ರಂಗನ ಇವ ನಮ್ಮ ಹುಡುಗ ಎರಡು ಪದವಿಗಳನ್ನು ಪಡೆದುಕೊಂಡಿರುವ ವಿದ್ಯಾವಂತ. ಕಲ್ಮಶ ಇಲ್ಲದ ಹುಡುಗ. ಜೀವನದಲ್ಲಿ ಏನೋ ಮಾಡಬೇಕೆಂದು ಹೋಗುತ್ತಾನೆ. ಇದರ ಮಧ್ಯೆ ಪ್ರೀತಿಗೆ ಬೀಳುತ್ತಾನೆ. ಅದರಿಂದ ಹೇಗೆ ಸಂಕಟಗಳನ್ನು ಎದುರಿಸುತ್ತಾನೆ ಎಂಬುದನ್ನು ‘ರಂಗ’ ಅಡಿಬರಹದಲ್ಲಿ ಬಿಇ, ಎಂಟೆಕ್ ಇರುವ ಚಿತ್ರದಲ್ಲಿ ಹೇಳಲಾಗಿದೆ. ಪ್ರೀತಿಯ ಕತೆಯಲ್ಲಿ ಈಗಿನ ವಾಸ್ತವತೆ, ಯುವ ಜನಾಂಗದ ಮನಸ್ಥಿತಿ ಯಾವ ರೀತಿ ಇರುತ್ತದೆ. ಕೆಲವು ಸಲ ಸಕರಾತ್ಮಕ, ನಕರಾತ್ಮಕವಾಗಿ ಎರಡು ರೀತಿಯಲ್ಲಿ ಆಗಲಿದ್ದು, ಇವತ್ತಿನ ಪೀಳಿಗೆಗೆ ಹೊಂದಿಕೊಳ್ಳುವಂತ ಸನ್ನಿವೇಶಗಳು ಇರಲಿದೆ. ಹತ್ತು ವರ್ಷಗಳ ಕಾಲ ....
ಟಾಲಿವುಡ್ ತಂಡದ ಕನ್ನಡ ಸಿನಿಮಾ ಟಾಲಿವುಡ್ ತಂಡದ ‘ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಜರ್ನಿ’ ಎನ್ನುವ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಕತೆಯಲ್ಲಿ ಮದುವೆ ಮುಂಚೆ, ನಂತರ ನಡೆಯುವ ಘಟನೆಗಳು, ಪ್ರೀತಿಸಿ ಮದುವೆಯಾದರೆ ದಂಪತಿಗಳ ಸರಸ, ವಿರಸ ಎಲ್ಲವನ್ನು ಮನರಂಜನೆ, ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಬೆಂಗಳೂರು, ಚಿಕ್ಕಮಗಳೂರು, ನಂದಿಬೆಟ್ಟ, ಮಲೇಶಿಯಾ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂಬತ್ತು ಚಿತ್ರಗಳನ್ನು ನಿರ್ದೇಶಿಸಿ ನಂದಿ ಪ್ರಶಸ್ತಿಗೆ ಭಾಜನರಾಗಿದ್ದ ....
ಸೃಜನ್ಲೋಕೇಶ್ ಹೊಸ ಚಿತ್ರ ಎಲ್ಲಿದ್ದೆ ಇಲ್ಲೀ ತನಕ ಲೋಕೇಶ್ ಅಭಿನಯದ ‘ಪರಸೆಂಗದ ಗೆಂಡೆತಿಮ್ಮ’ ಚಿತ್ರದಲ್ಲಿ ‘ಎಲ್ಲಿದ್ದ ಇಲ್ಲೀ ತನಕ, ಎಲ್ಲಿಂದ ಬಂದವ್ವ’ ಗೀತೆಯ ಎಸ್.ಬಿ.ಬಾಲಸುಬ್ರಮಣ್ಯಹಂ ಕಂಠದಲ್ಲಿ ಹಾಡು ಹಿಟ್ ಆಗಿತ್ತು. ಈಗ ಸೃಜನ್ಲೋಕೇಶ್ ಅಪ್ಪನ ನಟಿಸಿದ ಚಿತ್ರದ ಹಾಡಿನ ಸಾಲು ‘ಎಲ್ಲಿದ್ದ ಇಲ್ಲೀ ತನಕ’ ಟೈಟಲ್ನಲ್ಲಿ ನಾಯಕನಾಗಿ ನಟಿಸುತ್ತಿರುವ ಜೊತೆಗೆ ಲೋಕೇಶ್ ಪ್ರೊಡಕ್ಷನ್ನಲ್ಲಿ ಹಣ ಹೂಡುತ್ತಿರುವುದು ವಿಶೇಷ. ನಾಯಕಿಯಾಗಿ ಹರಿಪ್ರಿಯಾ ಮೊದಲಬಾರಿ ಸೃಜನ್ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಮಜಾ ಟಾಕೀಸ್ ಶೋ ನಿರ್ದೇಶನದ ....
