Padde Huli.Film Success Meet.

Tuesday, April 23, 2019

ಪಡ್ಡೆಹುಲಿ ಸಂತೋಷ, ಬೇಸರ       ಅದ್ದೂರಿ ಚಿತ್ರ ‘ಪಡ್ಡೆಹುಲಿ’ಗೆ ಜನರು ಫಿದಾ ಆಗಿರುವುದು ನಿಜ. ನೋಡದೆ ಇರುವವರಿಗೆ ಚಿತ್ರಮಂದಿರ  ಸಿಗುತ್ತಿಲ್ಲ ಮತ್ತು ಮಾಲ್‌ನವರು ಸರಿಯಾದ ಸಮಯದಲ್ಲಿ  ಪ್ರದರ್ಶನ ಮಾಡದೆ ಇರುವುದರಿಂದ ಗಳಿಕೆ ಕಡಿಮೆಯಾಗುತ್ತಿದೆ ಎಂದು ಹಿರಿಯ ನಿರ್ಮಾಪಕ ಕೆ.ಮಂಜು ಸಂತೋಷಕೂಟದಲ್ಲಿ  ಖೇದಗೊಂಡರು.  ಅವರು ಹೇಳುವಂತೆ  ಎಲ್ಲಾ ಪತ್ರ್ರಿಕೆಗಳಲ್ಲಿ ಒಳ್ಳೆ ವಿಮರ್ಶೆ ಬಂದಿದೆ. ಆದರೆ ಬುಕ್ ಮೈ ಷೋದವರು  ಸಿನಿಮಾದ ವಿಮರ್ಶೆ ಇಲ್ಲಿಯವರೆಗೂ  ಹಾಕಿಲ್ಲ. ಯಾಕೆ ಎಂಬ ಕಾರಣ ತಿಳಿಯದಾಗಿದೆ.  ಚಿತ್ರ ಚೆನ್ನಾಗಿ ಹೋದರೆ ಮುಂದುವರೆಸಬೇಕಾಗುತ್ತದೆಂದು ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಮಾಲೀಕರ ....

797

Read More...

Kanchana-3.Film Audio Rel.

Monday, April 22, 2019

ಪ್ರೇಕ್ಷಕರ ಎದುರು ಕಾಂಚನ-೩        ಕಾಂಚನಾ ಭಾಗ ೧ ಮತ್ತು ೨ ಬಿಡುಗಡೆಯಾಗಿ ಯಶಸ್ವಿಯಾಗಿತ್ತು.  ಹಿಂದಿನ ಎರಡು ಚಿತ್ರಗಳಲ್ಲಿ  ಚಂದನವನದ ತಾರೆಯರು  ಕಾಣಿಸಿಕೊಂಡಿದ್ದರು.  ಈಗ ಸಣ್ಣದೊಂದು ಬದಲಾವಣೆ ಎಂಬಂತೆ  ತಮಿಳು  ಕೋರಿಯೋಗ್ರಾಫರ್, ನಟ, ನಿರ್ದೇಶಕ, ನಿರ್ಮಾಪಕ ರಾಘವಲಾರೆನ್ಸ್  ಅವರು ಅಭಿನಯಿಸುವುದರ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ  ‘ಮುನಿ’ ೨.೪೫ ಗಂಟೆಯ ಸಿನಿಮಾವು ಕನ್ನಡದಲ್ಲಿ ‘ಕಾಂಚನ-೩’ ಹೆಸರಿನೊಂದಿಗೆ ಬಿಡುಗಡೆಯಾಗುತ್ತಿದೆ.  ಭಯ ಹುಟ್ಟಿಸುವ ಮತ್ತು ಅದನ್ನು ಮರೆಯಲು ಹಾಸ್ಯ ಇರುವ ಚಿತ್ರವೆಂದು ಹೇಳಿಕೊಂಡು ಕತೆಯ ಗುಟ್ಟನ್ನು  ಕಾಯ್ದುಕೊಂಡಿದೆ.  ಈಗಾಗಲೇ ಎರಡು ....

831

Read More...

Aasimkozilla.Film Title Rel.

