ಆಗಸ್ಟ್ ೧೨ಕ್ಕೆ ಅಬ್ಬರ ಮಾಸ್ ಆಕ್ಷನ್ ಕಥೆ ಹೊಂದಿರುವ ‘ಅಬ್ಬರ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಇದೀಗ ಟೀಸರ್ ಬಿಡುಗಡೆ ಮೂಲಕ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ರಚನೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿರುವ ಕೆ.ರಾಮ್ನಾರಾಯಣ್ ಮಾತನಾಡಿ ನಾಯಕಿಯರಾದ ನಿಮಿಕಾರತ್ನಾಕರ್, ಲೇಖಾಚಂದ್ರ, ರಾಶಿಪೊನ್ನಪ್ಪ ಇವರೆಲ್ಲರೂ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಪ್ರಜ್ವಲ್ದೇವರಾಜ್ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ೫೦ ದಿನಗಳ ಕಾಲ ಬಾದಾಮಿ, ಪಟ್ಟದಕಲ್ಲು, ಬೆಂಗಳೂರು ಸುತ್ತಮುತ್ತ ನಡೆಸಿದೆ. ನಿರ್ಮಾಪಕರು ಎಲ್ಲಾ ....
ತೆರೆಗೆ ಸಿದ್ದ ಲವ್ ೩೬೦ ಹಿರಿಯ ನಿರ್ದೇಶಕ ಶಶಾಂಕ್ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ‘ಲವ್ ೩೬೦’ ಚಿತ್ರದ ಹಾಡುಗಳು ಗಮನ ಸೆಳೆಯುತ್ತಿದೆ. ಈಗ ಮೂರನೇ ಹಾಡು ‘ಭೊರ್ಗರೆದು’ ಗೀತೆಯನ್ನು ಬಿಡುಗಡೆ ಮಾಡಲಾಗಿದ್ದು ಎಲ್ಲರಿಗೂ ಇಷ್ಟವಾಗಿದೆ. ಶಶಾಂಕ್ ನಿರ್ದೇಶನ ಮಾಡಿರುವ ‘ಮೊಗ್ಗಿನ ಮನಸು’ ಚಿತ್ರವುತೆರೆಕಂಡು ಹದಿನಾಲ್ಕು ವರ್ಷಗಳಾಗಿವೆ. ಇದರ ನೆನಪಿಗಾಗಿ ಈ ಹಾಡನ್ನು ಅವರೇ ಬರೆದಿರುವುದು ವಿಶೇಷ. ಮುಂದೊಂದು ದಿನ ‘ಮೊಗ್ಗಿನ ಮನಸು-೨’ ಮಾಡುವ ಆಸೆ ಇದೆ. ಆ ಚಿತ್ರವನ್ನು ಹೊಸ ಕಲಾವಿದರರೊಂದಿಗೆ ಮಾಡುತ್ತೇನೆ. ಅದರಲ್ಲೂ ಹೊಸಬರೊಂದಿಗೆ ಕೂಡಿಕೊಂಡಿದ್ದು ಸುಮಾರು ವರ್ಷಗಳೇ ಆಗಿತ್ತು. ಪ್ರವೀಣ್ ಎಂಬ ನಟನನ್ನು ....
*ಸನ್ಮಾನ್ಯ ಗೃಹ ಸಚಿವರಿಂದ "ಓಮಿನಿ" ಟ್ರೇಲರ್ ಬಿಡುಗಡೆ.* "ಓಮಿನಿ" ಕಾರು ಹೌದು. ಆದರೆ ಲ್ಯಾಟಿನ್ ಭಾಷೆಯಲ್ಲಿ "ಓಮಿನಿ" ಗೆ ಎಲ್ಲಾ ಎಂಬ ಅರ್ಥವಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಸನ್ಮಾನ್ಯ ಗೃಹಸಚಿವರಾದ ಅರಗ ಜ್ಞಾನೇಂದ್ರ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು. ತೀರ್ಥಹಳ್ಳಿ ಸುಂದರವಾದ ಊರು. ಅಲ್ಲಿನ ಗಾಳಿ, ನೀರಿಗೆ ಏನೋ ಅದ್ಭುತ ಶಕ್ತಿ ಇದೆ ಅನಿಸುತ್ತದೆ. ರಾಷ್ಟ್ರಕವಿ ಕುವೆಂಪು, ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರು ಸೇರಿದಂತೆ ಅನೇಕ ಗಣ್ಯರು ನಮ್ಮ ತಾಲ್ಲೂಕಿನವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಈ "ಓಮಿನಿ" ಚಿತ್ರದ ನಿರ್ದೇಶಕ ಮಂಜು ಕೂಡ ನಮ್ಮೂರಿನವರು. ....
