Ombatthane Dikku.Film Pooja and Press Meet.

Thursday, September 12, 2019

ಕನ್ನಡ  ಚಿತ್ರಕ್ಕೆ  ತಮಿಳು  ನಟ  ಶುಭ ಹಾರೈಕೆ         ಕನ್ನಡ ಚಿತ್ರಗಳು ಬೇರೆ ಭಾಷೆಯಲ್ಲಿ ಸದ್ದು ಮಾಡುತ್ತಿರುವುದು ಸಂತಸ ತಂದಿದೆ.  ಇಲ್ಲಿನ ಮಹೂರ್ತಕ್ಕೆ ಅಲ್ಲಿನ ಕಲಾವಿದರು ಭೇಟಿ ನೀಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ.  ಅದರಂತೆ  ‘ಒಂಬತ್ತನೇ ದಿಕ್ಕು’ ಚಿತ್ರ ಮಹೂರ್ತ ಸಮಾರಂಭಕ್ಕೆ ತಮಿಳು ಸ್ಟಾರ್ ನಟ ಆರ್ಯ ಆಗಮಿಸಿ, ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ದಯಾಳ್‌ಪದ್ಮನಾಬನ್ ಈ ಹಿಂದೆ ಸಾರಾಂಶ, ಕಮರ್ಷಿಯಲ್ ಹೊಂದಿರುವ ‘ಯಶವಂತ’ ಚಿತ್ರ ಮಾಡಿದ್ದರು.  ನಂತರ ಈಗ ಅಂತಹುದೆ ಕತೆ ಹೊಂದಿರುವ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.  ....

937

Read More...

Kannad Gottilla.Film Audio Rel.

Wednesday, September 11, 2019

ಕನ್ನಡ್ ಗೊತ್ತಿಲ್ಲ  ಚಿತ್ರಕ್ಕೆ   ಮೂರು  ಹೊಸ ಗಾಯಕರುಗಳು         ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ಸಲುವಾಗಿ ‘ಕನ್ನಡ್ ಗೊತ್ತಿಲ್ಲ’ ಚಿತ್ರತಂಡವು ಒಂದು ಹಾಡಿಗೆ ಧ್ವನಿ ನೀಡಲು ಪ್ರಚಾರ ಮಾಡಿದ್ದರು.  ೧೩೮೪ ಆಕಾಂಕ್ಷಿಗಳು ಭಾಗವಹಿಸಿ, ಅದರಲ್ಲಿ ಅಳೆದು ತೂಕ ಮಾಡಿ ೩೫ಕ್ಕೆ ಇಳಿಸಿ, ಅಂತಿಮವಾಗಿ ಮೂರು ಪ್ರತಿಭೆಗಳನ್ನು ಆಯ್ಕೆ ಮಾಡಿಕೊಂಡು ಅವರಿಂದ ಗೀತೆಯನ್ನು ಹಾಡಿಸಿದ್ದಾರೆ. ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಅವರುಗಳನ್ನು ಗೌರವಿಸಲಾಯಿತು. ಸಿನಿಮಾಕ್ಕೆ ನಾಯಕ ಕನ್ನಡ, ನಾಯಕಿ ಹರಿಪ್ರಿಯಾ ಎಂದು ಹೇಳಿರುವ ಕತೆಯು  ಮರ್ಡರ್ ಮಿಸ್ಟರಿಯನ್ನು ಹೊಂದಿದೆ. ಒನ್ ಲೈನ್ ಸ್ಟೋರಿ, ....

1087

Read More...

Pailwaan.Film Press Meet.

Tuesday, September 10, 2019

 ಬಂದ ನೋಡು ಪೈಲ್ವಾನ್          ಬಹು ದಿನಗಳಿಂದ ಸುದ್ದಿಯಾಗಿದ್ದ ಅದ್ದೂರಿ ಚಿತ್ರ’ ‘ಪೈಲ್ವಾನ್’  ಏಕಕಾಲಕ್ಕೆ ಕರ್ನಾಟಕದಲ್ಲಿ ೪೦೦ ಕೇಂದ್ರಗಳು, ಇತರೆ ರಾಜ್ಯಗಳಲ್ಲಿ ಸೇರಿಕೊಂಡು ಒಟ್ಟಾರೆ ೪೦೦೦ ಪರದೆಗಳಲ್ಲಿ  ಕನ್ನಡ, ತೆಲುಗು,  ತಮಿಳು, ಮಲೆಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಹಿಂದಿಯಲ್ಲಿ ಶುಕ್ರವಾರದಂದು ತೆರೆಕಾಣಲಿದೆ. ಮಲೆಯಾಳಂ ಹೂರತುಪಡಿಸಿ ಉಳಿದ ಭಾಷೆಗಳಿಗೆ ಸುದೀಪ್ ಧ್ವನಿ ನೀಡಿದ್ದಾರೆ.        ಬಿಡುಗಡೆ ಪೂರ್ವ ಸುದ್ದಿಗೋಷ್ಟಿಯಲ್ಲಿ ದೊಡ್ಡ ಮಗನ ಚಿತ್ರಕ್ಕೆ ಶುಭ ಹಾರೈಸಲು ಆಗಿಮಿಸಿದ್ದ ರವಿಚಂದ್ರನ್ ಮಾತನಾಡುತ್ತಾ ಚಿತ್ರದಲ್ಲಿ ಮಿಂಚು, ಬೆಂಕಿ ಇದ್ದರೆ ಜನರು ಚಿತ್ರಮಂದಿರಕ್ಕೆ ಹೋಗುತ್ತಾರೆ. ....

