Sarvajanikarige Suvarnavakasha.Film Press Meet.

Tuesday, December 03, 2019

ಹಾಸ್ಯಪ್ರಿಯರಿಗೊಂದು  ಸುವರ್ಣಾವಕಾಶ         ಸಂಪೂರ್ಣ ಹಾಸ್ಯ ಚಿತ್ರ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ಕ್ಕೆ ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಯುಎ ಪ್ರಮಾಣ ಪತ್ರವನ್ನು ದಯಪಾಲಿಸಿದೆ. ಎರಡು ದಿನದಲ್ಲಿ ನಡೆಯುವ ಕಥನವಾಗಿದೆ. ಎಲ್ಲರಿಗೂ ಜೀವನದಲ್ಲಿ ಒಂದು ಅವಕಾಶ ಸಿಗುತ್ತದೆ. ಅದನ್ನು  ಉಪಯೋಗಿಸಿಕೊಂಡು ಯಾವ ರೀತಿ ಬದುಕಿನಲ್ಲಿ ಸುವರ್ಣಾವಕಾಶ ಪಡೆಯುತ್ತಾನೆ. ಕತೆಯಲ್ಲಿ  ನಾಯಕ, ನಾಯಕಿ ಒಂದು ದಿನ ಹೊರಗೆ ಹೋದಾಗ ಕಷ್ಟದಲ್ಲಿ ಸಿಲುಕುತ್ತಾರೆ. ಅದರಿಂದ ಹೊರಬರಲು ಹಣದ ಅವಶ್ಯಕತೆ ಇರುತ್ತದೆ.  ಇದಕ್ಕಾಗಿ ಆತ ಏನು ಉಪಾಯ ಮಾಡುತ್ತಾನೆ? ಮುಂದೆ ಹೇಗೆ ತೊಂದರೆಯಿಂದ ಆಚೆ ಬರುತ್ತಾನೆ ಎಂಬುದು ಸಿನಿಮಾದ ಹೂರಣವಾಗಿದೆ.  ಕವಲುದಾರಿ ....

1062

Read More...

Babru.Film Rel On 06th December 2019.

Monday, December 02, 2019

ಬಬ್ರೂ ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್       ಸಂಪೂರ್ಣ ಚಿತ್ರೀಕರಣ ವಿದೇಶದಲ್ಲಿ ನಡೆಸಿದ ಕಾರಣ ‘ಬಬ್ರೂ’  ಪ್ರಥಮ ಕನ್ನಡದ ಹಾಲಿವುಡ್ ಚಿತ್ರ ಅಂತ ಪರಿಗಣಿಸಬಹುದೆಂದು  ರಚಿಸಿ ಪ್ರಥಮಬಾರಿ ನಿರ್ದೇಶನ ಮಾಡಿರುವ ಸುಜಯ್ ರಾಮಯ್ಯ ಬಣ್ಣಿಸುತ್ತಾರೆ.  ಕೆಲವು  ಚಿತ್ರಗಳಲ್ಲಿ   ಕತೆಯು ವಿದೇಶದಲ್ಲಿ ಹುಟ್ಟಿಕೊಂಡರೂ  ಮುಂದೆ ನಮ್ಮ ನಾಡಿಗೆ ಶಿಫ್ಟ್ ಆಗುತ್ತದೆ. ಆದರೆ ಈ ಸಿನಿಮಾವು  ಅಮೇರಿಕಾ ಮತ್ತು ಅಲ್ಲಿನ ಸುಂದರ ಪರಿಸರಗಳಲ್ಲಿ  ಶೂಟ್ ಮಾಡಲಾಗಿದೆ. ಭಾರತದಲ್ಲಿ ವಾಹನಗಳನ್ನು ಸಂಖ್ಯೆ ಮೂಲಕ ನೊಂದಣಿ ಮಾಡಿಸಬಹುದು. ಅಮೇರಿಕಾದಲ್ಲಿ ಹೆಸರಿನಲ್ಲೂ  ರಿಜಿಸ್ಟ್ರೇಷನ್ ಮಾಡಿಸಲು ಅವಕಾಶವಿದೆ.  ಚಿತ್ರದ ಕುರಿತು ಹೇಳುವುದಾದರೆ ಭಾರತೀಯರಾದ ....

907

Read More...

