*ಅಮೆಜಾನ್ ಪ್ರೈಂನಲ್ಲಿ ಕನ್ನಡ ಸೇರಿ ಮೂರು ಭಾಷೆಗಳಲ್ಲಿ MMOF* ಆರ್ಆರ್ಆರ್ ಪ್ರೊಡಕ್ಷನ್ಸ್ ಮತ್ತು ಜೆಕೆ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಸಿದ್ಧವಾಗಿರುವ MMOF ಚಿತ್ರ ಓಟಿಟಿಯಲ್ಲಿ ಬಿಡುಗಡೆ ಆಗಿದೆ. ಮೂಲ ತೆಲುಗಿನ ಈ ಸಿನಿಮಾ ತಮಿಳು ಮತ್ತು ಕನ್ನಡಕ್ಕೆ ಡಬ್ ಆಗಿ ಅಮೆಜಾನ್ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿದೆ. ಯೆನ್ ಎಸ್. ಸೀ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಜೆ ಡಿ ಚಕ್ರವರ್ತಿ ನಾಯಕನಾಗಿ ನಟಿಸಿದ್ದಾರೆ. ಫೆಬ್ರವರಿ 24ರಂದು ಚಿತ್ರಮಂದಿರದಲ್ಲಿ ತೆರೆಕಂಡಿದ್ದ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ MMOF ಚಿತ್ರ, ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಇದೀಗ ಓಟಿಟಿಗೆ ಲಗ್ಗೆ ಇಟ್ಟಿದೆ. ಚಿತ್ರಮಂದಿರವೊಂದರಲ್ಲಿ ....
*ಪ್ರತಿಷ್ಠಿತ ಕಾನ್ ಫೆಸ್ಟಿವಲ್ಗೆ ದೇವರ ಕನಸು* *- ಮಿಲೇನಿಯಮ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣ* *- ಸುರೇಶ್ ಲಕ್ಕೂರ್ ನಿರ್ದೇಶನ* ಮಿಲೇನಿಯಮ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ದೇಶಕ ಸುರೇಶ್ ಲಕ್ಕೂರ್ ನಿರ್ದೇಶನದಲ್ಲಿ ತಯಾರಾದ ದೇವರ ಕನಸು ಸಿನಿಮಾ ಇದೀಗ ಪ್ರತಿಷ್ಠಿತ ಕಾನ್ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ. ಸಾಮಾಜಿಕ ಸಂದೇಶ ಸಾರುವ ಈ ಸಿನಿಮಾದಲ್ಲಿ 12 ವರ್ಷದ ಬಾಲಕನ ಸೈಕಲ್ ಪಡೆದುಕೊಳ್ಳುವ ಕನಸಿನ ಸುತ್ತ ನಿರ್ದೇಶಕರು ಕಥೆ ಹೆಣೆದಿದ್ದಾರೆ. ಸ್ವಂತ ಸೈಕಲ್ ಖರೀದಿಸಿ ಊರ ಸೈಕಲ್ ರೇಸ್ನಲ್ಲಿ ಗೆಲುವು ಸಾಧಿಸುವುದು ಆತನ ಮುಖ್ಯ ಉದ್ದೇಶ. ಅದನ್ನು ಈಡೇರಿಸಿಕೊಳ್ಳಲು ಬಾಲಕ ಏನೆಲ್ಲ ಹರಸಾಹಸ ಮಾಡುತ್ತಾನೆ ಎಂಬುದೇ ದೇವರ ಕನಸು ಚಿತ್ರದ ....
"ಮೊಗ್ಗಿನ ಮನಸ್ಸು" ಚಿತ್ರದ ನಂತರ ನಿರ್ದೇಶಕ ಶಶಾಂಕ್, ಮತ್ತೊಮ್ಮೆ ಹೊಸ ಪ್ರತಿಭೆಗಳೊಂದಿಗೆ ಚಿತ್ರ ನಿರ್ದೇಶಿಸಲು ಸಜ್ಜಾಗಿದ್ದಾರೆ. "ಶಶಾಂಕ್ ಸಿನೆಮಾಸ್" ಸಂಸ್ಥೆಯಡಿ, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರದ ಮುಖಾಂತರ, "ಪ್ರವೀಣ್" ಎಂಬ ಹೊಸ ನಾಯಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ವೈದ್ಯಕೀಯ ಪದವೀಧರರಾದ ಪ್ರವೀಣ್, ಹೊಸಪೇಟೆ ಮೂಲದವರಾಗಿದ್ದು, ನಟನಾಗುವ ಆಸಕ್ತಿಯಿಂದ ಅದಕ್ಕೆ ಬೇಕಾಗುವ ಎಲ್ಲಾ ತರಬೇತಿಗಳನ್ನು ಪಡೆದು ಬೆಳ್ಳಿತೆರೆ ಏರಲು ಸಜ್ಜಾಗಿದ್ದಾರೆ.
