Ardhambardha Prema Kathe

Wednesday, October 05, 2022

  *ತೆರೆಯಲ್ಲೂ ಜೋಡಿಯಾದರು ಅರವಿಂದ್-ದಿವ್ಯಾ ಉರುಡುಗ*   -ಇದು ಆರ್ಧಂಬರ್ಧ ಪ್ರೇಮಕಥೆಯ ವಿಚಾರ-        ಬಿಗ್‌ಬಾಸ್ ಖ್ಯಾತಿಯ ಯುವಜೋಡಿ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಈಗ ತೆರೆಯಮೇಲೂ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಅರವಿಂದ್ ಕೌಶಿಕ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ ಚಿತ್ರದ ಹೆಸರು ಅರ್ಧಂಬರ್ಧ ಪ್ರೇಮಕಥೆ. ಹುಲಿರಾಯ, ತುಘ್ಲಕ್, ನಮ್ ಏರಿಯಾಲ್ ಒಂದಿನ ಸಿನಿಮಾಗಳಿಂದ ಗುರುತಿಸಿಕೊಂಡ ಅರವಿಂದ್ ಕೌಶಿಕ್, ರಕ್ಷಿತ್‌ಶೆಟ್ಟಿ, ರಿಶಬ್‌ಶೆಟ್ಟಿ, ರಚಿತಾರಾಮ್, ಅನೀಶ್, ಬಾಲು ನಾಗೇಂದ್ರ ಸೇರಿದಂತೆ ಅನೇಕ ಕಲಾವಿದರನ್ನು ಪರಿಚಯಿಸಿದ್ದರು. ಈಗ ಬೈಕ್ ರೇಸರ್ ಅರವಿಂದ್‌ರನ್ನು ನಾಯಕನಾಗಿ ಇಂಟ್ರಡ್ಯೂಸ್ ಮಾಡುತ್ತಿದ್ದಾರೆ. ....

234

Read More...

Production No-1.Film News

Wednesday, October 05, 2022

ಪ್ರೊಡಕ್ಷನ್ ನಂ.೧ ಚಿತ್ರಕ್ಕೆ ಮುಹೂರ್ತ        ಹೆಸರಿಡದ ಚಿತ್ರ ‘ಪ್ರೊಡಕ್ಷನ್ ನಂ.೧’ ಸಿನಿಮಾದ ಮುಹೂರ್ತ ಸಮಾರಂಭವು ವಿಜಯ ದಶಮಿ ದಿನದಂದು ನಂದಿನಿ ಲೇಔಟ್‌ನ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಮಾಜಿ ಕಾರ್ಪೋರೇಟರ್ ರಾಜೇಂದ್ರಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ‘ಪುಟಾಣಿಸಫಾರಿ’ ‘ವರ್ಣಮಯ’ ‘ಮಠ’ ‘ನೈಟ್‌ಕರ್ಫ್ಯೂ’ ಹಾಗೂ ಇದೇ ತಿಂಗಳು ಬಿಡುಗಡೆಯಾಗುತ್ತಿರುವ ‘ವಾಸಂತಿ ನಲಿದಾಗ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ರವೀಂದ್ರವೆಂಶಿ ಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ರೈತ, ಉದ್ಯಮಿಯಾಗಿರುವ ಚಿಕ್ಕಬದರಿಕಲ್ಲು ....

254

Read More...

Shabhash Baddimagne.News

Wednesday, October 05, 2022

ಪ್ರಮೋದ್‌ಶೆಟ್ಟಿ ಈಗ ಶಭಾಷ್ ಬಡ್ಡಿಮಗ್ನೆ        ‘ಲಾಫಿಂಗ್ ಬುದ್ದ’ ‘ಕಾಶಿಯಾತ್ರೆ’ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಪ್ರಮೋದ್‌ಶೆಟ್ಟಿ ಮೂರನೇ ಚಿತ್ರ ‘ಶಭಾಷ್ ಬಡ್ಡಿಮಗ್ನೆ’ ಸಿನಿಮಾದ ಮಹೂರ್ತ ಕಂಠೀರವ ಸ್ಟುಡಿಯೋದಲ್ಲಿ ವಿಜಯದಶಮಿ ಹಬ್ಬದಂದು ಅದ್ದೂರಿಯಾಗಿ ನಡೆಯಿತು. ನಟ ಅಜಯ್‌ರಾವ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಹಾರೈಸಿದರು. ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ  ಹರೀಶ್.ಸಾ.ರಾ ನಿರ್ದೇಶಕರಾಗಿ ಬಡ್ತಿಗೊಂಡು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆ ಬರೆದಿರುವ ಬಿ.ಎಸ್.ರಾಜಶೇಖರ್ ಸಿನಿಮಾಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ....

