Ashwa.Film News

Friday, October 23, 2020

ಅದ್ದೂರಿ ತಾರಾಗಣ, ವೆಚ್ಚದ ಹೊಸಬರ ಸಿನಿಮಾ         ಚಂದನವನದಲ್ಲಿ ಒಂದು ವಾರದಿಂದ ಚಿತ್ರಗಳ ಮಹೂರ್ತ ಸಮಾರಂಭಗಳು ಭರದಿಂದ ಸಾಗಿದೆ. ಈ ನಿಟ್ಟಿನಲ್ಲಿ  ಹೊಸಬರ  ‘ಅಶ್ವ’  ಬಿಗ್ ಬಜೆಟ್ ಚಿತ್ರವೊಂದು ಸೆಟ್ಟೇರುತ್ತಿದೆ. ಪ್ರಚಾರದ ಸಲುವಾಗಿ ಟೀಸರ್, ಪೋಸ್ಟರ್ ರಿಲೀಸ್, ಮೇಕಿಂಗ್ ತೋರಿಸುವುದು ಸಾಮಾನ್ಯವಾಗಿದೆ. ಆದರೆ ಸ್ಯಾಂಡಲ್‌ವುಡ್‌ದಲ್ಲಿ ಮೊದಲು ಎನ್ನುವಂತೆ ‘ಅಶ್ವ’ ಸಿನಿಮಾವು ಯಾವ ರೀತಿ ಮೂಡಿಬರಲಿದೆ ಎಂದು ೨೫ ನಿಮಿಷದ ‘ಪ್ರೀಮಿಯರ್ ಷೋ ರೀಲ್ಸ್’ ಕಾರ್ಯಕ್ರಮ ಜರುಗಿತು. ಮಸ್ತ್ ಆಕ್ಷನ್, ಕಾಮಿಡಿ, ಸೆಂಟಿಮೆಂಟ್, ಪ್ರೀತಿ, ತುಂಟಾಟ ಎಲ್ಲವು ಇದರಲ್ಲಿ ಕಾಣಿಸಿಕೊಂಡಿತು. ಇವಿಷ್ಟು ....

700

Read More...

Thanike.Film News

Wednesday, October 21, 2020

 

ತನಿಖೆ ಚಿತ್ರದ ವೀಕ್ಷಕರಿಗೆ ಲಕ್ಕಿ ಡ್ರಾ ಕೂಪನ್

       ಇಪ್ಪತ್ತೈದು ವರ್ಷಗಳ ಹಿಂದೆ ತೆರೆಕಂಡ ‘ತನಿಖೆ’ ಚಿತ್ರವು ಶತದಿನ ಆಚರಿಸಿತ್ತು. ಈಗ ಅದೇ ಹೆಸರಿನ ಮೇಲೆ ಹೊಸಬರೇ ಸೇರಿಕೊಂಡು ಸಿನಿಮಾ ಸಿದ್ದಪಡಿಸಿದ್ದಾರೆ. ಜಿ.ಎಸ್.ಕಲಿಗೌಡ ಸಾಹಿತ್ಯ, ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣ ಮಾಡಿದ್ದಾರೆ. ಕತೆಯ ಗುಟ್ಟನ್ನು ಬಿಟ್ಟುಕೊಡದ ತಂಡವು, ನೋಡುಗರಿಗೆ ಗೊಂದಲ ಮೂಡಿಸುವಂತಹ ನಾಲ್ಕು ಕ್ಲೈಮಾಕ್ಸ್‌ಗಳು ಇರಲಿದ್ದು, ಎರಡನೇ ಸಲ ನೋಡಿದಾಗ ಮಾತ್ರ ಅರ್ಥವಾಗುತ್ತದಂತೆ. ‘ಎಣ್ಣೆ ಹೊಡಿಯೋದ ಹೆಂಡ್ತಿ ಬಿಡೋದ’ ಗೀತೆಗೆ ನವೀನ್‌ಸಜ್ಜು ಕಂಠದಾನ ಮಾಡಿದ್ದು, 

596

Read More...

