" *ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4"ರ ಜೆರ್ಸಿ ಹಾಗೂ ಟ್ರೋಫಿ ಬಿಡುಗಡೆ.* 2019 ರಲ್ಲಿ ಆರಂಭವಾಗಿ 3 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ "ಟೆಲಿವಿಷನ್ ಕ್ರಿಕೆಟ್ ಲೀಗ್" ನ 4 ನೇ ಆವೃತ್ತಿ (ಸೀಸನ್ 4) ಸದ್ಯದಲ್ಲೇ ಆರಂಭವಾಗಲಿದೆ. ಇತ್ತೀಚಿಗೆ ಈ ಕ್ರಿಕೆಟ್ ಪಂದ್ಯಾವಳಿಯ ಜರ್ಸಿ ಹಾಗೂ ಟ್ರೋಫಿ ಬಿಡೆಗಡೆ ಸಮಾರಂಭ ಲುಲು ಗ್ಲೋಬಲ್ ಮಾಲ್ ನಲ್ಲಿ ನಡೆಯಿತು. ಖ್ಯಾತ ನಟ ನೀನಾಸಂ ಸತೀಶ್, ಹೊಂಬಾಳೆ ಸಂಸ್ಥೆಯ ಶೈಲಜಾ ವಿಜಯ್ ಕಿರಗಂದೂರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೋಫಿ ಹಾಗೂ ಜರ್ಸಿ ಬಿಡುಗಡೆ ಮಾಡಿದರು. ದೀಪಕ್ "ಟೆಲಿವಿಷನ್ ಕ್ರಿಕೆಟ್ ಲೀಗ್" ನ ಫೌಂಡರ್. ಮಂಜೇಶ್ ಮತ್ತು ದಿವ್ಯ ....
*'ಥಗ್ಸ್ ಆಫ್ ರಾಮಘಡ’ ಮೊದಲ ಸಾಂಗ್ ಬಿಡುಗಡೆ- ಮುಂದಿನ ವರ್ಷ ಸಿನಿಮಾ ತೆರೆಗೆ* ಫಸ್ಟ್ ಲುಕ್ ಮೂಲಕ ಗಮನ ಸೆಳೆಯುತ್ತಿರೋ ‘ಥಗ್ಸ್ ಆಫ್ ರಾಮಘಡ’ ಚಿತ್ರದ ಮೊದಲ ಸಾಂಗ್ ಬಿಡುಗಡೆಯಾಗಿದೆ. ‘ನಗು ನಗುತ ಆವರಿಸೋ ಈ ಹುಡುಗಿ’ ಹಾಡನ್ನು ದಿಯಾ ಖ್ಯಾತಿಯ ನಾಯಕ ನಟ ಪೃಥ್ವಿ ಅಂಬರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ನಿರ್ದೇಶಕ ಕಾರ್ತಿಕ್ ನಿರ್ದೇಶಿಸಿರುವ ಮೊದಲ ಸಿನಿಮಾ ಇದಾಗಿದ್ದು, ಹಾಡು ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಚಿತ್ರತಂಡ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದೆ. ‘ನಗು ನಗುತ ಆವರಿಸೋ ಈ ಹುಡುಗಿ’ ಹಾಡಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು ಪ್ರೀತಿಯ ಹಾಡಿಗೆ ಹೆಸರಾಂತ ಗಾಯಕರಾದ ....
*ವಿವಿಧ ಮಠಾಧೀಶರ ಹಾಗೂ ಗಣ್ಯರ ಸಮ್ಮುಖದಲ್ಲಿ "ವಿರಾಟಪುರ ವಿರಾಗಿ" ಚಿತ್ರದ ಮೊದಲ ನೋಟ ಅನಾವರಣ.* *ಇದು ಆಧುನಿಕ ಬಸವಣ್ಣ ಪೂಜ್ಯ ಹಾನಗಲ್ ಕುಮಾರ ಶಿವಯೋಗಿಗಳ ಜೀವನಾಧಾರಿತ ಚಿತ್ರ.* ಆಧುನಿಕ ಬಸವಣ್ಣ ಎಂದೇ ಖ್ಯಾತರಾಗಿರುವ ಹಾನಗಲ್ ಕುಮಾರ ಶಿವಯೋಗಿಗಳ ಜೀವನಾಧಾರಿತ "ವಿರಾಟಪುರ ವಿರಾಗಿ" ಚಿತ್ರದ ಮೊದಲ ನೋಟ ಇತ್ತೀಚಿಗೆ ಬಿಡುಗಡೆಯಾಯಿತು. ಶ್ರೀಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಶ್ರೀ ಸದಾಶಿವ ಮಹಾಸ್ವಾಮಿಗಳು ಹಾವೇರಿ, ಶ್ರೀ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಘನಬಸವ ಅಮರೇಶ್ವರ ಮಹಾಸ್ವಾಮಿಗಳು ಶಿವಮೊಗ್ಗ, ಕರ್ನಾಟಕ ಚಲನಚಿತ್ರ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ, ಪದ್ಮಶ್ರೀ ಪುರಸ್ಕೃತ ....