205

Read More...

Gadayuddha.Film News

Wednesday, September 28, 2022

ಐದು ಭಾಷೆಗಳ ಗದಾಯುದ್ದ       ಈ ಹಿಂದೆ ‘ಮೃಗಶಿರ’ ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದ ಶ್ರೀವತ್ಸ ಅವರು ‘ಗದಾಯುದ್ದ’ ಸಿನಿಮಾಕ್ಕೆ ಕಥೆ,ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪ್ರಪಂಚದಲ್ಲಿ ಭೂತಪ್ರೇತಗಳು ಇದೆಯೋ ಇಲ್ಲವೋ ತಿಳಿದಿಲ್ಲ. ಆದರೆ ವಾಮಾಚಾರ ಎನ್ನುವುದು ಮಾತ್ರ ಇಂದಿಗೂ ಜೀವಂತವಾಗಿದೆ. ಕೇವಲ ವೈಯಕ್ತಿಕ ದ್ವೇಷ, ಧನದಾಹದಿಂದ ಮನುಷ್ಯರ ಜೀವ ತೆಗೆಯುವುದಕ್ಕಾಗಿ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಇಂತಹುದೆ ವಿಷಯಗಳನ್ನು ಇಟ್ಟುಕೊಂಡು ಸಿನಿಮಾವನ್ನು ಮಾಡಲಾಗಿದೆ. ಬೆಳಗಾವಿ ಮೂಲದ ನಿತಿನ್‌ಶಿರಗುರ್‌ಕರ್ ನಿರ್ಮಾಣ ಮಾಡಿದ್ದು, ಇವರ ಪುತ್ರ ಸುಮಿತ್ ನಾಯಕನಾಗಿ ನಟಿಸಿದ್ದಾರೆ. ಧನ್ಯಪಾಟೀಲ್ ನಾಯಕಿ. ....

1046

Read More...

Gajarama.Film Pooja News

Wednesday, September 28, 2022

  *ಸೆಟ್ಟೇರಿತು ರಾಜವರ್ಧನ್ ನಾಲ್ಕನೇ ಚಿತ್ರ - ’ಗಜರಾಮ’ನಿಗೆ ಕ್ಲ್ಯಾಪ್ ಮಾಡಿದ ಜೂನಿಯರ್ ರೆಬೆಲ್ ಸ್ಟಾರ್*   ‘ಮ್ಯಾಸಿವ್ ಸ್ಟಾರ್’ ರಾಜವರ್ಧನ್ ಬಿಚ್ಚುಗತ್ತಿ ಸಿನಿಮಾ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಯಕ‌ ನಟನಾಗಿ ಅಭಿನಯಿಸುತ್ತಿರುವ ಪ್ರಣಯಂ, ಹಿರಣ್ಯ ಸಿನಿಮಾ ಬಿಡುಗಡೆಗೆ ಮೊದಲೇ ಮಾಸ್ ಸಬ್ಜೆಕ್ಟ್ ಸಿನಿಮಾವೊಂದು ರಾಜವರ್ಧನ್ ಬತ್ತಳಿಕೆ ಸೇರಿದೆ.  ಅದುವೇ ’ಗಜರಾಮ’. ಫಸ್ಟ್ ಲುಕ್ ಪೋಸ್ಟರ್ ಮೂಲಕ ಕಿಕ್ ಕೊಟ್ಟ  ಈ ಚಿತ್ರದ ಮುಹೂರ್ತ ಇಂದು ನೆರವೇರಿದೆ.   ನಿರ್ದೇಶಕ ಸುನೀಲ್ ಕುಮಾರ್ ವಿ.ಎ ಹೆಣೆದ ಕಥೆ ಕೇಳಿ ಇಂಪ್ರೆಸ್ ಆಗಿರುವ ರಾಜವರ್ಧನ್  ’ಗಜರಾಮ’ನಾಗಿ ಅಬ್ಬರಿಸಲು  ಗ್ರೀನ್ ಸಿಗ್ನಲ್ ....

267

Read More...