ಏಪ್ರಿಲ್ 30 ರಂದು *ಬರ್ಕ್ಲಿ* ಚಿತ್ರದ ಅದ್ದೂರಿ ಟೀಸರ್ ಬಿಡುಗಡೆ. ವಿಭಿನ್ನ ಕಥಾಹಂದರ ಹೊಂದಿರುವ "ಬರ್ಕ್ಲಿ" ಚಿತ್ರದ ಅದ್ದೂರಿ ಟೀಸರ್ ಏಪ್ರಿಲ್ 30 ರ ಸಂಜೆ 5 ಗಂಟೆಗೆ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗುತ್ತಿದೆ. ಸಂತೋಷ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆನೇಕಲ್ ಬಾಲರಾಜ್ ಅವರು ನಿರ್ಮಿಸುತ್ತಿರುವ ಬರ್ಕ್ಲಿ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಪ್ರಥಮಪ್ರತಿ ಸಿದ್ದವಾಗಲಿದೆ. ಕರಿಯ, ಗಣಪ, ಕರಿಯ ೨ ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಅದ್ದೂರಿ ಚಿತ್ರ "ಬರ್ಕ್ಲಿ". ಉತ್ತಮ ಮನೋರಂಜನೆಯ ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ಅವರೆ ಕಥೆ, ಚಿತ್ರಕಥೆ ಹಾಗೂ ....
"ಸೂಪರ್ ಸ್ಟಾರ್" ಜೊತೆ ಸುಂದರಂ ಮಾಸ್ಟರ್ . ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸುತ್ತಿರುವ "ಸೂಪರ್ ಸ್ಟಾರ್" ಚಿತ್ರದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಸುಂದರಂ ಮಾಸ್ಟರ್ (ಪ್ರಭುದೇವ ಅವರ ತಂದೆ) ಅಭಿನಯಿಸಿದ್ದಾರೆ. 86 ರ ವಯಸ್ಸಿನಲ್ಲೂ ಉತ್ಸಾಹದಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಸುಂದರಂ ಮಾಸ್ಟರ್, ಈ ಚಿತ್ರದಲ್ಲೂ ನೃತ್ಯ ನಿರ್ದೇಶಕನ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇವರ ಅಭಿನಯದ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಿತು. ಈ ವಯಸ್ಸಿನಲ್ಲೂ ಯಾರಿಗೂ ಕಮ್ಮಿ ಇಲ್ಲದ ಹಾಗೆ ನಟಿಸಿರುವ ಸುಂದರಂ ಮಾಸ್ಟರ್ ಚಿತ್ರೀಕರಣದ ವೇಳೆ ಪಾಲ್ಗೊಂಡ ಕೆಲವು ಸನ್ನಿವೇಶಗಳನ್ನು ಚಿತ್ರತಂಡ ....