Monday, April 22, 2019

 ನಿಘಂಟುದಲ್ಲಿ ಇಲ್ಲದ ಪದ ಸಿನಿಮಾದ ಶೀರ್ಷಿಕೆ

       ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಚಿತ್ರತಂಡವು ಏನಾದರೂ ವಿನೂತನ ಕಸರತ್ತು, ಉಪಾಯಗಳನ್ನು ಮಾಡುತ್ತಲೇ ಇರುತ್ತಾರೆ. ಇದರಲ್ಲಿ ಸಪಲರಾಗುವುದು ಬೆರಳಣಿಕೆಯಷ್ಟು ಮಾತ್ರ. ಆದರೆ ಪ್ರಯತ್ನ ಮಾತ್ರ ನಿಲ್ಲದೆ ಮುಂದುವರೆಯುತ್ತಲೆ ಇದೆ. ಈ ಸಾಲಿಗೆ  ‘ಆಸಿಂಕೋಜಿಲ್ಲ’ ಚಿತ್ರವು ಸೇರ್ಪಡೆಯಾಗಿದೆ. ನಿರ್ದೇಶಕರು ಕಲಾವಿದರಿಗೆ ಟೈಟಲ್, ಕತೆ ಹೇಳದೆ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಶೀರ್ಷಿಕೆ, ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮದಲ್ಲಿ ಎಲ್ಲವನ್ನು ಮಾದ್ಯಮದ ವರಾತದ ಮೇರೆಗೆ ಮಾಹಿತಿ ಹರಿಬಿಟ್ಟರು. 

952

Read More...

Ombhattane Adbutha.Film Press Meet.

Monday, April 22, 2019

ಸಾವಿನ ಮನೆಯಲ್ಲಿ ಹಾಸ್ಯ

    ಭೂತಯ್ಯನ ಮೊಮ್ಮಗ ಅಯ್ಯು ಚಿತ್ರವು ಸಾವಿನ ಮನೆಯಲ್ಲಿ ನಡೆಯುವ ಹಾಸ್ಯವನ್ನು ತೋರಿಸಿದ್ದರು. ಅದೇರೀತಿ ಎಂಬಂತೆ ‘ಒಂಬತ್ತನೇ ಅದ್ಬುತ’ ಸಿನಿಮಾದಲ್ಲಿ ಇದೇ ರೀತಿಯ ಕತೆ ಇದೆ.  ಉತ್ತರ ಕರ್ನಾಟಕ ಭಾಗದಲ್ಲಿ ವಯಸ್ಸಾದ ಮನುಷ್ಯ ಸತ್ತರೆ, ಶವದ ಮುಂದರೆ ಕಣ್ಣೀರು ಹಾಕುವವರು ಕಡಿಮೆ ಇರುತ್ತಾರೆ. ಅದನ್ನು ವೈನೋಧಿಕ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ  ಹಗರಿಬೊಮ್ಮನಹಳ್ಳಿಯ ಸಂತೋಷ್‌ಕುಮಾರ್‌ಬೆಟಗೇರಿ ರಚನೆ, ನಿರ್ದೇಶನ,ನಾಯಕ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. 

860

Read More...

Gara.Film Press Meet.

Monday, April 22, 2019

ಗರ  ಶೀರ್ಷಿಕೆ ಗೀತೆ ಬಿಡುಗಡೆ          ಹೆಸರಿನಿಂದಲೇ ಸದ್ದು ಮಾಡುತ್ತಿರುವ ‘ಗರ’ ಚಿತ್ರದ ಶೀರ್ಷಿಕೆ ಗೀತೆಯನ್ನು ಇತ್ತೀಚೆಗೆ ಮಾದ್ಯಮದವರಿಗೆ ತೋರಿಸಲಾಯಿತು. ನಿರ್ದೇಶಕ ಕೆ.ಆರ್.ಮುರಳಿಕೃಷ್ಣ ಮಾತನಾಡಿ, ಆರ್.ಕೆ.ನಾರಾಯಣ್ ವಿರಚಿತ  ಆಸ್ಟ್ರಾಲಜರ್ ಡೇ ಪುಸ್ತಕವನ್ನು ಓದಿ, ಅದರಲ್ಲಿ  ಸ್ಪೂರ್ತಿಗೊಂಡು ಸಿನಿಮಾಕ್ಕೆ ಕತೆ ಬರೆಯಲಾಗಿದೆ.  ಅದರಲ್ಲಿರುವ ಪ್ರಶ್ನೆ, ಉತ್ತರ ಹುಡುಕಿಕೊಂಡು ಹೋದಾಗ ಸಿಕ್ಕಿದ್ದೇ ಗರ. ಅದಕ್ಕಾಗಿ ‘ಅಂಕೆ ಇಲ್ಲದ ಪ್ರೇಮಕ್ಕೆ ಅಂಕಗಳ ಆಟ’ವೆಂದು ಉಪಶೀರ್ಷಿಕೆಯಲ್ಲಿ ಹೇಳಲಾಗಿದೆ.  ಟೈಟಲ್ ಗೀತೆಯು ಚಿತ್ರದ ಕುರಿತಾದ ಒಂದು ಏಳೆ ಸಾರಾಂಶವನ್ನು ಹೇಳುತ್ತದೆ.  ಹೊಸ ಕಲಾವಿದರ ಜೊತೆ ಹಳಬರ ....

787

Read More...

Krishna Garments.Film Press Meet.