19 Age.Film Press Meet.

Monday, December 02, 2019

೧೯ರ ವಯಸ್ಸು  ಹಿರಿಯರಿಗೆ  ನಾನ್ಸೆನ್ಸ್?         ಹೊಸಬರ ’೧೯ ಏಜ್ ಈಸ್ ನಾನ್ಸೆನ್ಸ್?’ ಚಿತ್ರವು ಹೆಸರೇ ಹೇಳುವಂತೆ ಹತ್ತೋಂಬತ್ತರ ಹದಿಹರೆಯದ ವಯಸ್ಸಿನವರಿಗೆ ತಾವು ಏನು ಮಾಡಿದರೂ ಸರಿ ಅಂದುಕೊಳ್ಳುತ್ತಾರೆ.  ಪೋಷಕರಿಗೆ ಮಕ್ಕಳು ಮಾಡುವುದು ನಾನ್ಸೆನ್ಸ್  ಅನಿಸುತ್ತದೆ. ಗತಕಾಲದಲ್ಲಿ ಹೆಣ್ಣು ಮಕ್ಕಳು ಋತಿಮತಿ ಆಗುವ ಮುಂಚೆ ಮದುವೆ ಮಾಡುತ್ತಿದ್ದರು.  ಗಂಡು ಹೆಣ್ಣು ಎಂಬ ತಾರತಮ್ಯವಿತ್ತು.  ಈಗ ಕಾಲ ಬದಲಾಗಿದೆ. ವಯಸ್ಸು  ನೋಡಿಕೊಂಡು ಮುಂದಕ್ಕೆ ಹೆಜ್ಜೆ ಇಡುತ್ತಾರೆ. ಇಬ್ಬರು ಸರಿಸಮಾನರು.  ಹುಡುಗ ವಿಧುರನಾದರೆ ಮತ್ತೋಂದು ತಾಳಿ ಕಟ್ಟುವಾಗ, ವಿಧುವೆಗೆ ಯಾಕೆ ಈ ನಿರ್ಭಂದ?.  ತಂದೆ ತಾಯಿ ಹೇಳಿಕೊಟ್ಟಿದ್ದನ್ನು ಮಕ್ಕಳು ....

857

Read More...

Namo.Film Press Meet.

Monday, December 02, 2019

ಮತ್ತೋಂದು  ನಮೋ         ಎರಡು ವರ್ಷದ ಕೆಳಗೆ ‘ನಮೋ’ ಚಿತ್ರವೊಂದು ನಿರ್ದೇಶಕಿ ರೂಪಐಯ್ಯರ್ ಸಾರಥ್ಯದಲ್ಲಿ ಸೆಟ್ಟೇರಿತ್ತು. ನಂತರ ಸುದ್ದಿ ತಣ್ಣಗಾಯಿತು. ಈಗ ಇದೇ ಹಸರಿನಲ್ಲಿ ಹೊಸಬರೇ ಸೇರಿಕೊಂಡು ಸಿನಿಮಾವನ್ನು ಮುಗಿಸಿ, ಸದ್ದು ಮಾಡಲು ಪೋಸ್ಟರ್ ಬಿಡುಗಡೆ ನೆಪ ಮಾಡಿಕೊಂಡು ತಂಡವು ಮಾಧ್ಯಮದ ಮುಂದೆ ಹಾಜರಾಗಿದ್ದರು. ಹಿಂದಿನ ನಮೋ ಇದಕ್ಕೂ ಸಂಬಂದವಿಲ್ಲವೆಂದು ನಿರ್ದೇಶಕ ಪುಟ್ಟರಾಜ್ ಸ್ವಾಮಿ ಮೊದಲು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಚಿತ್ರದ ಕುರಿತಂತೆ ವಿವರಗಳನ್ನು ಬಿಚ್ಚಿಟ್ಟರು.  ಕತ್ತಲಿನಿಂದ ಬೆಳಕಿನಡೆಗೆ ಎಂಬುದು ಶೀರ್ಷಿಕೆಗೆ ಅರ್ಥ ಕೊಡುತ್ತದೆ. ದೇವರ ಶ್ಲೋಕವನ್ನು  ಪ್ರಾರಂಭದಲ್ಲಿ ಇದರಿಂದ ಶುರು ಮಾಡುತ್ತಾರೆ. ಸಕರಾತ್ಮಕ ಶಕ್ತಿ ....

2116

Read More...

Hagalu Kanasu.Film Rel On 06th December 2019.

Monday, December 02, 2019

ಚಿತ್ರಮಂದಿರದಲ್ಲಿ  ಹಗಲು ಕನಸು        ಬಾಲ ನಟ, ಪೋಷಕ ಪಾತ್ರಗಳು, ಕಿರುತೆರೆ ಸ್ಟಾರ್ ನಿರೂಪಕ ಮಾಸ್ಟರ್ ಆನಂದ್  ‘ಹಗಲು ಕನಸು’ ಚಿತ್ರದಲ್ಲಿ ಮೊದಲಬಾರಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.  ಶೀರ್ಷಿಕೆ ಹೇಳುವಂತೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಕೆಂಡ್‌ನಲ್ಲಿ ನಡೆಯುವ ಕತೆ ಇರುವುದು ವಿಶೇಷ.  ಕಥಾನಾಯಕ ವಿಕ್ರಮಾದಿತ್ಯ ಆಲಿಯಾಸ್ ವಿಕ್ರಂಗೆ  ಪ್ರತಿ ಬಾರಿ ಕುತ್ತಿಗೆ ಮೇಲೆ ಮಚ್ಚೆ ಇರುವ ಮುಖ ಕಾಣಿಸದ ಹುಡುಗಿಯೊಬ್ಬಳು ಸಿಕ್ಕಂತೆ ಕನಸು ಕಾಣುತ್ತಿರುತ್ತಾನೆ. ಸೋಜಿಗ ಎನ್ನುವಂತೆ ಒಮ್ಮೆ ಅದೇ ತರಹದ ಹುಡುಗಿಯೊಬ್ಬಳು ಮನೆ ಪ್ರವೇಶಿಸಿದಾಗ ಮನೆಯಲ್ಲಿರುವ ಇಬ್ಬರು ಅಳಿಯಂದಿರು, ಅಮ್ಮನಿಗೆ ಪಜೀತಿಯಾಗುತ್ತದೆ. ಆಕೆಯು ಇಲ್ಲಿಗೆ ಬರಲು ಬಲವಾದ ....