Kranthiveera.Film News

Wednesday, October 21, 2020

ಚಿತ್ರರೂಪದಲ್ಲಿ ಭಗತ್‌ಸಿಂಗ್ ಜೀವನ ಚರಿತ್ರೆ       ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲಬಾರಿ ಎನ್ನುವಂತೆ ಭಗತ್‌ಸಿಂಗ್ ಜೀವನ ಚರಿತ್ರೆಯನ್ನು ‘ಕ್ರಾಂತಿಕಾರಿ’ ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡುಲಾಗುತ್ತಿದೆ.  ಆದತ್.ಎಂ.ಪಿ. ನಿರ್ದೇಶಕರಾಗಿ ಎರಡನೇ ಅನುಭವ. ಅಜಿತ್‌ಜಯರಾಜ್ ಅವರು ಭಗತ್‌ಸಿಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್‌ಕ್ವಿಲಾಬ್ ಜಿಂದಾಬಾದ್ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ.  ೧೯೦೭ರಲ್ಲಿ ಜರನವಾಲಾ ತಾಲ್ಲೊಕಿನ ಬಂಗಾ ಎಂಬ ಹಳ್ಳಿಯಲ್ಲಿ ಜನಸಿ, ಕಿರುವಯಸ್ಸಿನಲ್ಲಿಯೇ ರೈತಪರ ಹೋರಾಟಗಾರರಾಗಿದ್ದರು. ಈತನ ಕ್ರಾಂತಿಕಾರಿ ಬೆಳವಣಿಗೆಗಳನ್ನು ಸಹಿಸದ ಬ್ರಿಟಿಷ್ ....

443

Read More...

Kamar Film Factory.India's Bowling League.Press Meet

Saturday, October 17, 2020

ಕಲಾವಿದರ ಇಂಡಿಯನ್ ಬೌಲಿಂಗ್ ಲೀಗ್ ಪಂದ್ಯ       ಕರೋನದಿಂದ ಸಂಕಷ್ಟಕ್ಕೆ ಒಳಗಾಗಿರುವ ಚಿತ್ರರಂಗದ ಕಲಾವಿzರುಗಳಿಗೆ ನೆರವು ನೀಡುವ ಉದ್ದೇಶದಿಂದ ನಟ,ನಿರ್ಮಾಪಕ ಕಮರ್ ಅವರು ‘ಕಮರ್ ಫಿಲಿಂ ಫ್ಯಾಕ್ಟರಿ’ ಮುಖಾಂತರ ನವೆಂಬರ್ ಕೊನೆವಾರದಲ್ಲಿ ‘ಇಂಡಿಯನ್ ಬೌಲಿಂಗ್ ಲೀಗ್’ ಪಂದ್ಯವನ್ನು ಆಯೋಜಿಸುತ್ತಿದ್ದಾರೆ. ಲೀಗ್‌ನ ೧೦ ತಂಡಗಳಲ್ಲಿ ನಾಲ್ವರು ಪುರುಷರು, ನಾಲ್ವರು ಮಹಿಳಾ ಆಟಗಾರರು ಸೇರಿ ಒಟ್ಟು ೮ ಮಂದಿ ಇರಲಿದ್ದಾರೆ. ನುರಿತ ಅಂಪೈರುಗಳು ಅಂಕ ಆಧಾರದಲ್ಲಿ ತಂಡಗಳ ಫಲಿತಾಂಶ ನಿರ್ಧರಿಸುವರು. ಇದರಲ್ಲಿ ಮಾಧ್ಯಮ ತಂಡದವರಿಗೆ ಒಂದು ಬಾರಿ ಆಡಲು ಅವಕಾಶವಿರುತ್ತದೆ. ಅಂತಿಮ ಹಂತದಲ್ಲಿ ಗೆಲ್ಲುವ ತಂಡಕ್ಕೆ ನಗದು ....

544

Read More...