ವೆಂಕಟ್ ಭಾರಧ್ವಾಜ್ ಸಾರಥ್ಯದ ‘ಶ್ರೀರಂಗ’ ಸಿನಿಮಾದ ಟ್ರೇಲರ್ ರಿಲೀಸ್…ಜುಲೈ 22ಕ್ಕೆ ಬೆಳ್ಳಿತೆರೆಗೆ ಸಿನಿಮಾ ಎಂಟ್ರಿ ಫಿಕ್ಸ್* ವಿಭಿನ್ನ ಶೀರ್ಷಿಕೆ, ವಿಭಿನ್ನ ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿದ್ದ ವೆಂಕಟ್ ಭಾರಧ್ವಾಜ್ ಸಾರಥ್ಯದ ಶ್ರೀರಂಗ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಕಾಮಿಡಿ ಜೊತೆಗೆ ಕ್ರೈ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಟ್ರೇಲರ್ ನೋಡುಗರಿಗೆ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ವೆಂಟಕ್ ಭಾರಧ್ವಾಜ್, ಸಿನಿಮಾ ಅನ್ನೋದನ್ನು ಒಬ್ಬರ ಕೈಯಲ್ಲಿ ಮಾಡಲು ಆಗುವುದಿಲ್ಲ. ತಾಂತ್ರಿಕ ವರ್ಗ, ಕಲಾ ವರ್ಗ ಹೀಗೆ ಎಲ್ಲರೂ ಕೂಡಿದಾಗ ಮಾತ್ರ ಸಿನಿಮಾಗುತ್ತದೆ. ಶಂಕರ್ ರಾಮನ್ ....
*ಬಿಡುಗಡೆಯಾಯಿತು "ಗಾಳಿಪಟ 2"* ಚಿತ್ರದ *"ದೇವ್ಲೆ ದೇವ್ಲೆ"* ಹಾಡು. ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಹುಟ್ಟಿಸಿರುವ "ಗಾಳಿಪಟ 2" ಚಿತ್ರದ "ದೇವ್ಲೆ ದೇವ್ಲೆ" ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಈ ಹಾಡು ಬಿಡುಗಡೆ ಸಮಾರಂಭ ನಡೆಯಿತು. ಈ ಹಾಡನ್ನು ಬರೆದು ಅರ್ಜುನ್ ಜನ್ಯ ಅವರಿಗೆ ಕಳುಹಿಸಿದೆ. ಮೊದಲು ಈ ಹಾಡನ್ನು "ದೇವ್ರೆ ದೇವ್ರೆ" ಎಂದು ಬರೆದಿದ್ದು. ಆನಂತರ ಇದು ಮಾಮೂಲಿ ತರಹ ಇದೆ. ಸ್ವಲ್ಪ ಏನಾದರೂ ಬದಲಾವಣೆ ಮಾಡಿ ಎಂದರು ಅರ್ಜುನ್ ಜನ್ಯ. ಆಗ ರ ಕಾರ ತೆಗೆದು ಲ ಕಾರ ಹಾಕಿ ಅಂದೆ. ಆಗ ಎಲ್ಲರಿಗೂ ....