The Checkmate.Film News

Tuesday, September 27, 2022

ಪ್ರೀತಿ ಸ್ನೇಹ ಬದುಕು ಸಾರುವ ದಿ ಚೆಕ್ ಮೇಟ್       ‘ದಿ ಚೆಕ್ ಮೇಟ್’ ಚಿತ್ರವೊಂದು ಕರೋನ ಮುಂಚೆ ಶುರುವಾಗಿ, ಈಗ ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಅಕ್ಟೋಬರ್ ೭ರಂದು ಜನರಿಗೆ ತೋರಿಸಲು ಸಜ್ಜಾಗಿದೆ. ಭಾರತೀಶ ವಷಿಷ್ಟ ಹಾಗೂ ಸಂತೋಷಚಿಪ್ಪಾಡಿ ನಿರ್ದೇಶಕರುಗಳು. ರಂಜನ್‌ಹಾಸನ್ ನಾಯಕನಾಗಿ ನಟಿಸುವ ಜತೆಗೆ ಜಗದ್ ಜ್ಯೋತಿ ಮೂವಿ ಮೇಕರ‍್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಸಿನಿಮಾದ ಹಾಡು, ಟ್ರೇಲರ್‌ನ್ನು ಬಿಡುಗಡೆಗೊಳಿಸಿದೆ. ಚದುರಂಗ ಅಂದರೆ ಬುದ್ದಿವಂತರ ಆಟ ಎಂದೇ ಪ್ರಖ್ಯಾತಿ. ಚೆಸ್ ಆಧಾರವಾಗಿಟ್ಟುಕೊಂಡು ತಯಾರಿಸಿದ ಕಥೆ ಇದಾಗಿದೆ. ಪ್ರೀತಿ, ....

371

Read More...

Banaras.Film Trailer

Monday, September 26, 2022

ಬನಾರಸ್ ಟ್ರೇಲರ್ ಲೋಕಾರ್ಪಣೆ         ಶಾಸಕ ಜಮೀರ್‌ಅಹ್ಮದ್‌ಖಾನ್ ಪುತ್ರ ಝೈದ್‌ಖಾನ್ ಪ್ರಪ್ರಥಮ ಬಾರಿ ನಟಿಸಿರುವ ‘ಬನಾರಸ್’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಲ್ಮಾನ್‌ಖಾನ್ ಸಹೋದರ ಅರ್ಬಾಜ್‌ಖಾನ್ ಹಿಂದಿ ಭಾಷೆ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಭಾಷೆಯ ಟ್ರೇಲರ್‌ನ್ನು ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅರ್ಬಾಜ್‌ಖಾನ್ ಚಿತ್ರವು ಅದ್ಬುತವಾಗಿ ಮೂಡಿಬಂದಿದೆ ಎಂಬುದು ತುಣುಕುಗಳನ್ನು ನೋಡಿದರೆ ತಿಳಿಯುತ್ತದೆ. ಕನ್ನಡ ಸಿನಿಮಾಗಳನ್ನು ನೋಡುತ್ತೇನೆ. ಇಲ್ಲಿನ ಚಿತ್ರರಂಗವು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಒಳ್ಳೆಯ ಕಥೆಗಳನ್ನು ಜನ ಖಂಡಿತಾ ಮೆಚ್ಚುತ್ತಾರೆ. ಅದರಲ್ಲೂ ....

249

Read More...

Bond Ravi.Film News

Saturday, September 24, 2022

ಕುತೂಹಲ ಹುಟ್ಟಿಸಿದ ಬಾಂಡ್ ರವಿ ಟೀಸರ್         ‘ಪ್ರೀಮಿಯರ್ ಪದ್ಮಿನಿ’ದಲ್ಲಿ ಕಾರು ಚಾಲಕ, ‘ರತ್ನನ್ ಪ್ರಪಂಚ’ದಲ್ಲಿ ಉಡಾಳ್‌ಬಾಬು ಆಗಿ ಗುರುತಿಸಿಕೊಂಡಿದ್ದ ಪ್ರಮೋದ್ ಈಗ ‘ಬಾಂಡ್ ರವಿ’ ಚಿತ್ರದಲ್ಲಿ ಡಾ.ಪುನೀತ್‌ರಾಜ್‌ಕುಮಾರ್ ಅಭಿಮಾನಿಯಾಗಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮೊನ್ನೆ ಬಿಡುಗಡೆಯಾದ ಟೀಸರ್‌ದಲ್ಲಿ ಪಂಚಿಂಗ್ ಹಾಗೂ ಮಾಸ್ ಡೈಲಾಗ್‌ಗಳು ಗಮನ ಸೆಳೆದಿದೆ. ಸಂಗೀತ ಸಂಯೋಜಕ ಮನೋಮೂರ್ತಿ ಮಾತನಾಡಿ ಈ ಸಿನಿಮಾದ ಬಗ್ಗೆ ಅಪಾರವಾದ ಭರವಸೆ ಇದೆ. ‘ಮುಂಗಾರು ಮಳೆ’ ಕೂಡ ಹೀಗೆ ಶುರುವಾಗಿ, ನಂತರ ಹಿಟ್ ಆಗಿತ್ತು. ನಾಯಕನಿಗೆ ತುಂಬಾ ಶೇಡ್ಸ್ ಇದೆ ಎಂದರು.         ನಾನು ಈ ....

