತೆ ಹೇಳುವ ಚಿತ್ರ ಸಮಾಜದಲ್ಲಿಒಬ್ಬ ಮನುಷ್ಯನುಯಾವುದೋ ವಿಷಯಕ್ಕೆ ಹೋರಾಟ ಮಾಡುತ್ತಾನೆ. ಇಲ್ಲದೆ ಹೋದಲ್ಲಿತನ್ನಅಸಹಾಯಕತೆಯನ್ನು ತೋರ್ಪಡಿಸಿಕೊಳ್ಳುತ್ತಾನೆ. ಅದುಯಾವರೀತಿಎಂದು ‘ಅರಿಷಡ್ವರ್ಗ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.ಸಂಬಂಧಗಳ ಚಾಲಿತ, ನಿಗೂಢ ಹಾಗೂ ಥ್ರಿಲ್ಲರ್ಆಧಾರಿತಕತೆಯಲ್ಲಿ ಮಹತ್ವಾಕಾಂಕ್ಷಿಯುಳ್ಳ ನಟನೊಬ್ಬ ಹವ್ಯಾಸಿ ಗುಪ್ತವಾದ ಕೆಲಸಕ್ಕಾಗಿ ಒಂದು ಮನೆಗೆ ಬಂದುಆಶ್ಚರ್ಯಕರವಾದಕೊಲೆಯ ಕೇಸಿನಲ್ಲಿ ಸಿಕ್ಕಿ ಬೀಳುತ್ತಾನೆ. ಆತನಜೊತೆ ನಟಿಯಾಗಬೇಕೆಂಬ ಹುಡುಗಿ, ಮನೆಗೆ ಕನ್ನ ಹಾಕುವ ಕಳ್ಳನು ಸೇರಿಕೊಳ್ಳುತ್ತಾರೆ.ಇವರೆಲ್ಲರೂ ಕೊಲೆ ....
ಮೇಘನಾರಾಜ್ ಮನೆಯಲ್ಲಿ ಸಂತಸದ ವಾತವರಣ ದಿವಂಗತ ಚಿರಂಜೀವಿಸರ್ಜಾ ಮತ್ತು ಮೇಘನಾರಾಜ್ ದಂಪತಿಯ ಗಂಡು ಮಗುವನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರವು ಕುಟಂಬಸ್ಥರು ಮತ್ತು ಬಂಧುಬಳಗದವರ ಸಮ್ಮುಖದಲ್ಲಿ ನಡೆಯಿತು. ಬಣ್ಣಬಣ್ಣದ ಕರಕುಶಲ ತೊಟ್ಟಿಲ್ಲನ್ನು ಗದಗದ ಮಹಿಳಾ ಸಂಘವೊಂದು ಉಡುಗೊರೆ ನೀಡಿದೆ. ಇದನ್ನು ಸಿದ್ದಪಡಿಸಲು ಐದು ತಿಂಗಳು ಸಮಯ ತೆಗೆದುಕೊಂಡಿದ್ದು, ಅಂದಾಜು ೧.೧೦ ಲಕ್ಷ ಬೆಲೆ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಉಮೇಶ್ಬಣಕಾರ್ ಮೂಲಕ ಮಹಿಳಾ ಸಂಘದ ಸದಸ್ಯರು ತೊಟ್ಟಿಲ್ಲನ್ನು ತಲುಪಿಸಿದರು. ನಂತರ ಮಾದ್ಯಮದೊಂದಿಗೆ ಮಾತನಾಡಿದ ಮೇಘನರಾಜ್, ಈ ಶಾಸ್ತ್ರವು ಕೇವಲ ಒಂದು ಟ್ರೈಲರ್. ತವರು ಮನೆಯಲ್ಲಿ ನಡೆಯುವ ....
ಮಾಲಾಶ್ರೀರನ್ನು ನೆನಪಿಸಿಕೊಂಡ ಉಪೇಂದ್ರ ತುಣುಕುಗಳನ್ನು ನೋಡುತ್ತಿದ್ದರೆ ಮಾಲಾಶ್ರೀ ಸಿನಿಮಾಗಳು ನೆನಪಿಗೆ ಬರುತ್ತದೆಂದುರಿಯಲ್ಸ್ಟಾರ್ಉಪೇಂದ್ರ ಹೇಳಿದರು. ‘ಉಗ್ರಾವತಾರ’ ಚಿತ್ರದ ಮೋಷನ್ ಪೋಸ್ಟರ್ನ್ನು ಅನಾವರಣಗೊಳಿಸಿ, ಪ್ರಿಯಾಂಕಉಪೇಂದ್ರಇನ್ಸ್ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದರ ಕುರಿತಂತೆ ಮಾತನಾಡಿ, ತಂಡಕ್ಕೆ ಶುಭ ಹಾರೈಸಿ, ನಂತರತುಂಡುಕೇಕ್ನ್ನು ಪತ್ನಿಗೆತಿನ್ನಿಸಿದರು. ಕಳೆದ ಹುಟ್ಟುಹಬ್ಬದಂದುಇದೇಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿತ್ತು.ಈ ವರ್ಷ ಮೋಷನ್ ಪಿಕ್ಚರ್ ಸಿದ್ದಗೊಂಡಿದ್ದು ಸಂತಸತಂದಿದೆ.ನಿರ್ದೇಶಕರುಕತೆ ಹೇಳಿದಾಗ ಇದನ್ನು ಮಾಡಬಹುದಾಎಂಬುದಾಗಿ ಪ್ರಶ್ನೆಕಾಡಿತ್ತು.ಆದರೆ ನಿರ್ಮಾಪಕರು, ....