Production NO-1.Film Press Meet

Saturday, October 17, 2020

ದಿಗಂತ್ ಹರಿಪ್ರಿಯಾ ಜೋಡಿಯಲ್ಲಿ ಹೊಸ ಚಿತ್ರ          ಯಾವುದೇ ಭಾಷೆಯ ಚಿತ್ರದ ಕತೆ ಚೆನ್ನಾಗಿದ್ದರೆ ಅದು ಇತರೆ ಭಾಷೆಗಳಿಗೆ ರಿಮೇಕ್ ಆಗುವುದು ಹಿಂದಿನಿಂದಲೂ ನಡೆದುಕೊಂಡು ಬರುವ ಸಂಪ್ರದಾಯವಾಗಿದೆ. ಅದರಂತೆ ಕಳೆದ ವರ್ಷ ಬಿಡುಗಡೆಗೊಂಡು ಯಶಸ್ವಿಯಾದ ‘ಎವುರು’ ಚಿತ್ರವು ಈಗ ಕನ್ನಡದಲ್ಲಿ ಬರುತ್ತಿದೆ. ಅದರಲ್ಲಿ ನಿರ್ವಹಿಸಿದ್ದ ರೆಜಿನಾ ಪಾತ್ರವನ್ನು ಹರಿಪ್ರಿಯಾ, ಅದ್ವಿಶೇಷ್ ಪಾತ್ರದಲ್ಲಿ ದಿಗಂತ್ ಮತ್ತು ವಸಿಷ್ಟಸಿಂಹ ಕೂಡ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಪ್ಯಾನಿಷ್ ಕಾದಂಬರಿಯು ‘ ದಿ ಇನ್ವಿಸಿಬಲ್ ಗೆಸ್ಟ್’  ಹೆಸರಿನೊಂದಿಗೆ ಇಂಗ್ಲೀಷ್‌ದಲ್ಲಿ ತೆರೆಕಂಡಿತ್ತು. ನಂತರ ಹಿಂದಿಯಲ್ಲಿ ....

433

Read More...

Actor Dir Srini and Aditi Prabhu.News

Tuesday, October 20, 2020

*ನಟ ಹಾಗೂ ನಿರ್ದೇಶಕ ಶ್ರೀನಿ ಹಾಗೂ ಅಧಿತಿ ಪ್ರಭುದೇವ sepcial appearance*

485

Read More...

Actress Tara.News

Wednesday, October 21, 2020

  *ರತ್ನನ್ ಪ್ರಪಂಚದಲ್ಲಿ ಉತ್ತರ ಕರ್ನಾಟಕದ ಗಟ್ಟಿಗಿತ್ತಿ ಗೌಡತಿಯಾದ ನಟಿ ತಾರಾ*   ನಟಿ ತಾರಾ ಕನ್ನಡ ಚಿತ್ರರಂಗದ ಹಿರಿಯ ನಟಿ. ನೂರಾರು ಅಧಿಕ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಅವರದ್ದು. ಒಂದಕ್ಕಿಂತ ಒಂದು ಭಿನ್ನ ವಿಭಿನ್ನ ಪಾತ್ರವನ್ನು ಪೋಷಿಸುತ್ತ ಬಂದಿದ್ದಾರವರು. ಆದರೆ, ಆ ಒಂದು ಪಾತ್ರವನ್ನು ಬಿಟ್ಟು! ಅದುವೇ ಗಟ್ಟಿಗಿತ್ತಿ ಗೌಡತಿ ಪಾತ್ರ. ಹೌದು, ಅಂಥ ಒಂದು ವಿಶೇಷ ಪಾತ್ರವನ್ನು ಡಾಲಿ ಧನಂಜಯ್ ನಟಿಸುತ್ತಿರುವ ‘ರತ್ನನ್​ ಪ್ರಪಂಚ’ ಚಿತ್ರ ಅವರಿಗೆ ಕರುಣಿಸಿದೆ. ಕಾರ್ತಿಕ್​ ಗೌಡ ಮತ್ತು ಯೋಗಿ ಜಿ. ರಾಜ್​ ನಿರ್ಮಾಣ ಮಾಡುತ್ತಿರುವ ರತ್ನನ್​ ಪ್ರಪಂಚ ಸಿನಿಮಾವನ್ನು ‘ದಯವಿಟ್ಟು ಗಮನಿಸಿ’ ಸಿನಿಮಾ ಖ್ಯಾತಿಯ ರೋಹಿತ್​ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಈ ....