ಎವರಿಥಿಂಗ್ ಈಸ್ ಪಾಸಿಬಲ್ ಕಿರುಚಿತ್ರ
ರಂಗಭೂಮಿ ಕಲಾವಿದ, ಸಹಾಯಕ ನಿರ್ದೇಶಕ, ‘ದೇವರನಾಡಲ್ಲಿ’ ಸಿನಿಮಾದಲ್ಲಿ ನಟನೆ ಮಾಡಿರುವ ಇಕ್ಟ್ವಾಕುರಾಮ್ ಎರಡನೆ ಬಾರಿ ‘ಎವರಿಥಿಂಗ್ ಈಸ್ ಪಾಸಿಬಲ್’ ಎನ್ನುವ ಕಿರುಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ದಿಯಾ ಖ್ಯಾತಿಯ ಖುಷಿರವಿ ಮತ್ತು ಎಂ.ಕೆ.ಮಠ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮೊನ್ನೆ ಚಿತ್ರದ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಖುಷಿರವಿ ಸೈನ್ಸ್ಫಿಕ್ಷನ್ ಜಾನರ್ ಸಿನಿಮಾ ಇದಾಗಿದೆ. ಸೆಕೆಂಡ್ ಲಾಕ್ಡೌನ್ ಟೈಮ್ದಲ್ಲಿ ನಿರ್ದೇಶಕರು ಕಥೆ ಹೇಳಿದರು.
.*"ಗಿರ್ಕಿ" ಗೆ ಸಿಗುತ್ತಿದೆ ನೋಡುಗರಿಂದ ಉತ್ತಮ ಪ್ರೋತ್ಸಾಹ.* *ನಿರ್ಮಾಪಕರಿಗೆ ಮತ್ತೊಂದು ಸಿನಿಮಾ ಆರಂಭಿಸುವ ಉತ್ಸಾಹ.* ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಜನರನ್ನು ತಮ್ಮ ಪಾತ್ರದ ಮೂಲಕ ನಕ್ಕುನಗಿಸುವ ತರಂಗ ವಿಶ್ವ ನಿರ್ಮಿಸಿರುವ, ವೀರೇಶ್ ಪಿ.ಎಂ ನಿರ್ದೇಶಿಸಿರುವ "ಗಿರ್ಕಿ" ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಿರ್ಮಾಣದಲ್ಲಿ ವಿಶ್ವ ಅವರಿಗೆ ವಾಸುಕಿ ಭುವನ್ ಸಾಥ್ ನೀಡಿದ್ದಾರೆ. ಈ ಸಂತಸವನ್ನು ಚಿತ್ರತಂಡ ಮಾಧ್ಯಮದವರ ಮುಂದೆ ಹಂಚಿಕೊಂಡರು. ನಟನಾಗಿದ್ದ ನಾನು, ಈ ಚಿತ್ರದಿಂದ ನಿರ್ಮಾಪಕನಾದೆ. ನಟನೆ ಕೂಡ ಮಾಡಿದ್ದೇನೆ. ಕಳೆದವಾರ ಚಿತ್ರ ತೆರೆ ಕಂಡಿದೆ. ನಮ್ಮ ಚಿತ್ರಕ್ಕೆ ರಾಜ್ಯಾದ್ಯಂತ ಸಿಗುತ್ತಿರುವ ....
*ಸಖತಾಗಿದೆ "ಸಾರಿ" ಚಿತ್ರದ ಲಿರಿಕಲ್ ಸಾಂಗ್.* ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸುತ್ತಿರುವ "ಸಾರಿ" ಕರ್ಮ ರಿಟರ್ನ್ಸ್ ಚಿತ್ರದ ಲಿರಿಕಲ್ ಸಾಂಗ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಾನು ಮೂಲತಃ ವಿ.ಎಫ್.ಎಕ್ಸ್ ತಂತ್ರಜ್ಞ. ಈ ಹಿಂದೆ "ಸಿದ್ದಿಸೀರೆ" ಚಿತ್ರ ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ. ಇದು ಸೂಪರ್ ಹೀರೊ ಕಾನ್ಸೆಪ್ಟ್ ನ ಚಿತ್ರ. ರಾಗಿಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಕನ್ನಡದ ಮೊದಲ ....