251

Read More...

Nano Narayanappa.Film News

Wednesday, September 21, 2022

ನ್ಯಾನೋ ನಾರಾಯಣಪ್ಪ ಟ್ರೇಲರ್ ಬಿಡುಗಡೆ

       ‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ನಿರ್ದೇಶನ ಮಾಡಿದ್ದ ಕುಮಾರ್ ಈಗ ‘ನ್ಯಾನೋ ನಾರಾಯಣಪ್ಪ’ ಚಿತ್ರಕ್ಕೆ ರಚನೆ,ಚಿತ್ರಕಥೆ,ಆಕ್ಷನ್ ಕಟ್ ಹೇಳುವ ಜತೆಗೆ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಸಲುವಾಗಿ ಮೊನ್ನೆ ಟ್ರೇಲರ್ ಅನಾವರಣ ಸಮಾರಂಭ ನಡೆಯಿತು. ಇದೊಂದು ಕಾಮಿಡಿ, ಎಮೋಷನಲ್ ಡ್ರಾಮಾ ಒಳಗೊಂಡ ಚಿತ್ರವಾಗಿದ್ದು, ನೋಡುಗರನ್ನು ತುಂಬಾ ಕಾಡುವಂಥ ತಾತನ ಕಥೆಯನ್ನು ಹೇಳಲಿದ್ದಾರೆ. ಕೆಜಿಎಫ್ ಖ್ಯಾತಿಯ ಕೃಷ್ಣೋಜಿರಾವ್ ಶೀರ್ಷಿಕೆ ಹೆಸರಿನಲ್ಲಿ ಕಾಣಿಸಿಕೊಂಡಿದ್ದು, ನ್ಯಾನೋ ಕಾರು ಕೂಡ ಪ್ರಮುಖ ಪಾತ್ರವಹಿಸಿರುವುದು ವಿಶೇಷ.

237

Read More...

Lovely.Film News

Wednesday, September 21, 2022

ಕಿಂಗ್ಸ್ ಕ್ಲಬ್‌ದಲ್ಲಿ ಲವ್‌ಲೀ ಚಿತ್ರೀಕರಣ          ‘ಲವ್ ಲೀ’ ಸಿನಿಮಾದ ಚಿತ್ರೀಕರಣ ನಾಗರಬಾವಿ ಬಳಿ ಇರುವ ಕಿಂಗ್ಸ್ ಕ್ಲಬ್‌ನಲ್ಲಿ ನಡೆಯುತ್ತಿತ್ತು. ಮಾದ್ಯಮದವರು ಸೆಟ್‌ಗೆ ಹೋದಾಗ ವಸಿಷ್ಠಸಿಂಹ,  ಉಪನಾಯಕಿ ಸಮೀಕ್ಷಾ, ಸಾಧುಕೋಕಿಲ ದೃಶ್ಯದಲ್ಲಿ ಭಾಗವಹಿಸಿದ್ದರು. ಬಿಡುವು ಮಾಡಿಕೊಂಡು ತಂಡವು ಮಾತಿಗೆ ಕುಳಿತುಕೊಂಡಿತು. ವಸಿಷ್ಠಸಿಂಹ ಮಾತನಾಡಿ ಕೊನೆ ಹಂತದ ಶೂಟಿಂಗ್ ನಡೆಯುತ್ತಿದೆ. ಇದಾದ ನಂತರ ಉಡುಪಿ, ಮಂಗಳೂರು, ಹಾಗೂ ವಿದೇಶಕ್ಕೆ ಹೋಗುವ ಇರಾದೆ ಇದೆ. ಇಂಥಾ ಜಾನರ್ ಸಿನಿಮಾ ಅಂತ ಹೇಳಲಾಗುವುದಿಲ್ಲ. ೮-೧೦ ವರ್ಷಗಳ ಹಿಂದೆ ನಡೆದಂಥ ಒಂದಷ್ಟು ನೈಜ ಘಟನೆಗಳನ್ನು ....