ರಾಜೀವ ಟ್ರೈಲರ್ ಬಿಡುಗಡೆ ‘ರಾಜೀವ’ ಚಿತ್ರದ ಅಡಿಬರಹದಲ್ಲಿ ಐಎಎಸ್, ಯುವರೈತ ಎಂದು ಹೇಳಿಕೊಂಡಿದೆ. ಶನಿವಾರ ಸಿನಿಮಾದ ಟ್ರೈಲರ್ನ್ನು ಅನಾವರಣಗೊಳಿಸಿದ ಮಾಜಿ ವಿಧಾನ ಸಭಾ ಪರಿಷತ್ ಸದಸ್ಯರಾದ ಡಿ.ವೀರಯ್ಯ ಮಾತನಾಡುತ್ತಾ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳು ಇವರ ಸಮಸ್ಯೆಯನ್ನು ಇಂದಿಗೂ ಬಗೆ ಹರಿಸಿಲ್ಲ. ರಾಜೀವ ಸಿನಿಮಾದಲ್ಲಿ ರೈತರ ಕಷ್ಟಗಳನ್ನು ತೋರಿಸಿ, ಸರ್ಕಾರದ ಕಣ್ಣು ತೆರೆಸುವಂತಹ ಕೆಲಸ ಮಾಡಿದ್ದಾರೆ. ಸಿನಿಮಾವು ಯಶಸ್ಸುಗಳಿಸಲೆಂದು ಶುಭ ಹಾರೈಸಿದರು. ಗ್ಯಾಪ್ ನಂತರ ಬಂದಿದ್ದೇನೆ. ಐಎಎಸ್ ವ್ಯಾಸಾಂಗವನ್ನು ಬದಿಗಿಟ್ಟು, ಹಳ್ಳಿಗೆ ಬಂದು ....
ಪ್ರಸಕ್ತ ವಸ್ತುಸ್ಥಿತಿಯನ್ನು ತಿಳಿಸುವ ನಾತಿಚರಾಮಿ ಪ್ರಸಕ್ತ ಸಮಾಜದಲ್ಲಿ ಹೆಣ್ಣು ತನ್ನ ವೃತ್ತಿ, ವೈಯಕ್ತಿಕ ಅನುಭವಗಳನ್ನು ಹೇಗೆ ನಿಭಾಯಿಸುತ್ತಾಳೆ. ಧರ್ಮೇಚ, ಅರ್ಥೇಚ, ಕಾಮೇಚ, ಮೋಕ್ಷೇಚ ನಾತಿಚರಾಮಿ ಎನ್ನುವಂತೆ ಸಿನಿಮಾಕ್ಕೆ ‘ನಾತಿಚರಾಮಿ’ ಶೀರ್ಷಿಕೆಯನ್ನು ಬಳಸಲಾಗಿದೆ. ನಿರ್ದೇಶಕ ಮಂಸೋರೆ ಹೇಳುವಂತೆ ಟೆಕ್ಕಿ ಕೆಲಸದಲ್ಲಿ ಯಶಸ್ಸನ್ನು ಪಡೆದು, ಆಂತರಿಕ ಬದುಕಿನ ಜಂಜಾಟದಲ್ಲಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುತ್ತಾಳೆ. ಸಂಪ್ರದಾಯ ಆಚರಣೆ ಗೊತ್ತಿದ್ದು, ಗೊತ್ತಿಲ್ಲದೆ ಅದನ್ನು ಹೇಗೆ ನಿಭಾಯಿಸುವುದು ಅಂತ ಗೊಂದಲ್ಲಿದಲ್ಲ ಇರುತ್ತಾಳೆ. ....