*ಸೆಪ್ಟೆಂಬರ್ 2 ಕ್ಕೆ ಬರಲಿದೆ "ತಾಜ್ ಮಹಲ್ 2"* ಮೇಕಪ್ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿದ ದೇವರಾಜ್ ಕುಮಾರ್ ನಂತರದ ದಿನಗಳಲ್ಲಿ ನಿರ್ದೇಶಕರಾದರು. ನಿರ್ದೇಶನದೊಂದಿಗೆ ನಾಯಕನಾಗೂ ನಟಿಸಲು ಆರಂಭಿಸಿದರು. ಪ್ರಸ್ತುತ ಅವರು ನಾಯಕನಾಗಿ ನಟಿಸಿ, ನಿರ್ದೇಶಿಸಿರುವ "ತಾಜ್ ಮಹಲ್ 2" ಚಿತ್ರ ಸೆಪ್ಟೆಂಬರ್ 2 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಬಿಡುಗಡೆ "ತಾಜ್ ಮಹಲ್ 2 " ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು. 2019ರಲ್ಲಿ ಈ ಚಿತ್ರವನ್ನು ಆರಂಭಿಸಿದ್ದೆವು. 2020 ರಲ್ಲಿ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿತ್ತು. ನಂತರ ಬಂದ ....
*ಕನ್ನಡದಲ್ಲೂ ಬರ್ತಿದೆ ರಾಮ್ ಗೋಪಾಲ್ ವರ್ಮಾ ಸಿನಿಮಾ..ಬೆಂಗಳೂರಿನಲ್ಲಿ ಹುಡುಗಿ ಚಿತ್ರದ ಪ್ರಚಾರ ಮಾಡಿದ RGV*
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾಗಳು ಅಂದರೆ ವಿಭಿನ್ನವಾಗಿಯೇ ಇರುತ್ತದೆ. ಸದಾ ಡಿಫರೆಂಟ್ ಶೈಲಿಯೇ ಚಿತ್ರ ಮಾಡುವುದರಲ್ಲಿ ಸದಾ ಮುಂದೆ.
ಹೊಸತನದ ಹೆಜ್ಜೆಗಳನ್ನು ಇಡುವ ಆರ್ ಜಿವಿ ಈಗ ಸಮರ ಕಲೆಯಾಧಾರಿತ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದು, ಆ ಚಿತ್ರ ಹುಡುಗಿ ಎಂಬ ಶೀರ್ಷಿಕೆಯಡಿ ಕನ್ನಡದಲ್ಲೂ ರಿಲೀಸ್ ಮಾಡಲಾಗ್ತಿದೆ. ಇದೇ 15ಕ್ಕೆ ಚಿತ್ರ ತೆರೆಗೆ ಬರ್ತಿದ್ದು, ಈ ಹಿನ್ನೆಲೆ ರಾಮ್ ಗೋಪಾಲ್ ಬೆಂಗಳೂರಿನಲ್ಲಿ ಸಿನಿಮಾ ಪ್ರಚಾರ ನಡೆಸಿದರು.
*ನೋಡುಗರ ಗಮನ ಸೆಳೆಯುತ್ತಿದೆ "ಡೇವಿಡ್" ಚಿತ್ರದ ಹಾಡು ಹಾಗೂ ಟ್ರೇಲರ್.* ಶ್ರೇಯಸ್ ಚಿಂಗಾ ನಾಯಕನಾಗಿ ನಟಿಸಿ, ನಿರ್ದೇಶನವನ್ನು ಮಾಡಿರುವ "ಡೇವಿಡ್" ಚಿತ್ರದ ಹಾಡು ಹಾಗೂ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಸಮಾಜ ಸೇವಕರು ವಾಣಿಜ್ಯೋದ್ಯಮಿ ಹಾಗೂ ಲೇಖಕರು ಆಗಿರುವ ಶ್ರೀ ಧನರಾಜ್ ಬಾಬು ಅವರು ಹಾಡು ಹಾಗೂ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು. ALL OK ಸಂಗೀತ ನೀಡಿರುವ ಈ ಹಾಡನ್ನು ಸಂಚಿತ್ ಹೆಗಡೆ ಹಾಡಿದ್ದಾರೆ. ರೋಹನ್ ಬರೆದಿದ್ದಾರೆ. ನಮ್ಮ ಚಿತ್ರದ ಟ್ರೇಲರ್ ಹಾಗೂ ಹಾಡು ಬಿಡುಗಡೆ ಸಮಾರಂಭಕ್ಕೆ ಬಂದಿರುವ ತಮಗೆ ಧನ್ಯವಾದ. "ಡೇವಿಡ್" ಒಂದು ವಿಭಿನ್ನ ಪ್ರಯತ್ನ. ನಾನು ಹಾಗೂ ಭಾರ್ಗವ್ ಯೋಗಾಂಬರ್ ಜಂಟಿಯಾಗಿ ....