255

Read More...

Kabzaa.Film Teaser Launch

Saturday, September 17, 2022

*ಟೀಸರ್ ನಲ್ಲೇ ಸಾಕಷ್ಟು ಕುತೂಹಲ ಹುಟ್ಟಿಸಿದೆ ಪ್ಯಾನ್ ಇಂಡಿಯಾ ಚಿತ್ರ  "ಕಬ್ಜ"*    *ದಕ್ಷಿಣ ಭಾರತದ ಖ್ಯಾತ ನಟ ರಾಣಾ ದಗ್ಗುಬಾಟಿ ಅವರಿಂದ ಟೀಸರ್ ಬಿಡುಗಡೆ.*   ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ ಅಭಿನಯದ, ಆರ್ ಚಂದ್ರು ನಿರ್ದೇಶಿಸಿರುವ, ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ"ದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ. ದಕ್ಷಿಣ ಭಾರತದ ಖ್ಯಾತ ನಟ ರಾಣಾ ದಗ್ಗುಬಾಟಿ  "ಕಬ್ಜ" ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ಬಿಡುಗಡೆಯಾದ ಕ್ಷಣದಿಂದಲೇ ಟೀಸರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ವೀಕ್ಷಣೆಯಲ್ಲಿ ದಾಖಲೆ ನಿರ್ಮಿಸುತ್ತಿದೆ.   ಉಪೇಂದ್ರ ಸರ್ ಮುಂದೆ ನಿಂತು  ಮಾತನಾಡುವುದಕ್ಕೆ ಭಯ ಆಗತ್ತೆ. ಅಂತಹ ಅದ್ಭುತ ನಟ ....

288

Read More...

Triple Riding.Film Song Launch

Thursday, September 15, 2022

  *ಸಖತಾಗಿದೆ "ತ್ರಿಬಲ್ ರೈಡಿಂಗ್" ಹಾಡು.*   ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ "ತ್ರಿಬಲ್ ರೈಡಿಂಗ್" ಚಿತ್ರದ "ಯಟ್ಟಾ ಯಟ್ಟಾ" ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಗಿ ಜನಪ್ರಿಯವಾಗಿದೆ. ಚಂದನ್ ಶೆಟ್ಟಿ ಈ ಹಾಡನ್ನು ಬರೆದಿದ್ದಾರೆ. ಚಂದನ್ ಶೆಟ್ಟಿ ಹಾಗೂ ಮಂಗ್ಲಿ ಹಾಡಿದ್ದಾರೆ. ಅದ್ದೂರಿಯಾಗಿ ಮೂಡಿಬಂದಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.  ಇತ್ತೀಚಿಗೆ ಈ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು.   ನಾನು "ಮುಂಗಾರು‌ ಮಳೆ" ಸಮಯದಿಂದ ಗಣೇಶ್ ಅವರನ್ನು ಬಲ್ಲೆ. ಆಗಿನಿಂದಲೂ ನನಗೆ ಅವರಿಗೊಂದು ಸಿನಿಮಾ ಮಾಡುವ ಆಸೆ. ಕಾಲ ಈಗ ಕೂಡಿ ಬಂದಿದೆ. "ತ್ರಿಬಲ್ ರೈಡಿಂಗ್" ಸ್ವಮೇಕ್ ಚಿತ್ರ. ಆಕ್ಷನ್, ಥ್ರಿಲ್ಲರ್, ....

244

Read More...

Mahaan Kalavida.Film News

Thursday, September 15, 2022

  *ದಿಲೀಪ್ ರಾಜ್ ಈಗ "ಮಹಾನ್ ಕಲಾವಿದ".*    *ವಿಭಿನ್ನ ಕಥಾಹಂದರದ ಈ ಚಿತ್ರಕ್ಕೆ ಅಭಯ್ ಚಂದ್ರ ನಿರ್ದೇಶನ.*   ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ದಿಲೀಪ್ ರಾಜ್ ಈಗ ಕಿರುತೆರೆಯಲ್ಲೂ ಜನಪ್ರಿಯ. "ಹಿಟ್ಲರ್ ಕಲ್ಯಾಣ"ದ A J ಪಾತ್ರದ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ. ಪ್ರಸ್ತುತ ಇವರು  "ಮಹಾನ್ ಕಲಾವಿದ" ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಹಿರಿಯ ಪತ್ರಕರ್ತರಾದ ದಿ.ಸುರೇಶ್ಚಂದ್ರ ಪುತ್ರ ಅಭಯ್ ಚಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.‌ ಇದು ಇವರ ಎರಡನೇ ನಿರ್ದೇಶನದ ಚಿತ್ರ. ಸಂಗೀತ ನಿರ್ದೇಶನ ಕೂಡ ಅಭಯ್ ಚಂದ್ರ ಅವರದೆ. ಈ ಚಿತ್ರದ ಕೆಲವು ವಿಷಯಗಳನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು.   ....