*"ಹೇ ಬ್ರೋ" ಎನ್ನುತ್ತಾ ಬಂದ ಸೂರಜ್ ಮುಖೇಶ್* *ಅದ್ದೂರಿ ಆಲ್ಬಮ್ ಸಾಂಗ್ ಬಿಡುಗಡೆ ಮಾಡಿ ಹಾರೈಸಿದ ಸಿನಿ ದಿಗ್ಗಜರು.* ಚಿಕ್ಕ ವಯಸ್ಸಿನಿಂದಲೂ ಅಭಿನಯದ ಬಗ್ಗೆ ಆಸಕ್ತಿ ಹೊಂದಿರುವ ಸೂರಜ್ ಮುಖೇಶ್ ತಮ್ಮ ಮೊದಲ ಹೆಜ್ಜೆಯಾಗಿ "ಹೇ ಬ್ರೋ" ಎಂಬ ಆಲ್ಬಂ ಸಾಂಗ್ ನಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಈ ಆಲ್ಬಂ ಸಾಂಗ್ ನ ಬಿಡುಗಡೆ ಹಾಗೂ ತನ್ವಿ ಪಿಕ್ಚರ್ಸ್ ಬ್ಯಾನರ್ ನ ಅನಾವರಣ ಸಮಾರಂಭ ನಡೆಯಿತು. ಆನಂದ್ ಆಡಿಯೋ ಮೂಲಕ "ಹೇ ಬ್ರೋ" ಹಾಡು ಬಿಡುಗಡೆಯಾಗಿದೆ. ಖ್ಯಾತ ನಟ ನೀನಾಸಂ ಸತೀಶ್ ಹಾಗೂ ಖ್ಯಾತ ಸಿಂಗರ್ ALL OK "ಹೇ ಬ್ರೋ" ವಿಡಿಯೋ ಹಾಡನ್ನು ಬಿಡುಗಡೆ ಮಾಡಿದರು. ನಟ ಪ್ರಮೋದ್ ಹಾಗೂ ಚಿತ್ರರಂಗದ ಹೆಸರಾಂತ ನಿರ್ಮಾಪಕರು ಸೇರಿ ತನ್ವಿ ಪಿಕ್ಚರ್ಸ್ ಬ್ಯಾನರ್ ....
*ಡಿಸೆಂಬರ್ 9 ರಿಂದ ನಿಮ್ಮ ಮೆಚ್ಚಿನ ಚಿತ್ರಮಂದಿರಗಳಲ್ಲಿ "ಹೊಸ ದಿನಚರಿ".* ಬೆಳಗ್ಗಿನಿಂದ ಸಂಜೆಯ ತನಕ ಇಡೀ ದಿನ ಏನೆಲ್ಲಾ ಮಾಡಬೇಕೆಂಬ ದಿನಚರಿಯನ್ನು ಸಾಮಾನ್ಯವಾಗಿ ಎಲ್ಲರೂ ರೂಡಿಸಿಕೊಂಡಿರುತ್ತಾರೆ. ಆದರೆ ಏನಿದು " ಹೊಸ ದಿನಚರಿ"? ಈ ಪ್ರಶ್ನೆಗೆ ಉತ್ತರ ಡಿಸೆಂಬರ್ 9 ರಂದು ಸಿಗಲಿದೆ. ಇದೇ ಹೆಸರಿನ ಚಿತ್ರ ಕರ್ನಾಟಕದಾದ್ಯಂತ ಅಂದು ಬಿಡುಗಡೆಯಾಗಲಿದೆ. ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಕೆಲವು ವಿಷಯಗಳನ್ನು ಹಂಚಿಕೊಂಡರು. ನಾನು ಈ ಹಿಂದೆ "ಆಯನ" ಎಂಬ ಚಿತ್ರ ನಿರ್ದೇಶಿಸಿದ್ದೆ. ಈಗ "ಹೊಸ ದಿನಚರಿ" ಚಿತ್ರವನ್ನು ನಿರ್ಮಾಣ ಮಾಡಿದ್ದೀನಿ. ನನ್ನ ಮಿತ್ರರಾದ ಮೃತ್ಯುಂಜಯ ಶುಕ್ಲ ಹಾಗೂ ಅಲೋಕ್ ಚೌರಾಸಿಯಾ ....
