ಚಿತ್ರರಂಗದ ಕತೆ ಹೇಳಲಿದೆ ’ಓಶೋ’ ಚಿತ್ರ ಇದು ಓಶೋ ರಜನೀಶ್ ಕತೆಯಲ್ಲ. ಆದರೆ ಓಶೋ ಎನ್ನುವ ವ್ಯಕ್ತಿಯ ಬದುಕಿಮ ಫಿಲಾಸಫಿ ಹೇಳುವ ಕತೆಯಾದ ಕಾರಣ ’ಓಶೋ’ ಎಂದು ಹೆಸರಿಟ್ಟಿದ್ದೇನೆ ಎಂದರು ನಿರ್ದೇಶಕ ಜಿಯಾ ಉಲ್ಲಾ ಖಾನ್. ಚಿತ್ರದಲ್ಲಿ ಕಥಾನಾಯಕ ಓಶೋ ಒಬ್ಬ ಸಿನಿಮಾ ಸಹಾಯಕ ನಿರ್ದೇಶಕ. ಅವನು ನಿರ್ದೇಶನದ ಅವಕಾಶಕ್ಕಾಗಿ ಎಲ್ಲಾ ಕಡೆ ಕೇಳಿಕೊಂಡು ಅಲೆಯುವಾಗ ಯಾರು ಕೂಡ ಅವಕಾಶ ನೀಡುವುದಿಲ್ಲ. ಆಗ ಅವನು ಟ್ರೇಲರ್ ಒಂದನ್ನು ಶೂಟ್ ಮಾಡುತ್ತಾನೆ. ಅದನ್ನು ನೋಡಿದ ನಿರ್ಮಾಪಕರೊಬ್ಬರು ಅವನಿಗೆ ಸಿನಿಮಾ ಮಾಡಲು ಅವಕಾಶ ನೀಡುತ್ತಾರೆ. ಓಶೋ ಸಿನಿಮಾ ಮಾಡಲು ಹೊರಡುತ್ತಾನೆ. ಅವನು ಮಾಡೋ ಸಿನಿಮಾದಲ್ಲಿ ಸಮಾಜದ ಹತ್ತು ಹಲವು ವಿಷಯಗಳಿಗೆ ಬೆಳಕು ಚೆಲ್ಲುತ್ತಾನೆ. ಜೀವನ ....
*ಶುಗರ್ ಫ್ಯಾಕ್ಟರಿ* ಯಲ್ಲಿ *ಬಾಬಾ ಸೆಹಗಲ್* ಹ್ಯಾಂಗೋವರ್ . *ಡಾರ್ಲಿಂಗ್ ಕೃಷ್ಣ* ನಾಯಕರಾಗಿ ನಟಿಸುತ್ತಿರುವ , *ದೀಪಕ್ ಅರಸ್* ನಿರ್ದೇಶನದ *"ಶುಗರ್ ಫ್ಯಾಕ್ಟರಿ"* ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಸೆಪ್ಟೆಂಬರ್ 10 *ಗಣೇಶ ಚತುರ್ಥಿ* ಯ ಸಂಭ್ರಮ. ಆ ಶುಭದಿನದಂದು *"ಶುಗರ್ ಫ್ಯಾಕ್ಟರಿ"* ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಸಾಂಗ್ ಟೀಸರ್ ಬರಲಿದೆ. *ಬಹದ್ದೂರ್ ಚೇತನ್* ಅವರು ಬರೆದಿರುವ ಈ ಹಾಡಿಗೆ ಖ್ಯಾತ ಗಾಯಕ *ಬಾಬಾ ಸೆಹಗಲ್* ಧ್ವನಿಯಾಗಿದ್ದಾರೆ. *ಕಫಿರ್ ರಫಿ* ಸಂಗೀತ ನೀಡಿದ್ದಾರೆ. *ಡಾರ್ಲಿಂಗ್ ಕೃಷ್ಣ* ಅವರೊಡನೆ ಈ ಹಾಡಿಗೆ *ಸೋನಾಲ್ ಮಾಂಟೆರೊ* ಹೆಜ್ಜೆ ಹಾಕಿದ್ದಾರೆ. *ಧನಂಜಯ್* ನೃತ್ಯ ನಿರ್ದೇಶನ ....