234

Read More...

Shubhamangala.Film News

Thursday, September 15, 2022

ಶುಭಮಂಗಳ ಟ್ರೇಲರ್ ಬಿಡುಗಡೆ          ೭೦ರ ದಶಕದಲ್ಲಿ ತೆರೆಕಂಡ ಚಿತ್ರಬ್ರಹ್ಮ ಪುಟ್ಟಣ್ಣಕಣಗಾಲ್ ನಿರ್ದೇಶನದ ‘ಶುಭಮಂಗಳ’ ಬಿಡುಗಡೆಗೊಂಡು ಯಶಸ್ವಿಯಾಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಹೊಸ ಕತೆಯೊಂದಿಗೆ ಚಿತ್ರವೊಂದು ಸಿದ್ದಗೊಂಡಿದೆ. ಪ್ರಚಾರದ ಸಲುವಾಗಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.  ಸಿಲ್ಕ್‌ಬೋರ್ಡ್, ಮಹಾಸಂಪರ್ಕ ಸೇರಿದಂತೆ ೨೦ಕ್ಕೂ ಹೆಚ್ಚು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಸಂತೋಷ್‌ಗೋಪಾಲ್ ಕಥೆ ಬರೆದು ಸಂಕಲನ ಮಾಡಿ ಆಕ್ಷನ್ ಕಟ್ ಹೇಳಿದ್ದಾರೆ. ಜತೆಗೆ ಆವ್ಯಕ್ತ ಬ್ಯಾನರ್‌ನಡಿ ಸ್ನೇಹಿತರೊಂದಿಗೆ ಸೇರಿಕೊಂಡು ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಮದುವೆ ಮನೆಯಲ್ಲಿ ....

268

Read More...

Vasanthi Nalidaga.Film News

Wednesday, September 14, 2022

ಹೊರಬಂತು ವಾಸಂತಿ ನಲಿದಾಗ ಟ್ರೇಲರ್        ‘ವಾಸಂತಿ ನಲಿದಾಗ’ ಜನಪ್ರಿಯ ಹಾಡು ಈಗ ಚಿತ್ರದ ಶೀರ್ಷಿಕೆಯಾಗಿದೆ. ಈ ಹಿಂದೆ ‘ಪುಟಾಣಿ ಸಫಾರಿ’ ‘ವರ್ಣಮಯ’ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ರವೀಂದ್ರವೆಂಶಿ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ರೋಹಿತ್‌ಶ್ರೀಧರ್ ನಾಯಕ ಮತ್ತು ಭಾವನಾಶ್ರೀನಿವಾಸ್ ನಾಯಕಿ. ಇವರೊಂದಿಗೆ ಜೀವಿತವಸಿಷ್ಟ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜುಪಾವಗಡ, ಮಿಮಿಕ್ರಿಗೋಪಿ,ಧನಂಜಯ ಮುಂತಾದವರು ಬಣ್ಣ ಹಚ್ಚಿದ್ದಾರೆ. ಇನ್ನು ಉದ್ಯಮ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಯಿಕುಮಾರ್ ಮೊದಲು ನಟಿಸಿದ್ದ ಸಿನಿಮಾದಲ್ಲಿ ಸುಧಾರಾಣಿ ಜೋಡಿಯಾಗಿದ್ದರು. ....

250

Read More...