ಕ್ರೈಂ ಥ್ರಿಲ್ಲರ್ ಕುರಿತಾದ ಪ್ರಾಯಶ: ಕಿರುತೆರೆಯಲ್ಲಿ ಕೆಲಸ ಮಾಡಿರುವ ಪ್ರತಿಭೆಗಳು ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆ ಆಗಿದೆ. ಅದರಂತೆ ಹತ್ತು ವರ್ಷಗಳ ಕಾಲ ಧಾರವಾಹಿಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಕುಂದಾಪುರದ ರಂಜಿತ್ರಾವ್ ಮೊದಲಬಾರಿ ‘ಪ್ರಾಯಶ:’ ಎನ್ನುವ ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ, ಮೂರು ಹಾಡುಗಳಿಗೆ ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುವ ಜತೆಗೆ ಅರ್ಹ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಕ್ರೈಂ ಥ್ರಿಲ್ಲರ್ ಕಥೆಯಲ್ಲಿ ಪ್ರೀತಿಯ ಏಳೆಯೊಂದು ಸೇರಿಕೊಂಡಿರುತ್ತದೆ. ಚಿತ್ರದಲ್ಲಿ ರೇಪ್ ಅಂಡ್ ....
ದ್ವಿಪಾತ್ರದಲ್ಲಿ ಚಂದೂಗೌಡ ಕಿರುತೆರೆ ಸ್ಟಾರ್ ನಟ ಚಂದೂಗೌಡ ‘ದ್ವಿಪಾತ್ರ’ದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಎರಡು ಪಾತ್ರವಲ್ಲ. ಇದೇ ಹೆಸರಿನ ಚಿತ್ರದಲ್ಲಿ ಡಿಸಿಪಿಯಾಗಿ ಸೈಕೋ ಕಿಲ್ಲರ್ ಜಾಡನ್ನು ಹುಡುಕುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕಿ ಇಲ್ಲದೆ ಕತೆ ಇರುವುದು ವಿಶೇಷ. ತಾರಗಣದಲ್ಲಿ ರಘು, ಸುಚೇಂದ್ರಪ್ರಸಾದ್,ಸ್ನೇಹಹೆಗಡೆ, ಪಾಯಲ್ಚಂಗಪ್ಪ, ಅಶ್ವಥ್ನೀನಾಸಂ, ಪ್ರಶಾಂತ್ಸಿದ್ದಿ, ಚೆನ್ನಕೇಶವ, ರಘುವೈನ್ ಸ್ಟೋರ್, ಸಂದೀಪ್ ನಾರಾಯಣ್, ವಿಕ್ಕಿಕೋಲಾರ, ಕುಶಾಂತ್, ಪುರುಷೋತ್ತಮ್ ಸೇರಿದಂತೆ ಹಿರಿಯ ಕಲಾವಿದರ ದಂಡೇ ಇರಲಿದೆ. ೨೦೧೬ರಲ್ಲಿ ಕೇರಳದಲ್ಲಿ ನಡೆದ ಘಟನೆಯನ್ನು ತೆಗೆದುಕೊಂಡು ಚಿತ್ರರೂಪಕ್ಕೆ ....