897

Read More...

Odeya.Film Audio Rel.

Sunday, December 01, 2019

ಒಡೆಯ  ಏನಿದರ  ಗಮ್ಮತ್ತು        ತಮಿಳು ಸೂಪರ್ ಹಿಟ್ ‘ವೀರಂ’ ಕನ್ನಡದಲ್ಲಿ ‘ಒಡೆಯ’ ಹೆಸರಿನೊಂದಿಗೆ ಸಿದ್ದಗೊಂಡಿದೆ. ರಿಮೇಕ್ ಆದರೂ ನಮ್ಮ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡಿರುವುದಾಗಿ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ನಾಯಕ ದರ್ಶನ್ ಮಾತನಾಡುತ್ತಿದ್ದರು. ಮಾತು ಮುಂದುವರೆಸುತ್ತಾ ೫೨ನೇ ಚಿತ್ರವಾಗಿದ್ದು, ಸಂದೇಶ್ ಪ್ರೊಡಕ್ಷನ್‌ದಲ್ಲಿ ಮೂರನೆ ಬಾರಿ ನಟಿಸಿದ್ದೇನೆ. ನಿರ್ಮಾಪಕರು ಹಿಂದಿನ ಎರಡು ಚಿತ್ರಗಳಲ್ಲಿ ಆಸಕ್ತಿ ತೋರಿಸಿರಲಿಲ್ಲ. ಇದರಲ್ಲಿ ಪೂರ್ಣ ಗಮನಹರಿಸಿ ಕಷ್ಟಪಟ್ಟು  ಮೈಸೂರಿನ ವ್ಯವಹಾರವನ್ನು ಬದಿಗಿಟ್ಟು, ಎಷ್ಟು ಸಾದ್ಯವೋ, ಎಲ್ಲಲ್ಲಿ ಉದ್ದವಾಯಿತು ಅನಿಸಿದರೆ ಅದನ್ನು ತೆಗೆದುಹಾಕಲು ಸಲಹೆ ....

833

Read More...

Chi.Ra.Muttu Chi.Sou.Rathna.Film Pooja.

Sunday, December 01, 2019

ವಧು  ವರ  ಹೆಸರು  ಚಿತ್ರದ ಶೀರ್ಷಿಕೆ           ಜನರನ್ನು  ಚಿತ್ರಮಂದಿರಕ್ಕೆ ಸೆಳೆಯಲು ನಿರ್ದೇಶಕರು ನಾನಾ  ರೀತಿಯ ಕಸರತ್ತುಗಳನ್ನು ಪ್ರಯೋಗಿಸುತ್ತಾರೆ. ಅದರಲ್ಲಿ ಮೊದಲ ಅಹ್ವಾನ ಪತ್ರಿಕೆ ಎನ್ನುವಂತೆ ಹೆಸರು ಆಗಿರುತ್ತದೆ. ಅದೇ ರೀತಿಯಲ್ಲಿ ಇಲ್ಲೊಂದು ಹೊಸಬರ ತಂಡವೊಂದು ‘ಚಿ!! ರಾ!! ಮುತ್ತು  ಚಿ೧೧ ಸೌ೧೧ ರತ್ನ’ ವಧು ವರನಿಗೆ ಕರೆಯುವಂತೆ ಸಿನಿಮಾದ ಶೀರ್ಷಿಕೆಯಾಗಿ ಬಳಸಿಕೊಂಡಿದ್ದಾರೆ. ೨೦೧೫ರಂದು ಕೊಳ್ಳೆಗಾಲದಲ್ಲಿ  ನಡೆದ  ನೈಜ ಘಟನೆಯನ್ನು ತೆಗೆದುಕೊಂಡು, ಅದನ್ನು ಚಿತ್ರಕ್ಕಾಗಿ ೨೦೦೩ರಲ್ಲಿ ಆಗುವಂತೆ ಬದಲಾವಣೆ ಮಾಡಿಕೊಂಡಿದ್ದಾರೆ. ಗ್ರಾಮೀಣ ಶೈಲಿಯ ಪ್ರೇಮ ಕತೆಯು  ಸಾಧಾರಣವಾಗಿದ್ದರೂ ತೋರಿಸುವ ರೀತಿ ವಿನೂತನವಾಗಿರುತ್ತದೆ. ....

1252

Read More...

Bengaluru 69.Film Audio Rel.