Champion.Film Event News

Monday, September 12, 2022

ಚಾಂಪಿಯನ್ ಟ್ರೇಲರ್ ಬಿಡುಗಡೆ        ಅದ್ದೂರಿ ಚಿತ್ರ ‘ಚಾಂಪಿಯನ್’ ಟ್ರೇಲರ್ ಪಂಚತಾರ ಹೋಟೆಲ್‌ದಲ್ಲಿ ಅನಾವರಣಗೊಂಡಿತು. ಸಿನಿಮಾವು ಅಕ್ಟೋಬರ್ ೧೪ರಂದು ತೆರೆಗೆ ಬರುತ್ತಿದೆ. ಅದಕ್ಕೂ ಮುನ್ನ ಪ್ರಚಾರದ ಸಲುವಾಗಿ ಸಮಾರಂಭವನ್ನು ಏರ್ಪಾಟು ಮಾಡಲಾಗಿತ್ತು. ನಿರ್ಮಾಪಕ ಶಿವಾನಂದ.ಎಸ್.ನೀಲಣ್ಣನವರ್ ಮಾತನಾಡಿ ಹದಿನಾಲ್ಕು ವರ್ಷಗಳ ಹಿಂದೆ ಸ್ನೇಹಿತ ಸಚಿನ್ ಧನಪಾಲ್‌ಗೆ ನನಗೇನಾದರೂ ತುಂಬಾ ದುಡ್ಡು ಬಂದರೆ, ನಿನ್ನನ್ನು ಸಿನಿಮಾದಲ್ಲಿ ನಾಯಕ ಮಾಡುತ್ತೇನೆ ಎಂದು ಹೇಳಿದ್ದೆ. ಈ ಮಾತು ನಿಜವಾಗಿದ್ದು, ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ. ೨೦೧೯ರಲ್ಲಿಯೇ ಶುರು ಮಾಡಿದ್ದೇವು. ದುರದೃಷ್ಟವಶಾತ್ ನಿರ್ದೇಶಕ ಶಾಹುರಾಜ್‌ಶಿಂದೆ ಅಕಾಲಿಕ ಮರಣ ....

245

Read More...

Asthira.Film Press Meet

Monday, September 12, 2022

ಪಯಣದಲ್ಲಿ ಸಾಗುವ ಅಸ್ಥಿರ        ನಿರ್ದೇಶಕ ಹೊರತುಪಡಿಸಿ ಬಹುತೇಕ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಅಸ್ಥಿರ’ ಚಿತ್ರದ ಟೀಸರ್, ಎರಡು ಲಿರಿಕಲ್ ಹಾಡುಗಳ ಬಿಡುಗಡೆ ಕಾರ್ಯಕ್ರಮವು ಎಸ್‌ಆರ್‌ವಿ ಪ್ರಿವ್ಯೂ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಪೋಸ್ಟರ್ ಅನಾವರಣಗೊಳಿಸಿ ತಂಡಕ್ಕೆ ಶುಭಹಾರೈಸಿದರು. ಸ್ಥಿರವಲ್ಲದ್ದನ್ನು ಅಸ್ಥಿರ ಎಂದು ಕರೆಯುವುದುಂಟು. ಅದೇ ರೀತಿ ಸೀಮಿತ ಮನಸ್ಥಿತಿ ಇಲ್ಲದೆ ಇರುವ ವ್ಯಕ್ತಿಯು ಪ್ರೀತಿಯಲ್ಲಿ ಸೋತಾಗ ಸಾಮಾನ್ಯ ಹುಡುಗನಾದವನು ಯಾವ ರೀತಿ ಇರುತ್ತಾನೆ ಎಂಬುದನ್ನು ಹೇಳಲಾಗಿದೆ. ತ್ರಿಕೋನ ಪ್ರೇಮ ಕಥೆಯು ಬನ್ನೂರುನಿಂದ ....

249

Read More...

Kullana Hendathi.Film News

Monday, September 12, 2022

ಬಿಡುಗಡೆಗೆ ಸಿದ್ದ ಕುಳ್ಳನ ಹೆಂಡತಿ

       ಸ್ಟಾರ್ ವೆಂಚರ‍್ಸ್ ಬ್ಯಾನರ್ ಅಡಿಯಲ್ಲಿ ಸಿದ್ದಗೊಂಡಿರುವ ವಿನೂತನ ಕಥೆಯನ್ನು ಹೊಂದಿರುವ ‘ಕುಳ್ಳನ ಹೆಂಡತಿ’ ಚಿತ್ರವು ತೆರೆಗೆ ಬರಲು ಸನ್ನಿಹಿತವಾಗಿದೆ. ಪ್ರಚಾರದ ಸಲುವಾಗಿ ಮೊನ್ನೆ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಶೀರ್ಷಿಕೆ ಕೇಳಿದೊಡನೆ ಕುಳ್ಳಗಿರುವ ಗಂಡನ ಕಥೆ ಇರಬಹುದು ಅನಿಸಬಹುದು. ಆದರೆ ಇದು ವಯಸ್ಸಿನ ಅಂತರದ ಸಿನಿಮಾ ಆಗಿದ್ದು ಒಂದು ಒಳ್ಳೆಯ ಸಂದೇಶವನ್ನು ಹೇಳಿದ್ದಾರೆ. ೨೬ರ ಹರೆಯದ ಹುಡುಗನಿಗೆ ೩೩ರ ವಯಸ್ಸಿನ ನರ್ಸ್ ಮೇಲೆ ಲವ್ ಆದರೆ ಹೇಗಿರುತ್ತದೆ ಎಂಬುದನ್ನು ತೋರಿಸಲಾಗಿದೆ. ರಚಿಸಿ ನಿರ್ದೇಶನ ಮಾಡಿರುವುದು ವಿಶಾಖ್.