1025

Read More...

Shivaji Rao Suratkal.Film Press Meet.

Tuesday, September 10, 2019

ತ್ಯಾಗರಾಜನ  ಹುಟ್ಟುಹಬ್ಬಕ್ಕೆ  ಶಿವಾಜಿ ಸುರತ್ಕಲ್   ಟ್ರೈಲರ್  ಬಿಡುಗಡೆ           ಸಾಕಷ್ಟು ವರ್ಷಗಳ ನಂತರ ಗನ್ ಹಿಡಿದು, ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿರುವ ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’ ಚಿತ್ರದ ಟ್ರೈಲರ್ ಅವರ ಹುಟ್ಟುಹಬ್ಬಕ್ಕೆ  ಉಡುಗೊರೆಯಾಗಿ ಅನಾವರಣಗೊಂಡಿತು.  ನಿರ್ದೇಶಕ ಆಕಾಶ್‌ಶ್ರೀವತ್ಸ ಮಾತನಾಡಿ ದಿ ಕೇಸ್ ಆಫ್ ರಣಗಿರಿ ರಹಸ್ಯವೆಂದು ಅಡಬರಹದಲ್ಲಿ ಹೇಳಲಾಗಿದೆ. ಶಿವಾಜಿ ಮತ್ತೋಂದು ಪದ ಪವರ್, ಸುರತ್ಕಲ್ ಎಂದರೆ  ಮೆದುಳು. ಇವರಡು ಸೇರಿಕೊಂಡು ಹೇಗೆ ಕೊಲೆಯನ್ನು ಭೇದಿಸುತ್ತಾರೆ  ಎಂಬುದು ಒಂದು ಏಳೆಯ ಕತೆಯಾಗಿದೆ. ನಾಲ್ಕು ಹಾಡುಗಳು ಇರಲಿದೆ. ....

1010

Read More...

Trivikrama.Film Song Shoot Press Meet.

Tuesday, September 10, 2019

ಹಾಡಿನ  ಚಿತ್ರೀಕರಣದಲ್ಲಿ  ತ್ರಿವಿಕ್ರಮ         ‘ಪಕ್ಕದ ಮನೆ ಪಮ್ಮಿ, ಕೊಡುತಾಳೆ ಸಿಗ್ನಲ್ ಕೆಮ್ಮಿ’‘ ಗೀತೆಯು  ‘ತ್ರಿವಿಕ್ರಮ’ ಸಿನಿಮದಾಗಿದೆ. ಇದರ ಚಿತ್ರೀಕರಣವು  ಮಿಲ್ಕ್ ಕಾಲೋನಿ ರಸ್ತೆ, ಮೈದಾನದಲ್ಲಿ ನಡೆಯುತ್ತಿತ್ತು. ಪತ್ರಕರ್ತರು ಭೇಟಿ ನೀಡಿದಾಗ ಚಿಕ್ಕಣ್ಣ ಒಂದು ಕಡೆ ಹುಡುಗಿಯನ್ನು ನೋಡುತ್ತಾ ಹಾಡುತ್ತಿದ್ದರೆ, ನಂತರ ನಾಯಕ  ಹುಡುಗರೊಂದಿಗೆ  ಹೆಜ್ಜೆ ಹಾಕುತ್ತಿದ್ದರು. ಒಂದು ಹಂತದಲ್ಲಿ ಎರಡು ದೃಶ್ಯಗಳು ಓಕೆ ಆದಾಗ ತಂಡವು ಮಾದ್ಯಮದ ಎದುರು ಹಾಜರಾಗಿತ್ತು. ಕ್ಯಾಪ್ಟನ್ ಸಹನಮೂರ್ತಿ ಮಾತನಾಡಿ ಇಲ್ಲಿಯವರೆಗೂ ಶೇಕಡ ೨೫ ರಷ್ಟು ಶೂಟಿಂಗ್ ಮುಗಿದಿದೆ. ಅಮ್ಮ ಸಂಪ್ರದಾಯ, ಆಚಾರ-ವಿಚಾರ ನಂಬುವವರು, ಮಗ ಇವತ್ತಿನ ....

452

Read More...

Chandanavana Film Critics Academy.Press Meet.