460

Read More...

Blank.Film News

Tuesday, October 20, 2020

 

ಸೆನ್ಸಾರ್ ಮುಂದೆ ’ಬ್ಲಾಂಕ್’

 

ಫೆಲಿಸಿಟಿ ಫಿಲಂಸ್ ಲಾಂಛನದಲ್ಲಿ ಎನ್ ಪಿ  ಮಂಜುನಾಥ್ ಪ್ರಸನ್ನ

 ಅವರು ನಿರ್ಮಿಸಿರುವ ’ಬ್ಲಾಂಕ್’ ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಪೂರ್ಣವಾಗಿದ್ದು, ಪ್ರಥಮಪ್ರತಿ ಸಿದ್ದವಾಗಿದೆ. ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರ ವೀಕ್ಷಿಸಲಿದೆ.

ಮೈಸೂರು, ಚಿಕ್ಕಮಗಳೂರು, ಬೆಂಗಳೂರು, ತುಮಕೂರು, ಸಕಲೇಶಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

ಎಸ್ ಜಯ್ ಈ ಚಿತ್ರದ ನಿರ್ದೇಶಕರು. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಶೀಘ್ರದಲ್ಲೇ ಆಡಿಯೋ ರಿಲೀಸ್ ಅಗಲಿದೆ.

465

Read More...

Production No-1.Vasish Simha.Film News

Monday, October 19, 2020

 

ಇನ್ನೂ ಹೆಸರಿಡಿದ ನೂತನ ಚಿತ್ರದಲ್ಲಿ ‌ವಸಿಷ್ಠ ಸಿಂಹ ನಾಯಕ.

ಮಾಸಾಂತ್ಯಕ್ಕೆ ಚಾಲನೆ.

 

ಲಾಕ್ ಡೌನ್ ಮುಗಿದ ಮೇಲೆ ಚಂದನವನದಲ್ಲಿ ಹೊಸ ಚಿತ್ರಗಳು ಒಂದರಿಂದ ಒಂದು ಆರಂಭವಾಗುತ್ತಿರುವುದು‌ ಉತ್ತಮ ಬೆಳವಣಿಗೆ.

ಇದೇ ಸಾಲಿನಲ್ಲಿ ವಸಿಷ್ಠ ಸಿಂಹ ಅಭಿನಯದ ನೂತನ‌ ಚಿತ್ರವೊಂದು ಇದೇ ತಿಂಗಳ ಕೊನೆಯಲ್ಲಿ ಆರಂಭಾವಗಲಿದೆ.‌

ಚಿತ್ರದ ಶೀರ್ಷಿಕೆ ಗೌಪ್ಯವಾಗಿಟಿರುವ ಚಿತ್ರತಂಡ ಮಾಸಾಂತ್ಯಕ್ಕೆ ಮುಹೂರ್ತ ನಡೆಸಿ, ಚಿತ್ರದ ಶೀರ್ಷಿಕೆ ಅನಾವರಣಗೊಳಿಸುವುದಾಗಿ‌ ತಿಳಿಸಿದೆ.

501

Read More...

Damayanthi.Film News

Monday, October 19, 2020

 

ದಸರಾ ಹಬ್ಬಕ್ಕೆ ’ದಮಯಂತಿ’ ಮರು ಬಿಡುಗಡೆ.

 

 ರಾಧಿಕಾ ಕುಮಾರಸ್ವಾಮಿ ಅಭಿನಯದ  ’ದಮಯಂತಿ’ ಚಿತ್ರ ಕಳೆದ ವರ್ಷ  ಬಿಡುಗಡೆಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ಕೊರೋನ ಹಾವಳಿಯಿಂದ  ಕೆಲವು ತಿಂಗಳ ಕಾಲ ಚಿತ್ರಮಂದಿರಗಳ ಬಾಗಿಲು ಮುಚ್ಚಿತ್ತು. ಈಗ ಸರ್ಕಾರ ಕೆಲವು ನಿಯಮಗಳನ್ನು ಪಾಲಿಸಿ ಚಿತ್ರಮಂದಿರ ತೆರೆಯಲು ಅನುಮತಿ ನೀಡಿದೆ.