*ಅಡವಿ ಶೇಷ್ ‘ಹಿಟ್ -2’ ಡಿಸೆಂಬರ್ 2ಕ್ಕೆ ಬಿಡುಗಡೆ- ಶೈಲೇಶ್ ಕೊಲನು ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ* 'ಮೇಜರ್’ ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ತೆಲುಗು ನಟ ಅಡವಿ ಶೇಷ್ ‘ಹಿಟ್-2’ ಸಿನಿಮಾ ಡಿಸೆಂಬರ್ 2ರಂದು ಬಿಡುಗಡೆಯಾಗುತ್ತಿದೆ. ಚಿತ್ರವನ್ನು ’ಹಿಟ್’ ಸಿನಿಮಾ ಖ್ಯಾತಿಯ ಡಾ. ಶೈಲೇಶ್ ಕೊಲನು ನಿರ್ದೇಶನ ಮಾಡಿದ್ದಾರೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಬಂದಿದ್ದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಚಿತ್ರದ ನಿರ್ದೇಶಕ ಶೈಲೇಶ್ ಕೊಲನು ಮಾತನಾಡಿ ’ಹಿಟ್ 1'ಗೆ ಬಹಳ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿತ್ತು. ಅಮೇಜಾನ್ ಪ್ರೈಮ್ ನಲ್ಲಿ ....
*ಸೆಟ್ಟೇರಿತು ಡಾಲಿ ಪಿಕ್ಚರ್ಸ್ ನಿರ್ಮಾಣದ ಮೂರನೇ ಸಿನಿಮಾ- ಡಿಸೆಂಬರ್ ಮೊದಲ ವಾರದಿಂದ ‘ಟಗರು ಪಲ್ಯ’ ಶೂಟಿಂಗ್ ಶುರು* ನಟ ಡಾಲಿ ಧನಂಜಯ್ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ನಡಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ ಟಗರು ಪಲ್ಯ. ಈ ಬಾರಿ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆಯಾಗಿದೆ. ’ಇಕ್ಕಟ್’ ಖ್ಯಾತಿಯ ನಾಗಭೂಷಣ್, ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಪ್ರೇಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ಉಮೇಶ್. ಕೆ. ಕೃಪ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಇಂದು ‘ಟಗರು ಪಲ್ಯ’ ಸಿನಿಮಾ ಮುಹೂರ್ತ ಆಚರಿಸಿಕೊಂಡಿದ್ದು, ಡಿಸೆಂಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭಿಸಲಿದೆ. ಇದು ನನ್ನ ಮೊದಲ ....
ಮಾಂಕ್ ದಿ ಯಂಗ್ ಹಾಡುಗಳ ಸಮಯ ವಿಭಿನ್ನ ಶೀರ್ಷಿಕೆ ಇರುವ ಹೊಸಬರ ‘ಮಾಂಕ್ ದಿ ಯಂಗ್’ ಚಿತ್ರದ ‘ಕಣ್ಗಳೆ ಸೋತು’ ಹಾಡನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು. ಮಾಸ್ಚಿತ್ಸೂರ್ಯ ನಿರ್ದೇಶನವಿದೆ. ಚಿತ್ರದ ಕುರಿತಂತೆ ಮಾತನಾಡಿರುವ ನಿರ್ದೇಶಕರು ವಿಂಟೇಜ್, ಫ್ಯಾಂಟಸಿ, ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ. ಸರೋವರ್ ನಾಯಕ ಮತ್ತು ಸೌಂದರ್ಯಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ. ಐದು ಜನ ನಿರ್ಮಾಪಕರುಗಳಾದ ರಾಜೇಂದ್ರನ್, ವಿನಯ್ಬಾಬುರೆಡ್ಡಿಶೆಟ್ಟಿಹಳ್ಳಿ, ಸರೋವರ್, ಗೋಪಿಚಂದ್, ಲಾಲ್ಚಂದ್ಖತಾರ್ ಬಂಡವಾಳ ಹೂಡುವ ....