Tuesday, September 10, 2019

ಪತ್ರಕರ್ತರ  ಚಂದನವನ  ಫಿಲ್ಮ್  ಕ್ರಿಟಿಕ್ಸ್  ಅಕಾಡಮಿ         ಯಾವುದೇ ಚಿತ್ರ ಬಿಡುಗಡೆಯಾದರೆ ಅದರ ಮಾಹಿತಿ ಮಾದ್ಯಮದ ಮೂಲಕ ಲಭ್ಯವಾಗುತ್ತದೆ.  ಅದರಿಂದಲೇ  ಪತ್ರಕರ್ತರು  ಚಿತ್ರರಂಗ ಮತ್ತು ಮಾದ್ಯಮಕ್ಕೆ ಸೇತುವೆಯಾಗಿರುತ್ತಾರೆ. ಪ್ರತಿ ವರ್ಷ ಉತ್ತಮ ಚಿತ್ರಗಳು, ಕಲಾವಿದರು, ತಂತ್ರಜ್ಘರಿಗೆ ರಾಜ್ಯ ಸರ್ಕಾರದಿಂದ ಪ್ರಶಸ್ತಿಗಳನ್ನು ನೀಡುವ ಸಂಪ್ರದಾಯ ಬೆಳೆದುಬಂದಿದೆ. ಈ ಸಂದರ್ಭದಲ್ಲಿ ಪ್ರಶಸ್ತಿಗೆ ವಂಚಿತರಾದವರು ತಮ್ಮ ಬೇಸರವನ್ನು  ಮಾದ್ಯಮದವರೊಂದಿಗೆ ಹಂಚಿಕೊಳ್ಳುತ್ತಾರೆ. ಈಗ ಅಂತಹುದೇ ದಕ್ಷಿಣ ಭಾರತದಲ್ಲಿ ಮೊದಲು ಎನ್ನುವಂತೆ  ಸ್ಯಾಂಡಲ್‌ವುಡ್ ಪತ್ರಕರ್ತರು ಸೇರಿಕೊಂಡು ‘ಚಂದನವನ ....

377

Read More...

Dheeran.Film Press Meet.

Monday, September 09, 2019

ಪ್ರಚಲಿತ  ಸಮಾಜದಲ್ಲಿ  ನಡೆಯುವ  ಘಟನೆಗಳ ಗಾಥೆ         ಓದಿದ್ದು ಇಂಜಿನಿಯರಿಂಗ್, ಅಂತರಾಳದಲ್ಲಿ ಆಸೆ ಹುಟ್ಟಿದ್ದು ಚಿತ್ರರಂಗ. ಅದರಂತೆ ಉದ್ಯೋಗಕ್ಕೆ ತಾತ್ಕಲಿಕ ರಜೆ ತೆಗೆದುಕೊಂಡಿರುವ ಸ್ವಾಮಿ.ವೈ.ಬಿ.ಎನ್ ‘ಧೀರನ್’  ಚಿತ್ರಕ್ಕೆ ರಚನೆ, ಎರಡು ಹಾಡಿಗೆ ಸಾಹಿತ್ಯ,  ನಿರ್ದೇಶನ ಜೊತೆಗೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.  ಹಾಗಂತ ನೇರ ಬಣ್ಣದ ಲೋಕಕ್ಕೆ ಕಾಲಿಟ್ಟಿಲ್ಲ. ಹತ್ತು ವರ್ಷಗಳ ಕಾಲ ಹಲವು ನಿರ್ದೇಶಕರ ಬಳಿ ಅನುಭವ ಪಡೆದುಕೊಂಡ ಧೈರ್ಯದಿಂದಲೇ ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ.  ದಿ ರನ್, ಥೀರೇಂದ್ರಕುಮಾರ್ ಅಂತಲೂ ಶೀರ್ಷಿಕೆಗೆ ಹೋಲಿಸಬಹುದು. ಪ್ರಸಕ್ತ ಸಮಾಜದಲ್ಲಿ ನಡೆಯುವ ....

1426

Read More...

Naane Raja.Film Press Meet.

Monday, September 09, 2019

ಚಿತ್ರರಂಗಕ್ಕೆ  ಗಣೇಶ್  ಸೋದರ          ನಟ ಗಣೇಶ್ ಕಿರಿಯ ಸೋದರ ಮಹೇಶ್ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಈಗ ಮತ್ತೋಬ್ಬ ತಮ್ಮ ಉಮೇಶ್ ‘ನಾನೇ ರಾಜ’ ಚಿತ್ರದ ಮೂಲಕ ಸೂರಜ್‌ಕೃಷ್ಣ ಹೆಸರಿನೊಂದಿಗೆ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ೧೯೮೨ರಂದು ರವಿಚಂದ್ರನ್ ಮೊದಲ ಚಿತ್ರ ಇದೇ ಹೆಸರಿನಲ್ಲಿ ಬಿಡುಗಡೆಗೊಂಡಿತ್ತು. ಮನರಂಜನೆ, ಸಾಹಸ ಮತ್ತು ಪ್ರೀತಿ ಕತೆ ಹೊಂದಿದೆ. ಅಜ್ಜಿಯ ಮುದ್ದಿನ ಮೊಮ್ಮಗ, ಸ್ನೇಹಿತರ ಅಚ್ಚುಮೆಚ್ಚಿನ ಗೆಳೆಯ ರಾಜ, ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವ ಹಾಗೆ ಯಾರೇ ಯಾವ ಸಮಯದಲ್ಲೂ ಸಹಾಯ ಕೇಳಿದರೂ ಮುಂದಾಗುವ ಅಪಾಯವನ್ನು ಲೆಕ್ಕಿಸದೆ ಸಹಾಯ ಮಾಡುವ ಗುಣವುಳ್ಳವನು.  ಅಕಸ್ಮಾತ್ ಸಿಕ್ಕ ಹುಡುಗಿಯೊಬ್ಬಳು  ....