ಏಪ್ರಿಲ್ 10ರಂದು *ಅರ್ಜುನ್ ಗೌಡ* ಚಿತ್ರದ ಟ್ರೇಲರ್ ಬಿಡುಗಡೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅದ್ದೂರಿ ಚಿತ್ರಗಳನ್ನು ನಿರ್ಮಿಸಿ ಹೆಸರಾದವರು ನಿರ್ಮಾಪಕ ರಾಮು. ಅದರಲ್ಲೂ ಆಕ್ಷನ್ ಚಿತ್ರಗಳ ನಿರ್ಮಾಣದಲ್ಲಿ ಈ ಸಂಸ್ಥೆ ತನ್ನದೇ ಆದ ಹೆಸರು ಮಾಡಿದೆ. ಪ್ರಸ್ತುತ ರಾಮು ಫಿಲಂಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ "ಅರ್ಜುನ್ ಗೌಡ" ಚಿತ್ರ ಕೂಡ ಆಕ್ಷನ್ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಮೈನವಿರೇಳಿಸುವ ಸಾಹಸ ಸನ್ನಿವೇಶಗಳಿರುವ ಈ ಚಿತ್ರದ ನಾಯಕನಾಗಿ ಪ್ರಜ್ವಲ್ ದೇವರಾಜ್ ಅಭಿನಯಿಸಿದ್ದಾರೆ. ಅಪಾರ ವೆಚ್ಚದಲ್ಲಿ ,ಅದ್ದೂರಿ ತಾರಾಗಣದೊಂದಿಗೆ ನಿರ್ಮಾಣವಾಗಿರುವ ಅರ್ಜುನ್ ಗೌಡ ಚಿತ್ರದ ಟ್ರೇಲರ್ ಏಪ್ರಿಲ್ 10 ರಂದು ಆನಂದ್ ಆಡಿಯೋ ಯೂಟ್ಯೂಬ್ ....
*ಜಾನಿ ವಾಕರ್ನಲ್ಲಿ ರಾಗಿಣಿ ಪೋಲೀಸ್ ಅಧಿಕಾರಿ* ಯುವ ನಿರ್ದೇಶಕ ವೇದಿಕ್ವೀರಾ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಜಾನಿ ವಾಕರ್ ಒಂದು ಕ್ರೈಮ್, ಆ್ಯಕ್ಷನ್, ಥ್ರಿಲ್ಲರ್ ಕಥಾಹಂದರ ಇರುವ ಚಲನಚಿತ್ರ. ಈ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಮಲ್ಲೇಶ್ವರಂನ ಎಸ್ಆರ್ವಿ ಥಿಯೇಟರಿನಲ್ಲಿ ನೆರವೇರಿತು. ರಂಜನ್ಹಾಸನ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಒಬ್ಬ ಪೋಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹಳ ದಿನಗಳ ನಂತರ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ನಟಿ ರಾಗಿಣಿ ಅವರೀಗ ಹಲವಾರು ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ರಂಜನ್ ಹಾಸನ್ ....
*ಚಿತ್ರೀಕರಣ ಮುಗಿಸಿದ ತಾಜ್ಮಹಲ್-೨* ಈ ಹಿಂದೆ ಡೇಂಜರ್ಜೋನ್, ನಿಶ್ಯಬ್ಧ-೨, ಅನುಷ್ಕದಂಥ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ದೇವರಾಜಕುಮಾರ್ ಅವರ ನಿರ್ದೇಶನದ ತಾಜ್ಮಹಲ್-೨ ಚಿತ್ರದ ಚಿತ್ರೀಕರಣ ಇದೀಗ ಮುಕ್ತಾಯವಾಗಿದೆ. ಬೆಂಗಳೂರಿನ ಹೆಚ್ಎಂಟಿ ಏರಿಯಾದಲ್ಲಿ ಸೆಟ್ ಹಾಕಿ ಜೀವ ಬಿಡುವೆ ನಿನಗಾಗಿ ಎಂಬ ಹಾಡು ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆಸುವುದರೊಂದಿಗೆ ಚಿತ್ರೀಕರಣಕ್ಕೆ ಮಂಗಳ ಹಾಡಲಾಗಿದೆ. ಇದೊಂದು ಪಕ್ಕಾ ಲವ್ ಅಂಡ್ ಎಮೋಷನಲ್ ಕಥಾಹಂದರ ಇರುವ ಚಿತ್ರವಾಗಿದ್ದು, ದೇವರಾಜ್ಕುಮಾರ್ ಅವರೇ ಕಥೆ, ಚಿತ್ರಕಥೆ ರಚಿಸಿದ್ದಾರೆ. ಚಿತ್ರಕ್ಕೆ ವೀನಸ್ಮೂರ್ತಿ ಅವರ ಛಾಯಾಗ್ರಹಣವಿದೆ. ಈ ಚಿತ್ರದಲ್ಲಿ ದೇವರಾಜ್ಕುಮಾರ್ ಅವರೇ ನಾಯಕರಾಗಿದ್ದು, ....