ಡಾ.ರಾಜ್ಕುಮಾರ್ ಸಮಕಾಲೀನರಿಗೆ ಸೌಹಾರ್ದ ಪ್ರಶಸ್ತಿ ಡಾ.ರಾಜ್ಕುಮಾರ್ ಅವರೊಂದಿಗೆ ನಟಿಸಿರುವ ಮತ್ತು ಅವರ ಚಿತ್ರಗಳಿಗೆ ಕೆಲಸ ಮಾಡಿರುವ ಹಿರಿಯರನ್ನು ಗುರುತಿಸಿ ‘ಡಾ.ರಾಜ್ಕುಮಾರ್ ಸೌಹಾರ್ದ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕಳೆದ ಎರಡು ವರ್ಷಗಳಿಂದ ಪಾರ್ವತಮ್ಮ ರಾಜ್ಕುಮಾರ್ ಆರೋಗ್ಯ ಸರಿಯಿಲ್ಲದ್ದರಿಂದ ಅಪ್ಪಾಜಿ ಸೌಹಾರ್ದ ಪ್ರಶಸ್ತಿಯನ್ನು ನೀಡಿರಲಿಲ್ಲ. ಈಗ ಅಮ್ಮ, ಅಪ್ಪಾಜಿ ಒಟ್ಟಿಗೆ ಸೇರಿಕೊಂಡಿದ್ದರಿಂದ ಇದೇ ಸ್ಥಳದಲ್ಲಿ ಮೂರು ವರ್ಷಗಳ ಪ್ರಶಸ್ತಿ ಮತ್ತು ಅಮ್ಮನ ಹುಟ್ಟುಹಬ್ಬ ....
ಶುಕ್ರವಾರದಂದು ಆರೆಂಜ್ ಸವಿಯಬಹುದು ಅದ್ದೂರಿ ಚಿತ್ರ ‘ಆರೆಂಜ್’ ಶುಕ್ರವಾರದಂದು ಸುಮಾರು ೩೦೦ ಕೇಂದ್ರಗಳಲ್ಲಿ ಬಿಡುಗಡೆ ಆಗುತ್ತಿರುವ ಕಾರಣ ಮೊದಲ ಮತ್ತು ಕೊನೆಯ ಬಾರಿ ಸುದ್ದಿಗೋಷ್ಟಿಯನ್ನು ನಿರ್ದೇಶಕರು ಏರ್ಪಾಟು ಮಾಡಿದ್ದರು. ನಿರ್ದೇಶಕ ಪ್ರಶಾಂತ್ರಾಜ್ ಮಾತನಾಡಿ ಜೂಮ್ ಬಿಡುಗಡೆ ಮುಂಚೆ ಗಣೇಶ್ ಚಿತ್ರ ನೋಡಿ ಚೆನ್ನಾಗಿ ಮಾಡಿದ್ದೀರಾ. ಕತೆ ಕೇಳದೆ ನಿಮ್ಮದೆ ಸಂಸ್ಥೆಯಲ್ಲಿ ಮತ್ತೋಂದು ಸಿನಿಮಾ ಮಾಡಿ ಅಂತ ಹಸಿರು ನಿಶಾನೆ ನೀಡಿದರು. ಅದರಿಂದ ಎರಡನೆ ಕತೆ ಹೇಳಿದ್ದು ಆರೆಂಜ್ ಆಯಿತು. ಅವರು ಎಲ್ಲದರಲ್ಲೂ ತಲೆತೂರದೆ, ಬೇಕಿದ್ದ ವಿಷಯದಲ್ಲಿ ....