397

Read More...

Girgit.Tulu Film Press Meet.

Monday, September 09, 2019

ಸಿಲಿಕಾನ್ ಸಿಟಿಯಲ್ಲಿ  ಗಿರಿಗಿಟ್  ಅಬ್ಬರ         ಬೆಂಗಳೂರಿನಲ್ಲಿ ಎಲ್ಲಾ ಭಾಷೆಯ ಚಿತ್ರಗಳನ್ನು ಜನರು ನೋಡುತ್ತಾರೆ. ಅದರಿಂದಲೇ ಟಾಲಿವುಡ್, ಬಾಲಿವುಡ್, ಕಾಲಿವುಡ್, ಮಾಲಿವುಡ್ ಚಿತ್ರಗಳು ಹೆಚ್ಚಾಗಿ ತೆರೆಕಾಣುತ್ತವೆ. ಆ ಸಾಲಿಗೆ ಕೋಸ್ಟಲ್‌ವುಡ್‌ನ ತುಳು ಚಿತ್ರವು ಸೇರಿಕೊಂಡಿದೆ. ಅಪರೂಪಕ್ಕೆ ಎನ್ನುವಂತೆ ಒಂದು ಕಡೆ ಈ ಭಾಷೆಯ ಸಿನಿಮಾ ಬಿಡುಗಡೆಗೊಂಡು ಸುದ್ದಿಯಾಗದೆ  ಮಾಯವಾಗುತ್ತಿತ್ತು. ಈಗ ‘ಗಿರಿಗಿಟ್’ ಎನ್ನುವ ಹಾಸ್ಯ ತುಳು ಸಿನಿಮಾವು ಕಳೆದ ವಾರ ಬೆಂಗಳೂರಿನ ೧೧ ಕೇಂದ್ರಗಳಲ್ಲಿ ವಿತರಕ ಜಯಣ್ಣ ಶಿಪಾರಸ್ಸಿನ ಮೇರೆಗೆ ತೆರೆ ಕಂಡಿತ್ತು. ಮಾಲ್‌ಗಳು ಒಲ್ಲದ ಮನಸ್ಸಿನಿಂದ ಬಿಡುಗಡೆ ಮಾಡಿದ್ದರು. ಮುಂದೆ ಇದರ ....

359

Read More...

Vikrama Chitra.Film Pooja.

Sunday, September 08, 2019

ಹೊಸಬರ  ವಿಕ್ರಮ  ಚಿತ್ರ  ಮಹೂರ್ತ          ಜನರು  ಅನಿರೀಕ್ಷಿತ ಕತೆಗಳನ್ನು  ಇಷ್ಟಪಡುತ್ತಾರೆಂದು ತಿಳಿದಿರುವ ಮಂಡ್ಯಾದ ಶ್ರೀಯುತ್ ‘ವಿಕ್ರಮ ಚಿತ್ರ’ ಸಿನಿಮಾಕ್ಕೆ ರಚನೆ,ಚಿತ್ರಕತೆ, ನಿರ್ದೇಶನ ಜವಬ್ದಾರಿ, ಇದರೊಂದಿಗೆ ಕಾಲೇಜು ಹುಡುಗನ ಪಾತ್ರದಲ್ಲಿ  ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಕುರಿತು ಹೇಳುವುದಾದರೆ ಎಂಟಿಎ ಮುಗಿಸಿ ಉತ್ತಮ  ಹುದ್ದೆಯಲ್ಲಿದ್ದರೂ  ಬಣ್ಣದ ವ್ಯಾಮೋಹದಿಂದ  ಕೆಲಸಕ್ಕೆ ಬೆನ್ನು ತೋರಿಸಿ ಪೂರ್ಣ ಪ್ರಮಾಣದಲ್ಲಿ ಇದರಲ್ಲಿ ತೊಡಗಿಕೊಂಡಿದ್ದಾರೆ.  ಕರ್ವ ಸೇರಿದಂತೆ ಹಲವರ ಬಳಿ ಅನುಭವ ಪಡೆದುಕೊಂಡು, ಗ್ಯಾಪ್‌ನಲ್ಲಿ ಧಾರವಾಹಿ, ಸಣ್ಣ ಪುಟ್ಟ ಪಾತ್ರಗಳಲ್ಲಿ ನಟನೆ ....

376

Read More...