*ಗೋವಿಂದ ಗೋವಿಂದ ಚಿತ್ರದ ಆಡಿಯೋ ಬಿಡುಗಡೆ* *-ಕಾಮಿಡಿ - ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ಚಿತ್ರ ಏಪ್ರಿಲ್ 16ಕ್ಕೆ ಚಿತ್ರ ಬಿಡುಗಡೆ* ಶೈಲೇಂದ್ರ ಪ್ರೊಡಕ್ಷನ್ಸ್, ಎಲ್.ಜಿ. ಕ್ರಿಯೇಷನ್ಸ್, ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ನಿರ್ಮಿಸಿರುವ "ಗೋವಿಂದ ಗೋವಿಂದ" ಚಿತ್ರದ ಆಡಿಯೋ ಜ್ಯೂಕ್ ಬಾಕ್ಸ್ ಬಿಡುಗಡೆ ಸಮಾರಂಭ ಸೋಮವಾರ ನೆರವೇರಿತು. ಪುಷ್ಕರ್ ಫಿಲಂಸ್ ಮೂಲಕ ಹಾಡುಗಳು ಹೊರಬಂದಿದ್ದು, ಏ. 16ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಶೈಲೇಂದ್ರ ಬಾಬು, ಕಿಶೋರ್ ಎಂ.ಕೆ.ಮಧುಗಿರಿ ಹಾಗೂ ರವಿ ಆರ್ ಗರಣಿ ಈ ಚಿತ್ರದ ನಿರ್ಮಾಪಕರು. ಜನಾರ್ದನ್ ರಾಮ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ....
ಪುನೀತ್ ಪವರ್ಫುಲ್ಡೈಲಾಗ್ಗೆ ಅಭಿಮಾನಿಗಳು ಫಿದಾ ತುಂಬಾ ದಿನಗಳಿಂದ ಜಾತಕಪಕ್ಷಿಯಂತೆಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ‘ಯುವರತ್ನ’ ಟ್ರೈಲರ್ಅನಾವರಣಗೊಂಡಿದೆ.ಅದ್ದೂರಿಕಾರ್ಯಕ್ರಮದಲ್ಲಿತಂಡವು ಹಾಜರಿದ್ದುಖುಷಿಯನ್ನು ಹಂಚಿಕೊಂಡಿತು.ಈ ಸಂದರ್ಭದಲ್ಲಿ ಮಾತನಾಡಿದ ಪುನೀತ್ರಾಜ್ಕುಮಾರ್ಚಿತ್ರವುತೆರೆಗೆ ಬರಲು ಸನ್ನಿಹಿತವಾಗಿದ್ದರಿಂದ ಸಹಜವಾಗಿ ಖುಷಿ-ಭಯಎರಡುಆಗಿದೆ.ನಿರ್ದೇಶಕರು ಒಳ್ಳೆಯ ಕತೆಯನ್ನುತಂದಿದ್ದು, ಅವರ ಕನಸಿಗೆ ಜೀವತುಂಬಲು ಪ್ರಯತ್ನಿಸಿದ್ದೇನೆ. ಇನ್ನೆನಿದ್ದರೂ ನೀವುಗಳು ಸಿನಿಮಾ ....