*ಆರಕ್ಷಕರಿಗೆ ದೊಡ್ಡ "ಸೆಲ್ಯೂಟ್"* ನಾವು ಇಂದು ಸುಲಲಿತವಾಗಿ ಜೀವನ ನಡೆಸುತ್ತಿರುವುದಕ್ಕೆ ಮುಖ್ಯ ಕಾರಣ ಆರಕ್ಷಕರು. ಅಂತಹ ಆರಕ್ಷಕರಿಗೂ ಒಂದು ಜೀವನವಿದೆ. ಅವರಿಗೂ ಹೆಂಡತಿ, ಮಕ್ಕಳು, ತಂದೆ, ತಾಯಿ ಇದ್ದಾರೆ. ಅವರಿಗಿರುವ ಸಾಕಷ್ಟು ಕಷ್ಟಗಳ ನಡುವೆ, ಕರ್ತವ್ಯನಿಷ್ಠೆಯನ್ನು ಹೇಗೆ ಮಾಡುತ್ತಾರೆ ಎಂಬ ವಿಚಾರವನ್ನು "ಸೆಲ್ಯೂಟ್" ಎಂಬ ಇಪ್ಪತ್ತೇಳು ನಿಮಿಷಗಳ ಕಿರುಚಿತ್ರದ ಮೂಲಕ ಮನಮುಟ್ಟುವಂತೆ ನಿರ್ದೇಶಿಸಿದ್ದಾರೆ ನಿರ್ದೇಶಕ ತ್ಯಾಗರಾಜ್. ದೀಪಕ್ ಗೌಡ ನಿರ್ಮಿಸಿರುವ ಈ ಕಿರುಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ನಿವೃತ್ತ ಪೊಲೀಸ್ ಅಧಿಕಾರಿ ಉಮೇಶ್, ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಮುಖ್ಯ ....
ಒಂದೇ ಮುಹೂರ್ತದಲ್ಲಿ ಎರಡು ಸಿನಿಮಾಗಳು ಆಷಾಡ ಮಾಸದಲ್ಲಿ ಹೊಸಬರ ತಂಡವೊಂದು ಒಟ್ಟಿಗೆ ಎರಡು ಸಿನಿಮಾಗಳ ಮುಹೂರ್ತವನ್ನು ಆಚರಿಸಿಕೊಂಡಿದೆ. ಮೊದಲನೆಯದಾಗಿ ‘ಬಾಲಿ’ ಚಿತ್ರದ ಕ್ರೀಡೆ ಕುರಿತ ಕಥೆಯಲ್ಲಿ ಹದಿಹರೆಯದ ಹಳ್ಳಿಯ ಬಡ ಕುಟುಂಬದ ಹುಡುಗಿಯೊಬ್ಬಳು ಓಟಗಾರ್ತಿಯಾಗಿ ಗುರಿ ಸಾಧಿಸಲು ಹೋಗುತ್ತಾಳೆ. ಅವಳ ಹಾದಿಯಲ್ಲಿ ಸಪಲ ಆಗುತ್ತಾಳಾ ಎನ್ನುವುದು ಒಂದು ಏಳೆಯ ಸಾರಾಂಶವಾಗಿದೆ. ಜೊತೆಗೆ ಶಾಲೆಯ ಅಂಶಗಳು ಇರಲಿದೆ. ಕುಮಾರಿ ಹರಿಣಿಜಯರಾಜ್ ಮೂಲತ: ಅಥ್ಲೇಟ್ ಆಗಿದ್ದು, ಅದಕ್ಕೆ ತಕ್ಕಂತೆ ಪಾತ್ತ ಸಿಕ್ಕಿರುವುದರಿಂದ ಸಹಜವಾಗಿ ಖುಷಿಯಾಗಿದೆ. ಕ್ರೀಡಾ ಮಾರ್ಗದರ್ಶಿಯಾಗಿ ಉತ್ತರಭಾರತದ ನೀರಜ್ಕುಮಾರ್, ತಾಯಿಯಾಗಿ ....