Takkar.Film Audio Rel.

Saturday, September 07, 2019

ಟಕ್ಕರ್‌ಗೆ  ದರ್ಶನ್‌ರಿಂದ  ಬಂಪರ್          ದರ್ಶನ್ ಹತ್ತಿರದ ಸಂಬಂದಿ ಮನೋಜ್ ನಾಯಕನಾಗಿ ನಟಿಸಿರುವ ‘ಟಕ್ಕರ್’ ಚಿತ್ರದ ಶುರುವಿನಿಂದಲೂ ಕುರುಕ್ಷೇತ್ರದ ದುಯೋರ್ಧನ ಸಲಹೆ, ಸಹಕಾರ ನೀಡುತ್ತಿರುವುದರಿಂದ  ಬಿಡುಗಡೆ ಮುಂಚೆ ಬಂಪರ್ ಹೊಡೆದಂತೆ ಆಗಿದೆ ಎಂಬುದಾಗಿ  ತಂಡವು ಆಶಾಭಾವನೆಯಲ್ಲಿದೆ. ಸದರಿ ವಿಷಯವನ್ನು  ನಿರ್ಮಾಪಕ ಕೆ.ಎನ್.ನಾಗೇಶ್‌ಕೋಗಿಲು  ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಖುಷಿಯಿಂದ ಹೇಳಿಕೊಂಡರು.  ಮೊದಲ ಭೇಟಿಯಲ್ಲೆ ನಿರ್ಮಾಪಕರನ್ನು  ಮೊದಲು ಉದ್ಯಮದಲ್ಲಿ ಉಳಿಸುವ ಕೆಲಸ ಮಾಡಬೇಕು ಅಂತ ಕಿವಿಮಾತನ್ನು ತಂಡಕ್ಕೆ ಹೇಳಿದರು. ಚಿತ್ರೀಕರಣದ ಸಮಯದಲ್ಲಿ ಏನೇನು ಆಗುತ್ತಿದೆ ಎಂದು ....

337

Read More...

Avantika.Film Audio Rel.

Saturday, September 07, 2019

ಮೂಡನಂಬಿಕೆ, ಕಂದಾಚಾರ ನಿರ್ಮೂಲನ ಮಾಡುವ ಚಿತ್ರ        ಜಗತ್ತು ೨೧ನೇ ಶತಮಾನದಲ್ಲಿ ಇದ್ದರೂ ಜನರು ಮೂಡನಂಬಿಕೆ, ಕಂದಾಚಾರಗಳನ್ನು ನಂಬುತ್ತಲೆ ಇದ್ದಾರೆ. ಇದರಿಂದ ಅಮಾಯಕ ಜನರು ತತ್ತರಕ್ಕೆ  ಒಳಗಾಗುತ್ತಿದ್ದಾರೆ. ಇಂತಹ ನಂಬಿಕೆಗಳನ್ನು ಹೋಗಲಾಡಿಸಿ, ಬದಲಾವಣೆ ಸಾರುವ ‘ಆವಂತಿಕ’ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ತಾಯಿ ಮಗನ ಬಾಂದವ್ಯದ ಕತೆಯಲ್ಲಿ ಇದರ ಅಡಿಗೆ ಸಿಲುಕಿದ ಹಾಗೂ ನಿಧಿ ಆಸೆಗಾಗಿ ಮಗನಿಗೆ ತೊಂದರೆ ಕೊಡುತ್ತಾರೆ. ಇದರ ವಿರುದ್ದ ಹೋರಾಡಿ  ಮಗನನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ. ಹಾಗೆಯೇ  ಬದಲಾವಣೆ ಮಾಡಲು ಯಾವ ರೀತಿಯಲ್ಲಿ ಶ್ರಮಪಡುತ್ತಾಳೆ ಎಂಬುದು ಒಂದು ಏಳೆಯ ....

858

Read More...

Rewind.Film Press Meet.

Saturday, September 07, 2019

ವಿಜ್ಘಾನಿಯ ವಿಜ್ಘಾನದ ಕತೆ           ಬಣ್ಣದ ಲೋಕ ಅಷ್ಟು ಸುಲಭವಾಗಿ ಮರೆಯಲಿಕ್ಕೆ ಸಾಧ್ಯವಿಲ್ಲ. ಎಲ್ಲೇ ಹೋದರೂ ಅದು ಕಾಡುತ್ತಲೇ ಇರುತ್ತದೆ. ಇದನ್ನು ಹೇಳಲು ಪೀಠಿಕೆ ಇದೆ. ಸುಂದರ್‌ರಾಜ್-ಪ್ರಮೀಳಾಜೋಷಾಯ್ ಹತ್ತಿರದ ಸಂಬಂದಿ ತೇಜ್ ಬಾಲಕನಾಗಿ ಶಂಕರ್‌ನಾಗ್ ಅಭಿನಯದ ‘ಮಹೇಶ್ವರ’ ಚಿತ್ರದಲ್ಲಿ ಅಭಿನಯಿಸಿ, ಮೀಸೆ ಚಿಗುರಿದಾಗದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಮುಂದೆ ಅಪ್ಪನ ಬಯಕೆಯಂತೆ ವಿದ್ಯಾಭ್ಯಾಸದ ಕಡೆ ಗಮನ ಹರಿಸಿ ಪಿ.ಹೆಚ್‌ಡಿ ಮುಗಿಸಿ, ವಿಜ್ಘಾನಿಯಾಗಿ ಸಿಂಗಪೂರ್‌ದಲ್ಲಿ ಕಚೇರಿಯನ್ನು ತೆರೆದಿದ್ದಾರೆ. ಆದರೆ ನಟನೆ ಗೀಳು ಮಾಸದ ಕಾರಣ ಮಧ್ಯೆ ಎರಡು ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ಆದರೂ ಮಾತೃಭಾಷೆಯಲ್ಲಿ ....