ಹೆಚ್ಎಸ್ಆರ್ ಹಬ್ಬದಲ್ಲಿ ಬಿಂದಾಸ್ ಕಾರ್ಯಕ್ರಮಗಳು ಹೆಚ್ಎಸ್ಆರ್ ಲೇಔಟ್ ಬೆಂಗಳೂರಿನ ಹೊರವಲಯದಲ್ಲಿ ಇರಲಿದ್ದು, ಬಹುತೇಕ ಕನ್ನಡೇತರರು ಇರುವ ಕಾರಣ ಇಲ್ಲಿನ ಭಾಷೆ, ಸಂಸ್ಕ್ರತಿ ತಿಳಿದಿರುವುದಿಲ್ಲ. ಅದರಿಂದಲೇ ಅಲ್ಲಿನ ಯುವ ತಂಡವೊಂದು ಸ್ಥಳೀಯ ಶಾಸಕರ ಪ್ರೋತ್ಸಾಹದೊಂದಿಗೆ ಮೂರು ದಿನಗಳ ಕಾಲ ‘ಹೆಚ್ಎಸ್ಆರ್ ಹಬ್ಬ’ ವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಡಿಸೆಂಬರ್ ಏಳರಂದು ಡೊಳ್ಳು ಕುಣಿತದೊಂದಿಗೆ ಚಾಲನೆ ಸಿಗಲಿದ್ದು, ಮೊದಲ ದಿವಸ ಪೆಟ್ ಶೋ, ಬಾಡಿ ಬಿಲ್ಡರ್ಸ್ಗಳ ಪ್ರದರ್ಶನ, ಫ್ಲೂಟ್ ಬಾಕ್ಸಿಂಗ್, ....
ಆರು ಹೆಸರಿನ ಚಿತ್ರದಲ್ಲಿ ವಿಶೇಷತೆಗಳು ವಿನೂತನ ಚಿತ್ರ ‘೬’ದಲ್ಲಿ ಹಲವು ವಿಶೇಷತೆಗಳು ಇರಲಿದೆ. ಶಿಶಿರಾ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಮಂಜುಸ್ವರಾಜ್ಗೆ ಆರನೇ ಚಿತ್ರವಾಗಿದೆ. ಕತೆಗೆ ಸೂಕ್ತವೆಂದು ಇದೇ ಸಂಖ್ಯೆಯನ್ನು ಬಳಸಲಾಗಿದೆ. ಆರು ಹುಡುಗರ ಸುತ್ತ ಕತೆ ನಡೆಯಲಿದೆ. ಸೆಸ್ಪನ್ಸ್ , ಹಾರರ್ ಥ್ರಿಲ್ಲರ್ ಕತೆಯಾಗಿದ್ದರಿಂದ ಒಂದು ಸಣ್ಣ ಸುಳಿವು ನೀಡಿದಲ್ಲಿ ಸಿನಿಮಾದ ಸಾರಾಂಶ ತಿಳಿಯುತ್ತದೆ. ಅದರಿಂದ ಎಲ್ಲವನ್ನು ಚಿತ್ರಮಂದಿರದಲ್ಲೆ ನೋಡಬೇಕಂತೆ. ಆರು ಹುಡುಗರ ಪೈಕಿ ನಾಲ್ವರು ಆಯ್ಕೆಯಾಗಿದ್ದು, ಉಳಿದ ಎರಡು ಮತ್ತು ಒಬ್ಬಳೇ ....
ಮುಂದಿನ ಬದಲಾವಣೆ ಇದು ಸಿನಿಮಾದ ಹೆಸರು ‘ಮುಂದಿನ ಬದಲಾವಣೆ’ ಎಂದು ಸಿನಿಮಾದ ಜಾಹಿರಾತುಗಳು ಪತ್ರಿಕೆಯಲ್ಲಿ ಪ್ರಕಟವಾಗುವುದನ್ನು ನೋಡಿದ್ದೇವೆ. ಇದನ್ನೆ ಹೊಸ ತಂಡವೊಂದು ಶೀರ್ಷಿಕೆಯಾಗಿ ಬಳಸಿಕೊಂಡಿದ್ದಾರೆ. ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಪ್ರವೀಣ್ಭೂಷಣ್.ಪಿ.ಎಸ್. ಕತೆ, ಐದು ಹಾಡಿಗೆ ಸಾಹಿತ್ಯ, ನಿರ್ದೇಶನ ಮಾಡುವ ಜೊತಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕತೆಯಲ್ಲಿ ನಾಯಕನು ತನ್ನ ಸ್ನೇಹಿತರೊಂದಿಗೆ ಕಾಲೇಜ್ಗೆ ಬಂಕ್ ಹೊಡೆದು ಟಾಕೀಸ್ಗೆ ಹೋಗುತ್ತಾನೆ. ಅಲ್ಲಿ ಬ್ರೇಕ್ಅಪ್ ಆದ ಪ್ರೇಮಿ ಭೇಟಿಯಾಗುತ್ತದೆ. ಮುಂದೆ ....
