*ಬಂಡಿಮಹಾಕಾಳಿ ದೇವಸ್ಥಾನದಲ್ಲಿ "ರಾ" ಚಿತ್ರ ಆರಂಭ ..* *ಮಂಜುನಾಥ್ ಕೆ.ಪಿ* ನಿರ್ದೇಶನದ ಈ ಚಿತ್ರಕ್ಕೆ *ಸಂತೋಷ್ ಬಾಲರಾಜ್* ನಾಯಕ. ವಿಭಿನ್ನ ಕಥಾಹಂದರದ "ರಾ" ಚಿತ್ರದ ಮುಹೂರ್ತ ಸಮಾರಂಭ ಬಂಡಿಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ನಿರ್ಮಾಪಕಿ ವಿನುತ ಮಂಜುಳಾ ಆರಂಭ ಫಲಕ ತೋರಿದರು. ಉದ್ಯಮಿ ಸೂರಜ್ ಗೌಡ ಕ್ಯಾಮೆರಾ ಚಾಲನೆ ಮಾಡಿದರು. ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶಭ ಕೋರಿದರು. ಶಾಂಭವಿ ಕ್ರಿಯೇಷನ್ಸ್ ಲಾಂಛನದಲ್ಲಿ ವಿನುತ ಮಂಜುಳಾ ಹಾಗೂ ಬಂಕ್ ಮಂಜುನಾಥ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನಿರ್ದೇಶನ ಹಾಗೂ ಕೃಷ್ಣಕುಮಾರ್(ಕೆ ಕೆ) ಅವರ ಛಾಯಾಗ್ರಹಣ ....
ಮ್ಯೂಸಿಕಲ್ ಲವ್ ಸ್ಟೋರಿಯ "ಮೈಸೂರು" . ಇದು ಅನಿವಾಸಿ ಕನ್ನಡಿಗನ ಪ್ರೇಮಕಥೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು. ಈಗ ಇದೇ ಹೆಸರಿನ ಚಿತ್ರವೊಂದು ಸಿದ್ದವಾಗುತ್ತಿದ್ದು, ಚಿತ್ರೀಕರಣ ಪೂರ್ಣವಾಗಿದೆ. "ಮೈಸೂರು" ಇದು ಹೊರ ರಾಜ್ಯದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗನ ಪ್ರೇಮಕಥೆ. ಮ್ಯೂಸಿಕಲ್ ಲವ್ ಸ್ಟೋರಿ ಯೂ ಹೌದು. ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ, ಭುವನೇಶ್ವರ್, ಪೂರಿ, ಕಟಕ್ ಮುಂತಾದ ಕಡೆ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಕಿರುತೆರೆಯ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವ ವಾಸುದೇವ ರೆಡ್ಡಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ....
ಡಿಸೆಂಬರ್ ಎರಡನೇ ವಾರದಿಂದ ಶುರುವಾಗ್ತಿದೆ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ
ವಾಸವಿ ವೆಂಚರ್ಸ್ ಸಂಸ್ಥೆ ಸಹಯೋಗದಲ್ಲಿ ಡಿಸೆಂಬರ್ ಎರಡನೇ ವಾರದಿಂದ ‘ಟೆಲಿವಿಷನ್ ಕ್ರಿಕೆಟ್ ಲೀಗ್’ ನಡೆಯಲಿದ್ದು, ಇದರಲ್ಲಿ ಕಿರುತೆರೆ ಕಲಾವಿದರು ಭಾಗವಹಿಸಲಿದ್ದಾರೆ. ಟಿಸಿಎಲ್ ನಲ್ಲಿ ತಂಡಗಳು ಈಗಾಗಲೇ ಅಭ್ಯಾಸದಲ್ಲಿ ತೊಡಗಿವೆ. ಈ ಪಂದ್ಯಾವಳಿಯಲ್ಲಿ ಕ್ರೇಜಿ ಕಿಲ್ಲರ್ಸ್, ಗ್ಯಾಂಗ್ ಗರುಡಾಸ್, ಗ್ರೌಂಡ್ ಹಂಟರ್ಸ್, ಜಟಾಯು ಜೈಂಟ್ಸ್, ಕಿಂಗ್ ಕೇಸರಿಸ್, ಸರ್ಪ ಸ್ಟ್ರೈಕರ್ ಎಂಬ 6 ತಂಡಗಳಿರಲಿದ್ದು, ಕಿರುತರೆ ನಟ-ನಟಿಯರು ಭಾಗವಹಿಸಲಿದ್ದಾರೆ.