Monday, April 22, 2019

ವಿಭಿನ್ನ  ಶೀರ್ಷಿಕೆ ಕೃಷ್ಣ ಗಾರ್ಮೆಂಟ್ಸ್          ಚಿತ್ರ-ವಿಚಿತ್ರ ಶೀರ್ಷಿಕೆಗಳನ್ನಿಟ್ಟುಕೊಂಡು ಸೆಟ್ಟೇರುತ್ತಿರುವ ಸಿನಿಮಾಗಳಿಗೇನು ಕೊರತೆಯಿಲ್ಲ. ಸಿನಿಮಾದ ಶೀರ್ಷಿಕೆ ವಿಭಿನ್ನವಾಗಿದ್ದರೆ ಬೇಗನೆ ಜನರ ಗಮನ ಸೆಳೆಯಬಹುದು ಎಂಬ ಸದುದ್ದೇಶದಿಂದ ಹಲವು ಚಿತ್ರಗಳು  ಆಕರ್ಷಕ ಹೆಸರುಗಳನ್ನು  ಇಡಲು  ಹಾತೊರೆಯುತ್ತಾರೆ. ಈಗ ಇದೇ ರೀತಿ ತಂಡವೂಂದು  ಟೈಟಲ್ ಮೂಲಕ ಗಮನ  ಸೆಳಯುವ ಪ್ರಯತ್ನ ಮಾಡಲಾಗಿ ಒಂದು ಹಂತದಲ್ಲಿ ಸಪಲರಾಗಿದ್ದಾರೆ. ಅದು ‘ಕೃಷ್ಣ ಗಾರ್ಮೆಟ್ಸ್’.  ಹೆಸರು ಕೇಳಿದರೆ ಗಾರ್ಮೆಂಟ್ಸ್ ಕತೆ ಇರಬಹುದೆಂದು ಭಾವಿಸಿದರೆ ನಿಮ್ಮ ಊಹೆ ಸ್ವಲ್ಪ ಮಟ್ಟಿ ಸರಿ ಅನಿಸುತ್ತದೆ.  ರಚನೆ, ಚಿತ್ರಕತೆ, ಸಾಹಿತ್ಯ, ....

861

Read More...

Rathna Manjari.Film Audio Rel.

Saturday, April 20, 2019

ಗುರುಗಳು, ಶಿಷ್ಯರ ಸಮ್ಮುಖದಲ್ಲಿ  ಹಾಡುಗಳ ಅನಾವರಣ        ನಾಗತ್ತಿಹಳ್ಳಿ ಚಂದ್ರಶೇಖರ್  ಸಾರಥ್ಯದ ಟೆಂಟ್ ಸಿನಿಮಾದ ವಿದ್ಯಾರ್ಥಿಗಳು ನಾಯಕ, ನಾಯಕಿ.  ಹಂಸಲೇಖಾ ಒಡೆತನದ ದೇಸಿ ಕಾಲೇಜಿನ ಹುಡುಗರು ಸಂಗೀತ ನಿರ್ದೇಶಕರು, ಸಾಹಿತಿಗಳು.  ಇವರಿಬ್ಬರ ಜುಗಲ್‌ಬಂದಿಯಿಂದ  ಸೆಸ್ಪನ್ಸ್, ಥ್ರಿಲ್ಲರ್ ಮಾದರಿಯ ‘ರತ್ನಮಂಜರಿ’ ಚಿತ್ರವು ಸಿದ್ದಗೊಂಡಿದೆ.  ಪ್ರಚಾರದ ಕೊನೆ ಹಂತವಾಗಿ ಸಿನಿಮಾದ ಧ್ವನಿಸಾಂದ್ರಿಕೆಯು ಲೋಕಾರ್ಪಣೆಗೊಂಡಿತು.  ಸರದಿಯಂತೆ ಎಲ್ಲರಿಗೂ ಮೈಕ್ ಲಭ್ಯವಾಯಿತು.        ಕಿಚ್ಚ ಸಿನಿಮಾದ ಸಂದರ್ಭದಲ್ಲಿ ಹಂಸಲೇಖಾರವರು ಬ್ಯುಸಿ ಇದ್ದರು. ಅವರಿಗೆ ಹದಿನೈದು ನಿಮಿಷ ಸಮಯ ....

953

Read More...

Karmoda Saridu.Film Press Meet.