ನಾಗರಭಾವಿಯಲ್ಲಿ ರೂಪ್ಸಂಗಮ್ ನೂತನ ಮಳಿಗೆ ಆರಂಭ ನವೀನ ವಿನ್ಯಾಸದ ಮಹಿಳೆಯರ ಮತ್ತು ಮಕ್ಕಳ ಸಿದ್ದ ಉಡುಪುಗಳ ಮಾರಾಟದಲ್ಲಿ ತನ್ನದೇ ಆದ ವಿಶೇಷತೆ ಹೊಂದಿರುವ ಬಟ್ಟೆ ಅಂಗಡಿ ರೂಪ್ ಸಂಗಮ್ ಬೆಂಗಳೂರು ನಗರದಲ್ಲಿ ತನ್ನ ಮೂರನೇ ಮಳಿಗೆಯನ್ನು ಆರಂಭಿಸಿದೆ. ಈಗಾಗಲೇ ಮಲ್ಲೇಶ್ವರಂನಲ್ಲೂ ತನ್ನ ಶಾಖೆಯನ್ನು ಹೊಂದಿರುವ ಈ ಸಿದ್ದ ಉಡುಪುಗಳ ಷೋ ರೂಂ ಈಗ ನಾಗರಭಾವಿಯಲ್ಲಿ ಮತ್ತೊಂದು ಶಾಖೆಗೆ ಚಾಲನೆ ನೀಡಿದೆ. ರೂಪ್ ಸಂಗಮ್ ಮಳಿಗೆಯ ಮಾಲೀಕರಾದ ಕೃಷ್ಣ ಆರ್. ಗೌಡ ಹಾಗೂ ಅವರ ಪುತ್ರರಾದ ರಾಜೇಶ್ ಕೆ.ಗೌಡ ರೂಪ್ ಸಂಗಮ್ ಹೊಸ ಮಳಿಗೆಯ ಉದ್ಘಾಟನೆಯನ್ನು ದೀಪ ಬೆಳಗುವುದರ ಮೂಲಕ ನೆರವೇರಿಸಿದರು. ರಾಕಿಂಗ್ಸ್ಟಾರ್ ಯಶ್ ಈ ನೂತನ ಮಳಿಗೆಯ ....
ಸಮ್ಮೋಹಕ ಪ್ರತಿಭೆ ನಿಖಿತಾರಮ್ಯಾಸತೀಶ್ ಬಣ್ಣದ ಲೋಕ ಎನ್ನುವುದು ಎಂತಹವರನ್ನು ಆಕರ್ಷಿಸುತ್ತದೆ. ಇದಕ್ಕೆ ಉದಾಹರಣೆ ೫.೮ ಅಡಿ ಎತ್ತರದ ನೀರೆ ‘ನಿಖಿತಾರಮ್ಯಾಸತೀಶ್’. ಹತ್ತಿರದ ಸಂಬಂದಿ ರೇಣುಕುಮಾರ್ ಚಿತ್ರ ನಿರ್ದೇಶಕ ಹಾಗೂ ಸ್ಟುಡಿಯೋ ಮಾಲೀಕರು. ಕೆಲವು ಸಿನಿಮಾದ ಕೆಲಸಕಾರ್ಯಗಳು ಇವರ ಸ್ಟುಡಿಯೋದಲ್ಲಿ ನಡೆಯುತ್ತಿರುವಾಗ ತಂತ್ರಜ್ಘರು, ಕಲಾವಿದರು ಬರುವುದು ಸಹಜ. ಶಾಲಾ ರಜಾ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡಿದಾಗ, ಬರುವವರನ್ನು ನೋಡುತ್ತಾ ತನಗೂ ಕಲಾವಿದೆ ಆಗಬೇಕೆಂಬ ಸಣ್ಣದೊಂದು ಆಸೆ ಅಂದೇ ಚಿಗುರಿದೆ. ಧೈರ್ಯ ಮಾಡಿ ಅಮ್ಮ ಲತಾಸತೀಶ್, ಅಪ್ಪ ಸತೀಶ್ಗೆ ಮನದ ಆಸೆಯನ್ನು ....