448

Read More...

Maayavadanu.Film News

Monday, October 19, 2020

 

ಹಲವಾರು ಅಡೆತಡೆಗಳನ್ನು ಎದುರಿಸಿ ಕಾಣದಂತೆ ಮಾಯವಾದನು ಸಿನಿಮಾ 50 ನೆಯ ದಿನದತ್ತ ಮುಖ ಮಾಡಿದೆ.  ಸಿನಿಮಾ ರಿಲೀಸದ ಆದ ಮೊದಲ ವಾರ ಉತ್ತಮ ಪ್ರತಿಕ್ರಿಯೆ ಬಂದರು ಎರಡನೇ ವಾರ ಸಿನಿಮಾ ಥಿಯೇಟರ್ ‌ಗಳ ಸಂಖ್ಯೆ ಕುಸಿಯಿತು. ಆದರೆ ಮೂರನೇ ವಾರ ಥಿಯೇಟರ್‌‌‌ಗಳಲ್ಲಿ ತನ್ನ ಗುಣಮಟ್ಟದಿಂದ ಗಟ್ಟಿಯಾಗಿ ನೆಲೆಯೂರಿತು. ಪ್ರದರ್ಶನ ಸಂಖ್ಯೆ ಹಾಗು ಥಿಯೇಟರ್‌ಗಳ ಸಂಖ್ಯೆ ಏರಿಸಿಕೊಂಡ ಸಿನಿಮಾ ಮತ್ತೆ ಲಾಕ್‌ಡೌನ್‌ನಿಂದಾಗಿ ಚಿತ್ರದ ಓಟಕ್ಕೆ ತಡೆ ಬಿತ್ತು. ನಿಲ್ಲುವ ಮುನ್ನ ವೀಕೆಂಡ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿತ್ತು.

466

Read More...

Petromax.Film News

Monday, October 19, 2020

 

ಮೈಸೂರಿನಲ್ಲಿ ’ಪೆಟ್ರೋಮ್ಯಾಕ್ಸ್’

 

ಮೈಸೂರಿನಲ್ಲಿ ಈಗ ವಿಶ್ವವಿಖ್ಯಾತ  ದಸರಾ ಸಡಗರ. ಈ ನಾಡಹಬ್ಬದ ಶುಭ ಸಂದರ್ಭದಲ್ಲಿ ’ಪೆಟ್ರೋಮ್ಯಾಕ್ಸ್’ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಆರಂಭವಾಗಿದೆ. 15 ದಿನಗಳ ಕಾಲ ಮೈಸೂರಿನಲ್ಲೇ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

552

Read More...

1980 Priyanka Upendra.News

Monday, October 19, 2020

 

1980 ರಲ್ಲಿ ಪ್ರಿಯಾಂಕ ಉಪೇಂದ್ರ

 

ತಮ್ಮ ಅಮೋಘ ಅಭಿನಯದ ಮೂಲಕ ಮನೆಮಾತಾಗಿರುವ ಪ್ರಿಯಾಂಕ ಉಪೇಂದ್ರ ಅಭಿನಯದ 1980 ಎಂಬ ಶೀರ್ಷಿಕೆಯ ಚಿತ್ರ ಇದೇ ಅಕ್ಟೋಬರ್ 28 ರಿಂದ ಆರಂಭವಾಗಲಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಕೊಡಗಿನ‌ ಸುಂದರ ಪರಿಸರದಲ್ಲಿ ನಡೆಯಲಿದೆ.

586

Read More...