Saturday, November 30, 2019

ಅಂತರಾಷ್ಟ್ರೀಯ  ಪಿತೂರಿ  ಕಥನ        ರಾಣೆ ಬೆನ್ನೂರಿನ ಝಕೀರ್‌ಹುಶೆನ್ ಕರೀಂಖಾನ್  ಸದ್ಯ ದುಬೈ  ಪ್ರಜೆ. ಆದರೂ  ಕನ್ನಡ ಭಾಷಾ ಅಭಿಮಾನದ ಮೇಲೆ ‘ಬೆಂಗಳೂರು ೬೯’ ಚಿತ್ರವನ್ನು ಪತ್ನಿ ಗುಲ್ಜಾರ್‌ಝಕೀರ್ ಹುಶೆನ್ ಹಸರಿನಲ್ಲಿ ಟ್ರಿಬಲ್ ಎ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಪ್ರಪಂಚದಲ್ಲಿ ಭೂಮಿ ತಿರುಗುವವರೆಗೂ ವ್ಯಾಮೋಹ, ಅಪರಾಧ ನಡಿತಾ ಇರುತ್ತದೆ. ಜೊತೆಗೆ  ತೀವ್ರವಾದಂತಹ ಉಗ್ರವಾದ ಕುರಿತಂತೆ ಅಂತರರಾಷ್ಟ್ರೀಯ  ಪಿತೂರಿ ಇಂತಹ ಅಂಶಗಳನ್ನು ಒಳಗೊಂಡಿರುವ ಕತೆಯನ್ನು ಹೇಳಲಾಗಿದೆ.  ದೋಹದಲ್ಲಿ ಚಿತ್ರರಂಗದ ತರಭೇತಿ ಪಡೆದುಕೊಂಡಿರುವ ಕ್ರಾಂತಿ ಚೈತನ್ಯ ಟಾಲವುಡ್,ಕಾಲಿವುಡ್‌ದಲ್ಲಿ ಕೆಲಸ ಮಾಡಿದ್ದು ಈಗ ಚಂದನವನದಲ್ಲಿ ....

2134

Read More...

Kaapi Katte.Movie Audio Rel.

Saturday, November 30, 2019

ಹೊರಬಂತು ಕಾಪಿಕಟ್ಟೆ ಹಾಡುಗಳು        ಗುರುಶಿಷ್ಯರು, ಬೊಂಬಾಟ್‌ಹೆಂಡ್ತಿ, ನಗೆಬಾಂಬ್ ಚಿತ್ರಗಳಲ್ಲಿ ಬಹುತೇಕ ಹಾಸ್ಯ ಕಲಾವಿದರು ಜನರನ್ನು ನಗಿಸಿದ್ದರು. ಅದಕ್ಕಿಂತಲೂ ಹೆಚ್ಚು, ಚಂದನವನದ ಇತಿಹಾಸದಲ್ಲಿ ಮೊದಲು ಎನ್ನುವಂತೆ ಚಿತ್ರರಂಗದ ಮುವತ್ತೈದು ಹಿರಿ, ಕಿರಿ ಹಾಸ್ಯ ಕಲಾವಿದರನ್ನು ಒಂದೇ ತೆರೆ ಮೇಲೆ ನೋಡುವ ಅವಕಾಶವು ‘ಕಾಪಿ ಕಟ್ಟೆ’ ಚಿತ್ರದಲ್ಲಿ ಸಿಗಲಿದೆ.  ಮೂಲತ: ನೃತ್ಯ ನಿರ್ದೇಶಕರಾಗಿರುವ ಕಪಿಲ್ ಮೂರನೇ ಪ್ರಯತ್ನದಲ್ಲಿ ಸಂಪೂರ್ಣ ಹಾಸ್ಯ ಕಲಾವಿದರ ಮೇಲೆ ಕತೆಯನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಜಿ.ರಾಘವೇಂದ್ರ ಅವರಿಗೆ ನಿರ್ಮಾಣ ಹೊಸ ಅನುಭವ.          ಹಿರಿಯ ನಾಗರಿಕರ ಮನಸ್ಥಿತಿ ಯಾವ ರೀತಿ ಇರುತ್ತದೆ.  ಈ ವಯಸ್ಸು ....

497

Read More...

Elli Nanna Vilasa.Film Audio Rel.

Thursday, November 28, 2019

ಸ್ವಯಂ  ವಿಳಾಸ  ಹುಡುಕಿಕೊಂಡು  ಹೋದಾಗ          ಚಂದನವನಕ್ಕೆ ಸಾಕಷ್ಟು ಹೊಸಬರು  ಸಿನಿಮಾ  ನಿರ್ಮಾಣ ಮಾಡುವ ಮೂಲಕ ಚಿತ್ರರಂಗದಲ್ಲಿ ನೆಲೆಯೂರುವ ಕನಸು ಕಾಣುತ್ತಿದ್ದಾರೆ. ಈಗ ಆ ಸಾಲಿಗೆ ಉತ್ತರ ಕರ್ನಾಟಕದವರಿಂದ ‘ಎಲ್ಲಿ ನನ್ನ ವಿಳಾಸ’ ಚಿತ್ರವೊಂದು ಸದ್ದಿಲ್ಲದೆ  ತಾಳಿಕೋಟೆ, ಯಲ್ಲಾಪುರ, ಸಿರ್ಸಿ, ಬೆಂಗಳೂರು, ಮಂಗಳೂರು,ಉಡುಪಿ,  ಹುಣಸಗಿ ಕಡೆಗಳಲ್ಲಿ ಚಿತ್ರೀಕರಣವನ್ನು  ಮುಗಿಸಿದ್ದಾರೆ. ಕೇವಲ ಕನ್ನಡವಷ್ಟೇ ಅಲ್ಲದೇ, ತಮಿಳು ಭಾಷೆಯಲ್ಲಿ ಸಿದ್ದಗೊಂಡಿದೆ. ವಿಶ್ವದಲ್ಲಿ  ಅಪ್ಪ-ಅಮ್ಮನಿಗೆ  ಬೆಲೆಕಟ್ಟಲಾಗದು. ನಾವು ಹುಟ್ಟಿದ ಮೇಲೆ  ತಂದೆ ತಾಯಿ ವಿಳಾಸವೇ  ನಮ್ಮ ವಿಳಾಸವಾಗಿರುತ್ತದೆ ಹಾಗೂ ಅವರಿಗೆ ನಾವೇ ಪ್ರೀತಿಯ ....