*ಸಾಧುಕೋಕಿಲ* ನಿರ್ದೇಶನದಲ್ಲಿ ಮೂಡಿಬಂದಿದೆ *"ಮಹಾಯೋಗಿ ಸಿದ್ದರೂಢ".* *ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್* ಮಹಾಮಹಿಮ ಸಿದ್ದರೂಢರ ಜೀವನಾಧಾರಿತ ಚಿತ್ರವೊಂದು ನಿರ್ಮಾಣವಾಗಿದೆ. *"ಮಹಾಯೋಗಿ ಸಿದ್ದರೂಢ" ಎಂಬ ಹೆಸರಿನ ಈ ಚಿತ್ರವನ್ನು ಖ್ಯಾತ ಸಂಗೀತ ನಿರ್ದೇಶಕ ಹಾಗೂ ನಿರ್ದೇಶಕ ಸಾಧುಕೋಕಿಲ ನಿರ್ದೇಶಿಸಿದ್ದಾರೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಟ್ರೇಲರ್ ಬಿಡುಗಡೆ ಮಾಡಿ, ಶುಭ ಕೋರಿದರು. ಬಾಗಲಕೋಟೆಯ ಮುಧೋಳದ ಮಂಟೂರಿನ ಶ್ರೀ ಸದಾನಂದ ಮಹಾಸ್ವಾಮಿಗಳು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಮ್ಮ ಮನೆಗೂ, ....
ಭಜರಂಗಿ-೨ ಇವೆಂಟ್ದಲ್ಲಿ ತಾರಾಮೇಳ ಮೂವರು ಸ್ಟಾರ್ ನಟರುಗಳು ಒಂದುಕಡೆ ಸೇರಿದರೆ ಹೇಗಿರುತ್ತದೆಎಂದು ಊಹಿಸಿದರೆ ‘ಭಜರಂಗಿ-೨’ ಕಾರ್ಯಕ್ರಮ ನೆನಪಿಗೆ ಬರುತ್ತದೆ.ಯಸ್ ಪ್ರಿ ಇವೆಂಟ್ಕಲರ್ಫುಲ್ ಸಮಾರಂಭದಲ್ಲಿ ನಾಯಕ ಶಿವರಾಜ್ಕುಮಾರ್ ಅವರೊಂದಿಗೆ ಪುನೀತ್ರಾಜ್ಕುಮಾರ್ ಮತ್ತುಯಶ್ ಆಗಮಸಿದ್ದು ವಿಶೇಷವಾಗಿತ್ತು.ಯಶ್ ಮಾತನಾಡಿ ಸಿನಿಮಾಅನ್ನೋದುರಣರಂಗಅಲ್ಲ. ಅದೂಂದು ಸಮುದ್ರ.ಸಾಮರ್ಥ್ಯಇದ್ದವರುಈಜುತ್ತಾರೆ.ಇಲ್ಲದವರು ಮುಳುಗುತ್ತಾರೆ.ಎಲ್ಲರೂಚೆನ್ನಾಗಿರೋಣ.ಒಟ್ಟಿಗೆಇರೋಣ, ಪ್ರೀತಿಯಿಂದಇರೋಣ. ಇವತ್ತುಯಾರು, ಯಾರೇ ಸ್ಟಾರ್ಡಮ್ ಮೆರೆಯಲಿ. ಆದರೆ ಡಾ.ರಾಜ್ಕುಮಾರ್,ಶಿವಣ್ಣ ....
ನವೆಂಬರ್ಎರಡನೇ ವಾರದಲ್ಲಿ ಪ್ರೇಮಂಪೂಜ್ಯಂ
‘ಪ್ರೇಮಂಪೂಜ್ಯಂ’ ಚಿತ್ರವು ಬಿಡುಗಡೆ ದಿನಾಂಕವನ್ನು ಮುಂದೂಡಿರುವಕಾರಣ ವಿಷಯವನ್ನು ಹೇಳಿಕೊಳ್ಳಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ನಿರ್ದೇಶಕಡಾ.ರಾಘವೇಂದ್ರ ಹೇಳುವಂತೆ ಕರೋನ ಮೂರನೆ ಅಲೆ ಬಂದರೂ ನಮ್ಮಚಿತ್ರವುಗಟ್ಟಿಯಾಗಿ ನಿಲ್ಲುತ್ತದೆಎನ್ನುವ ನಂಬಿಕೆ ಇದೆ. ಓಟಿಟಿಯಿಂದ ಬೇಡಿಕೆ ಬಂದರೂಚಿತ್ರಮಂದಿರದಲ್ಲಿಜನರಿಗೆತೋರಿಸೋಣವೆಂದು ನಿರ್ಣಯ ತೆಗೆದುಕೊಳ್ಳಲಾಗಿದೆ.ಉತ್ತಮತಂಡಇಲ್ಲದಿದ್ರೆ ಸಿನಿಮಾ ಮಾಡಲಿಕ್ಕೆಆಗುತ್ತಿರಲಿಲ್ಲ.