Saturday, April 20, 2019

ಸಿನಿಮಾ  ಜೂಜು, ಗೆದ್ದರೆ ಸಂತೋಷ, ಬಿದ್ದರೆ ಬೇಸರ - ಮೇಷ್ಟ್ರು          ಹಿರಿಯ ನಿರ್ದೇಶಕ,ನಿರ್ಮಾಪಕ ನಾಗತ್ತಿಹಳ್ಳಿಚಂದ್ರಶೇಖರ್ ಅವರನ್ನು ಚಂದನವನದಲ್ಲಿ ಗೌರವದಿಂದ ಮೇಷ್ಟ್ರು ಎಂದು ಕರೆಯುತ್ತಾರೆ.  ಶಿಷ್ಯ ನಿರ್ದೇಶನ ಮಾಡಿರುವ ‘ಕಾರ್ಮೋಡ ಸರಿದು’ ಚಿತ್ರತಂಡಕ್ಕೆ  ಶುಭಹಾರೈಸಲು ಆಗಮಿಸಿದ್ದರು.  ಅವರು ಮಾತನಾಡುತ್ತಾ  ಟೆಂಟ್ ಸಿನಿಮಾ ಶುರುಮಾಡಿ ಹತ್ತು ವರ್ಷ ಕಳೆದಿದೆ. ನಮ್ಮ ಶಾಲೆಯಿಂದ ಸಾಕಷ್ಟು ವಿದ್ಯಾರ್ಥಿಗಳು ನಿರ್ದೇಶಕ, ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಒಂದು ಕಡೆ ಆತಂಕ, ಭಯ ಕಾಡುತ್ತಿದೆ. ಅದಕ್ಕೆ ಸಿನಿಮಾ ಎಂಬ ....

916

Read More...

Maaya Kannadi.Film Press Meet.

Saturday, April 20, 2019

ಸತ್ಯ  ಕತೆಯ  ಮಾಯಾ ಕನ್ನಡಿ         ನಿಜ ಜೀವನದ ಘಟನೆಗಳ ಚಿತ್ರಗಳನ್ನು ಜನರು ಇಷ್ಟ ಪಡುತ್ತಾರೆಂದು ಯಾವ  ಪುಣ್ಯಾತ್ಮ  ಹೇಳಿದರೋ ಅವರಿಗೊಂದು ಧೀರ್ಘದಂಡ ನಮಸ್ಕಾರಗಳು. ಅಂತಹ ಸಿನಿಮಾಗಳ ಸರಪಣಿಗೆ ಹೊಸ ಕೊಂಡಿ ‘ಮಾಯಾ ಕನ್ನಡಿ’ ಸೇರಿಕೊಳ್ಳುತ್ತದೆ.  ವಿದೇಶದಲ್ಲಿ ಬ್ಲೂವೆಲ್ ಆಟವೆಂಬುದು ಅಂದು ಪ್ರಸಿದ್ದಿಯಾಗಿದ್ದು, ಭಾರತದಲ್ಲೂ ಕೆಲವು ಕಾಲ ಚಾಲ್ತಿಯಲ್ಲಿ ಇತ್ತು.  ಇದರಿಂದ ಪ್ರೇರಿತರಾಗಿ ಸಾಕಷ್ಟು ಜನರು ಆತ್ಮಹತ್ಯಗೆ ಶರಣಾಗಿದ್ದರು.  ಸದ್ಯ ಎಲ್ಲಾ ಕಡೆ ಸದರಿ ಆಟವನ್ನು  ನಿಷೇಧಿಸಲಾಗಿದೆ.  ಇಂತಹುದೆ ಘಟನೆಗಳು  ಮತ್ತು ಕಾಲೇಜ್ ಅಂಗಳದಲ್ಲಿ   ನಡೆಯುವ ಕಪೋಲಕಲ್ಪತ ಕತೆಯನ್ನು  ಹೆಕ್ಕಿಕೊಂಡು ....

974

Read More...

Gara.Film News

Tuesday, April 16, 2019

ಮೇ ೩ರಂದು ‘ಗರ’ ಚಿತ್ರ ತೆರೆಗೆ    ೨೫ಫ಼್ರೇಂ ಫ಼ಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಗರ‘ ಚಿತ್ರ ಮೇ ೩ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.    ಕೆ.ಆರ್.ಮುರಳಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಾಗರ್ ಗುರುರಾಜ್ ಸಂಗೀತ ನೀಡಿದ್ದಾರೆ. ....

862

Read More...

Padde Huli.Releasing Press Meet.