1299

Read More...

Avane Srimannarayana.Film Trailer Launch.

Thursday, November 28, 2019

ನಾರಾಯಣ ಲುಕ್  ನೋಡಿದವರಿಗೆ  ಕಿಕ್         ಅಂತೂ ಕೊನೆಗೂ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಿದ್ದಗೊಂಡಿರುವ ಮೂರು ನಿಮಿಷ ಮೂವತ್ತು ಸೆಕೆಂಡ್ ತುಣುಕುಗಳು ಶಂಕರ್‌ನಾಗ್ ಚಿತ್ರಮಂದಿರಲ್ಲಿ ಪ್ರದರ್ಶನಗೊಂಡಿತು. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದು, ಅದು ಚಿತ್ರದ ಮೇಲಿರುವ ನಿರೀಕ್ಷೆ ಸಾಬೀತು ಮಾಡಿದೆ. ಮೂರು ವರ್ಷ ಸಮಯ ತೆಗೆದುಕೊಂಡಿದ್ದಕ್ಕೆ  ತಂಡವು ಹಲವು ಮಾಹಿತಿಗಳನ್ನು  ಬಿಚ್ಚಿಟ್ಟಿತ್ತು.  ಕಾಲ್ಪನಿಕ ಕತೆಯಲ್ಲಿ ರಕ್ಷಿತ್‌ಶಟ್ಟಿ ಪೋಲೀಸ್ ಅಧಿಕಾರಿಯಾಗಿ ಇನ್ನೂರು ದಿನ ಕೆಲಸ ಮಾಡಿದ್ದಾರೆ. ನಾಯಕಿ ಶಾನ್ವಿಶ್ರೀವಾತ್ಸವ್ ೫೫, ಅಚ್ಯುತಕುಮಾರ್ ....

1056

Read More...

Shubam.Book Rel.

Wednesday, November 27, 2019

ಶುಭಂ  ಪುಸ್ತಕಕ್ಕೆ  ಸುದೀಪ್  ಪ್ರಶಂಸೆ

          ಬರವಣಿಗೆ ಒಂದು ಕಲೆಯಾದರೆ, ಓದುವುದು ಮತ್ತೋಂದು ಕಲೆಯಾಗಿರುತ್ತದೆಂದು ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೂಡು ಬರೆದಿರುವ ‘ಶುಭಂ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.  ಚಿತ್ರರಂಗದ ಬಗ್ಗೆ ಪುಸ್ತಕದಲ್ಲಿ ಒಳ್ಳೆಯ ಅಂಶಗಳಿವೆ. ಸಂಪೂರ್ಣ ಮಾಹಿತಿಗಳನ್ನು ಮೊಬೈಲ್‌ನಲ್ಲಿ ಟೈಪ್ ಮಾಡಿರುವುದು   ಅಷ್ಟು ಸುಲಭವಲ್ಲ. ಇದಕ್ಕೆ ತಾಳ್ಮೆ ಬೇಕು. ಅದು ಅವರಲ್ಲಿ ಇದೆ ಎಂದರು.

1043

Read More...

Katha Sangama.Movie Press Meet.

Wednesday, November 27, 2019

ಚಿತ್ರಬ್ರಹ್ಮನ ಹುಟ್ಟುಹಬ್ಬಕ್ಕೆ  ಕಥಾ ಸಂಗಮ ಪ್ರೀಮಿಯರ್ ಷೋ       ಪುಟ್ಟಣ್ಣ ಕಣಗಾಲ್ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಲು ‘ಕಥಾ ಸಂಗಮ’ ಚಿತ್ರವನ್ನು ಅವರೊಂದಿಗೆ ಕೆಲಸ ಮಾಡಿದ ಕಲಾವಿದರು, ತಂತ್ರಜ್ಘರಿಗೆ ಭಾನುವಾರದಂದು ವಿಶೇಷ ಪ್ರದರ್ಶನ ಏರ್ಪಡಿಸಲು ರಿಶಬ್‌ಶೆಟ್ಟಿ ಯೋಜನೆ ಹಾಕಿಕೊಂಡಿದ್ದರೆ.  ಏಳು ನಿರ್ದೇಶಕರು, ಛಾಯಾಗ್ರಾಹಕರು, ಸಂಗೀತ ನಿರ್ದೇಶಕರು ಒಕ್ಕರೂಲದಿಂದ ಕೆಲಸ ಮಾಡಿದ್ದು  ಪ್ರತಿ ಕಿರುಚಿತ್ರವು ಅಂದಾಜು ೧೮-೨೦ ನಿಮಿಷ, ಪ್ರತಿಯೊಂದಕ್ಕೂ ಶೀರ್ಷಿಕೆ ಇರಲಿದ್ದು, ಒಟ್ಟಾರೆ ಕಥಾಸಂಗಮವಾಗಿದೆ. ಮೊದಲನೆಯದು  ಮಂಗಳೂರು  ಪಟ್ಟಣದ ಹಿನ್ನಲೆಯಾಗಿದೆ. ಆರಾಮಾಗಿ ಇದ್ದ ಹುಡುಗನ ಬದುಕು ಒಂದು ಘಟನೆಯಿಂದ ಹೇಗೆ ಬದಲಾಗುತ್ತಾನೆ.  ....