*ಇನ್ನೋವೇಟಿವ್ ಫಿಲಂ ಸಿಟಿ ಇನ್ನು ಮುಂದೆ ವೇಲ್ಸ್ ಇನ್ನೋವೇಟಿವ್ ಫಿಲಂ ಸಿಟಿ.* *ಫೆಬ್ರವರಿಯಲ್ಲಿ ಹೊಸರೂಪದಲ್ಲಿ ಸಿನಿರಂಗಕ್ಕೆ ಅರ್ಪಣೆ.* ಬಿಡದಿ ಬಳಿಯ ಇನ್ನೋವೇಟಿವ್ ಫಿಲಂ ಸಿಟಿಯನ್ನು ಚೆನ್ನೈನ ಖ್ಯಾತ ನಿರ್ಮಾಪಕ, ನಟ ಹಾಗೂ ಉದ್ಯಮಿ ವೇಲ್ಸ್ ಗ್ರೂಪ್ ನ ಮುಖ್ಯಸ್ಥ ಡಾ||ಐಸಿರಿ ಕೆ ಗಣೇಶ್ ಖರೀದಿಸಿದ್ದಾರೆ. ಇನ್ನು ಮುಂದೆ ವೇಲ್ಸ್ ಇನ್ನೋವೇಟಿವ್ ಫಿಲಂ ಸಿಟಿ ಎಂದು ಕರೆಯಲಾಗುವುದೆಂದು ವೇಲ್ಸ್ ಇನ್ನೋವೇಟಿವ್ ಫಿಲಂ ಸಿಟಿಯ ಮ್ಯಾನೇಜರ್ ಬಶೀರ್ ಅಹ್ಮದ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಶೀರ್ ಅವರು, ಕರ್ನಾಟಕದ ಮೇಲೆ ಅಪಾರ ಪ್ರೀತಿ ಹೊಂದಿರುವ ಅವರು ಈ ಜಾಗವನ್ನು ಖರೀದಿಸಿದ್ದಾರೆ ಹಾಗೂ ಅನೇಕ ಗ್ಲೋಬಲ್ ....
*ನವೆಂಬರ್ 19 ಕ್ಕೆ "ಮುಗಿಲ್ ಪೇಟೆ" ಚಿತ್ರ ತೆರೆಗೆ.* *ಮನು ರವಿಚಂದ್ರನ್ ಅಭಿನಯದ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಅಪಾರ ಮೆಚ್ಚುಗೆ.* ಕನ್ನಡ ಚಿತ್ರರಂಗಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕೊಡುಗೆ ಅಪಾರ. ಈಗ ಅವರ ಪುತ್ರ ಮನು ಕೂಡ "ಮುಗಿಲ್ ಪೇಟೆ" ಮೂಲಕ ಯಶಸ್ಸಿನ ಹೆಜ್ಜೆಯಿಡಲು ಸಜ್ಜಾಗಿದ್ದಾರೆ. ಮನು ಅಭಿನಯದ "ಮುಗಿಲ್ ಪೇಟೆ" ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಯು/ಎ ಪತ್ರ ನೀಡಿದೆ. ನವೆಂಬರ್ 19 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಬಿಡುಗಡೆ ದಿನಾಂಕ ತಿಳಿಸಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. "ಮುಗಿಲ್ ಪೇಟೆ" ನನ್ನ ಕನಸು. ಇಡೀ ಚಿತ್ರತಂಡದ ಶ್ರಮದ ....