385

Read More...

Nishkarsha.Old Film Re-Release Press Meet.

Thursday, September 05, 2019

ಹೊಸ  ತಂತ್ರಜ್ಘಾನದಲ್ಲಿ  ನಿಷ್ಕರ್ಷ         ೧೯೯೪ರಲ್ಲಿ ಬಿಡುಗಡೆಗೊಂಡ ‘ನಿಷ್ಕರ್ಷ’  ಸೂಪರ್ ಹಿಟ್ ಚಿತ್ರದಲ್ಲಿ ಡಾ.ವಿಷ್ಣುವರ್ಧನ್, ಅನಂತ್‌ನಾಗ್, ಸುಮನ್‌ನಗರ್‌ಕರ್, ಪ್ರಕಾಶ್‌ರೈ, ರಮೇಶ್‌ಭಟ್ ಮತ್ತು ವೈಟ್ ಕಾಲರ್ ವಿಲನ್ ಆಗಿ ಬಿ.ಸಿ.ಪಾಟೀಲ್ ಮೊದಲ ಬಾರಿ ಬಣ್ಣ ಹಚ್ಚಿದ್ದರು.  ರಾಜ್ಯ ಸರ್ಕಾರದಿಂದ ಮೂರು ಪ್ರಶಸ್ತಿಗಳು, ಉದಯ ವಾಹಿನಿಯಿಂದ ಒಂಬತ್ತು ಪ್ರಶಸ್ತಿಗಳನ್ನು ದಕ್ಕಿಸಿಕೊಂಡಿತು. ಸದರಿ ಚಿತ್ರಕ್ಕೆ  ಅಧುನಿಕ ತಂತ್ರಜ್ಘಾನದ ಸ್ಪರ್ಶ ನೀಡಿದೆ. ಇದರನ್ವಯ ಮಾಹಿತಿ ನೀಡಲು ನಿರ್ಮಾಪಕಿ ವನಜಾ.ಬಿ.ಪಾಟೀಲ್  ಮಾದ್ಯಮದವರನ್ನು ಭೇಟಿ ಮಾಡಿದ್ದರು.         ಬಿ.ಸಿ.ಪಾಟೀಲ್ ಮಾತನಾಡುತ್ತಾ ಒಂದು ದಿನ, ....

433

Read More...

Ward No.11.New Film Muhurath.

Thursday, September 05, 2019

ವಾರ್ಡ್  ನಂ.೧೧ರಲ್ಲಿ  ನಡೆಯುವ  ಗಾಥೆ        ವಾರ್ಡ್ ಅಂತ ಆಸ್ಪತ್ರೆ, ಪಟ್ಟಣಗಳಲ್ಲಿ ಬಳಸುವ ಪದವಾಗಿದೆ. ಈಗ ‘ವಾರ್ಡ್ ನಂ.೧೧’ ಎನ್ನುವ ಪೊಲಟಿಕಲ್ ಥ್ರಿಲ್ಲರ್ ಚಿತ್ರವೊಂದು ಸೆಟ್ಟೇರಿದೆ. ಪಾಂಡವಪುರದ ಶ್ರೀಕಾಂತ್ ಇಂಜನಿಯರಿಂಗ್ ಓದುವಾಗಲೇ ಕತೆಗಳನ್ನು ಬರೆಯುವ ಹವ್ಯಾಸ ರೂಡಿಸಿಕೊಂಡಿದ್ದರು. ಅದರಲ್ಲಿ ಇದು ಒಂದಾಗಿದೆ. ಹಲವು ನಿರ್ದೇಶಕ ಬಳಿ ಸಹಾಯಕರಾಗಿ ಕೆಲಸ, ಕಿರುಚಿತ್ರ ಸಿದ್ದಪಡಿಸಿದ್ದು,  ಈಗ ಅನುಭೂತಿಯಿಂದ ಚಿತ್ರಕ್ಕೆ ರಚನೆ, ನಿರ್ದೇಶನ ಮಾಡುತ್ತಿದ್ದಾರೆ. ಕಾಲ್ಪನಿಕ ವಾರ್ಡ್‌ನಲ್ಲಿ  ನಾಲ್ಕು ಗೆಳಯರು ಇರುತ್ತಾರೆ. ಅದರಲ್ಲಿ ಒಬ್ಬನ ಕೊಲೆಯಾಗುತ್ತದೆ. ಇದನ್ನು ತನಿಖೆ ....