Gamanam.Film News

Saturday, October 10, 2020

ಕಲಾವಿದರ ಫಸ್ಟ್ ಲುಕ್ ಅನಾವರಣಗೊಳಿಸಿದ ಗಮನಂ

               ಸುಜನಾ ರಾವ್ ಅವರ ಚೊಚ್ಚಲ ನಿರ್ದೇಶನದಲ್ಲಿ ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಭಾರತದ ಐದು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ ಸಿನಿಮಾ ಗಮನಂ.‘ ಅಲಿ ಮತ್ತು ಜಾರಾ ಪಾತ್ರಗಳನ್ನು ನಿರ್ವಹಿಸಿರುವ ಶಿವ ಕಂದುಕುರಿ ಮತ್ತು ಪ್ರಿಯಾಂಕಾರ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ಜರ್ಸಿ ಧರಿಸಿದ ಕ್ರೀಡಾಪಟುವಾಗಿ ಶಿವ ಕಾಣಿಸಿಕೊಂಡರೆ, ಮುಸ್ಲಿಂ ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರಿಯಾಂಕಾ ಕಂಗೊಳಿಸುತ್ತಿದ್ದಾರೆ.

448

Read More...

Kaalachakra.Malayalam Film News

Sunday, October 18, 2020

ಮಲೆಯಾಳಂ ನಲ್ಲಿ ’ಕಾಲಚಕ್ರ’       ವಸಿಷ್ಠ ಎನ್ ಸಿಂಹ ನಾಯಕರಾಗಿ ಅಭಿನಯಿಸಿರುವ ’ಕಾಲಚಕ್ರ’ ಚಿತ್ರ ಮಲೆಯಾಳಂನಲ್ಲೂ ನಿರ್ಮಾಣವಾಗುತ್ತಿದೆ. ’ಕಾಲಚಕ್ರ’ ಚಿತ್ರದ  ರಿಮೇಕ್ ಹಕ್ಕು ಮಲೆಯಾಳಂ  ಭಾಷೆಗೆ ಮಾರಾಟವಾಗುತ್ತಿದೆ. ಮಲೆಯಾಳಂ ಚಿತ್ರರಂಗದ ಖ್ಯಾತ ನಿರ್ಮಾಪಕರೊಬ್ಬರು ’ಕಾಲಚಕ್ರ’ ಚಿತ್ರದ ಕಥೆ ಇಷ್ಟಪಟ್ಟು ಮಲೆಯಾಳಂ ನಲ್ಲಿ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಮಲೆಯಾಳಂ ನಲ್ಲಿ ಚಿತ್ರ ನಿರ್ಮಿಸುತ್ತಿರುವ ಸಂಸ್ಥೆ ಯಾವುದು? ಯಾವಾಗ ಪ್ರಾರಂಭವಾಗುತ್ತದೆ? ಯಾರು ಅಭಿನಯಿಸುತ್ತಾರೆ ಎಂಬ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ. ಅಕ್ಟೋಬರ್ 19ರಂದು ವಸಿಷ್ಠ ಸಿಂಹ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ನಟಿಸಿರುವ ಚಿತ್ರದ ರಿಮೇಕ್ ....

418

Read More...

Shambo Shiva Shankara.Film News

Sunday, October 18, 2020

 

'ಶಂಭೋ ಶಿವ ಶಂಕರ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ.

ಅಘನ್ಯ ಪಿಕ್ಚರ್ಸ್ ಲಾಂಛನದಲ್ಲಿ ವರ್ತೂರ್ ಮಂಜು ಅವರು  ನಿರ್ಮಿಸುತ್ತಿರುವ  ’ಶಂಭೋ ಶಿವ ಶಂಕರ’ ಚಿತ್ರದ  ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಹತ್ತು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ನಾಯಕರಾದ ಅಭಯ್ ಪುನೀತ್, ರೋಹಿತ್, ರಕ್ಷಕ್, ನಾಯಕಿ ಸೋನಾಲ್  ಮಂತೆರೊ ಹಾಗೂ ಜೋಗಿ ನಾಗರಾಜ್ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ನವೆಂಬರ್ ೧ ರಿಂದ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಮಾತಿನ ಭಾಗದೊಂದಿಗೆ ಹಾಡು ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ದ್ವಿತೀಯ ಹಂತದಲ್ಲಿ ನಡೆಯಲಿದೆ.

 

 

419

Read More...

Godhraa.Film News.