.ಕನ್ನಡ ರಾಜ್ಯೋತ್ಸವಕ್ಕೆ *"ಕನ್ನಡಿಗ ನೀನಾಗು ಬಾ"* ಆಲ್ಬಂ ಸಾಂಗ್ ಬಿಡುಗಡೆ. *ಎಸ್.ಪಿ.ಬಿ* ಕಂಠಸಿರಿಯಲ್ಲಿ ಮೂಡಿಬಂದಿದ್ದ *"ಆಟೋ"* ಚಿತ್ರದ ಅದ್ಭುತ ಗೀತೆಯ ಮರುಚಿತ್ರಣ. ಕನ್ನಡ ಹಾಗೂ ಗೋವಿನ ಬಗ್ಗೆ ಅಪಾರ ಅಭಿಮಾನವಿರುವ ಮಾರುತಿ ಮೆಡಿಕಲ್ಸ್ ನ ಮಹೇಂದ್ರ ಮಣೋತ್ 2009ರಲ್ಲಿ "ಆಟೋ" ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರದಲ್ಲಿ ಗಾನಗಾರೂಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ "ಶತಶತಮಾನಗಳೇ ಉರುಳಲಿ" ಎಂಬ ಹಾಡನ್ನು ಹಾಡಿದ್ದರು. ಈಗ ಅದೇ ಚಿತ್ರದ ಹಾಡನ್ನು ಮಹೇಂದ್ರ ಮಣೋತ್ ಮರು ನಿರ್ಮಾಣ ಮಾಡಿದ್ದಾರೆ ರಾಜ್ಯೋತ್ಸವದ ಸಲುವಾಗಿ. ಬಿ.ಪಿ.ಹರಿಹರನ್ ಈ ಹಾಡನ್ನು ನಿರ್ದೇಶನ ಮಾಡಿದ್ದಾರೆ. ಮಲ್ಲಿಕಾರ್ಜುನ ಮುತ್ತಲಗೇರಿ ಈ ಹಾಡನ್ನು ....
ಯುವ ಜೋಡಿಗಳ ಸಂಕೀರ್ಣ ಗುಣಗಳು
ಕೆಜಿಎಫ್ ಛಾಪ್ಟರ್-೧ಗೆ ಕೆಲಸ ಮಾಡಿರುವರಾಘವ್ವಿನಯ್ ಶಿವಗಂಗೆ ಇವರು ‘ಟಾಮ್ಅಂಡ್ಜೆರ್ರಿ’ ಚಿತ್ರಕ್ಕೆರಚನೆ-ನಿರ್ದೇಶನ, ಎರಡನೇಛಾಯಾಗ್ರಾಹಕರಾಗಿದ್ದ ಸಂಕೇತ್ ಪೂರ್ಣಪ್ರಮಾಣದಕ್ಯಾಮಾರಮನ್ ಮತ್ತು ಖಳನಾಗಿ ಕಾಣಿಸಿಕೊಂಡಿದ್ದ ವಿಶ್ವಾಸ್ ಮುಖ್ಯ ಖಳನಾಯಕ. ಮಾಸ್ಎಂಟರ್ಟೈನ್ಮೆಂಟ್ದಲ್ಲಿ ಬೇರೆಯದೇಅರ್ಥದಲ್ಲಿ ಬದುಕುತ್ತಿರುವಎರಡು ಪಾತ್ರಗಳ ಕತೆಯಲ್ಲಿ ನಗು, ಅಳು, ಸಂತೋಷಇರುತ್ತದೆ.
ವಿಜಯಾನಂದನಿಗೆಅದ್ದೂರಿ ಮಹೂರ್ತ ಖ್ಯಾತಉದ್ಯಮಿ ವಿಜಯ್ಸಂಕೇಶ್ವರಜೀವನಕತೆ ಆಧರಿಸಿದ ‘ವಿಜಯಾನಂದ’ ಚಿತ್ರದ ಮಹೂರ್ತ ಸಮಾರಂಭವುಅದ್ದೂರಿಯಾಗಿ ಹುಬ್ಬಳ್ಳಿಯ ವರೂರಿನಲ್ಲಿರುವ ವಿಆರ್ಎಲ್ ಪ್ರಧಾನಕಾರ್ಯಾಲಯದಲ್ಲಿ ನಡೆಯಿತು.ಸಮಾರಂಭದಲ್ಲಿ ವಿಜಯ್ಸಂಕೇಶ್ವರ, ಆನಂದ್ಸಂಕೇಶ್ವರ ಮುಂತಾದವರು ಭಾಗವಹಿಸಿದ್ದರು.ಅನಂತ್ನಾಗ್ ಮತ್ತು ನಾಯಕ ನಿಹಾಲ್ಅಭಿನಯದ ಮೊದಲ ದೃಶ್ಯಕ್ಕೆ ನಟಗಣೇಶ್ಕ್ಲಾಪ್ ಮಾಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕಿರಿಷಿಕಾಶರ್ಮಒಂಬತ್ತು ವರ್ಷದಅನುಭವದಲ್ಲಿಇದುಎರಡನೆ ಪ್ರಯತ್ನ.೧೯೫೦ ರಿಂದ ೨೦೧೮ರ ವರೆಗಿನ ವಿಜಯ್ ಸಂಕೇಶ್ವರಅವರ ಪಯಣವನ್ನುತೋರಿಸಲಾಗುವುದು.ಒಂದುಅದ್ಬುತ ....