ಮೊದಲ ಹಂತದ ಚಿತ್ರೀಕರಣ ಮುಗಿಸಿದ
*"ಭಗವಾನ್ ಶ್ರೀ ಕೃಷ್ಣ ಪರಮಾತ್ಮ"*
ಇತ್ತೀಚೆಗಷ್ಟೇ ಶ್ರೀಕೃಷ್ಣಜನ್ಮಾಷ್ಟಮಿ ಎಲ್ಲೆಡೆ ಅದ್ದೂರಿಯಾಗಿ ನಡೆದಿದೆ. ಇದೇ ಸಮಯದಲ್ಲಿ *"ಭಗವಾನ್ ಶ್ರೀ ಕೃಷ್ಣ ಪರಮಾತ್ಮ"* ಎಂಬ ಚಿತ್ರದ ಮೊದಲ
ಚಿತ್ರೀಕರಣ ಸದ್ದಿಲ್ಲದೆ ಮುಗಿದಿದೆ.
ಬೆಂಗಳೂರಿನಲ್ಲೇ ಚಿತ್ರೀಕರಣವಾಗಿದೆ.
ಶೀರ್ಷಿಕೆ ಕೇಳಿದ ತಕ್ಷಣ ಇದೊಂದು ಪೌರಾಣಿಕ ಸಿನಿಮಾ ಅಂದುಕೊಳ್ಳುವುದು ಸಹಜ. ಆದರೆ ಇದೊಂದು ಪಕ್ಕಾ ಮಾಸ್ ಸಿನಿಮಾ ಎನ್ನುವ ನಿರ್ದೇಶಕರು ಈ ಶೀರ್ಷಿಕೆ ಇಟ್ಟ ಕಾರಣ ಸಿನಿಮಾ ನೋಡಿದ ಮೇಲೆ ತಿಳಿಯಲಿದೆ ಎಂದು ತಿಳಿಸಿದ್ದಾರೆ.
"ಶಂಭೋ ಶಿವ ಶಂಕರ" ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ. ಹಾಡೊಂದರ ಚಿತ್ರೀಕರಣವಾದರೆ ಚಿತ್ರೀಕರಣ ಮುಗಿದಂತೆ. ವರ್ತೂರು ಮಂಜು ನಿರ್ಮಾಣದ , ಶಂಕರ್ ಕೋನಮಾನಳ್ಳಿ ನಿರ್ದೇಶನದ "ಶಂಭೋ ಶಿವ ಶಂಕರ" ಚಿತ್ರದ ಚಿತ್ರೀಕರಣ ನೆಲಮಂಗಲದ ಹೊರ ವಲಯದಲ್ಲಿರುವ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ನಡೆದಿದೆ. ಅದೊಂದು ಮಾರ್ಕೆಟ್ ದೃಶ್ಯ ಅಲ್ಲಿ ಚಿತ್ರೀಕರಣದಲ್ಲಿ ಮೂರು ಜನ ಮಂಗಳ ಮುಖಿಯರದ್ದೇ ಕಾರು ಬಾರು ನಡೆದಿತ್ತು. ಚಿತ್ರೀಕರಣದ ಸ್ಥಳಕ್ಕೆ ಹೋದವರಿಗೆ ಚಿತ್ರದ ಪ್ರಮುಖ ಮೂರು ಪಾತ್ರಗಳಾದ "ಶಂಭೋ ಶಿವ ಶಿಂಕರ"ರು ಎಲ್ಲಿ ಇದ್ದಾರೆ ಎಂದು ಹುಡುಕುವುದೇ ದೊಡ್ಡ ಸಾಹಸದ ವಿಷಯವಾಗಿತ್ತು. ಏಕೆಂದರೆ ಆ ಮೂರೂ ಜನ ನಟರು ....