Saturday, October 17, 2020

  ನಮ್ಮ ‘ಗೋಧ್ರಾ’  ಚಲನಚಿತ್ರಕ್ಕೆ ಮಾಧ್ಯಮದ ಪ್ರತಿಯೊಬ್ಬರೂ ನೀಡಿದ ಬೆಂಬಲ ಮತ್ತು ಸಹಕಾರವನ್ನು ನಮ್ಮ ತಂಡವು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತದೆ. ಈಗಿನ ಕೊರೊನಾ ಸಮಯದಲ್ಲಂತೂ, ನೀವು ನಮ್ಮ ಬೆಂಬಲದ ಬೆನ್ನೆಲುಬಾಗಿರುತ್ತೀರಿ ಎಂಬ ನಂಬಿಕೆ ಕೂಡ ನಮ್ಮದು. ಈಗ ಕೋವಿಡ್ ಅನ್ಲಾಕ್ ಪ್ರಕ್ರಿಯೆಯು ಜಾರಿಯಲ್ಲಿರುವುದರಿಂದ ಮತ್ತು ಥಿಯೇಟರ್ ಪ್ರಾರಂಭಿಸಲು ಅನುಮತಿ ನೀಡಿರುವುದರಿಂದ ನಮ್ಮ ಚಲನಚಿತ್ರದ ಚಟುವಟಿಕೆಗಳನ್ನು ಪುನರಾರಂಭಿಸಲು ನಾವು ನಿರ್ಧರಿಸಿದ್ದೇವೆ.   ನಾವು ಇತ್ತೀಚೆಗೆ ನಮ್ಮ ಸಿನಿಮಾವನ್ನು ಸಿಬಿಎಫ್‌ಸಿ (ಸೆನ್ಸಾರ್ ಮಂಡಳಿ) ಯಿಂದ ಪ್ರಮಾಣೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ಮಂಡಳಿಯ ಸದಸ್ಯರು ನಮ್ಮ ಚಲನಚಿತ್ರವನ್ನು ವೀಕ್ಷಿಸಿದರು ಮತ್ತು ....

435

Read More...

Act 1978.Film News

Friday, October 16, 2020

  ನವೆಂಬರ್ ನಲ್ಲಿ ಆಕ್ಟ್ 1978 ತೆರೆಗೆ ಮುಕ್ಕಾಲು ವರ್ಷವನ್ನು ಕೊರೊನಾ ವೈರಸ್ ಹುರಿದು ಮುಕ್ಕಿದೆ. ಜಗತ್ತು ತಲ್ಲಣಗೊಂಡಿದೆ. ಲಾಕ್ ಮತು ್ತ ಅನ್ ಲಾಕ್ ನಡುವಿನ ಸರ್ಕಸ್ ಇನ್ನೂ ನಡೆಯುತ್ತಲೇ ಇದೆ. ಈ ಆತಂಕವನ್ನು ಕೊಂಚ ಬದುಕಿಟು ್ಟ, ಬದುಕು ಸಾಗುತ್ತಿದೆ. ನಾವೂ ಸಾಗಬೇಕಿದೆ. ಕೊರೊನಾದಿಂದಾಗಿ ಸಿನಿಮಾ ರಂಗ ಕೂಡ ತನ್ನ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಿತ್ತು. ಈಗ ಒಂದೊಂದೆ ಸಿನೆಮಾ ಕೆಲಸಗಳು ಶುರುವಾಗಿವೆ. ಥಿಯೇಟರ್ ಬಾಗಿಲು ತೆರೆದಿವೆ. ಇತ್ತೀಚೆಗಷ್ಟೇ ನಮ್ಮ ಆಕ್ಟ್ 1978 ಸಿನೆಮಾ ಸೆನ್ಸಾರ್ ಮಂಡಳಿಯಿಂದ ಯಾವುದೇ ಕಟ್ ಇಲ್ಲದೇ `ಯು’ ಪ್ರಮಾಣ ಪತ್ರ ಪಡೆದಿದ್ದು, ಇದನ್ನು ಬಿಡುಗಡೆ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ಮಾಡಿದೆವು. ಒಟ್ಟಾರೆ ನಮ್ಮ ತಂಡ ಹಾಗೂ ನಿರ್ಮಾಪಕರ ....