960

Read More...

Kaalidaasa Kannada Mestru.Film Success Meet.

Tuesday, November 26, 2019

ಮತ್ತೋಮ್ಮೆ ನಿರ್ದೇಶಕ  ಸ್ಥಾನದಲ್ಲಿ  ಜಗ್ಗೇಶ್         ಶುಕ್ರವಾರದಂದು ಬಿಡುಗಡೆಯಾದ  ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರಕ್ಕೆ ಎಲ್ಲಾ ಕಡೆಗಳಿಂದ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗಳಿಕೆಯಲ್ಲೂ ಚೇತರಿಸಿಕೊಳ್ಳುತ್ತಿದೆ. ಇದರಿಂದ ಸಂತಸಗೊಂಡಿರುವ ನಿರ್ಮಾಪಕರು ಸಣ್ಣದೊಂದು ಸಂತೋಷಕೂಟವನ್ನು ಏರ್ಪಾಟು ಮಾಡಿ ಎಲ್ಲವನ್ನು ಹೇಳಿಕೊಂಡರು. ಸರದಿಯಂತೆ ಮೈಕ್ ತೆಗೆದುಕೊಂಡ ಸಾಹಿತಿ,ನಿರ್ದೇಶಕ ಕವಿರಾಜ್ ಮಾತನಾಡಿ ಬಿಡುಗಡೆ ದಿನ ಜನರು ಟಾಕೀಸಿನಲ್ಲಿ ಕಡಿಮೆ ಇರುವುದನ್ನು ಕಂಡು ಇನ್ನು ಮುಂದೆ ಹಾಡು ಬರೆಯಲಿಕ್ಕೆ ಲಾಯಕ್ಕು ಎಂದು ನಿರ್ಧಾರ ಮಾಡಿದ್ದೆ. ಮಾರನೆ ದಿವಸ ಪತ್ರಿಕೆಗಳಲ್ಲಿ ಬಂದ ವಿಮರ್ಶೆ ನೋಡಿ ಸಮಾಧಾನ ಬಂದು ನಿರ್ಣಯ ....

987

Read More...

Film RH 100.Film Press Meet.

Tuesday, November 26, 2019

ಪತ್ರಿಕೋದ್ಯಮ  ವಿದ್ಯಾರ್ಥಿಗಳ ಕಥನ          ಪ್ರಚಲಿತ ವಿದ್ಯಾಮಾನದಲ್ಲಿ ಜನರು ಹಾರರ್ ಚಿತ್ರಗಳನ್ನು ಇಷ್ಟಪಡುತ್ತಾರೆ. ಅದಕ್ಕಾಗಿ ಸಾಕಷ್ಟು ಸಿನಿಮಾಗಳು ಇದೇ ಮಾದರಿಯಲ್ಲಿ ಬಂದಿದೆ, ಬರುತ್ತಲೇ ಇದೆ. ಈ ಸಾಲಿಗೆ ‘ಆರ್‌ಹೆಚ್ ೧೦೦’ ಸೇರ್ಪಡೆಯಾಗಿದೆ. ನಿಜವಾದ ಘಟನೆಗಳಿಂದ ಪ್ರೇರಿತವಾಗಿದ್ದು ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ಚಿತ್ರದ ಕತೆಯಲ್ಲಿ ಆರು ಪತ್ರ್ರಿಕೋದ್ಯಮ ವಿದ್ಯಾರ್ಥಿಗಳು ಕಾಡಿನಲ್ಲಿ ಏನೋ ನಡಿತಿದೆ ಎಂದು ಸಂಶೋಧನೆ ಮಾಡಲು ದಟ್ಟ ಅರಣ್ಯಕ್ಕೆ ತೆರಳುತ್ತಾರೆ. ಅಲ್ಲಿ ಆದಂಥ ಅನುಭವಗಳು ಯಾವ ರೀತಿ ಇರುತ್ತದೆ. ನೋಡುಗನಿಗೆ ಪ್ರತಿ ದೃಶ್ಯವು ಭಯ ಹುಟ್ಟುವಂತೆ ಮಾಡಿಸುತ್ತದೆ. ಇದರ ಜೊತೆಗೆ ಸಾಮಾಜಿಕ ಕಳಕಳಿ ಇರುವ ಅಂಶಗಳು ಇರಲಿದೆ. ....