ಸಂತೋಷಕೂಟದಲ್ಲಿ ಕೋಟಿಗೊಬ್ಬ-೩ ಬಿಡುಗಡೆಒಂದು ದಿನ ತಡವಾದರೂ ಹೆಸರಿಗೆತಕ್ಕಂತೆ ‘ಕೋಟಿಗೊಬ್ಬ-೩’ ಚಿತ್ರವುಒಟ್ಟಾರೆ ೪೦.೫ ಕೋಟಿ ಸಂಗ್ರಹವಾಗಿದೆಎಂಬುದಾಗಿ ಮಾಹಿತಿ ಲಭ್ಯವಾಗಿದೆ.ಅಂತೂ ಸಿನಿಮಾವು ಗೆಲುವಿನ ಸಂತಸದಲ್ಲಿದೆ.ನಿರ್ಮಾಪಕ ಸೂರಪ್ಪಬಾಬು ಮಾತನಾಡಿ ನಮ್ಮಿಬ್ಬರ ನಡುವ ವೈಮನಸ್ಸಿದೆ. ಹಾಗಾಗಿ ಬಿಡುಗಡೆ ವಿಳಂಬವಾಯಿತುಎಂದುಎಲ್ಲರೂ ಹೇಳುತ್ತಿದ್ದರು. ಪರದೆ ಮೇಲೆ ದೃಶ್ಯಗಳು ಉತ್ತಮವಾಗಿ ಬರಬೇಕೆಂದು ನಾವಿಬ್ಬರು ಜಗಳವಾಡಿದ್ದು ನಿಜ. ಅದು ಪ್ರೀತಿಯಿಂದ ಮಾತ್ರ.ತಡವಾದಾಗ ಸುದೀಪ್ ಪೋಷಕರು, ನನ್ನ ಮಗಳು ಧೈರ್ಯತುಂಬಿದರು.ಪ್ರೇಕ್ಷಕರು ಸಿನಿಮಾವನ್ನುಇಷ್ಟಪಟ್ಟು ಗೆಲುವು ....
ಟ್ರೇಲರ್ ಮೂಲಕ ಪೆದ್ದು ನಾರಾಯಣ ಆಗಮನ ಹೊಸಬರ ‘ಪೆದ್ದು ನಾರಾಯಣ’ ಚಿತ್ರದಟ್ರೇಲರ್ಇತ್ತೀಚೆಗೆ ಬಿಡಗಡೆಗೊಂಡಿತು. ಹಿರಿಯ ನಟಕೀರ್ತಿರಾಜ್ ತುಣುಕುಗಳಿಗೆ ಚಾಲನೆ ನೀಡಿತಂಡಕ್ಕೆ ಶುಭಹಾರೈಸಿದರು.ಗಂಗಾಗುರುಕಂಬೈನ್ಸ್ ಬ್ಯಾನರ್ಅಡಿಯಲ್ಲಿ ಕೆ.ವಾಸುದೇವ್ ಅರ್ಪಿಸಿ, ಭೀಮರೆಡ್ಡಿ ನಿರ್ಮಿಸುತ್ತಿರುವ ಸಿನಿಮಾಕ್ಕೆಉತ್ತರಕರ್ನಾಟಕದರಘು.ಎ.ರೂಗಿ ನಿರ್ದೇಶನ ಮಾಡುತ್ತಿದ್ದಾರೆ.ಈಗಾಗಲೇ ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದಅನುಭವದಿಂದಆಕ್ಷನ್ಕಟ್ ಹೇಳುತ್ತಿದ್ದಾರೆ.ಶ್ರೀರತ್ನಕರ್, ವಿಷ್ಣುಪ್ರಿಯಾ, ಸುರಕ್ಷಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಉಳಿದಂತೆ ಸಂತೋಷ್ನಾರಾಯಣ್ಶೆಟ್ಟಿ, ....