ಟೆಂಪರ್ ಟ್ರೈಲರ್ ಬಿಡುಗಡೆ ಸಾಹಿತಿ ಮಂಜುಕವಿ ಕತೆ,ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವ ‘ಟೆಂಪರ್’ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಪ್ರಚಾರದ ಹಂತವಾಗಿ ಮೊನ್ನೆ ಟ್ರೇಲರ್ ಬಿಡಗುಡೆ ಸಮಾರಂಭ ನಡೆಯಿತು. ಕತೆಯಲ್ಲಿ ಆತನಿಗೆ ಅಪ್ಪ-ಅಮ್ಮ-ತಂಗಿ ಜೊತೆಗೆ ಕಷ್ಟ ಸುಖ ಹಂಚಿಕೊಳ್ಳಲು ಇಬ್ಬರು ಪ್ರಾಣ ಸ್ನೇಹಿತರು. ಬಾಲ್ಯದಿಂದಲೂ ಯಾರೇ ತಪ್ಪು ಮಾಡಿದರೂ ಅದಕ್ಕೆ ತಕ್ಕಂತೆ ನ್ಯಾಯ ಒದಗಿಸೋ ಗುಣವುಳ್ಳವನು. ಮುಂದೆ ಗ್ಯ್ರಾರೇಜ್ದಲ್ಲಿ ಕೆಲಸ ಮಾಡುವಾಗ ಖಳನ ಸಹೋದರಿ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗುತ್ತದೆ. ಒಂದು ಕಡೆ ತನ್ನ ಪ್ರಿಯತಮೆಯನ್ನು ಉಳಿಸುಕೊಳ್ಳುವ ಸಲುವಾಗಿ ಹೋರಾಟ, ಮತ್ತೋಂದು ಕಡೆ ಕುಟುಂಬ ....
ಇನಾಮ್ದಾರ್ ಟೀಸರ್ ಲೋಕಾರ್ಪಣೆ ‘ಇನಾಮ್ದಾರ್’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ರೇನುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಸಿನಿಮಾವು ೧೮೯೦ರ ಸಮಯದಲ್ಲಿ ಪಶ್ಚಿಮ ಘಟ್ಟ ಬುಡಕಟ್ಟು ಜನಾಂಗದ ನಡುವೆ ನಡೆದಂತ ಸತ್ಯ ಘಟನೆಯನ್ನು ಆಧರಿಸಿದೆ. ‘ಕತ್ತಲಕೋಣೆ’ ನಿರ್ದೇಶನ ಮಾಡಿರುವ ಸಂದೇಶ್ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಕಪ್ಪು ಸುಂದರಿಯ ಸುತ್ತ’ವೆಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ನಿರಂಜನ್ಶೆಟ್ಟಿ ನಿರ್ಮಾಣ ಮಾಡಿರುವುದ ಹೊಸ ಅನುಭವ. ರಾಜಕೀಯ, ನಕ್ಸಲಿಸಂ ಜತೆಗೆ ಬುಡಕಟ್ಟು ಜನರ ಜೀವನದ ಹಿನ್ನಲೆಯಲ್ಲಿ ಚಿತ್ರವು ಸಾಗುತ್ತದೆ. ಅಲ್ಲಿನ ತಪ್ಪಲಿನಲ್ಲಿ ವಾಸಿಸುವ ಕಾಡಿನ ಜನರಿಗೂ ಹಾಗೂ ಉತ್ತರ ....
ಹೊಸ ಯುದ್ದಕಾಂಡ ೮೦ರ ದಶಕದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಯುದ್ದಕಾಂಡ’ ಚಿತ್ರವೊಂದು ಹಿಟ್ ಆಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರುತ್ತಿದೆ. ಟೈಟಲ್ ಒಂದೇಯಾದರೂ ಕಥೆ ಬೇರೆಯದೆ ಆಗಿರುತ್ತದಂತೆ. ನಾಯಕ ಅಜಯ್ರಾವ್ ತಮ್ಮದೆ ಅಜಯ್ರಾವ್ ಪ್ರೊಡಕ್ಷನ್ದಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಈ ಹಿಂದೆ ‘ಕಟ್ಟಿಂಗ್ಶಾಪ್’ ನಿರ್ದೇಶಿಸಿದ್ದ ಪವನ್ಭಟ್ ರಚಿಸಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಶೀರ್ಷಿಕೆ ಟೀಸರ್ ಅನಾವರಣ ಕಾರ್ಯಕ್ರಮ ನಡೆಯಿತು. ಚಿತ್ರದಲ್ಲಿ ಅವರು ವಕೀಲರಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಸಿನಿಮಾ ಶೀರ್ಷಿಕೆಯನ್ನು ವಕೀಲರಿಂದಲೇ ....