ತ್ರಿಕೋನ ಸಂಗಮ ‘ವಾರೆಂಟ್’ ಚಿತ್ರದಕುರಿತಂತೆ ಮಾಹಿತಿಯು ಕಳೆದ ವರ್ಷ ಪ್ರಕಟವಾಗಿತ್ತು.ತ್ರಿಕೋನ ಪ್ರೇಮಕತೆ, ಸೆಸ್ಪೆನ್ಸ್, ಥ್ರಿಲ್ಲರ್ಇರಲಿದೆ. ಮೂರುಛಾಯಾಗ್ರಾಹಕರು ಮತ್ತು ಸಂಗೀತ ನಿರ್ದೇಶಕರು ಕೆಲಸ ಮಾಡಿರುವುದು ವಿಶೇಷ. ನಾವುಗಳು ದುಡ್ಡಿನ ಆಸೆಗೆ ತಪ್ಪು ಮಾಡುತ್ತೇವೆ.ಅದುಏನಾಗುತ್ತೆ.ಯಾರೆ ಶಕ್ತಿಶಾಲಿಯಾದವರುತಪ್ಪು ಮಾಡಿದರೂಅದುತಪ್ಪೇ.ಅದಕ್ಕೆ ಪ್ರತಿಫಲ ಅನುಭವಿಸಲೇ ಬೇಕು.ಒಂದುಘಟ್ಟದಲ್ಲಿಅಪರಾಧ ನಡೆಯುತ್ತದೆ.ಅದನ್ನುಯಾರು ಮಾಡಿದರು.ಮುಂದೇಅದುಸೇಡಿನಲ್ಲಿಸಾಗುತ್ತದೆ.ವಿದೇಶದಿಂದಎಲ್ಲರೂ ಸಿಲಿಕಾನ್ ಸಿಟಿಗೆ ಬರಲು ಮಹತ್ವದಕಾರಣಇರುತ್ತದೆ.ಇದೆಲ್ಲಕ್ಕೂ ಪೂರಕವಾಗುವಂತೆಅಡಿಬರಹದಲ್ಲಿ ದಿ ಮಿಷನ್ಅಂತ ಹೇಳಿಕೊಂಡಿದೆ.ಬೆಂಗಳೂರು ....
ಯಾರ್ ಮಗಟೀಸರ್ ಬಿಡುಗಡೆ ‘ಯಾರ್ ಮಗ’ ಸಿನಿಮಾದಅರ್ಧಕ್ಕೂ ಹೆಚ್ಚು ಚಿತ್ರೀಕರಣ ಮುಗಿದು, ಪ್ರಚಾರದ ಮೊದಲ ಹಂತವಾಗಿಟೀಸರ್ ಬಿಡುಗಡೆ ಮಾಡಿದೆ.೯೫-೨೦೦೦ ಇಸವಿಯಲ್ಲಿ ನಡೆಯುವರೌಡಿಸಂಕತೆಯಾಗಿದೆ.ಇದೊಂದು ಪೂರ್ಣ ಮನರಂಜನೆಕುರಿತಾಗಿದ್ದು, ಲವ್, ಆಕ್ಷನ್ ಮದರ್ ಸೆಂಟಿಮೆಂಟ್ ಹೀಗೆ ಎಲ್ಲಾ ಅಂಶಗಳೂ ಇರಲಿದೆ.ಅನಾಥಾಶ್ರಮದಿಂದ ಹೊರಬಂದ ಹುಡುಗನೊಬ್ಬ ಭೂಗತ ಲೋಕಕ್ಕೆ ಎಂಟ್ರಿಕೊಟ್ಟಾಗಅದರಲ್ಲಿ ಹೇಗೆ ಸಿಲುಕಿಕೊಳ್ಳುತ್ತಾನೆ.ಮುಂದೆಅದರಿಂದ ಹೇಗೆ ಹೊರಗೆ ಬರುತ್ತಾನೆಎಂಬುದುಒನ್ ಲೈನ್ ಸ್ಟೋರಿಯಾಗಿದೆ.ಜೊತೆಗೆ ಈಗಿನ ಹುಡುಗರಚಟುವಟಿಕೆ, ಡ್ರಗ್ಸ್ ಮಾಫಿಯಾ, ಮಾದಕಜಾಲದಲ್ಲಿ ಹುಡುಗರು ಹೋಗಿ ಯಾವರೀತಿ ಹಾಳಾಗುತ್ತಾರೆ ಎಂಬ ಅಂಶಗಳು ಸನ್ನಿವೇಶಗಳ ....