ಸೆಪ್ಟೆಂಬರ್ ನಲ್ಲಿ "ಡಿಯರ್ ಸತ್ಯ" ನ ಆಗಮನ ನಾಯಕ ಆರ್ಯನ್ ಸಂತೋಷ್ ಹುಟ್ಟುಹಬ್ಬಕ್ಕೆ ಟ್ರೇಲರ್ ಬಿಡುಗಡೆ ಮಾಡಿದ ಚಿತ್ರತಂಡ. ಡೆಲಿವರಿ ಬಾಯ್ಸ್ ಲೋಕಾರ್ಪಣೆ ಮಾಡಿದರು "ಡಿಯರ್ ಸತ್ಯ" ಚಿತ್ರದ ಟ್ರೇಲರ್. ಆರ್ಯನ್ ಸಂತೋಷ್ ನಾಯಕನಾಗಿ ನಟಿಸಿರುವ "ಡಿಯರ್ ಸತ್ಯ" ಚಿತ್ರ ಸೆಪ್ಟೆಂಬರ್ ನಲ್ಲಿ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಾಯಕ ಆರ್ಯನ್ ಸಂತೋಷ್ ಹುಟ್ಟುಹಬ್ಬದ ದಿನವೇ ಈ ಟ್ರೇಲರ್ ಬಿಡುಗಡೆ ಮಾಡಿದೆ ಚಿತ್ರತಂಡ. ವಿಕ್ಚರಿ ಸಿನಿಮಾಸ್ ನಲ್ಲಿ ಟ್ರೇಲರ್ ಬಿಡುಗಡೆ ಹಾಗೂ ಮಾಧ್ಯಮಗೋಷ್ಠಿ ನಡೆಯಿತು. ನಾನು ಚಿತ್ರರಂಗಕ್ಕೆ ಬಂದು ಹತ್ತುವರ್ಷವಾಗಿದೆ. ಕಲ್ಲರಳಿ ಹೂವಾಗಿ ಮೂಲಕ ಪೋಷಕ ....
ಕಲಿವೀರನಿಗೆ ಪೈರಸಿಯ ಕಾಟ
ಹೊಸಬರ ನೈಜಆಕ್ಷನ್ಕುರಿತಾದ ‘ಕಲಿವೀರ’ ಚಿತ್ರವು ಬಿಡುಗಡೆಯಾಗಿ ಯಶಸ್ವಿ೨೫ ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಸಂತೋಷಕೂಟದಲ್ಲಿತಂಡವು ಹಾಜರಿದ್ದು ಗಳಿಕೆ, ಇತರೆಕುರಿತಾದ ವಿಷಯಗಳನ್ನು ಹಂಚಿಕೊಂಡಿತು.ನಿರ್ಮಾಪಕ ಶ್ರೀನಿವಾಸ್ ಮಾತನಾಡಿಕೊನೆಯ ೨೦ ನಿಮಿಷದ ಸಾಹಸವನ್ನುಜನರು ಮೆಚ್ಚಿಕೊಂಡಿದ್ದಾರೆ.ಒಟಿಟಿರವರಲ್ಲಿಒಂದು ಸುತ್ತಿನ ಮಾತುಕತೆ ಫಲಪ್ರದವಾಗಿದೆ.ಇದರಿಂದ ಹೆಚ್ಚಿನ ಲಾಭ ಬರುವ ನಿರೀಕ್ಷೆಇದೆ.ಆದರೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ರೂ.೧೦ಕ್ಕೆ ನಮ್ಮಚಿತ್ರದ ಸಿಡಿ ಸಿಗುತ್ತಿದೆ.ಇದರಿಂದ ಗಳಿಕೆ ಕೊಂಚ ಕಡಿಮೆಯಾಗಿದೆಎಂದು ಬೇಸರ ವ್ಯಕ್ತಪಡಿಸಿದರು.