520

Read More...

Ogara.Press Meet.

Wednesday, September 04, 2019

ಸಂಪ್ರದಾಯ  ಮತ್ತು  ಸ್ವಾದಕ್ಕೆ ಮತ್ತೋಂದು  ಹೆಸರು  ಓಗರ           ಓಗರ ಅಂದರೆ ಕರ್ನಾಟಕದಲ್ಲಿ ಅನ್ನ ಎಂದರ್ಥ ಕೊಡುತ್ತದೆ. ಸ್ವಾದಿಷ್ಟ ಆರೋಗ್ಯಕರ ಅಡುಗೆಯನ್ನು ದಿಢೀರ್ ತಯಾರಿಸಲು ಸಾಂಪ್ರದಾಯಿಕ  ಮಸಾಲಾ ಮಿಶ್ರಣಗಳ ಶ್ರೀಮಂತ ಪರಂಪರೆಯನ್ನು ಇದು ಮನೆ ಮನೆಗೆ ತರುತ್ತದೆ. ಇದರಲ್ಲಿ  ತಯಾರಾಗುವ ಸಿದ್ದ ತಿನಿಸುಗಳು ಗ್ರಾಹಕರ ನಾಲಿಗೆಗೆ ರುಚಿಕರವಾಗಿ ಧೀರ್ಘಕಾಲದವರೆಗೂ ಉಳಿಸುತ್ತದೆ. ಶ್ರೀಚಕ್ರ ಫುಡ್ಸ್ ಅಂಡ್ ಬಿವರೇಜಸ್ (ಪ್ರೈ) ಲಿ. ಸಂಸ್ಥೆಯ ‘ಓಗರ’ ಮಾಲೀಕ ರಘುನಾಥ್ ರಾಷ್ಟದಲ್ಲಿ ಅಂದಾಜು ೫೦ ಸಾವಿರ ಓಗರ ಮಳಿಗೆ ಸ್ಥಾಪಿಸಲು ನಿರ್ಧರಿಸಲಾಗಿದೆ.  ರಾಜ್ಯದಲ್ಲಿ ೮ ಸಾವಿರ ಮಳಿಗೆಗಳು, ....

473

Read More...

Ranganayaki.Film Trailer Rel.

Tuesday, September 03, 2019

ಪ್ರಚಲಿತ  ಶೋಷಿತ ಮಹಿಳೆಯ ಪ್ರತಿನಿಧಿ ರಂಗನಾಯಕಿ        ಅನುಗಾಲದಿಂದಲೂ ಹೆಣ್ಣು ಮಕ್ಕಳಿಗೆ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿ ಅತ್ಯಾಚಾರವಾಗುತ್ತಿದೆ. ಈ ಪದವೇ ಹೆಣ್ಣಿಗೆ ಶಿಕ್ಷೆಯಾಗಿದೆ ಎಂದು ಖಾರವಾಗಿ ತಾರ ಮಾತನಾಡಲು ‘ರಂಗನಾಯಕಿ’ ಚಿತದ ಟ್ರೈಲರ್ ಬಿಡುಗಡೆ ಕಾಯಕ್ರಮವು ವೇದಿಕೆಯಾಗಿತ್ತು. ಒಂಬತ್ತು ತಿಂಗಳು  ಗರ್ಭದಲ್ಲಿ ಭಾರವನ್ನು ಹೊತ್ತುಕೊಂಡು, ನಂತರವು ಅದರ ನೊಗವನ್ನು ಹೊರುತ್ತಲೆ ಇರುತ್ತಾಳೆ.   ಎಲ್ಲಿಯವರೆಗೂ ಇಂತಹ ದೌರ್ಜನ್ಯ ನಿಲ್ಲವುದಿಲ್ಲವೋ ಅಲ್ಲಿಯವರೆಗೂ ಸ್ರೀಯರ ನಂಜು  ಕಡಿಮೆಯಾಗುವುದಿಲ್ಲ್ಲವೆಂದು ಅಭಿಪ್ರಾಯ ಪಟ್ಟರು.        ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ....

428

Read More...

Vishnupriya.Film Press Meet.