ಕ್ರಿಕೆಟ್ದಲ್ಲಿ ಬಳಸುವ ಪದಚಿತ್ರದ ಶೀರ್ಷಿಕೆ ಕ್ರಿಕೆಟ್ದಲ್ಲಿಆಟಗಾರನೊಬ್ಬಉತ್ತಮ ಸ್ಕೋರ್, ವಿಕೆಟ್,ಕ್ಯಾಚ್ ಪಡೆದುಕೊಂಡರೆಅವರನ್ನು ‘ಮ್ಯಾನ್ಆಫ್ ದಿ ಮ್ಯಾಚ್’ ಎಂದುಕರೆಯುತ್ತಾರೆ. ಇದನ್ನುಹೇಳಲು ಪೀಠಿಕೆಇದೆ. ‘ರಾಮರಾಮರೇ’ ಮತ್ತು ‘ಒಂದಲ್ಲಾಎರಡಲ್ಲಾ’ ಚಿತ್ರಗಳ ನಿರ್ದೇಶಕ ಸತ್ಯಪ್ರಕಾಶ್ಕತೆ ಬರೆದು ನಿರ್ದೇಶನ ಮಾಡುತ್ತಿರುವಚಿತ್ರದ ಹೆಸರುಇದೇಆಗಿದೆ. ಪ್ರತಿ ದಿನ ಪ್ರತಿಯೊಬ್ಬನಿಗೂ ಮ್ಯಾಚ್ ನಡಿತಿರುತ್ತೆ.ಸಂಜೆ ವಾಪಸ್ಸು ಮನೆಗೆ ಬರುವಾಗಆತಗೆದ್ದಿರಬೇಕುಅಥವಾ ಸೋತಿರಬೇಕು.ಅವನು ಗೆಲ್ತಾನಾ? ಅವನ ಆದರ್ಶಗೆಲ್ಲುತ್ತಾಅಥವಾಯೋಚನೆಗೆಲ್ಲುತ್ತಾ ಎಂಬ ಒನ್ ಲೈನ್ಐಡಿಯಾ ....
ಸಿನಿಮಾ ಇತಿಹಾಸ ಸಾರುವ ಚಿತ್ರಪಥ ಭಾರತೀಯ ಚಿತ್ರರಂಗದ ಇತಿಹಾಸವು ಹಿರಿಯ ತಲೆಮಾರಿನವರಿಗೆ ತಿಳಿದಿದೆ. ಆದರೆ ಪ್ರಸಕ್ತ ಯುವಜನಾಂಗಕ್ಕೆ ಅದರ ಬಗ್ಗೆ ಗೊತ್ತಿರುವುದಿಲ್ಲ. ಇದನ್ನು ಮನಗಂಡ ಸಿನಿಮಾ ಪತ್ರಕರ್ತ ಶಶಿಧರ್ಚಿತ್ರದುರ್ಗ ‘ಚಿತ್ರಪಥ’ ಎನ್ನುವ ಸಿನಿಮಾ ಆರ್ಕೈವ್ ಪೋರ್ಟಲ್ನ್ನು ಹೊರ ತಂದಿದ್ದಾರೆ. ಇದರಲ್ಲಿ ನಾಸ್ಟಾಲ್ಜಿಯಾ, ನೆನಪು, ಮಾಹಿತಿ ವಿಶೇಷ, ವಿಡಿಯೋ, ಪೋಸ್ಟರ್ ಮಾಹಿತಿ, ಸಿನಿಮಾ ಅಂದು-ಇಂದು, ಚಿತ್ರಕತೆ, ಶೂಟಿಂಗ್ ಸೋಜಿಗ ಮತ್ತು ಅತಿಥಿ ಅಕ್ಷರ ಹೀಗೆ ಒಂಬತ್ತು ವಿಭಾಗಳಲ್ಲಿ ಅಯಾ ವಿಷಯಕ್ಕೆ ಸಂಬಂದಪಟ್ಟ ಮಾಹಿತಿಗಳನ್ನು ನೋಡಬಹುದಾಗಿದೆ. ಶನಿವಾರ ರಾಷ್ಟ್ರ ಪ್ರಶಸ್ತಿ ನಿರ್ದೇಶಕ ....