ಮನಸ್ಸಿನಲ್ಲಿ ಪ್ರೀತಿ ಹುಟ್ಟಿಕೊಳ್ತದೆ
ಪ್ರೀತಿಕುರಿತಂತೆ ಸಾಕಷ್ಟು ಸಿನಿಮಾಗಳು ಬಂದಿವೆ. ಆ ಸಾಲಿಗೆ ‘ಮನಸಾಗಿದೆ’ ಚಿತ್ರವು ಸೇರಿಕೊಳ್ಳುತ್ತದೆ.ಹಾಗಂತಇದುಅದೇರೀತಿಇರುತ್ತದೆಂದು ಹೇಳಲಾಗದು.ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವ ಶ್ರೀನಿವಾಸ್ಶಿಡ್ಲಘಟ್ಟ ಹೇಳುವಂತೆ ಹೆಸರಿಗೆತಕ್ಕಂತೆಇದರಲ್ಲಿ ಲವ್ ಜೊತೆಗೆ ಸೆಸ್ಪನ್ಸ್, ಥ್ರಿಲ್ಲರ್ ಮತ್ತುಅಕ್ಷನ್ಇರಲಿದ್ದು ವಿನೂತನವಾಗಿತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಪ್ರೀತಿ ಮತ್ತು ಮನುಷ್ಯತ್ವದ ಸಂಘರ್ಷಒಂದು ಏಳೆಯ ಕತೆಯಾಗಿದೆ.ಇವರೆಡರನ್ನುತಕ್ಕಡಿಯಲ್ಲಿ ಹಾಕಿ ತೂಗಿದಾಗಯಾವುದು ಮೇಲಕ್ಕೆ ಹೋಗುತ್ತದೆ.
“ಸಾಮರ್ಥ್ಯಾ” ಚಿತ್ರದ ಮುಹೂರ್ತ ಕಾರ್ತಿಕ್ ಮೂವೀಸ್ ಲಾಂಛನದಲ್ಲಿ ರಾಜರಬಂಡಿ ಕಾರ್ತಿಕ್ ನಿರ್ಮಿಸುತ್ತಿರುವ ‘ಸಾಮರ್ಥ್ಯಾ’ ಚಿತ್ರಕ್ಕೆ ಇತ್ತೀಚೆಗೆ ಕಂಠೀರವ ಸ್ಟುಡಿಯೋವಿನಲ್ಲಿ ಮುಹೂರ್ತ ಆಚರಿಸಿಕೊಂಡಿದ್ದು ಚಿತ್ರದ ಪ್ರಥಮ ದೃಶ್ಯಕ್ಕೆ ಸಾ.ರಾ.ಗೋವಿಂದು ಕ್ಲಾಪ್ ತೋರಿದಾಗ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜಯರಾಜ್ ರವರು ಕ್ಯಾಮೆರಾ ಚಾಲನೆ ಮಾಡಿ ಚಿತ್ರೀಕರಣಕ್ಕೆ ಅಣಿವು ಮಾಡಿಕೊಟ್ಟರು. ಚಿತ್ರರಂಗದ ಮೇರು ವ್ಯಕ್ತಿಗಳ ಸಮ್ಮುಖದಲ್ಲಿ ನಡೆದ - ಈ ಚಿತ್ರದ ನಿರ್ದೇಶನ ಹೆಚ್.ವಾಸು. ಇದು ಇವರ ೨೪ನೇ ಚಿತ್ರ. ಚಿತ್ರಕ್ಕೆ ಸಂಭಾಷಣೆ ಶಶಿ, ಛಾಯಾಗ್ರಹಣ–ಎ.ವಿ. ಕೃಷ್ಣಕುಮಾರ್ (ಕೆ.ಕೆ), ಸಂಗೀತ-ಅರುಣ್ ಆಂಡ್ರ್ಯು, ....
"ಕರ್ಮಣ್ಯೇವಾಧಿಕಾರಸ್ತೇ" ಸೆಪ್ಟೆಂಬರ್ ನಲ್ಲಿ ತೆರೆಗೆ. ಶ್ರೀಕೃಷ್ಣನಾಡಿದ ಮಾತೇ ಚಿತ್ರದ ಶೀರ್ಷಿಕೆ ಯಾಗಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುವ ಮಾತು "ಕರ್ಮಣ್ಯೇವಾಧಿಕಾರಸ್ತೇ" ಎಂದು ಆರಂಭವಾಗುತ್ತದೆ. ಈ ವಾಕ್ಯವೇ ಚಿತ್ರದ ಶೀರ್ಷಿಕೆಯಾಗಿದೆ. ಸೆಪ್ಟೆಂಬರ್ 24 ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ಅದಕ್ಕಿಂತ ಮುಂಚೆ ಸೆಪ್ಟೆಂಬರ್ ಆರಂಭದಲ್ಲಿ ಚಿತ್ರದ ಟ್ರೇಲರ್ ಬರಲಿದೆ. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಶ್ರೀಹರಿ ಆನಂದ್ ನಿರ್ದೇಶಿಸಿದ್ದಾರೆ. ನಲವತ್ತೈದು ದಿನಗಳ ಚಿತ್ರೀಕರಣ ನಡೆದಿದ್ದು, ಅತೀ ಹೆಚ್ಚಿನ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆದಿದೆ. ಹಾಡುಗಳು ತೀರ್ಥಹಳ್ಳಿ, ....