*ಸುಮಧುರವಾಗಿದೆ "ವಿಜಯಾನಂದ" ಚಿತ್ರದ ಹಾಡು..* ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಚಿತ್ರ "ವಿಜಯಾನಂದ". ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ನೀಡಿರುವ ಈ ಚಿತ್ರದ "ಹಾಗೆ ಆದ ಆಲಿಂಗನ" ಎಂಬ ಹಾಡು ಬಿಡುಗಡೆಯಾಗಿದೆ. ಧನಂಜಯ್ ರಂಜನ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಗೂ ಕೀರ್ತನಾ ವೈದ್ಯನಾಥನ್ ಇಂಪಾಗಿ ಹಾಡಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಈ ಹಾಡು ಬಿಡುಗಡೆಯಾಯಿತು. ಮಲೆಯಾಳಂನ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್, "ಗೀತಾ ಗೋವಿಂದಂ" ಸೇರಿದಂತೆ ಮುನ್ನೂರಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ಇಮ್ರಾನ್ ಸರ್ದಾರಿಯಾ ಈ ಹಾಡಿಗೆ ನೃತ್ಯ ನಿರ್ದೇಶನ ....
*‘ರೇಮೊ’ ಸೂಪರ್ ಹಿಟ್ ಆಗಲಿ’: ಟ್ರೇಲರ್ ರಿಲೀಸ್ ಮಾಡಿ ಹಾರೈಸಿದ ಶಿವಣ್ಣ.* ಸಿ.ಆರ್.ಮನೋಹರ್ ನಿರ್ಮಿಸಿರುವ, ಖ್ಯಾತ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ‘ರೇಮೊ’ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಇಶಾನ್ ಮತ್ತು ಆಶಿಕಾ ರಂಗನಾಥ್ ಈ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ‘ಕನ್ನಡ ಚಿತ್ರರಂಗ ಯಾರಿಗೂ ಕಡಿಮೆ ಇಲ್ಲ. "ಕಾಂತಾರ" ಚಿತ್ರ ನಮಗೆಲ್ಲ ಒಂದು ಹೆಮ್ಮೆ. ಆ ಚಿತ್ರದ ಟ್ರೇಲರ್ ಮತ್ತು ಸಾಂಗ್ ನೋಡಿ ನಾನು ರಿಷಬ್ ಶೆಟ್ಟಿ ಅವರಿಗೆ ಫೋನ್ ಮಾಡಿದ್ದೆ. ‘ರೇಮೊ’ ಕೂಡ ಅದೇ ರೀತಿ ಸೂಪರ್ ಹಿಟ್ ಆಗಲಿ ಅಂತ ದೇವರಲ್ಲಿ ನಾನು ಪ್ರಾರ್ಥನೆ ....
ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಫೋಟೋಗ್ರಾಫರ್ ಎಂಬ ಅದ್ಭುತ ಪ್ರತಿಭೆ ಇದ್ದೇ ಇರುತ್ತಾರೆ
ಊಹಿಸಿ ನಮ್ಮ ನಿಮ್ಮೆಲ್ಲರ ಬಾಲ್ಯ ಫೋಟೋಸ್ಟುಡಿಯೋ, ಫೋಟೋಗ್ರಾಫರ್ ಇಲ್ಲದೇ ಇರಲು ಸಾಧ್ಯವಿರುತ್ತಿತ್ತಾ?
ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಚಿತ್ರಗಳ ಸಾಲಿನಲ್ಲಿ ನಿಲ್ಲುವ ಸಿನೆಮಾ ನಮ್ಮ "ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ " ಚಿತ್ರ,
ಲಕ್ಷೀ ಪುತ್ರ, ಚಿತ್ರೀಕರಣ ಬರದಿಂದ ಸಾಗುತಿದೆ ಧರ್ಪಣ ಕ್ರಿಯೆಷನ್ ಬ್ಯಾನರ್ ನಡಿ ಯಲ್ಲಿ ಉಮಾ ರೋಹಿತ್ ನಿರ್ಮಾಣ ದಲ್ಲಿ ರೋಹಿತ್ ಅರುಣ್ ನಿರ್ದೇಶನದಲ್ಲಿ ಚಾಮರಾಜನಗರ, ಹುಟ್ಟೂರು ಸುತ್ತ ಮುತ್ತ ಎರಡು ಹಂತದ
ಪ್ಯಾರಲಲ್ ಲೈಫ್ ಪರಿಕಲ್ಪನೆಯಡಿಯಲ್ಲಿ, ಅನೂಹ್ಯ ಮತ್ತು ಕುತೂಹಲಕರವಾದ ಪ್ರೇಮಕಥೆಯನ್ನು, ಥ್ರಿಲ್ಲರ್ ಮಾದರಿಯಲ್ಲಿ ಹೆಣೆದಿರುವ ಚಿತ್ರವೇ ಹೆಜ್ಜಾರು.