1042

Read More...

Brahmachari.Film Rel On 29th Nove 2019.

Tuesday, November 26, 2019

ಬ್ರಹ್ಮಚಾರಿ ಹೊಸತನ, ಹೊಸ ವಿಷಯಗಳು           ಹಾಸ್ಯ ಚಿತ್ರ ‘ಬ್ಯಹ್ಮಚಾರಿ’ ಚಿತ್ರದಲ್ಲಿ ಹಲವು ಹೊಸತನದ ವಿಷಯಗಳು ತುಂಬಿಕೊಂಡಿದೆ.  ಉದಯ್.ಕೆ.ಮೆಹ್ತಾ  ದಶಕದ ಅನುಭವದಲ್ಲಿ  ಎಂಟನೇ ನಿರ್ಮಾಣದ ಚಿತ್ರಕ್ಕೆ ಕಾಶಿನಾಥ್ ಚಿತ್ರಗಳ ಪ್ರೇರಣೆಯಿಂದ ಕತೆ ಬರೆದಿದ್ದಾರೆ. ಮೊದಲಬಾರಿ ಕರ್ನಾಟಕದಾದ್ಯಂತ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋದವರು ವಿತರಣೆ ಮಾಡುತ್ತಿದ್ದು, ನಿರ್ಮಾಪಕರು ಲಾಭದಲ್ಲಿ ಇದ್ದಾರೆ.  ಭರ್ಜರಿ ಚೇತನ್‌ಕುಮಾರ್ ಸಾಹಿತ್ಯ, ಧರ್ಮವಿಶ್ ಸಂಗೀತದ ‘ಹಿಡ್‌ಕೋ ಹಿಡ್‌ಕೋ’ ಹಾಡನ್ನು ಹತ್ತು ಲಕ್ಷ ಜನ ವೀಕ್ಷಿಸಿದ್ದಾರೆ. ಸೆನ್ಸಾರ್‌ನಿಂದ ಯಾವುದೇ ದೃಶ್ಯ ಮ್ಯೂಟ್ ಮಾಡದೆ, ಆಕ್ಷೇಪಿಸದೆ ಶುದ್ದ ಯುಎ ಪ್ರಮಾಣಪತ್ರ ....

1077

Read More...

Kiruminkanaja.Film Press Meet.

Tuesday, November 26, 2019

ಪೆನ್ ಡ್ರೈವ್  ಕನ್ನಡದಲ್ಲಿ ಕಿರು  ಮಿನ್ಕಣಜ         ಕಿರು ಅನ್ನುವದಕ್ಕೆ ಅರ್ಥ ಎಲ್ಲರಿಗೂ ತಿಳಿದಿದೆ. ಆದರೆ ಮಿನ್ಕಣಜ ಪದಕ್ಕೆ ತಾತ್ಪರ್ಯ  ಸಿಗುವುದಿಲ್ಲ. ಇವರೆಡು ಸೇರಿಕೊಂಡಿರುವ ‘ಕಿರು ಮನ್ಕಣಜ’ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಶೀರ್ಷಿಕೆ ಅರ್ಥ ವಸ್ತುವಿನ ಹೆಸರು ಆಗುತ್ತದೆ. ಆಂಗ್ಲ ಭಾಷೆಯಲ್ಲಿ ಪೆನ್ ಡ್ರೈವ್ ಎನ್ನುತ್ರಾರೆ. ಮೀನು ಚಿಕ್ಕದಾಗಿದ್ದರೂ ಅದರ ಹೊಟ್ಟೆ ಒಳಗೆ ಎಷ್ಟು ಮೊಟ್ಟೆಗಳು ಇರುತ್ತದೆಂದು ಯಾರು ಅಂದಾಜು ಮಾಡಲಿಕ್ಕೆ ಆಗುವುದಿಲ್ಲ. ಅದೇ ರೀತಿ ಪೆನ್ ಡ್ರೈವ್ ಒಬ್ಬೋಬ್ಬರ ಜೀವನದಲ್ಲಿ ಇರುತ್ತದೆ. ಅದಕ್ಕೆ ಪುರಾವೆಗಳು ಏನು ಬೇಕಾದರೂ ಇರಬಹುದು. ಪ್ರತಿಯೊಬ್ಬರಲ್ಲಿ ಅದು ಆಳವಾಗಿ ತುಂಬಿರುತ್ತದೆ. ಇದೇ ರೀತಿ ....

1020

Read More...

Film-i1.Film Trailer Rel.