ಮಕ್ಕಳ ಈಗಿನ ವಿದ್ಯಾಭ್ಯಾಸದ ಬಗ್ಗೆ ಹೇಳಲಿದೆ "ಆನ್ ಲೈನ್ ಕ್ಲಾಸ್".
RAP SONG ಮೂಲಕ ಹೇಳುತ್ತಿದ್ದಾರೆ RAPER ಗಜೇಂದ್ರ ಗುರು.
ಪ್ರಖ್ಯಾತ ಡಿಸೈನರ್ ಲಕ್ಷ್ಮೀಕೃಷ್ಣ ಪುತ್ರ ವಿಯಾನ್ ಕೃಷ್ಣ ಪ್ರಮುಖಪಾತ್ರದಲ್ಲಿ ನಟನೆ.
ಕೊರೋನ ಬಂದ ಮೇಲೆ ಹೆಚ್ಚಿನ ಪರಿಣಾಮ ಬೀರಿರುವುದು ಮಕ್ಕಳ ವಿದ್ಯಾಭ್ಯಾಸದ ಮೇಲೆ. ಮಕ್ಕಳು ಶಾಲೆ ಮುಖ ನೋಡಿ ವರ್ಷಗಳೇ ಕಳೆದಿದೆ. ಆನಲೈನ್ ಕ್ಲಾಸ್ ಗೆ ಮಕ್ಕಳು ಮೊರೆ ಹೋಗಿದ್ದಾರೆ. ಅದರಿಂದ ಆಗುವ ಪರಿಣಾಮವನ್ನು ಹಾಡಿನ ಮೂಲಕ ಹೇಳ ಹೊರಟಿದ್ದಾರೆ Raper ಗಜೇಂದ್ರ ಗುರು.
ಕ್ರೈಂ ಥ್ರಿಲ್ಲರ್ ಕಥಾಹಂದರದ "ಆಪರೇಶನ್ D" ಚಿತ್ರಕ್ಕೆ ಬಿರುಸಿನ ಚಿತ್ರೀಕರಣ.
ನಟನಾಗಿದ್ದ ತಿರುಮಲೇಶ್ ನಿರ್ದೇಶಕನಾಗಿ ಚಿತ್ರರಂಗ ಪ್ರವೇಶ.
ಅದ್ವಿತ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಭಾರ್ಗವಿ ತಿರುಮಲೇಶ್ ಹಾಗೂ ರಂಗನಾಥ್ ಬಿ ನಿರ್ಮಿಸುತ್ತಿರುವ ’ಆಪರೇಶನ್ D" ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. ನಾಲ್ಕು ಹಾಡು ಹಾಗೂ ಮೂರು ಸಾಹಸ ಸನ್ನಿವೇಶಗಳ ಚಿತ್ರೀಕರಣ ಬಾಕಿಯಿದೆ.
ಭಾರಿ ಮೊತ್ತಕ್ಕೆ ಮಾರಾಟವಾಯಿತು "ರಾಣ" ಚಿತ್ರದ ಆಡಿಯೋ ಹಕ್ಕು.
ಶ್ರೇಯಸ್ಸ್ ಕೆ ಮಂಜು ಅಭಿನಯದ "ರಾಣ" ಚಿತ್ರದ ಆಡಿಯೋ ಹಕ್ಕು ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಆನಂದ್ ಆಡಿಯೋದವರು ಈ ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದ್ದಾರೆ.