465

Read More...

Padavi Poorva.Film News.

Friday, October 16, 2020

ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು  ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ "ಪದವಿಪೂರ್ವ" ಚಿತ್ರದ ಮೂಲಕ  ಮತ್ತೊಬ್ಬ ನಾಯಕಿಯಾಗಿ ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ’ಆಳ್ವಾಸ್ ಕಾಲೇಜ್’ನ ಇಂಜಿನಿಯರಿಂಗ್ ವಿದ್ಯಾರ್ಥಿನಿ ’ಯಶಾ ಶಿವಕುಮಾರ್’ " ಕನ್ನಡ ಚಿತ್ರರಂಗವನ್ನು ಪ್ರವೇಶಿಸಲು ಸಜ್ಜಾಗಿದ್ದಾಳೆ. 2019 ವರ್ಷದಲ್ಲಿ ’ಫ್ಯಾಶನ್ ಎಬಿಸಿಡಿ’ ಸಂಸ್ಥೆ ಆಯೋಜಿಸಿದ್ದ "ಮಿಸ್ ಬೆಂಗಳೂರು 2019 " "ಮಿಸ್ ಕರ್ನಾಟಕ ಇಂಟರ್ನ್ಯಾಷನಲ್ 2019" ಹಾಗೂ ಮುಂಬೈನಲ್ಲಿ ನಡೆದ "ಮಿಸ್ ಗ್ಲೋರಿ ಆಫ್ ಗ್ಯಾಲಕ್ಸಿ 2019" ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುವ ಮೂಲಕ ಅನೇಕ ಫ್ಯಾಶನ್ ಕಿರೀಟಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಈಕೆ ....

471

Read More...

Fantasy.Film News.

Thursday, October 15, 2020

  *ಫ್ಯಾಂಟಸಿ ಪ್ರಪಂಚದೊಳಗೊಂದು ವಿಸ್ಮಯ ಕಥೆ*   ಹೊಸಬರ ಹೊಸ ಹೊಸ ಆವಿಷ್ಕಾರಗಳು ಸ್ಯಾಂಡಲ್​ವುಡ್​ನಲ್ಲಿ ಸೃಷ್ಟಿಯಾಗುತ್ತಿವೆ. ಕಾಲ್ಪನಿಕ ಕಥೆಗಳನ್ನು ಹೆಣೆದು, ಅದಕ್ಕೆ ಫ್ಯಾಂಟಸಿ ಸ್ಪರ್ಶ ಕೊಡುವ ಕೆಲಸ ನಡೆಯುತ್ತಿದೆ. ಇದೀಗ ಅಂಥದ್ದೇ ಸೈಕಲಾಜಿಕಲ್​ ಥ್ರಿಲ್ಲರ್​ ಸಿನಿಮಾವೊಂದು ಚಂದನವನದಲ್ಲಿ ಸಿದ್ಧವಾಗಿದೆ. ಆ ಚಿತ್ರದ ಹೆಸರು ‘ಫ್ಯಾಂಟಸಿ’. ಪವನ್​ ಡ್ರೀಮ್​ ಫಿಲಂಸ್​ ಲಾಂಛನದಲ್ಲಿ ಸಿದ್ಧವಾಗಿರುವ ‘ಫ್ಯಾಂಟಸಿ’ ಚಿತ್ರಕ್ಕೆ ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ ಪವನ್ ಕುಮಾರ್ ಆರ್​. ನಿರ್ದೇಶಕರ ತಂದೆ ತಾಯಿಯವರಾದ ಎಂ. ಮಹಾದೇವಿ, ಟಿ. ರಂಗಸ್ವಾಮಿ ಸಹ- ನಿರ್ಮಾಪಕರಾಗಿದ್ದಾರೆ. ಶೀರ್ಷಿಕೆಗೆ ....

439

Read More...
Copyright@2018 Chitralahari | All Rights Reserved. Photo Journalist K.S. Mokshendra,