280

Read More...

Operation U.Film Pooja.News

Saturday, September 10, 2022

ಸೈಕಲಾಜಿಕಲ್ ಸೆಸ್ಪೆನ್ಸ್ ಥ್ರಿಲ್ಲರ್ ಚಿತ್ರ         ಆಕರ್ಷಕ ಶೀರ್ಷಿಕೆ ‘ಆಪರೇಶನ್ ಯು’ ಚಿತ್ರದ ಮುಹೂರ್ತ ಸಮಾರಂಭವು ಕಂಠೀರವ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು. ರಾಘವೇಂದ್ರರಾಜ್‌ಕುಮಾರ್ ಅಭಿನಯಿಸುತ್ತಿದ್ದು, ಮೊದಲ ದೃಶ್ಯಕ್ಕೆ ಮಂಗಳಾರಾಘವೇಂದ್ರರಾಜ್‌ಕುಮಾರ್ ಕ್ಲಾಪ್ ಮಾಡಿ ಪತಿಯ ಸಿನಿಮಾಕ್ಕೆ ಶುಭ ಹಾರೈಸಿದರು. ‘ಕನ್ನಡ ದೇಶದೊಳ್’ ‘ಕಲಿವೀರ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ಅವಿರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.  ಮಗಳ ಸಲುವಾಗಿ ವಿದ್ಮಯಿ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡುತ್ತಿರುವ ಮಂಜುನಾಥ್ ಶ್ರೀಲಂಕಾಗೆ ಹೋದಾಗ ಕೇಳಿದ ಕಥೆಯಂತೆ. ಸೈಕಲಾಜಿಕಲ್ ಸೆಸ್ಪೆನ್ಸ್ ಥ್ರಿಲ್ಲರ್ ....

310

Read More...

Shivaji Surathkal-2.Film Event

Friday, September 09, 2022

  *"IKEA" ದಲ್ಲಿ ಬಿಡುಗಡೆಯಾಯಿತು "ಶಿವಾಜಿ ಸುರತ್ಕಲ್ 2" ಟೀಸರ್.*    *ನಾಯಕ ರಮೇಶ್ ಅರವಿಂದ್  ಹುಟ್ಟುಹಬ್ಬಕ್ಕೆ ಚಿತ್ರತಂಡದ ಒಲವಿನ ಉಡುಗೊರೆ.*   ಕನ್ನಡ ಚಿತ್ರರಂಗದ ಸುರದ್ರೂಪಿ ಹಾಗೂ ಪ್ರತಿಭಾವಂತ ನಟ ರಮೇಶ್ ಅರವಿಂದ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂತಸದ ಸಂದರ್ಭದಲ್ಲಿ ಅವರು ನಾಯಕರಾಗಿ ನಟಿಸಿರುವ "ಶಿವಾಜಿ ಸುರತ್ಕಲ್ 2" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ತುಮಕೂರು ರಸ್ತೆಯಲ್ಲಿರುವ ಅತೀ ದೊಡ್ಡ ಮಳಿಗೆ "IKEA"ದಲ್ಲಿ, ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಟೀಸರ್ ಬಿಡುಗಡೆ ಸಮಾರಂಭ ನಡೆಯಿತು.   ಎರಡು ವರ್ಷಗಳ ಹಿಂದೆ ಬಿಡುಗಡೆಯಾದ " ಶಿವಾಜಿ ಸುರತ್ಕಲ್" ಚಿತ್ರಕ್ಕೆ ಸಿಕ್ಕ ಪ್ರಶಂಸೆಯೇ ಭಾಗ 2 ಮಾಡಲು ಸ್ಪೂರ್ತಿ. ಥಿಯೇಟರ್ ....

276

Read More...
Copyright@2018 Chitralahari | All Rights Reserved. Photo Journalist K.S. Mokshendra,