ಅಗಸ್ಟ್ ೧೫ ರಂದು ವೆಂಕಟ್ ಭಾರದ್ವಾಜ್ ನಿರ್ದೇಶನದ ಹೊಸ ಚಿತ್ರ "ನಗುವಿನ ಹೂಗಳ ಮೇಲೆ " ಚಿತ್ರದ ಶೀರ್ಷಿಕೆ ಹಾಗೂ ಸ್ಕ್ರಿಪ್ಟ್ ಪೂಜೆ ಜಯನಗರದ ಅಭಯ ಗಣಪತಿ ಹಾಗೂ ನಿಮಿಷಾಂಬ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು, ಚಿತ್ರದ ಪೂಜಾ ಸಂದರ್ಭದಲ್ಲಿ ಚಲನ ಚಿತ್ರ ಪ್ರಚಾರ ಕರ್ತ ಸುಧೀಂದ್ರ ವೆಂಕಟೇಶ್ ರವರು ಹಾಜರಿದ್ದರು. " ನಗುವಿನ ಹೂವುಗಳ ಮೇಲೆ" ಹೆಸರು ಹೇಳಿದಂತೆ ಇದು ಒಂದು ಪ್ರೇಮಕಥಾ ಹಂದರ ವಾಗಿದ್ದು ವೆಂಕಟ್ ಭಾರದ್ವಾಜ್ ರವರ 10ನೇ ಚಿತ್ರವಾಗಿದೆ. ಈ ಚಿತ್ರಕ್ಕೆ ತೆಲುಗು ಚಿತ್ರರಂಗದ ಹೆಸರಾಂತ ನಿರ್ಮಾಪಕರಾದ ಶ್ರೀ ಕೆಕೆ ರಾಧಾ ಮೋಹನ್ ನಿರ್ಮಾಣ ಮಾಡುತ್ತಿದ್ದಾರೆ. ರಾಧಾ ಮೋಹನ್ ಅವರು ತೆಲುಗು ಚಿತ್ರರಂಗದಲ್ಲಿ ಸುಮಾರು ಹತ್ತು ದೊಡ್ಡ ಚಿತ್ರಗಳನ್ನು ....
“ಕರಿಯ ಐ ಲವ್ ಯೂ”ಶೂಟಿಂಗ್ ಸ್ಟಾರ್ಟ್
ಶ್ರೀ ಮಂಜು ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಶ್ರೀ ಮಂಜುನಾಥ್ ಮಠದ್ ನಿರ್ಮಿಸುತ್ತಿರುವ“ಕರಿಯ ಐ ಲವ್ ಯೂ” ಚಿತ್ರದಚಿತ್ರೀಕರಣವುಆರಂಭವಾಗಿ ಈಗ ಹಗರಿಬೊಮ್ಮನಹಳ್ಳಿ ಸುತ್ತಮುತ್ತ ಸಾಗಿದೆ.
ಜಲ್ಲಿಕಟ್ಟು“ಂ”ಸರ್ಟಿಫಿಕೇಟ್ ಶ್ರೀ ಬೀರೇಶ್ವರ ಫಿಲಂ ಮೇಕರ್ಸ್ ಲಾಂಛನದಡಿಯಲ್ಲಿ ನಿರ್ಮಾಪಕರಾದ ಸುರೇಶ್ ನಿರ್ಮಿಸಿರುವ “ಜಲ್ಲಿಕಟ್ಟು” ಚಿತ್ರವನ್ನು ಸೆನ್ಸಾರ್ನವರು ವೀಕ್ಷಿಸಿ “ಎ” ಸರ್ಟಿಫಿಕೇಟ್ ನೀಡಿದ್ದಾರೆ. ಎಲ್ಲಾ ವರ್ಗದ ಜನಗಳನ್ನು ರಂಜಿಸಲಿರುವ ಈ ಚಿತ್ರವು ದೀಪಾವಳಿ ಕೊಡುಗೆಯಾಗಿ ....