ಡಿಸೆಂಬರ್ ೭ಕ್ಕೆ ಮಟಾಶ್ ಬಿಡುಗಡೆ ಮಾಡ್ತಾ ಇರ್ತೇವೆ, ನೋಡ್ತಾ ಇರಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ‘ಮಟಾಶ್’ ಚಿತ್ರವು ನೋಟು ಅಮಾನ್ಯಕರಣ ಸಂದರ್ಭದಲ್ಲಿ ನಡೆದ ಕತೆಯಾಗಿದೆ ಜೊತೆಗೆ ಮೈಸೂರು, ಬಿಜಾಪುರ ಕಡೆಯಿಂದ ಯುವಕರ ತಂಡ, ಬೆಂಗಳೂರಿನಿಂದ ಗ್ಯಾಂಗ್ಸ್ಟರ್ಸ್ ತಂಡ ಇರುತ್ತದೆ. ಮೈಸೂರಿನ ಯುವಕರು ಸಕಲೇಶಪುರದ ರೆಸಾರ್ಟ್ಗೆ ಮಸ್ತಿ ಮಾಡಲು ಹೋಗುತ್ತಾರೆ. ಅಲ್ಲಿ ಬಿಜಾಪುರ ಯುವಕರು ಸೇರಿಕೊಂಡು ಪಾರ್ಟಿ ಮಾಡುವಾಗ ಬೆಂಗಳೂರಿನ ಇಬ್ಬರು ಹುಡುಗಿಯರು ನಿರ್ಧಿಷ್ಟ ಕಾರಣಕ್ಕೆ ಬರುತ್ತಾರೆ. ಎಲ್ಲವು ಚೆನ್ನಾಗಿರುವಾಗ ಒಂದು ಘಟನೆಯಿಂದ ಎಲ್ಲವು ಉಲ್ಟಾಪಲ್ಟಾ ....
ಸಿಬಿಐ ಅಧಿಕಾರಿಯಾಗಿ ಪ್ರಿಯಾಮಣಿ ಮದುವೆ ನಂತರ ನಟಿ ಪ್ರಿಯಾಮಣಿ ಎರಡನೆ ಸಿನಿಮಾ ‘ಡಾ.೫೬’ದಲ್ಲಿ ಸಿಬಿಐ ಅಧಿಕಾರಿಯಾಗಿ ಕಾಣಿಸುಕೊಳ್ಳುತ್ತಿದ್ದಾರೆ. ೩೬೦ ಡಿಗ್ರಿ ಎನ್ನುವಂತೆ ಮುಂದೆ ಸಂಭವಿಸುವ ಅಪರಾಧಗಳನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವ ತೂಕದ ಪಾತ್ರವಾಗಿದೆ. ಸೈನ್ಸ್ ಫಿಕ್ಷನ್ ಮರ್ಡರ್ ಮಿಸ್ಟರಿ ಕತೆಗೆ ಮೊದಲಬಾರಿ ನಿರ್ದೇಶನದ ಚುಕ್ಕಾಣಿ ಹಿಡಿಯಲಿರುವ ರಾಜಿಆನಂದ್ಲೀಲಾ ಹೇಳುವಂತೆ ೧೯೫೬ ರಿಂದ ೨೦೧೯ರ ವರೆಗೂ ಮನುಷ್ಯನಾದವನು ತನಗೆ ಅರಿವಿಲ್ಲದಂತೆ ಯಾವುದಾದರೂ ತಪ್ಪನ್ನು ಮಾಡುತ್ತಾನೆ. ಇದನ್ನು ಮಾಡಬೇಡಿ ಎಂದು ಅರಿವು ಮೂಡಿಸುವ ....