Tuesday, April 16, 2019

ಪಡ್ಡೆ ಹುಲಿ  ಶುಕ್ರವಾರದಿಂದ  ಗರ್ಜನೆ  ಮಾಡಲಿದೆ          ಅದ್ದೂರಿ ಚಿತ್ರ ‘ಪಡ್ಡೆ ಹುಲಿ’ ಆರನೇ ಹಾಗೂ ಕೊನೆ ಬಾರಿ ಚಿತ್ರತಂಡವು  ಮಾಹಿತಿಗಳನ್ನು ಹಂಚಿಕೊಂಡಿತು.  ನಿರ್ದೇಶಕ ಗುರುದೇಶಪಾಂಡೆ ಮೈಕ್ ತೆಗೆದುಕೊಂಡು ರವಿ ಸರ್ ಅನಿಸಿದ್ದನ್ನು ನೇರವಾಗಿ ಸೆಟ್‌ನಲ್ಲಿ ಹೇಳುತ್ತಿದ್ದರು.  ಅವರ ಜೊತೆ ಕೆಲಸ ಮಾಡಬೇಕಂಬ ದೂಡ್ಡ ಕನಸು ಇದರ ಮೂಲಕ ಈಡೇರಿದೆ. ಹತ್ತು ಹಾಡುಗಳನ್ನು ಹಾಕಿಕೊಳ್ಳಲು ಅವರೇ ಪ್ರೇರಣೆಯಾಗಿದ್ದಾರೆ.  ಅಪ್ಪ ಮಗನ ಭಾವನೆಗಳ ದೃಶ್ಯಗಳು ಚೆನ್ನಾಗಿ ಬಂದಿದೆ. ಇವತ್ತಿನ ತಲಮಾರಿಗೆ ಒಳ್ಳೆಯ ಸಂದೇಶವನ್ನು ಹೇಳಲಾಗಿದೆ. ಚಿತ್ರಕ್ಕೆ ಮರುಗು ತರಲು ಪುನೀತ್‌ರಾಜ್‌ಕುಮಾರ್, ....

784

Read More...

Mahakavya.Film Press Meet.

Tuesday, April 16, 2019

                ಮಹಾಕಾವ್ಯ ನೋಡಲು ಐದು ಕಾರಣಗಳು       ಐತಿಹಾಸಿಕ, ಪೌರಾಣಿಕ, ಚಾರತ್ರಿಕ ಚಿತ್ರವೆಂದು ಸುದ್ದಿಯಾಗಿರುವ ‘ಮಹಾಕಾವ್ಯ’ ನೋಡಲು ಚಿತ್ರಕತೆ, ನಿರ್ದೇಶನ ಹಾಗೂ ದುಯೋರ್ಧನ ಪಾತ್ರ ಮಾಡಿರುವ ಶ್ರೀದರ್ಶನ್ ಐದು ಕಾರಣಗಳನ್ನು ನೀಡುತ್ತಾರೆ.      ಹತ್ತನೇ ಶತಮಾನದ ಸಾಹಿತ್ಯವಿದೆ. ವೈಭವದ ಸೆಟ್‌ಗಳು, ಶ್ರೀಮಂತ ಉಡುಗೆ ತೊಡುಗೆಗಳು ಕಣ್ಣಿಗೆ ಕಂಪು, ಹಿಂಪು, ತಂಪು ಕೊಡುತ್ತದೆ. ಹಳಗನ್ನಡದ ೩೯ ಕಾವ್ಯಗಳನ್ನು ಬಳಸಲಾಗಿದೆ. ರಾಜವೈಭವವನ್ನು ಮರುಕಳಿಸುತ್ತದೆ. ೫೮ ಗ್ರಂಥಗಳನ್ನು  ಓದಿ ಅದರಲ್ಲಿ ಪಂಪನ ಶಾಂತಿನಾಥಪುರಾಣ, ರನ್ನನ ಗದಾಯುದ್ದ ಮತ್ತು ಪೊನ್ನನ ಶಕ್ತಿ ಪುರಾಣದ ಭಾಗಗಳನ್ನು ....

925

Read More...

Kamar Film Factory Launches its First Ftv Fashion Calendar.

Monday, April 15, 2019

ತಾರಾಮಣಿಯರ  ಫ್ಯಾಷನ್  ಕ್ಯಾಲೆಂಡರ್        ಅಂತರರಾಷ್ಟ್ರೀಯ ಮಟ್ಟದ ಫ್ಯಾಷನ್‌ನ್ನು ಭಾರತೀಯರಿಗೆ ತಲುಪಿಸುವ ಪ್ರಯುಕ್ತ ೧೯೯೭ ರಲ್ಲಿ   ‘ಫ್ಯಾಷನ್ ಟಿವಿ’ಯು ಅತ್ಯತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಬೇರೆ ಯಾವ ಜಾಲತಾಣಗಳಲ್ಲೂ  ಸಿಗದ ಫ್ಯಾಷನ್ ಕುರಿತ ಮಾಹಿತಿಯನ್ನು ವಸ್ತುನಿಷ್ಟವಾಗಿ ನೀಡುವ ಏಕೈಕ ವಾಹಿನಿಯಾಗಿದ್ದು ಮಾಡ್ರನ್ ಜಗತ್ತಿನ ಅತ್ಯದ್ಬುತ ಚಿತ್ರಗಳು, ಪ್ರತ್ಯೇಕ ಮಾಹಿತಿಗಳೊಂದಿಗೆ  ವಿಶ್ವಮಟ್ಟದ  ಬ್ರಾಂಡ್‌ಗಳನ್ನು ತನ್ನತ್ತ ಸೆಳಯುತ್ತಿರುವ ವಾಹಿನಿ ಇದಾಗಿದೆ.  ಸದರಿ ವಾಹಿನಿಯಿಂದ ಪ್ರತಿ ವರ್ಷ ತಾರೆಯರು, ಮಾಡೆಲ್‌ಗಳ ಕ್ಯಾಲೆಂಡರ್‌ಗಳು ಬರುತ್ತಿದೆ. ....