ಕಾಶ್ಮೀರದಲ್ಲಿ ಓ ಮೈ ಲವ್ ಚಿತ್ರದ. ಟೈಟಲ್ ಸಾಂಗ್ ಜಿಸಿಬಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿ. ರಾಮಾಂಜಿನಿ ಅವರು ಕಥೆ ಬರೆದು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಚಿತ್ರ ಓ ಮೈ ಲವ್ ಚಿತ್ರದ ಟೈಟಲ್ ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಅಕ್ಟೋಬರ್ ತಿಂಗಳಲ್ಲಿ ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ನಡೆಸಲಾಗುವುದು ಎಂದು ನಿರ್ದೇಶಕ ಸ್ಮೈಲ್ ಶ್ರೀನು ತಿಳಿಸಿದ್ದಾರೆ. ಅಲ್ಲದೆ ಇದೇ ೩೦ರಿಂದ ಹನುಮಗಿರಿ ಬೆಟ್ಟ, ರಾಮನಗರ, ಚನ್ನಪಟ್ಟಣ, ನಾಗರಬಾವಿ, ಹೆಚ್.ಎಂ.ಟಿ.ಗ್ರೌಂಡ್, ಯೂನಿವರ್ಸಿಟಿ ರಸ್ತೆಯಲ್ಲಿ ಫೈಟ್, ಚೇಸಿಂಗ್ ಸೀನ್ ಗಳ ಚಿತ್ರೀಕರಣ ನಡೆಯಲಿದೆ.. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಈ ಚಿತ್ರಕ್ಕೆ ಬಳ್ಳಾರಿ ದರ್ಬಾರ್ ಖ್ಯಾತಿಯ ಸ್ಮೈಲ್ ....
ಹಿನ್ನೆಲೆ ಸಂಗೀತದಲ್ಲಿ ಮಾರಿಗೋಲ್ಡ್ ! ಆರಂಭದಿಂದಲೂ ತನ್ನ ಶೀರ್ಷಿಕೆಯ ಮೂಲಕವೇ ನಿರೀಕ್ಷೆ ಹುಟ್ಟಿಸಿರುವ, ತೀರ್ಥಳ್ಳಿ ಹುಡುಗ ದಿಗಂತ್ ಅಭಿನಯದ ಚಿತ್ರ ಮಾರಿಗೋಲ್ಡ್. ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಚಿತ್ರದ ಡಬ್ಬಿಂಗ್ ಕಾರ್ಯ ಮುಗಿದು, ಹಿನ್ನೆಲೆ ಸಂಗೀತ ಅಳವಡಿಕೆ ಕೊನೇ ಹಂತದಲ್ಲಿದೆ. ಇಷ್ಟರಲ್ಲೇ ಸೆನ್ಸಾರ್ ಅಂಗಳಕ್ಕೆ ಹೋಗಲು ಸಿದ್ದವಾಗಿರುವ ’ಮಾರಿಗೋಲ್ಡ್’ ಚಿತ್ರ. ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಪಕ್ಕಾ ಕ್ರೈಮ್ ಥ್ರಿಲ್ಲರ್ ಕಥಾನಕ ಹೊಂದಿರುವ ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ....
ಸೆ.೨ನೇ ವಾರ ಜಗ್ಗೇಶ್ ಪುತ್ರನ ಕಾಗೆಮೊಟ್ಟೆ ನವರಸನಾಯಕ ಜಗ್ಗೇಶ್ ಅವರ ಹಿರಿಯಪುತ್ರ ಗುರುರಾಜ್ ನಾಯಕನಾಗಿ ಅಭಿನಯಿಸಿದ ಚಿತ್ರ ಕಾಗೆಮೊಟ್ಟೆ. ಮೂವರು ಲೋಕಲ್ ಹುಡುಗರ ಕಥೆಯನ್ನಿಟ್ಟುಕೊಂಡು ನಿರ್ದೇಶಕ ಚಂದ್ರಹಾಸ ಅವರು ಈ ಚಿತ್ರವನ್ನು ನಿರೂಪಿಸಿದ್ದಾರೆ. ಕಾಗೆ ಶನೀಶ್ವರನ ವಾಹನ, ಶನಿ ಹೆಗಲೇರಿದರೆ ಕೊನೇವರೆಗೆ ಬಿಡಲ್ಲ, ಅದೇರೀತಿ ಈ ಮೂರೂ ಜನ ಹುಡುಗರು ಯಾರ ಹಿಂದಾದ್ರೂ ಬಿದ್ದರೆ ಸುಲಭದಲ್ಲಿ ಬಿಡುವವರೇ ಅಲ್ಲ, ಇನ್ನೂ ಮೊಟ್ಟೆಯಂತಿರುವ ಇವರು ಬೆಳೆದಮೇಲೆ ಯಾವರೀತಿ ಇರಬಹುದು ಎಂಬ ಪರಿಕಲ್ಪನೆಯೊಂದಿಗೆ ಚಂದ್ರಹಾಸ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ತನ್ನೆಲ್ಲ ಕೆಲಸಗಳನ್ನು ಮುಗಿಸಿಕೊಂಡು ರಿಲೀಸ್ಗೆ ಸಿದ್ದವಾಗಿರುವ ....