ತೆಲುಗು ರೆಬಲ್ನ್ನು ಕನ್ನಡದಲ್ಲಿ ಮಾಡಬೇಕಾಗಿತ್ತು - ಮುಖ್ಯಮಂತ್ರಿ ಇತ್ತೀಚೆಗೆ ನಿಧನರಾದ ಅಂಬರೀಷ್ಗೆ ಶ್ರದ್ದಾಂಜಲಿ ಅಂಬಿ ನಮನ ಕಾರ್ಯಕ್ರಮನ್ನು ಕರ್ನಾಟಕ ವಾಣಿಜ್ಯ ಮಂಡಯು ಡಾ.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿತ್ತು. ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ ಮೈಸೂರಿನಲ್ಲಿ ಈಗಾಗಲೇ ಸಿದ್ದರಾಮಯ್ಯ ಕ್ಷೇತ್ರದಲ್ಲಿ ನೂರು ಎಕರೆ ಜಾಗವನ್ನು ಇದಕ್ಕೆ ಅಂತಲೇ ಮೀಸಲಿಡಲಾಗಿದೆ. ಇದರಲ್ಲಿ ಫಿಲಿಂ ಸಿಟಿಯನ್ನು ತೆರೆಯಲಾಗುವುದು. ಅದರಂತೆ ಮುಂದಿನ ಪೀಳಿಗೆಗೆ ....
ಟೆಕ್ಕಿಗಳ ವೀಕೆಂಡ್ ಕಥನ ಟೆಕ್ಕಿಗಳು ಸೋಮವಾರದಿಂದ ಶುಕ್ರವಾರದವರೆಗೆ ಬ್ಯುಸಿಯಾಗಿದ್ದು, ಶುಕ್ರವಾರ ಸಾಯಂಕಾಲದಿಂದ ಭಾನುವಾರ ರಾತ್ರಿವರೆಗೆ ಏನು ಮಾಡುತ್ತಾರೆ ಎಂಬುದನ್ನು ‘ವೀಕೆಂಡ್’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಚಿತ್ರದ ಕ್ಲೈಮಾಕ್ಸ್ ಭಾಗವು ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದು, ಮಾದ್ಯಮದವರು ಸೆಟ್ಗೆ ಭೇಟಿ ನೀಡಿದಾಗ ತಂಡವು ಸಿನಿಮಾದ ಕುರಿತು ಮಾಹಿತಿಗಳನ್ನು ಹಂಚಿಕೊಂಡಿತು. ನಿರ್ದೇಶಕ ಸುರೇಶ್ ಮಾತನಾಡಿ ಪ್ರಸ್ತುತ ಸಾಫ್ಟ್ವೇರ್ ಜಗತ್ತಿನವರು ಯಾವ ರೀತಿಯಲ್ಲಿ ಇದ್ದಾರೆ. ನಿರ್ಮಾಪಕರು ಹೇಳಿದ ಒಂದು ಏಳೆಯನ್ನು ಅನಂತ್ಸರ್ ....
ಸರ್ಕಾರಿ ಗೌರವಗಳೊಂದಿಗೆ ಅಂಬರೀಷ್ಗೆ ವಿದಾಯ
ಬೆಸ್ಟ್ ಫ್ರೆಂಡ್ಸ್ ಕಾರ್ಯಕ್ರಮದಲ್ಲಿ ಹೊಸ ಯೋಜನೆ ಮೂರನೇ ಜಾತಿಯ ಜನರ ಪರವಾಗಿ ಹಾಗೂ ಕಾಯ್ದೆ ೩೭೭ ಪ್ರಕಾರ ಪರಸ್ಪರ ಪ್ರೀತಿ ಮಾಡುವುದು ಅಪರಾಧವಲ್ಲ ಎಂದು ಸರ್ವೊಚ್ಚ ನ್ಯಾಯಲವರು ತೀರ್ಪು ನೀಡಿದೆ. ಅದರಂತೆ ‘ಬೆಸ್ಟ್ ಫ್ರೆಂಡ್ಸ್’ ಚಿತ್ರದಲ್ಲಿ ೨೦೧೨, ಹಾಸನದಲ್ಲಿ ಇಬ್ಬರು ಹೆಣ್ಣು ಮಕ್ಕಳ ಸಲಿಂಗಿ ಜೀವಿಗಳ ಬದುಕಿನಲ್ಲಿ ನಡೆದಿರುವ ಸತ್ಯ ಘಟನೆ, ಉಳಿದಂತೆ ಕಾಲ್ಪನಿಕ ಕತೆಯನ್ನು ಸೃಷ್ಟಿಸಲಾಗಿದೆ. ತಾಯಿ-ತಂದೆಯರಿಂದ ಜನ್ಮ ಪಡೆದಿರುವ ಮೂರನೇ ಜಾತಿಯ ಸಮುದಾಯದವರನ್ನು ಪ್ರೀತಿಸಿ ಗೌರವಿಸವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಈ ....