Tuesday, September 03, 2019

ಹಲವು  ವಿಶೇಷತೆಗಳ  ವಿಷ್ಣು ಪ್ರಿಯ         ನೂತನ ಚಿತ್ರ ‘ವಿಷ್ಣು ಪ್ರಿಯ’ದಲ್ಲಿ  ಒಂಬತ್ತು  ಔನ್ನತ್ಯಗಳು ಇರುವುದರಿಂದ  ಸುದ್ದಿಯಾಗಲು ಕಾರಣವಾಗಿದೆ. ಮೊದಲನೆಯದಾಗಿ  ಹಿರಿಯ ನಿರ್ಮಾಪಕ ಕೆ.ಮಂಜು ಬ್ಯಾನರ್‌ದಲ್ಲಿ ೪೫ನೇ ಚಿತ್ರವಾಗಿದ್ದು, ಅವರ  ಹೃದಯದಿಂದ ಬಂದಂತ  ಶೀರ್ಷಿಕೆ, ಹಾಗೂ ಮೂರು ಭಾಷೆಯಲ್ಲಿ ಬರುವ ಸಾದ್ಯತೆ ಇದೆ.  ಎರಡನೆಯದಾಗಿ  ಪ್ರೀತಿ ಎಂದರೆ ಏನು ಎಂಬುದನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಪೋಷಕರಿಗೆ ಮಕ್ಕಳು ಯಾವ ರೀತಿ ಗೌರವ ಕೊಡಬೇಕು, ಹಿರಿಯರಾದವರು ಯುವ ಪ್ರೇಮಿಗಳಿಗೆ ಪ್ರೋತ್ಸಾಹ ನೀಡಬೇಕು.  ಕೃತಕವಲ್ಲದ ೯೦ರ ದಶಕದ ಪ್ರೀತಿ ಕತೆ, ಸಂಬಂದಗಳ ಮೌಲ್ಯಗಳು ....

456

Read More...

Vishnu Circle.Film Press Meet.

Tuesday, September 03, 2019

  ಚಿತ್ರಮಂದಿರದಲ್ಲಿ  ವಿಷ್ಣು  ಸರ್ಕಲ್         ಸಾಹಸ ಸಿಂಹ ಡಾ.ವಿಷ್ಣುವರ್ಧನ್  ಹೆಸರನ್ನು ಬಳಸಿಕೊಂಡು ಬಂದಿರುವ ಬಹುತೇಕ ಚಿತ್ರಗಳು  ಯಶಸ್ಸನ್ನು ಕಂಡಿದೆ. ಅದರ ಪಸೆಯಿಂದಲೇ ‘ವಿಷ್ಣು ಸರ್ಕಲ್’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಹಾಫ್ ಮೆಂಟಲ್ ನಿರ್ದೇಶನ ಮಾಡಿರುವ ಲಕ್ಷೀದಿನೇಶ್ ಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ಅಂತ ಉಪಶೀರ್ಷಿಕೆಯಲ್ಲಿ ಹೇಳಿರುವಂತೆ ಪ್ರತಿಯೊಬ್ಬರ ಜೀವನಾಂಶ ಸಾರುವ ಸಾರಾಂಶವಾಗಿದೆ. ಒಳ್ಳೆ ಕತೆಯನ್ನು ಬ್ಲೆಂಡ್ ಮಾಡಿ ಅದಕ್ಕೆ ಪ್ರಯೋಗಾತ್ಮಕ ಚಿತ್ರವಾಗುವಂತೆ ಸ್ಪರ್ಶ ನೀಡಲಾಗಿದೆ. ಹಿಂದಿನ ಸಿನಿಮಾದಲ್ಲಿ ಪ್ರೀತಿಯ ಹುಡುಕಾಟ ಏನೆಂಬುದನ್ನು ....

506

Read More...

Nanna Prakara.Film Success Meet.

Tuesday, September 03, 2019

ತೆಲುಗು, ತಮಿಳು, ಹಿಂದಿ  ಭಾಷೆಗೆ  ನನ್ನ  ಪ್ರಕಾರ          ಬಾಲಿವುಡ್, ಕಾಲಿವುಡ್, ಟಾಲಿವುಡ್ ಮತ್ತು ಮಾಲಿವುಡ್  ಉದ್ಯಮವು  ಸ್ಯಾಂಡಲ್‌ವುಡ್ ಕಡೆ ಗಮನ ಹರಿಸುತ್ತಿರುವುದು ಇಲ್ಲಿನ ಚಿತ್ರಗಳು ಅಲ್ಲಿಗೆ ಹೋಗುತ್ತಿರುವುದು ಹೆಮ್ಮೆಯ  ಬೆಳವಣಿಗೆಯಾಗಿದೆ. ಆ ಸಾಲಿಗೆ  ಎರಡು ವಾರದ ಹಿಂದೆ  ಬಿಡುಗಡೆಯಾದ ‘’ನನ್ನ ಪ್ರಕಾರ’ ಸಿನಿಮಾವು ಸೇರ್ಪಡೆಯಾಗಿದೆ. ಸೆಸ್ಪನ್ಸ್, ಥ್ರಿಲ್ಲರ್ ಕತೆಯಾಗಿದ್ದು, ನೋಡಿದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಚನೆ, ನಿರ್ದೇಶನ ಮಾಡಿರುವ ವಿನಯ್‌ಬಾಲಾಜಿ ಹೇಳುವಂತೆ ತಮಿಳು, ತೆಲುಗು ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿದೆ. ....

409

Read More...
Copyright@2018 Chitralahari | All Rights Reserved. Photo Journalist K.S. Mokshendra,