ಶುಗರ್ ಲೆಸ್ ಚಿತ್ರದಲ್ಲಿ ಶರಣ್ ಧ್ವನಿ ಆ.೧೬ಕ್ಕೆ ಟೈಟಲ್ ಸಾಂಗ್ ಡಾಟರ್ ಆಫ್ ಪಾರ್ವತಮ್ಮ ಖ್ಯಾತಿಯ ನಿರ್ಮಾಪಕ ಶಶಿಧರ ಕೆ.ಎಂ. ಮೊದಲಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರ ಶುಗರ್ ಲೆಸ್. ಬಿಡುಗಡೆಗೆ ಸಿದ್ದವಾಗಿರಯವ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣದ ಜವಬ್ದಾರಿಯನ್ನೂ ಸಹ ಶಶಿಧರ್ ಕೆ.ಎಂ. ಅವರೇ ಹೊತ್ತಿದ್ದಾರೆ. ಚಿತ್ರದ ಸಹ ನಿರ್ಮಾಪಕರಾಗಿ ಪ್ರಜ್ವಲ್ ಎಂ.ರಾಜ ಹಾಗೂ ವಿಜಯಲಕ್ಷ್ಮಿ ಕೃಷ್ಣೇಗೌಡ ಸಾತ್ ನೀಡಿದ್ದಾರೆ. ತನ್ನ ಶೀರ್ಷಿಕೆ ಮೂಲಕವೇ ಕುತೂಹಲ ಮೂಡಿಸಿರುವ ಈ ಚಿತ್ರದಲ್ಲಿ ಹಾಸ್ಯನಟ ಶರಣ್ ಅವರು ಹಿನ್ನೆಲೆ ಧ್ವನಿ ನೀಡುವ ಮೂಲಕ ಸಿನಿಮಾದ ಕಂಟೆಂಟ್ ಹಾಗೂ ಪ್ರಮುಖ ಪಾತ್ರಗಳನ್ನು ....
ಹೊಂಬಾಳೆ ಫಿಲ್ಮ್ಸ್ ನಿಂದ ಎಲ್ಲರಿಗೂ ಶುಭಾಶಯಗಳು.
ಸಿನಿಮಾರಂಗದಲ್ಲಿನ ನಮ್ಮ ಪಯಣ ನಿಮ್ಮ ಮತ್ತು ಪ್ರೇಕ್ಷಕರ ಪ್ರೀತಿಯಿಂದ ಖುಷಿಯಾಗಿ ಸಾಗುತ್ತಿದೆ.
ನಮ್ಮ ೧೧ ನೇ ಸಿನಿಮಾ "ಕಾಂತಾರ" ಮುಹೂರ್ತ ಇಂದು ಮಧ್ಯಾಹ್ನ ೨.೨೧ ರ ಶುಭಗಳಿಗೆಯಲ್ಲಿ ಕುಂಭಾಶಿಯ ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ಈ ಚಿತ್ರವನ್ನು ರಿಷಬ್ ಶೆಟ್ಟಿ ಅವರು ನಿರ್ದೇಶಿಸುತ್ತಿದ್ದು, ಅವರೇ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಿಷಬ್ ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಅಚ್ಯುತಕುಮಾರ್, ಕಿಶೋರ್ ಕುಮಾರ್ ಹಾಗೂ ಪ್ರಮೋದ್ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.