ಲಂಕಾಸುರ ಟೀಸರ್ ಬಿಡುಗಡೆ ವಿನೋದ್ಪ್ರಭಾಕರ್ ‘ಟೈಗರ್ ಟಾಕೀಸ್’ ಹೆಸರಿನಲ್ಲಿ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಅದರ ಅಂಗವಾಗಿ ಸಂಸ್ಥೆಯ ಉದ್ಗಾಟನೆ ಹಾಗೂ ‘ಲಂಕಾಸುರ’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡುತ್ತಾ, ನಾನು ಟೈಗರ್ ಪ್ರಭಾಕರ್ ತೊಡೆ ಮೇಲೆ ಕೂತು ಬೆಳೆದವನು. ಅವರ ಪ್ರತಿಭೆ ಎತ್ತರಕ್ಕೆ ಕರೆದುಕೊಂಡು ಹೋಯಿತು. ಇಂದು ಅಪ್ಪನ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಕಟ್ಟಿಕೊಂಡಿದ್ದೀರಾ. ಒಳ್ಳೆಯದಾಗಲಿ ಎಂದರು. ‘ಬಂದಮುಕ್ತ’ ಚಿತ್ರದಲ್ಲಿ ಅವರು ನಾಯಕ, ನಾನು ವಿಲನ್ ಆಗಿದ್ದೆ. ಹಿಂದಿನ ನೆನಪು ಮತ್ತು ಭಾವನೆಗಳನ್ನು ಇಟ್ಟುಕೊಂಡು ....
ವೈರಲ್ ಆಯ್ತು ಗಿರ್ಕಿ ಟೀಸರ್
‘ಗಿರ್ಕಿ’ ಚಿತ್ರದ ಟೀಸರ್ನ್ನು ನಟ ಶರಣ್ ಬಿಡುಗಡೆ ಮಾಡಿದ್ದು ವೈರಲ್ ಆಗಿದೆ. ವಿಶ್ವ ಬಂಡವಾಳ ಹೂಡುವ ಜತೆಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಾಸುಕಿಭುವನ್ ಇವರೊಂದಿಗೆ ಕೈ ಜೋಡಿಸಿದ್ದಾರೆ. ಎಲ್ಲರ ಪರಿಶ್ರಮದಿಂದ ಚಿತ್ರವು ಚೆನ್ನಾಗಿ ಬಂದಿದೆಯಂತೆ.
ಚಾರ್ಲಿಗೆ ಇಪ್ಪತ್ತೈದರ ಯಶಸ್ಸು ರಜನಿಕಾಂತ್ ಸರ್ ನಮ್ಮ ಚಿತ್ರವನ್ನು ವೀಕ್ಷಿಸಿ ಶುಭಹಾರೈಸಿದ್ದಾರೆ. ಚೆನ್ನೈಗೆ ಬಂದಾಗ ನಮ್ಮ ಮನೆಗೆ ಬನ್ನಿರೆಂದು ಆಹ್ವಾನ ನೀಡಿದ್ದಾರೆ. ಅಂತಹ ಸೂಪರ್ಸ್ಟಾರ್ ಚಾರ್ಲಿಯನ್ನು ಹೊಗಳಿದ್ದು ತನ್ನ ಬದುಕಿನ ಬಹುದೊಡ್ಡ ನೆನಪಾಗಿ ಉಳಿದಿದೆ ಎಂದು ನಟ, ನಿರ್ಮಾಪಕ ರಕ್ಷಿತ್ಶೆಟ್ಟಿ ‘೭೭೭ ಚಾರ್ಲಿ’ ಚಿತ್ರದ ಸಂತೋಷಕೂಟದಲ್ಲಿ ಮಾತನಾಡುತ್ತಿದ್ದರು. ಅವರು ಹೇಳುವ ಪ್ರಕಾರ ಚಿತ್ರವು ಇಪ್ಪತ್ತೈದರ ಸಂಭ್ರಮದಲ್ಲಿದೆ. ಐವತ್ತು ದಿನ ಪ್ರದರ್ಶನ ಕಾಣುವ ಆಶಾದಾಯಕ ವಾತವರಣ ಸೃಷ್ಟಿಯಾಗಿದೆ. ಬಿಡುಗಡೆಯಾದ ೨೬ ದಿನಗಳಲ್ಲಿ ೧೫೦ ಕೋಟಿ ಗ್ರಾಸ್ ಗಳಿಕೆ ಬಂದಿದೆ. ಕಲೆಕ್ಷನ್ ಮತ್ತು ಎಲ್ಲಾ ಹಕ್ಕುಗಳಿಂದ ....
*ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ "ಚೌಕಬಾರ" ಚಿತ್ರದ ಹಾಡುಗಳ ಬಿಡುಗಡೆ.* *ಸುಂದರ ಸಮಾರಂಭದಲ್ಲಿ ಅನೇಕ ಗಣ್ಯರು ಭಾಗಿ.* ರಂಗಭೂಮಿ, ಕಿರುತೆರೆಯಲ್ಲಿ ತಮ್ಮದೇ ಆದ ಹೆಸರು ಮಾಡಿರುವ ತಾರಾ ಜೋಡಿ ವಿಕ್ರಮ್ ಸೂರಿ ಹಾಗೂ ನಮಿತಾರಾವ್. ನಮಿತಾರಾವ್ ನಿರ್ಮಿಸಿ, ವಿಕ್ರಮ್ ಸೂರಿ ನಿರ್ಮಾಣ ಮಾಡಿರುವ "ಚೌಕಬಾರ" ಚಿತ್ರದ ಹಾಡುಗಳನ್ನು ಸಚಿವ ಎಸ್ ಟಿ ಸೋಮಶೇಖರ್ ಬಿಡುಗಡೆ ಮಾಡಿ ಶುಭ ಕೋರಿದರು. ಸಾಹಿತಿಗಳಾದ ಹೆಚ್.ಎಸ್.ವೆಂಕಟೇಶ್ ಮೂರ್ತಿ, ಬಿ.ಆರ್.ಲಕ್ಷ್ಮಣ್ ರಾವ್, ಲಹರಿ ವೇಲು, ರವಿಕಿರಣ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕ ಶಿವಕುಮಾರ್, ನಿರ್ದೇಶಕ ಪಿ.ಶೇಷಾದ್ರಿ, ಶಶಿಧರ್ ಕೋಟೆ ಸೇರಿದಂತೆ ಮುಂತಾದ ಗಣ್ಯರು ಈ ....
ಸ್ನೇಹಿತರುಗಳ ಸತ್ಯ ಮಿಥ್ಯ ಉಪೇಂದ್ರ ಅಣ್ಣನ ಮಗ ನಿರಂಜನ್ಸುಧೀಂದ್ರ ಅಭಿನಯದ ‘ನಮ್ ಹುಡುಗರು’ ಚಿತ್ರವು ತೆರೆಗೆ ಬರೋದಕ್ಕೆ ಸಿದ್ದವಾಗಿದೆ. ಪುನೀತ್ರಾಜ್ಕುಮಾರ್ ಧ್ವನಿಯಾಗಿರುವ ಗೀತೆಗೆ ಅಭಿಮಾನ್ರಾಯ್ ಸಂಗೀತ ಸಂಯೋಜಿಸಿದ್ದಾರೆ. ನಂತರ ಮಾತನಾಡಿದ ನಿರಂಜನ್ಉಪೇಂದ್ರ ನಾನು ಭರಮ ಹೆಸರಿನಲ್ಲಿ ಮಂಡ್ಯಾ ಕಡೆಯ ಮುಗ್ದ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಪಾತ್ರದ ಪೋಷಣೆ ಚೆನ್ನಾಗಿದೆ. ಲವ್ ಸ್ಟೋರಿ ಜೊತೆಗೆ ಫ್ಯಾಮಲಿ ಡ್ರಾಮ ಇರುವಂತಹ ಸಿನಿಮಾವೆಂದು ಹೇಳಿಕೊಂಡರು. ಮೊದಲ ಸಿನಿಮಾದಲ್ಲೆ ಒಳ್ಳೆಯ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದೆ ಅಂತಾರೆ ನಾಯಕಿ ರಾಧ್ಯಾ. ಒಂದು ಸುಳ್ಳಿನಿಂದ ಆಗುವ ಅನಾಹುತದ ಬಗ್ಗೆ ಚಿತ್ರ ....