ಕಿಸ್ ಹುಡುಗನಅದ್ದೂರಿ ಲವ್
‘ಕಿಸ್’ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದ ವಿರಾಟ್ಅವರಎರಡನೇಚಿತ್ರ ‘ಅದ್ದೂರಿ ಲವರ್’ ಮಹೂರ್ತವು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಸರಳವಾಗಿ ನಡೆಯಿತು.ಮೊದಲ ದೃಶ್ಯಕ್ಕೆ ಲವ್ಲಿಸ್ಟಾರ್ ಪ್ರೇಮ್ಕ್ಲಾಪ್ ಮಾಡಿಶುಭ ಹಾರೈಸಿದರು.ಎ.ಪಿ.ಅರ್ಜುನ್ ಬ್ಯಾನರ್ನಡಿಎರಡನೇ ಬಾರಿ ನಿರ್ಮಾಣ ಮಾಡುತ್ತಿರುವ ಎ.ಪಿ.ಅರ್ಜುನ್ಕತೆ ಬರೆದು ನಿರ್ದೇಶನದಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
*ಟೆಂಪರ್ ಲಿರಿಕಲ್ ಹಾಡು ಬಿಡುಗಡೆ* ಕನ್ನಡ ಚಿತ್ರರಂಗದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಸಾಹಿತಿಯಾಗಿ, ಸಂಗೀತ ಸಂಯೋಜಕನಾಗಿ ಕಾರ್ಯನಿರ್ವಹಿಸಿರುವ ಮಂಜುಕವಿ ಟೆಂಪರ್ ಚಿತ್ರದ ಮೂಲಕ ನಿರ್ದೇಶಕನಾಗಿರುವುದು ಎಲ್ಲರಿಗೂ ಗೊತ್ತಿರೋ ವಿಷಯ, ಕನ್ನಡ ಹಾಗೂ ತೆಲುಗು ಸೇರಿ 2 ಭಾಷೆಗಳಲ್ಲಿ ನಿರ್ಮಾಣವಾಗಿರುವ, ಮಾಸ್ ಲವ್ಸ್ಟೋರಿ ಹೊಂದಿರುವ ಈ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ ಸಮಾರಂಭ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ಫಿಲಂ ಚೇಂಬರ್ ಉಪಾಧ್ಯಕ್ಷ ಉಮೇಶ್ಬಣಕಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಚಿತ್ರದ ಮೂಲಕ ಆರ್ಯನ್ಸೂರ್ಯ ಹಾಗೂ ಕಾಶಿಮಾ ಮೊದಲಬಾರಿಗೆ ನಾಯಕ-ನಾಯಕಿಯಾಗಿ ಬಣ್ಣಹಚ್ಚುತ್ತಿದ್ದಾರೆ. ಪತ್ರಕರ್ತ ಧನು ಯಲಗಚ್ ನಾಯಕನ ....
ರಾಬರ್ಟ್ ಗೆಲುವು ಒಬ್ಬನದಲ್ಲ–ದರ್ಶನ್ ‘ರಾಬರ್ಟ್’ಚಿತ್ರದಸಕ್ಸಸ್ ಮೀಟ್ದಲ್ಲಿ‘ಜೈಗ್ಯಾಂಟಿಕ್ ಸಕ್ಸಸ್’ ಎಂದು ಬರೆದಿರುವಪೋಸ್ಟರ್ಕಂಡು ಬಂತು. ನೋಡಿದವರು ‘ಬಾಷಾ’ ಸಿನಿಮಾದ ನೆರಳು ಕಾಣಿಸುತ್ತದೆಂದು ಹೇಳಿದ್ದಾರೆ.ಆದರೆ ನಮ್ಮಕತೆಯಟ್ರೀಟ್ಮೆಂಟ್ ಬೇರೆಯೇಇದೆ.ವಿಶೇಷವಾದ ಅಂಶಗಳನ್ನು ಒಳಗೊಂಡಿದೆ ಎಂದುದರ್ಶನ್ ಹೇಳುತ್ತಾ ಹೋದರು.ಇದು ನನ್ನೊಬ್ಬನಚಿತ್ರಅಲ್ಲ. ತಂಡದ ಶ್ರಮ.ಒನ್ ಮ್ಯಾನ್ ಶೋ ಅಲ್ಲವೇಅಲ್ಲ. ನಾಲ್ಕೇ ದಿನದಲ್ಲಿ ಬಾಕ್ಸ್ಆಫೀಸ್ನಲ್ಲಿ ೬೫ ಕೋಟಿಅಧಿಕ ಗಳಿಕೆ ಮಾಡಿ ಮುನ್ನುಗುತ್ತಿದೆ.ಕನ್ನಡ ಸೇರಿದಂತೆಟಾಲಿವುಡ್ದಲ್ಲೂ ಸದ್ದು ಮಾಡುತ್ತಿದೆ.ಈ ಗೆಲುವಿಗೆ ಕಾರಣರಾದ ಪ್ರೇಕ್ಷಕರಿಗೆ ....