876

Read More...

Kavacha.Film Success Meet.

Sunday, April 14, 2019

ಕವಚಗೆ ತಲೆದೂಗಿನ ಪ್ರೇಕ್ಷಕ ಮಹಾಪ್ರಭುಗಳು           ಹದಿನಾಲ್ಕು ವರ್ಷದ ನಂತರ ಶಿವರಾಜ್‌ಕುಮಾರ್ ಅಭಿನಯಿಸಿರುವ ರಿಮೇಕ್ ಚಿತ್ರ ‘ಕವಚ’ಕ್ಕೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂತೋಷಕೂಟದಲ್ಲಿ ಮಾತನಾಡಿದ ವಸಿಷ್ಟಸಿಂಹ   ಪ್ರೇಕ್ಷಕರು ಮೆಚ್ಚಿಕೊಂಡರೆ ಚಿತ್ರಕ್ಕೆ ನಿಜವಾದ ಬೆಲೆ ಸಿಗುತ್ತದೆ.  ಗೋಧಿ ಬಣ್ಣದಲ್ಲಿ ಖಳನಾಗಿ ಅಭಿನಯಿಸಿದ್ದು, ಅದರ ಛಾಯೆ ಇಲ್ಲಿಯೂ ಮುಂದುವರೆದಿದೆ.  ಖಳನಟ ಸತ್ತಾಗ ಕಣ್ಣೀರು ಹಾಕಿದ್ದು ಮೊದಲು ಎನ್ನಬಹುದು.  ಕುಟುಂಬಸಮೇತ ಹೋಗುತ್ತಿದ್ದಾರೆ. ಸಾರ್ವತ್ರಿಕ ಕತೆಯಾಗಿದ್ದರಿಂದ ಎಲ್ಲರಿಗೂ ಇಷ್ಟವಾಗಿದೆ. ಒಳ್ಳೆ ಉದ್ದೇಶ,  ಸ್ವಾವಲಂಬಿ ಬದುಕನ್ನು ....

842

Read More...

Bramhachari.Film Pooja.

Sunday, April 14, 2019

ಬ್ರಹ್ಮಚಾರಿ ನೀನಾಸಂ ಸತೀಶ್

        ಅಯೋಗ್ಯನಾಗಿ  ಜನರ ಮನಸ್ಸಿನಲ್ಲಿ ತಳವೂರಿದ್ದ ನೀನಾಸಂ ಸತೀಶ್ ‘ಬ್ರಹ್ಮಚಾರಿ’ ಯಾಗಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಮಗುವಿನ ತಂದೆಯಾಗಿ ಹೀಗೇಕೆ  ಎಂದು ಪ್ರಶ್ಮೆ ಕೇಳುವ ಮೊದಲೇ ಉತ್ತರ ಹೇಳಲಾಗುತ್ತಿದೆ. ಅವರು ಇದೇ ಹೆಸರಿನ ಚಿತ್ರವೊಂದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಉಪ ಶೀರ್ಷಿಕೆಯಲ್ಲಿ ನೂರು ಪರ್ಸೆಂಟ್ ವರ್ಜಿನ್ ಅಂತ ಹೇಳಿಕೊಂಡಿದ್ದಾರೆ. ಲೈಬ್ರೆರಿಯನ್ ಪಾತ್ರದಲ್ಲಿ ಅದಿತಿಪ್ರಭುದೇವ ನಾಯಕಿ.  ಕತೆಯಲ್ಲಿ ನಾಯಕನ ಪಾತ್ರಧಾರಿ ಬ್ರಹ್ಮಚಾರಿಯಾದಾಗ ಆತನ ಬದುಕಿನಲ್ಲಿ  ಹಲವು ರೀತಿಯ ಪಯಣಗಳು ಬರುತ್ತವೆ. 

849

Read More...

AMG Productions and BOSS Associates.