Monday, November 25, 2019

  ಐ ೧ಗೆ ಸುದೀಪ್ ಸಾಥ್       ಹೊಸಬರ ಚಿತ್ರಕ್ಕೆ ಸದಾ ಬೆಂಬಲ ನೀಡುತ್ತಿರುವ ಸುದೀಪ್ ‘ಐ೧’ ಚಿತ್ರದ ಟ್ರೈಲರ್‌ನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ ಒಂದು ಕಾಲದಲ್ಲಿ ನಾನು ಸಹ ಹೊಸಬನಾಗಿದ್ದಾಗ ಹೀಗೆ ವೇದಿಕೆ ಮೇಲೆ ನಿಂತಿದ್ದೆ. ನೀವುಗಳು ನಾಳೆ ಏನಾಗ್ತಿರೆಂದು ಹೇಳಲಿಕ್ಕೆ ಆಗದು.  ತುಣುಕುಗಳನ್ನು ನೋಡಿದಾಗ ಪರಿಕಲ್ಪನೆ ಚೆನ್ನಾಗಿ ಬಂದಿದೆ. ಒಂದು ಜಾಗದಲ್ಲಿ ನಡೆಯುತ್ತದೆ ಎಂದು ತಿಳಿದುಬಂದಿದೆ. ಶಿಕ್ಷಕಿ ನಿರ್ಮಾಣದ ಕಡೆಗೆ ಬಂದಿದ್ದಾರೆ ಒಳ್ಳೆಯದಾಗಲಿ ಎಂದರು.  ಚಿತ್ರದ ಕತೆಯಲ್ಲಿ  ಮೂವರು ಅಮಾಯಕ ಹುಡುಗರನ್ನು ಒಬ್ಬನು  ಟೆಂಪೋ ಟ್ರಾವಲ್ (ಟಿಟಿ)ದಲ್ಲಿ ಬಂದಿಯಾಗಿಸುತ್ತಾನೆ. ಅದನ್ನು ಮಾಡಲು ಕಾರಣವಾದರೂ ಏನು? ....

472

Read More...

Gulal.com.Film Press Meet.

Monday, November 25, 2019

ಗುಲಾಲ್‌ದಲ್ಲಿ ಹುಡುಗಿ ಹಾಡು ವೈರಲ್           ಚಿತ್ರ ಬಿಡುಗಡೆ ಮುಂಚೆ ಹಾಡುಗಳು ಹಿಟ್ ಆದರೆ ಅದು ಮೊದಲ ಯಶಸ್ಸು ಎಂದು ಹೇಳುತ್ತಾರೆ. ಅದರಂತೆ ‘ಗುಲಾಲ್.ಕಾಂ’ ಚಿತ್ರದ ‘ಹುಡುಗಿ ಹುಡುಗಿ’ ಗೀತೆಯು ಹದಿನೈದು ದಿನದೊಳಗೆ ಮೂರುವರೆ ಲಕ್ಷ ಜನರು ವೀಕ್ಷಿಸಿ ವೈರಲ್ ಆಗಿದೆ. ಇದರಿಂದ ಗೀತೆಗೆ ಧ್ವನಿಯಾಗಿರುವ ನಿರ್ಮಾಪಕ ಡಾ.ಗೋಪಾಲಕೃಷ್ಣಹವಲ್ದಾರ ಅವರಿಗೆ ಖುಷಿ ಆಗಿದೆ.  ಉತ್ತರ ಕರ್ನಾಟಕ ಭಾಗದಲ್ಲಿ ಹುಟ್ಟಿದಾಗ ಗುಲಾಲ್ ಬಣ್ಣ ಹಾರಿಸ್ತಾರೆ, ಸತ್ತಾಗ ಗೌರವ ಸಲ್ಲಿಸಲು ಇದನ್ನೆ ಏರಿಸ್ತಾರೆ. ಬದುಕಲ್ಲಿ ಸಾವು ಅಂದರೆ ಕಷ್ಟ, ಹುಟ್ಟುಗೆ ಅರ್ಥ ಸುಖ ಕೊಡುತ್ತದೆ. ಇವೆರಡನ್ನು ಬಿಂಬಿಸುವುದೇ ಕತೆಯಾಗಿದೆ. ಬೆಂಗಳೂರು, ಬೆಳಗಾಂ,ಕಿತ್ತೂರು  ಮುಂತಾದ ....

822

Read More...

Directors Association.Press Meet.

Monday, November 25, 2019

ನಿರ್ದೇಶಕರ  ಸಂಘಕ್ಕೆ  ನೂತನ  ಸಾರಥಿ

        ಕಳೆದೆರಡು ವರ್ಷದಿಂದ ಸಾಹಿತಿ,ನಿರ್ದೇಶಕ ಡಾ.ನಾಗೇಂದ್ರಪ್ರಸಾದ್ ನಿರ್ದೇಶಕರ ಸಂಘಕ್ಕೆ ಅಧ್ಯಕ್ಷರಾಗಿದ್ದರು. ಮೊನ್ನೆ ನಡೆದ ಸರ್ವಸದಸ್ಯರ ಸಭೆಯಲ್ಲಿ  ಹಾಲಿ ಅಧ್ಯಕ್ಷರು  ವಿಸರ್ಜನೆ ಮಾಡಿದ್ದರಿಂದ ಟಿ.ಶಿ.ವೆಂಕಟೇಶ್  ಅಧ್ಯಕ್ಷ  ಸ್ಥಾನಕ್ಕೆ ಅವಿರೋಧವಾಗಿ  ಆಯ್ಕೆಯಾಗಿದ್ದಾರೆ. 

397

Read More...
Copyright@2018 Chitralahari | All Rights Reserved. Photo Journalist K.S. Mokshendra,