*ನವೆಂಬರ್ ನಲ್ಲಿ ನವೀನ ತಂತ್ರಜ್ಞಾನದೊಂದಿಗೆ ಬರುತ್ತಿದ್ದಾರೆ "ಭಾಗ್ಯವಂತರು"* . ಭಾರ್ಗವ ಅವರ ನಿರ್ದೇಶನದಲ್ಲಿ ಡಾ||ರಾಜಕುಮಾರ್ ಹಾಗೂ ಬಿ.ಸರೋಜಾದೇವಿ ಅವರು ನಟಿಸಿದ್ದ ಸೂಪರ್ ಹಿಟ್ ಚಿತ್ರ " ಭಾಗ್ಯವಂತರು". ಇದೇ ನವೆಂಬರ್ ನಲ್ಲಿ ಈ ಚಿತ್ರ ಡಿ.ಐ, 7.1 ಟ್ರ್ಯಾಕ್ ಸೇರಿದಂತೆ ಅನೇಕ ನವೀನ ತಂತ್ರಜ್ಞಾನ ಅಳವಡಿಕೆಯೊಂದಿಗೆ ಮರು ಬಿಡುಗಡೆಯಾಗುತ್ತಿದೆ. ಮುನಿರಾಜು ಈ ಚಿತ್ರವನ್ನು ಮತ್ತೆ ತೆರೆಗೆ ತರುತ್ತಿದ್ದಾರೆ. ನನ್ನ ಮೊದಲ ನಿರ್ದೇಶನದ ಚಿತ್ರ "ಭಾಗ್ಯವಂತರು". ದ್ವಾರಕೀಶ್ ಈ ಚಿತ್ರದ ನಿರ್ಮಾಪಕರು. ನಾನು ಆಗಲೇ ರಾಜಕುಮಾರ್ ಅವರು ನಟಿಸಿದ್ದ ಬಬ್ರುವಾಹನ, ನಾ ನಿನ್ನ ಮರೆಯಲಾರೆ, ಜಗ ಮೆಚ್ಚಿದ ಮಗ ಸೇರಿದಂತೆ ಅನೇಕ ಚಿತ್ರಗಳಿಗೆ ಸಹ ನಿರ್ದೇಶನ ....
ಕ್ರಿಯೇಟಿವ್ ಟೈಮ್ಸ್ ಸ್ಟುಡಿಯೋ ಉದ್ಘಾಟನೆ ಕನ್ನಡ ಕಿರುತೆರೆ, ಹಿರಿತೆರೆಯಲ್ಲಿ ೩೦ ವರ್ಷಗಳ ಕಾಲ ಬರಹಗಾರ, ಧಾರಾವಾಹಿ ನಿರ್ದೇಶಕನಾಗಿ ಸೇವೆ ಸಲ್ಲಿಸಿರುವ ಬುಕ್ಕಾಪಟ್ಟಣ ವಾಸು ಈಗಾಗಲೇ ಸೆಂಚುರಿ ಫಿಲಂ ಇನ್ಸ್ಟಿಟ್ಯೂಟ್ ಎಂಬ ಚಲನಚಿತ್ರ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದ್ದು, ಆ ಮೂಲಕ ಹಲವಾರು ಪ್ರತಿಭೆಗಳನ್ನು ಹುಟ್ಟುಹಾಕಿದ್ದಾರೆ. ಅದರ ಮುಂದುವರಿದ ಭಾಗವಾಗಿ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಗೆಳೆಯ ಶ್ರೀಸಾಯಿಕೃಷ್ಣ ಅವರ ಜೊತೆ ಸೇರಿ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಷದೊಂದಿಗೆ ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಕ್ರಿಯೇಟಿವ್ ಟೈಮ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಎಂಬ ಹೊಸ ಸ್ಟುಡಿಯೊವೊಂದನ್ನು ಆರಂಭಿಸಿದ್ದಾರೆ. ಇದರ ಉದ್ಘಾಟನಾ ....
*ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಯಿತು ಹಾರರ್ ಥ್ರಿಲ್ಲರ್ "ಸಕೂಚಿ" ಚಿತ್ರದ ಟ್ರೇಲರ್.* ಬಿ.ಸಿ.ಅಶ್ವಿನ್ ನಿರ್ಮಾಣದ, ಅಶೋಕ್ ಎಸ್ ನಿರ್ದೇಶನದ "ಸಕೂಚಿ" ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ದಿಯಾ ಚಿತ್ರದ ನಾಯಕಿ ಖುಷಿ ರವಿ, ನಿರ್ದೇಶಕ ಮಹೇಶ್ ಬಾಬು, ಬಿಜೆಪಿ ಮುಖಂಡರಾದ ಲಕ್ಷ್ಮೀಕಾಂತ್ ಮುಂತಾದವರು ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಾನು ಕೆಲವು ವರ್ಷಗಳ ಹಿಂದೆ ಶೃಂಗೇರಿಯಿಂದ ಕೊಪ್ಪಕ್ಕೆ ಪ್ರಯಾಣ ಬೆಳೆಸಿದೆ. ಅಲ್ಲೇ ಒಂದು ರೆಸಾರ್ಟ್ ನಲ್ಲಿ ತಂಗಿದೆ. ರಾತ್ರಿ ಸಿಡಿಲಿನ ಅಬ್ಬರದ ನಡುವೆ ತುಂತುರು ಮಳೆಯಾಗುತ್ತಿತ್ತು. ಭಾರೀ ಸಿಡಿಲಿನ ಶಬ್ದಕ್ಕೆ ನೂರಡಿ ಎತ್ತರದ ಮರದ ಕೊಂಬೆ ....
*ಕುತೂಹಲ ಮೂಡಿಸಿದೆ "ಕಡಲ ತೀರದ ಭಾರ್ಗವ" ಚಿತ್ರದ ಟೀಸರ್.* ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ವರುಣ್ ರಾಜು ಪಟೇಲ್ ಹಾಗೂ ಭರತ್ ಗೌಡ ನಾಯಕರಾಗಿ ನಟಿಸಿರುವ "ಕಡಲ ತೀರದ ಭಾರ್ಗವ" ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಚಿತ್ರದ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ನಮ್ಮ ಚಿತ್ರ ಹಿರಿಯ ಸಾಹಿತಿ ಶಿವರಾಮ ಕಾರಂತರ ಕುರಿತಾದುದ್ದಲ್ಲ . ಇದರಲ್ಲಿ ನಾಯಕನ ಹೆಸರು ಭಾರ್ಗವ.. ಆತ ಕಡಲತೀರದವನು. ಇನ್ನೊಂದು ರೀತಿಯಲ್ಲಿ ವಿಷ್ಣುವಿನ ಆರನೇ ಅವತಾರ ಪರಶುರಾಮ. ಆತನನ್ನು ಭಾರ್ಗವ ರಾಮ ಎಂತಲೂ ಕರೆಯುತ್ತಾರೆ. ಭಾರ್ಗವರಾಮ ಸಾವಿಲ್ಲದವ. ದುಷ್ಟ ಕ್ಷತ್ರಿಯರನ್ನು ದ್ವಂಸ ಮಾಡಿದವ. ....
ಸೆಸ್ಪೆನ್ಸ್ ಹಾರರ್ಚಿತ್ರಇಲ್ಲಿಂದಆರಂಭವಾಗಿದೆ
ಟಾಲಿವುಡ್ ನಿರ್ಮಾಪಕ ಬಿ.ನರಸಿಂಹರೆಡ್ಡಿ ಅವರುಡಾ.ರಾಜ್ಕುಮಾರ್ಅಭಿಮಾನಿ. ಅದರಿಂದಲೇ ಮೊದಲಬಾರಿ ‘ಇಲ್ಲಿಂದಆರಂಭವಾಗಿದೆ’ ಸಿನಿಮಾಕ್ಕೆಕತೆಚಿತ್ರಕತೆಬರೆದುನಿರ್ಮಾಣ ಮಾಡುವುದರಜೊತೆಗೆರಾಜ್ಕುಮಾರ್ ಹೆಸರಿನಲ್ಲಿ ಸಿಐಡಿ ಪಾತ್ರವನ್ನು ನಿಭಾಯಿಸಿದ್ದಾರೆ.ಲಕ್ಷಣಚಪರ್ಲ ನಿರ್ದೇಶನವಿದೆ.ಪ್ರಚಾರದ ಸಲುವಾಗಿ ಟ್ರೈಲರ್ ಮತ್ತು ಮೂರು ಹಾಡುಗಳನ್ನು ಮಾಧ್ಯಮದವರಿಗೆತೋರಿಸಲಾಯಿತು.ಎರಡು ಸ್ನೇಹಿತ ಕುಟುಂಬಗಳ ಮಧ್ಯೆ ಮಗ,ಮಗಳನ್ನು ತಂದುಕೊಡಬೇಕೆಂದು ನಿರ್ಣಯತೆಗೆದುಕೊಂಡಿರುತ್ತಾರೆ. ಆದರೆ ದುರಳನೊಬ್ಬ ಒಡಕುತಂದಕಾರಣಇಬ್ಬರು ಬೇರೆಯಾಗುತ್ತಾರೆ.