Friday, April 12, 2019

ಅಶ್ವಿನಿಗೌಡ  ಕನಸು  ನನಸಾಯ್ತು        ನಟಿ  ಅಶ್ವಿನಿಗೌಡ  ‘ವಾರಸುದಾರ’ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿಕೊಂಡು,  ಒಂದಷ್ಟು ಚಿತ್ರಗಳಲ್ಲಿ ನಾಯಕನಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು.  ಆ ಸಂಧರ್ಭದಲ್ಲಿ ತನ್ನಂತೆ ಹೊಸ ಕಲಾವಿದರು, ತಂತ್ರಜ್ಘರು  ಅವಕಾಶಕ್ಕಾಗಿ ಅಲೆದಾಡುತ್ತಿದ್ದನ್ನು ಕಂಡು  ಇಂತಹವರಿಗೆ ಏನಾದರೂ ಮಾಡಬೇಕೆಂಬ  ತುಡಿತ ಹದಿನೈದು ವರ್ಷದಿಂದಲೇ ಮನಸ್ಸಿನಲ್ಲಿ ಕಾಡುತ್ತಿತ್ತು.  ಈ ಮಧ್ಯೆ  ಮದುವೆ, ಮಕ್ಕಳು ಅಂತ ಸಮಯ ತೆಗೆದುಕೊಂಡು ಮುಂದೆ ಅಕ್ಕ, ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.  ನಂತರ ಕನ್ನಡ ರಕ್ಷಣಾ ವೇದಿಕೆಯಲ್ಲಿ  ಸಕ್ರಿಯ ಕಾರ್ಯಕರ್ತೆಯಾಗಿ  ಸದ್ಯ ರಾಜ್ಯ ಮಹಿಳಾ ಘಟಕದ ....

2580

Read More...

Bell Bottom.Film 50 Days Success Meet.

Tuesday, April 09, 2019

ಬೆಲ್ ಬಾಟಂ ೫೦  ನಾಟ್‌ಔಟ್         ರೆಟ್ರೋ ಶೈಲಿಯ ‘ಬೆಲ್ ಬಾಟಂ’ ಯಶಸ್ವಿ ಐವತ್ತು ದಿನಗಳನ್ನು ಪೂರೈಸಿ ಮುಂದುವರೆಯುತ್ತಿದೆ. ಇದಕ್ಕಾಗಿ ಮಾದ್ಯಮದವರಿಗೆ ಥ್ಯಾಂಕ್ಸ್ ಹೇಳಲು ನಿರ್ಮಾಪಕರು  ಸಂತೋಷಕೂಟವನ್ನು ಏರ್ಪಾಟು ಮಾಡಿದ್ದರು.  ಎಲ್ಲರ ಸಂತಸದ ಮಾತುಗಳು ನಿಮಗಾಗಿ ಸಾದರಪಡಿಸಲಾಗುತ್ತಿದೆ. ಜಯತೀರ್ಥ, ನಿರ್ದೇಶಕ:  ಎಲ್ಲರ ಶಕ್ತಿಯಿಂದ ಬೆಲ್‌ಬಾಟಂ ಎಂಬ ಸುಂದರ ಕಲಾಕೃತಿ ಸಿದ್ದಗೊಂಡಿತು.  ಇದನ್ನು ಜನರಿಗೆ ಮಾದ್ಯಮದವರು  ಆಹ್ವಾನಪತ್ರ್ರಿಕೆ ಎನ್ನುವಂತೆ ಮೂಲೆ ಮೂಲೆಗಳಲ್ಲಿ ಸುದ್ದಿಯನ್ನು ತಲುಪಿಸಿದರು.  ಇಲ್ಲಿಯತನಕ ಸುಖಕರ ಪಯಣದಲ್ಲಿ ....

875

Read More...

Kavalu Daari.Film Rel Press Meet.

Monday, April 08, 2019

ಕವಲುದಾರಿಯು  ಪ್ರಸಕ್ತ  ರಾಜಕೀಯಕ್ಕೆ  ಸಮಂಜಸವಾಗಿದೆ              ದೇಶಕ್ಕೆ  ಹೊಸ ನಾಯಕನನ್ನು ಆರಿಸಲು ಚುನಾವಣೆ ನಡೆಯಲಿದೆ.  ವಿನೂತನ  ಕತೆ ಹೊಂದಿರುವ ‘ಕವಲುದಾರಿ’ ಚಿತ್ರದಲ್ಲಿ ಬರುವ ಸನ್ನಿವೇಶಗಳು  ಪ್ರಸ್ತುತ ರಾಜಕೀಯ ಚುನಾವಣೆಗೆ ಸಮಂಜಸವಾಗಲಿದೆ ಎಂಬುದಾಗಿ  ರಚನೆ, ನಿರ್ದೇಶನ ಮಾಡಿರುವ ಹೇಮಂತ್‌ರಾವ್ ಹೇಳಿಕೊಂಡಿದ್ದಾರೆ.   ಮರ್ಡರ್ ಮಿಸ್ಟರಿ ಹಿನ್ನಲೆಯಲ್ಲಿ  ಸಾಗುವ ಕತೆಯ ಜೊತೆಗೆ  ಸಮಾಜದಲ್ಲಿ ಪೋಲೀಸ್ ಅಧಿಕಾರಿಗಳಿಗೆ ಯಾವ ಸ್ಥಾನ ಇದೆ. ಸಮಾಜವು ಇವರನ್ನು ಹೇಗೆ ನೋಡುತ್ತದೆ. ಇಂತಹ ಕ್ಲಾಸಿಕ್ ಅಂಶಗಳು ಇರುವುದು ಪ್ಲಸ್ ಪಾಯಿಂಟ್ ಆಗಿದೆ.  ಪ್ರಚಾರದ ಸಲುವಾಗಿ ವಿಭಿನ್ನ ....