*ಅಮೃತ ಅಪಾರ್ಟ್ಮೆಂಟ್ಸ್ ಅಮೃತ ಉಣಿಸಲಿ- ಕೆಸಿಎನ್ ಚಂದ್ರಶೇಖರ್* *-ಪೋಸ್ಟರ್ ಬಿಡುಗಡೆ ಮಾಡಿದ ಚಂದನವನದ ಖ್ಯಾತ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್, ನಟಿ ನಿರ್ಮಾಪಕಿ, ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್* *-ಗುರುರಾಜ್ ಕುಲಕರ್ಣಿ ನಿರ್ದೇಶನ, ನಿರ್ಮಾಣದ ಚಿತ್ರ* ಜಿ9 ಕಮ್ಯೂನಿಕೇಷನ್ಸ್ ಮೀಡಿಯಾ ಆ್ಯಂಡ್ ಎಂಟರ್ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರ ಅಮೃತಾ ಅಪಾರ್ಟ್’ಮೆಂಟ್ಸ್. ಈ ಚಿತ್ರಕ್ಕೆ ರಚನೆ, ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ ಗುರುರಾಜ್ ಕುಲಕರ್ಣಿ (ನಾಡಗೌಡ). ಮಂಗಳವಾರ ಇದೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಚಂದನವನದ ಖ್ಯಾತ ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ....
ದೇಶ ಗಮನ ಸೆಳೆಯುವ ಚಿತ್ರ ನೀಡಲಿ - ಮುಖ್ಯಮಂತ್ರಿ ‘ತಾಯವ್ವ’ ಚಿತ್ರದ ಮೂಲಕ ಬಣ್ಣದಲೋಕಕ್ಕೆ ಪಾದಾರ್ಪಣೆ ಮಾಡಿದ ಸುದೀಪ್ ಮುಂದೆ ಕಿಚ್ಚ ಸುದೀಪ್ ಆಗಿ ಹೆಸರು ಮಾಡಿದರು.ಸದುಭಿರುಚಿಯ ಚಿತ್ರಗಳನ್ನು ನೀಡುತ್ತಾ ಸಿನಿಮಾಕ್ಷೇತ್ರದಲ್ಲಿ೨೫ ವರ್ಷ ಪೂರೈಸಿದ ಹಿನ್ನಲೆಯಲ್ಲಿ ‘ಕೋಟಿಗೊಬ್ಬ-೩’ ನಿರ್ಮಾಪಕ ಸೂರಪ್ಪ ಬಾಬು ಬೆಳ್ಳಿ ಮಹೋತ್ಸವಕಾರ್ಯಕ್ರಮವನ್ನುಏರ್ಪಾಟು ಮಾಡಿದ್ದರು.ಅಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದು ವಿಶೇಷವಾಗಿತ್ತು.ಪೈಲ್ವಾನ್ರನ್ನು ಗೌರವಿಸಿದ ಬಳಿಕ ಮುಖ್ಯ ಮಂತ್ರಿಗಳು ಮಾತನಾಡಿದರು. ಹಿರಿತೆರೆ, ಕಿರುತೆರೆಯಲ್ಲೂ ಸುದೀಪ್ತಮ್ಮದೆಛಾಪು ....
ಈ ವಾರ ತೆರೆಗೆ ಬರಲಿದೆ ’ಮುಂದುವರೆದ ಅಧ್ಯಾಯ’
ಕಣಜ ಎಂಟರ್ ಪ್ರೈಸಸ್ ಲಾಂಛನ ದಡಿಯಲ್ಲಿ ನಿರ್ಮಾಣವಾಗಿರುವ, ಬಾಲು ಚಂದ್ರಶೇಖರ್ ನಿರ್ದೇಶನದಲ್ಲಿ ಆದಿತ್ಯ ನಾಯಕರಾಗಿ ನಟಿಸಿರುವ ’ಮುಂದುವರೆದ ಅಧ್ಯಾಯ’ ಚಿತ್ರ ಈ ವಾರ ಬಿಡುಗಡೆಯಾಗಲಿದೆ.
ಜಾನಿ - ನಿತಿನ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ದಿಲೀಪ್ ಚಕ್ರವರ್ತಿ ಛಾಯಾಗ್ರಹಣ,