*ಕನ್ನಡ ರಾಜ್ಯೋತ್ಸವದಂದು ಕಟ್ಟೆ ಓಟಿಟಿ ಯಲ್ಲಿ ಬರಲಿದ್ದಾರೆ "ನಮ್ಮ ಊರಿನ ರಸಿಕರು".* ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದರಾದ ದಿ||ನರಸಿಂಹರಾಜು ಅವರ ಮೊಮ್ಮಕಳಾದ ಅರವಿಂದ್ ಹಾಗೂ ಅವಿನಾಶ್ ಚಿತ್ರರಂಗದಲ್ಲಿ ಚಿರಪರಿಚಿತರು. ಈಗ ಇವರು ಕೆಲವು ಸ್ನೇಹಿತರೊಂದಿಗೆ ಸೇರಿ ಕಟ್ಟೆ ಎಂಬ ಹೆಸರಿನ ಕನ್ನಡ ಓಟಿಟಿ ಆರಂಭಿಸುತ್ತಿದ್ದಾರೆ. ಕನ್ನಡ ರಾಜ್ಯೋತ್ಸವ ದಂದು ಈ ಓಟಿಟಿಗೆ ಚಾಲನೆ ಸಿಗಲಿದೆ. ಮೊದಲ ಹೆಜ್ಜೆಯಾಗಿ ಕನ್ನಡದ ಪ್ರಸಿದ್ಧ ಲೇಖಕ ಶ್ರೀ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಥಾ ಸಂಕಲನ *ನಮ್ಮ ಊರಿನ ರಸಿಕರು* ವೆಬ್ ಸರಣಿಯಾಗಿ 8 ಕಂತುಗಳಲ್ಲಿ ಪ್ರಸಾರವಾಗಲಿದೆ. ಕರ್ನಾಟಕದ ಎಲ್ಲಾ ಪ್ರಾಂತ್ಯದ, ಉಪ ಭಾಷೆಗಳಿಂದ ಕೂಡಿದ ಕಾರ್ಯಕ್ರಮ ಕಟ್ಟೆ ....
*ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ನೂತನ ಚಿತ್ರಕ್ಕೆ ನಾಂದಿ.* *ಪನ್ನಗಾಭರಣ ನಿರ್ಮಾಣದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಮೇಘನಾರಾಜ್* . *ಹೊಸಪ್ರತಿಭೆ ವಿಶಾಲ್ ಆತ್ರೇಯ ನಿರ್ದೇಶನ.* ಅಕ್ಟೋಬರ್ ೧೭. ಕಳೆದವರ್ಷ ನಮ್ಮನೆಲ್ಲಾ ಬಿಟ್ಟು ಹೋದ ಚಿರಂಜೀವಿ ಸರ್ಕಾರ ಹುಟ್ಟುಹಬ್ಬ. ಅದರ ಸವಿನೆನಪಿಗಾಗಿ ಅವರ ಗೆಳೆಯರು ಹಾಗೂ ಮಡದಿ ಮೇಘನಾರಾಜ್ ಹೊಸ ವಿಷಯ ಹಂಚಿಕೊಂಡಿದ್ದಾರೆ. ನೂತನ ಚಿತ್ರವೊಂದನ್ನು ಆರಂಭಿಸುತ್ತಿದ್ದು, ವರ್ಷಾಂತ್ಯಕ್ಕೆ ಚಿತ್ರೀಕರಣ ಆರಂಭವಾಗಲಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಕೆಲವು ಮಾಹಿತಿ ಹಂಚಿಕೊಂಡರು. ನಾವೆಲ್ಲಾ ಗೆಳೆಯರು ಒಟ್ಟಾಗಿ ಸೇರಿ ಮಾತನಾಡುವಾಗ ಒಂದು ....