ರಫ್ ಅಂಡ್ ಟಫ್ ಹೊಸಬರ ‘ರಫ್’ ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ಇದೊಂದು ಮಾಸ್ ಚಿತ್ರವೆಂದು ಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಸಿನಿಮಾದಲ್ಲಿ ಅಣ್ಣ-ತಂಗಿ ಬಾಂದವ್ಯ, ಭೂಗತ ಚಟುವಟಿಕೆಗಳು ಮತ್ತು ಮಾದ್ಯಮ ಮೂರು ಅಂಶಗಳು ಇರಲಿದೆ. ರಾಮ್ಸಂತೋಷ್ ಇಂಜಿನಿಯರಿಂಗ್ ಮುಗಿಸಿ, ಅಮೇರಿಕಾ, ಜರ್ಮನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಚಿತ್ರರಂಗ ಮೇಲಿನ ಪಸೆಯಿಂದ, ಕಂಪೆನಿಗೆ ಬೆನ್ನು ತೋರಿಸಿ ರಂಗಭೂಮಿಯಲ್ಲಿ ತೊಡಗಿಕೊಂಡು , ಶೌರ್ಯ ಚಿತ್ರದ ಮೂಲಕ ಸಾಧುಕೋಕಿಲ ಅವರಿಗೆ ಸಹಾಯಕ, ತಾರಕಾಸುರ ಚಿತ್ರಕ್ಕೆ ಸಹನಿರ್ದೇಶನದಲ್ಲಿ ಭಾಗಿಯಾಗಿದ್ದಾರೆ. ಚಿತ್ರದಲ್ಲಿ ಹೊಸತನದ ದೃಶ್ಯಗಳು, ತಾಂತ್ರಿಕತೆಯನ್ನು ....
ಮತ್ತೆ ಪರದೆ ಮೇಲೆ ಅಪ್ಪ-ಮಗ ಮಿ.ಡೂಪ್ಲಿಕೇಟ್ ಮತ್ತು ಅರ್ಜುನ್ ಚಿತ್ರದಲ್ಲಿ ದೇವರಾಜ್, ಪ್ರಜ್ವಲ್ದೇವರಾಜ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಗ್ಯಾಪ್ ನಂತರ ಹೊಸ ಚಿತ್ರ ‘ರುಧಿರ’ ದಲ್ಲಿ ಸೇರಿಕೊಂಡಿದ್ದಾರೆ. ಮಗ ನಾಯಕ, ಸಿಪಿಆರ್ಎಫ್ ಅಧಿಕಾರಿಯಾಗಿ ದೇವರಾಜ್ ನಟಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಹೆಸರಿಡದ ಎರಡನೆ ಚಿತ್ರಕ್ಕೆ ವಸಿಷ್ಟಸಿಂಹ ನಾಯಕ. ಗಾಯಕ ವಿಜಯಪ್ರಕಾಶ್ ಚೂಚ್ಚಲಬಾರಿ ಸಂಗೀತ ನಿರ್ದಶನ ಮಾಡುತ್ತಿದ್ದು ಹಾಡುಗಳ ಧ್ವನಿಮುದ್ರಣ ಕಾರ್ಯಕ್ರಮವು ಸಣ್ಣದಾಗಿ ನಡೆದಿತ್ತು. ಆ ನಂತರ ಸಿನಿಮಾ ಏನಾಯಿತು ಎಂಬುದರ ....