ಅಭಿಷೇಕ್ ಆಳ್ವ ಮತ್ತು ಲಿಯೊನಿಲ್ಲ ಶ್ವೇತ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ ಸಹ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.
ಬೆಂಗಳೂರಿನಿಂದ ಮೈಸೂರಿನವರೆಗೆ ಝೈದ್ ಸಾರಥ್ಯದಲ್ಲಿ ಬನಾರಸ್ ಯಾತ್ರೆ! ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಚಿತ್ರ ಬಿಡುಗಡೆಗೆ ಇನ್ನು ಐದು ದಿನ ಮಾತ್ರ ಬಾಕಿ ಉಳಿದುಕೊಂಡಿದೆ. ಈ ಚಿತ್ರ ನವೆಂಬರ್ ೪ರಂದು ದೇಶಾದ್ಯಂತ ತೆರೆಗಾಣಲಿದೆ. ಇದುವರೆಗೂ ಅತ್ಯಂತ ವ್ಯವಸ್ಥಿತವಾಗಿ ಪ್ಯಾನಿಂಡಿಯಾ ಮಟ್ಟದಲ್ಲಿ ಬನಾರಸ್ ಅನ್ನು ಮುನ್ನೆಲೆಗೆ ತರಲಾಗಿದೆ. ಇದೀಗ ಕಡೇಯ ಕ್ಷಣಗಳಲ್ಲಿ ಸಂಚಲನ ಮೂಡಿಸುವ ಸಲುವಾಗಿ ಝೈದ್ ಊರಿಂದೂರಿಗೆ ಬನಾರಸ್ ಯಾತ್ರ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ೮.೩೦ಕ್ಕೆ ಸರಿಯಾಗಿ, ಬೆಂಗಳೂರಿನ ಟೌನ್ ಹಾಲ್ನಿಂದ ಈ ಯಾತ್ರೆ ಆರಂಭವಾಗಿದೆ. ಅಲ್ಲಿಂದ ಹೊರಟ ಬನಾರಸ್ ಯಾತ್ರೆ ಆ ನಂತರದಲ್ಲಿ ಮೈಸೂರ್ ರಸ್ತೆಯತ್ತ ಸಾಗಿ ಬಂದು, ಗಾಳಿ ಆಂಜನೇಯ ದೇವಸ್ಥಾನಕ್ಕೆ ಝೈದ್ ....
ಹುಬ್ಬಳ್ಳಿಯಲ್ಲಿ ನಡೆದ ಬನಾರಸ್ ಪ್ರೀರಿಲೀಸ್ ಸಮಾರಂಭ ಶಾಸಕ ಜಮೀರ್ ಅಹ್ಮದ್ಖಾನ್ ಅವರ ಪುತ್ರ ಝೈದ್ಖಾನ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಬನಾರಸ್. ಬೆಲ್ ಬಾಟಂ ಖ್ಯಾತಿಯ ಜಯತೀರ್ಥ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಬಿಡುಗಡೆ ಪೂರ್ವ ಮನರಂಜನಾ (ಪ್ರೀರಿಲೀಸ್ ಇವೆಂಟ್) ಕಾರ್ಯಕ್ರಮ ಶನಿವಾರ ಸಂಜೆ ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯ ರೈಲ್ವೇ ಸ್ಪೋರ್ಟ್ಸ್ ಗ್ರೌಂಡ್ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು. ಈಗಾಗಲೇ ತನ್ನ ಸುಂದರ ಹಾಡುಗಳು ಹಾಗೂ ಟ್ರೈಲರ್ ಮೂಲಕ ಜನಪ್ರಿಯವಾಗಿರುವ ಬನಾರಸ್ ಚಿತ್ರದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನೋದ್ ಪ್ರಭಾಕರ್, ನೆನಪಿರಲಿ ಪ್ರೇಮ್, ವಿ.ನಾಗೇಂದ್ರ ....