*"ಯಾಕೋ ಬೇಜಾರು"* *ಮೂಲಕ ಮಾತಿನಮಲ್ಲಿಯಾಗಿ ಬರುತ್ತಿದ್ದಾರೆ ಸಂಹಿತಾ ವಿನ್ಯಾ.* ಮಾಡಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಸಂಹಿತಾ ವಿನ್ಯಾ, ನಾಯಕಿಯಾಗೂ ಚಿರಪರಿಚಿತ. ಪ್ರಸ್ತುತ ಇವರು ನಾಯಕಿಯಾಗಿ ನಟಿಸಿರುವ "ಯಾಕೋ ಬೇಜಾರು" ಚಿತ್ರದ ಟ್ರೇಲರ್ ಇದೇ ಜುಲೈ ಒಂದರಂದು ಬಿಡುಗಡೆಯಾಗಲಿದೆ. ಗಾಲಿ ಲಕ್ಕಿ ನಿರ್ದೇಶನದ ಈ ಚಿತ್ರದ ನಾಯಕಿಯಾಗಿ ಸಂಹಿತಾ ವಿನ್ಯಾ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಸಂಹಿತಾ, ಆರ್ ಜೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಆರಂಭದಿಂದ ಕೊನೆಯತನಕ ಚುರುಕಾದ ಸಂಭಾಷಣೆ ಮೂಲಕ ಸಂಹಿತಾ ವಿನ್ಯಾ ಎಲ್ಲರ ಗಮನ ಸೆಳೆಯುತ್ತಾರೆ. ಮಾತಿನಮಲ್ಲಿಯಾಗಿ ನೋಡುಗರನ್ನು ರಂಜಿಸಲಿದ್ದಾರೆ. ಲವ್ ಜಾನರ್ ನ ಈ ಚಿತ್ರದ ಟ್ರೇಲರ್ ....
*ಗಣೇಶ್ ಹುಟ್ಟುಹಬ್ಬಕ್ಕೆ ಹಾಡಿನ ಉಡುಗೊರೆ.* ಜುಲೈ 2 ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ. ಇದರ ಸವಿನೆನಪಿಗಾಗಿ "ಗಾಳಿಪಟ ೨" ಚಿತ್ರತಂಡ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬದ ಉಡುಗೊರೆ ನೀಡಿದೆ. ಜಯಂತ ಕಾಯ್ಕಿಣಿ ಅವರು ಬರೆದಿರುವ "ನಾನಾಡದ ಮಾತೆಲ್ಲವ ಕದ್ದಾಲಿಸು" ಎಂಬ ಹಾಡನ್ನು ಸೋನು ನಿಗಮ್ ಸುಶ್ರಾವ್ಯವಾಗಿ ಹಾಡಿದ್ದಾರೆ . "ಗಾಳಿಪಟ" ಮೊದಲ ಭಾಗದ "ಮಿಂಚಾಗಿ ನೀನು ಬರಲು" ಹಾಡು ಕೂಡ ಜಯಂತ ಕಾಯ್ಕಿಣಿ, ಸೋನು ನಿಗಮ್, ಗಣೇಶ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಶನ್ ನಲ್ಲಿ ಬಂದು ಭರ್ಜರಿ ಯಶಸ್ಸು ಕಂಡಿತ್ತು. ಈಗ "ಗಾಳಿಪಟ ೨" ಚಿತ್ರದ ಈ ಹಾಡು ಕೂಡ ಅದೇ ರೀತಿ ಯಶಸ್ಸು ಕಾಣಲಿದೆ. ನಮ್ಮ ಚಿತ್ರದ ನಾಯಕ ಗಣೇಶ್ ಅವರ ....