817

Read More...

Virura.Childrens Film Press Meet.

Monday, April 08, 2019

ಚಿತ್ರಮಂದಿರದಲ್ಲಿ ವಿರುಪಾ ಪ್ರತ್ಯಕ್ಷ        ವಿನೂತನ ‘ವಿರುಪಾ’ ಮಕ್ಕಳ ಚಿತ್ರವನ್ನು ಸಂಪೂರ್ಣ ಹಂಪಿ ಸುತ್ತಮುತ್ತ ಸೆರೆಹಿಡಿಯಲಾಗಿದೆ. ವಿನ್ಸೆಂಟ್, ರುಸ್ತುಂ ಮತ್ತು ಪಾಕ್ಷ ಮೂವರ ಚಿಣ್ಣರ ಕತೆಯಾಗಿದ್ದರಿಂದ ಹೆಸರಿನ ಮೊದಲ ಅಕ್ಷರವನ್ನು ಬಳಸಿಕೊಂಡು ಶೀರ್ಷಿಕೆ ಇಡಲಾಗಿದೆ.  ಇದರಲ್ಲಿ ಒಬ್ಬನು ಕುರುಡ,  ಮತ್ತೋಬ್ಬ ಮೂಕನಾಗಿದ್ದು, ಇವರೊಂದಿಗೆ ಪುಟ್ಟ ಹುಡುಗಿ  ಇರುತ್ತಾಳೆ.  ಹಂಪಿಯಲ್ಲಿ ಗೈಡ್ ಆಗಿರುವ ಮಂಜುವಿಗೆ  ತಮ್ಮ ಮೂಕನನ್ನು ಚೆನ್ನಾಗಿ ಓದಿಸಬೇಕೆಂದು ಸಿಟಿಗೆ ಕಳುಹಿಸುತ್ತಾನೆ. ಅಲ್ಲಿನ  ವಾತವರಣ, ಒತ್ತಡಗಳು  ಸರಿಹೊಂದದೆ  ತಪ್ಪಿಸಿಕೊಂಡು ಬರುವಾಗ ದಾರಿಯಲ್ಲಿ ಕುರುಡನ ಪರಿಚಯವಾಗಿ ಅವನೊಂದಿಗೆ ಹುಟ್ಟಿದ ....

791

Read More...

Trayambakam.Film Press Meet.

Monday, April 08, 2019

ತ್ರಯಂಬಕಂದಲ್ಲಿ ಅಚ್ಚರಿಗಳ ಗುಚ್ಚ          ಶಿವನ ಮೂರನೇ ಕಣ್ಣು ಅಂತ ಉಪ ಶೀರ್ಷಿಕೆಯಲ್ಲಿ ಹೇಳಿಕೊಂಡಿರುವ  ‘ತ್ರಯಂಬಕಂ’   ಚಿತ್ರವು  ಬಿಡುಗಡೆ ಸನಿಹದಲ್ಲಿರುವ ಕಾರಣ ಕೊನೆಬಾರಿ ತಂಡವು ಮಾದ್ಯಮದ ಎದುರು ಹಾಜರಿದ್ದು ಮತ್ತಷ್ಟು  ಮಾಹಿತಿಗಳನ್ನು  ಹಂಚಿಕೊಂಡಿತು.        ನಾಯಕಿ ಅನುಪಮಗೌಡ ಹೇಳುವಂತೆ  ರಾಘಣ್ಣನ ಮಗಳಾಗಿ  ಕಾಣಸಿಕೊಂಡಿದ್ದೇನೆ.  ಜಾಸ್ತಿ ಸಂಭಾಷಣೆ ಇರುವುದರಿಂದ ನಟಿಸಲು ಕಷ್ಟವಾಯಿತು.  ಅಪ್ಪ-ಮಗಳ ಬಾಂದವ್ಯ, ಅದಕ್ಕೂ ಮೀರಿದ ಸಾಕಷ್ಟು ವಿಷಯಗಳು ಇದೆ ಎಂದರು.  ದೇವರು ಇದ್ದಾನೆ. ಆದರೆ ದೇವರ ಸಿನಿಮಾ ಆಗಿರುವುದಿಲ್ಲವೆಂದು ಶಿವಮಣಿ ಬಣ್ಣನೆ ಮಾಡಿದ್ದರು. ಶೇಕಡ ಎಂಬತ್ತರಷ್ಟು ಸಿತಾರ್ ....

825

Read More...
Copyright@2018 Chitralahari | All Rights Reserved. Photo Journalist K.S. Mokshendra,